Author Archives: kumudavalli

ತಿರುವಾಯ್ಮೊೞಿ – ಸರಳ ವಿವರಣೆ – 10.10 – ಮುನಿಯೇ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.9 – ಶೂೞ್ ವಿಶುಮ್ಬು


ತನ್ನ ಮನಸ್ಸಿನಲ್ಲಿ ಪರಮಪದವನ್ನು ಅನುಭವಿಸಿದ ಮೇಲೆ , ಆಳ್ವಾರರು ತಮ್ಮ ದಿವ್ಯ ಕಣ್ಣುಗಳನ್ನು ತೆರೆದರು. ಅವರು ತಾವು ಇನ್ನೂ ಈ ಸಂಸಾರದಲ್ಲಿಯೇ ಇರುವುದನ್ನು ತಿಳಿದುಕೊಂಡು ಬಹಳ ಉದ್ವಿಗ್ನರಾದರು. ಅವರು ಇದನ್ನು ಇನ್ನು ತಾವು ಹೆಚ್ಚು ಸಹಿಸಿಕೊಳ್ಳಲಾಗುವುದಿಲ್ಲ ಎಂದು ತಿಳಿದು, ಎಂಪೆರುಮಾನರನ್ನು ಕೂಗಿ ಕರೆದರು. ಅವರು ಶ್ರೀಮಹಾಲಕ್ಶ್ಮಿಯ ಮೇಲೆ ಆಣೆ ಮಾಡಿ ತಮ್ಮನ್ನು ಪರಮಪದಕ್ಕೆ ಸ್ವೀಕರಿಸುವಂತೆ ಎಂಪೆರುಮಾನರಿಗೆ ಪ್ರಾರ್ಥಿಸಿದರು. ಎಂಪೆರುಮಾನರು ಆಳ್ವಾರರ ಅಗಲಿಕೆಯಿಂದ ಇನ್ನೂ ಉದ್ವಿಗ್ನರಾಗಿದ್ದರು. ಅವರು ಒಡನೇ ಗರುಡವಾಹನದಲ್ಲಿ ಪಿರಾಟ್ಟಿಯೊಂದಿಗೆ ಕುಳಿತು ಪರಮಪದವನ್ನು ಬಿಟ್ಟು , ಆಳ್ವಾರರು ಇರುವಲ್ಲಿಗೆ ತಕ್ಷಣ ಬಂದು ಅವರನ್ನು ಪರಮಪದಕ್ಕೆ ಕರೆದೊಯ್ದರು. ಆಳ್ವಾರರು ತಾವು ಆನಂದಮಯವಾಗಿ ಘೋಷಿಸಿದರು , “ಅವಾವಱ್ಱು ವೀಡು ಪೆಱ್ಱ ಕುರುಗೂರ್ ಚ್ಚಡಗೋಪನ್” ಎಂದು ಮತ್ತು ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನಿನ್ನ ಮಹತ್ತರ ಗುಣಗಳಾದ ಸೌಂದರ್‍ಯಮ್ ಮುಂತಾದುವುಗಳನ್ನು ನನ್ನ ಮುಂದೆ ಯಾವ ಕಾರಣವೂ ಇಲ್ಲದೆ ಪ್ರಕಟಿಸಿದ್ದರಿಂದ , ನಾನು ನಿನ್ನ ಬಿಟ್ಟು ಬದುಕಲಾರೆನು. ಈಗ ನೀನು ನನ್ನಿಂದ ದೂರ ಇರಲು ಸಾಧ್ಯವೇ ಇಲ್ಲ. ನನಗೆ ಸಹಿಸಲಾರದ ಈ ಸಂಸಾರದಲ್ಲಿ ನನ್ನನ್ನು ಬಿಟ್ಟು, ನಿನ್ನ ಗುಣಗಳನ್ನು ಮಾತ್ರ ಆನಂದಿಸಲು ಬಿಟ್ಟಿರುವೆ.”
ಮುನಿಯೇ ನಾನ್ಮುಗನೇ ಮುಕ್ಕಣ್ಣಪ್ಪಾ, ಎನ್ ಪೊಲ್ಲಾ
ಕ್ಕನಿವಾಯ್ ತ್ತಾಮರೈಕ್ಕಣ್ ಕರುಮಾಣಿಕ್ಕಮೇ ಎನ್ ಕಳ್ವಾ,
ತನಿಯೇನಾರುಯಿರೇ ಎನ್ ತಲೈಮಿಶೈಯಾಯ್ ವನ್ದಿಟ್ಟು,
ಇನಿ ನಾನ್ ಪ್ಪೋಗಲೊಟ್ಟೇನ್ ಒನ್‍ಱುಮ್ ಮಾಯಮ್ ಶೆಯ್ಯೇಲ್ ಎನ್ನೈಯೇ ॥

ಓಹ್! ಸೃಷ್ಟಿಯ ವಿಧಗಳನ್ನು, ಅವುಗಳು ರೂಪುಗೊಂಡ ದಾರಿಗಳನ್ನು ಧ್ಯಾನಿಸುವ, ನಾಲ್ಕು ತಲೆಯ ಬ್ರಹ್ಮನನ್ನು ತನ್ನ ದೇಹದಲ್ಲಿ ಹೊಂದಿರುವವನೇ! ಮೂರು ಕಣ್ಣಿರುವ, ಪೋಷಕನಾದ ರುದ್ರರನ್ನು ತನ್ನ ದೇಹದಲ್ಲಿ ಹೊಂದಿರುವವನೇ! ಓಹ್! ಕಪ್ಪಾದ ದೋಷವಿಲ್ಲದ ಮಾಣಿಕ್ಯದ ರೂಪವನ್ನು ಹೊಂದಿರುವವನೇ! ತುಟಿಗಳು ಮಾಗಿದ ಫಲದಂತಿರುವವನೇ, ಕಣ್ಣುಗಳು ತಾವರೆಯಂತೆ ನನ್ನನ್ನು ಆಕರ್ಷಣೆ ಮಾಡುವವನೇ! ನನ್ನನ್ನು ಮೋಸಗೊಳಿಸಿ ನನ್ನನ್ನು ಅಪಹರಿಸಿರುವೆ. ಒಬ್ಬಂಟಿಯಾಗಿರುವ ನನ್ನ ಪೂರ್ಣ ಪ್ರಾಣವಾಗಿರುವವನೇ! ನೀನು ನನ್ನಲ್ಲಿಗೆ ಬಂದು ನಿನ್ನ ದಿವ್ಯ ಪಾದವನ್ನು ನನ್ನ ತಲೆಯ ಮೇಲಿರಿಸಿರುವೆ. ಇಷ್ಟೆಲ್ಲಾ ನಡೆದ ಮೇಲೆ, ನೀನು ನನ್ನನ್ನು ಬಿಟ್ಟು ಹೋಗಲು ಅನುಮತಿಸುವುದಿಲ್ಲ. ನೀನು ನನ್ನನ್ನು ಸ್ವಲ್ಪವೂ ಯಾಮಾರಿಸಲು ಬಿಡುವುದಿಲ್ಲ.

ಎರಡನೆಯ ಪಾಸುರಮ್:
ಆಳ್ವಾರರು ಪೆರಿಯ ಪಿರಾಟ್ಟಿಯ ಮೇಲೆ ಆಣೆ ಮಾಡಿ , ಎಂಪೆರುಮಾನರು ತಮ್ಮ ಆಸೆಯನ್ನು ನೆರವೇರಿಸುವುದರಿಂದ ತಪ್ಪಿಸಿಕೊಳ್ಳದಂತೆ ಮಾಡುತ್ತಾರೆ.
ಮಾಯಮ್ ಸೆಯ್ಯೇಲ್ ಎನ್ನೈ ಉನ್‍ತಿರು ಮಾರ್ವತ್ತುಮಾಲೈನಙ್ಗೈ,
ವಾಶಮ್ ಶೆಯ್ ಪೂಙ್ಕುೞಲಾಳ್ ತಿರುವಾಣೈ ನಿನ್ನಾಣೈ ಕಣ್ಡಾಯ್,
ನೇಶಮ್ ಶೆಯ್‍ದು ಉನ್ನೋಡು ಎನ್ನೈ ಉಯಿರ್ ವೇಱಿನ್‍ಱಿ ಒನ್‍ಱಾಗವೇ,
ಕೂಶಮ್ ಶೆಯ್ಯಾದು ಕೊಣ್ಡಾಯ್ ಎನ್ನೈ ಕ್ಕೂವಿಕ್ಕೊಳ್ಳಾಯ್ ವನ್ದನ್ದೋ ॥

ನನ್ನನ್ನು ಮಾಯೆಯ ಪರಿಧಿಗೆ ಇನ್ನೂ ಹಾಕಬೇಡ, ನಿನ್ನ ಸಹಜವಾದ ಐಶ್ವರ್‍ಯಕ್ಕೆ , ನಿನ್ನ ಶ್ರೇಷ್ಠತ್ವಕ್ಕೆ ಕಾರಣವಾಗಿರುವುದು ಶ್ರೀಲಕ್ಷ್ಮಿ. ನಿನ್ನ ದಿವ್ಯ ವಕ್ಷಸ್ಥಲದಲ್ಲಿ ನಿನ್ನ ಬಣ್ಣಕ್ಕೆ ವ್ಯತ್ಯಾಸವಾಗಿರುವ ಚಿನ್ನದ ಹಾರದಂತಿರುವ ಬಣ್ಣವನ್ನು ಹೊಂದಿರುವ, ಯಾರ ಉಪಸ್ಥಿತಿಯಿಂದ ನಿನ್ನ ಗುಣಗಳಿಗೆ ಇನ್ನೂ ಹೊಳಪು ಬಂದಿರುವ, ಅವಳ ವಿಶಿಷ್ಟವಾದ ದಿವ್ಯ ತಲೆಗೂದಲಿನಿಂದ ನಿನಗೆ ಶ್ರೇಷ್ಠ ಪರಿಮಳ ಬಂದಿರುವ ಆಕೆಯೇ ನಿನ್ನ ಅಪ್ಪಣೆ. ನೀನು ನನ್ನನ್ನು ಕಂಡು ಅಸಹ್ಯ ಪಡಲಿಲ್ಲ , ಬದಲಾಗಿ ಪರಮ ಸ್ನೇಹಗೊಂಡು ಕರುಣೆಯಿಂದ ನನ್ನನ್ನು ಪರಿಗಣಿಸಿದೆ. ನಿನ್ನಲ್ಲಿ ನನ್ನ ಜೀವವು ಒಂದಾಗಿದೆ. ನಿನಗೂ ನನಗೂ ವ್ಯತ್ಯಾಸವಿಲ್ಲದಾಗಿದೆ. ಇಲ್ಲಿಗೆ ಬಂದು ಕರುಣೆಯಿಂದಲಿ ನನ್ನನ್ನು ಅಲ್ಲಿಗೆ ಆಮಂತ್ರಿಸು. ಅಯ್ಯೋ! ನೀನು ಕಾತುರ ಪಡುತ್ತಿರುವ ವಸ್ತುವಿಗೆ ನಾನು ಅಪ್ಪಣೆ ಕೊಟ್ಟಾಗಿದೆ.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಬ್ರಹ್ಮ, ಈಶಾನ ಮುಂತಾದವರ ಸಹಜವಾದ ಸ್ವಭಾವಕ್ಕೆ, ಅಸ್ತಿತ್ವಕ್ಕೆ ನಿಯಂತ್ರಕನಾಗಿರುವ ನೀನು, ಅಯ್ಯೋ! ನನ್ನನ್ನು ಒಪ್ಪಿಕೊಳ್ಳಬೇಕು. ನಿನ್ನನ್ನು ಬಿಟ್ಟು ನನ್ನ ವಿಮೋಚನೆಗೆ (ಮೋಕ್ಷಕ್ಕೆ) ನನಗೆ ಬೇರೆ ದಾರಿಯೇ ಇಲ್ಲ.”
ಕೂವಿಕ್ಕೊಳ್ಳಾಯ್ ವನ್ದನ್ದೋ ಎನ್ ಪೊಲ್ಲಾ ಕ್ಕರುಮಾಣಿಕ್ಕಮೇ,
ಆವಿಕ್ಕೊರ್‍‌ ಪಱ್ಱು ಕ್ಕೊಮ್ಬು ನಿನ್ನಲಾಲ್ ಅಱಿಗಿನ್‍ಱಿಲೇನ್‍ಯಾನ್,
ಮೇವಿ ತ್ತೊೞುಮ್ ಪಿರಮನ್ ಶಿವನ್ ಇನ್ದಿರನ್ ಆದಿಕ್ಕೆಲ್ಲಾಮ್,
ನಾವಿಕ್ಕಮಲಮುದಲ್ ಕಿೞಙ್ಗೇ ಉಮ್ಬರನ್ದದುವೇ ॥

ನನಗೆ ಸಮಂಜಸವಾದ ಆನಂದವನ್ನು ಕೊಡುವ, ವಿಶಿಷ್ಟವಾದ ಯಾವ ತೂತಿಲ್ಲದ ಅಪರೂಪದ ಕಪ್ಪು ಮಾಣಿಕ್ಯ ರತ್ನದ ರೂಪವನ್ನು ಹೊಂದಿರುವ ,ದಿವ್ಯ ನಾಭಿಯಲ್ಲಿ ದಿವ್ಯ ಕಮಲಕ್ಕೆ ಬೇರಾಗಿರುವ, ಅದರಿಂದ ಹುಟ್ಟಿದ ಬ್ರಹ್ಮ, ರುದ್ರ, ಇಂದ್ರ ಮತ್ತಿತರಿಗೆ ಆಶ್ರಯವಾಗಿರುವ , ನಿತ್ಯಸೂರಿಗಳ ಸ್ವಭಾವವನ್ನು, ಅಸ್ತಿತ್ವವನ್ನು ನಿಯಂತ್ರಿಸುವ ನಿನ್ನನ್ನು ಬಿಟ್ಟು, ನನಗೆ ಬೇರೆ ಯಾವ ಬೆಂಬಲಿಸುವ ಕಂಭವೂ , ಸರಿಯಾದ ಆಶ್ರಯವೂ ಈ ಆತ್ಮಕ್ಕಿಲ್ಲ. ಇಲ್ಲಿಗೆ ಬಂದು , ನನ್ನನ್ನು ಕರೆದು ಕರುಣೆಯಿಂದಲಿ ನನ್ನನ್ನು ಸ್ವೀಕರಿಸು. ಅಯ್ಯೋ! ನಾನು ನಿನಗೆ ನಿನ್ನ ಕೆಲಸವನ್ನು ಹೇಳಬೇಕಾಗಿದೆ.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ಎಲ್ಲದರ ನಿಯಂತ್ರಕನಾಗಿದ್ದರೆ, ಕರುಣೆಯಿಂದ ನನ್ನ ಪರಿಸ್ಥಿತಿಯನ್ನು ನಿಯಂತ್ರಿಸು. ನೀನು ನನ್ನನ್ನು ಬಹಿಷ್ಕಾರ ಹಾಕಿಲ್ಲ ಅಲ್ಲವೇ?”
ಉಮ್ಬರನ್ದಣ್ ಪಾೞೇಯೋ ಅದನುಳ್ ಮಿಶೈ ನೀಯೇಯೋ,
ಅಮ್ಬರನಲ್ ಶೋದಿ ಅದನುಳ್ ಪಿರಮನ್ ಅರನ್ ನೀ,
ಉಮ್ಬರುಮ್ ಯಾದವರುಮ್ ಪಡೈತ್ತ ಮುನಿವನವನ್ ನೀ,
ಎಮ್ಬರುಮ್ ಶಾದಿಕ್ಕಲುಱ್ಱು ಎನ್ನೈ ಪ್ಪೋರವಿಟ್ಟಿಟ್ಟಾಯೇ ॥

ನೀನು ನಿನ್ನ ಆಟದ ಸಾಮಾನಾಗಿರುವ ಪ್ರಕೃತಿಯ ಮೂಲ ವಸ್ತುಗಳನ್ನು ನಿಯಂತ್ರಿಸುವ ಸರ್ವ ಶ್ರೇಷ್ಠ ಮತ್ತು ವಿಶಿಷ್ಟನಾದವನು. ಈ ಮೂಲಭೂತ ವಸ್ತುಗಳು ಅವನ್ನು ಆಶ್ರಯಿಸಿರುವ ಚೇತನಗಳಿಗೆ ಭೋಗ ಮತ್ತು ಮೋಕ್ಷವನ್ನು ಕೊಡಲು ಕಾರಣವಾಗುತ್ತವೆ. ನೀನು ನಿರ್ಮಲವಾದ ಆಕಾಶ ಮತ್ತು ಬೆಂಕಿ ಮುಂತಾದ ಮೂಲಾಂಶಗಳನ್ನು ಸೃಷ್ಟಿಸಿರುವೆ ಮತ್ತು ಅವುಗಳನ್ನು ನಿನ್ನ ರೂಪವಾಗಿಸಿಕೊಂಡಿರುವೆ. ನೀನು ಅಂಡಾಕಾರದ ಬ್ರಹ್ಮಾಂಡವನ್ನು ಈ ಮೂಲಾಂಶದಿಂದ ಸೃಷ್ಟಿಸಿರುವೆ . ಬ್ರಹ್ಮ ,ರುದ್ರ ಮುಂತಾದವರು ಈ ಬ್ರಹ್ಮಾಂಡದಲ್ಲಿರುವರು ಮತ್ತು ಅವರು ನಿನ್ನ ರೂಪದಲ್ಲಿರುವರು. ನೀನು ಎಲ್ಲಾ ರೀತಿಯ ಜೀವಿಗಳಾದ (ಚೇತನಗಳನ್ನು) ಸ್ವರ್ಗೀಯ ಜನರನ್ನು, ಮಾನವರನ್ನು ಮುಂತಾದವರನ್ನು ಸೃಷ್ಟಿ ಮಾಡಿರುವೆ. ನನ್ನ ದೇಹವನ್ನು ನಿಯಂತ್ರಿಸಲು ಒಪ್ಪಿಕೊಂಡಾದ ಮೇಲೆ ನನ್ನನ್ನು ಇಲ್ಲಿಯೇ ಬಿಟ್ಟಿರುವೆ. ‘ಓ’ ಕಾರವನ್ನು ‘ನೀ’ ಕಾರವಿರುವ ಎಲ್ಲಾ ಕಡೆಯಲ್ಲೂ ಬದಲಾಯಿಸಬೇಕು. ಇದು ಆಳ್ವಾರರ ದುಃಖವನ್ನೂ ಹತಾಶೆಯನ್ನೂ ಪ್ರತಿಪಾದಿಸುತ್ತದೆ. ಆಳ್ವಾರರು “ಇಲ್ಲಿ ಎಲ್ಲಾ ಕಾರಣಗಳಿಗಾಗಿಯೂ ನೀನು ನನ್ನನ್ನು ರಕ್ಷಿಸಬೇಕು ಆದರೆ ನೀನು ನನ್ನನ್ನು ಬಹಿಷ್ಕರಿಸಿರುವೆ.” ಎಂದು ನೊಂದುಕೊಳ್ಳುತ್ತಾರೆ.

ಐದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನನ್ನನ್ನು ದೂರಮಾಡಿದ ಕಾರಣ ನನ್ನ ಸ್ವತಃ ಪ್ರಯತ್ನದಿಂದ ನಾನು ನಿನ್ನನ್ನು ಪಡೆಯಬಲ್ಲೆ ಎಂಬುದಾಗಿದ್ದರೆ ನಾನು ನನ್ನದು ಎಂಬ ಯಾವುದಾದರೂ ಸ್ಥಿತಿಯುಂಟೆ? ನಾನು ಒಡನೆ ನಾಶವಾಗುತ್ತೇನೆ.”
ಪ್ಪೋರವಿಟ್ಟಿಟ್ಟೆನ್ನೈ ನೀ ಪುಱಮ್ ಪೋಕ್ಕಲುತ್ತಾಲ್, ಪಿನ್ನೈ ಯಾನ್
ಆರೈಕೊಣ್ಡು ಎತ್ತೈ ಅನ್ದೋ ಎನದೆನ್ಬದೆನ್ ಯಾನೆನ್ಬದೆನ್,
ತೀರ ಇರುಮ್ಬುಣ್ಡ ನೀರದುಪೋಲ ಎನ್ನಾರುಯಿರೈ
ಆರ ಪ್ಪರುಗ , ಎನಕ್ಕಾರಾವಮುದಾನಾಯೇ ॥

ಕಾದ ಕಬ್ಬಿಣವು ನೀರನ್ನು ತಕ್ಷಣ ಹೀರುವಂತೆ, ನನ್ನ ಆತ್ಮ ತೃಷೆಯನ್ನು ತಣಿಸಲು ನೀನು ಸರಿಸಾಟಿಯಿಲ್ಲದ ಅಮೃತ, ನಾನು ನಿನ್ನನ್ನು ಸಂಪೂರ್ಣವಾಗಿ ಕುಡಿದುಬಿಟ್ಟಿದ್ದೇನೆ. ನೀನು ನನ್ನನ್ನು ವ್ಯರ್ಥವಾಗಿ ನಿನ್ನಿಂದ ಹೊರತಾಗಿರುವ ಈ ಲೌಕಿಕ ಆನಂದದಲ್ಲಿ ವ್ಯಸ್ತವಾಗಲು ಎಸೆದುಬಿಟ್ಟರೆ, ನಾನು ಯಾವ ಗುರಿಯನ್ನು ಮುಟ್ಟುತ್ತೇನೆ? ಮತ್ತು ಯಾರ ಜೊತೆಯಲ್ಲಿ ಇರುತ್ತೇನೆ? ಅಯ್ಯೋ! ನನ್ನ ಹತ್ತಿರ ನನ್ನದು ಎಂದು ಹೇಳಿಕೊಳ್ಳಲು ಯಾವ ವಸ್ತುವೂ ಇಲ್ಲ. ನಾನು ಎಂದು ಹೇಳಿಕೊಳ್ಳಲು ಯಾವ ಸ್ವತಂತ್ರವಾಗಿ ಕಾರ್‍ಯವನ್ನು ಮಾಡುವ ಆತ್ಮವೂ ಇಲ್ಲ. ಇದರ ಅರ್ಥ ಇಲ್ಲಿ ಬೇರೇನೂ ಉಳಿದಿಲ್ಲ. ಆಳ್ವಾರರು ತದ್ವಿರುದ್ಧವಾಗಿ ಅತ್ಯಂತ ನಿರಾಶೆಗೊಂಡು ಹೇಳುತ್ತಾರೆ, “ಆರೈಕ್ಕೊಣ್ಡು ಎತ್ತೈ” ಮತ್ತು ಆಳ್ವಾರರು ಹೇಳುತ್ತಾರೆ, “ಇರುಮ್ಬುಣ್ಡ ನೀರ್‌ಪೋಲ್ ಎನ್ ಆತ್ಮಾವೈ ಮುಱ್ಱ ಪರುಗಿನಾನ್” ಎಂದರೆ “ನೀನು ನನ್ನನ್ನು ಪೂರ್ತಿಯಾಗಿ ಆನಂದಗೊಂಡು ಕುಡಿದುಬಿಟ್ಟಿದ್ದೀಯ” ಎಂದು.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ಪೆರಿಯ ಪಿರಾಟ್ಟಿಯ ಮೇಲೆ ಇರುವ ದೃಢತೆಯನ್ನು ನನ್ನ ಮೇಲೆಯೂ ಇರಿಸಿದ್ದೀಯ. ನೀನು ನನ್ನ ದೇಹದ/ಸ್ವಭಾವದ ಮೇಲೆ ಅತ್ಯಂತ ಪ್ರೀತಿಯನ್ನು ತೋರಿಸಿ, ನನ್ನನ್ನು ನುಂಗಿರುವೆ. ಕರುಣೆಯಿಂದ ನನ್ನನ್ನು ನಿರ್ಲಕ್ಷಿಸದೇ ಬೇಗನೆ ಸ್ವೀಕರಿಸು.”
ಎನಕ್ಕಾರಾವಮುದಾಯ್ ಎನದಾವಿಯೈ ಇನ್ನುಯಿರೈ,
ಮನಕ್ಕಾರಾಮೈ ಮನ್ನಿ ಉಣ್ಡಿಟ್ಟಾಯ್ ಇನಿ ಉಣ್ಡೊೞಿಯಾಯ್,
ಪುನಕ್ಕಾಯಾನಿಱತ್ತ ಪುಣ್ಡರೀಕಕ್ಕಣ್ ಶೆಙ್ಗನಿವಾಯ್,
ಉನಕ್ಕೇಱ್ಕುಮ್ ಕೋಲಮಲರ್‌ ಪಾವೈಕ್ಕು ಅನ್ಬಾ ಎನ್ನನ್ಬೇಯೋ ॥

ಸ್ತ್ರೀಯ ಸಹಜಗುಣ ಅದಕ್ಕೆ ತಕ್ಕಂತೆ ಮನೋಭಾವವನ್ನು ಹೊಂದಿರುವ ಲಕ್ಷ್ಮಿಗೆ ನೀನು ಅತ್ಯಂತ ಪ್ರೀತಿಪಾತ್ರನು, ಪುಷ್ಪದಲ್ಲೇ ಹುಟ್ಟಿರುವ, ನಿನಗೆ ಸರಿಸಾಟಿಯಾದ ರೂಪವನ್ನು ಹೊಂದಿರುವ, . ಕಾಯಂಪೂ ಹೂವಿನಂತೆ ಬಣ್ಣವನ್ನು ಹೊಂದಿರುವ ನಿನಗೆ ಸರಿಯಾದ ಜೋಡಿಯಾಗಿರುವ, ಕಮಲದ ಹೂವನ್ನು ಹೋಲುವ ದಿವ್ಯ ಕಣ್ಣುಗಳನ್ನು ಮತ್ತು ಕೆಂಪಾದ ದಿವ್ಯ ತುಟಿಗಳನ್ನು ಹೊಂದಿರುವ ಶ್ರೀಲಕ್ಷ್ಮಿಯು ಸರಿಯಾದ ಆನಂದ ತರುವವಳು. ಓಹ್! ನೀನು ನನ್ನ ಪ್ರೇಮದ ಸಂಕೇತವಾಗಿರುವೆ. ನೀನು ನನ್ನ ಸ್ವಭಾವವನ್ನು/ದೇಹವನ್ನು ಮತ್ತು ನನ್ನ ವಿಶಿಷ್ಟವಾದ ಆತ್ಮವನ್ನು ನಿರಂತರವಾಗಿ ಆನಂದಿಸಿರುವೆ. ನೀನು ನನ್ನನ್ನು ಅಂಥ ಆನಂದಿಸುವ ವ್ಯಕ್ತಿತ್ವವಾಗಿದ್ದು, ನಿನ್ನ ಹೃದಯವು ಅಂತಹ ಆಸೆಯಿಂದ ಅತೃಪ್ತಿಯನ್ನು ಹೊಂದಬಾರದು. ಈಮೇಲಾದರೂ ನಾನು ನಿನ್ನನ್ನು ಆನಂದಿಸಲು ನೀನು ಅನುಮತಿಸಬೇಕು.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನೀನು ನನ್ನನ್ನು ಸಂಸಾರ ಸಾಗರದಿಂದ ಕರುಣೆಯಿಂದ ಮೇಲಕ್ಕೆತ್ತಿದ್ದೀಯ ಮತ್ತು ಪೆರಿಯ ಪಿರಾಟ್ಟಿಯ ಜೊತೆಗೆ ನೀನು ಸಮಾಗಮವಾದಂತೆ ಅವಳ ಸೇವಕನಾದ ನನ್ನಲ್ಲೂ ಒಂದಾಗಿರುವೆ. ನೀನು ಶ್ರೀ ಭೂಮಿ ಪಿರಾಟ್ಟಿಯನ್ನು ಪ್ರಳಯ ಕಾಲದ ಸಮುದ್ರದಿಂದ ಮೇಲೆತ್ತಿರುವ ಹಾಗೆ ಮತ್ತು ಹಾಲಿನ ಸಮುದ್ರವನ್ನು ಕಡೆದು ಪೆರಿಯ ಪಿರಾಟ್ಟಿಯನ್ನು ಹೊರಗೆ ತೆಗೆದು, ಅವರೊಂದಿಗೆ ಒಂದಾದ ಹಾಗೆ. ನನ್ನ ಮೇಲೆ ಅಪರಿಮಿತ ಪ್ರೀತಿಯನ್ನು ತೋರಿದ ನಿನ್ನನ್ನು ನಾನು ಪಡೆದ ಮೇಲೆ, ನೀನು ತಪ್ಪಿಸಿಕೊಂಡು ಹೋಗಲು ನಾನು ಬಿಡುತ್ತೇನೆಯೇ?”
ಕೋಲಮಲರ್ ಪಾವೈಕ್ಕು ಅನ್ಬಾಗಿಯ ಎನ್ ಅನ್ಬೇಯೋ,
ನೀಲವರೈ ಇರಣ್ಡು ಪಿಱೈ ಕವ್ವಿ ನಿಮಿರ್ನ್ದದೊಪ್ಪ,
ಕೋಲವರಾಗಮೊನ್‍ಱಾಯ್ ನಿಲಮ್ ಕೋಟ್ಟಿಡೈಕ್ಕೊಣ್ಡ ಎನ್ದಾಯ್,
ನೀಲಕ್ಕಡಲ್ ಕಡೈನ್ದಾಯ್ ಉನ್ನೈ ಪೆಱ್ಱು ಇನಿ ಪ್ಪೋಕ್ಕುವನೋ ॥

ನೀನು ಸುಂದರವಾದ ಆನಂದಮಯವಾದ ಪಿರಾಟ್ಟಿಯ ಮೇಲೆ ಇಟ್ಟಿರುವ ಪ್ರೀತಿಯನ್ನೇ ನನ್ನ ಮೇಲೂ ಇಟ್ಟಿರುವೆ. ಓಹ್! ನನ್ನ ಸ್ವಾಮಿಯೇ, ವಿಶಿಷ್ಟವಾದ ದೈಹಿಕ ಅಂದವನ್ನು ಹೊಂದಿರುವ ಅನನ್ಯವಾದ ಮಹಾವರಾಹ ಮೂರ್ತಿಯೇ! ನೀನು ಇಡೀ ಭೂಮಿಯನ್ನು ನಿನ್ನ ಕೋರೆ ದಾಡಿಯಲ್ಲಿ ಹಿಡಿದುಕೊಂಡಿರುವೆ. ಆ ರೂಪವು ಒಂದು ಎತ್ತರದ ನೀಲಿ ಪರ್ವತವು ಎರಡು ಅರ್ಧ ಚಂದ್ರಗಳನ್ನು ಹಿಡಿದುಕೊಂಡು ಮೇಲೇರುವ ಹಾಗಿದೆ. ಓಹ್! ನಿನ್ನ ಭಕ್ತರನ್ನು ಸಲಹಲು ನೀಲಿಯ ಬಣ್ಣದ ಸಾಗರವನ್ನು ಕಡಿದು ಕಷ್ಟದ ಕೆಲಸದಲ್ಲಿ ತೊಡಗಿದವನೇ! ನಿನ್ನನ್ನು ಹೊಂದಿ ಸಂಪೂರ್ಣವಾಗಿ ನನ್ನ ಕೈಯ್ಯಲ್ಲಿ ಹಿಡಿದ ಮೇಲೆ , ನಾನು ನಿನ್ನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟೇನೆಯೆ? “ನೀಲಕ್ಕಡಲ್” ಎಂದರೆ ಅಮೂಲ್ಯ ನೀಲಿ ಮುತ್ತು ರತ್ನಗಳನ್ನೊಳಗೊಂಡ ಕಡಲು ಎಂದೂ ಅರ್ಥವಿದೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅರ್ಥ ಮಾಡಿಕೊಳ್ಳಲು ಮತ್ತು ಪಡೆಯಲು ತುಂಬಾ ಕಷ್ಟವಾಗಿರುವ ನಿನ್ನನ್ನು ಪಡೆದ ಮೇಲೆ , ನಿನ್ನನ್ನು ಹೋಗಬಿಡುವುದು ಸಾಧ್ಯವೇ ಇಲ್ಲ.”
ಪೆಱ್ಱಿನಿ ಪ್ಪೋಕ್ಕುವನೋ ಉನ್ನೈ ಎನ್ ತನಿಪ್ಪೇರುಯಿರೈ,
ಉಱ್ಱ ಇರುವಿನೈಯಾಯ್ ಉಯಿರಾಯ್ ಪ್ಪಯನಾಯ್ ಅವೈಯಾಯ್,
ಮುಱ್ಱ ಇಮ್ಮೂವುಲಗುಮ್ ಪೆರುಮ್ ತೂಱಾಯ್ ತ್ತೂಱ್ಱಿಲ್ ಪುಕ್ಕು,
ಮುಱ್ಱಕ್ಕರನ್ದೊಳಿತ್ತಾಯ್ ಎನ್ ಮುದಲ್ ತನಿ ವಿತ್ತೇಯೋ ॥

ನೀನು ಎರಡು ರೀತಿಯ ಕರ್ಮಗಳನ್ನು ನಿಯಂತ್ರಿಸುತ್ತೀಯ. ಅವುಗಳು ಪುಣ್ಯ ಮತ್ತು ಪಾಪ. ನೀನು ಆತ್ಮದ ನಿಯಂತ್ರಕ. ನೀನೇ ಆ ಎರಡು ಕರ್ಮಗಳ ಫಲವಾದ ಆನಂದ ಮತ್ತು ದುಃಖದ ಪೋಷಕ. ಮಹಾ ಪೊದೆಯಂತಿರುವ ಮೂಲಭೂತ ವಸ್ತುಗಳನ್ನು ಹೊಂದಿರುವ ಮೂರು ಲೋಕಗಳನ್ನು ಸಂಪೂರ್ಣವಾಗಿ ನೀನು ನಿನ್ನ ಪ್ರಕಾರಮ್ ಆಗಿ ಹೊಂದಿರುವೆ. ನೀನು ಈ ಮೂಲಭೂತವಾದ ವಸ್ತುವಾದ ಮಹಾ ಪೊದೆಯನ್ನು ಹೊಕ್ಕಿ , ಯಾರಿಗೂ ಕಾಣದಂತೆ, ಎಲ್ಲರಿಗೂ ತಿಳಿಯ ಪಡದ ಹಾಗೆ ಅವಿತಿರುವೆ. ಓಹ್! ನೀನು ವಿಶಿಷ್ಟವಾದ ಕಾರಣ ಮತ್ತು ಮೂಲ ಒಳ್ಳೆಯ ಕರ್ಮದ ಫಲ ನನಗೆ. ನಿನ್ನನ್ನು ಪಡೆದ ಮೇಲೆ, ನಿನ್ನಿಂದ ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲವೆಂಬ ಸ್ಥಿತಿಯನ್ನು ತಲುಪಿದ ಮೇಲೆ, ನಿನ್ನನ್ನು ಹೋಗಬಿಡುವುದು ಸಾಧ್ಯವೇ? ‘ಓ’ ಎಂಬ ಶಬ್ದವು ಅವರ ಅಗಲಿಕೆಯ ದುಃಖದ ಪ್ರತೀಕವಾಗಿದೆ.

ಒಂಬತ್ತನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ, “ಇಡೀ ಬ್ರಹ್ಮಾಂಡವನ್ನು ನನ್ನ ರೂಪವನ್ನಾಗಿ ನೋಡಿದ ಮೇಲೆ, ಇನ್ನೇನು ಬೇಕು ನಿನಗೆ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ಅದು ನನಗೆ ತೃಪ್ತಿಯಾಗಿಲ್ಲ. ನಾನು ನಿನ್ನನ್ನು ವಿಶಿಷ್ಟವಾದ ಪರಿಪೂರ್ಣವಾದ ತಿರುನಾಡಿನಲ್ಲಿ (ಪರಮಪದದಲ್ಲಿ) ನೋಡಲು ಇಷ್ಟ ಪಡುತ್ತೇನೆ.”
ಮುದಲ್ ತನಿವಿತ್ತೇಯೋ ಮುೞುಮೂವುಲಗಾದಿಕ್ಕೆಲ್ಲಾಮ್,
ಮುದಲ್ ತನಿ ಉನ್ನೈ ಉನ್ನೈ ಎನೈನಾಳ್ ವನ್ದು ಕೂಡುವನ್ ನಾನ್,
ಮುದಲ್ ತನಿ ಅಙ್ಗುಮಿಙ್ಗುಮ್ ಮುೞುಮುಱ್ಱುಱುವಾೞ್ ಪಾೞಾಯ್,
ಮುದಲ್ ತನಿ ಶೂೞ್‍ನ್ದಗನ್‍ಱಾೞ್‍ನ್ದು ಉಯರ್ನ್ದ ಮುಡಿವಿಲೀಯೋ ॥

ಓಹ್! ನೀನೇ ಮೂರು ಲೋಕಗಳಿಗೂ ಮೂಲವಾದ ಮತ್ತು ಸಮರ್ಥವಾದ ಕಾರಣ. ಅನನ್ಯ ಲೌಕಿಕ ಕಾರಣ. ಅಂಡಾಕಾರದ ಬ್ರಹ್ಮಾಂಡದ ಒಳಗೆ ಮತ್ತು ಹೊರಗೆ ಇರುವ ಎಲ್ಲಾ ವಸ್ತುಗಳಲ್ಲೂ ನೀನೇ ಹರಡಿಕೊಂಡಿರುವೆ. ಸಮೃದ್ಧತೆಯ ಮತ್ತು ಫಲವತ್ತತೆಯ ಮೂಲ ಕಾರಣವಾದ ಮೂಲ ಪ್ರಕೃತಿಯ ನಿಯಂತ್ರಕನಾಗಿರುವೆ. ನೀನೇ ಮೂಲವಾದ ಮತ್ತು ಸರಿಸಾಟಿಯಿಲ್ಲದ ನಿಯಂತ್ರಕನಾಗಿ ಎಲ್ಲಾ ಹತ್ತು ದಿಕ್ಕಿನಲ್ಲೂ ಉಪಸ್ಥಿತನಿದ್ದು, ವ್ಯಾಪಿಸಿಕೊಂಡಿರುವೆ. ನಾನು ಯಾವಾಗ ಅಲ್ಲಿಗೆ ಬಂದು ಎಲ್ಲದಕ್ಕೂ ಮೂಲವಾಗಿರುವ , ಯಾರೊಂದಿಗೂ ಹೋಲಿಸಲಾಗದ ನಿನ್ನೊಂದಿಗೆ ಒಂದಾಗುತ್ತೇನೆ?

ಹತ್ತನೆಯ ಪಾಸುರಮ್ :
ಆಳ್ವಾರರು ಪೆರಿಯ ಪಿರಾಟ್ಟಿಗೆ ಹೇಳುತ್ತಾರೆ, ಎಂಪೆರುಮಾನರು ಅವರ ಆಸೆಯನ್ನು ನೆರವೇರಿಸದೆ, ತೃಪ್ತಿಯಾಗಿ ಇರಲು ಬಿಡದಿರುವಂತೆ ಮಾಡಲು ಬಹಳ ಶೋಕದಿಂದ ಕೂಗಿ ಕರೆಯುತ್ತಾರೆ. ಪರಿಪೂರ್ಣನಾದ ಎಂಪೆರುಮಾನರು ಆಳ್ವಾರರ ಕರೆಗೆ ಓಗೊಟ್ಟು ಅವರಿರುವಲ್ಲಿಗೆ ಬರುತ್ತಾರೆ ಮತ್ತು ಆಳ್ವಾರರ ಜೊತೆಗೆ ಒಂದಾಗಿ ಕೂಡಿಕೊಳ್ಳುತ್ತಾರೆ. ಅದನ್ನು ಕಂಡ ಆಳ್ವಾರರು ಹೇಳುತ್ತಾರೆ, “ನೀನು ಬಂದು ಅಳತೆಗೆ ಮೀರಿದ ಪ್ರಕೃತಿ, ಆತ್ಮಗಳು, ಮತ್ತು ನಿನ್ನ ಸಂಕಲ್ಪದ ರೂಪದಲ್ಲಿರುವ ಜ್ಞಾನಕ್ಕಿಂತಲೂ ಹೆಚ್ಚಾಗಿರುವ ನನ್ನ ಕಾತುರದ ಹಂಬಲವನ್ನು ದೂರಮಾಡಿದೆ. ನನ್ನ ಆಸೆಯು ಈಗ ನೆರವೇರಿತು.”
ಶೂೞ್‍ನ್ದಗನ್‍ಱಾೞ್‍ನ್ದು ಉಯರ್ನ್ದ ಮುಡಿವಿಲ್ ಪೆರುಮ್ ಪಾೞೇಯೋ,
ಶೂೞ್‍ನ್ದದನಿಲ್ ಪೆರಿಯ ಪರನನ್ಮಲರ್ ಚ್ಚೋದೀಯೋ,
ಶೂೞ್‍ನ್ದದನಿಲ್ ಪೆರಿಯ ಶುಡರ್ ಞಾನಿನ್ಬಮೇಯೋ,
ಶೂೞ್‍ನ್ದದನಿಲ್ ಪೆರಿಯ ಎನ್ನವಾವಱಚ್ಚೂೞ್‍ನ್ದಾಯೇ ॥

ಸುತ್ತಮುತ್ತಲೂ ಹರಡಿರುವ, ದೂರದೂರದವರೆಗೂ ವ್ಯಾಪಿಸಿರುವ, ಎಲ್ಲಾ ದಿಕ್ಕಿನಲ್ಲೂ ಕೆಳಮಟ್ಟದ ಮತ್ತು ಮೇಲ್ಮಟ್ಟದ ಪ್ರದೇಶಗಳಲ್ಲಿಯೂ ಹರಡಿಕೊಂಡಿರುವ, ಅಳತೆಗೆ ಸಿಗದ, ಭೋಗಮ್ ಮತ್ತು ಮೋಕ್ಷಮ್ ಇವೆರಡರ ನಡುವಿನ ಆಟದ ಮೈದಾನವಾಗಿರುವ, ಪ್ರಕಾರವಾಗಿರುವ, ಪ್ರಕೃತಿಯನ್ನು ನೀನು ಹೊಂದಿರುವೆ. ಜ್ಞಾನದಿಂದ ಹಬ್ಬುತ್ತಿರುವ , ಪ್ರಕೃತಿಗಿಂತಲೂ ದೊಡ್ಡದಾಗಿರುವ ಆತ್ಮಗಳಿಗೆ ನೀನು ನಿಯಂತ್ರಕನಾಗಿರುವೆ. ಶ್ರೇಷ್ಠನಾಗಿ ಮತ್ತು ಸ್ವಯಮ್ ಪ್ರಕಾಶತ್ವಮ್ ಮುಂತಾದ ಶ್ರೇಷ್ಠ ಪ್ರವೃತ್ತಿಗಳನ್ನು ಹೊಂದಿರುವ ಪ್ರಕಾರಮ್ ಆಗಿ ಜ್ಞಾನದ ಕಿರಣಗಳಿಂದ ಹೊಳೆಯುತ್ತಿರುವೆ. ವಸ್ತುಗಳಲ್ಲಿ ಮತ್ತು ಆತ್ಮಗಳಲ್ಲಿ ವ್ಯಾಪಿಸಿರುವ , ಅವುಗಳಿಗಿಂತಲೂ ಬಹಳ ದೊಡ್ಡವನಾಗಿರುವ, ಕಲ್ಯಾಣ ಗುಣಗಳಿಂದ ಸ್ವಪ್ರಕಾಶಮಾನವಾಗಿರುವ, ಜ್ಞಾನ ಮತ್ತು ಆನಂದದಿಂದ ಗುರುತಿಸಲ್ಪಡುವ ನಿಜ ಸಹಜ ಸ್ವಭಾವವನ್ನು ಹೊಂದಿರುವೆ. ನಿನ್ನಲ್ಲೇ ಸಂಪೂರ್ಣವಾಗಿ ಆನಂದವಾಗಿ ಮುಳುಗಿರುವಂತೆ ಸಾಯುಜ್ಯ ಭೋಗಮ್ ನನ್ನು ನನಗೆ ಕರುಣಿಸಿರುವೆ. ನಿಜವಾದ ಸ್ವಭಾವ, ಅನೇಕ ಕಲ್ಯಾಣ ಗುಣಗಳು , ರೂಪ, ಆಭರಣಗಳು, ಆಯುಧಗಳು, ದಿವ್ಯ ಮಡದಿಯರು, ಸೇವಕರು ಮತ್ತು ದಿವ್ಯ ವಾಸಸ್ಥಾನಗಳನ್ನು ಹೊಂದಿರುವೆ. ನನ್ನ ಆಳವಾದ ಪ್ರೀತಿಯನ್ನು ತೃಪ್ತಿಗೊಳಿಸಿ , ಅವುಗಳಿಂದ ಸುತ್ತುವರಿದ ಮೂರು ತತ್ವಗಳನ್ನು ಮತ್ತು ಅದಕ್ಕಿಂತಾ ನೀನು ಹೆಚ್ಚಾಗಿರುವೆ. ಇಲ್ಲಿ ಎಲ್ಲಾ ವಾಕ್ಯಗಳಲ್ಲಿರುವ ‘ಓ’ ಕಾರವು ಆಳ್ವಾರರ ಮಹದಾನಂದವನ್ನು ತಿಳಿಯಪಡಿಸುತ್ತದೆ, “ವಾಹ್! ಎಂತಹ ಅದ್ಭುತವಾಗಿದೆ” ಎಂದು.

ಹನ್ನೊಂದನೆಯ ಪಾಸುರಮ್:
ಭಗವಂತನನ್ನು ಪಡೆದ ಮಾರ್ಗವನ್ನು ಆಳ್ವಾರರು ಮುಖ್ಯವಾಗಿಸಿ, ಜ್ಞಾನವಂತರಾಗಿ ಜನ್ಮವನ್ನೆತ್ತಿರುವ ಎಲ್ಲರಿಗೂ ತಿರುವಾಯ್ಮೊೞಿಯ ಶ್ರೇಷ್ಠತ್ವವನ್ನು ಕಾರಣವಾಗಿರಿಸಿಕೊಂಡು ಆಳ್ವಾರರು ವಿವರಿಸಿದ್ದಾರೆ.
ಅವಾವಱಚ್ಚೂೞ್ ಅರಿಯೈ ಅಯನೈ ಅರನೈ ಅಲಱ್ಱಿ,
ಅವಾವಱ್ಱು ವೀಡುಪೆಱ್ಱ ಕುರುಗೂರ್ ಚ್ಚಡಗೋಪನ್ ಶೊನ್ನ,
ಅವಾವಿಲ್ ಅನ್ದಾದಿಗಳಾಲ್ ಇವೈ ಆಯಿರಮುಮ್ , ಮುಡಿನ್ದ
ಅವಾವಿಲ್ ಅನ್ದಾದಿ ಇಪ್ಪತ್ತಱಿನ್ದಾರ್ ಪಿಱನ್ದಾರ್ ಉಯರ್ನ್ದೇ ॥

ಆಳ್ವಾರ್ ತಿರುನಗರಿಯ ನಮ್ಮಾಳ್ವಾರರು ಹರಿಯನ್ನು ಅತ್ಯಂತ ಆಳವಾದ ಪ್ರೀತಿಯಿಂದ ಕೂಗಿ ಕರೆದರು ಮತ್ತು ಅವನ ಕೊನೆಯಿಲ್ಲದ ಸಮಾಗಮದಿಂದ ಅತೀವ ತೃಪ್ತಿ ಹೊಂದಿದರು. ಬ್ರಹ್ಮನ ಅಂತರಾತ್ಮವನ್ನು ಮತ್ತು ಪಾಶುಪತ ಶಾಲೆಯ ಗುರಿಯನ್ನು ಹೊಂದಿರುವ ರುದ್ರರ ಹಿಂಬಾಲಕರ ಪರಮಗುರಿ ಮತ್ತು ಅಂತರಾತ್ಮವನ್ನು ನಾಶಮಾಡಿದ ಗುಣವುಳ್ಳವರು. ಆಳ್ವಾರರ ಆಸೆಯು ಪೂರ್ಣವಾಯಿತು ಮತ್ತು ಅವರು ಸ್ವತಂತ್ರರಾದರು, (ಮೋಕ್ಷ ಹೊಂದಿದರು) , ಅವರು ಈ ಸಾವಿರ ಪಾಸುರಗಳನ್ನು ಅಂತಾದಿ ಪದ್ಯಗಳ ರೂಪದಲ್ಲಿ ಹಾಡಿದ್ದಾರೆ. ಯಾರು ಈ ಅಂತಾದಿ ಪದ್ಯಗಳನ್ನು ಈ ಪದಿಗೆಯಲ್ಲಿ, ಸಾವಿರ ಪಾಸುರಗಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಧ್ಯಾನಿಸುತ್ತಾರೋ, ಅವರ ಆಸೆಗಳು ಸಂಪೂರ್ಣವಾಗುತ್ತದೆ ಮತ್ತು ಅವರು ಹುಟ್ಟಿನಿಂದಲೇ ಶ್ರೇಷ್ಠರೆನಿಸಿಕೊಳ್ಳುತ್ತಾರೆ. “ಅವಾವಱ ಚೂೞ್ ಅರಿ” ಎಂದರೆ “ಯಾರು ತಮ್ಮ ಕಲ್ಯಾಣ ಗುಣಗಳಿಂದ ಸುತ್ತುವರೆಯಲ್ಪಟ್ಟ ತಮ್ಮ ಭಕ್ತರ ಆಸೆಗಳನ್ನು ಪೂರೈಸಿ, ಆ ಭಕ್ತರನ್ನು ಸ್ವೀಕರಿಸುವರೋ , “ ಎಂದೂ ವಿವರಣೆ ನೀಡಲಾಗಿದೆ.

ತಿರುವಾಯ್ಮೊೞಿ ಸಂಪೂರ್ಣಮ್
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ – ಸರಳ ವಿವರಣೆ – 10.9 – ಶೂೞ್ ವಿಶುಮ್ಬು

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.8 – ತಿರುಮಾಲಿರುಞ್ಜೋಲೈ ಮಲೈ


ಆಳ್ವಾರರು ಪರಮಪದಕ್ಕೆ ವೇಗವಾಗಿ ಸೇರಲು ಬಯಸುತ್ತಾರೆ. ಎಂಪೆರುಮಾನರು ಆಳ್ವಾರರನ್ನು ಇನ್ನೂ ವೇಗವಾಗಿ ತಲುಪಿಸಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಎಂಪೆರುಮಾನರು ಆಳ್ವಾರರ ಪರಮಪದದ ಆಸೆಯನ್ನು ಇನ್ನೂ ಹೆಚ್ಚಿಸಲು ಇಚ್ಛಿಸುತ್ತಾರೆ. ಆದ್ದರಿಂದ ಅರ್ಚಿರಾದಿ ಗತಿ (ಪರಮಪದಕ್ಕೆ ತಲುಪುವ ದಾರಿ)ಯನ್ನು ತೋರಿಸುತ್ತಾರೆ. ಇದು ವೇದಾಂತದಲ್ಲಿ ವಿವರಿಸಲಾಗಿದೆ. ಆಳ್ವಾರರು ಇದನ್ನು ಆನಂದಿಸುತ್ತಾರೆ ಮತ್ತು ಹೇಗೆ ಎಲ್ಲಾ ಶ್ರೀವೈಷ್ಣವರೂ ಈ ಅರ್ಚಿರಾದಿ ಗತಿಯಲ್ಲಿ ಪ್ರಯಾಣಿಸಿ, ನಿತ್ಯಸೂರಿಗಳ (ನಿರಂತರವಾಗಿ ಪರಮಪದದಲ್ಲಿ ವಾಸಿಸುವವರು) ಜೊತೆಗೆ ಸಮ್ಮಿಲನವಾಗುತ್ತಾರೆ ಎಂದು ಬಹಿರಂಗ ಪಡಿಸುತ್ತಾರೆ. ಈ ಪದಿಗೆಯಲ್ಲಿ ಶ್ರೀವೈಷ್ಣವರಿಗೆ ನಂಬಿಕೆಯನ್ನು ಬಲಪಡಿಸಲು ಎಲ್ಲರೂ ಸಾಧನೆಯ ಬಳಿಕ ಅದನ್ನೇ ಹೊಂದುತ್ತಾರೆ ಎಂದು ದೃಢಪಡಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಅನೇಕ ಶ್ರೀವೈಷ್ಣವರು ತಿರುನಾಡಿಗೆ (ಪರಮಪದಕ್ಕೆ) ಏರುವುದನ್ನು ಕಂಡು ಅಪಾರ ಪ್ರೀತಿಯಿಂದ , ಚಲಿಸುವ ಮತ್ತು ಚಲಿಸದ ವಸ್ತುಗಳಿಗೆ ಉಂಟಾದ ಅತೀವ ಹರ್ಷವನ್ನು ಕರುಣೆಯಿಂದ ವಿವರಿಸುತ್ತಾರೆ.
ಶೂೞ್ ವಿಶುಮ್ಬಣಿ ಮುಗಿಲ್ ತೂರಿಯಮ್ ಮುೞಕ್ಕಿನ,
ಆೞ್ ಕಡಲ್ ಅಲೈತಿರೈ ಕೈಎಡುತ್ತಾಡಿನ,
ಏೞ್ ಪೊೞಿಲುಮ್ ವಳಮೇನ್ದಿಯ ಎನ್ನಪ್ಪನ್,
ವಾೞ್ ಪುಗೞ್ ನಾರಣನ್ ತಮರೈ ಕ್ಕಣ್ಡುಗನ್ದೇ ॥

ಶ್ರೀಮನ್ನಾರಯಣರ ಬಂಧುಗಳಾದ, ನನ್ನ ವಿಶಿಷ್ಟವಾದ ಬಂಧುಗಳಾದ ಭಕ್ತರನ್ನು ನೋಡಿ ಆನಂದಗೊಂಡು , ಅವರ ಶ್ರೇಷ್ಠ ಗುಣಗಳು ಹರ್ಷವನ್ನು ತರುವಂಥದ್ದು. ಮೋಡಗಳು ಆಕಾಶದಲ್ಲಿ ಎಲ್ಲಾ ಕಡೆಯೂ ಗುಂಪುಗೂಡಿ , ಅವುಗಳು ಸಂಗೀತ ವಾದ್ಯಗಳ ಗಲಭೆಯ ನಾದವನ್ನು ಹಬ್ಬಿಸಿದವು. ಅತ್ಯಂತ ಆಳವಾಗಿರುವ, ತಳವೇ ಇಲ್ಲದ ಸಮುದ್ರಗಳು ಏರುತ್ತಿರುವ ಅಲೆಯನ್ನೇ ತಮ್ಮ ಕೈಗಳಾಗಿಸಿ ನೃತ್ಯಗೈದವು. ಏಳು ದ್ವೀಪಗಳು ವಿಶೇಷವಾದ ಪಾರಿತೋಷಕಗಳನ್ನು ಉಡುಗೊರೆಯನ್ನಾಗಿ ನೀಡಿದವು.

ಎರಡನೆಯ ಪಾಸುರಮ್:
ಆಳ್ವಾರರು ಮೇಲ್ಮಟ್ಟ ವರ್ಗದ ಲೋಕದಿಂದ ಪಡೆದ ಸ್ವಾಗತವನ್ನು ಕರುಣೆಯಿಂದ ವಿವರಿಸಿದ್ದಾರೆ.
ನಾರಣನ್ ತಮರೈ ಕ್ಕಣ್ಡುಗನ್ದು ನಲ್ ನೀರ್ ಮುಗಿಲ್,
ಪೂರಣ ಪೊಱ್ಕುಡಮ್ ಪೂರಿತ್ತದುಯಿರ್ ವಿಣ್ಣಿಲ್,
ನೀರಣಿ ಕಡಲ್‌ಗಳ್ ನಿನ್‍ಱಾರ್ತ್ತನ, ನೆಡುವರೈ
ತ್ತೋರಣಮ್ ನಿರೈತ್ತು ಎಙ್ಗುಮ್ ತೊೞುದನರ್ ಉಲಗೇ ॥

ಸಹಜವಾಗಿ ಒಡೆಯನಾದ ಶ್ರೀಮನ್ನಾರಾಯಣರ ಭಕ್ತರನ್ನು ನೋಡಿ , ಆನಂದಗೊಂಡು , ಶುದ್ಧವಾದ ನೀರಿನಿಂದ ತುಂಬಿಕೊಂಡ ಮೇಘಗಳು ಮೇಲೆ ಆಕಾಶದಲ್ಲಿ ಸ್ವರ್ಣದ ಕೊಡಗಳಂತೆ ತುಂಬಿಕೊಂಡವು. ನೀರಿನ ಸಮುದ್ರಗಳು ಸ್ಥಿರವಾಗಿ ನಿಂತು ಗಲಭೆಯ ಸಂಗೀತವನ್ನು ಸೃಷ್ಟಿಸಿದವು. ಎತ್ತರವಾದ ಪರ್ವತಗಳು ಸ್ವಾಗತ ಕೋರುವ ಕಮಾನುಗಳಂತೆ ಲೋಕವನ್ನು ತುಂಬಿದವು. ಲೋಕದ ನಿವಾಸಿಗಳು ಎಲ್ಲೆಲ್ಲೂ ಪೂಜಿಸುತ್ತಿದ್ದರು. ಈ ಮೊದಲ ಎರಡೂ ಪಾಸುರಗಳಲ್ಲಿ ಆಳ್ವಾರರು ಭೂಮಿಯಿಂದ ಆಕಾಶದವರೆಗೂ ತೋರಿದ ಸ್ವಾಗತವನ್ನು ತೋರಿಸಿದ್ದಾರೆ. ‘ಉಲಗಮ್’ ಎಂದರೆ ಈ ಲೋಕದ ನಾಯಕರು ಎಂದು ಅರ್ಥ.

ಮೂರನೆಯ ಪಾಸುರಮ್:
ಆಳ್ವಾರರು ,ಆಧಿವಾಹಿಕ ಲೋಕ (ಆತ್ಮಗಳನ್ನು ಪರಮಪದಕ್ಕೆ ಕರೆದೊಯ್ಯಲು ದಾರಿ ತೋರಿಸುವ ಸ್ಥಳ) ಗಳಲ್ಲಿ ನೆಲೆಸಿರುವ ಜನರು , ತಿರುನಾಡಿಗೆ (ಪರಮಪದಕ್ಕೆ) ಏರುವ ಶ್ರೀವೈಷ್ಣವರನ್ನು ಹೇಗೆ ಹೂಗಳನ್ನು ಸುರಿಸಿ, ಪ್ರಶಂಸಿಸಿ , ಸ್ವಾಗತಿಸಲು ಮುಂದಾಗುತ್ತಾರೆ ಎಂದು ಕರುಣೆಯಿಂದ ವಿವರಿಸಿದ್ದಾರೆ.
ತೊೞುದನರ್ ಉಲಗರ್‌ಗಳ್ ತೂಬನಲ್ ಮಲರ್ ಮೞೈ
ಪೊೞಿವನರ್, ಪೂಮಿ ಅನ್‍ಱು ಅಳನ್ದವನ್ ತಮರ್ ಮುನ್ನೇ,
ಎೞುಮಿನ್ ಎನ್‍ಱು ಇರುಮರುಙ್ಗಿಸೈತ್ತನರ್ ಮುನಿವರ್ಗಳ್,
ವೞಿ ಇದು ವೈಕುನ್ದರ್ಕ್ಕೆನ್‍ಱು ವನ್ದೆದಿರೇ ॥

ತಮ್ಮ ಮಾತುಗಳನ್ನು ನಿಗ್ರಹಿಸಿರುವ ಮುನಿಗಳು ಮತ್ತು ಋಷಿಗಳು ಆ ಮೇಲಿನ ಲೋಕದ ನಿವಾಸಿಗಳು. ಮಹಾಬಲಿಯು ತನ್ನದೇ ಎಂದು ಪರಿಗಣಿಸಿದ ಪೂರ್ತಿ ಭೂಮಿಯನ್ನು ಒಂದೇ ಪಾದದಲ್ಲಿ ಅಳೆದವನಿಗೆ, ನಿನ್ನನ್ನು ಮಾತ್ರವೇ ಶರಣು ಹೊಂದುವೆ ಎಂದು, ಧೂಪವನ್ನು ಹಚ್ಚಿ, ಹೂಮಳೆಯನ್ನು ಸುರಿಸಿ, ತಮ್ಮ ಸೇವಕತ್ವಕ್ಕೆ ಸರಿಸಾಟಿಯಾದ ಶೈಲಿಯಲ್ಲಿ ಅಂಜಲಿ(ತಮ್ಮ ಎರಡೂ ಕೈಗಳನ್ನು ಜೋಡಿಸಿ) ಯನ್ನು ಅರ್ಪಿಸಿ ಶರಣಾದ ಭಕ್ತರು ಶ್ರೀವೈಕುಂಠಕ್ಕೆ ಏರುವಾಗ “ಇದೇನಾ ಶ್ರೀವೈಕುಂಠಕ್ಕೆ ದಾರಿ?” ಎಂದು ಕೇಳಿದಾಗ , ಆ ಮುನಿಗಳು ಮೇಲಿನ ಲೋಕದ ನಿವಾಸಿಗಳು ಕಾತುರದಿಂದ “ಹೌದು , ದಯಮಾಡಿಸಿ” ಎಂದು ಅವರ ದಾರಿಯ ಎರಡೂ ಪಕ್ಕದಲ್ಲಿ ನಿಂತು ಸ್ವಾಗತಿಸುತ್ತಾರೆ.

ನಾಲ್ಕನೆಯ ಪಾಸುರಮ್:
ಆಳ್ವಾರರು ಮೇಲಿನ ಲೋಕದ ದೇವತೆಗಳು ಹೇಗೆ ಶ್ರೀವೈಷ್ಣವರು ವಿಶ್ರಮಿಸಲು ನಂದನ ವನಗಳನ್ನು ಎಲ್ಲೆಡೆಯಲ್ಲೂ ನಿರ್ಮಿಸಿರುತ್ತಾರೆ ಮತ್ತು ಹೇಗೆ ಶ್ರೀವೈಷ್ಣವರನ್ನು ಹೊಗಳಲು ಆನಂದಕರವಾದ ಶಬ್ದಗಳನ್ನು ಸಂಗೀತ ವಾದ್ಯಗಳಿಂದ ಮಾಡುತ್ತಾರೆ ಎಂದು ಕರುಣೆಯಿಂದ ವಿವರಿಸಿದ್ದಾರೆ.
ಎದಿರೆದಿರ್ ಇಮೈಯವರ್ ಇರುಪ್ಪಿಡಮ್ ವಗುತ್ತನರ್,
ಕದಿರವರ್ ಅವರವರ್ ಕೈ ನಿರೈ ಕಾಟ್ಟಿನರ್,
ಅದಿರ್ ಕುರಲ್ ಮುರಶಙ್ಗಳ್ ಅಲೈಕಡಲ್ ಮುೞಕ್ಕೊತ್ತ,
ಮದುವಿರಿ ತುೞಾಯ್ ಮುಡಿ ಮಾದವನ್ ತಮರ್ಕ್ಕೇ ॥

ತಮ್ಮ ಕಣ್ಣು ಮಿಟುಕಿಸದ ದೇವತೆಗಳು ತನ್ನ ಕಿರೀಟದಲ್ಲಿ ಜೇನನ್ನು ಸೂಸುತ್ತಿರುವ ತುಳಸಿಯನ್ನು ಹೊಂದಿರುವ ಶ್ರಿಯಃ ಪತಿಯ ಶ್ರೀಮನ್ನಾರಾಯಣರ ಶರಣಾಗತರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿರುತ್ತಾರೆ. ಅಲ್ಲಿ ಹನ್ನೆರಡು ಆದಿತ್ಯರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ತಮ್ಮ ಕಿರಣಗಳನ್ನು ಅಲಂಕಾರಿಕ ಬಾಣಗಳಂತೆ ನೀಡುತ್ತಿದ್ದರು. ಢೋಲುಗಳ ಗಲಭೆಯ ಸದ್ದು , ಸಮುದ್ರದ ಅಲೆಗಳ ಶಬ್ದಕ್ಕೆ ಅನುಸಾರವಾಗಿತ್ತು.

ಐದನೆಯ ಪಾಸುರಮ್:
ಆಳ್ವಾರರು ಶ್ರೀವೈಷ್ಣವರಿಗೆ ವರುಣ, ಇಂದ್ರ ಮುಂತಾದವರು ನೀಡಿದ ಗೌರವ ಮತ್ತು ಅವರು ತಮ್ಮ ಕರ್ತವ್ಯವಾದ ಆಧಿವಾಹಿಕ (ಆತ್ಮಗಳಿಗೆ ಪರಮಪದಕ್ಕೆ ಹೋಗುವ ದಾರಿಯನ್ನು ಮಾರ್ಗದರ್ಶಿಸುವುದು) ವನ್ನು ನಿರ್ವಹಿಸುವುದನ್ನು ಕರುಣೆಯಿಂದ ವಿವರಿಸಿದ್ದಾರೆ.
ಮಾದವನ್ ತಮರ್ ಎನ್‍ಱು ವಾಶಲಿಲ್ ವಾನವರ್,
ಪೋದುಮಿನ್ ಎಮದಿಡಮ್ ಪುಗುದುಗ ಎನ್‍ಱಲುಮ್,
ಕೀದಙ್ಗಳ್ ಪಾಡಿನರ್ ಕಿನ್ನರರ್ ಗೆರುಡರ್ಗಳ್,
ವೇದನಲ್ ವಾಯವರ್ ವೇಳ್ವಿಯುಳ್ ಮಡುತ್ತೇ ॥

ಆಧಿವಾಹಿಕ ದೈವಗಳಾದ ವರುಣ, ಇಂದ್ರ, ಪ್ರಜಾಪತಿ ಮುಂತಾದವರು ತಮ್ಮ ನಿವಾಸಗಳ ಮುಂಭಾಗಗಳಲ್ಲಿ ನಿಂತು, ಶ್ರಿಯಃ ಪತಿಯ ಸೇವಕರಿಗೆ ಮರ್ಯಾದೆಯನ್ನು ತೋರಿಸಿ, ಹೇಳುತ್ತಾರೆ, “ದಯವಿಟ್ಟು ಈ ದಾರಿಯಲ್ಲಿ ಬನ್ನಿರಿ. ನಮ್ಮ ಆಡಳಿತದಲ್ಲಿರುವ ಪ್ರದೇಶಗಳಿಗೆ ಪ್ರವೇಶಿಸಿರಿ” ಈ ಮಾತುಗಳನ್ನು ಹೇಳಿ, ಅವರಿಗೆ ಉಡುಗೊರೆಗಳ ಜೊತೆಗೆ ಸನ್ಮಾನವನ್ನು ಮಾಡುತ್ತಾರೆ. ವೇದಗಳ ಸತತವಾದ ಉಚ್ಛಾರಣೆಯಿಂದ ಬಾಯಿ / ಮಾತುಗಳು ವಿಶಿಷ್ಟವಾಗಿರುವವರು ತಮ್ಮ ಯಾಗ ಮುಂತಾದ ಕರ್ಮಗಳ ಫಲವನ್ನು ಆ ಶ್ರೀವೈಷ್ಣವರ ಪಾದಕಮಲಗಳಿಗೆ ಗೌರವದಿಂದ ಅರ್ಪಿಸುತ್ತಾ ಯೋಚಿಸುತ್ತಾರೆ, “ ನಮ್ಮ ಪಠಣವು ಈಗ ಪ್ರಯೋಜನಕ್ಕೆ ಬಂದಿವೆ.” ಕಿನ್ನರರು ಮತ್ತು ಗರುಡರು ಮಂಗಳಕರವಾದ ಹಾಡುಗಳನ್ನು ಹೇಳುತ್ತಾರೆ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ದೇವಸ್ತ್ರೀಗಳು ( ಸ್ವರ್ಗ ಲೋಕದ ಹೆಂಗಸರು) ಆನಂದದಿಂದ ಶ್ರೀವೈಷ್ಣವರನ್ನು ಬರಮಾಡಿಕೊಂಡು ಅವರನ್ನು ಆಶೀರ್ವದಿಸುತ್ತಾರೆ.”
ವೇಳ್ವಿಯುಳ್ ಮಡತ್ತಲುಮ್ ವಿರೈಕಮೞ್ ನಱುಮ್ ಪುಗೈ,
ಕಾಲಙ್ಗಳ್ ವಲಮ್ಬುರಿ ಕಲನ್ದೆಙ್ಗುಮ್ ಇಶೈತ್ತನರ್,
ಆಣ್ಮಿನ್‍ಗಳ್ ವಾನಗಮ್ ಆೞಿಯಾನ್ ತಮರೆನ್‍ಱು,
ವಾಳ್ ಒಣ್ ಕಣ್ ಮಡನ್ದೈಯರ್ ವಾೞ್‍ತ್ತಿನರ್ ಮಗಿೞ್‍ನ್ದೇ ॥

ವೈದಿಕರು ತಮ್ಮ ಎಲ್ಲಾ ಧರ್ಮಗಳನ್ನು ಅರ್ಪಿಸಿದಾಗ , ಪರಿಮಳಭರಿತವಾದ ಗಂಧವು ಎಲ್ಲಾ ಕಡೆಯೂ ಹರಡಿಕೊಂಡು, ಗಾಳಿಯ ವಾದ್ಯಗಳು ಮತ್ತು ಬಲಬದಿಯಲ್ಲಿ ಸುರುಳಿಕೊಂಡಿರುವ ಶಂಖಗಳ ನಾದಗಳು ಹೊಮ್ಮಿದವು. ಅತಿಸುಂದರವಾದ , ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿರುವ ಸ್ವರ್ಗದ ಸ್ತ್ರೀಯರು ಆನಂದದಿಂದ ಅವರನ್ನು ಆಶೀರ್ವದಿಸಿ ಹೇಳುತ್ತಾರೆ, “ತಿರುವಾೞಿಯನ್ನು ಹೊಂದಿರುವ ಸರ್ವೇಶ್ವರನಾದ ಶೀಮನ್ನಾರಾಯಣರ ಸೇವಕರಾದ ನೀವುಗಳು ಈ ಸ್ವರ್ಗಲೋಕ ಮುಂತಾದ ಅರಮನೆಯನ್ನು ಆಳಲು ಸೂಕ್ತವಾದವರು.” ಎಂದು.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಮಾರುತಗಳು ಮತ್ತು ವಸುಗಳು ತಮ್ಮ ಹದ್ದನ್ನು (ಗಡಿಯನ್ನು) ಮೀರಿ, ಎಷ್ಟು ದೂರವಾಗುತ್ತದೆಯೋ ಅಷ್ಟು ದೂರ ಬಂದು ಶ್ರೀವೈಷ್ಣವರನ್ನು ಹೊಗಳುತ್ತಾರೆ.”
ಮಡನ್ದೈಯರ್ ವಾೞ್‍ತ್ತಲುಮ್ ಮರುದರುಮ್ ವಶುಕ್ಕಳುಮ್,
ತೊಡರ್ನ್ದೆಙ್ಗುಮ್ ತೋತ್ತಿರಮ್ ಶೊಲ್ಲಿನರ್, ತೊಡುಕಡಲ್
ಕಿಡನ್ದ ಎಮ್ ಕೇಶವನ್ ಕಿಳರ್ ಒಳಿ ಮಣಿಮುಡಿ,
ಕುಡನ್ದೈ ಅಮ್ ಕೋವಲನ್ ಕುಡಿಯಡಿಯಾರ್ಕ್ಕೇ ॥

ಎಂಪೆರುಮಾನರು ಕರುಣೆಯಿಂದ ಆಳವಾದ ಸಮುದ್ರದಲ್ಲಿ ವಿಶ್ರಮಿಸುತ್ತಿದ್ದಾರೆ. ಕೇಶವನಾಗಿ ನನ್ನಂತಹ ಜನರ, ಬ್ರಹ್ಮನನ್ನು ಮೊದಲುಗೊಂಡು ಎಲ್ಲ ದೇವತೆಗಳ , ನಿತ್ಯಸೂರಿಗಳ ಎಲ್ಲರ ಸೃಷ್ಟಿಗೆ ಕಾರಣನಾಗಿದ್ದಾನೆ. ಉನ್ನತವಾಗಿರುವ ಮತ್ತು ಪ್ರಜ್ವಲಿಸುತ್ತಿರುವ ಅನೇಕ ರತ್ನಗಳನ್ನು ಹೊಂದಿರುವ ದಿವ್ಯ ಕಿರೀಟವನ್ನು ಧರಿಸಿ ಕೃಷ್ಣನಾಗಿ ತಿರುಕ್ಕುಡಂದೈಯಲ್ಲಿ ಕರುಣೆಯಿಂದಲಿ ವಿಶ್ರಮಿಸುತ್ತಿದ್ದಾನೆ. ಅಂತಹ ಎಂಪೆರುಮಾನರ ಸೇವೆಯನ್ನು ಪರಂಪರೆಯಾಗಿ ಮಾಡುವ ಸೇವಕರನ್ನು ಮಾರುತರು ಮತ್ತು ಅಷ್ಟ ವಸುಗಳ ಮಡದಿಯರು ಪ್ರಶಂಸಿಸುತ್ತಿದ್ದಾರೆ. ಅವರು ಹೊಗಳುತ್ತಿದ್ದಾಗಲೇ, ಮಾರುತರು ಮತ್ತು ಅಷ್ಟ ವಸುಗಳು ಶ್ರೀವೈಷ್ಣವರನ್ನು ಎಲ್ಲಾ ಕಡೆಗೂ ಹಿಂಬಾಲಿಸಿ ಬಂದು ಅವರನ್ನು ಹೊಗಳುತ್ತಿದ್ದಾರೆ. ತೊಡುದಲ್ – ತೋಂಡುದಲ್ – ಆಳವನ್ನು ಸೂಚಿಸುತ್ತದೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಗೆ ನಿತ್ಯಸೂರಿಗಳು ತಮ್ಮ ಎಲ್ಲೆಯಾದ ಪರಮಪದವನ್ನು ಬಿಟ್ಟು, ಲೌಕಿಕವಾದ ವಾಸ್ತವಕ್ಕೆ ಬಂದು ಶ್ರೀವೈಷ್ಣವರನ್ನು ಬರಮಾಡಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.
ಕುಡಿಯಡಿಯಾರ್ ಇವರ್ ಗೋವಿನ್ದನ್ ತನಕ್ಕೆನ್‍ಱು,
ಮುಡಿಯುಡೈ ವಾನವರ್ ಮುಱೈಮುಱೈ ಎದಿರ್ ಕೊಳ್ಳ,
ಕೊಡಿಯಣಿ ನೆಡುಮದಿಳ್ ಕೋಪುರಮ್ ಕುಱುಗಿನರ್,
ವಡಿವುಡೈ ಮಾದವನ್ ವೈಕುನ್ದಮ್ ಪುಗವೇ ॥

ಈಶ್ವರನ ಹಾಗೆಯೇ ರೂಪವನ್ನು ಹೊಂದಿರುವ , ಕಿರೀಟ ಮತ್ತಿತರ ಆಭರಣಗಳನ್ನು ಧರಿಸಿರುವ ನಿತ್ಯಸೂರಿಗಳು ಮುಂದೆ ಬಂದು ಭಕ್ತರನ್ನು ಅವರಿಗಾಗಿಯೇ ಜನ್ಮವನ್ನು ಎತ್ತಿದ ಕೃಷ್ಣನದೇ ಪಂಗಡದವರೆಂದು ಪರಿಗಣಿಸಿ, ಅವರನ್ನು ಸ್ವಾಗತಿಸಿದರು. ಶ್ರೀವೈಷ್ಣವರು ಧ್ವಜಗಳಿಂದ ಅಲಂಕೃತಗೊಂಡ , ಎತ್ತರವಾದ ಕೋಟೆಯನ್ನು ಹೊಂದಿರುವ , ಸರ್ವೇಶ್ವರನಿಗೆ ಸೇರಿದ ಶ್ರೀವೈಕುಂಠದ ಮಹಾದ್ವಾರದ ಬಳಿಗೆ ಆಗಮಿಸಿದರು. ಸರ್ವೇಶ್ವರನು ಅಲಂಕೃತಗೊಂಡು ಶ್ರೀವೈಷ್ಣವರನ್ನು ಒಳಗೆ ಬಿಡಲು ಸಿದ್ಧವಾಗಿದ್ದರು.

ಒಂಬತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಶ್ರೀವೈಕುಂಠದ ದ್ವಾರದ ಬಳಿಗೆ ಬಂದು, ಹಿರಿಯರಿಂದ ಒಪ್ಪಿಗೆ ಪಡೆದುಕೊಂಡ ಮೇಲೆ, ಅಲ್ಲಿದ್ದ ನಿತ್ಯಸೂರಿಗಳು ಆಶ್ಚರ್ಯ ಪಡುತ್ತಾ ಯೋಚಿಸುತ್ತಾರೆ, “ಸಂಸಾರಿಗಳು ( ಮೊದಲು ಸಂಸಾರದಲ್ಲಿದ್ದವರು ) ಶ್ರೀವೈಕುಂಠಕ್ಕೆ ಬರುವುದು ಎಂತಹ ಅದೃಷ್ಟ”.
ವೈಕುನ್ದಮ್ ಪುಗುದಲುಮ್ ವಾಶಲಿಲ್ ವಾನವರ್,
ವೈಕುನ್ದನ್ ತಮರ್ ಎಮರ್ ಎಮದಿಡಮ್ ಪುಗುದೆನ್‍ಱು,
ವೈಕುನ್ದತ್ತಮರರುಮ್ ಮುನಿವರುಮ್ ವಿಯನ್ದನರ್ ,
ವೈಕುನ್ದಮ್ ಪುಗುವದು ಮಣ್ಣವರ್ ವಿದಿಯೇ ॥

ಶ್ರೀವೈಷ್ಣವರು ಶ್ರೀವೈಕುಂಠಕ್ಕೆ ಆಗಮಿಸಿದಾಗ , ದಿವ್ಯ ದ್ವಾರಪಾಲಕರು ಯೋಚಿಸುತ್ತಾರೆ, “ ಶ್ರೀವೈಕುಂಠವನ್ನು ಪಡೆದ ಈ ಶ್ರೀವೈಷ್ಣವರು ನಮಗೆ ಬಹಳ ಬೇಕಾದವರು.” ಎಂದು ಅವರು ನಮ್ಮ ಪ್ರದೇಶವನ್ನು ಪ್ರವೇಶಿಸಬೇಕು ಎಂದು ಪರಿಗಣಿಸುತ್ತಾರೆ. ಅವರು ಹರ್ಶಿತರಾಗುತ್ತಾರೆ. ಅಮರರು (ಕೈಂಕರ್‍ಯದಲ್ಲಿ ತೊಡಗಿರುವವರು) ಮತ್ತು ಮುನಿವರು (ಭಗವಂತನ ಕಲ್ಯಾಣ ಗುಣವನ್ನು ಧ್ಯಾನಿಸುವವರು) ಇದನ್ನು ಆಲೋಚಿಸಿ ಸಂತೋಷಗೊಳ್ಳುತ್ತಾರೆ “ಭೂಮಿಯಲ್ಲಿ ಲೌಕಿಕ ಆನಂದದಲ್ಲಿ ಮುಳುಗಿದ್ದ ಈ ಶ್ರೀವೈಷ್ಣವರಿಗೆ , ಪರಮಪದವನ್ನು ಪ್ರವೇಶಿಸಲು ಎಂತಹ ಅದೃಷ್ಟ” ಎಂದು.

ಹತ್ತನೆಯ ಪಾಸುರಮ್:
ಆಳ್ವಾರರು ನಿತ್ಯಸೂರಿಗಳು ಹೇಗೆ ಸಂಸಾರದಿಂದ ಶ್ರೀವೈಕುಂಠಕ್ಕೆ ಪ್ರಯಾಣಿಸಿದ ಶ್ರೀವೈಷ್ಣವರನ್ನು ಪ್ರಶಂಸಿಸುತ್ತಾರೆ ಎಂದು ಕರುಣೆಯಿಂದ ವಿವರಿಸುತ್ತಾರೆ.
ವಿದಿವಗೈ ಪುಗುನ್ದನರ್ ಎನ್‍ಱು ನಲ್ ವೇದಿಯರ್,
ಪದಿಯಿನಲ್ ಪಾಙ್ಗಿನಿಲ್ ಪಾದಙ್ಗಳ್ ಕೞುವಿನರ್ ,
ನಿದಿಯುಮ್ ನಲ್ ಶುಣ್ಣಮುಮ್ ನಿಱೈಕುಡವಿಳಕ್ಕಮುಮ್,
ಮದಿಮುಗ ಮಡನ್ದೈಯರ್ ಏನ್ದಿನರ್ ವನ್ದೇ ॥

ಶ್ರೀವೈಷ್ಣವರು ಈಶ್ವರನ ಆಜ್ಞೆಯ ಮೇರೆಗೆ ನಮ್ಮ ಅದೃಷ್ಟದ ರೂಪದಲ್ಲಿ ಪರಮಪದಕ್ಕೆ ಆಗಮಿಸಿ, ಪ್ರವೇಶಿಸಿದರು. ಎಂದು ಅತ್ಯಂತ ಆನಂದಭರಿತವಾದ ವೇದಗಳಲ್ಲಿ ನಿಪುಣರಾದ ಮತ್ತು ವಿಶಿಷ್ಟವಾದ ಗುಣವುಳ್ಳ ನಿತ್ಯಸೂರಿಗಳು ಅಂತಹ ಶ್ರೀವೈಷ್ಣವರ ಪಾದಗಳನ್ನು ಮರ್ಯಾದೆಯ ರೂಪದಲ್ಲಿ ತಮ್ಮ ತಮ್ಮ ವಾಸಸ್ಥಾನಗಳಲ್ಲಿ ತೊಳೆದರು. ತಮ್ಮ ಸೇವಕತ್ವವನ್ನು ಪ್ರತಿಬಿಂಬಿಸುವಂತೆ ವಿನಮ್ರವಾಗಿರುವ , ಪೂರ್ಣ ಚಂದ್ರನಂತೆ ಹೊಳೆಯುತ್ತಿರುವ ಮುಖವನ್ನು ಹೊಂದಿರುವ ದಿವ್ಯ ಕನ್ಯೆಯರು ಮುಂದೆ ಬಂದು ಶ್ರೀವೈಷ್ಣವರನ್ನು ಬರಮಾಡಿಕೊಂಡರು. ಸ್ತೋತ್ರರತ್ನಮ್ ನಲ್ಲಿ ಹೇಳಿರುವ ಹಾಗೆ “ಧನಮ್ ಮದೀಯಮ್” ಎಂದು ಅವರು ಭಕ್ತರಿಗೆ ಐಶ್ವರ್‍ಯವಾಗಿರುವ ಭಗವಂತನ ಪಾದುಕೆಗಳನ್ನು , ವಿಶಿಷ್ಟವಾದ ತಿರುಚ್ಚೂರ್ಣಮ್, ಪೂರ್ಣ ಕುಂಭಮ್ ಮತ್ತು ಮಂಗಳ ದೀಪಗಳನ್ನು ಹಿಡಿದಿದ್ದರು.

ಹನ್ನೊಂದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಈ ಪದಿಗೆಯಲ್ಲಿ ಪರಿಣಿತರಾದವರನ್ನು ಶ್ರೀವೈಕುಂಠದಲ್ಲಿರುವ ಮುನಿವರಿಗೆ (ಎಂಪೆರುಮಾನರನ್ನೇ ಧ್ಯಾನಿಸುವ ಪರಮಪದದಲ್ಲಿರುವ ನಿತ್ಯಸೂರಿಗಳಿಗೆ) ಹೋಲಿಸಲಾಗಿದೆ.
ವನ್ದವರ್ ಎದಿರ್ ಕೊಳ್ಳ ಮಾಮಣಿಮಣ್ಡಬತ್ತು,
ಅನ್ದಮಿಲ್ ಪೇರಿನ್ಬತ್ತು ಅಡಿಯರೋಡಿರುನ್ದಮೈ,
ಕೊನ್ದಲರ್ ಪೊೞಿಲ್ ಕುರುಗೂರ್ ಚ್ಚಡಗೋಪನ್, ಶೊಲ್
ಶೆನ್ದಙ್ಗಳ್ ಆಯಿರತ್ತು ಇವೈ ವಲ್ಲಾರ್ ಮುನಿವರೇ ॥

ಆಳ್ವಾರ್ ತಿರುನಗರಿಯ ನಿಯಂತ್ರಕರಾಗಿರುವ ನಮ್ಮಾಳ್ವಾರರು , ತಿರುಮಾಮಣಿ ಮಂಟಪದಲ್ಲಿ ಎಂಪೆರುಮಾನರೇ ಎದ್ದು ಬಂದು ಶ್ರೀವೈಷ್ಣವರನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂದು ಈ ಪದಿಗೆಯಲ್ಲಿ ಕರುಣೆಯಿಂದ ವಿವರಿಸಿದ್ದಾರೆ. ಶ್ರೀವೈಷ್ಣವರು ಅಪರಿಮಿತವಾದ ಮತ್ತು ನಿರಂತರವಾದ ಪರಮಾನಂದವನ್ನು ಹೊಂದಿರುವ ಇತರ ಸೂರಿಗಳ ಜೊತೆಗೆ ಒಂದಾಗಿ ಸೇರಿದ್ದಾರೆ. ಈ ಹತ್ತು ಪಾಸುರಗಳನ್ನು ಮತ್ತಿತರ ಸಾವಿರ ಪಾಸುರಗಳಲ್ಲಿ ಯಾರು ನಿಪುಣರಾಗುತ್ತಾರೋ, ಅವರು ಭಗವಂತನ ಗುಣ ಮಹಾತ್ಮೆಯ ಬಗ್ಗೆ ಯಾವಾಗಲೂ ಧ್ಯಾನಿಸುವ ಮುನಿವರಂತೆ ಆಗುತ್ತಾರೆ. ‘ವಂದವರ್ ಎದಿರ್ ಕೊಳ್ಳ ‘ ಎಂದರೆ ಮುಖ್ಯ ಸೇವಕರಾದ ವಿಶ್ವಕ್ಸೇನರ್ ಮೊದಲಾದವರು ಎಂದು ಅರ್ಥ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : http://divyaprabandham.koyil.org/index.php/2020/06/thiruvaimozhi-10-9-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


ತಿರುವಾಯ್ಮೊೞಿ-ಸರಳ ವಿವರಣೆ – 10.8 – ತಿರುಮಾಲಿರುಂಚೋಲೈ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.7-ಶೆಞ್ಜೊಲ್

ಎಂಪೆರುಮಾನರು ಕರುಣೆಯಿಂದ ತಮ್ಮ ಗರುಡವಾಹನದಲ್ಲಿ ಆಳ್ವಾರರನ್ನು ಪರಮಪದಕ್ಕೆ ಕರೆದೊಯ್ಯಲು ಆಗಮಿಸಿದರು. ಆಳ್ವಾರರು ಎಂಪೆರುಮಾನರು ಮೊದಲಿನಿಂದ ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸುತ್ತಾರೆ, “ನಾನು ಏನೂ ಅವನಿಗಾಗಿ ಮಾಡಿಲ್ಲದಿದ್ದದರೂ , ಹೇಗೆ ಎಂಪೆರುಮಾನರು ಅತಿ ಕರುಣೆಯಿಂದ ನನಗೆ ಫಲವನ್ನು ಕೊಡುತ್ತಿದ್ದಾರೆ?” ಮತ್ತು ಎಂಪೆರುಮಾನರಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ. ಎಂಪೆರುಮಾನರು ಉತ್ತರವನ್ನು ಕೊಡಲು ಅಸಫಲರಾಗುತ್ತಾರೆ. ಆಳ್ವಾರರು ಎಂಪೆರುಮಾನರ ಸಹಜವಾದ ಕಾರಣವಿಲ್ಲದ ಕರುಣೆಯನ್ನು ಮತ್ತು ಅವರ ಕೃಪಾ ಕಟಾಕ್ಷವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಯೋಚಿಸುವಾಗ ಆನಂದಭರಿತರಾಗುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಆಕಸ್ಮಿಕವಾಗಿ ನಾನು ‘ತಿರುಮಾಲಿರುಂಚೋಲೈ ಮಲೈ’ ಎಂದು ಹೇಳಿದೆ. ಅದನ್ನು ಹೇಳಿದ ಕೂಡಲೇ ಎಂಪೆರುಮಾನರು ಏನನ್ನೂ ಅಪೇಕ್ಷಿಸದೇ , ಪಿರಾಟ್ಟಿಯೊಂದಿಗೆ ಆಗಮಿಸಿ, ಕರುಣೆಯಿಂದ ನನ್ನಲ್ಲಿ ಸೇರಿಕೊಂಡರು.”
ತಿರುಮಾಲಿರುಞ್ಜೋಲೈ ಮಲೈಯೆನ್‌ಱೇನೆನ್ನ,
ತಿರುಮಾಲ್ ವನ್ದು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ಕುರು ಮಾಮಣಿ ಉನ್ದು ಪುನಲ್ ಪೊನ್ನಿತ್ತೆನ್ಬಾಲ್,
ತಿರುಮಾಲ್ ಶೆನ್‍ಱು ಶೇರ್ವಿಡಮ್ ತೆನ್ ತಿರುಪ್ಪೇರೇ ॥

ನಾನು ತಿರುಮಾಲಿರುಂಚೋಲೈ ಎಂದು ಹೇಳಿದ ಕೂಡಲೇ, ಎಂಪೆರುಮಾನರು , ಯಾರು ಶ್ರೀಯಃಪತಿಯಾಗಿರುವರೋ ಮತ್ತು ಪರಿಪೂರ್ಣವಾಗಿರುವರೋ, ಅವರು ನನ್ನ ಹೃದಯದಲ್ಲಿ ಆಗಮಿಸಿ, ನನ್ನನ್ನು ಪೂರ್ತಿಯಾಗಿ ಆವರಿಸಿಕೊಂಡರು. ‘ಶ್ರಿಯಾಸಾರ್ದಮ್ ಜಗತ್ಪತಿಃ’ ನಲ್ಲಿ ಹೇಳಿರುವ ಹಾಗೆ ದಿವ್ಯ ಸ್ಥಳದಲ್ಲಿ (ಪರಮಪದದಲ್ಲಿ) ಪಿರಾಟ್ಟಿಯೊಂದಿಗೆ ನೆಲೆಸಿರುವ ಎಂಪೆರುಮಾನರು , ಸುಂದರವಾದ , ಅಮೂಲ್ಯವಾದ ರತ್ನಗಳಿರುವ ಪೊನ್ನಿ ನದಿಯ ದಕ್ಷಿಣ ತೀರದಲ್ಲಿರುವ , ತಿರುಪ್ಪೇರ್ ಗೆ ಬಂದು ಕರುಣೆಯಿಂದ ಅಲ್ಲಿ ನೆಲೆಸಿದರು.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅವನು ಇದಕ್ಕೆ ಮೊದಲು ಸರ್ವೇಶ್ವರನಾದರೂ, ನನ್ನೊಂದಿಗೆ ಸಮಾಗಮವಾಗಿಲ್ಲದ ಕಾರಣ ಅವನಿಗೆ ಕೊರತೆಯಿತ್ತು. ಏನೂ ಕಾರಣವಿಲ್ಲದೆ (ಅಪೇಕ್ಷೆಯಿಲ್ಲದೆ) ನನ್ನ ಹೃದಯದಲ್ಲಿ ಬಂದು ನಿಂತಾಗ, ಅವನು ಪರಿಪೂರ್ಣನಾದನು.”
ಪೇರೇ ಉಱೈಗಿನ್‍ಱ ಪಿರಾನ್ ಇನ್‍ಱುವನ್ದು,
ಪೇರೇನೆನ್‍ಱು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ಕಾಱೇೞ್ ಕಡಲೇೞ್ ಮಲೈಯೇೞ್ ಉಲಗುಣ್ಡುಮ್,
ಆರಾವಯಿಱ್ಱಾನೈ ಅಡಙ್ಗ ಪಿಡಿತ್ತೇನೇ ॥

ತಿರುಪ್ಪೇರ್‌ನಲ್ಲಿ ಶಾಶ್ವತವಾಗಿ ನೆಲೆಸಿರುವ ಸರ್ವೇಶ್ವರನು ಈದಿನ ಬಂದು ಹೇಳುತ್ತಾನೆ, “ನಾನು ಇಲ್ಲಿಂದ ಹೋಗುವುದಿಲ್ಲ” ಮತ್ತು ನನ್ನ ಹೃದಯದಲ್ಲಿ ಬಂದು ಅದನ್ನು ಪರಿಪೂರ್ಣಗೊಳಿಸುತ್ತಾನೆ. ಎಲ್ಲಾ ಲೋಕಗಳನ್ನೂ ನುಂಗಿದ ಮೇಲೂ , ಏಳು ರೀತಿಯ ಮೇಘಗಳನ್ನು , ಏಳು ರೀತಿಯ ಸಮುದ್ರಗಳನ್ನು, ಏಳು ರೀತಿಯ ಪ್ರತಿಧ್ವನಿಸುವ ಪರ್ವತಗಳನ್ನು ಹೊಂದಿದ ಮೇಲೂ, ಅವನು ಅಪೂರ್ಣವಾದ ಹೊಟ್ಟೆಯೊಂದಿಗೆ ಇದ್ದನು. ನನ್ನಲ್ಲಿ ಆಗಮಿಸಿದ ಅವನನ್ನು ನಾನು ಆನಂದಿಸಿದ ಮೇಲೆ ಎಲ್ಲಾ ರೀತಿಯಲ್ಲಿಯೂ ಪರಿಪೂರ್ಣನಾದನು.

ಮೂರನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ‘ನಿರ್ಹೇತುಕ ಸಂಶ್ಲೇಷಮ್’ (ಕಾರಣವಿಲ್ಲದೇ ಒಂದಾಗುವಿಕೆ) ಯನ್ನು ಧ್ಯಾನಿಸುತ್ತಾರೆ ಮತ್ತು ಹೇಳುತ್ತಾರೆ ,” ಅಂತಹ ಎಂಪೆರುಮಾನರ ದಿವ್ಯ ಪಾದಗಳು ನನಗೆ ಸುಲಭವಾಗಿ ಸಿಕ್ಕಿತು”
ಪಿಡಿತ್ತೇನ್ ಪಿಱವಿ ಕೆಡುತ್ತೇನ್ ಪಿಣಿ ಶಾರೇನ್,
ಮಡಿತ್ತೇನ್ ಮನೈ ವಾೞ್‍ಕ್ಕೈಯುಳ್ ನಿಱ್ಪದೋರ್ ಮಾಯೈಯೈ,
ಕೊಡಿ ಕ್ಕೋಪುರ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ಅಡಿ ಚ್ಚೇರ್ವದು ಎನಕ್ಕೆಳಿದಾಯಿನವಾಱೇ ॥

ನಾನು ಸುಲಭವಾಗಿ ದೊರಕುವ ಎಂಪೆರುಮಾನರ ದಿವ್ಯ ಪಾದಗಳನ್ನು ಸುಲಭವಾಗಿ ದೊರಕುವಂತೆ ಮಾಡಿದ ಎಂಪೆರುಮಾನರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡ , ಎತ್ತರವಾದ ಬಂಗಲೆಗಳನ್ನು ಮತ್ತು ಧ್ವಜವನ್ನು ಹೊತ್ತಿರುವ ಕಂಭಗಳನ್ನು ಹೊಂದಿರುವ ತಿರುಪ್ಪೇರ್ ನಗರವನ್ನು ನಾನು ಸಮೀಪಿಸಿದೆ. ನನ್ನ ಹುಟ್ಟಿನ ಜೊತೆ ನನಗಿರುವ ಸಂಬಂಧವನ್ನು ತೊರೆದು ಹಾಕಲಾಯಿತು. ನನಗೆ ಇನ್ನು ಯಾವ ರೀತಿಯ ದುಃಖಗಳೂ ಇರುವುದಿಲ್ಲ. ಸಂಸಾರದಲ್ಲಿನ ಜೊತೆ ನನಗಿರುವ ಅಜ್ಞಾನವನ್ನೂ ನಾನು ಬಿಟ್ಟಾಯಿತು.

ನಾಲ್ಕನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ಸ್ವಭಾವವಾದ ತಿರುನಾಡನ್ನೇ (ಪರಮಪದವನ್ನೇ) ಅನುಗ್ರಹಿಸುವ ಅವರ ಕರುಣೆಯನ್ನು ಯೋಚಿಸುತ್ತಾರೆ ಮತ್ತು “ಎಂತಹ ಸುಲಭವಾಗಿದೆ” ಎಂದು ಆಶ್ಚರ್‍ಯ ಪಡುತ್ತಾರೆ. ಮತ್ತು ಹೇಳುತ್ತಾರೆ, “ನಾನು ನನ್ನ ಎಲ್ಲಾ ಇಂದ್ರಿಯಗಳ ಜೊತೆಗೆ ಇರುವ ಆನಂದಿಸುವ ಮನಸ್ಸಿನಿಂದ ಸಂತೋಷ ಪಡುತ್ತಿದ್ದೇನೆ.”
ಎಳಿದಾಯಿನ ವಾಱೆನ್‍ಱು ಎನ್ ಕಣ್‍ಗಳ್ ಕಳಿಪ್ಪ,
ಕಳಿದಾಗಿಯ ಶಿನ್ದಯಿನಾಯ್ ಕಳಿಕ್ಕಿನ್‍ಱೇನ್,
ಕಿಳಿತಾವಿಯ ಶೋಲೈಗಳ್ ಶೂೞ್ ತಿರುಪ್ಪೇರಾನ್,
ತೆಳಿದಾಗಿಯ ಶೇಣ್ ವಿಶುಮ್ಬು ತರುವಾನೇ ॥

ಆನಂದಮಯವಾದ ಹೃದಯವನ್ನು ಹೊಂದಿರುವವನ ಜೊತೆಗೆ ಇದ್ದುಕೊಂಡು, ನನ್ನ ದಾಹಭರಿತವಾದ ಕಣ್ಣುಗಳು ಹೇಳುತ್ತಿವೆ “ ಕಷ್ಟವೆಂದು ತಿಳಿದ ಗುರಿಯು ಸುಲಭವಾಗಿ ದೊರಕಿದೆ”, ಆನಂದವನ್ನು ಹೊಂದಲು ನಾನು ಉತ್ಸುಕನಾಗಿದ್ದೇನೆ. ಎಂಪೆರುಮಾನರು ಸುಲಭವಾಗಿ ಸನ್ನಿಹಿತರಾಗಬಹುದಾದ ತಿರುಪ್ಪೇರ್ ನಲ್ಲಿ ಉಪಸ್ಥಿತರಾಗಿದ್ದಾರೆ. ಇಲ್ಲಿ ದಟ್ಟವಾದ ತೋಟಗಳಿಂದ ಆವರಿಸಲ್ಪಟ್ಟಿದೆ. ಇಲ್ಲಿ ಗಿಣಿಗಳು ಸಂತೋಷದಿಂದ ಜಿಗಿಯುತ್ತಿವೆ. ಎಂಪೆರುಮಾನರು, ಅತೀ ಎತ್ತರದಲ್ಲಿರುವ , ಅದರ ಒಳ್ಳೆಯದಾದ ಉನ್ನತವಾದ ಅಂಶಗಳಿಂದ ಅತ್ಯಂತ ಪ್ರಕಾಶಮಾನವಾಗಿರುವ ಪರಮ ವ್ಯೋಮವನ್ನು ನನಗೆ ಅನುಗ್ರಹಿಸಲು ಸಿದ್ಧವಾಗಿದ್ದಾರೆ.

ಐದನೆಯ ಪಾಸುರಮ್:
ತಿರುಪ್ಪೇರ್ ನಗರದಲ್ಲಿರುವ ಎಂಪೆರುಮಾನರು ನನಗೆ ತಿರುನಾಡನ್ನು (ಪರಮಪದವನ್ನು) ಅನುಗ್ರಹಿಸಲು ಶಪಥ ಮಾಡಿದ್ದಾರೆ. ನನ್ನನ್ನು ಕಂಗಾಲಾಗಿ, ದಿಗ್ಭ್ರಾಂತನನ್ನಾಗಿ ಮಾಡುವ ನನಗಿರುವ ಅನೇಕ ತೊಂದರೆಗಳನ್ನು ಅವರು ನಿವಾರಿಸಿದ್ದಾರೆ.
ವಾನೇ ತರುವಾನೆನಕ್ಕಾಯ್ ಎನ್ನೋಡೊಟ್ಟಿ,
ಊನೇಯ್ ಕುರುಮ್ಬೈಯಿದನುಳ್ ಪುಗುನ್ದು, ಇನ್‍ಱು
ತಾನೇ ತಡುಮಾಱ್ಱ ವಿನೈಗಳ್ ತವಿರ್ತ್ತಾನ್,
ತೇನೇಯ್ ಪೊೞಿಲ್ ತೆನ್ ತಿರುಪ್ಪೇರ್ ನಗರಾನೇ ॥

ಅನೇಕ ಜೀರುಂಡೆಗಳನ್ನು ಹೊಂದಿರುವ ತೋಟಗಳಿಂದ ಕೂಡಿದ ಸುಂದರವಾದ ನಗರವಾದ ತಿರುಪ್ಪೇರ್ ನಲ್ಲಿ ಎಂಪೆರುಮಾನರು ವಾಸವಾಗಿದ್ದಾರೆ. ನನಗೆ ಪರಮಪದವನ್ನು ಕರುಣಿಸುವುದಾಗಿ ಭರವಸೆಯನ್ನು ಕೊಟ್ಟು, ನನ್ನೊಂದಿಗೆ ಪ್ರತಿಜ್ಞೆ ಮಾಡಿ, ಅವನು ತಾನಾಗಿಯೇ ನನ್ನ ಮೂಳೆ, ಮಾಂಸಗಳಿಂದ ತುಂಬಿರುವ ದೇಹದೊಳಗೆ ಬಂದು ಪ್ರವೇಶಿಸಿ, ಗೊಂದಲಗಳಿಗೆ ಕಾರಣವಾದ ನನ್ನ ಪಾಪ, ಪುಣ್ಯಗಳನ್ನು ನಿವಾರಿಸಿದ್ದಾನೆ. ಇಲ್ಲಿ ತೇನ್ ಎಂದರೆ ಜೇನು ಎಂದೂ ಅರ್ಥವಾಗಬಹುದು.

ಆರನೆಯ ಪಾಸುರಮ್:
ಆಳ್ವಾರರು ಇದನ್ನು ಯೋಚಿಸಿ ಹರ್ಷಿಸುತ್ತಾರೆ, “ ಎಂಪೆರುಮಾನರಿಗೆ ಅನೇಕ ಕರುಣಾಮಯವಾದ ವಾಸಸ್ಥಾನಗಳಿವೆ. ಎಲ್ಲೂ ಜಾಗವಿಲ್ಲದವನ ಹಾಗೆ ನಾನು ಕರೆದ ತಕ್ಷಣ ಕರುಣಾಮಯನಾಗಿ ಬಂದು ‘ನಾನು ಇಲ್ಲಿ ನೆಲೆಸುತ್ತೇನೆ ‘ ಎಂದು ತಾನೇ ನನ್ನ ಹೃದಯದೊಳಗೆ ಯಾವ ಅಪೇಕ್ಷೆ ಮತ್ತು ಕಾರಣಗಳಿಲ್ಲದೇ ತಾನೇ ಬಂದು ನೆಲೆಸಿದ್ದಾನೆ.”
ತಿರುಪ್ಪೇರ್ ನಗರಾನ್ ತಿರುಮಾಲಿರುಞ್ಜೋಲೈ,
ಪೊರುಪ್ಪೇ ಉಱೈಗಿನ್‍ಱ ಪಿರಾನ್ ಇನ್‍ಱುವನ್ದು,
ಇರುಪ್ಪೇನೆನ್‍ಱು ಎನ್ನೆಞ್ಜು ನಿಱೈಯ ಪ್ಪುಗುನ್ದಾನ್,
ವಿರುಪ್ಪೇಪೆಱ್ಱು ಅಮುದಮುಣ್ಡು ಕಳಿತ್ತೇನೇ ॥

ಎಂಪೆರುಮಾನರು ಅತ್ಯಂತ ಶ್ರೇಷ್ಠ ಪೋಷಕರು. ಅವರು ತಿರುಪ್ಪೇರ್ ನಗರದಲ್ಲಿ ನಿರಂತರವಾಗಿ ನೆಲೆಸಿರುವವರು. ದಿವ್ಯವಾದ ಪರ್ವತವಾದ ತಿರುಮಾಲಿರುಂಚೋಲೈಗೆ ಇಂದು ಆಗಮಿಸಿ, ‘ನಾನು ಇಲ್ಲಿ ನೆಲೆಸುತ್ತೇನೆ’ ಎಂದು ನಿರ್ಧರಿಸಿ, ನನ್ನ ಹೃದಯದಲ್ಲಿ ಪ್ರವೇಶಿಸಿ, ಅದನ್ನು ಪರಿಪೂರ್ಣವನ್ನಾಗಿ ಮಾಡಿದ್ದಾರೆ. ಈ ಅತ್ಯುತ್ತಮವಾದ ಪಾರಿತೋಷವನ್ನು ಹೊಂದಿ, ಅಮೃತವನ್ನು ಸವಿದು, ನಾನು ಪರಮ ಸಂತೋಷನಾಗಿದ್ದೇನೆ.

ಏಳನೆಯ ಪಾಸುರಮ್:
ಆಳ್ವಾರರು ತಮಗೆ ಸಿಕ್ಕಿದ ದೈವ ಕೃಪೆಯನ್ನು ಕರುಣೆಯಿಂದ ವಿವರಿಸಿದ್ದಾರೆ.
ಉಣ್ಡು ಕಳಿತ್ತೇಱ್ಕು ಉಮ್ಬರ್ ಎನ್ ಕುಱೈ? ಮೇಲೈ
ತ್ತೊಣ್ಡುಗಳಿತ್ತು ಅನ್ದಿ ತೊೞುಮ್ ಶೊಲ್ಲು ಪೆತ್ತೇನ್,
ವಣ್ಡು ಕಳಿಕ್ಕುಮ್ ಪೊೞಿಲ್ ಶೂೞ್ ತಿರುಪ್ಪೇರಾನ್,
ಕಣ್ಡು ಕಳಿಪ್ಪ ಕಣ್ಣುಳ್ ನಿನ್‍ಱು ಅಗಲಾನೇ ॥

ಸಂತೋಷದಿಂದ ಜಿಗಿಯುತ್ತಿರುವ ಜೀರುಂಡೆಗಳಿಂದ ತುಂಬಿದ ತೋಟಗಳಿಂದ ಕೂಡಿದ ತಿರುಪ್ಪೇರ್ ನಗರದಲ್ಲಿ ವಾಸವಾಗಿರುವ ಎಂಪೆರುಮಾನರು ಪದೇ ಪದೇ ನಾನು ನೋಡುವಂತೆ ನನ್ನ ದೃಷ್ಟಿಗೆ ಆನಂದವನ್ನು ಉಂಟುಮಾಡುತ್ತಿರುವರು. ಅವರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಯೆಂದರೆ, ನಾನು ನಿರಂತರವಾಗಿ ಅವನನ್ನು ಅನುಭವಿಸಿ , ಆನಂದಿಸುತ್ತಿರುವಂತೆ, ವಿಶಿಷ್ಟವಾಗಿರುವ ಪರಮಪದದಲ್ಲೂ ಈ ಆನಂದವು ಮುಂದುವರೆಯುವುದೇ? ನಾನು ಕೊನೆಯಲ್ಲಿ ‘ನಮಃ’ ಎಂದು ಹೇಳುತ್ತಿದ್ದೇನೆ. ಅದು ಆರಾಧನೆ, ಶರಣಾಗತಿ ಮುಂತಾದುವುಗಳನ್ನು ಸೂಚಿಸುತ್ತವೆ. ಅನಂತವಾದ ಶ್ರೇಷ್ಠ ಆನಂದವನ್ನು ಪಡೆದ ಮೇಲೆ ಶ್ರೇಷ್ಠ ಸೇವಕತ್ವವನ್ನು ಹೊಂದಿದ್ದೇನೆ. ‘ಉಗಳಿತ್ತಾಲ್’ ಎಂದರೆ ಸಮೃದ್ಧಿಯಲ್ಲಿರುವುದು ಎಂದು ಅರ್ಥ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಪ್ಪೇರ್ ನಗರದಲ್ಲಿರುವ ಎಂಪೆರುಮಾನರು ಸಂಪೂರ್ಣವಾಗಿ ಆನಂದಿಸಲ್ಪಡುವವರು. ಅವರ ಸ್ವಭಾವವು ನಮ್ಮ ಬುದ್ಧಿ ಮತ್ತು ಶಬ್ದಗಳಿಗೆ ಎಟುಕದಂಥವರು. ಅವರು ನಿರಂತರವಾಗಿ ನನ್ನ ಕಣ್ಣಿನ ದೃಷ್ಟಿಗೆ ವಸ್ತುವಾಗಿರುವರು. ನನ್ನ ಮೇಲೆ ಸದಾ ಪ್ರೀತಿಯನ್ನು ತೋರಿಸುತ್ತಿರುವರು, ಎಂದಿಗೂ ನನ್ನನ್ನು ಬಿಟ್ಟು ಹೋಗಲಾರರು. ನನ್ನ ಹೃದಯದಲ್ಲಿ ಪ್ರವೇಶಿಸಿದರು ಮತ್ತು ನನ್ನ ಮಟ್ಟದಲ್ಲಿ ನನಗೆ ಉಪಕಾರವನ್ನು ಮಾಡಲು ನಿಲ್ಲಿಸುವುದಿಲ್ಲ.”
ಕಣ್ಣುಳ್ ನಿನ್‍ಱಗಲಾನ್ ಕರುತ್ತಿನ್ ಕಣ್ ಪೆರಿಯನ್,
ಎಣ್ಣಿಲ್ ನುಣ್ ಪೊರುಳ್ ಏೞ್ ಇಶೈಯಿನ್ ಶುವೈ ತಾನೇ,
ವಣ್ಣನನ್ಮಣಿ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ತಿಣ್ಣಮ್ ಎನ್ ಮನತ್ತು ಪ್ಪುಗುನ್ದಾನ್ ಶೆಱಿನ್ದಿನ್‍ಱೇ ॥

ಎಂಪೆರುಮಾನರು ತಿರುಪ್ಪೇರ್ ನಗರದಲ್ಲಿ ವಾಸವಾಗಿರುವರು, ನನ್ನ ಬಾಹ್ಯ ಕಣ್ಣುಗಳಿಗೆ ನಿರಂತರವಾಗಿ ಆನಂದವನ್ನು ನೀಡುವರು. ಅವರು ನನ್ನನ್ನು ಬಿಟ್ಟು ಹೋಗುವುದಿಲ್ಲ. ಅವರು ಹೃದಯದಲ್ಲಿ ಅತ್ಯಂತ ಶ್ರೀಮಂತರು. ಅವರು ಅತ್ಯಂತ ನವಿರಾದ ಭಾವನೆಗಳನ್ನು ಹೊಂದಿರುವರು. ಸಪ್ತ ಸ್ವರದಲ್ಲಿರುವ ಸವಿಯನ್ನು ಹೊಂದಿದ್ದಾರೆ. ಅಮೂಲ್ಯವಾದ ವಿವಿಧ ಬಣ್ಣಗಳಿಂದ ಕೂಡಿರುವ ರತ್ನಗಳನ್ನು ಹೊಂದಿರುವ ದೊಡ್ಡ ದೊಡ್ಡ ಅರಮನೆಗಳಿಂದ ಸುತ್ತುವರೆಯಲ್ಪಟ್ಟ ತಿರುಪ್ಪೇರ್ ನಗರದಲ್ಲಿ ವಾಸವಾಗಿದ್ದಾರೆ. ಈ ದಿನ ಅಂತಹ ಎಂಪೆರುಮಾನರು ಯಾವ ಕಾರಣವಿಲ್ಲದೇ ನನ್ನ ಹೃದಯವನ್ನು ಹೊಕ್ಕಿ, ಅಲ್ಲಿ ಸ್ಥಿರವಾಗಿ ನಿಂತಿದ್ದಾರೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ನನ್ನೊಳಗೆ ಒಂದಾಗಿ , ಸ್ಥಿರವಾಗಿ ನನ್ನಲ್ಲಿ ನೆಲೆಸಿರುವ ಎಂಪೆರುಮಾನರಿಗೆ ನಾನು ಕೇಳಬೇಕೆಂದಿರುವೆ, ‘ಇಷ್ಟು ದಿನ ನನ್ನನ್ನು ಏಕೆ ಪರಿಗಣಿಸಲಿಲ್ಲ?’ ಎಂದು.”
ಇನ್‍ಱೆನ್ನೈ ಪ್ಪೊರುಳಾಕ್ಕಿ ತ್ತನ್ನೈ ಎನ್ನುಳ್ ವೈತ್ತಾನ್,
ಅನ್‍ಱೆನ್ನೈ ಪ್ಪುಱಮ್ ಪೋಗ ಪ್ಪುಣರ್ತದು ಎನ್‍ಶೆಯ್‍ವಾನ್,
ಕುನ್‍ಱೆನ್ನತ್ತಿಗೞ್ ಮಾಡಙ್ಗಳ್ ಶೂೞ್ ತಿರುಪ್ಪೇರಾನ್,
ಒನ್‍ಱೆನಕ್ಕರುಳ್ ಶೆಯ್ಯ ಉಣರ್ತಲ್ ಉಱ್ಱೇನೇ ॥

ಎಂಪೆರುಮಾನರು ನನ್ನನ್ನು ಒಂದು ಒಳ್ಳೆಯ ಅನುಕೂಲಕರವಾದ ವಸ್ತುವನ್ನಾಗಿಸಿ, ಅವರನ್ನೇ ನನ್ನ ಹೃದಯದಲ್ಲಿ ಸೇರಿಸಿದರು. ಆದರೆ ನನ್ನನ್ನು ಲೌಕಿಕ ಸಂತೋಷಗಳಲ್ಲಿ ಇದಕ್ಕೆ ಮೊದಲು ಮುಳುಗುವಂತೆ ಮಾಡಿದ್ದರು.ಏಕೆ ಅವರಿಂದ ನನ್ನನ್ನು ದೂರ ಮಾಡಿದ್ದರು? ಹೊಳೆಯುವ ಪರ್ವತಗಳಂತೆ ಇರುವ ದೊಡ್ಡ ದೊಡ್ಡ ಮನೆಗಳನ್ನು ಹೊಂದಿರುವ ತಿರುಪ್ಪೇರ್ ನಗರದ ವಾಸಿಯಾಗಿರುವ ಎಂಪೆರುಮಾನರು ನನಗೆ ಕರುಣೆಯಿಂದ ಈ ಎರಡು ಸನ್ನಿವೇಶಗಳನ್ನು ವಿವರಿಸಲಿ. ಇದರ ಅರ್ಥ ಒಂದರ ಕಾರಣವನ್ನು ಅವರು ವಿವರಿಸಿದರೆ, ಇನ್ನೊಂದು ಅದರ ತದ್ವಿರುದ್ಧವಾಗಿರುತ್ತದೆ. ಆದರೆ ನಿರ್ಹೇತುಕ ವಿಷಯೀಕಾರಮ್ (ಏನೂ ಕಾರಣವಿಲ್ಲದೆಯೇ ದಯಪಾಲಿಸುವ ಗುಣ) ನನ್ನು ಈ ಪ್ರಶ್ನೆ ಕೇಳಿದರೆ, ಭಗವಂತನಾದರೂ , ಎಲ್ಲಾ ಕಡೆಯೂ ಇರುವವನಾದರೂ ಅವನಿಗೂ ಉತ್ತರ ಹೇಳಲು ಬರುವುದಿಲ್ಲ.

ಹತ್ತನೆಯ ಪಾಸುರಮ್:
ಎಂಪೆರುಮಾನರ ಹತ್ತಿರ ಆಳ್ವಾರರ ಪ್ರಶ್ನೆಗೆ ಹೇಳಲು ಉತ್ತರವಿರುವುದಿಲ್ಲ. ಅವರು ಕರುಣೆಯಿಂದ ಹೇಳುತ್ತಾರೆ, “ಹೇಳು, ನಿನಗೆ ಏನು ಬೇಕು?” ಆಳ್ವಾರರು ಹೇಳುತ್ತಾರೆ, “ನಾನು ನಿನ್ನ ದಿವ್ಯ ಪಾದಗಳನ್ನು ಪ್ರೀತಿಯಿಂದ ಮತ್ತು ಆನಂದದಿಂದ ಸೇವೆ ಮಾಡಬೇಕು. ನನಗೆ ಇದನ್ನು ಮಾತ್ರ ಕೊಡು.” ಎಂದು. ಎಂಪೆರುಮಾನರು ಹೇಳುತ್ತಾರೆ, “ ಸರಿ, ಕೊಟ್ಟಾಯಿತು”, ಆಳ್ವಾರರು ಸಂತೋಷಗೊಂಡು ಹೇಳುತ್ತಾರೆ, “ತಿರುಪ್ಪೇರ್ ನಗರದ ಎಂಪೆರುಮಾನರಿಗೆ ಶರಣದವರಿಗೆ ದುಃಖವೇ ಇರುವುದಿಲ್ಲ. “ ಎಂದು.
ಉಱ್ಱೇನ್ ಉಗನ್ದು ಪಣಿಶೆಯ್‍ದು ಉನಪಾದಮ್,
ಪೆಱ್ಱೇನ್ , ಈದೇ ಇನ್ನಮ್ ವೇಣ್ಡುವದೆನ್ದಾಯ್,
ಕಱ್ಱಾರ್ ಮಱೈ ವಾಣರ್ಗಳ್ ವಾೞ್ ತಿರುಪ್ಪೇರಾಱ್ಕು,
ಅಱ್ಱಾರ್ ಅಡಿಯಾರ್ ತಮಕ್ಕು ಅಲ್ಲಲ್ ನಿಲ್ಲಾವೇ ॥

ಏನೂ ಕಾರಣವಿಲ್ಲದೇ, (ನನ್ನ ಯಾವ ಪ್ರಯತ್ನವಿಲ್ಲದೇ) ನಾನು ನಿನ್ನ ದಿವ್ಯ ಪಾದಗಳನ್ನು ಸೇರಿಕೊಂಡೆ. ನಾನು ಕೇವಲ ನನ್ನ ಮಾತುಗಳಿಂದ , ಪ್ರೀತಿಯಿಂದ ನಿನ್ನನ್ನು ಸ್ಮರಿಸಿ, ಪರಮ ಗುರಿಯಾಗಿರುವ ನಿನ್ನ ದಿವ್ಯ ಪಾದಗಳನ್ನು ಹೊಂದಿದೆ. ಓಹ್! ಸಹಜವಾಗಿ ನನ್ನ ಜೊತೆಗೆ ಸಂಬಂಧ ಹೊಂದಿರುವವನೇ! ಈ ಸೇವೆಯೇ ನನಗೆ ಎಂದೆಂದಿಗೂ ಆಸೆ ಪಡುವಂತಹುದು. ತಿರುಪ್ಪೇರ್ ನಗರದಲ್ಲಿ ವಾಸವಾಗಿರುವ, ಭಗವತ್ ಅನುಭವವನ್ನು ಹೊಂದಿರುವ, ವೇದಗಳ ಅರ್ಥಗಳನ್ನು ಕಲಿತಿರುವ , ನಿನ್ನನ್ನು ಮಾತ್ರವೇ ಪೂಜಿಸುವ ಭಕ್ತರಿಗೆ ಯಾವ ದುಃಖಗಳು ಆನಂದಿಸುವುದನ್ನು ತಡೆಯುತ್ತವೆಯೋ, ಅಂತಹ ದುಃಖಗಳು ಸಹಜವಾಗಿ ದೂರವಾಗುತ್ತವೆ. ಮತ್ತು ಹೇಳಿರುವ ಹಾಗೆ ‘ಅಱ್ಱರುಕ್ಕು ಅಡಿಯಾರ್ ‘ (ಎಂಪೆರುಮಾನರಿಗೆ ಮಾತ್ರವೇ ಸೇವೆ ಸಲ್ಲಿಸುವವರಿಗೇ ಶರಣದವರು).

ಹನ್ನೊಂದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ವಿಶಿಷ್ಟವಾದ , ತೇಜಸ್ಸನ್ನು ಹೊಂದಿರುವ ತಿರುನಾಡು (ಪರಮಪದಮ್) ಈ ಪದಿಗೆಯನ್ನು ಕಲಿತವರಿಗೆ ಸಿಗುತ್ತದೆ. “
ನಿಲ್ಲಾ ಅಲ್ಲಲ್ ನೀಳ್ ವಯಲ್ ಶೂೞ್ ತಿರುಪ್ಪೇರ್ ಮೇಲ್,
ನಲ್ಲಾರ್ ಪಲರ್ ವಾೞ್ ಕುರುಗೂರ್ ಚ್ಚಡಗೋಪನ್,
ಶೊಲ್ಲಾರ್ ತಮಿೞ್ ಆಯಿರತ್ತುಳ್ ಇವೈಪತ್ತುಮ್
ವಲ್ಲಾರ್ , ತೊಣ್ಡರಾಳ್ವದು ಶೂೞ್ ಪೊನ್ ವಿಶುಮ್ಬೇ ॥

ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರ್, ತಿರುಪ್ಪೇರ್ ನ ಮೇಲೆ ಹಾಡಿದ ಈ ಪದಿಗೆಯನ್ನು ಹಾಡಿದವರಿಗೆ, ದುಃಖವೇ ಇಲ್ಲದ ವಾಸಸ್ಥಾನವಾಗಿರುವ , ಗದ್ದೆಗಳಿಂದ ತೋಟಗಳಿಂದ ಆವೃತ್ತವಾಗಿರುವ ತಿರುಪ್ಪೇರ್ ನಗರದ ಮೇಲೆ ಹಾಡಿರುವ, ಸಾವಿರ ಪಾಸುರಗಳಲ್ಲಿ ಶಬ್ದಗಳ ಮಾಲೆಯಾದ ಈ ಹತ್ತು ಪಾಸುರಗಳನ್ನು ಹಾಡಿದವರು , ಪರಮವ್ಯೋಮವೆಂದೇ ಹೆಸರಾಗಿರುವ , ಎಲ್ಲಾ ದಿಕ್ಕುಗಳಲ್ಲಿಯೂ ವ್ಯಾಪಿಸಿರುವ , ಅಪರಿಮಿತವಾಗಿರುವ ಮತ್ತು ತೇಜಸ್ಸನ್ನು ಹೊಂದಿರುವ ಪರಮಪದಕ್ಕೇ ನಾಯಕರಾಗಿ ನೆಲೆಸುವರು.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-8-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org







ತಿರುವಾಯ್ಮೊೞಿ – ಸರಳ ವಿವರಣೆ – 10.7-ಶೆಞ್ಜೊಲ್

Published by:


ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.1 – ತಾಳತಾಮರೈ


ಆಳ್ವಾರರು ಪರಮಪದವನ್ನು ಶೀಘ್ರವಾಗಿ ತಲುಪಲು ಬಯಸುತ್ತಾರೆ. ಎಂಪೆರುಮಾನರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಎಂಪೆರುಮಾನರು ಆಳ್ವಾರರನ್ನು ಅವರ ದಿವ್ಯ ಲೌಕಿಕ ರೂಪದಲ್ಲಿಯೇ ಕರೆದುಕೊಂಡು ಹೋಗಿ ಅಲ್ಲಿಯೂ ಆ ದಿವ್ಯ ರೂಪವನ್ನು ಆನಂದಿಸಲು ಬಯಸುತ್ತಾರೆ. ಅದನ್ನು ತಿಳಿದ ಆಳ್ವಾರರು ಎಂಪೆರುಮಾನರಿಗೆ ಹಾಗೆ ಮಾಡದಿರಲು ಸಲಹೆ ಕೊಡುತ್ತಾರೆ ಮತ್ತು ಎಂಪೆರುಮಾನರು ಕಡೆಗೆ ಒಪ್ಪಿಕೊಳ್ಳುತ್ತಾರೆ. ಅದನ್ನು ನೋಡಿದ ಆಳ್ವಾರರು ಎಂಪೆರುಮಾನರ ಶೀಲಗುಣವನ್ನು(ಸರಳತೆಯನ್ನು) ನೋಡಿ ಅತೀವ ಸಂತೋಷಗೊಳ್ಳುತ್ತಾರೆ ಮತ್ತು ಅದನ್ನು ಈ ಪದಿಗೆಯಲ್ಲಿ ಕರುಣೆಯಿಂದ ಎಲ್ಲರಿಗಾಗಿ ವಿವರಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಎಂಪೆರುಮಾನರು ನನ್ನ ಹೃದಯದಲ್ಲಿ ಪ್ರವೇಶಿಸಿ ನಿನ್ನ ಮೂಲಕ ತಿರುವಾಯ್ಮೊೞಿಯನ್ನು ಹಾಡಿಸುತ್ತೇನೆ’ ಎಂದು ಹೇಳುತ್ತಾರೆ. ಆದರೆ ನನ್ನ ಮೇಲಿನ ಪ್ರೀತಿಯನ್ನು ನೋಡಿ. ಓಹ್! ಅವನನ್ನು ಸೇವಿಸುವವರೇ! ಅವನ ಅಗಾಧವಾದ ಸಮುದ್ರದಂತಹ ಗುಣದಲ್ಲಿ ಮುಳುಗಿಹೋಗಬೇಡಿ” ಎಂದು.

ಶೆಞ್ಜೊಲ್ ಕವಿಗಾಳ್ ಉಯಿರ್ ಕಾತ್ತು ಆಟ್ಚೆಯ್‍ಮ್ಮಿನ್ ತಿರುಮಾಲಿರುಞ್ಜೋಲೈ,
ವಞ್ಜಕ್ಕಳ್ವನ್ ಮಾಮಾಯನ್ ಮಾಯಕ್ಕವಿಯಾಯ್ ವನ್ದು, ಎನ್
ನೆಞ್ಜುಮುಯಿರುಮುಳ್ ಕಲನ್ದು ನಿನ್‍ಱಾರ್ ಅಱಿಯಾವಣ್ಣಮ್ , ಎನ್
ನೆಞ್ಜುಮುಯಿರುಮ್ ಅವೈ ಉಣ್ಡು ತಾನೇಯಾಗಿ ನಿಱೈನ್ದಾನೇ ॥

ತಿರುಮಾಲಿರುಂಜೋಲೈನಲ್ಲಿರುವ ಎಂಪೆರುಮಾನರು , ಯಾರೊಬ್ಬರಿಂದ ಅವರಿಗೇ ಗೊತ್ತಾಗದಂತೆ ಕಳ್ಳತನವನ್ನು ಮಾಡಿ, ಅದ್ಭುತವಾದ ರೂಪವನ್ನು ಹೊಂದಿ, ಅನೇಕ ಕಲ್ಯಾಣ ಗುಣಗಳನ್ನು ಹೊಂದಿ, ಆದರೂ ತುಂಟತನದ ಕಾರ್ಯಗಳನ್ನು ಮಾಡಿ, ನನ್ನನ್ನು ಪದ್ಯಗಳನ್ನು ಹಾಡುವಂತೆ ಪ್ರೇರೇಪಿಸಿ, ಅವರು ನನ್ನ ಹೃದಯದಲ್ಲಿ ಬಂದು ನೆಲೆಸಿ, ನನ್ನಲ್ಲೇ ಒಂದಾಗಿ , ಅವನೊಂದಿಗೇ ಇರುವ ಲಕ್ಶ್ಮಿಗೇ ಗೊತ್ತಾಗದ ಹಾಗೆ ಬಂದು ನನ್ನಲ್ಲಿ ನೆಲೆಸಿರುವನು. ಅವನು ನನ್ನ ಹೃದಯವನ್ನೂ ಸರ್ವಸ್ವವನ್ನೂ ಸ್ವೀಕರಿಸಿ, ಆನಂದಭರಿತನಾಗಿ , ಅವಾಪ್ತ ಸಮಸ್ತ ಕಾಮನಾಗಿರುವನು. ಓಹ್! ಪ್ರಾಮಾಣಿಕವಾಗಿ ಪಾಸುರಗಳನ್ನು ಹಾಡುವವರೇ! ನಿಮ್ಮನ್ನೂ ಮತ್ತು ನಿಮ್ಮ ವಸ್ತುಗಳನ್ನೂ ಜೋಪಾನವಾಗಿರಿಸಿಕೊಳ್ಳಿ. ಅವನು ಎಲ್ಲವನ್ನೂ ಕದ್ದುಬಿಡುವನು. ಮತ್ತು ನಿಮ್ಮ ಮಾತುಗಳಿಂದ ಅವನನ್ನು ಸೇವಿಸಿ.
ಇದರ ಅರ್ಥವೇನೆಂದರೆ : ಭಗವಂತನಲ್ಲಿ ಅನನ್ಯಪ್ರಯೋಜನಕ್ಕಾಗಿ (ಕೈಂಕರ್‍ಯವನ್ನು ಬಿಟ್ಟು ಬೇರೆ ಏನೂ ಅಪೇಕ್ಷೆಯಿಲ್ಲದವರಿಗೆ) ತೊಡಗಿಕೊಂಡವರಿಗೆ , ತಮ್ಮನ್ನು ಮತ್ತು ತಮ್ಮ ವಸ್ತುಗಳನ್ನು ಅವನು ಕದ್ದುಕೊಂಡು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು.

ಎರಡನೆಯ ಪಾಸುರಮ್:
ಆಳ್ವಾರರು, ತಮ್ಮ ಮತ್ತು ಎಂಪೆರುಮಾನರ ಸಮಾಗಮವಾದ ಮೇಲೆ ಎಂಪೆರುಮಾನರಿಗೆ ದೊರಕಿದ ಸಂತೋಷ ಮತ್ತು ಐಶ್ವರ್‍ಯಗಳನ್ನು ತಿಳಿದುಕೊಂಡು ಆನಂದಿಸುತ್ತಾರೆ.

ತಾನೇಯಾಗಿ ನಿಱೈನ್ದು ಎಲ್ಲಾವುಲಗುಮ್ ಉಯಿರುಮ್ ತಾನೇಯಾಯ್,
ತಾನೇ ಯಾನೆನ್ಬಾನಾಗಿ ತ್ತನ್ನೈ ತ್ತಾನೇ ತುದಿತ್ತು, ಎನಕ್ಕು
ತ್ತೇನೇ ಪಾಲೇ ಕನ್ನಲೇ ಅಮುದೇ ತಿರುಮಾಲಿರುಞ್ಜೋಲೈ,
ಕೋನೇಯಾಗಿ ನಿನ್‍ಱೊೞಿನ್ದಾನ್ ಎನ್ನೈ ಮುಱ್ಱುಮ್ ಉಯಿರ್ ಉಣ್ಡೇ ॥


ಎಂಪೆರುಮಾನರು ನನ್ನನ್ನು ಎಲ್ಲಾ ರೀತಿಯಲ್ಲೂ ಆನಂದಿಸುತ್ತಾರೆ. ಅವನೇ ಮೂಲಭೂತ ಮತ್ತು ಪರಿಪೂರ್ಣ. ಅವನೇ ಎಲ್ಲಾ ಸಮಸ್ತ ಲೋಕಗಳೂ ಮತ್ತು ಎಲ್ಲಾ ಸಮಸ್ತ ಜೀವಿಗಳು ಅವನೇ [ಅವನ ದೇಹವೇ ಎಲ್ಲವೂ]. ಅವನೇ ನಾನೂ, ಜ್ಞಾನದ ಪ್ರತೀಕವಾದ ವಸ್ತುವೆಂದು ಕರೆಯಲ್ಪಡುತ್ತೇನೆ. ಅವನೇ ಹೊಗಳಿಕೆಗೆ ಪಾತ್ರವಾಗುವವನು ಮತ್ತು ಹೊಗಳುವವನು ಅವನೇ. ಇದನ್ನೆಲ್ಲಾ ನನಗೆ ತಿಳಿಯಲ್ಪಡುವಂತೆ ಮಾಡಿದ್ದರಿಂದ, ಜೇನು, ಹಾಲು, ಸಕ್ಕರೆ, ಅಮೃತ – ಇವೆಲ್ಲವುಗಳ ಮಾಧುರ್‍ಯವೂ ಅವನೇ. ಅವನೇ ತಿರುಮಾಲಿರುಂಚೋಲೈನಲ್ಲಿ ಕರುಣೆಯಿಂದ ನೆಲೆಸಿರುವ ಸ್ವಾಮಿಯೂ ಮತ್ತು ಅಲ್ಲಿಂದ ಹೋಗದೇ ನೆಲೆಸಿರುವವನು .
ಇದರ ಅರ್ಥ : ಅವನೇ ಆನಂದಪಡುವವನು ಮತ್ತು ಆನಂದಿಸಲ್ಪಡುವವನು.

ಮೂರನೆಯ ಪಾಸುರಮ್:
ಆಳ್ವಾರರು ಕರಣೆಯಿಂದ ಎಂಪೆರುಮಾನರ ಕೊನೆಯಿಲ್ಲದ ಪ್ರೀತಿಯನ್ನು ಮತ್ತು ಅದು ತಮ್ಮ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ವಿವರಿಸಿದ್ದಾರೆ.

ಎನ್ನೈ ಮುಱ್ಱುಮ್ ಉಯಿರ್ ಉಣ್ಡು ಎನ್ ಮಾಯವಾಕ್ಕೈ ಇದನುಳ್ ಪುಕ್ಕು,
ಎನ್ನೈ ಮುಱ್ಱುಮ್ ತಾನೇಯಾಯ್ ನಿನ್‍ಱ ಮಾಯ ಅಮ್ಮಾನ್ ಶೇರ್,
ತೆನ್ನನ್ ತಿರುಮಾಲಿರುಞ್ಜೋಲೈ ತ್ತಿಶೈ ಕೈಕೂಪ್ಪಿ ಚ್ಚೇರ್ನ್ದಯಾನ್,
ಇನ್ನುಮ್ ಪೋವೇನೇ ಕೊಲೋ ಎನ್ಗೊಲ್ ಅಮ್ಮಾನ್ ತಿರುವರುಳೇ ॥

ನನ್ನ ಆತ್ಮವನ್ನು ಎಲ್ಲಾ ರೀತಿಯಲ್ಲೂ ಆನಂದಿಸಿದ ಮೇಲೆ , ಎಂಪೆರುಮಾನರು ಎಲ್ಲಾ ರೀತಿಯಲ್ಲೂ ಅಜ್ಞಾನವನ್ನು ಹೊಂದಿರುವ ನನ್ನ ದೇಹದೊಳಗೆ ಹೊಕ್ಕು , ನನ್ನನ್ನು ಮತ್ತು ಅದಕ್ಕೆ ಜೋಡಣೆಯಾಗಿರುವ ನನ್ನ ದೇಹವನ್ನು ಪರಿಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅವರಿಗೆ ಅನೇಕ ಕಲ್ಯಾಣ ಗುಣಗಳು ಮತ್ತು ಅದ್ಭುತವಾದ ಕ್ರಿಯೆಗಳೂ ಇವೆ. ಅವರು ಬೇರೆ ಸಾಟಿಯಿಲ್ಲದ ಪ್ರಭುವಾಗಿದ್ದಾರೆ. ಅವರು ಸ್ಥಿರವಾಗಿ ಹೊಗಳಲು ಯೋಗ್ಯವಾದ ದಕ್ಷಿಣ ದಿಕ್ಕಿನಲ್ಲಿರುವ ತಿರುಮಲೈನಲ್ಲಿ ನೆಲೆಸಿದ್ದಾರೆ. ಅವರಿಗೆ ಸೇವೆ ಸಲ್ಲಿಸಲು ನಾನು ಆ ದಿವ್ಯ ದೇಶವನ್ನು ತಲುಪಿದ್ದೇನೆ. ಈ ಸ್ಥಿತಿಯನ್ನು ತಲುಪಿದ ನಂತರ ಬೇರೆ ಎಲ್ಲಾದರೂ ನನಗೆ ಹೋಗಲು ಸ್ಥಳವಿದೆಯೇ? ಎಲ್ಲಾದರೂ ಹೋಗಲು ಸಾಧ್ಯವೇ? ಇಂತಹ ಬೇಷರತ್ತಾದ ಪ್ರಿತಿಯನ್ನು ಹೊಂದಿರುವ ಸ್ವಾಮಿಯು ಎಂತಹ ಅದ್ಭುತವಾದವರು. ಇದರ ಅರ್ಥ : ಎಂಪೆರುಮಾನರು ಬೇರೆ ಅನೇಕ ಪ್ರಯೋಜನಗಳನ್ನು , ವರಗಳನ್ನು ಕೊಡಲು ಇಲ್ಲಿ ನಿಂತಿದ್ದಾರೆ. ತೆನ್ನನ್ ಎಂಬುದು ಆ ಕ್ಷೇತ್ರದ ರಾಜನೂ ಆಗಿರಬಹುದು.

ನಾಲ್ಕನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರ ಪ್ರೀತಿಯನ್ನು ಆಳ್ವಾರರ ದೇಹದ ಮೇಲೆ ಇಟ್ಟಿರುವುದನ್ನು ಮತ್ತು ತಿರುಮಲೈಯಲ್ಲಿದ್ದುಕೊಂಡು ಆಳ್ವಾರರನ್ನು ಎಂಪೆರುಮಾನರು ಆನಂದಿಸುವುದನ್ನು ವಿವರಿಸುತ್ತಾರೆ.

ಎನ್ಗೊಲ್ ಅಮ್ಮಾನ್ ತಿರುವರುಳ್‍ಗಳ್ ಉಲಗುಮ್ ಉಯಿರುಮ್ ತಾನೇಯಾಯ್,
ನನ್ಗೆನ್ನುಡಲುಮ್ ಕೈವಿಡಾನ್ ಞಾಲತ್ತೂಡೇ ನಡನ್ದುೞಕ್ಕಿ,
ತೆನ್ ಕೊಳ್ ತಿಶೈಕ್ಕು ತ್ತಿಲದಮಾಯ್‍ ನಿನ್‍ಱ ತಿರುಮಾಲಿರುಞ್ಜೋಲೈ,
ನಙ್ಗಳ್ ಕುನ್‍ಱಮ್ ಕೈವಿಡಾನ್ ನಣ್ಣಾ ಅಶುರರ್ ನಲಿಯವೇ ॥

ಎಂಪೆರುಮಾನರು ಎಲ್ಲಾ ಲೋಕಗಳೂ ಮತ್ತು ಜೀವಿಗಳಾಗಿದ್ದುಕೊಂಡು , ಅವರಲ್ಲಿ ಆಸಕ್ತಿಯಿಲ್ಲದ ಅಸುರರನ್ನು ವಧಿಸಿ, ಭೂಮಿಯ ಮೇಲೆ ಇಳಿದು, ಇಲ್ಲಿ ವಿಹರಿಸುತ್ತಾರೆ. ಅಲ್ಲಿಂದ ದಕ್ಷಿಣ ದಿಕ್ಕಿನಲ್ಲಿ ಬಹಳ ಎತ್ತರದಲ್ಲಿರುವ ಮತ್ತು ಎಲ್ಲ ಪರ್ವತಗಳಿಗೂ ಮುಖ್ಯವಾಗಿರುವ , ನಮ್ಮಂತಹವರಿಂದ ಆನಂದಿಸಲ್ಪಡುವ ತಾಣವಾದ ತಿರುಮಾಲಿರುಂಚೋಲೈಗೆ ಬಂದು, ಅಲ್ಲಿಂದ ನಿರ್ಗಮಿಸದೇ ಅಲ್ಲಿಯೇ ಇರುತ್ತಾರೆ. ನನ್ನ ದೇಹದಲ್ಲಿ ನೆಲೆಸಿ ಅಲ್ಲಿಂದಲೂ ನಿರ್ಗಮಿಸದೇ ಇದ್ದಾರೆ. ಅವರ ಶೀಲಮ್ (ಸರಳತೆ) ಎಂತಹ ಅದ್ಭುತವಾದುದು ಮತ್ತು ನಮಗೆ ಒಳಿತನ್ನು ಉಂಟುಮಾಡುವುದು ಎಂದು ಆಳ್ವಾರರು ವರ್ಣಿಸಿದ್ದಾರೆ.

ಐದನೆಯ ಪಾಸುರಮ್:
ಎಂಪೆರುಮಾನರು ನನ್ನಲ್ಲಿ ಒಂದಾಗಿ , ತಿರುವಾಯ್ಮೊೞಿಯನ್ನು ನನ್ನ ಬಾಯಿಯಿಂದ ಕೇಳಿ ಮತ್ತು ಹತೋಟಿಯಿಲ್ಲದ, ತುಂಬಿ ಹರಿಯುವ ಆನಂದಮಯವಾದ ತಿರುವಾಯ್ಮೊೞಿಯನ್ನು ಕೇಳಿ, ನಿತ್ಯಸೂರಿಗಳು ಮತ್ತು ಮುಕ್ತಾತ್ಮಗಳು ಹಾಡಿದಾಗ ತಲೆದೂಗುವಂತೆ , ಎಂಪೆರುಮಾನರು ತಮ್ಮ ತಲೆಯನ್ನು ಆಡಿಸುತ್ತಿದ್ದಾರೆ.

ನಣ್ಣಾ ಅಶುರರ್ ನಲಿವೆಯ್‍ದ ನಲ್ಲ ಅಮರರ್ ಪೊಲಿವೆಯ್‍ದ,
ಎಣ್ಣಾದನಗಳ್ ಎಣ್ಣುಮ್ ನನ್ ಮುನಿವರ್ ಇನ್ಬಮ್ ತಲೈಚ್ಚಿಱಪ್ಪ,
ಪಣ್ಡಾರ್ ಪಾಡಲಿನ್ ಕವಿಗಳ್ ಯಾನಯ್ ತ್ತನ್ನೈ ತ್ತಾನ್ ಪಾಡಿ,
ತೆನ್ನಾವೆನ್ನುಮ್ ಎನ್ನಮ್ಮಾನ್ ತಿರುಮಾಲಿರುಞ್ಜೋಲೈಯಾನೇ॥

ಅಡಚಣೆಯಾಗಿರುವ ಮತ್ತು ಅವನನ್ನು ಹೊಂದಲು ನಿರಾಸಕ್ತರಾಗಿರುವ ಅಸುರರನ್ನು ಸಂಹರಿಸಿ, ತಮ್ಮನ್ನು ಹೊಂದಲು ಆಸಕ್ತರಾಗಿರುವ , ಭಕ್ತಿಯನ್ನು ಹೊಂದಿರುವ ಅನುಕೂಲಕರವಾದ ದೈವೀಕರಿಗೆ ಐಶ್ವರ್‍ಯವನ್ನು ಕರುಣಿಸಿ, ಅತ್ಯಂತ ಆಳವಾದ ತಪಸ್ಸನ್ನು ಮಾಡುವ ಧ್ಯಾನಿಗಳಿಗೆ ಅತ್ಯಂತ ಆಳವಾದ ಆನಂದವನ್ನು ನೀಡಿ, ನಮ್ಮಿಂದ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಕಲ್ಯಾಣ ಗುಣಗಳನ್ನೂ ಮತ್ತು ಸಕಲ ಐಶ್ವರ್‍ಯಗಳನ್ನೂ ಹೊಂದಿರುವ , ಅವಾಪ್ತ ಸಮಸ್ತ ಕಾಮನ್, ನನ್ನ ಸ್ವಾಮಿಯು ತಿರುಮಲೆಗೂ (ತಿರುಮಾಲಿರುಂಚೋಲೈಗೂ) ಸ್ವಾಮಿಯಾಗಿ ನಿಂತಿದ್ದಾರೆ. ನನ್ನಿಂದ ಮಧುರವಾದ ಪಾಸುರಗಳನ್ನು, ಸಂಗೀತದೊಂದಿಗೆ ಮತ್ತು ರಾಗ, ತಾಳಗಳೊಂದಿಗೆ ಸ್ವೀಕರಿಸಿ, ಅವರು ತಮ್ಮ ತಲೆಯನ್ನು ಮೃದುವಾಗಿ ಆಡಿಸಿ, ಈ ಪಾಸುರಗಳನ್ನು ಹಾಡಿಕೊಳ್ಳುತ್ತಾರೆ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಶ್ರೀಯಃ ಪತಿ (ಮಹಾಲಕ್ಶ್ಮಿಯ ಸಂಗಾತಿ) ಯಾದ ಎಂಪೆರುಮಾನರು ತಿರುಮಲೈನಲ್ಲಿ ಕರುಣೆಯಿಂದ ನಿಂತಿದ್ದಾರೆ, ಮತ್ತು ನನ್ನನ್ನು ಆಳಲು ಉತ್ಸುಕರಾಗಿದ್ದಾರೆ. “

ತಿರುಮಾಲಿರುಞ್ಜೋಲೈ ಯಾನೇಯಾಗಿ ಚ್ಚೆೞು ಮೂವುಲಗುಮ್, ತನ್
ಒರು ಮಾವಯಱ್ಱಿನುಳ್ಳೇ ವೈತ್ತು ಊೞಿಯೂೞಿ ತಲೈ ಅಳಿಕ್ಕುಮ್,
ತಿರುಮಾಲೆನ್ನೈ ಆಳುಮಾಲ್ ಶಿವನುಮ್ ಪಿರಮನುಮ್ ಕಾಣಾದು,
ಅರುಮಾಲೆಯ್‍ದಿ ಅಡಿ ಪರವ ಅರುಳೈಯೀನ್ದ ಅಮ್ಮಾನೇ ॥


ರುದ್ರರು, ಬ್ರಹ್ಮರು ಎಂಪೆರುಮಾನರನ್ನು ನೋಡಲು ಸಾಧ್ಯವಿಲ್ಲವಾದ್ದರಿಂದ, ಅವರು ಸೇರಲು ಅತಿಕಷ್ಟವಾದ , ಅವನ ದಿವ್ಯ ಪಾದಗಳನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ. ಆದ್ದರಿಂದ ಅವನ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿಯೊಂದು ಕಲ್ಪದಲ್ಲೂ ಅಂತಹ ಎಲ್ಲರಿಗಿಂತಲೂ ಶ್ರೇಷ್ಠನಾದ ಎಂಪೆರುಮಾನರು ಮೂರು ಲೋಕಗಳನ್ನೂ ಮೂಲಭೂತವಾಗಿ ರಕ್ಷಿಸಲು ಅವುಗಳನ್ನು ಒಂದು ನಿಶ್ಚಯವಾದ ರೀತಿಯಲ್ಲಿ ತನ್ನ ದಿವ್ಯ ಹೊಟ್ಟೆಯಲ್ಲಿರಿಸಿಕೊಳ್ಳುತ್ತಾರೆ. ಅದಕ್ಕೆ ತದ್ವಿರುದ್ಧವಾದ ವಸ್ತುಗಳನ್ನು ಒಂದಾಗಿರಿಸಿಕೊಳ್ಳಲು ಶಕ್ತಿಯಿದೆ. ಅವರಿಗೆ ಶ್ರೀಯಃ ಪತಿತ್ವಮ್ ಇರುವುದರಿಂದ ಮೋಹದಿಂದ ನನ್ನ ಸೇವೆಯನ್ನು ಸ್ವೀಕರಿಸಲು ತಾವು ತಿರುಮಾಲಿರುಂಚೋಲೈನಲ್ಲಿ ನೆಲೆಸಿದ್ದಾರೆ. ‘ಒರುಮಾ ‘ ಎಂದರೆ ಸಣ್ಣದಾದ ಮುಖ್ಯವಲ್ಲದ ಒಂದು ಭಾಗ (ಅವರ ಹೊಟ್ಟೆಯಲ್ಲಿ ) ಎಂದು ಅರ್ಥ.

ಏಳನೆಯ ಪಾಸುರಮ್ :
ಆಳ್ವಾರರು ತಮ್ಮ ಏಳ್ಗೆಗೆ ಕಾರಣವಾದ ತಿರುಮಾಲಿರುಂಚೋಲೈನನ್ನು ಹೊಗಳುತ್ತಾರೆ,

ಅರುಳೈ ಈ ಎನ್ನಮ್ಮಾನೇ ಎನ್ನುಮ್ ಮುಕ್ಕಣ್ ಅಮ್ಮಾನುಮ್,
ತೆರುಳ್ ಕೊಳ್ ಪಿರಮನಮ್ಮಾನುಮ್ ದೇವರ್ ಕೋನುಮ್ ತೇವರುಮ್,
ಇರುಳ್‍ಗಳ್ ಕಡಿಯುಮ್ ಮುನಿವರುಮ್ ಏತ್ತುಮ್ ಅಮ್ಮಾನ್ ತಿರುಮಲೈ,
ಮರುಳ್‍ಗಳ್ ಕಡಿಯುಮ್ ಮಣಿಮಲೈ ತಿರುಮಾಲಿರುಞ್ಜೋಲೈ ಮಲೈಯೇ ॥


ಎಂಪೆರುಮಾನರು ಈ ರೀತಿಯಾಗಿ ಹೊಗಳಲ್ಪಡುತ್ತಾರೆ. “ ಓಹ್! ನನ್ನ ಸ್ವಾಮಿಯೇ! ಕರುಣೆಯಿಂದ ದಯೆತೋರು “ ಎಂದು ಜ್ಞಾನ ಮುಂತಾದುವುಗಳನ್ನು ಹೊಂದಿರುವ ಮೂರುಕಣ್ಣುಗಳಿರುವ ರುದ್ರನು ಮತ್ತು ಸೃಷ್ಟಿಗೇ ಕರ್ತೃ ಮತ್ತು ಮೂಲಭೂತನಾಗಿರುವ ಬ್ರಹ್ಮನು , ದೇವ ದೇವತೆಗಳಿಗೆಲ್ಲಾ ಮತ್ತು ಪುರಾಣಗಳಿಂದ ಅಂಧಕಾರವನ್ನು ದೂರ ಮಾಡುವ ಋಷಿಗಳನ್ನು ನಿಯಂತ್ರಿಸುವ ಇಂದ್ರನಿಂದ ಪೂಜಿಸಲ್ಪಡುತ್ತಾನೆ. ದಿವ್ಯ ಪರ್ವತವು ಅಂತಹ ಎಂಪೆರುಮಾನರ ಒಂದು ವಾಸಸ್ಥಾನವಾಗಿದೆ. ಅಂತಹ ದಿವ್ಯ ಬೆಟ್ಟವು ಅವಿದ್ಯಾ (ಅಜ್ಞಾನ) ಮುಂತಾದುವುಗಳು ನಮ್ಮ ಗುರಿಯನ್ನು ತಲುಪಲು ತೊಂದರೆಗಳನ್ನುಂಟುಮಾಡುವ ಅನೇಕ ಅಡಚಣೆಗಳನ್ನು ದೂರಮಾಡುತ್ತದೆ. ಮತ್ತು ವಿಶಿಷ್ಟವಾಗಿ ಪರಮ ಆನಂದವನ್ನು ನೀಡುತ್ತದೆ. ಅದೇ ತಿರುಮಾಲಿರುಂಚೋಲೈ.

ಎಂಟನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಗುಡಿಗಳ ಮೇಲೆ ಅವನಿಗಿರುವ ಆಸೆಯನ್ನು ನನ್ನ ಅಂಗಗಳ ಮೂಲಕ ವ್ಯಕ್ತಪಡಿಸುತ್ತಾನೆ. ತಿರುಮಲೈನನ್ನು ಮೊದಲುಗೊಂಡು. ಅವನು ನನ್ನನ್ನು ಬಿಟ್ಟು ಒಂದು ನಿಮಿಷವೂ ಅಗಲಲಾರ. ಎಂತಹ ಅದ್ಭುತವಾದ ಸ್ಥಿತಿ ಇದು.”

ತಿರುಮಾಲಿರುಞ್ಜೋಲೈ ಮಲೈಯೇ ತಿರುಪ್ಪಾಱ್ಕಡಲೇ ಎನ್‍ತಲೈಯೇ,
ತಿರುಮಾಲ್ ವೈಕುನ್ದಮೇ ತಣ್ ತಿರುವೇಂಙ್ಗಡಮೇ ಎನದುಡಲೇ,
ಅರು ಮಾಮಯತ್ತೆನದುಯಿರೇ ಮನಮೇ ವಾಕ್ಕೇ ಕರುಮಮೇ,
ಒರುಮಾನೊಡಿಯುಮ್ ಪಿರಿಯಾನ್ ಎನ್ನೂೞಿಮುದಲ್ವನೊರುವನೇ ॥


ಎಂಪೆರುಮಾನರು ಎಲ್ಲದಕ್ಕೂ ಕಾರಣಕರ್ತರಾಗಿರುವರು. ಅವುಗಳು ಕಾಲದ ಅಧೀನದಲ್ಲಿರುವುದು. ನನ್ನನ್ನು ಹೊಂದಲು ಅವರು ಒಂದು ಘಳಿಗೆಯೂ ತಿರುಮಾಲಿರುಂಚೋಲೈ ಬೆಟ್ಟವು , ತಿರುಪ್ಪಾರ್ಕಡಲ್ ,ನನ್ನ ತಲೆಯು , ಅದರಿಂದ ಅಗಲಲಾರರು. ಅದು ಪರಮಪದಮ್ ಅಲ್ಲಿ ಅವರು ಶ್ರೀಯಃಪತಿಯಾಗಿ , ಶ್ರಿಯಾಸಾರ್ದಮ್ ನಲ್ಲಿ ಹೇಳಿರುವ ಹಾಗೆ ಶಾಶ್ವತವಾಗಿ ನೆಲೆಸಿದ್ದಾರೆ. ಉತ್ತೇಜಕವಾದ , ಪೆರಿಯ ತಿರುಮಲೈ , ನನ್ನ ದೇಹವು, ಅಲ್ಲಿ ನನ್ನ ಆತ್ಮವು ಕೈಗೆಟುಕದ ಶ್ರೇಷ್ಠವಾದ ಅದ್ಭುತವಾದ ಪ್ರಕೃತಿಯೊಂದಿಗೆ, ನನ್ನ ಮನಸ್ಸು , ನನ್ನ ಮಾತುಗಳು ಮತ್ತು ನನ್ನ ಕ್ರಿಯೆಯು ಮಿಲನವಾಗಿದೆ. ಎಂತಹ ವಿಶಿಷ್ಠವಾದವನು ಅವನು. ಪ್ರತಿಯೊಂದು ವಾಕ್ಯದ ಅಂತ್ಯದಲ್ಲಿರುವ ‘ಏ’ ಕಾರಮ್ ಅವನಿಗೆ ನನ್ನ ಪ್ರತಿಯೊಂದು ಸಂಗತಿಯೂ ಎಂತಹ ಪ್ರಿಯವಾಗಿದೆ ಎಂದು ಸೂಚಿಸುತ್ತದೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ತಮ್ಮ ದಿವ್ಯ ಹೃದಯಕ್ಕೆ ಹೇಳುತ್ತಾರೆ, “ನಮಗೆ ಎಲ್ಲಾ ರೀತಿಯ ಸಂಪತ್ತೂ ತಿರುಮಲೈನಿಂದ ದೊರಕಿದೆ. ಆದ್ದರಿಂದ ಇಲ್ಲಿಂದ ಹೋಗುವುದು ಬೇಡ.” ಎಂದು ಮತ್ತು ಎಂಪೆರುಮಾನರ ತಮ್ಮನ್ನು ದೇಹ ಸಮೇತವಾಗಿ ತಿರುನಾಡಿಗೆ(ಪರಮಪದಕ್ಕೆ) ಕರೆದೊಯ್ಯಲು ಇರುವ ಆಸೆಯನ್ನು ತಿಳಿದು ಎಂಪೆರುಮಾನರಿಗೆ ಹೇಳುತ್ತಾರೆ, “ನೀನು ಈ ದೇಹವನ್ನು ಇಲ್ಲಿಯೇ ವಿಸರ್ಜಿಸಿ ಅದನ್ನು ತೊರೆದು ನನ್ನನ್ನು ಪರಮಪದಕ್ಕೆ ಕರೆದೊಯ್ಯಬೇಕು” ಎಂದು ಹೇಳುತ್ತಾರೆ.

ಊೞಿ ಮುದಲ್ವನೊರುವನೇ ಎನ್ನುಮ್ ಒರುವನ್ ಉಲಗೆಲ್ಲಾಮ್,
ಊೞಿದೋಱುಮ್ ತನ್ನುಳ್ಳೇ ಪಡೈತ್ತು ಕ್ಕಾತ್ತು ಕ್ಕೆಡುತ್ತುೞಲುಮ್,
ಆೞಿವಣ್ಣನ್ ಎನ್ನಮ್ಮಾನ್ ಅನ್ದಣ್ ತಿರುಮಾಲಿರುಞ್ಜೋಲೈ ,
ವಾೞಿ ಮನಮೇ ಕೈವಿಡೇಲ್ ಉಡಲುಮ್ ಉಯಿರುಮ್ ಮಙ್ಗ ಒಟ್ಟೇ ॥


ಓಹ್! ಹೃದಯವೇ ! ನಮ್ಮ ದೇಹ, ಪ್ರಾಣ ವಾಯು ಮುಂತಾದುವುಗಳು ನಶ್ವರವಾದ ವಸ್ತುಗಳು. ಅವುಗಳನ್ನು ಬಿಟ್ಟು, ಉತ್ಸಾಹ ಭರಿತವಾದ ಸುಂದರ ತಿರುಮಾಲಿರುಂಚೋಲೈಗೆ ಬಂದು ಸೇರಬೇಕು. ಅದು ನನ್ನ ಸ್ವಾಮಿಯ ಸರಿಯಾದ ಸಂಬಂಧ ಹೊಂದಿರುವ ನೆಲೆಯಾಗಿದೆ. ಅವನು ವಿಶಿಷ್ಟವಾದ ಏಕಮೇವ ಕಾರಣನು ಈ ಕಾಲದ ನಿಯಂತ್ರಣದಲ್ಲಿರುವ ಸಮಸ್ತ ಸೃಷ್ಟಿಗೆ. ಅದನ್ನು ‘ಕಾರಣ ವಾಕ್ಯಮ್’ ನಲ್ಲಿ ಹೇಳಿರುವ ಹಾಗೆ ಅವನು ‘ಏಕಮೇವ’ ನಾಗಿರುವನು. ಅವನು ಅಪರಿಮಿತನಾಗಿ, ಎಲ್ಲಾ ಲೋಕಗಳನ್ನು ದೈನಂದಿನ ಸೃಷ್ಟಿಕರ್ತನು, ರಕ್ಷಕನು, ಪೋಷಕನು ಮತ್ತು ನಾಶಮಾಡುವವನು. ಅವನು ತನ್ನ ದಿವ್ಯ ಇಚ್ಛೆಯ ಒಂದು ಸಣ್ಣ ಭಾಗದಿಂದ ಇದನ್ನು ಪೂರೈಸುವನು. ನಿನ್ನ ಆಸೆಯು ತೀರುವವರೆಗೆ ಬಿಡಬೇಡ. ಇಂತಹ ದಿವ್ಯವಾದ ಬೆಟ್ಟಕ್ಕೆ ಶರಣುಹೊಂದಿ ಅನೇಕ ವರ್ಷಗಳ ಕಾಲ ಬದುಕು. ‘ಆೞಿ ವಣ್ಣನ್ ‘ ಎಂದರೆ ‘ಅವನ ದಿವ್ಯ ರೂಪ ಅಪರಿಮಿತವಾಗಿ ಆನಂದಭರಿತವಾದುದು’ ಎಂದು ಅರ್ಥ.

ಹತ್ತನೆಯ ಪಾಸುರಮ್:
ಆಳ್ವಾರರು ಎಂಪೆರುಮಾನರಿಗೆ ಪ್ರಾರ್ಥಿಸಿದರೂ, ಎಂಪೆರುಮಾನರು ಆಳ್ವಾರರ ದೇಹದ ಮೇಲಿನ ಆಸೆಯಿಂದ ಅವರ ಕೋರಿಕೆಯನ್ನು ಒಪ್ಪಲಿಲ್ಲ. ಆದ್ದರಿಂದ ಆಳ್ವಾರರು ಎಂಪೆರುಮಾನರಿಗೆ ಇಪ್ಪತ್ನಾಲ್ಕು ಮೂಲವಸ್ತುಗಳಿಂದ ಮಾಡಿದ ಪ್ರಕೃತಿಯನ್ನು ತಿಳಿಸಿ, ಅದು ತ್ಯಜಿಸಲ್ಪಡುವುದು ಎಂದು ಅದನ್ನು ದಯವಿಟ್ಟು ನಿರ್ಮೂಲನೆ ಮಾಡುವಂತೆ ಏಕೆಂದರೆ ಅದರ ಮೇಲೆ ತನಗೆ ಸ್ವಲ್ಪವೂ ಆಸೆಯಿಲ್ಲದೆ ಇರುವುದರಿಂದ.

ಮಙ್ಗವೊಟ್ಟುನ್ ಮಾಮಾಯೈ ತಿರುಮಾಲಿರುಞ್ಜೋಲೈ ಮೇಯ,
ನಙ್ಗಳ್‍ಕೋನೇ ಯಾನೇ ನೀಯಾಗಿ ಎನ್ನೈ ಅಳಿತ್ತಾನೇ,
ಪೊಙ್ಗೆಮ್ ಪುಲನುಮ್ ಪೊಱಿಯೈನ್ದುಮ್ ಕರುಮೇನ್ದಿರಿಯಮ್ ಐಮ್ಬೂದಮ್,
ಇಙ್ಗು ಇವ್ವುಯಿರೇಯ್ ಪಿರ ಕಿರುತಿ ಮಾನಾಙ್ಗಾರ ಮನಙ್ಗಳೇ ॥


ಓಹ್! ಶಾಶ್ವತವಾಗಿ ತಿರುಮಾಲಿರುಂಚೋಲೈ ಬೆಟ್ಟದಲ್ಲಿ ನೆಲೆಸಿರುವವನೇ! ನನ್ನಂತಹವರಿಗೆ ಸ್ವಾಮಿಯಾಗಿರುವವನೇ! ನಿನಗೂ ನನಗೂ ವ್ಯತ್ಯಾಸವಿಲ್ಲದೇ, ನಾನು ನನ್ನ ರಕ್ಷಕನಿಗೇ ಸಲಹೆ ಕೊಡುವಂತೆ, ದಯವಿಟ್ಟು ಈ ಅದ್ಭುತವಾದ ಪ್ರಕೃತಿಯನ್ನು ಮತ್ತು ಈ ಪ್ರಕೃತಿಯ ಮಾಯೆಯನ್ನು ನನ್ನಿಂದ ದೂರಗೊಳಿಸು. ಅದು ಐದು ರೀತಿಯ ಹೆಚ್ಚುವರಿಯಾಗುವ ಆನಂದವನ್ನು ಕೊಡುವ ಅಂಶಗಳನ್ನು ಒಳಗೊಂಡಿದೆ. ಅವುಗಳು ,ಶಬ್ದ, ಸ್ಪರ್ಶ, ರೂಪ, ರುಚಿ ಮತ್ತು ವಾಸನೆ. ಐದು ರೀತಿಯ ಪಾಶಗಳಾದ , ಜ್ಞಾನೇಂದ್ರಿಯಗಳು ಅವು ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ, ಐದು ಕರ್ಮೇಂದ್ರಿಯಗಳು ಅಂತಹ ಕೆಲಸಕ್ಕೆ ಸಹಾಯ ಮಾಡುವುದು. ಪಂಚಭೂತಗಳು ಅವು ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಅವುಗಳು ನಮ್ಮ ದೇಹದ ಸೃಷ್ಟಿಗೆ ಕಾರಣವಾದುವುಗಳು , ಅವುಗಳು ನಮ್ಮ ಇಂದ್ರಿಯಗಳನ್ನು ಹಿಡಿದುಕೊಂಡಿವೆ. ಮೂಲಭೂತ ಅಂಶಗಳು ನಮ್ಮ ಆತ್ಮವನ್ನು ಈ ಸಂಸಾರದಲ್ಲಿ ಬಿಗಿಯಾಗಿ ಬಂಧಿಸಿವೆ. ‘ಮಹಾನ್’ ಎಂಬುದು ಸೃಷ್ಟಿಗೆ ಪೂರಕವಾಗಿದೆ, ‘ಅಹಂಕಾರ’ ಎಂಬುದು ತರ್ಕಬುದ್ಧಿ ಮತ್ತು ನಾನು ಎಂಬುದರ ಪೂರಕವಾಗಿ ಸಂಕಲ್ಪದ ಕಾರಣವಾಗಿದೆ.

ಹನ್ನೊಂದನೆಯ ಪಾಸುರಮ್:
ಈ ಪದಿಗೆಯಲ್ಲಿ ಮಹತ್ ಮತ್ತು ಅಹಂಕಾರಮ್‍ನನ್ನು ತಿರುಮಲೈನಲ್ಲಿ ನಿಂತು ವಿವರಿಸಲಾಗಿದೆ.

ಮಾನಾಙ್ಗಾರ ಮನಮ್ ಕೆಡ ಐವರ್ ವನ್‍ಕೈಯರ್ ಮಙ್ಗ ,
ತಾನಾಙ್ಗಾರಮಾಯ್ ಪ್ಪುಕ್ಕು ತ್ತಾನೇ ತ್ತಾನೇ ಯಾನಾನೈ,
ತೇನಾಙ್ಗಾರ ಪ್ಪೊೞಿಲ್ ಕುರುಗೂರ್ ಚ್ಚಡಗೋಪನ್ ಶೊಲ್ಲಾಯಿರತ್ತುಳ್,
ಮಾನಾಙ್ಗಾರತ್ತಿವೈಪತ್ತುಮ್ ತಿರುಮಾಲಿರುಞ್ಜೋಲೈ ಮಲೈಕ್ಕೇ ॥


ಶ್ರೇಷ್ಠವಾದ ಅಭಿಮಾನವನ್ನು ಹೊಂದಿರುವ ಎಂಪೆರುಮಾನರು, ಐದು ಇಂದ್ರಿಯಗಳನ್ನು ನಾಶ ಪಡಿಸಿ, ದೇಹದೊಂದಿಗೆ ಮಹಾನ್, ಅಹಂಕಾರಮ್ ಮತ್ತು ಮನಸ್ಸಿನ ಮೂಲಕ ಸಂಪರ್ಕ ಹೊಂದಿ, ನನ್ನೊಳಗೆ ಪ್ರವೇಶಿಸಿ, ನಾನೇ ಮತ್ತು ನನಗೆ ಸಂಬಂಧಿಸಿದ ವಸ್ತುಗಳೇ ಆಗಿದ್ದಾರೆ. ಹೆಮ್ಮೆಯಿಂದ ನಿಂತಿರುವ ತೋಟಗಳಿಂದ ಕೂಡಿದ , ದುಂಬಿಗಳಿಂದ ಆವೃತ್ತವಾದ ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು ಈ ಹತ್ತು ಪಾಸುರಗಳನ್ನು ಸಾವಿರ ಪಾಸುರಗಳೊಂದಿಗೆ ತಿರುಮಾಲಿರುಂಚೋಲೈಗಾಗಿಯೇ ಕರುಣೆಯಿಂದ ಹೇಳಿದ್ದಾರೆ. ಈ ಪದಿಗೆಯು ಮಹತ್ ಮತ್ತು ಅಹಂಕಾರಮ್‍ನ ಎಲ್ಲಾ ತೊಂದರೆಗಳನ್ನೂ ಕೇಂದ್ರೀಕರಿಸಿ ಹೇಳುತ್ತದೆ. ಇದರ ಅರ್ಥ ಈ ಪಾಸುರಗಳನ್ನು ಕಲಿತವರಿಗೆ , ಮಹತ್ ಮತ್ತು ಅಹಂಕಾರಗಳು ಮುಂತಾದ ತೊಂದರೆಗಳು ಸಹಜವಾಗಿ ತೊರೆದು ಹೋಗುತ್ತವೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-7-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org



ತಿರುವಾಯ್ಮೊೞಿ – ಸರಳ ವಿವರಣೆ – 10.1 – ತಾಳತಾಮರೈ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 9.10 – ಮಾಲೈನಣ್ಣಿ


ಆಳ್ವಾರರು ಎಂಪೆರುಮಾನರಿಗಾಗಿ ಶಾಶ್ವತವಾಗಿ ಕೈಂಕರ್‍ಯವನ್ನು ಮಾಡಲು ಬಯಸುತ್ತಾರೆ. ಆದರೆ ಈ ಲೋಕದಲ್ಲಿ ಅದು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ಪರಮಪದವನ್ನು ಏರಿ ,ಆ ಕೈಂಕರ್‍ಯವನ್ನು ಮಾಡಬೇಕೆಂದು ಮನಗಾಣುತ್ತಾರೆ. ಅದಕ್ಕಾಗಿ ತಿರುಮೋಹೂರ್‌ನಲ್ಲಿರುವ ಕಾಳಮೇಗಮ್ ಪೆರುಮಾಳ್ ಒಬ್ಬರೇ ಪರಮಪದಕ್ಕೆ ಸೇರಲು ಇರುವ ತೊಂದರೆಯನ್ನು ನಿವಾರಿಸಲು ಮತ್ತು ಪರಮಪದಕ್ಕೆ ಕರೆದೊಯ್ಯಲು ಸಾಧ್ಯವೆಂದು ಆ ಎಂಪೆರುಮಾನರಿಗೆ ಶರಣಾಗತರಾಗುತ್ತಾರೆ. ಪರಮಪದದ ಪ್ರಯಾಣಕ್ಕೆ ತನ್ನನ್ನು ಜೊತೆಗಾರನಾಗಿ ಪರಿಗಣಿಸಬೇಕೆಂದು ಕೋರುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಮಗೆ ತೊಂದರೆಗಳನ್ನು ನಿವಾರಿಸುವ ಗುಣವಿರುವ ಕಾಳಮೇಗ ಎಂಪೆರುಮಾನರನ್ನು ಬಿಟ್ಟರೆ ಯಾವ ಆಶ್ರಯವೂ ಇಲ್ಲ “

ತಾಳ ತಾಮರೈ ತ್ತಡಮಣಿ ವಯಲ್ ತಿರುಮೋಗೂರ್,
ನಾಳುಮ್ ಮೇವಿ ನನ್ಗಮರ್ನ್ದು ನಿನ್‍ಱು ಅಶುರರೈ ತ್ತಗರ್ಕ್ಕುಮ್,
ತೋಳು ನಾನ್ಗುಡೈ ಚ್ಚುರಿ ಕುೞಲ್ ಕಮಲಕ್ಕಣ್ ಕನಿ ವಾಯ್,
ಕಾಳಮೇಗತ್ತೈ ಯೆನ್‍ಱಿ ಮಱ್ಱೊನ್‍ಱಿಲಮ್ ಗದಿಯೇ ॥

ವೈರಿಗಳಾದ ರಾಕ್ಷಸರನ್ನು ಹತ್ಯೆಗೊಳಿಸಲು ಕಾಳಮೇಗಮ್ ಎಂಪೆರುಮಾನರು ತಿರುಮೋಗೂರ್‌ನಲ್ಲಿ , ಅತೀವ ಆತ್ಮತೃಪ್ತಿಯ ಆನಂದದೊಂದಿಗೆ ,ಬಲವಾಗಿ ನಿಂತು, ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿ ರೈತರ ಗದ್ದೆಗಳು, ಬಲವಾದ ಕಾಂಡಗಳನ್ನು ಹೊಂದಿದ, ತಾವರೆ ಹೂಗಳುಳ್ಳ ಕೆರೆಗಳೊಂದಿಗೆ ಅಲಂಕೃತವಾಗಿದೆ. ಎಂಪೆರುಮಾನರಿಗೆ ನಾಲ್ಕು ದಿವ್ಯ ಕೈಗಳು, ಸುರುಳಿಕೊಂಡಿರುವ ಮುಂಗುರುಳು, ದಟ್ಟವಾದ ಕೂದಲು, ತಾವರೆಯಂತಹ ದಿವ್ಯ ಕಣ್ಣುಗಳು , ಹವಳದಂತಹ ಸ್ನೇಹಭರಿತವಾದ ದಿವ್ಯ ತುಟಿಗಳಿವೆ. ಅಂತಹ ಭವ್ಯವಾದ, ಕಪ್ಪು ಮೇಘದಂತಿರುವ, ನಮಗೆ ನಿರ್ದಿಷ್ಟ ಗುರಿಯಾಗಿರುವ ಎಂಪೆರುಮಾನರನ್ನು ಬಿಟ್ಟು ಬೇರೆ ಯಾವ ಆಶ್ರಯವೂ ನಮಗಿಲ್ಲ.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಉಲ್ಲಾಸಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟು ನಮಗೆ ಬೇರೆ ಯಾವ ಆಶ್ರಯವೂ ಇಲ್ಲ. ಅವರಿಗೆ ದಿವ್ಯ ನಾಮಗಳಿವೆ. ಅವುಗಳ ಆನಂದವು ಭಕ್ತರ ಆಯಾಸವನ್ನು ನಿರ್ಮೂಲನೆ ಮಾಡಿ, ಅವರನ್ನು ಮೇಲೆತ್ತುತ್ತದೆ.”

ಇಲಮ್ ಗದಿ ಮಱ್ಱೊನ್‍ಱು ಎಮ್ಮೈಕ್ಕುಮ್ ಈನ್ ತಣ್ ತುೞಾಯಿನ್,
ಅಲಙ್ಗಲಮ್ ಕಣ್ಣಿ ಆಯಿರಮ್ ಪೇರ್ ಉಡೈ ಅಮ್ಮಾನ್,
ನಲಮ್ ಕೊಳ್ ನಾನ್ಮಱೈ ವಾಣರ್‌ಗಳ್ ವಾೞ್ ತಿರುಮೋಗೂರ್,
ನಲಮ್‍ಕೞಲವನಡಿನಿೞಲ್ ತಡಮನ್‍ಱಿ ಯಾಮೇ ॥


ಕಾಳಮೇಗಮ್ ಎಂಪೆರುಮಾನರು ಸುಂದರವಾದ, ಜೀಕುತ್ತಿರುವ ತಿರುತ್ತುೞಾಯ್ ಹಾರದಿಂದ ಅಲಂಕೃತರಾಗಿದ್ದಾರೆ. ಅದು ಅದರಲ್ಲಿ ಪೋಣಿಸಿದ ಹೂವುಗಳಿಗೆ ತಂಪಾದ ಅನುಭವನ್ನು ಕೊಟ್ಟು ಆನಂದಮಯವನ್ನಾಗಿಸಿದೆ. ಅವರು ಯಾವ ಷರತ್ತುಗಳೂ ಇಲ್ಲದ ಸ್ವಾಮಿಯು , ಆನಂದಭರಿತವಾದ ಅನೇಕ ನಾಮಗಳನ್ನು ಹೊಂದಿದ್ದಾರೆ. ಅವರು ತಿರುಮೋಗೂರ್‌ನಲ್ಲಿ ವಾಸವಾಗಿದ್ದಾರೆ. ಅಲ್ಲಿ ವೇದಗಳಲ್ಲಿ ಪಾರಂಗತ್ಯ ಹೊಂದಿರುವ, ಇತರರಿಗಾಗಿ ಅನುಕಂಪ ತೋರಿಸುವ, ಅವನ ವಿಶಿಷ್ಟವಾದ ರಕ್ಷಿಸುವ ಇತ್ಯಾದಿ ಗುಣಗಳನ್ನು ಆಸ್ವಾದಿಸುವುದರಿಂದ ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸಿಕೊಂಡಿರುವ ಜನರು ವಾಸವಾಗಿದ್ದಾರೆ. ನಮ್ಮ ಎಲ್ಲಾ ಜನ್ಮಗಳಲ್ಲೂ, ನಮಗೆ ಅಲ್ಲಿಯ ಕೆರೆಯ ನೆರಳನ್ನು ಬಿಟ್ಟರೆ ಯಾವ ಗುರಿಯೂ ಇಲ್ಲ. ಬೇರೆ ವಾಕ್ಯದಲ್ಲಿ ಹೇಳುವುದಾದರೆ, ಎಂಪೆರುಮಾನರ ವಿಜಯದ ಕಾಲ್ಗೆಜ್ಜೆಗಳನ್ನು ಹೊಂದಿರುವ ದಿವ್ಯ ಪಾದಗಳು, ಭಕ್ತರಲ್ಲಿ ಭೇದ ಭಾವ ಎಣಿಸದೇ ಅವರಲ್ಲಿಗೆ ಕರೆದೊಯ್ಯುತ್ತದೆ.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾವೆಲ್ಲರೂ ತಿರುಮೋಗೂರ್‌ಗೆ ಹೋಗಿ ಸೇರೋಣ. ಅಲ್ಲಿ ಸರ್ವೇಶ್ವರನು ಎಲ್ಲಾ ಕಲ್ಯಾಣ ಗುಣಗಳನ್ನು ಹೊಂದಿ, ನಿರಂತರವಾಗಿ ವಾಸವಾಗಿದ್ದಾನೆ. ಅವನು ನಮ್ಮ ಎಲ್ಲಾ ಸಂಕಟಗಳನ್ನು ದೂರ ಮಾಡುತ್ತಾನೆ. ಇದನ್ನು ಒಳ್ಳೆಯ ಸಲಹೆಯಾಗಿ ತೆಗೆದುಕೊಳ್ಳಿ.”

ಅನ್‍ಱಿ ಯಾಮ್ ಒರುಪುಗಲಿಡಮ್ ಇಲಮ್ ಎನ್‍ಱೆನ್‍ಱಲಟ್ಱಿ,
ನಿನ್‍ಱು ನಾನ್ಮುಗನ್ ಅರನೊಡು ದೇವರ್ಗಳ್ ನಾಡ
ವೆನ್‍ಱು ಇಮ್ಮೂವುಲಗಳಿತ್ತು ಉೞಲ್ವಾನ್ ತಿರುಮೋಗೂರ್,
ನನ್‍ಱು ನಾಮ್ ಇನಿ ನಣುಗುದುಮ್ ನಮದಿಡರ್ ಕೆಡವೇ ॥

ಎಂಪೆರುಮಾನರನ್ನು ಮತ್ತೆ ಮತ್ತೆ ಕೂಗಿ ಕರೆದು “ ನಿನ್ನನ್ನು ಬಿಟ್ಟರೆ ಬೇರೆ ಯಾವ ಗತಿಯೂ ಇಲ್ಲ “ ಎಂದಾಗ , ಪ್ರತಿಯೊಂದು ಸಲವೂ ದುರ್ಬಲನಾಗುತ್ತಾ, ಅನೇಕ ದೇವತೆಗಳು ಬ್ರಹ್ಮ, ರುದ್ರ ಮುಂತಾದವರು ಆಕಾಶದಲ್ಲಿ ನಿಂತಾಗ, ನಾವು ಎಂಪೆರುಮಾನರನ್ನು ಹೊಂದಲು ಸಮೀಪಿಸಲು ನಾವೆಲ್ಲರೂ ತಿರುಮೋಗೂರಿಗೆ ಹೋಗೋಣ. ಅಲ್ಲಿ ಮೂರು ಪದರದ ವಿಶ್ವದಲ್ಲಿ ವೈರಿಗಳನ್ನು ಜಯಿಸುವ ಒಬ್ಬನ ವಾಸಸ್ಥಾನವಾಗಿದೆ. ಮತ್ತು ಎಲ್ಲರ ರಕ್ಷಣೆಯು ಅವನ ದಿನಚರ್‍ಯವಾಗಿದೆ. ನಮ್ಮ ಮನಸ್ಸಿನ ಸಂಘರ್ಷಗಳನ್ನು ತೆಗೆದು ಹಾಕಲು, ಮತ್ತು ಅನನ್ಯಪ್ರಯೋಜನರಾಗಿ ನಾವು ಅವನನ್ನು ತಲುಪೋಣ.

ನಾಲ್ಕನೆಯ ಪಾಸುರಮ್ :
ಆಳ್ವಾರರು ಶ್ರೀವೈಷ್ಣವರನ್ನು ಆಮಂತ್ರಿಸುತ್ತಾ ಹೇಳುತ್ತಾರೆ, “ ಬನ್ನಿ, ನಾವು ನಮ್ಮ ಕಳವಳಗಳನ್ನು ತೊಡೆದು ಹಾಕಲು ತಿರುಮೋಗೂರಿನ ಎಂಪೆರುಮಾನರಿಗೆ ಶರಣಾಗತರಾಗೋಣ”.

ಇಡರ್‌ಕೆಡ ಎಮ್ಮೈ ಪ್ಪೋನ್ದಳಿಯಾಯ್ ಎನ್‍ಱೆನ್‍ಱೇತ್ತಿ,
ಶುಡರ್‌ಕೊಳ್ ಶೋದಿಯೈ ತ್ತೇವರುಮ್ ಮುನಿವರುಮ್ ತೊಡರ,
ಪಡರ್‌ಕೊಳ್ ಪಾಮ್ಬಣೈ ಪ್ಪಳ್ಳಿಕೊಳ್ವಾನ್ ತಿರುಮೋಗೂರ್,
ಇಡರ್‌ಕೆಡ ಅಡಿ ಪರವುದುಮ್ ತೊಣ್ಡೀರ್ ವಮ್ಮಿನೇ ॥


ಶ್ರೇಷ್ಠವಾದ ಹೊಳೆಯುವ ಪ್ರಕಾಶದ ರೂಪವನ್ನು ಹೊಂದಿರುವ ಎಂಪೆರುಮಾನರು ಕರುಣೆಯಿಂದ ದಿವ್ಯ ಸರ್ಪದ ಮೇಲೆ ಶಯನಿಸಿದ್ದಾರೆ. ಆ ಸರ್ಪವು ಮೃದುವಾಗಿ, ತಂಪಾಗಿ, ಸುಗಂಧಿತವಾಗಿ ಹಾವುಗಳ ಜಾತಿಯ ಸ್ವಭಾವಕ್ಕೆ ತಕ್ಕವನಾಗಿದೆ. ಅದು ಎಂಪೆರುಮಾನರ ಸ್ಪರ್ಶಕ್ಕೆ ತಾಗಿ ಅವರ ಗುಣವಾದ ವಿಸ್ತಾರತೆಯನ್ನು ಹೊಂದಿದೆ. ತಮ್ಮನ್ನೇ ಸ್ವಾಮಿಯೆಂದೂ, ಮುನಿಗಳೆಂದು ತಿಳಿದಿರುವ ದೇವತೆಗಳು ಎಂಪೆರುಮಾನರನ್ನು ನಿರಂತರವಾಗಿ ಹಿಂಬಾಲಿಸಿ, ಶರಣಾಗತರಾಗಿ, ಪದೇಪದೇ ಹೊಗಳಿ ಹೇಳುತ್ತಾರೆ, “ವೈರಿಗಳಿಂದ ಪರಿಣಮಿಸಿದ ದುಃಖಗಳನ್ನು ತೊಡೆದು ಹಾಕಿ ಈ ದಿವ್ಯಕ್ಷೇತ್ರಕ್ಕೆ ಬಂದು ನಮ್ಮನ್ನು ರಕ್ಷಿಸು. “ ಎಂದು. ಅಂತಹ ಎಂಪೆರುಮಾನರು ಈಗ ತಿರುಮೋಗೂರ್ ನಲ್ಲಿದ್ದಾರೆ. ಓಹ್! ಶರಣಾಗತರಾಗಲು ಇಚ್ಛೆಯುಳ್ಳವರೇ ! ಬನ್ನಿ, ಅವನ ದಿವ್ಯ ಪಾದಗಳನ್ನು ಹೊಗಳಿ ಕೊಂಡಾಡೋಣ.

ಐದನೆಯ ಪಾಸುರಮ್ :
ಆಳ್ವರರು ಹೇಳುತ್ತಾರೆ, “ ಎಂಪೆರುಮಾನರು ಕರುಣೆಯಿಂದ ಆಗಮಿಸಿ, ನೆಲೆಸಿರುವ ತಿರುಮೋಗೂರಿಗೆ ಬಂದು ಶರಣಾಗತರಾಗಿ.”

ತೊಣ್ಡೀರ್ ವಮ್ಮಿನ್ ನಮ್ ಶುಡರೊಳಿ ಒರುತನಿಮುದಲ್ವನ್,
ಅಣ್ಡಮೂವುಲಗಳನ್ದವನ್ ಅಣಿ ತಿರುಮೋಗೂರ್,
ಎಣ್ಡಿಶೈಯುಮ್ ಈನ್ ಕರುಮ್ಬೊಡು ಪೆರುಮ್ ಶೆನ್ನೆಲ್ ವಿಳೈಯ,
ಕೊಣ್ಡ ಕೋಯಿಲೈ ವಲಮ್ ಶೆಯ್‍ದು ಇಙ್ಗಾಡುದುಮ್ ಕೂತ್ತೇ ॥

ಓಹ್! ಶರಣಾಗತರಾಗಲು ಇಚ್ಛಿಸುವವರೇ! ಬನ್ನಿ ! ಆನಂದಮಯವಾದ , ಅಪರಿಮಿತವಾಗಿ ಹೊಳೆಯುವ ದಿವ್ಯ ಪ್ರಕಾಶತೆಯುಳ್ಳ ರೂಪವನ್ನು ಹೊಂದಿರುವ ಎಂಪೆರುಮಾನರು, ಮೂರು ರೀತಿಯ ಕಾರಣಕರ್ತೃವಾಗಿದ್ದಾರೆ. ಅವು : ಸಮರ್ಥತೆಯ ಕಾರಣಕರ್ತೃ, ಲೌಕಿಕ ಕಾರಣಕರ್ತೃ, ಮತ್ತು ಪೂರಕ ಕಾರಣಕರ್ತೃ. ಅವರು ಅಂಡಾಕಾರದ ವಿಶ್ವಮಂಡಲದಲ್ಲಿರುವ ಮೂರು ಪದರದ ಲೋಕಗಳನ್ನೆಲ್ಲಾ ಅಳೆದು, ಸ್ವೀಕರಿಸಿದ್ದಾರೆ. ಸಿಹಿಯಾದ ಕಬ್ಬುಗಳಿರುವ , ಎತ್ತರದ ಕೆಂಪಾದ ಭತ್ತದ ಗದ್ದೆಗಳು ಎಲ್ಲಾ ದಿಕ್ಕಿನಲ್ಲಿರುವ ತಿರುಮೋಗೂರಿನ ಗುಡಿಯಲ್ಲಿ ವಾಸಿಸಲು ಒಪ್ಪಿಕೊಂಡಿದ್ದಾರೆ. ಈ ಲೋಕದಲ್ಲಿಯೇ ಇರುವ ಅಂತಹ ದೇವಸ್ಥಾನಕ್ಕೆ ಪ್ರದಕ್ಷಿಣೆಯನ್ನು ಹಾಕಿ, ಅತಿಯಾದ ಪ್ರೇಮದಿಂದ ಹಾಡಿ, ಆಡೋಣ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಎಂಪೆರುಮಾನರಿಗಿಂತಲೂ ನಂಬಿಕೆಗೆ ಅರ್ಹವಾದ, ರಕ್ಷಿಸುವ ದೇವರು ಎಲ್ಲೂ ಇಲ್ಲ. ಆದ್ದರಿಂದ ಅಂತಹ ದಿವ್ಯ ಪಾದಗಳಿಗೆ ಶರಣಾಗತರಾಗೋಣ.”

ಕೂತ್ತನ್ ಕೋವಲನ್ ಕುದಱ್ಱು ವಲ್ ಅಶುರರ್ಗಳ್ ಕೂಟ್ಱಮ್,
ಏತ್ತುಮ್ ನಙ್ಗಟ್ಕುಮ್ ಅಮರರ್ಕ್ಕುಮ್ ಮುನಿವರ್ಕ್ಕುಮ್ ಇನ್ಬನ್,
ವಾಯ್‍ತ್ತ ತಣ್ ಪಣೈ ವಳವಯಲ್ ಶೂೞ್ ತಿರುಮೋಗೂರ್,
ಆತ್ತನ್, ತಾಮರೈ ಅಡಿಯೆನ್‍ಱಿ ಮಱ್ಱಿಲಮ್ ಅರಣೇ ॥


ಎಂಪೆರುಮಾನರಿಗೆ ನೃತ್ಯದಲ್ಲಿ ಪರಿಣಿತರಾಗಿರುವವರಂತೆ ಸುಂದರವಾದ ನಡಿಗೆಯಿದೆ. ತಮ್ಮ ರಕ್ಷಣೆಯ ಅವಶ್ಯಕತೆ ಇರುವವರನ್ನು ಹಿಂಬಾಲಿಸಿ, ರಕ್ಷಿಸುತ್ತಾರೆ. ಅವರು ಕೇಶಿ, ಧೇನುಕ ಮುಂತಾದ ಬಲಶಾಲಿಯಾದ ಅಸುರರಿಗೆ ಮೃತ್ಯು ರೂಪವಾಗಿದ್ದಾರೆ. ಆ ಅಸುರರು ಕಡಿದು ಎಲ್ಲರಿಗೂ ತೊಂದರೆಯನ್ನುಂಟು ಮಾಡಿದ್ದರು. ಎಂಪೆರುಮಾನರನ್ನು ಹೊಗಳಿ, ಕೈಂಕರ್‍ಯವನ್ನು ಬಿಟ್ಟು ಬೇರೆ ಏನೂ ಅಪೇಕ್ಷೆಯಿಲ್ಲದ ನಮಗೆ, ನಿತ್ಯಸೂರಿಗಳಿಗೆ ಮತ್ತು ಮುನಿಗಳಿಗೆ ಅವರು ಆನಂದವನ್ನು ಕೊಡುತ್ತಾರೆ. ನಮಗೆ ಕೊನೆಯವರೆಗೂ ಆನಂದ ಕೊಡಬಲ್ಲ ಅತ್ಯಂತ ನಂಬಿಕೆಗೆ ಅರ್ಹವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟರೆ ಯಾವ ರಕ್ಷಣೆಯೂ ಇಲ್ಲ. ಅವರು ತಣ್ಣಗಿನ ನೀರಿನ ತಾಣಗಳಿಂದ ಮತ್ತು ಸುಂದರವಾದ ತೋಟಗಳಿಂದ ಆವರಿಸಲ್ಪಟ್ಟ ತಿರುಮೋಗೂರಿನಲ್ಲಿ ಭಕ್ತರು ಶರಣಾಗುವುದಕ್ಕಾಗಿಯೇ ನೆಲೆಸಿದ್ದಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ನಾವು ಎಂಪೆರುಮಾನರ ವಾಸಸ್ಥಳವಾದ ತಿರುಮೋಗೂರನ್ನು ಪ್ರವೇಶಿಸುತ್ತಿದ್ದಂತೆ , ನಮ್ಮ ಎಲ್ಲಾ ಸಂಕಷ್ಟಗಳೂ ತಕ್ಷಣ ನಷ್ಟವಾಗುತ್ತದೆ. ಏಕೆಂದರೆ ಎಂಪೆರುಮಾನರು ಎಲ್ಲದಕ್ಕೂ ಕಾರಣವಾದವರು, ಅವರು ನಮ್ಮನ್ನು ರಕ್ಷಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ.”

ಮಱ್ಱಿಲಮ್ ಅರಣ್ ವಾನ್ ಪೆರುಮ್ ಪಾೞ್ ತನಿಮುದಲಾ,
ಶುಱ್ಱುಮ್ ನೀರ್‌ಪಡೈತ್ತು ಅದನ್‍ವೞಿ ತ್ತೊಲ್ ಮುನಿ ಮುದಲಾ,
ಮುಱ್ಱುಮ್ ದೇವರೋಡು ಉಲಗು ಶೆಯ್ವಾನ್ ತಿರುಮೋಗೂರ್,
ಶುಱ್ಱಿ ನಾಮ್ ವಲಮ್ ಶೆಯ್ಯ ನಮ್ ತುಯರ್ ಕೆಡುಮ್ ಕಡಿದೇ ॥

ಎಂಪೆರುಮಾನರಿಗೆ ತಮ್ಮದೇ ಆದ ವಿಶಿಷ್ಟತೆ ಇದೆ. ಅವರು ಪರಮ ಶ್ರೇಷ್ಠತೆ ಹೊಂದಿರುವವರು ಮತ್ತು ಲೌಕಿಕ ಮಾಯೆಯ ಎಲ್ಲಾ ಪರಿಣಾಮಗಳನ್ನು , ಮೂಲಾಧಾರ ವಸ್ತುಗಳನ್ನೂ ಸರದಿಯಂತೆ, ಎಲ್ಲಾ ಕಡೆಗೂ ವ್ಯಾಪಿಸಿರುವ ಸಾಧಾರಣ ನೀರನ್ನೂ ಸೃಷ್ಟಿಸಿರುತ್ತಾರೆ. ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸುವ ಬ್ರಹ್ಮನನ್ನೂ, ಇತರೆ ದೇವತೆಗಳನ್ನೂ ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಾನೆ. ಅಂತಹ ಎಂಪೆರುಮಾನರು ವಾಸಿಸುವ ತಿರುಮೋಗೂರಿನ ಗುಡಿಯನ್ನು ಪ್ರದಕ್ಷಿಣೆ ಮಾಡಿದರೆ, ನಮ್ಮ ಒಂಟಿತನವು ದೂರವಾಗಿ ನಮ್ಮ ಕಷ್ಟಗಳು ನಾಶವಾಗುತ್ತವೆ. ಆದ್ದರಿಂದ ನಮಗೆ ತಿರುಮೋಗೂರಿನ ಎಂಪೆರುಮಾನರನ್ನು ಬಿಟ್ಟರೆ ಬೇರೆ ಯಾವ ರಕ್ಷಣೆಯೂ ಇಲ್ಲ.

ಎಂಟನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಬಲಶಾಲಿಯಾದ ಪರಮಪುರುಷನಾದ ದಶರಥನ ಮಗನಿಗೆ ಶರಣಾದರೆ, ನಮ್ಮ ಶೋಕ , ವ್ಯಸನಗಳೆಲ್ಲವೂ ಪರಿಹಾರವಾಗುತ್ತದೆ.”

ತುಯರ್ ಕೆಡುಮ್ ಕಡಿದಡೈನ್ದುವನ್ದು ಅಡಿಯವರ್ ತೊೞುಮಿನ್,
ಉಯರ್ ಕೊಳ್ ಶೋಲೈ, ಒಣ್ ತಡಮಣಿ ಒಳಿ ತಿರುಮೋಗೂರ್,
ಪೆಯ‍‌ರ್ಗಳಾಯಿರಮುಡೈಯ ವಲ್ ಅರಕ್ಕರ್ ಪುಕ್ಕೞುನ್ದ,
ದಯರದನ್ ಪೆಱ್ಱ ಮರತಕಮಣಿ ತ್ತಡತ್ತಿನೈಯೇ॥


ಎತ್ತರದ ಮರಗಳನ್ನು ಹೊಂದಿರುವ ಮತ್ತು ವಿಶಿಷ್ಟವಾದ ನೀರಿನ ಕೆರೆಗಳಿಂದ ಅಲಂಕೃತವಾದ , ಅದರಿಂದ ಹೊಳೆಯುತ್ತಿರುವ ತಿರುಮೋಗೂರಿನಲ್ಲಿ ನಿಂತಿರುವ ದಶರಥ ಪುತ್ರನಾದ ಎಂಪೆರುಮಾನರು ಎಲ್ಲವನ್ನೂ ಮುಳುಗಿಸಬಲ್ಲ ಕೆರೆಯ ಹಾಗೆ, ಅಮೂಲ್ಯವಾದ ಪಚ್ಚೆಯ ಹರಳಿನ ಬಣ್ಣದಿಂದ ಹೊಳೆಯುತ್ತಿದ್ದಾರೆ. ಅನೇಕ ಬಿರುದುಗಳನ್ನು ಪಡೆದ ಬಲಶಾಲಿಯಾದ ರಾಕ್ಷಸರನ್ನು ಅದರಲ್ಲಿ ಮುಳುಗಿಸಲು ಸಮರ್ಥರಾಗಿದ್ದಾರೆ. ಶ್ರೀ ರಾಮಾಯಣಮ್‍ನ ಕಿಶ್ಕಿಂಧಾ ಕಾಂಡಮ್ 4.12 ನಲ್ಲಿ ಹೇಳಿರುವ ಹಾಗೆ, ‘ಗುಣೈರ್ದಾಸ್ಯಮ್ ಉಪಾಗತಃ’ ನೀವೆಲ್ಲರೂ ಇಲ್ಲಿಗೆ ಬಂದು ಅವನನ್ನು ಪೂಜಿಸಿ. ನಿಮ್ಮ ವ್ಯಸನಗಳೆಲ್ಲವೂ ನಿಮ್ಮ ಪ್ರಯತ್ನವಿಲ್ಲದೇ ನಾಶವಾಗುವುದು. ಮರತಗ ಮಣಿಯ ಉದಾಹರಣೆಗೆ ಅರ್ಥವೇನೆಂದರೆ, ಮರತಗ ಮಣಿಯು ವಿಷವನ್ನು ನಿರ್ಮೂಲನೆ ಮಾಡುವುದರ ಜೊತಗೆ ಒಂದು ಒಡವೆಯ (ನಗದ) ರೂಪದಲ್ಲೂ ಧರಿಸುತ್ತಾರೆ. ಹಾಗೆಯೇ ಎಂಪೆರುಮಾನರು ವೈರಿಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ , ಭಕ್ತರಿಗೆ ಆಶ್ರಯವಾಗಿಯೂ ಇರುತ್ತಾರೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ತಮ್ಮ ರಕ್ಷಣೆಗಾಗಿ ತಿರುಮೋಗೂರಿಗೆ ಬಂದಿದ್ದರಿಂದ ಆದ ಪ್ರಯೋಜನವನ್ನು ಇಲ್ಲಿ ಹೇಳಿದ್ದಾರೆ.

ಮಣಿ ತ್ತಡತ್ತಡಿ ಮಲರ್ ಕಣ್‍ಗಳ್ ಪವಳ ಚ್ಚೆವ್ವಾಯ್,
ಅಣಿಕ್ಕೊಳ್ ನಾಲ್ ತಡನ್ದೋಳ್ ದೆಯ್‍ವಮ್ ಅಶುರರೈ ಎನ್‍ಱುಮ್,
ತುಣಿಕ್ಕುಮ್ ವಲ್ಲರಟ್ಟನ್ ಉಱೈ ಪೊೞಿಲ್ ತಿರುಮೋಗೂರ್,
ನಣಿತ್ತು ನಮ್ಮುಡೈ ನಲ್ಲರಣ್ ನಾಮ್ ಅಡೈನ್ದನಮೇ ॥

ಕಾಳಮೇಗ ಎಂಪೆರುಮಾನರ ದಿವ್ಯ ರೂಪವು ಸ್ವಚ್ಛವಾದ ನೀರಿನ ಕೊಳದಂತಿರುವ. ದಿವ್ಯ ಪಾದಗಳನ್ನು ಹೊಂದಿದ್ದಾರೆ. ಈಗ ತಾನೇ ಅರಳಿರುವ ಹೊಸ ತಾವರೆಯ ಹೂವಿನಂತಹ ದಿವ್ಯ ಕಣ್ಣುಗಳಿವೆ. ಕೆಂಪಾದ ಹವಳದಂತಿರುವ ದಿವ್ಯ ತುಟಿಗಳು , ನಾಲ್ಕು ದೊಡ್ಡ ದಿವ್ಯ ತೋಳುಗಳು, ಅವುಗಳನ್ನು ಎಲ್ಲಾ ರೀತಿಯ ಆಭರಣಗಳನ್ನು ಹಾಕಿ ಅಲಂಕರಿಸಲು ಯೋಗ್ಯವಾಗಿದೆ. ಅವರು ಬಹಳ ಹೆಮ್ಮೆಯಿಂದ, ಬಲಶಾಲಿಯಾಗಿದ್ದು, ರಾಕ್ಷಸರನ್ನು ಕತ್ತರಿಸುವರು. ಅಂತಹ ಎಂಪೆರುಮಾನರು ಆನಂದಮಯವಾದ ತೋಟಗಳನ್ನು ಹೊಂದಿರುವ ತಿರುಮೋಗೂರಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಂತಹ ತಿರುಮೋಗೂರ್ ವಿಶಿಷ್ಟವಾದ ರಕ್ಷಣೆಯನ್ನು ನೀಡುವ ನೆಲೆಯಾಗಿದ್ದು, ಈಗ ಬಹಳ ಹತ್ತಿರದಲ್ಲಿದೆ. ನಾವು ಇಲ್ಲಿಗೆ ಬಂದು ತಲುಪಿದ್ದೇವೆ.

ಹತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ (ಅಗಾಧ ಜನಸಮೂಹಕ್ಕೆ) “ಓಹ್! ನನಗೆ ಸಂಬಂಧಿಸಿರುವ ಜನಗಳೇ! ಸರ್ವರಕ್ಷಕನು ಕರುಣೆಯಿಂದ ನೆಲೆಸಿರುವ ತಿರುಮೋಗೂರಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಿ. ಅದನ್ನು ಹೊಗಳಿ, ಜ್ಞಾಪಿಸಿಕೊಳ್ಳಿ.”

ನಾಮ್ ಅಡೈನ್ದ ನಲ್ಲರಣ್ ನಮಕ್ಕೆನ್‍ಱು ನಲ್‍ ಅಮರರ್,
ತೀಮೈ ಶೆಯ್ಯುಮ್ ವಲ್ ಅಶುರರೈ ಅಞ್ಜಿ ಚ್ಚೆನ್‍ಱಡೈನ್ದಾಲ್,
ಕಾಮರೂಪಮ್‍ಕೊಣ್ಡು ಎೞುನ್ದಳಿಪ್ಪಾನ್ ತಿರುಮೋಗೂರ್,
ನಾಮಮೇ ನವಿನ್‍ಱೆಣ್ಣುಮಿನ್ ಏತ್ತುಮಿನ್ ನಮರ್ಗಾಳ್ ॥


ತಿರುಮೋಗೂರಿನ ಮಹತ್ವದ ಬಗ್ಗೆ ತಿಳಿದ ದೇವತೆಗಳು, ಅಸುರರಿಂದ ಭಯಭೀತರಾದರು. ಅಸುರರು ಕೆಟ್ಟ ಕೃತ್ಯದಲ್ಲಿ ಪಾಲ್ಗೊಂಡು , ನಂತರ ಎಂಪೆರುಮಾನರಲ್ಲಿ ಆಶ್ರಯ ಪಡೆದರೆ, ‘ಎಂಪೆರುಮಾನರು ನಮಗಾಗಿ ಪ್ರತ್ಯೇಕ ಮತ್ತು ವಿಶಿಷ್ಟ ರಕ್ಷಕ , ಅವನಿಗೆ ನಾವು ಶರಣು ಹೊಂದುತ್ತೇವೆ’ ಎಂದು ಹೇಳಿದರೆ, ಅವನು ಸಡಗರದಿಂದ , ಅವರಿಗೆ ಸರಿಯಾದ , ಅವರು ಆಸೆಪಟ್ಟ ರೀತಿಯಲ್ಲಿ ಅವರನ್ನು ಕಾಪಾಡುತ್ತಾನೆ. ಓಹ್ ಜನಗಳೇ! ಪ್ರಸಿದ್ಧವಾದ ತಿರುಮೋಗೂರಿನ ಬಗ್ಗೆ ಮಾತನಾಡಿ ಮತ್ತು ಯೋಚಿಸಿ.. ಅದು ಅಂತಹ ವಿಶಿಷ್ಟವಾದ ಎಂಪೆರುಮಾನರ ವಾಸಸ್ಥಳವಾಗಿದೆ. ಅದನ್ನು ಪ್ರೀತಿಯಿಂದ ಹೊಗಳಿ.
ಕಾಮ ರೂಪಮ್ ಎಂಬುದು ದೇವತೆಗಳಿಗೆ ಅಮೃತವನ್ನು ಕೊಡಲು ಎಂಪೆರುಮಾನರು ಧರಿಸಿದ ಸ್ತ್ರೀ ರೂಪವಾದ ಮೋಹಿನಿ ಅವತಾರವೆಂದೂ ಆಗುತ್ತದೆ.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ತಿರುಮೋಗೂರಿಗೆ ಸಮರ್ಪಿತವಾದ ಈ ಪದಿಗೆಯನ್ನು ಮೆಚ್ಚಿ ಹಾಡುತ್ತಾರೋ, ಅವರ ಎಲ್ಲಾ ದುಃಖಗಳೂ ದೂರವಾಗುತ್ತದೆ.”

ಏತ್ತುಮಿನ್ ನಮರ್ಗಾಳ್ ಎನ್‍ಱು ತಾನ್ ಕುಡಮಾಡು,
ಕೂತ್ತನೈ , ಕುರುಗೂರ್ ಚ್ಚಡಗೋಪನ್ ಕುಱ್ಱೇವಲ್‍ಗಳ್,
ವಾಯ್‍ತ್ತ ಆಯಿರತ್ತುಳ್ ಇವೈ ವಣ್ ತಿರುಮೋಗೂರ್‌ಕ್ಕು,
ಈತ್ತ ಪತ್ತಿವೈ ಏತ್ತವಲ್ಲಾರ್ಕ್ಕು ಇಡರ್ ಕೆಡುಮೇ ॥

ನಮ್ಮಾಳ್ವಾರರು ಆಳ್ವಾರ್ ತಿರುನಗರಿಗೆ ನಾಯಕರಾದವರು. ಅವರು ಸಾವಿರ ಪಾಸುರಗಳನ್ನು ನೃತ್ಯಗಾರನಿಗೆ ಗುಪ್ತ ಸೇವೆಯ ಮೂಲಕ ಸಮರ್ಪಿಸಿದರು. ಆ ನೃತ್ಯಗಾರನು “ಯಾರು ನನಗೆ ಸಂಬಂಧಿಸಿದವರೋ ಅವರು ನನ್ನನ್ನು ಹೊಗಳಿ” ಎಂದು ಮಡಿಕೆಗಳ ಜೊತೆಗೆ ನರ್ತಿಸಿದರು. ಆ ಸಾವಿರ ಪಾಸುರಗಳಲ್ಲಿ ಈ ಹತ್ತು ಪಾಸುರಗಳನ್ನು ವಿಶಿಷ್ಟವಾದ ತಿರುಮೋಗೂರಿಗೆ ಅರ್ಪಿಸಲಾಗಿದೆ. ಯಾರು ಈ ಹತ್ತು ಪಾಸುರಗಳನ್ನು ಪ್ರೀತಿಯಿಂದ ಹಾಡುತ್ತಾರೋ, ಅವರ ಕಷ್ಟಗಳು ನಿರ್ಮೂಲನೆಯಾಗುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-1-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 8.10 – ನೆಡುಮಾಱ್ಕು


ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ ಹೇಳಿದ್ದರು. ಈ ಬಗ್ಗೆ ಯೋಚಿಸುವಾಗ ಆಳ್ವಾರರು ಈ ಪದಿಗೆಯಲ್ಲಿ ಸಂತೋಷವಾಗಿ ಹಾಡಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಸಂಕ್ಷಿಪ್ತವಾಗಿ ಶರಣಾಗತಿಯನ್ನು ಈ ಪಾಸುರದಲ್ಲಿ ವಿವರಿಸಿದ್ದಾರೆ. “ ನಿಮ್ಮ ಎಲ್ಲಾ ದುಃಖಗಳನ್ನು ದೂರಮಾಡಲು ಕರುಣೆಯಿಂದ ತಿರುಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತಿಯನ್ನು ಮಾಡಿ”.

ಮಾಲೈ ನಣ್ಣಿ ತ್ತೊೞುದೆೞುಮಿನೋ ವಿನೈಕೆಡ
ಕಾಲೈ ಮಾಲೈ ಕಮಲಮಲರಿಟ್ಟು ನೀರ್,
ವೇಲೈ ಮೋದುಮ್ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು,
ಆಲಿನ್ಮೇಲಾಲ್ ಅಮರ್ನ್ದಾನ್ ಅಡಿಯಿಣೈಗಳೇ ॥


ಎಂಪೆರುಮಾನರು ವಟತಳಶಾಯಿಯಾಗಿ ಇಡೀ ವಿಶ್ವವನ್ನೇ ರಕ್ಷಿಸುತ್ತಿದ್ದಾರೆ. ಏರುತ್ತಿರುವ ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರಮ್ ನಲ್ಲಿ ಅಗದಿತಗಟನಾ ಸಾಮರ್ಥ್ಯಮ್ ಹೊಂದಿರುವ ಎಂಪೆರುಮಾನರು ವಾಸವಾಗಿದ್ದಾರೆ. ಅಂತಹ ಎಂಪೆರುಮಾನರ ದಿವ್ಯ ಪಾದಗಳಿಗೆ ವಿಶಿಷ್ಟವಾದ ಕಮಲದ ಹೂಗಳಿಂದ, ಹಗಲು ರಾತ್ರಿಯೆಂದು ವ್ಯತ್ಯಾಸವಿಲ್ಲದೆ ಅರ್ಪಿಸುವವರ , ಆನಂದವನ್ನು ಹೊಂದಲು ಅಡ್ಡಿಯಾಗುವ ಸಂಕಟವು ಬಗೆಹರಿದು , ಅವರು ಮೇಲಕ್ಕೆ ಭಗವಂತನಿಂದ ಎತ್ತಲ್ಪಟ್ಟು ‘ಬದ್ಧಾಂಜಲಿಪುಟಾಃ’ ಎನ್ನುವಂತೆ ಅವನ ಸೇವೆಗೆ ಸರಿಸಾಟಿಯಾದ ಕಾರ್ಯದಲ್ಲಿ ಮುಳುಗುತ್ತಾರೆ.
ಆಲಿಲ್ ಮೇಲಾಲ್ – ಅಂದರೆ ಎಲೆಯ ಮೇಲ್ಭಾಗದಲ್ಲಿ , ಆಲ್ – ಎಂದರೆ ಇಲ್ಲಿ ಶಬ್ದ ಎಂದು ಮಾತ್ರ ಅರ್ಥ .

ಎರಡನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಸಾಕಷ್ಟು ಸುರಕ್ಷಿತವಾದ ತಿರುಕಣ್ಣಪುರವನ್ನು ನೆನೆದು ಸಮಾಧಾನವನ್ನು ಹೊಂದು. ‘ ದಿವ್ಯ ಪಾದಗಳಿಗೆ ಎಂತಹ ಆಪತ್ತು, ವಿಪತ್ತು ಬರುವುದೋ ಏಕೆಂದರೆ , ಲೌಕಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವವರು ಆ ಪಾದಗಳಿಗೆ ಶರಣು ಹೊಂದುತ್ತಾರೆ’. ಬದಲಾಗಿ ಅಂತಹ ಪಾದಗಳಿಗೆ ಏನೂ ಚಿಂತೆಯ ಭಾರವಿಲ್ಲದೇ ಶರಣಾಗು.” ಎಂದು.

ಕಳ್ಳವಿೞುಮ್ ಮಲರಿಟ್ಟು ನೀರಿಱೈಞ್ಜುಮಿನ್,
ನಳ್ಳಿ ಶೇರುಮ್ ವಯಲ್ ಶೂೞ್ ಕಿಡಙ್ಗಿನ್ ಪುಡೈ,
ವೆಳ್ಳಿಯೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ಉಳ್ಳಿ, ನಾಳುಮ್ ತೊೞುದೆೞುಮಿನೋ ತೊಣ್ಡರೇ ॥


ನಿನಗೆ ಆನಂದಿಸಬೇಕೆಂದು ಆಸೆಯಿದ್ದರೆ, ಜೇನು ತುಂಬಿರುವ ಹೂಗಳಿಂದ ಭಗವಂತನನ್ನು ಪೂಜಿಸು. ತಿರುಕ್ಕಣ್ಣಪುರಮ್ ಸುತ್ತಲೂ ಭದ್ರವಾದ ಬೆಳ್ಳಿಯ ಬಣ್ಣದ ಕೋಟೆಯಿಂದ ಆವೃತ್ತವಾಗಿದೆ. ಆ ಕೋಟೆಯು ಮತ್ತೆ ಕಂದರಗಳಿಂದ ಆವೃತ್ತವಾಗಿದೆ. ಆ ಕಂದರಗಳು ಮತ್ತೆ ಹೆಣ್ಣು ವೃಶ್ಚಿಕಗಳಿಂದ ತುಂಬಿರುವ ಗದ್ದೆಗಳಿಂದ ಆವೃತ್ತವಾಗಿದೆ. ಅವನ ಅನುಭವ ಪಡೆಯುವುದರಿಂದ ಸಿಗುವ ಆನಂದವನ್ನು ವ್ಯಕ್ತಪಡಿಸಲು ಜೋರಾಗಿ ಶಬ್ದಗಳಿಂದ ಹಾಡಿ ಅವನನ್ನು ಪೂಜಿಸು.
ಇರೈಞ್ಜುಮಿನ್ – ಇದರೊಂದಿಗೆ ‘ಅಡಿ ಇಣೈ’ ನನ್ನೂ ಹಿಂದಿನ ಪಾಸುರದಿಂದ ಸೇರಿಸಿ ಹೇಳಬೇಕು. ಅಂದರೆ ಪರಮಪದ ಎಂದು ಅರ್ಥ.
ವೆಳ್ಳಿ ಏಯ್‍ನ್ದ – ಶುಕ್ರ ಗ್ರಹದವರೆಗೂ ಏರುವ ಎಂದು ಅರ್ಥ. ಅದು ಬೆಳ್ಳಿಯ ಬಣ್ಣದ ಕೋಟೆಯೂ ಆಗಿರಬಹುದು.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಓಹ್! ಆಸೆಯುಳ್ಳವರೇ! ಅನನ್ಯಪ್ರಯೋಜನರಾಗಿ (ಕೈಂಕರ್‍ಯಕ್ಕೆ ಹೊರತಾಗಿ ಏನನ್ನೂ ಅಪೇಕ್ಷೆ ಪಡದೆ), ಆಧ್ಯಾತ್ಮದ ಮತ್ತು ಲೌಕಿಕ ವಿಷಯಗಳಿಗೆ ನಾಯಕನಾದ, ಮತ್ತು ಕರುಣೆಯಿಂದ ತಿರುಕ್ಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತರಾಗಿ , ನಿಮ್ಮ ದುಃಖಗಳನ್ನು ದೂರಮಾಡಿಕೊಳ್ಳಿ. “

ತೊಣ್ಡರ್ ನುಮ್ ತಮ್ ತುಯರ್ ಪೋಗ ನೀರ್ ಏಕಮಾಯ್,
ವಿಣ್ಡು ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಣ್ಡು ಪಾಡುಮ್ , ಪೊೞಿಲ್ ಶೂೞ್ ತಿರುಕ್ಕಣ್ಣಪುರತ್ತು,
ಅಣ್ಡ ವಾಣನ್, ಅಮರರ್ ಪೆರುಮಾನೈಯೇ ॥


ಎಂಪೆರುಮಾನರು ನಿತ್ಯಸೂರಿಗಳಿಂದ ದಿನವೂ ಆನಂದಿಸಲ್ಪಡುವವರು ಮತ್ತು ಅವರು ಪರಮಪದದಲ್ಲಿ ವಾಸವಾಗಿರುವರು. ಅವರು ಈಗ ಆನಂದದಿಂದ ಝೇಂಕರಿಸುವ ದುಂಬಿಗಳಿಂದ ತುಂಬಿರುವ ತೋಟಗಳಿಂದ ಆವೃತ್ತವಾದ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವರು. ಓಹ್! ನೀವು ಎಲ್ಲಾ ಕೈಂಕರ್‍ಯ ಪರರಾಗಿರುವವರು, ಈಗ ತಾನೇ ಅರಳಬೇಕಾಗಿರುವ ಪುಷ್ಪಗಳಿಂದ ಪೂಜಿಸಿ , ಅವನನ್ನು ಆನಂದಿಸಲಾರದ ದುಃಖದಿಂದ ಪರಿಹಾರ ಹೊಂದಿ , ಎಲ್ಲರೂ ಒಂದೇ ಗುರಿಯನ್ನು ಹೊಂದಿ, ನಿಮ್ಮ ನಿಮ್ಮ ‘ಶೇಷತ್ವಮ್‍’ ಗೆ ಸರಿಹೊಂದುವಂತೆ ಅವನನ್ನು ಪೂಜಿಸಿ.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರನ್ನು ನಪ್ಪಿನ್ನೈ ಪಿರಾಟ್ಟಿಯ ಪುರುಷಕಾರಮ್ (ಶಿಫಾರಸ್ಸು) ನಿಂದ ಸಮೀಪಿಸಿ.”
ಮಾನೈ ನೋಕ್ಕಿ ಮಡಪ್ಪಿನ್ನೈತನ್ ಕೇಳ್ವನೈ,
ತೇನೈ ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಾನೈಯುನ್ದು ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ತಾನ್ ನಯನ್ದ ಪೆರುಮಾನ್ ಶರಣಾಗುಮೇ ॥


ಎಂಪೆರುಮಾನರನ್ನು ಎಲ್ಲರೂ ಹೊಸ ಹೂವುಗಳಿಂದ ಪೂಜಿಸಿ, ಅವರು ನಪ್ಪಿನ್ನೈ ಪಿರಾಟ್ಟಿಯ ಪ್ರಿಯವಾದ ನಾಯಕರು. ಅವರು ಎಲ್ಲಾ ಗುಣಗಳಲ್ಲೂ ಪರಿಪೂರ್ಣರು. ಜಿಂಕೆಯನ್ನೂ ನಾಚಿಸುವಂತಹ ಕಣ್ಣುಗಳನ್ನು ಹೊಂದಿದ್ದಾರೆ. ಸರ್ವೇಶ್ವರನು ಆಶ್ರಯದಾತನು ನಿಮ್ಮ ಪೂಜೆಯನ್ನು ಯಾವಾಗಲೂ ಸ್ವೀಕರಿಸುವನು. ಬೃಹದಾಕಾರವಾಗಿರುವ ಆಕಾಶಕ್ಕೆ ಚಾಚಿಕೊಂಡ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರದಲ್ಲಿ ಅವನು ತನ್ನ ಇಚ್ಛೆಯಿಂದಲೇ ನಿಂತಿದ್ದಾನೆ.
ಇಲ್ಲಿ ‘ತೇನೈ ವಾಡಾ ಮಲರ್’ ಎಂದರೆ ಯಾವಾಗಲೂ ಜೇನನ್ನು ಸೂಸುವ, ಬಾಡದ ಹೂವು ಎಂದು ಅರ್ಥ.

ಐದನೆಯ ಪಾಸುರಮ್ :
ಆಳ್ವಾರರು ಹೇಗೆ ಎಂಪೆರುಮಾನರು ಕರುಣೆಯಿಂದ ಭಕ್ತಿಯೋಗದಿಂದ ಶರಣಾಗತಿಯಾಗಲು ಆಗದಿರುವ ಭಕ್ತರಿಗೂ ಮುಕ್ತಿಯನ್ನು ಕೊಡುತ್ತಾರೆ ಮತ್ತು ಅವರಿಗೆ ತನ್ನ ದಿವ್ಯ ಪಾದಗಳನ್ನು ಉಪಾಯವಾಗಿ (ದಾರಿಯಾಗಿ) ಹಿಡಿದುಕೊಳ್ಳಲು ನೀಡುತ್ತಾರೆ ಎಂಬುದನ್ನು ಕರುಣೆಯಿಂದ ವಿವರಿಸಿದ್ದಾರೆ.
ಶರಣಮಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಮರಣಮಾನಾಲ್ ವೈಕುನ್ದಮ್ ಕೊಡುಕ್ಕುಮ್ ಪಿರಾನ್,
ಅರಣಮೈನ್ದ ಮದಿಳ್ ಶೂೞ್ ತಿರುಕ್ಕಣ್ಣಪುರ ,
ತ್ತರಣಿಯಾಳನ್ , ತನದನ್ಬರ್ಕ್ಕು ಅನ್ಬಾಗುಮೇ ॥


ತಮ್ಮ ಕೊನೆಯ ಕ್ಷಣಗಳಲ್ಲಿ ಅವನ ದಿವ್ಯ ಪಾದಗಳಿಗೆ ಪ್ರಪತ್ತಿ (ಶರಣಾಗತಿ) ಯನ್ನು ಮಾಡಿದವರಿಗೆ ಶ್ರೇಷ್ಠ ಆಶ್ರಯದಾತನಾಗಿ, ಅವರಿಗೆ ಉಪಾಯವೂ ತಾನೇ ಆಗಿ, ಪರಮಪದದ ವಾಸಸ್ಥಾನಕ್ಕೆ , ಎಲ್ಲಿಂದ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲವೊ ಅಲ್ಲಿಗೆ ಕರೆದೊಯ್ಯುತ್ತಾನೆ. ಅಂತಹ ಎಂಪೆರುಮಾನರು ಭದ್ರವಾದ ಕೋಟೆಯಿಂದ ಸುರಕ್ಷಿತವಾದ ತಿರುಕ್ಕಣ್ಣಪುರದಲ್ಲಿ ಭೂಮಿಯನ್ನು ರಕ್ಷಿಸಲು ನಿಂತಿದ್ದಾರೆ. ಯಾರಿಗೆ ಅಂತಹ ಎಂಪೆರುಮಾನರ ದಿವ್ಯ ಪಾದಗಳ ಮೇಲೆ ಪ್ರೇಮವಿದೆಯೋ, ಅವರ ಬಗ್ಗೆಯೂ ಎಂಪೆರುಮಾನರು ಪ್ರೇಮದ ಚಿಹ್ನೆಯಾಗುತ್ತಾರೆ. ಅವರಿಗೆ ತಮ್ಮ ದಿವ್ಯ ಪಾದಗಳನ್ನೇ ಆಸರೆಯಾಗಿ, ಮಾಧ್ಯಮವಾಗಿ ನೀಡುತ್ತಾರೆ.
ಶರಣಮ್ ಆಗುಮ್ ತನತ್ತಾಳ್ – ದಿವ್ಯ ಪಾದಗಳು ತಾವೇ ಉಪಾಯವಾಗುವುದು (ಮಾಧ್ಯಮವಾಗುವುದು).
ತರಣಿಯಾಳನ್ – ಶ್ರೀ ಭೂಮಿ ಪಿರಾಟ್ಟಿಯ ಪ್ರಿಯನಾದ ಪತಿ.

ಆರನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರು ತಮ್ಮನ್ನು ಶರಣಾಗತಿಯಾದವರ ತೊಂದರೆಗಳನ್ನು ನಿವಾರಿಸಿ , ಅವರ ಬಗ್ಗೆ ಅಕ್ಕರೆಯನ್ನು ಹೊಂದುತ್ತಾರೆ.”
ಅನ್ಬನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಶೆಮ್ಬೊನ್ ಆಗತ್ತು ಅವುಣನ್ ಉಡಲ್ ಕೀಣ್ಡವನ್,
ನನ್‍ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು
ಅನ್ಬನ್, ನಾಳುಮ್ ತನಮೆಯ್ಯರ್ಕ್ಕು ಮೆಯ್ಯನೇ ॥


ಎಂಪೆರುಮಾನರು ತಮ್ಮ ದಿವ್ಯ ಪಾದಗಳನ್ನು ಶರಣಾದವರ ಮೇಲೆ ತಾವು ಅಮಿತ ವಾತ್ಸಲ್ಯಕಾರಕರಾಗಿ ಅಪ್ಪಟ ಚಿನ್ನದಿಂದ ಕಟ್ಟಿದ ಕೋಟೆಯಲ್ಲಿರುವ ತಿರುಕ್ಕಣ್ಣಪುರದಲ್ಲಿ ತಮ್ಮ ಇಚ್ಛಾನುಸಾರವಾಗಿ ವಾಸವಾಗಿದ್ದಾರೆ. ಅವರು ಪ್ರಯತ್ನವೇ ಮಾಡದೇ , ರಾಕ್ಷಸನಾದ ಕೆಂಪಾದ ಚಿನ್ನದಂತೆ ಬಣ್ಣವನ್ನು ಹೊಂದಿದ್ದ ಹಿರಣ್ಯನ ದೇಹವನ್ನು ಬಗೆದಿದ್ದಾರೆ. ಯಾರು ಎಂಪೆರುಮಾನರನ್ನೇ ಅಂತಿಮ ಗುರಿಯಾಗಿ ನೆನೆಯುತ್ತಾರೋ, ಅವರನ್ನು ಎಂಪೆರುಮಾನರು ತಮ್ಮ ಅಂತಿಮ ಗುರಿಯಾಗಿ ಪರಿಗಣಿಸುತ್ತಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಅನನ್ಯಪ್ರಯೋಜನರಿಗೆ (ಕೈಂಕರ್‍ಯವನ್ನು ಹೊರತು ಏನನ್ನೂ ಅಪೇಕ್ಷಿಸದವರಿಗೆ) ಎಂಪೆರುಮಾನರು ಸುಲಭವಾಗಿ ದೊರಕುತ್ತಾರೆ. ಆದರೆ ಪ್ರಯೋಜನಾಂತರಪರರಿಗೆ (ಬೇರೆ ಪ್ರಯೋಜನವನ್ನು ಅಪೇಕ್ಷಿಸುವವರಿಗೆ), ಅವರ ಆಸೆಗಳನ್ನು ಪೂರೈಸಿ, ಅವರಿಂದ ದೂರವೇ ಉಳಿದುಬಿಡುತ್ತಾರೆ.”

ಮೆಯ್ಯನಾಗುಮ್ ವಿರುಮ್ಬಿ ತ್ತೊೞುವಾರ್ಕ್ಕೆಲ್ಲಾಮ್,
ಪೊಯ್ಯನಾಗುಮ್ ಪುಱಮೇ ತೊೞುವಾರ್ಕ್ಕೆಲ್ಲಾಮ್,
ಶೆಯ್ಯಿಲ್ ವಾಳೈ ಉಗಳುಮ್ ತಿರುಕ್ಕಣ್ಣಪುರತ್ತು
ಐಯನ್, ಆಗತ್ತಣೈಪ್ಪಾರ್ಗಟ್ಕು ಅಣಿಯನೇ ॥


ಯಾರು ಎಂಪೆರುಮಾನರಿಗೆ ಅವನನ್ನೇ ಅಂತಿಮ ಗುರಿಯನ್ನಾಗಿ ತಿಳಿದು ಶರಣು ಹೊಂದುತ್ತಾರೋ, ಅವರಿಗೆ ಎಂಪೆರುಮಾನರು ಅಂತಿಮ ಗುರಿಯಾಗಿ ತಮ್ಮ ಹೊಳೆಯುವ ರೂಪವನ್ನು ತಾವೇ ಸ್ಥಾಪಿಸುತ್ತಾರೆ. ಅವರನ್ನು ಬಿಟ್ಟು ಬೇರೆ ಪ್ರಯೋಜನಗಳಿಗಾಗಿ ಶರಣಾಗತರಾಗುತ್ತಾರೋ, ಅವರಿಗೆ ಆ ವರಗಳನ್ನು ಕೊಟ್ಟು ತಮ್ಮನ್ನು ತಾವು ಅವರಿಂದ ಮರೆ ಮಾಚಿಕೊಳ್ಳುತ್ತಾರೆ. ತಮ್ಮ ಹೃದಯದಲ್ಲಿ ಯಾರು ಅವನನ್ನು ದಾರಿಯಾಗಿ ನೆನೆಯುತ್ತಾರೋ, ಅವರಿಗೆ ಮತ್ತು ಸ್ವಾಭಾವಿಕವಾಗಿ ತಮ್ಮೊಂದಿಗೆ ಸಂಬಂಧವನ್ನು ಹೊಂದಿರುವ ಎರಡೂ ಪಂಗಡದ ವ್ಯಕ್ತಿಗಳಿಗೆ ಅವರು ವಿಶೇಷವಾಗಿ ಸುಲಭವಾಗಿ ಸಿಗುವ , ವಾಳೈ ಮೀನುಗಳು ಸಹಜವಾಗಿ ವಾಸಿಸುವ ಗದ್ದೆಗಳನ್ನು ಹೊಂದಿರುವ, ತಿರುಕ್ಕಣ್ಣಪುರದಲ್ಲಿ ವಾಸವನ್ನು ಹೊಂದಿದ್ದಾರೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,”ಸರ್ವೇಶ್ವರನಲ್ಲಿ ಶರಣಾಗತನಾಗು. ಅವನು ನಿಮ್ಮ ಎಲ್ಲಾ ದುಃಖಗಳನ್ನೂ, ಅದಕ್ಕೆ ಮೂಲ ಕಾರಣವಾಗಿರುವ ಸಂಸಾರವನ್ನೂ ತೊಲಗಿಸುತ್ತಾನೆ.”
ಅಣಿಯನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಪಿಣಿಯುಮ್ ಶಾರಾ ಪಿಱವಿ ಕೆಡುತ್ತಾಳುಮ್,
ಮಣಿ ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಪಣಿಮಿನ್, ನಾಳುಮ್ ಪರಮೇಟ್ಟಿತನ್ ಪಾದಮೇ ॥


ಯಾರು ಅಂತಿಮವಾದ ಆನಂದಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಹೊಂದುವರೋ, ಅವರ ಸಾಮೀಪ್ಯದಲ್ಲಿ ಆನಂದಿಸುವನು. ಬೇರೆ ಪ್ರಯೋಜನಗಳು ಎಂದರೆ ನಮ್ಮಲ್ಲಿರುವ ಅನಾರೋಗ್ಯಗಳು ಮಾಯವಾಗುವುದು. ಅವನು ನಮ್ಮ ಜೊತೆ ಸಂಬಂಧಿಸಿರುವ ಹುಟ್ಟನ್ನು ನಿರ್ಮೂಲನೆ ಮಾಡುವನು. ಆದ್ದರಿಂದ ಮತ್ತೊಂದು ಜನ್ಮವನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮತ್ತು ನಮ್ಮ ಸೇವೆಯನ್ನು ಸ್ವೀಕರಿಸುವನು. ಅಮೂಲ್ಯ ರತ್ನಗಳನ್ನು ಹೊಂದಿರುವ ಮತ್ತು ಚಿನ್ನದಿಂದಲೇ ಕಟ್ಟಿರುವ ಕೋಟೆಯಿಂದ ಸುತ್ತುವರೆಯಲ್ಪಟ್ಟ ತಿರುಕ್ಕಣ್ಣಪುರದಲ್ಲಿ ನಿಂತಿರುವ , ಎಂಪೆರುಮಾನರ ದಿವ್ಯ ಪಾದಗಳಿಗೆ ನಿರಂತರವಾಗಿ ಸೇವೆ ಸಲ್ಲಿಸು. ಅವರು ಪರಮಪದದಲ್ಲಿರುವ ಹಾಗೆಯೇ ಇಲ್ಲಿಯೂ ಇದ್ದಾರೆ. ಅವರ ದಿವ್ಯ ಪಾದಗಳನ್ನು ಆನಂದಿಸು.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಆನಂದವನ್ನು ಹೊಂದಿ ಹೇಳುತ್ತಾರೆ, “ ನನಗೆ ಯಾರೂ ಆದೇಶವನ್ನು ಕೊಡದೆ, ನಾನು ಎಂಪೆರುಮಾನರಿಗೆ ಶರಣಾಗತಿಯಾದೆ ಮತ್ತು ಆನಂದವನ್ನು ಹೊಂದಿದೆ.”
ಪಾದಮ್ ನಾಳುಮ್ ಪಣಿಯ ತ್ತಣಿಯುಮ್ ಪಿಣಿ,
ಏದಮ್ ಶಾರಾ ಎನಕ್ಕೇಲ್ ಇನಿ ಎನ್‍ಕುಱೈ,
ವೇದನಾವರ್ ವಿರುಮ್ಬುಮ್ ತಿರುಕ್ಕಣ್ಣಪುರತ್ತು
ಆದಿಯಾನೈ, ಅಡೈನ್ದಾರ್ಕ್ಕು ಅಲ್ಲರ್ ಇಲ್ಲೈಯೇ ॥


ಅವನ ದಿವ್ಯ ಪಾದಗಳನ್ನು ಯಾವಾಗಲೂ ಆನಂದಿಸುತ್ತಿದ್ದರೆ, ಮೊದಲಿನ ದುಃಖಗಳೆಲ್ಲವೂ ದೂರವಾಗುವುದು. ನಂತರ ಸಂಕಟ ದುಃಖಗಳು ಬರುವುದೇ ಇಲ್ಲ. ಆದ್ದರಿಂದ ನನಗೆ ಯಾವ ಯೋಚನೆಯೂ ಇಲ್ಲ. ವೇದಗಳೇ ತಮ್ಮ ಜಿಹ್ವೆಗೆ ಚಿಹ್ನೆಯಾಗಿರುವ ಜನಗಳಿಂದ ಬಯಸಲ್ಪಡುವ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ , ಎಲ್ಲದಕ್ಕೂ ಮೂಲಕಾರಣವಾಗಿರುವ, ವೇದಗಳಲ್ಲಿ ಮಾತ್ರ ತಿಳಿಯಬಹುದಾದ ಎಂಪೆರುಮಾನರನ್ನು ಯಾರು ಪಡೆಯುತ್ತಾರೋ, ಅವರಿಗೆ ದುಃಖಗಳಿರುವುದಿಲ್ಲ.
ಪಿಣಿ ಮತ್ತು ಈದಮ್ ಎಂದರೆ ಪೂರ್ವಾಗಮ್ (ಶರಣಾಗತಿಯ ಮೊದಲು ಮಾಡಿದ ಪಾಪಗಳು) ಉತ್ತರಾಗಮ್ (ಶರಣಾಗತಿಯ ನಂತರ ಮಾಡಿದ ಪಾಪಗಳು.)

ಹತ್ತನೆಯ ಪಾಸುರಮ್:
ಆಳ್ವಾರರು ಪುನಃ ತಮಗಾದ ಪ್ರಯೋಜನವನ್ನು ಅತೀವ ಸಂತೋಷದಿಂದ ವಿವರಿಸುತ್ತಾರೆ, “ಯಾರಿಗಾದರೂ ಭಕ್ತಿ ಮತ್ತು ಪ್ರಪತ್ತಿಯನ್ನು ಮಾಡಲು ಸಾಧ್ಯವಾಗದಿದ್ದರೆ , ತಮ್ಮ ಎಲ್ಲಾ ದುಃಖಗಳನ್ನೂ ದೂರಮಾಡಿಕೊಳ್ಳಲು ‘ತಿರುಕ್ಕಣ್ಣಪುರಮ್’ ಎಂದರೆ ಸಾಕು. “
ಇಲ್ಲೈ ಅಲ್ಲಲ್ ಎನಕ್ಕೇಲ್ ಇನಿ ಎನ್‍ಕುಱೈ,
ಅಲ್ಲಿ ಮಾದರ್ ಅಮರುಮ್ ತಿರುಮಾರ್ಬಿನನ್,
ಕಲ್ಲಿಲೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಶೊಲ್ಲ , ನಾಳುಮ್ ತುಯರ್ ಪಾಡು ಶಾರಾವೇ ॥


ಎಲ್ಲಾ ಮಹಿಳೆಯರಿಗಿಂತ ಉತ್ತಮಳಾದ ಮಹಾಲಕ್ಷ್ಮಿಯು ಕಮಲವನ್ನು ತನ್ನ ವಾಸವನ್ನಾಗಿ ಮಾಡಿಕೊಂಡು, ಗಟ್ಟಿಯಾದ ಬಂಡೆಗಳಿಂದ ಕಟ್ಟಿದ ಕೋಟೆಯಿಂದ ಆವರಿಸಲ್ಪಟ್ಟ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ ಎಂಪೆರುಮಾನರ ದಿವ್ಯ ವಕ್ಷಸ್ಥಲದಲ್ಲಿ ನಿರಂತರವಾಗಿ ನೆಲೆಸಿದ್ದಾಳೆ. ಆದ್ದರಿಂದ ಯಾರಾದರೂ ‘ತಿರುಕ್ಕಣ್ಣಪುರಮ್’ ಎಂದು ಹೇಳಿದರೆ ಸಾಕು ಅವರ ದುಃಖಗಳೆಲ್ಲವೂ ದೂರವಾಗುತ್ತದೆ. ನನಗೆ ಆ ಆನಂದವನ್ನು ಕಳೆದುಕೊಳ್ಳುವ ದುಃಖದ ಯೋಚನೆಯಿಲ್ಲ. ಈಗ ಏನು ಚಿಂತೆ ನನಗೆ?

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಯಾರು ತಮ್ಮ ತೊಂದರೆಗಳನ್ನು ನಿವಾರಿಸಬೇಕೆಂದು ಆಶಿಸುತ್ತಾರೋ, ಈ ಪದಿಗೆಯನ್ನು ಅವನ ಮೇಲಿನ ಪ್ರೇಮದಿಂದ ಹಾಡಿ ಮತ್ತು ಶರಣಾಗತಿಯನ್ನು ಹೊಂದಿ.”

ಪಾಡುಶಾರಾ ವಿನೈ ಪಟ್ಱಱ ವೇಣ್ಡುವೀರ್,
ಮಾಡನೀಡು ಕುರುಗೂರ್ ಚ್ಚಡಗೋಪನ್, ಶೊಲ್
ಪಾಡಲಾನ ತಮಿೞ್ ಆಯಿರತ್ತುಳ್ ಇಪ್ಪತ್ತುಮ್
ಪಾಡಿ ಆಡಿ , ಪಣಿಮಿನ್ ಅವನ್‍ ತಾಳ್‍ಗಳೇ॥


ಎತ್ತರದ ಅರಮನೆಗಳನ್ನು ಹೊಂದಿರುವ ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ಸಾವಿರ ಪಾಸುರಗಳನ್ನು ಹೇಳಿದ್ದಾರೆ. ನೀವು ಲೌಕಿಕ ದುಃಖಗಳನ್ನು ದೂರಮಾಡಿಕೊಳ್ಳಬೇಕೆಂದು ಆಶಿಸಿದ್ದರೆ, ಮತ್ತು ಅವುಗಳು ಮತ್ತೆ ನಿಮ್ಮ ಸಮೀಪಕ್ಕೆ ಬರಬಾರದೆಂದು ಬಯಸಿದರೆ, ಆನಂದದಿಂದ ಈ ಹತ್ತು ಪಾಸುರಗಳನ್ನು, ಸಂಗೀತದೊಂದಿಗೆ , ದ್ರಾವಿಡ ಭಾಷೆಯಾದ ತಮಿೞಿನಲ್ಲಿರುವ ಸಾವಿರ ಪಾಸುರದ ಜೊತೆಗೆ ಹಾಡಿ. ಪರಮಾನಂದದಿಂದ ನಲಿದಾಡಿ. ಸುಲಭವಾಗಿ ದಕ್ಕುವ ಸರ್ವೇಶ್ವರನ ದಿವ್ಯ ಪಾದಗಳಿಗೆ ಪೂಜಿಸಿ ಮತ್ತು ಅವುಗಳನ್ನು ಆನಂದಿಸಿ. ಭಗವಂತನನ್ನು ಈ ಪದಿಗೆಯಲ್ಲಿ ಆನಂದಿಸುವವರಿಗೆ, ಅವರ ಕಷ್ಟಗಳು ನಿಶ್ಶೇಷವಾಗಿ ನಿರ್ಮೂಲನವಾಗುತ್ತದೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-9-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ ಮೊೞಿ- ಸರಳ ವಿವರಣೆ – 8.10 – ನೆಡುಮಾಱ್ಕು

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.4 – ಆೞಿಯೆೞ

emperumAnAr_ThirumEniyil_pUrvacharyargaL (Large)

ಆಳ್ವಾರರು ಈ ರೀತಿಯಾಗಿ ಗಮನಿಸುತ್ತಾರೆ : ಆತ್ಮದ ಸಹಜ ಸ್ವಭಾವಕ್ಕೆ ಪೂರಕವಾದುದು ಭಗವಂತನ ಭಕ್ತರಿಗೆ ಸೇವೆ ಮಾಡುವುದೇ ಆಗಿದೆ. ಅವರು ಇದನ್ನು ಗಮನಿಸುತ್ತಾರೆ ಮತ್ತು ಇತರರಿಗೂ ಈ ಪದಿಗೆಯಲ್ಲಿ ಸಲಹೆಯನ್ನು ಕೊಡುತ್ತಾರೆ. ಭಗವಂತನಿಗೆ ಸೇವೆ ಸಲ್ಲಿಸುವುದು ಮೊದಲನೆಯ ಹಂತವಾದರೆ, ಭಾಗವತರಿಗೆ ಸೇವೆ ಸಲ್ಲಿಸುವುದು ಅಂತಿಮ ಹಂತವಾಗಿದೆ. ಅದನ್ನು ಆಳ್ವಾರರು ಸ್ಪಷ್ಟವಾಗಿ ವರ್ಣಿಸಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅದ್ಭುತವಾದ ಮೂರು ಲೋಕಗಳನ್ನು ಆಳುವುದರ ಬದಲು ನಾನು ಭಾಗವತರಿಗೆ ಸೇವೆ ಮಾಡಲು ಬಯಸುತ್ತೇನೆ.”
ನೆಡುಮಾಱ್ಕು ಅಡಿಮೈ ಸೆಯ್ವೇನ್ ಪೋಲ್ ಅವನೈ ಕ್ಕರುದ ವಞ್ಜಿತ್ತು,
ತಡುಮಾಱ್ಱಱ್ಱ ತೀಕ್ಕದಿಗಳ್ ಮುಱ್ಱುಮ್ ತವಿರ್ನ್ದ ಶದಿರ್ ನಿನೈನ್ದಾಲ್,
ಕೊಡುಮಾವಿನೈಯೇನ್ ಅವನ್ ಅಡಿಯಾರ್ ಅಡಿಯೇ ಕೂಡುಮಿದುವಲ್ಲಾಲ್,
ವಿಡುಮಾಱೆನ್ಬದು ಎನ್ ಅನ್ದೋ ವಿಯನ್ ಮೂವುಲಗು ಪೆಱಿನುಮೇ ॥

“ನಾನು ಅನಂತವಾದ ಸರ್ವೇಶ್ವರನನ್ನು ಸೇವೆ ಮಾಡಲು ಯೋಚಿಸಿದೆ , ಅವನು ನನ್ನಲ್ಲಿಯೇ ಉಳಿದುಕೊಂಡು ನನ್ನಲ್ಲಿರುವ ಅಸ್ಥಿರತೆಯನ್ನು ಹೋಗಲಾಡಿಸಿ, ಕೆಟ್ಟ ರೀತಿಯ ದಾರಿಗಳು ನನ್ನನ್ನು ಬಿಟ್ಟು ಹೋಗುವಂತೆ ನೋಡಿಕೊಂಡನು. ಸೇವಕರಾದ ನಮಗೆ ಯಾವುದು ಸೂಕ್ತವೆಂದು ಯೋಚಿಸಿದರೆ, ಭಾಗವತರ ದಿವ್ಯ ಪಾದಗಳನ್ನು ಸೇರುವುದನ್ನು ಬಿಟ್ಟರೆ, ಮೂರು ಲೋಕದ ವಿಶಾಲವಾದ ಸಂಪತ್ತನ್ನು ಗಳಿಸುವುದೇ ಮಾರ್ಗವೆಂದು ಯಾರಾದರೂ ಹೇಳಿದರೂ, ಐಶ್ವರ್‍ಯಕ್ಕೂ ಮತ್ತು ತದೀಯ ಶೇಷತ್ವಕ್ಕೂ (ಭಕ್ತರಿಗೇ ಸೇವಕನಾಗುವುದು) ವ್ಯತ್ಯಾಸವನ್ನು ನೋಡಿದ ಪರಮಪಾಪಿಯಾದ ನಾನು ಭಾಗವತರ ದಿವ್ಯ ಪಾದಗಳನ್ನು ಬಿಟ್ಟು ಬಿಡುವೆನೇ? “ ಎಂದು ಹಾಡುತ್ತಾರೆ.

ಎರಡನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಐಶ್ವರ್‍ಯಮ್(ಲೌಕಿಕ ಸಂಪತ್ತು) ಮತ್ತು ಕೈವಲ್ಯಮ್ (ತನ್ನಲ್ಲಿ ತಾನೇ ಆನಂದಪಡುವುದು) ಇವುಗಳನ್ನು ಜೊತೆಯಾಗಿ ಪಡೆದರೂ, ಅವೆರಡೂ ಭಾಗವತ ಶೇಷತ್ವಕ್ಕೆ ( ಭಾಗವತರಿಗೆ ದಾಸನಾಗುವುದು) ಹೋಲಿಕೆ ಮಾಡಬಹುದೇ? ಈ ಗುರಿಯನ್ನು ನಾನು ತಲುಪಿದ್ದೇನೆ.”
ವಿಯನ್ ಮೂವುಲಗು ಪೆಱಿನುಮ್ ಪೋಯ್ ತ್ತಾನೇತಾನೇಯಾನಾಲುಮ್,
ಪುಯಲ್ ಮೇಗಮ್ ಪೋಲ್ ತಿರುಮೇನಿ ಅಮ್ಮಾನ್ ಪುನೈ ಪೂಙ್ಕೞಲ್ ಅಡಿಕ್ಕೀೞ್,
ಶಯಮೇ ಅಡಿಮೈ ತಲೈ ನಿನ್‍ಱಾರ್ ತಿರುತ್ತಾಳ್ ವಣಙ್ಗಿ, ಇಮ್ಮೈಯೇ
ಪಯನೇ ಇನ್ಬಮ್ ಯಾನ್ ಪೆಱ್ಱದು ಉಱುಮೋ ಪಾವಿಯೇನುಕ್ಕೇ॥

ಸರ್ವೇಶ್ವರನಿಗೆ ನೀರು ತುಂಬಿದ ಮೋಡಗಳ ರೀತಿಯಾದ ದಿವ್ಯ ರೂಪವಿದೆ. ಅವರ ದಿವ್ಯ ಪಾದಗಳು ಹೂವಿನಿಂದ ಮತ್ತು ವಿಜಯದ ಗೆಜ್ಜೆಗಳಿಂದ ಅಲಂಕೃತವಾಗಿದೆ. ಕೊನೆಯ ಹಂತವನ್ನು ತಲುಪಿದ ಭಾಗವತರು (ಎಂಪೆರುಮಾನರನ್ನೇ ಹಿಂಬಾಲಿಸುವವರು) ಅಂತಹ ದಿವ್ಯ ಪಾದಗಳಿಗೇ ಸೇವೆಯನ್ನು ಸಲ್ಲಿಸುವವರು ಏನೂ ಅಪೇಕ್ಷೆಯಿಲ್ಲದೆ. ನನಗೆ ಮೂರೂ ಲೋಕದ ಅಷ್ಟೂ ಸಂಪತ್ತು ಸಿಕ್ಕರೂ ಮತ್ತು ನಾನು ಅವುಗಳನ್ನು (ಐಶ್ವರ್‍ಯ ಮತ್ತು ಕೈವಲ್ಯಗಳನ್ನು) ಅನುಭವಿಸಿದರೂ, ನನ್ನಂತಹ ಪಾಪವನ್ನು ಮಾಡಿದವರು ಅಂತಹ ಭಾಗವತರಿಗೆ ನಮಸ್ಕಾರಗಳನ್ನು ಅರ್ಪಿಸಿದರೆ ಸೂಕ್ತವಾಗುವುದೇ?
ಇದರ ಅರ್ಥ : ಈ ಐಶ್ವರ್‍ಯ ಮತ್ತು ಕೈವಲ್ಯಗಳು ಭಾಗವತರಿಗೆ ಕೈಂಕರ್‍ಯವನ್ನು ಮಾಡುವ ಆನಂದಕ್ಕೆ ಎಣೆಯಾಗುವುದಿಲ್ಲ.

ಮೂರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ನಾನು ಭಗವತ್ ಪ್ರಾಪ್ತಿಯನ್ನು ಪಡೆದುಕೊಂಡರೂ (ಭಗವಂತನನ್ನು ಸೇರಿ ಅವನಿಗೆ ಸೇವೆ ಸಲ್ಲಿಸುವುದು) ಅದು ಐಶ್ವರ್‍ಯ ಮತ್ತು ಕೈವಲ್ಯಗಳಿಂದ ವ್ಯತ್ಯಾಸವಾದರೂ , ಭಾಗವತರನ್ನು ಈ ಲೋಕದಲ್ಲಿ ಸೇವೆ ಸಲ್ಲಿಸುವುದಕ್ಕೆ ಹೋಲಿಕೆಯಾಗದು,”
ಉಱುಮೋ ಪಾವಿಯೇನುಕ್ಕು ಇವ್ ಉಲಗುಮ್ ಮೂನ್‍ಱುಮ್ ಉಡನ್ ನಿಱೈಯ,
ಶಿಱು ಮಾಮೇನಿ ನಿಮಿರ್ತ್ತ ಎನ್ ಶೆನ್ದಾಮರೈಕ್ಕಣ್ ತಿರುಕ್ಕುಱಳನ್,
ನಱುಮಾವಿರೈ ನಾಣ್ಮಲರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ಶಿಱು ಮಾ ಮನಿಶರಾಯ್ ಎನ್ನೈ ಆಣ್ಡಾರ್ ಇಙ್ಗೇ ತಿರಿಯವೇ ॥

ಶ್ರೀ ವಾಮನರು ತಮ್ಮ ಪುಟ್ಟದಾದ , ಆಕರ್ಷಕ ವಿಶಿಷ್ಟವಾದ ರೂಪವನ್ನು ಒಂದೇ ಪ್ರಯತ್ನದಲ್ಲಿ ಮೂರು ಲೋಕಗಳಲ್ಲಿ ಬೆಳೆಸಿ, ತುಂಬಿಸಿದರು. ಅವರಿಗೆ ಆನಂದಮಯವಾದ ಕೆಂಪಾದ ತಾವರೆಯ ಹಾಗೆ ದಿವ್ಯ ಕಣ್ಣುಗಳಿವೆ. ಪಾಪಿಯಾದ ನನಗೆ ಅಂತಹ ವಾಮನರ ಸುಗಂಧಿತವಾದ, ಉತ್ಕೃಷ್ಟವಾದ, ಹೊಸದಾದ ಜೇನು ತುಂಬಿರುವ ಹೂವಿನ ಹಾಗಿರುವ ದಿವ್ಯ ಪಾದಗಳನ್ನು ಸೇರಲು ಯೋಗ್ಯವೇ? ಅಂತಹ ವಾಮನರ ಸೇವಕರಾದ ಭಾಗವತರು ಅವರು ಮನುಷ್ಯ ರೂಪದಲ್ಲಿ ನೋಡಲು ಚಿಕ್ಕದಾಗಿ ಕಾಣಬಹುದು, ಆದರೆ ಅವರದು ಬಹು ದೊಡ್ಡ ವ್ಯಕ್ತಿತ್ವ. ಅವರು ನನ್ನನ್ನು ತಮ್ಮ ದಾಸನನ್ನಾಗಿ ಮಾಡಿಕೊಂಡರು. ಅವರು ನನಗೆ ಈ ಭೂಮಿಯಲ್ಲಿ ಕಾಣಲು ಸಿಗುವರೇ?

ನಾಲ್ಕನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “”ನನಗೆ ಇಲ್ಲಿಯೇ ಶ್ರೀವೈಷ್ಣವರನ್ನು ಆನಂದ ಪಡಿಸಲು ಎಂಪೆರುಮಾನರನ್ನು ಹಾಡಿ ಹೊಗಳಲು ಅವಕಾಶ ಸಿಕ್ಕರೆ, ನನ್ನ ಅಂತಿಮ ಗುರಿ ಇದೇ ಭೂಮಿಯಲ್ಲಿ ನಿರಂತರವಾಗಿ ಇರುವುದು . ಈ ಭೂಮಿಯು ಅಂತಹವರ ಚಲನದಿಂದಾಗಿ ನಿಜವಾಗಿಯೂ ಪ್ರಶಂಸೆಗೆ ಯೋಗ್ಯವಾಗಿದೆ.
ಇಙ್ಗೇ ತಿರುನ್ದೇಱ್ಕಿೞುಕ್ಕುತ್ತೆನ್ ಇರುಮಾ ನಿಲಮ್ ಮುನ್ ಉಣ್ಡುಮಿೞ್‍ನ್ದ
ಶೆಙ್ಗೋಲತ್ತ ಪವಳವಾಯ್ ಚ್ಚೆನ್ದಾಮರೈ ಕ್ಕಣ್ ಎನ್ನಮ್ಮಾನ್
ಪೊಙ್ಗೇೞ್ ಪುಗೞ್‍ಗಳ್ ವಾಯವಾಯ್ ಪ್ಪುಲನ್‍ಕೊಳ್ ವಡಿವೆನ್‍ಮನತ್ತದಾಯ್
ಅಙ್ಗೇಯ್ ಮಲರ್ಗಳ್ ಕೈಯವಾಯ್ ವೞಿಪಟ್ಟೋಡ ಅರುಳಿಲೇ ॥

ಎಂಪೆರುಮಾನರು ನನ್ನ ಸ್ವಾಮಿ. ಅವರು ಸುಂದರವಾದ , ಹವಳದಂತಹ ಕೆಂಪಾದ ದಿವ್ಯ ತುಟಿಗಳನ್ನು ಹೊಂದಿದ್ದಾರೆ. ಅವುಗಳು ಪ್ರಳಯ ಕಾಲದಲ್ಲಿ ಅಪಾಯದಲ್ಲಿರುವ ,ವಿಸ್ತಾರವಾಗುತ್ತಿರುವ , ಪ್ರಶಂಸೆಗೆ ಯೋಗ್ಯವಾದ ಭೂಮಂಡಲವನ್ನೇ ನುಂಗಿದರು ಮತ್ತು ಅದನ್ನು ಕಾಪಾಡಿ , ನಂತರ ಉಗಿದರು. ಅವರಿಗೆ ಕೆಂಪಾದ ತಾವರೆಯಂತಿರುವ ದಿವ್ಯ ಕಣ್ಣುಗಳಿವೆ. ಅವರ ಕಲ್ಯಾಣ ಗುಣಗಳನ್ನು ನನ್ನ ಮಾತಿನಲ್ಲಿ ಹೇಳಿ, ಅವರ ದಿವ್ಯ ರೂಪವನ್ನು ಮನದಲ್ಲಿ ತುಂಬಿಕೊಂಡು, ನನ್ನ ಎಲ್ಲಾ ಇಂದ್ರಿಯಗಳನ್ನು ಸೂರೆಗೊಂಡು , ಅವರಿಗಾಗಿ ಅವರ ಶ್ರೇಷ್ಠತೆಯನ್ನು ಮೆರೆಸಲು ಹೂಗಳನ್ನು ನನ್ನ ಕೈಗಳಲ್ಲಿ ಹಿಡಿದುಕೊಂಡ ನನ್ನನ್ನು ಅವರು ಆಶೀರ್ವದಿಸಿದರೆ ಯಾರಿಗೆ ಏನು ಕಷ್ಟವಾಗುತ್ತದೆ?

ಐದನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಒಂದು ವೇಳೆ ನಾನು ತಿರುನಾಡಿಗೆ (ಪರಮಪದಕ್ಕೆ) ಹೋದರೂ ಮತ್ತು ಪರಮ ಗುರಿಯಾದ ಎಂಪೆರುಮಾನರಿಗೆ ಸೇವೆ ಕೈಂಕರ್‍ಯಗಳನ್ನು ಮಾಡಿದರೂ ಮತ್ತು ಎಲ್ಲಾ ವೈಭವಗಳನ್ನೂ ಐಶ್ವರ್‍ಯಗಳನ್ನೂ ಹೊಂದಿದರೂ, ಅವುಗಳು ಈ ಸಂಸಾರದಲ್ಲಿ ಹುಟ್ಟಿ , ಶ್ರೀವೈಷ್ಣವರ ಸಂತೋಷಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡುವುದಕ್ಕೆ ಸಮನಾಗುವುದೇ?”
ವೞಿ ಪಟ್ಟೋಡ ಅರುಳ್ ಪೆಟ್ರು ಮಾಯನ್ ಕೋಲಮಲರ್ ಅಡಿಕ್ಕೀೞ್,
ಶುೞಿಪಟ್ಟೋಡುಮ್ ಶುಡರ್ ಚ್ಚೋದಿ ವೆಳ್ಳತ್ತು ಇನ್ಬುಟ್ಟ್ರಿರುನ್ದಾಲುಮ್ ,
ಇೞಿ ಪಟ್ಟೋಡುಮ್ ಉಡಲಿನಿಲ್ ಪಿಱನ್ದು ತನ್ ಶೀರ್ ಯಾನ್ ಕಟ್ರು
ಮೊೞಿಪಟ್ಟೋಡುಮ್ ಕವಿಯಮುದಮ್ ನುಗರ್ಚ್ಚಿ ಉಱುಮೋ ಮುೞುದುಮೇ ॥

ಸರ್ವೇಶ್ವರನಿಗೆ ಆಶ್ಚರ್‍ಯ ಪಡುವ ರೀತಿಯಲ್ಲಿ ಕಲ್ಯಾಣ ಗುಣಗಳು, ದಿವ್ಯ ರೂಪ, ಮತ್ತು ಐಶ್ವರ್‍ಯಗಳು ಇವೆ. ನಾನು ಅಂತಹ ಸರ್ವೇಶ್ವರನ ಕೃಪೆಯಿಂದ ಅಲ್ಲಿ ಸೇರಿ, ಅತ್ಯಂತ ಪ್ರಭೆಯನ್ನು ಹೊಂದಿರುವ , ಸತತವಾಗಿ ಸುತ್ತುತ್ತಿರುವ ಪರಮಪದಕ್ಕೆ ಅವನ ಕರುಣೆಯಿಂದ ಅವನ ದಿವ್ಯ ಪಾದಗಳನ್ನು ಸೇರಿ, ಅತ್ಯಂತ ಆನಂದದಿಂದ ಅವನ ಕೈಂಕರ್‍ಯವನ್ನು ಮಾಡಿದರೂ, ಅಥವಾ ಐಶ್ವರ್‍ಯವನ್ನೂ , ಕೈವಲ್ಯವನ್ನೂ ಈ ಭೂಲೋಕದಲ್ಲಿ ಅನುಭವಿಸಿದರೂ, ಇಂತಹ ಕೆಳಮಟ್ಟದ ದೇಹದಲ್ಲಿ ಜನಿಸಿ, ಅವನ ಉತ್ತಮ ಗುಣಗಳನ್ನು ಕಲಿತುಕೊಂಡು , ಅಮೃತದಂತಿರುವ ಅವನ ಗುಣಗಾನವನ್ನು ಮಾಡುವ ಪದ್ಯಗಳನ್ನು, ಪದಗಳ ಸುರಿಮಳೆಯನ್ನೂ ಹಾಡಿ ಆನಂದಿಸುವುದಕ್ಕೆ ಸಮನಾಗುವುದೇ?

ಆರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ, “ ಐಶ್ವರ್‍ಯ (ಲೌಕಿಕ ಸಂಪತ್ತು) ಕೈವಲ್ಯ (ತನ್ನಲ್ಲಿ ತಾನೇ ಆನಂದ ಪಡುವುದು) , ಭಗವತ್ ಅನುಭವ ಪ್ರೀತಿ ಮತ್ತು ಭಗವತ್ ಆನಂದಮ್ ಇವುಗಳನ್ನು ಮಾತ್ರ ಸಾಧಿಸಿದರೆ , ಇವುಗಳು ಭಕ್ತರ ಆನಂದಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡಿದಕ್ಕೆ ಸಮನಾಗುವುದೇ?”
ನುಗರ್ಚ್ಚಿ ಉಱುಮೋ ಮೂವುಲಗಿನ್ ವೀಡು ಪೇಱು ತನ್ ಕೇೞಿಲ್
ಪುಗರ್ ಚ್ಚೆಮ್ಮುಗತ್ತ ಕಳಿಱಟ್ಟ ಪೊನ್ ಆೞಿಕ್ಕೈ ಎನ್ನಮ್ಮಾನ್
ನಿಗರ್ ಚ್ಚೆಮ್ಬಙ್ಗಿ ಎರಿ ವಿೞಿಗಳ್ ನೀಣ್ಡ ಅಶುರರ್ ಉಯಿರೆಲ್ಲಾಮ್,
ತಗರ್ತುಣ್ಡು ಉೞಲುಮ್ ಪುಟ್ ಪಾಗನ್ ಪೆರಿಯ ತನಿಮಾ ಪ್ಪುಗೞೇ ॥

ಎಂಪೆರುಮಾನರು, ನನ್ನ ಸ್ವಾಮಿ, ಅವರಿಗೆ ದಿವ್ಯ ಉಂಗುರವುಳ್ಳ ದಿವ್ಯ ಕೈಗಳು ಇವೆ. ಅದು ಅತ್ಯಂತ ತೇಜಸ್ಸುಳ್ಳ ಮತ್ತು ಕೆಂಪಾದ ಮುಖವುಳ್ಳ ಅಸುರನಾದ ಆನೆಯನ್ನು ಕೊಂದುಹಾಕಲು ಸಹಾಯ ಮಾಡಿತು. ಕೆಂಪಾದ ಕೂದಲುಳ್ಳ ಮತ್ತು ಭಯಂಕರವಾದ ತಟ್ಟೆಯಂತಹ ಕಣ್ಣುಗಳುಳ್ಳ ಎತ್ತರದ ಬಲಶಾಲಿಯಾದ ಅಸುರರನ್ನೆಲ್ಲಾ ನುಂಗಿ ಹಾಕುವ ಮತ್ತು ನಭದಲ್ಲಿ ಗಾಳಿಯ ಮೇಲೆ ಆಕ್ರಮಣ ಮಾಡುವ ಪೆರಿಯ ತಿರುವಡಿ ಎಂದೇ ಪ್ರಖ್ಯಾತವಾದ ಗರುಡಳ್ವಾರರನ್ನೇ ನಿಯಂತ್ರಿಸುವರು. ಮೂರು ಲೋಕಗಳನ್ನು ಸೃಷ್ಟಿಸುವ ಸಮರ್ಥವಾದ ಸ್ವಾಮಿತ್ವವು , ಅಂತಹ ಎಂಪೆರುಮಾನರ ಅಪರಿಮಿತ , ವಿಶಿಷ್ಟವಾದ ಮಹದಾನಂದಕರವಾದ ಕಲ್ಯಾಣ ಗುಣಗಳ ಸಂಕಲನವನ್ನು ಹಾಡಿ ಹೊಗಳುವ, ಭಾಗವತರಿಗೆ ಅತ್ಯಂತ ಪ್ರೀತಿ ಪಾತ್ರವಾದ ತಿರುವಾಯ್‍ಮೊೞಿಗೆ ಸಾಟಿಯಾಗುವುದೇ?

ಏಳನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ , “ನನಗೆ ಸ್ವಾತಂತ್ರ್ಯ ಗುರಿಯಾದ ಭಗವತ್ ಅನುಭವದ ಆಸೆ ಇಲ್ಲ. ಆದರೆ, ನನಗೆ ಭಾಗವತರ ಆನಂದಕ್ಕಾಗಿ ಭಾಗವತರ ಜೊತೆಗೆ ಕೂಡಿ ಭಗವತ್ ಅನುಭವಮ್ ಪಡೆಯುವುದರಲ್ಲಿ ಅತಿಯಾದ ಸಂತೋಷವಿದೆ”
ತನಿ ಮಾ ಪುಗೞೇ ಎಞ್ಜಾನ್‍ಱುಮ್ ನಿಱ್ಕುಮ್ ಪಡಿಯಾ ತ್ತಾನ್ ತೋನ್‍ಱಿ
ಮುನಿ ಮಾಪ್ಪಿರಮ ಮುದಲ್ ವಿತ್ತಾಯ್ ಉಲಗಮೂನ್‍ಱುಮ್ ಮುಳೈಪಿತ್ತ,
ತನಿಮಾತ್ತೆಯ್ ವತ್ತಳಿರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ನನಿಮಾ ಕ್ಕಲವಿ ಇನ್ಬಮೇ ನಾಳುಮ್ ವಾಯ್‍ಕ್ಕ ನಙ್ಗಟ್ಕೇ ॥


ಎಂಪೆರುಮಾನರು ತಮ್ಮ ವಿಶಿಷ್ಟವಾದ ಗುಣವಾದ ಕಾರಣತ್ವವನ್ನು (ಅವರೇ ಎಲ್ಲದಕ್ಕೂ ಕಾರಣಕರ್ತ) ಸ್ಥಾಪಿಸಲು ಸೃಷ್ಟಿಯನ್ನು ಆರಂಭಿಸಿದರು ಮತ್ತು ತಮ್ಮ ಸೃಷ್ಟಿಯ ಮೇಲೆ ಯಾವಾಗಲೂ ಸ್ಥಿರವಾಗಿ ತೊಡಗಿಸಿಕೊಂಡು ‘ಪರ ಬ್ರಹ್ಮಮ್’ ಎಂದು ಕರೆಯಲ್ಪಡುವರು. ಅವರು ಮೂಲ ಲೌಕಿಕ ಕಾರಣಕ್ಕಾಗಿ ಮೂರು ಲೋಕಗಳನ್ನು ಸೃಷ್ಟಿಸಿದರು. ಅಂತಹ ವಿಶಿಷ್ಟವಾದ ಶ್ರೇಷ್ಠ ಸ್ವಾಮಿಯ ಬಹು ಮೃದುವಾದ ದಿವ್ಯ ಪಾದಗಳ ಅಡಿಯನ್ನು ತಲುಪುವುದರ ಬದಲಾಗಿ , ಅಂತಹ ಭಗವಂತನು ತನ್ನ ಶ್ರೇಷ್ಠ ಗುಣಗಳಿಂದ ಗುಲಾಮರಾಗಿ ಮಾಡಿದ ಭಾಗವತರ ಜೊತೆಗೆ ಕೂಡಿ ಅವನನ್ನು ಸ್ಮರಿಸುವುದು ನಮಗೆ ಸೂಕ್ತವಾದುದು.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,” ನಾನು ನಿಜವಾಗಿ ಭಾಗವತರೊಂದಿಗೆ ಕೂಡಿ ಸಂಭಾಷಣೆ ಮಾಡಬೇಕೆ? ಅವರ ಜೊತೆ ಇದ್ದರೆ ಸಾಕು. ಇಲ್ಲವಾದರೆ ಅವರ ಗುಂಪನ್ನು ನೋಡಿದರೆ ಸಾಕು.”
ನಾಳುಮ್ ವಾಯ್‍ಕ್ಕ ನಙ್ಗಟ್ಕು ನಳಿ ನೀರ್ ಕಡಲೈ ಪಡೈತ್ತು, ತನ್
ತಾಳುಮ್ ತೋಳುಮ್ ಮುಡಿಗಳುಮ್ ಶಮನ್ ಇಲಾದ ಪಲ ಪರಪ್ಪಿ,
ನೀಳುಮ್ ಪಡರ್ ಪೂಙ್ಗಱ್‌ಪಗ ಕ್ಕಾವುಮ್ ನಿಱೈಪ ನ್ನಾಯಿತ್ತಿನ್,
ಕೋಳುಮುಡೈಯ ಮಣಿಮಲೈಪೋಲ್ ಕಿಡನ್ದಾನ್ ತಮರ್ಗಳ್ ಕೂಟ್ಟಮೇ ॥


ಎಂಪೆರುಮಾನರು ಹಾಗೆಯೇ ಸಹಜವಾಗಿ ತಣ್ಣಗಿನ ನೀರಿನ ಸಮುದ್ರವನ್ನು ಸೃಷ್ಟಿಸಿದರು ಮತ್ತು ಅದರಲ್ಲಿ ವೇದಗಳಲ್ಲಿ ಹೇಳಿರುವ ಹಾಗೆ ಮಲಗಿ ವಿಶ್ರಾಂತಿಸಿದರು. ಅವರಿಗೆ ವಿಶಿಷ್ಟವಾದ , ಸರಿಸಾಟಿಯಿಲ್ಲದ ಬಹು ದಿವ್ಯ ಪಾದಗಳು, ದಿವ್ಯ ತೋಳುಗಳು, ಕೆಂಪು ರತ್ನದ ಬೆಟ್ಟದ ಮೇಲೆ ಇರುವ ಕರ್ಪಗ ಮರಗಳಂತಿರುವ ಮತ್ತು ಪ್ರಕಾಶಮಾನವಾದ ಸೂರ್‍ಯ ಮತ್ತು ಅವನ ಕಿರಣಗಳಂತಿರುವ ದಿವ್ಯ ಕಿರೀಟ/ತಲೆ . ಅಂತಹ ಭಗವಂತನ ಜೊತೆಗೆ ನಮ್ಮ ಮಿಲನವಾಗಬೇಕು. ಎಂದೆಂದಿಗೂ. ಕೂಟ್ಟಮ್ ಸೇರ್ತ್ತಿ – ಅಂದರೆ ಎಲ್ಲರನ್ನೂ ಸೇರಿಸುವುದು. ಆಳ್ವಾರರು ಅಂತಹ ಜನಗಳೊಂದಿಗೆ (ಭಾಗವತರೊಂದಿಗೆ) ಅವರ ಮುಂದೆ ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತಾರೆ.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ನಾವು ಅವರೊಂದಿಗೆ ಬಾಳಬೇಕೆ? ಅವರಿಗೆ ನಿರಂತರವಾಗಿ ಸೇವೆ ಸಲ್ಲಿಸಿದರೆ ಸಾಕು.”

ತಮರ್ಗಳ್ ಕೂಟ್ಟ ವಲ್ ವಿನೈಯೈ ನಾಶಮ್ ಶೆಯ್ಯುಮ್ ಶದುಮೂರ್ತ್ತಿ,
ಅಮರ್ ಕೊಳ್ ಆೞಿ ಶಙ್ಗು ವಾಳ್ ವಿಲ್ ತಣ್ಡಾ ಆದಿ ಪಲ್ ಪಡೈಯನ್,
ಕುಮರನ್ ಕೋಲವಙ್ಗಣೈ ವೇಳ್ ತಾದೈ ಕೋದಿಲ್ ಅಡಿಯಾರ್ ತಮ್,
ತಮರ್ಗಳ್ ತಮರ್ಗಳ್ ತಮರ್ಗಳಾಮ್ ಶದಿರೇ ವಾಯ್‍ಕ್ಕ ತಮಿಯೇಱ್ಕೇ ॥


ಎಂಪೆರುಮಾನರು ನಮ್ಮ ನಾಯಕನು. ಅವರ ಭಕ್ತವೃಂದಕ್ಕೆ ಇರುವ ಭಯಂಕರ ಪಾಪಗಳನ್ನು ತೊಡೆದುಹಾಕುವ ಸಾಮರ್ಥ್ಯವಿರುವವರು. ಅವರಿಗೆ ‘ಪಂಚಾಯುಧಮ್’ ಸೇರಿಕೊಂಡು ಅನೇಕ ಆಯುಧಗಳಿವೆ. ಅವರು ಅತಿ ಸೌಂದರ್ಯವನ್ನು ಹೊಂದಿರುವ, ಐದು ಬಾಣಗಳನ್ನು ಹೊಂದಿರುವ ಕಾಮದೇವನಿಗೇ ತಂದೆಯು. ಈ ಸಂಸಾರದಲ್ಲಿ ಗತಿಯಿಲ್ಲದ ನಾವು ಅಂತಹ ಎಂಪೆರುಮಾನರಿಗೇ ಕಳಂಕವಿಲ್ಲದೆ ದಾಸರಾಗಿರುವ ದಾಸರಿಗೇ ದಾಸರು . ಅವರು ನಮ್ಮ ಮೇಲೆ ಕರುಣೆ ತೋರಬೇಕು. ‘ಕೂಟ್ಟ ವಲ್ ವಿನೈ’ ಎಂಬುದು ಈ ಸಂಸಾರದಲ್ಲಿ ಲೌಕಿಕ ಸಂತೋಷಕ್ಕಾಗಿ ಬಂಧನಕ್ಕೊಳಗಾದ ಪಾಪಗಳಿಂದ ಬಂದಿರುವುದು. ಅದನ್ನು ‘ಸಾದಿರ್ ಮೂರ್ತಿ’ ಎಂದು ಉಚ್ಛಾರಣೆ ಮಾಡದೇ ‘ಚಾದು ಮೂರ್ತಿ’ (ಎಂದರೆ ಎಂಪೆರುಮಾನರ ವಿವಿಧ ರೂಪಗಳು) ಎಂದು ಉಚ್ಛರಿಸಬೇಕು.

ಹತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ನನ್ನ ಸಂಬಂಧವನ್ನು ಹೊಂದಿರುವವರು ಮತ್ತು ನಾನೂ ಈ ಫಲವನ್ನು ಪಡೆಯಬೇಕು. ( ಭಾಗವತ ಶೇಷತ್ವಮ್ – ಭಕ್ತರಿಗೇ ಸೇವಕರಾಗಿರುವುದು. )
ವಾಯ್‍ಕ್ಕ ತಮಿಯೇಱ್ಕು ಊೞಿತೋಱೂೞಿ ಊೞಿ , ಮಾಕಾಯಾಮ್
ಪೂಕ್ಕೊಳ್ ಮೇವಿ ನಾನ್ಗುತೋಳ್ ಪೊನ್ ಆೞಿ ಕ್ಕೈ ಎನ್‍ ಅಮ್ಮಾನ್ ,
ನೀಕ್ಕಮಿಲ್ಲಾ ಅಡಿಯಾರ್ ತಮ್ ಅಡಿಯಾರಡಿಯಾರಡಿಯಾರ್ ಎಮ್
ಕೋಕ್ಕಳ್, ಅವರ್ಕ್ಕೇ ಕುಡಿಗಳಾಯ್ ಚ್ಚೆಲ್ಲುಮ್ ನಲ್ಲ ಕೋಟ್‍ಪಾಡೇ ॥


ಎಂಪೆರುಮಾನರು ತಮ್ಮ ಆಕರ್ಷಕ , ಶ್ರೇಷ್ಠ , ತಿರುಮೇನಿಯ ಸೌಂದರ್‍ಯದಿಂದ ನನ್ನನ್ನು ತಮ್ಮ ಅಡಿಯಾರಾಗಿಸಿಕೊಂಡರು. ಅವರ ದಿವ್ಯ ರೂಪವು ಕಾಯಾಮ್ ಹೂವಿನ (ದಟ್ಟವಾದ ನೇರಳೆ ಬಣ್ಣದ ಹೂವು) ಬಣ್ಣದ ಹಾಗಿದೆ. ನಾಲ್ಕು ದಿವ್ಯ ಭುಜಗಳು ಮತ್ತು ಅವರ ದಿವ್ಯ ಕೈಗಳು ದಿವ್ಯ ಚಕ್ರವನ್ನು ಹೊಂದಿದೆ. ನನಗೂ ಮತ್ತು ನನಗೆ ಸಂಬಂಧಿಸಿದವರಿಗೂ , ಅಂತಹ ಎಂಪೆರುಮಾನರನ್ನು ಅಗಲಿಕೆಯಿಲ್ಲದೆ ಅನುದಿನವೂ ಆಸ್ವಾದಿಸುತ್ತಿರುವ ಭಕ್ತರು ನಮಗೆ ನಾಯಕರು. ಅಂತಹ ಭಕ್ತರಿಗೆ ಮಾತ್ರ ಸೇವೆ ಸಲ್ಲಿಸುವ ಸಂತತಿಯಲ್ಲೇ ನಾನು ಹುಟ್ಟಬೇಕು. ಮತ್ತು ಹೊಗಳಿಕೆಗೆ ಪಾತ್ರವಾಗುವಂತಹ ಕಾರ್ಯವಾದ ಅವರನ್ನು ಪ್ರತಿಯೊಂದು ಮಹಾಕಲ್ಪಗಳಲ್ಲಿಯೂ ಸಂಭವಿಸುವ ಮಧ್ಯಮ ಕಲ್ಪದಲ್ಲಿ ಅವರ ಸಾನ್ನಿಧ್ಯ ನನಗೆ ಸಿಗಬೇಕು.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ಈ ಪದಿಗೆಯ ಪರಿಣಿತರಾಗುತ್ತಾರೋ ಅವರಿಗೆ ಈ ಪದಿಗೆಯಲ್ಲಿ ವಿವರಿಸಿರುವ ‘ಭಾಗವತ ಶೇಷತ್ವಮ್’ (ಭಕ್ತರಿಗೇ ಸೇವೆ ಸಲ್ಲಿಸುವ ಭಾಗ್ಯ) ಸಿಕ್ಕಿ, ಇಲ್ಲಿಯೇ ಅವರವರ ಕುಟುಂಬದೊಂದಿಗೆ ಸಂತೋಷವಾಗಿರುತ್ತಾರೆ.”
ನಲ್ಲ ಕೋಟ್‍ಪಾಟ್ಟುಲಗಙ್ಗಳ್ ಮೂನ್‍ಱಿನುಳ್ಳುಮ್ ತಾನ್ ನಿಱೈನ್ದ,
ಅಲ್ಲಿಕ್ಕಮಲಕ್ಕಣ್ಣನೈ ಅನ್ದಣ್ ಕುರುಗೂರ್ ಚ್ಚಡಗೋಪನ್,
ಶೊಲ್ಲಪಟ್ಟ ಆಯಿರತ್ತುಳ್ ಇವೈಯುಮ್ ಪತ್ತುಮ್ ವಲ್ಲಾರ್ಗಳ್,
ನಲ್ಲ ಪದತ್ತಾಲ್ ಮನೈ ವಾೞ್‍ವರ್ ಕೊಣ್ಡ ಪೆಣ್ಡೀರ್ ಮಕ್ಕಳೇ ॥


ಎಂಪೆರುಮಾನರು ವಿಸ್ತಾರವಾಗುತ್ತಿರುವ ಮೂರು ಲೋಕಗಳಲ್ಲೂ ಹರಡಿಕೊಂಡಿದ್ದಾರೆ ಮತ್ತು ಅವರಿಗೆ ಕಮಲದ ಹೂಗಳಂತಹ ಕಣ್ಣುಗಳಿವೆ. ಯಾರು ಈ ಹತ್ತು ಪಾಸುರಗಳನ್ನು ಉತ್ತೇಜಕವಾದ ಆಳ್ವಾರ್ ತಿರುನಗರಿಯ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ರಚಿಸಿದ ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಪಠಿಸುತ್ತಾರೋ , ಅವರು ಗೃಹಸ್ತಾಶ್ರಮದಲ್ಲಿ ಸರಿಹೊಂದುವ ಪತ್ನಿ ಮತ್ತು ಸುತರೊಂದಿಗೆ ವಿಶಿಷ್ಟವಾದ ತದಿಯ ಶೇಷತ್ವಮ್‍ನಲ್ಲಿ ಸಂತೋಷದಿಂದ ಬಾಳಿ ಬದುಕುತ್ತಾರೆ.

ನಮ್ಮಾೞ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-8-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ಮೊೞಿ – ಸರಳ ವಿವರಣೆ – 7.4 – ಆೞಿಯೆೞ

Published by:


ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.2 – ಕಙ್ಗುಲುಮ್

ಎಂಪೆರುಮಾನರ ಅಗಲಿಕೆಯಿಂದ ಅತೀವ ದುಃಖಗೊಂಡು ಎರಡು ಪದಿಗೆಗಳಲ್ಲಿ ಅತ್ಯಂತ ಯಾತನೆ, ಬೇಗುದಿಯಿಂದ ಆಳ್ವಾರರು ಹಾಡಿದ್ದರು. ಇದನ್ನು ನೋಡಿದ ಎಂಪೆರುಮಾನರು ಆಳ್ವಾರರನ್ನು ಸಮಾಧಾನ ಪಡಿಸಲು ತನ್ನ ಎಲ್ಲಾ ವಿಜಯದ ಚಿಹ್ನೆಗಳನ್ನು ಆಳ್ವಾರರಿಗೆ ತೋರಿಸಿದರು. ಅದನ್ನು ಆಳವಾಗಿ ಅನುಭವಿಸಿದ ಆಳ್ವಾರರು , ಎಲ್ಲರಿಗೂ ಆ ಅನುಭವ ಸಿಗುವಂತೆ ಕರುಣೆಯಿಂದ ಈ ಹತ್ತು ಪಾಸುರಗಳನ್ನು ‘ಆೞಿಯೆೞ’ ಎಂಬ ಪಾಸುರದಿಂದ ಆರಂಭಿಸುತ್ತಾರೆ.

ಪಾಸುರಮ್ 1:
ಆಳ್ವಾರರು ಎಂಪೆರುಮಾನರ ದಿವ್ಯ ಕ್ರಿಯೆಯಾದ ಮೂರು ಲೋಕಗಳನ್ನು ಅಳೆಯುವುದನ್ನು ಈ ಪಾಸುರದ ಮೂಲಕ ವಿವರಿಸಿ ಸಂತೋಷ ಹೊಂದುತ್ತಾರೆ.
ಆೞಿಯೆೞ ಚ್ಚಙ್ಗುಮ್ ವಿಲ್ಲುಮ್ ಎೞ, ತಿಶೈ
ವಾೞಿ ಎೞ ತ್ತಣ್ಡುಮ್ ವಾಳುಮ್ ಎೞ, ಅಣ್ಡಮ್
ಮೋೞೈಯೆೞ ಮುಡಿ ಪಾದಮ್ ಎೞ, ಅಪ್ಪನ್
ಊೞಿಯೆೞ ಉಲಗಮ್ ಕೊಣ್ಡವಾಱೇ॥

ದಿವ್ಯ ಚಕ್ರವು ದಿವ್ಯ ಶಂಖುವಿನೊಂದಿಗೆ , ದಿವ್ಯ ಬಿಲ್ಲು, ದಿವ್ಯ ಗದೆ, ದಿವ್ಯ ಕತ್ತಿಗಳೊಂದಿಗೆ ಮೇಲೆದ್ದು ಬರುವಂತೆ ಕಾಣಿಸುತ್ತಿದೆ. ಮಂಗಳಾಶಾಸನದ ಗದ್ದಲವು ಎಲ್ಲಾ ದಿಕ್ಕಿನಲ್ಲಿರುವ ಜನಗಳಿಂದ ಕೇಳಿ ಬರುತ್ತಿದೆ. ದಿವ್ಯ ಕಿರೀಟವು ಮತ್ತು ದಿವ ಪಾದಗಳು ಎರಡೂ ಒಟ್ಟಿಗೆ ಮೇಲೆದ್ದು ಬಂದು, ಅಂಡಾಕಾರದ ಈ ವಿಶ್ವವನ್ನೇ ಮೇಲ್ಭಾಗದಲ್ಲಿ ಒಡೆದು ಏರುವ ಹಾಗಿದೆ. ನೀರಿನಿಂದ ಗುಳ್ಳೆಗಳು ಏರುತ್ತಿವೆ. ಈ ರೀತಿಯಿಂದ ಸರ್ವೇಶ್ವರನು ಎಲ್ಲಾ ಲೋಕಗಳಿಗೂ ನಾಯಕನಾದವನು ಅವುಗಳನ್ನು ಅಳೆದು ಸ್ವೀಕರಿಸಿ, ಆಶ್ಚರ್‍ಯ ಪಡಿಸಿದನು. ಕಾಲಗಳ ವ್ಯತ್ಯಾಸವನ್ನು ತಿಳಿಯಪಡೆಸಿದನು.

ಪಾಸುರಮ್ 2:
ಆಳ್ವಾರರು ಎಂಪೆರುಮಾನರ ಸಮುದ್ರ ಮಥನದ ಕ್ರಿಯೆಯನ್ನು ಆನಂದಿಸುತ್ತಾರೆ.
ಆಱು ಮಲೈಕ್ಕೆದಿರ್ನ್ದು ಓಡುಮ್ ಒಲಿ, ಅರ
ಊಱು ಶುಲಾಯ್ ಮಲೈ ತೇಯ್‍ಕ್ಕುಮ್ ಒಲಿ, ಕಡಲ್
ಮಾಱು ಶುೞನ್ ಅೞೈಕ್ಕಿನ್‍ಱ ಒಲಿ, ಅಪ್ಪನ್
ಶಾಱುಪಡ ಅಮುದಮ್ ಕೊಣ್ಡ ನಾನ್‍ಱೇ॥

ಶ್ರೇಷ್ಠ ಪೋಷಕನಾದ ಸರ್ವೇಶ್ವರನು , ದೇವತೆಗಳಿಗೆ ಅಮೃತವನ್ನು ದೊರಕಿಸಿ ಕೊಟ್ಟಾಗ, ಈ ರೀತಿಯ ಶಬ್ದಗಳು ಕೇಳಿಸಿದವು. ಅ) ನದಿಗಳು ಪರ್ವತದ ವಿರುದ್ಧ ದಿಕ್ಕಿನಲ್ಲಿ ಮೇಲೆ ಹತ್ತುವ ಶಬ್ದ. ಆ) ಮಂದರ ಪರ್ವತದ ಸುತ್ತಲೂ ಸುತ್ತಿಕೊಂಡಿರುವ ವಾಸುಕಿ ಸರ್ಪದ ದೇಹವು ಉಜ್ಜುವ ಶಬ್ದ. ಇ) ಸಮುದ್ರವು ಸುರುಳಿಯಾಗಿ ಸುಳಿ ಏರ್ಪಟ್ಟು ಕರೆಯುವ ಶಬ್ದ.

ಪಾಸುರಮ್ 3:
ಆಳ್ವಾರರು ಎಂಪೆರುಮಾನರ ಮಹಾವರಾಹ (ದೊಡ್ಡ ಹಂದಿ) ಅವತಾರವೆತ್ತಿದ್ದನ್ನು ಮೆಲುಕು ಹಾಕುತ್ತಾರೆ.
ನಾನ್‍ಱಿಲ ಏೞ್ ಮಣ್ಣುಮ್ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್ ಮಲೈ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್‍ಕಡಲ್ ತಾನತ್ತವೇ, ಅಪ್ಪನ್
ಊನ್‍ಱಿ ಇಡನ್ದು ಎಯಿತ್ತಿಲ್ ಕೊಣ್ಡ ನಾಳೇ ॥

ಈ ಪೃಥ್ವಿಯು ಪ್ರಳಯದ ಕಾಲದಲ್ಲಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋದಾಗ , ಶ್ರೇಷ್ಠ ಪೋಷಕನಾದ ಎಂಪೆರುಮಾನರು , ಅದನ್ನು ತನ್ನ ಕೋರೆಹಲ್ಲುಗಳಿಂದ ಅಗೆದು ತೆಗೆದು ರಕ್ಷಿಸಿ, ಅದನ್ನು ವಿಶ್ವದಲ್ಲಿರುವ ತನ್ನ ಕಕ್ಷೆಯಲ್ಲಿ ಮತ್ತೆ ದೂಡುತ್ತಾನೆ. ಬೇರೆ ಬೇರೆ ನೆಲದ ಪ್ರದೇಶಗಳು ಏಳು ರೀತಿಯ ದ್ವೀಪಗಳಾಗಿ, ತಮ್ಮ ತಮ್ಮ ಮೂಲ ಜಾಗಕ್ಕೆ ಜಾರದಂತೆ ಸ್ಥಾಪಿತವಾದವು. ಏಳು ಮುಖ್ಯ ಪರ್ವತಗಳು ತಮ್ಮ ಮೂಲ ಪ್ರದೇಶದಲ್ಲೇ ಅಲ್ಲಾಡದೇ ಬೇರು ಬಿಟ್ಟವು. ಮತ್ತೆ ಮುಂದೆ ಏಳು ಸಮುದ್ರಗಳು ತಮ್ಮ ಮೂಲ ಸ್ಥಾನದಲ್ಲಿಯೇ ಸಮುದ್ರತೀರಗಳನ್ನು ಉಲ್ಲಂಘಿಸದೇ ಸ್ಥಾಪಿತವಾದವು.

ಪಾಸುರಮ್ 4:
ಆಳ್ವಾರರು ಕರುಣೆಯಿಂದ ಮಹಾ ಪ್ರಳಯದ(ಸಂಪೂರ್ಣ ಮುಳುಗಿದ) ಕಾಲದಲ್ಲಿ ಎಂಪೆರುಮಾನರು ಹೇಗೆ ರಕ್ಷಿಸಿದರು ಎಂದು ವಿವರಿಸಿದ್ದಾರೆ. “ಮಧ್ಯಂತರ ಪ್ರಳಯವನ್ನು ಪುರಾಣದ ಪ್ರಕಾರ ಹೇಗೆ ಮಾರ್ಕಂಡೇಯನು ‘ಹೊರಗಿನಿಂದ ಮತ್ತು ಎಂಪೆರುಮಾನರ ದಿವ್ಯ ಹೊಟ್ಟೆಯ ಒಳಗಿನಿಂದ’ ಕಂಡನೋ ಅದನ್ನು ಆಳ್ವಾರರು ಕರುಣೆಯಿಂದ ಹೇಳಿದ್ದಾರೆ” ಎಂದು ಕೆಲವು ಆಚಾರ್‍ಯರು ಕರುಣೆಯಿಂದ ಹೇಳಿದ್ದಾರೆ.
ನಾಳುಮ್ ಎೞ ನಿಲನೀರುಮ್ ಎೞ, ವಿಣ್ಣುಮ್
ಕೋಳುಮ್ ಎೞ ಎರಿಕಾಲುಮ್ ಎೞ, ಮಲೈ
ತಾಳುಮೆೞ ಚ್ಚುಡರ್ ತಾನುಮ್‍ ಎೞ, ಅಪ್ಪನ್
ಊಳಿ ಎೞ ಉಲಗಮ್ ಉಣ್ಡ ಊಣೇ ॥

ಎಂಪೆರುಮಾನರು ಅತ್ಯದ್ಭುತ ರೀತಿಯಲ್ಲಿ ಇಡೀ ವಿಶ್ವವನ್ನೇ ನುಂಗಿದರು. ‘ಅವರು ಅತ್ಯಂತ ಹಸಿವೆಯಿಂದ ನುಂಗಿದರು’ ಎಂದೂ ಹೇಳಿಕೆಯಿದೆ. ಇದರಿಂದ ಹಗಲು ಮತ್ತು ರಾತ್ರಿ, ನೆಲ ಮತ್ತು ನೀರಿನ ಪ್ರದೇಶ, ಆಕಾಶ ಮತ್ತು ಗ್ರಹಗಳು, ಪರ್ವತದ ಬುಡದ ಪ್ರದೇಶ ಮತ್ತು ಹೊಳೆಯುವ ನಕ್ಷತ್ರದ ನಡುವಿನ ಅಂತರವನ್ನು ತಮ್ಮ ಅಧೀನಕ್ಕೆ (ಹತೋಟಿಗೆ) ತೆಗೆದು ಕೊಂಡರು.

ಪಾಸುರಮ್ 5:
ಆಳ್ವಾರರು ಮಹಾಭಾರತದ ಯುದ್ಧವನ್ನು ಆನಂದಿಸುತ್ತಾರೆ. ಭೂಮಿಯ ಹೊರೆಯನ್ನು ಇಳಿಸಲು ಈ ಯುದ್ಧವು ನಡೆದಿದೆ ಎಂದು ಹೇಳಿದ್ದಾರೆ.
ಊಣುಡೈ ಮಲ್ಲರ್ ತದೈನ್ದ ಒಲಿ, ಮನ್ನರ್
ಆಣುಡೈ ಚ್ಚೇನೈ ನಡುಙ್ಗುಮ್ ಒಲಿ, ವಿಣ್ಣುಳ್
ಏಣುಡೈ ತ್ತೇವರ್ ವೆಳಿಪ್ಪಟ್ಟ ಒಲಿ, ಅಪ್ಪನ್
ಕಾಣುಡೈ ಪ್ಪಾರದಮ್ ಕೈಯಱೈಪೋೞ್‍ದೇ ॥

ಕೃಷ್ಣನು ತನ್ನ ಹಿಂಬಾಲಕರಿಗೆ (ಶರಣಾಗತರಿಗೆ) ಪಕ್ಷಪಾತವನ್ನು ಮಾಡಿ, ಅವರ ಜೊತೆಗೆ ಕೈಮಿಲಾಯಿಸಿ, ಅವರಿಗೆ ತನ್ನ ಬೆಂಬಲವನ್ನು ಕೊಟ್ಟು, ಅವರನ್ನು ಮಹಾಭಾರತದ ಯುದ್ಧ ಮಾಡಲು ಹುರಿದುಂಬಿಸಿದನು. ಆ ಯುದ್ಧದಲ್ಲಿ ಈ ರೀತಿಯ ಶಬ್ದಗಳು ಕೇಳಿ ಬಂದವು . ಅ) ಅಪ್ರತಿಮ ಮಲ್ಲಯುದ್ಧಗಾರರ ದೇಹದಲ್ಲಿರುವ ಶಕ್ತಿಯಿಂದ ಒಬ್ಬರನ್ನೊಬ್ಬರು ತಾಗಿ ಬೀಳುವ ಶಬ್ದ. ಆ) ಅನೇಕ ಶೂರ ಸಿಪಾಯಿಗಳನ್ನು ಹೊಂದಿರುವ ರಾಜರ ಸೇನೆಯು ಮಾಡುವ ಶಬ್ದ. ಇ) ಆಕಾಶದಲ್ಲಿ ಮುಖ್ಯ ದೇವತೆಗಳೆಲ್ಲಾ ಅವರವರ ಜಾಗದಲ್ಲಿ ನಿಂತು, ಕಾಣಿಸಿಕೊಂಡು ಸಂಭ್ರಮಾಚರಣೆಯ ಶಬ್ದ.

ಪಾಸುರಮ್ 6:
ಆಳ್ವಾರರು ಕರುಣೆಯಿಂದ ಹಿರಣ್ಯನ ವಧೆಯನ್ನು ವಿವರಿಸಿದ್ದಾರೆ. ಭಕ್ತನನ್ನು ಸಲಹುವ ಉದ್ದೇಶದಿಂದ ಹಿರಣ್ಯನನ್ನು ಕೊಲ್ಲಲಾಗಿದೆ ಎಂದು.
ಪೋೞ್‍ನ್ದು ಮೆಲಿನ್ದ ಪುನ್‍ಶೆಕ್ಕರಿಲ್ , ವಾನ್ ತಿಶೈ
ಶೂೞುಮ್ ಎೞುನ್ದು ಉದಿರಪ್ಪುನಲಾ, ಮಲೈ
ಕೀೞ್‍ನ್ದು ಪಿಳನ್ದ ಶಿಙ್ಗ ಮೊತ್ತದಾಲ್, ಅಪ್ಪನ್
ಆೞ್‍ತುಯರ್ ಶೆಯ್‍ದು ಅಶುರರೈ ಕ್ಕೊಲ್ಲುಮಾಱೇ ॥

ದಿನವು ಪೂರ್ಣಗೊಂಡಾಗ , ಎಂಪೆರುಮಾನರು ನರಸಿಂಹನಾಗಿ ಮೇಲೆದ್ದು, ಎಳೆಯ ಕೆಂಪಾಗಿರುವ ಆಕಾಶದಲ್ಲಿ , ಸಂಜೆಯ ವೇಳೆಯಲ್ಲಿ , ಆಕಾಶದ ಎಲ್ಲಾ ದಿಕ್ಕಿನಲ್ಲಿಯೂ ಕೆಂಪಾದ ರಕ್ತದ ಹೊಳೆಯನ್ನೇ ಹರಿಸಿ, ಹಿರಣ್ಯನೆಂಬ ರಾಕ್ಷಸನನ್ನು ಕೊಂದರು. ಒಂದು ದೊಡ್ಡ ಸಿಂಹವು ಮಹಾಪರ್ವತವನ್ನು ಒಡೆದಂತೆ , ರಾಕ್ಷಸನನ್ನು ಕೊಂದ ರೀತಿ ಇತ್ತು.

ಪಾಸುರಮ್ 7:
ಆಳ್ವಾರರು ರಾವಣನ ವಧೆಯನ್ನು ಆನಂದಿಸುತ್ತಾರೆ.
ಮಾಱು ನಿರೈತ್ತು ಇರೈಕ್ಕುಮ್ ಶರಙ್ಗಳ್ , ಇನ
ನೂಱುಪಿಣಮ್ ಮಲೈಪೋಲ್ ಪುರಳ, ಕಡಲ್
ಅಱು ಮಡುತ್ತುದಿರಪ್ಪುನಲಾ, ಅಪ್ಪನ್
ನೀಱುಪಡ ಇಲಙ್ಗೈ ಶೆತ್ತ ನೇರೇ॥

ಬಾಣಗಳ ಗುಂಪು ತಾಗಿದಾಗ ಮಹಾ ಶಬ್ದವನ್ನೇ ಮಾಡುತ್ತಿತ್ತು. ಅವುಗಳು ನೂರು, ಸಾವಿರಾರು ರಾಕ್ಷಸರ ಮೃತದೇಹಗಳನ್ನು ಬೆಟ್ಟಗಳು ಉರುಳುವಂತೆ, ಬೀಳುವಂತೆ ಮಾಡುತ್ತಿದ್ದವು. ಸಮುದ್ರವು ರಕ್ತದ ಹೊಳೆಯಿಂದ ಕೆಂಪಾಗುತ್ತಿತ್ತು. ಹೀಗೆ ಚಕ್ರವರ್ತಿ ತಿರುಮಗನಾದ ರಾಮನು , ತನ್ನ ಶರಣಾಗತರಿಗೆ ರಕ್ಷಣೆಯನ್ನು ಕೊಡುತ್ತಾ , ಲಂಕೆಯನ್ನು ನಶಿಸಿ, ಬೂದಿ ಮಾಡಲು, ಧರ್ಮಯುದ್ಧದಲ್ಲಿ ಹೋರಾಡಿದರು.

ಪಾಸುರಮ್ 8:
ಆಳ್ವಾರರು ಕೃಷ್ಣನು ಬಾಣನ ಮೇಲೆ ವಿಜಯ ಸಾಧಿಸಿದ್ದನ್ನು ಮೆಲುಕು ಹಾಕುತ್ತಾರೆ.
ನೇರ್ ಶರಿನ್ದಾನ್ ಕೊಡಿಕ್ಕೋೞಿಕೊಣ್ಡಾನ್ , ಪಿನ್ನುಮ್
ನೇರ್ ಶರಿನ್ದಾನ್ ಎರಿಯುಮ್ ಅನಲೋನ್, ಪಿನ್ನುಮ್
ನೇರ್ ಶರಿನ್ದಾನ್ ಮುಕ್ಕಣ್ ಮೂರ್ತ್ತಿ ಕಣ್ಡೀರ್ ,ಅಪ್ಪನ್
ನೇರ್ ಶರಿ ವಾಣನ್ ತಿಣ್ ತೋಳ್ ಕೊಣ್ಡವನ್‍ಱೇ ॥

ಆ ದಿನ ಕೃಷ್ಣನು ಅನಿರುದ್ಧನಿಗೆ ಸಹಾಯ ಮಾಡಲು , ಬಾಣನ ಮೇಲೆ ವಿಜಯ ಸಾಧಿಸಿದನು. ಬಾಣನ ಸಹಾಯಕ್ಕೆ ರುದ್ರರು, ಸುಬ್ರಹ್ಮಣ್ಯ ಮುಂತಾದವರು ಇದ್ದರು. ನವಿಲಿನ ಧ್ವಜವನ್ನು ಹೊಂದಿರುವ ಸುಬ್ರಹ್ಮಣ್ಯರು ಯುದ್ಧ ಮಾಡಲಾರದೆ ಬಿದ್ದರು. ಅಗ್ನಿಯು ತನ್ನ ಏರುತ್ತಿರುವ ಜ್ವಾಲೆಯ ಜೊತೆಗೇ ಕೃಷ್ಣನನ್ನು ತಡೆಯಲಾರದೇ ಬಿದ್ದನು, ತನ್ನ ಮೂರು ಕಣ್ಣುಗಳಿಂದ ಅತ್ಯಂತ ಶಕ್ತಿವಂತರಾದ ದೇವತೆಗಳಿಗೇ ಮುಖ್ಯನಾದ ರುದ್ರರು ಯುದ್ಧ ಭೂಮಿಯಿಂದ ಓಡಿಹೋದರು. ಈ ಕಥೆಗಳೆಲ್ಲಾ ಪ್ರಸಿದ್ಧವಾಗಿರುವುದಲ್ಲವೇ ?

ಪಾಸುರಮ್ 9:
ಆಳ್ವಾರರು ಭಗವಂತನು ಈ ವಿಶ್ವವನ್ನು ಸೃಷ್ಟಿಸಿದ್ದನ್ನು ಕರುಣೆಯಿಂದ ಹೇಳುತ್ತಾರೆ. (ವಿವರಿಸುತ್ತಾರೆ).
ಅನ್‍ಱು ಮಣ್ ನೀರ್ ಎರಿ ಕಾಲ್ ವಿಣ್ ಮಲೈ ಮುದಲ್
ಅನ್‍ಱು ಶುಡರಿರಣ್ಡು ಪಿಱವುಮ್ , ಪಿನ್ನುಮ್
ಅನ್‍ಱು ಮೞೈ ಉಯಿರ್ ತೇವುಮ್ ಮಟ್ರುಮ್, ಅಪ್ಪನ್
ಅನ್‍ಱು ಮುದಲ್ ಉಲಗಮ್ ಶೆಯ್‍ದದುಮೇ ॥

ಮೊದಲು ರಚನೆಯಲ್ಲಿ , ಶ್ರೇಷ್ಠ ಪೋಷಕನಾದ ಸರ್ವೇಶ್ವರನು ವಿಶ್ವವನ್ನು ರಚಿಸಿದನು. ಅವನು ಐದು ಮುಖ್ಯ ಪ್ರಾಣಗಳನ್ನು ಭೂಮಿಯಿಂದ ಮೊದಲುಗೊಂಡು , ಪರ್ವತಗಳನ್ನು ಮತ್ತು ಇತರೆ ಲೌಕಿಕ ವಸ್ತುಗಳನ್ನು ರೂಪಿಸಿದನು. ಅವನು ಚಂದ್ರ ಮತ್ತು ಸೂರ್‍ಯರನ್ನೂ, ಮತ್ತು ಇತರೆ ಹೊಳೆಯುವ ವಸ್ತುಗಳನ್ನೂ ರಚಿಸಿದನು. ಮತ್ತು ಮಳೆಯನ್ನು ಸೃಷ್ಟಿಸಿದನು. ಭೂಮಿಯಲ್ಲಿ ಮಳೆಯನ್ನು ಅವಲಂಬಿಸಿರುವ ಇತರೆ ಜೀವಿಗಳನ್ನು ಹುಟ್ಟಿಸಿದನು. ಮಳೆಯನ್ನು ನಿಯಂತ್ರಿಸಲು ದೇವತೆಗಳನ್ನು ಸೃಷ್ಟಿಸಿದನು.
 ಇದರ ಅರ್ಥ , ಆಳ್ವಾರರು ಪ್ರಳಯದ ನಂತರದ ಮೊದಲ ಸೃಷ್ಟಿಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ.

ಪಾಸುರಮ್ 10:
ಆಳ್ವಾರರು ಎಂಪೆರುಮಾನರ ಗೋವರ್ಧನ ಬೆಟ್ಟವನ್ನು ಎತ್ತಿದ ಕ್ರಿಯೆಯನ್ನೂ ಮತ್ತು ಹಸುಗಳನ್ನೂ, ದನಕಾಯುವವರನ್ನೂ ರಕ್ಷಿಸಿದ ಕ್ರಿಯೆಯನ್ನೂ ಆನಂದಿಸುತ್ತಾರೆ.
ಮೇಯ್ ನಿರೈ ಕೀೞ್ ಪುಗ ಮಾ ಪುರಳ , ಶುನೈ
ವಾಯ್ ನಿಱೈ ನೀರ್ ಪಿಳಿಱಿ ಚ್ಚೊರಿಯ, ಇನ
ಆನಿರೈ ಪಾಡಿ ಅಙ್ಗೇ ಒಡುಙ್ಗ , ಅಪ್ಪನ್
ತೀಮೞೈ ಕಾತ್ತು ಕ್ಕುನ್‍ಱಮ್ ಎಡುತ್ತಾನೇ ॥

ಕೃಷ್ಣನು ಅಪಾಯವನ್ನು ತಪ್ಪಿಸಲು , ಗೋವರ್ಧನ ಬೆಟ್ಟವನ್ನು ಎತ್ತಿ , ದುರಂತಕ್ಕೆ ಕಾರಣವಾಗುವಂತಹ ಮಳೆಯಿಂದ ರಕ್ಷಿಸಿ, ಹುಲ್ಲು ತಿನ್ನುವ ಹಸುಗಳಿಗೆ ಬೆಟ್ಟದ ಕೆಳಗೆ ಆಶ್ರಯವನ್ನು ಕೊಟ್ಟನು. ಬೆಟ್ಟದ ಮೇಲೆ ವಾಸಿಸುತ್ತಿದ್ದ ವನ್ಯಮೃಗಗಳು ಜಾರಿ ಬಿದ್ದರೆ ಅವುಗಳಿಗೆ ಪೆಟ್ಟಾಗದಂತೆ ನೀರಿನ ಮೇಲೆ ಬೀಳುವ ವ್ಯವಸ್ಥೆಯನ್ನೂ ಮಾಡಿದನು. ತಿರುವಾಯ್‍ಪ್ಪಾಡಿಯ ಹಸುಗಳಿಗೆ ಮತ್ತು ದನಕಾಯುವವರಿಗೆ ಈ ರೀತಿಯಾಗಿ ಆಶ್ರಯ ಕೊಟ್ಟು ರಕ್ಷಿಸಿದನು.

ಪಾಸುರಮ್ 11:
ಆಳ್ವಾರರು ಹೇಳುತ್ತಾರೆ “ ಯಾರು ಈ ಹತ್ತು ಪಾಸುರಗಳನ್ನು , ಎಂಪೆರುಮಾನರ ವಿಜಯ ಸಾಧಿಸಿದ ಅಮಿತವಾದ ಪಟ್ಟಿಯನ್ನು ಕಲಿಯುತ್ತಾರೋ, ಅವರಿಗೆ ವಿಜಯವನ್ನು ಈ ಪದಿಗೆಯು ನೀಡುತ್ತದೆ.
ಕುನ್‍ಱಮೆಡುತ್ತ ಪಿರಾನ್ ಅಡಿಯಾರೊಡುಮ್ ,
ಒನ್‍ಱಿನಿನ್‍ಱ ಶಡಗೋಪನ್ ಉರೈಶೆಯಲ್ ,
ನನ್‍ಱಿಪುನೈನ್ದ ಓರ್ ಆಯಿರತ್ತುಳ್ ಇವೈ,
ವೆನ್‍ಱಿತರುಮ್ ಪತ್ತುಮ್ ಮೇವಿ ಕ್ಕಱ್ಪಾರ್ಕ್ಕೇ ॥

ಆಳ್ವಾರರು ಗೋವರ್ಧನ ಬೆಟ್ಟವನ್ನು ಎತ್ತಿದ ಪರಮಪೋಷಕನಾದ ಕೃಷ್ಣನ , ವಿಶಿಷ್ಟವಾದ ಸೇವಕರುಗಳಾದ ಭಾಗವತರ ಅದೇ ಸ್ವರೂಪ (ಗುಣ) ಗಳನ್ನು ಹೊಂದಿ , ಅದೇ ಭಾಗವತರ ಜೊತಗೆ ಸಮಾಗಮವಾಗಿದ್ದರು. ಯಾರು ಈ ಪಾಸುರಗಳನ್ನು ಸರಿಯಾದ ಅರ್ಥದೊಂದಿಗೆ ಪಠಿಸಿ, ಇದನ್ನು ಕಲಿಯುತ್ತಾರೋ, ಅವರಿಗೆ ಈ ಪಾಸುಗಳಲ್ಲಿರುವಂತೆ ವಿಜಯ ಸ್ಥಾಪಿಸಿದ ಭಗವಂತನ ಹಾಗೇ , ಅವರಿಗೂ ಈ ಹತ್ತು ಪಾಸುರಗಳು . ಆಳ್ವಾರರ ಸಾವಿರ ಪಾಸುರದೊಂದಿಗೆ ವಿಜಯವನ್ನು ಪ್ರಾಪ್ತಿ ಮಾಡುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-7-4-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org





ತಿರುವಾಯ್ಮೊೞಿ – ಸರಳ ವಿವರಣೆ – 7.2 – ಕಙ್ಗುಲುಮ್

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 6.10 ಉಲಗಮುಣ್ಡ

ಪರಾಂಕುಶ ನಾಯಕಿ ಮತ್ತು ಶ್ರೀರಂಗನಾಥರ್

ನಮ್ಮಾಳ್ವಾರರು ಅತೀ ಖಿನ್ನರಾಗಿ ದುಃಖದಿಂದ ಪರವಶಗೊಂಡು , ಎಂಪೆರುಮಾನರಿಂದ ಅಗಲಿಕೆ ಹೊಂದಿ, ದುಃಖದಿಂದ ಸ್ತ್ರೀಯ ಭಾವನೆಯನ್ನು ಹೊಂದಿದರು. ಪರಾಂಕುಶ ನಾಯಕಿಯು , ಶ್ರೀರಂಗನಾಥರ ಮೇಲೆ ಅಪ್ರತಿಮವಾದ ಪ್ರೇಮವನ್ನು ಹೊಂದಿ, ಮಾತು ಹೊರಬಾರದೇ ಪ್ರಜ್ಞೆ ತಪ್ಪಿದಳು. ಮತ್ತೂ ಮುಂದೆ ಹೋಗಿ, ಪರಾಂಕುಶ ನಾಯಕಿಯ ದಿವ್ಯ ತಾಯಿಯ ರೂಪವನ್ನು ಹೊಂದಿದರು. ಆ ತಾಯಿಯು ತನ್ನ ಮಗಳನ್ನು ಕರೆದುಕೊಂಡು ಹೋಗಿ, ಪೆರಿಯ ಪೆರುಮಾಳಿನ ಮುಂದೆ ಇರುವ ದಿವ್ಯ ಕಂಭದ ನಡುವೆ ಕೂಡಿಸಿದರು. ಅವಳ ಅತ್ಯಂತ ದೀನ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಮುಂದೆ ವಿವರಿಸಿ, ‘ನೀನು ಅವಳನ್ನು ಎಲ್ಲಾ ರೀತಿಯಲ್ಲಿಯೂ ಕಾಪಾಡಬೇಕು’ ಎಂದು ಪ್ರಾರ್ಥಿಸಿದರು.

ಪಾಸುರಮ್ 1 :
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳ ಪ್ರಜ್ಞೆ ಇಲ್ಲದ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಹತ್ತಿರ ಹೇಳುತ್ತಾಳೆ. ಮತ್ತು ‘ಈಗ ನೀನು ಅವಳಿಗೆ ಏನು ಮಾಡುತ್ತೀಯ’ ಎಂದು ಕೇಳುತ್ತಾಳೆ.
ಕಙ್ಗುಲುಮ್ ಪಹಲುಮ್ ಕಣ್ ತುಯಿಲ್ ಅಱಿಯಾಳ್ ಕಣ್ಣನೀರ್ ಕೈಗಳಾಲ್ ಇಱೈಕ್ಕುಮ್
ಶಙ್ಗು ಶಕ್ಕರಙ್ಗಳೆನ್‌ಱು ಕೈಕೂಪ್ಪುಮ್ ತಾಮರೈ ಕ್ಕಣ್ ಎನ್‍ಱೇ ತಳರುಮ್
ಎಙ್ಗನೇ ತರಿಕ್ಕೇನ್ ಉನ್ನೈವಿಟ್ಟೆನ್ನುಮ್ ಇರು ನಿಲಮ್ ಕೈ ತುೞಾಇರುಕ್ಕುಮ್
ಶೆಙ್ಗಯಲ್ ಪಾಯ್ ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್‍ಶೆಯ್‍ಗಿನ್‍ಱಾಯೇ ॥

ಹಗಲಿನಲ್ಲಿ ಮತ್ತು ಇರುಳಿನಲ್ಲಿ ನನ್ನ ಮಗಳ ಕಣ್ಣುಗಳು ನಿದ್ರಿಸುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವಳು ತನ್ನ ಕಣ್ಣಿನಿಂದ ಸುರಿಯುವ ನೀರನ್ನು ತೊಡೆದು, ಮತ್ತೆ ಮತ್ತೆ ಶಂಖು ಚಕ್ರ ಎಂದು ಹೇಳುತ್ತಿರುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು ನಿನ್ನ ಬರುವಿಕೆಗಾಗಿ ಕಾದಿರುತ್ತಾಳೆ. ‘ತಾವರೆಯಂತಹ ಕಣ್ಣುಗಳು ‘ ಎಂದು ಹೇಳುತ್ತಾಳೆ. ಅವಳು ಅತೀ ಪ್ರಯಾಸಗೊಳ್ಳುತ್ತಾಳೆ . ‘ನೀನಿಲ್ಲದೆ ಹೇಗೆ ಬದುಕುವುದು’ ಎಂದು ಕನವರಿಸುತ್ತಾಳೆ. ಅವಳು ತನ್ನ ಕೈಗಳಿಂದ ನೆಲವನ್ನೆಲ್ಲಾ ಸವರಿ ಹುಡುಕುತ್ತಾಳೆ. ತಾನು ಚಟುವಟಿಕೆಗಳಿಲ್ಲದೆ ಇರುತ್ತಾಳೆ. ಓಹ್! ಕೋಯಿಲ್‍ನಲ್ಲಿ (ಶ್ರೀರಂಗಮ್) ವಾಸವಾಗಿರುವ ಎಂಪೆರುಮಾನರೇ! ಅಲ್ಲಿ ಕೆಂಪಾದ ಮೀನುಗಳು ನೀರಿನ ಕೊಳದಲ್ಲಿ ಜಿಗಿದು ಆಟವಾಡುತ್ತಿರುತ್ತವೆ. ಇಂತಹ ವಿಚಿತ್ರವಾದ ಭಾವನೆಗಳನ್ನು ನಿನ್ನ ಮೇಲೆ ಹೊಂದಿರುವ ಈ ಹುಡುಗಿಗೆ ಏನು ಮಾಡಬೇಕೆಂದು ಯೋಚಿಸಿರುವೆ? ಎಂದು ತಾಯಿಯು ಕೇಳುತ್ತಾಳೆ.
ಇದರ ಅರ್ಥ => ನೀನು ಅವಳ ದುಃಖವನ್ನು ದೂರ ಮಾಡುತ್ತೀಯೋ ಇಲ್ಲಾ ಅದನ್ನು ಹೆಚ್ಚಿಸುವೆಯೋ ಹೇಳು ಎಂದು ಕೇಳುತ್ತಾಳೆ.

ಪಾಸುರಮ್ 2:
ತಾಯಿಯು ಹೇಳುತ್ತಾಳೆ “ನೀನೇ ಎಲ್ಲರನ್ನೂ ಎಲ್ಲಾ ರೀತಿಯಲ್ಲಿಯೂ ಕಾಪಾಡುವವನು . ಆದರೆ ಅವಳ ಸ್ಥಿತಿಯು ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ? “
ಎನ್‍ಶೆಯ್‍ಹಿನ್‍ಱಾಯ್ ಎನ್ ತಾಮರೈಕ್ಕಣ್ಣಾ ಎನ್ನುಮ್, ಕಣ್ಣೀರ್‍‌ಮಲ್‍ಗ ಇರುಕ್ಕುಮ್
ಎನ್‍ಶೆಯ್‍ಹೇನ್ ಎಱಿ ನೀರ್ ತಿರುವರಙ್ಗತ್ತಾಯ್ ಎನ್ನುಮ್ ವೆವ್ವುಯಿರ್ ತ್ತುಯಿರ್ತ್ತುರುಗುಮ್
ಮುನ್ ಶೆಯ್‍ದ ವಿನೈಯೇ ಮುಗಪ್ಪಡಾಯ್ ಎನ್ನುಮ್ ಮುಗಿಲ್‍ವಣ್ಣಾ ತಗುವದೋ ಎನ್ನುಮ್,
ಮುನ್ ಶೆಯ್‍ದು ಇವ್ವುಲಗಮ್ ಉಣ್ಡು ಉಮಿೞ್‍ನ್ದಳನ್ದಾಯ್ ಎನ್ಗೊಲೋ ಮುಡಿಗಿನ್‍ಱದು ಇವಟ್ಕೇ॥

ಪರಾಂಕುಶ ನಾಯಕಿಯು ಹೇಳುತ್ತಾಳೆ. “ಓಹ್! ಆನಂದ ಪಡಿಸುವ ಕಣ್ಣುಗಳನ್ನು ಹೊಂದಿರುವವನೇ! ಆ ಕಣ್ಣುಗಳಿಂದಲೇ ನಾನು ಅಸ್ತಿತ್ವದಲ್ಲಿರುವೆ. ನೀನು ನನ್ನನ್ನು ಏನು ಮಾಡಬೇಕೆಂದು ಯೋಚಿಸಿರುವೆ?” ಎಂದು ಕಂಬನಿಭರಿತ ಕಣ್ಣುಗಳಿಂದ ಕುಸಿಯುತ್ತಾಳೆ. “ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ! ಅದು ಅನೇಕ ನೀರಿನ ತಂಗುದಾಣವಾಗಿದೆ. ಈಗ ನಾನೇನು ಮಾಡಲಿ” ಎಂದು ಹಪಹಪಿಸುತ್ತಾಳೆ. ಅವಳು ನೀಳವಾದ ಉಸಿರನ್ನು ಆಳವಾಗಿ ಪದೇ ಪದೇ ತೆಗೆದುಕೊಳ್ಳುತ್ತಾಳೆ. ಅವಳು ಒಳಗಡೆ ತನ್ನ ಮನದಲ್ಲಿ ಬಹಳ ಉಷ್ಣವಾಗುತ್ತಾಳೆ. ಆ ಪರಿಸ್ಥಿತಿಯಲ್ಲಿ ಕರಗಿ ಹೋಗುತ್ತಾಳೆ. ಅವಳು ಹೇಳುತ್ತಾಳೆ. “ನನ್ನ ಹಿಂದಿನ ಕರ್ಮವು ನನ್ನ ಮುಂದೆ ನಿಂತಿದೆ. ಆ ಕರ್ಮವನ್ನು ಒಂದು ಚೇತನವಾಗಿ ಪರಿಗಣಿಸುತ್ತಾಳೆ. ಏಕೆಂದರೆ , ಅದು ತೊಂದರೆಯನ್ನು ಮತ್ತು ನಷ್ಟವನ್ನೂ ಉಂಟುಮಾಡುವುದರಿಂದ. ಅವಳು ಹೇಳುತ್ತಾಳೆ “ಓಹ್! ಅತ್ಯಂತ ಪ್ರಭಾವಶಾಲಿಯಾದ ಎಂಪೆರುಮಾನರೇ! ಮೋಡಗಳು ಹೇಗೆ ಮಳೆಯನ್ನು ಸುರಿಸುವಾಗ ಆ ಪ್ರದೇಶ ಭೂಮಿಯೇ ಇಲ್ಲಾ ನೀರಿನ ತಾಣವೇ ಎಂದು ಬೇರ್ಪಡಿಸದೇ ನಿಷ್ಪಕ್ಷಪಾತದಿಂದ ಸುರಿಸುವಂತೆ ನಿನ್ನ ಕರುಣೆಯನ್ನು ನನ್ನ ಮೇಲೆ ಸುರಿಸು. ನೀನು ನನ್ನ ಮುಂದೆ ಕಾಣಿಸಿಕೊಳ್ಳದಿರುವುದು ನಿನ್ನ ವರ್ಚಸ್ಸಿಗೆ ಸೂಕ್ತವೇ “ ಎಂದು ಹೇಳುತ್ತಾಳೆ. ಅವಳ ತಾಯಿಯು ಕೇಳುತ್ತಾಳೆ “ ಓಹ್! ಮೊದಲನೆಯ ಬಾರಿಗೇ ಈ ವಿಶ್ವವನ್ನೆಲ್ಲಾ (ಎಲ್ಲಾ ಲೋಕಗಳನ್ನೂ) ನುಂಗಿ , ಆಮೇಲೆ ಅದನ್ನು ಹೊರಗೆ ಕಕ್ಕಿ, ಅದನ್ನು ಅಳೆದು, ಮತ್ತು ಕೊನೆಯಲ್ಲಿ ಅದನ್ನು ಸ್ವೀಕರಿಸಿದವನೇ! ನನ್ನ ಮಗಳಿಗೆ ಅಂತ್ಯದಲ್ಲಿ ಏನು ಆಗುತ್ತದೆ?”
ಇದರ ಅರ್ಥ : ಅವಳನ್ನು ಅವಳ ಚಿಂತೆಯಿಂದ ಪರಿಹರಿಸಿ , ನಿನ್ನಿಂದ ರಕ್ಷಿಸಲ್ಪಡುವವರ ಗುಂಪಿಗೆ ಸೇರಿಸಿಕೊಳ್ಳುತ್ತೀಯಾ? ಇಲ್ಲವೇ, ಅವಳನ್ನು ದೂರ ತಳ್ಳಿ, ನಿನ್ನಿಂದ ದೂರವೇ ಇರಿಸುತ್ತೀಯಾ?

ಪಾಸುರಮ್ 3:
ತಾಯಿಯು ಹೇಳುತ್ತಾಳೆ “ ನಿನ್ನ ಭಕ್ತರನ್ನು ಕಾಪಾಡಲು ಅಸಂಖ್ಯೇಯ ವೈರಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಅನೇಕ ಅವತಾರಗಳನ್ನು ಎತ್ತಿರುವವನೇ! ನೀನು ನನ್ನ ಮಗಳು ಈ ಸ್ಥಿತಿಗೆ ತಲುಪಲು ಏನು ಮಾಡಿರುವೆ? “ ಎಂದು ಕೇಳುತ್ತಾಳೆ.
ವಟ್ಕಿಲಳ್ ಇಱೈಯುಮ್ ಮಣಿವಣ್ಣಾ ಎನ್ನುಮ್ ವಾನಮೇ ನೋಕ್ಕುಮ್ ಮೈಯಾಕ್ಕುಮ್
ಉಟ್ಕುಡೈ ಅಶುರರ್ ಉಯಿರೆಲ್ಲಾಮ್ ಉಣ್ಡ ಒರುವನೇ ಎನ್ನುಮ್ ಉಳ್ಳುರುಗುಮ್
ಕಟ್ಕಿಲೀ ಉನ್ನೈ ಕಾಣುಮಾಱು ಅರುಳಾಯ್ ಕಾಕುತ್ತಾ ಕಣ್ಣನೇ ಎನ್ನುಮ್
ತಿಟ್ಕೊಳಿ ಮದಿಳ್ ಶೂೞ್ ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶೆಯ್‍ದಿಟ್ಟಾಯೇ॥

ನನ್ನ ಮಗಳಿಗೆ ಅವಳ ಗುರುತಾಗಿರುವ ಮತ್ತು ಸಹಜ ಸ್ವರೂಪವಾಗಿರುವ ನಾಚಿಕೆಯು ಸಂಪೂರ್ಣವಾಗಿ ಬಿಟ್ಟು ಹೋಗಿದೆ. ಅವಳು ಹೇಳುತ್ತಾಳೆ “ನನಗೆ ಅತ್ಯಂತ ವಿಧೇಯನಾಗಿರುವ ಮಾಣಿಕ್ಯವೇ! ನಿನ್ನನ್ನು ಸುಲಭವಾಗಿ ನನ್ನ ಅಂಗ ವಸ್ತ್ರದಲ್ಲಿಡಬಹುದು” ಎಂದು ಹೇಳುತ್ತಾಳೆ. ಅವಳು ಮೇಲೆ ಆಕಾಶವನ್ನು ನೋಡಿ ಮೂರ್ಛೆ ಹೋಗುತ್ತಾಳೆ. ಅವಳು ಹೇಳುತ್ತಾಳೆ “ಓಹ್! ಸ್ವಾತಂತ್ರ್ಯವಾಗಿರುವ ವೀರನೇ! ನೀನು ಅತ್ಯಂತ ದುರಹಂಕಾರದ ದೈತ್ಯರನ್ನು ಸ್ವಲ್ಪವೂ ಮಿಗಿಸದೇ ಸಂಪೂರ್ಣವಾಗಿ ಅವರ ಜೀವವನ್ನು ಕುಡಿದಿರುವೆ. “ ಅವಳು ತನ್ನ ಮನದಲ್ಲೇ ಅಳಲು ಪ್ರಾರಂಭಿಸುತ್ತಾಳೆ. “ಓಹ್! ಬರೀ ಕಣ್ಣುಗಳಿಂದ ಕಾಣಲು ಅಶಕ್ತನಾಗಿರುವವನೇ! ನನ್ನ ಕಣ್ಣುಗಳಿಗೆ ಕಾಣಿಸಿಕೊಳ್ಳು” ಎಂದು ಕೇಳಿಕೊಳ್ಳುತ್ತಾಳೆ. “ನೀನು ದಶರಥನಿಗೆ ದಿವ್ಯ ಮಗನಾಗಿ ಅವತಾರ ಪಡೆದಿಲ್ಲವೇ? ಆಗ ನೀನು ನಿನ್ನನ್ನು ನಗರಗಳಲ್ಲಿ ಮತ್ತು ಕಾಡುಗಳಲ್ಲಿ ಸ್ಥಾಪಿಸಲಿಲ್ಲವೇ?” ಮತ್ತು “ ಪುಂಸಾಮ್ ದೃಷ್ಟಿ ಚಿತ್ತಾಪಹಾರಿಣಾಮ್” ಮತ್ತು “ಧದೃಶುಃ ವಿಸ್ಮಿತಾಕಾರಾಃ” ಎಂದು ವರ್ಣಿಸಿಕೊಳ್ಳಲಿಲ್ಲವೇ? ಮತ್ತು ಕೃಷ್ಣನಾಗಿ ನೀನು ಅವತಾರವನ್ನೆತ್ತಿದ್ದಾಗ ನಿನ್ನ ವರ್ಚಸ್ಸು ಮತ್ತು ರೂಪವನ್ನು ಗೋಪಿಕೆಯರ “ದಾಸಾಮ್ ಆವಿರಭೂತ್” ಎಂದು ಸ್ಥಾಪಿಸಲಿಲ್ಲವೇ?” ಎಂದು ಕೇಳುತ್ತಾಳೆ. ತಾಯಿಯು ಹೇಳುತ್ತಾಳೆ “ ಓಹ್! ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ ! ಅದು ಬಲವಾದ ಧ್ವಜವನ್ನು ತನ್ನ ಕೋಟೆಯಲ್ಲಿ ಹೊಂದಿದೆ. ನನ್ನ ಮಗಳು ಇಂತಹ ಶೋಕದಲ್ಲಿ ಮುಳುಗಲು ನೀನು ಏನು ಮಾಡಿರುವೆ?” ಎಂದು ಕೇಳುತ್ತಾಳೆ.

ಪಾಸುರಮ್ 4:
ಪರಾಂಕುಶ ನಾಯಕಿಯ ತಾಯಿಯು ಪೆರಿಯ ಪೆರುಮಾಳಿನ ಹತ್ತಿರ ಕೇಳಿ ಕೊಳ್ಳುತ್ತಾಳೆ “ ಈ ಹುಡುಗಿಗೆ ಕರುಣೆಯಿಂದ ಒಳ್ಳೆಯದು ಮಾಡುವಂತೆ ಯೋಚಿಸು” ಎಂದು.
ಇಟ್ಟಕಾಲ್ ಇಟ್ಟಕೈಯಳಾಯ್ ಇರುಕ್ಕುಮ್ ಎೞುನ್ದುಲಾಯ್ ಮಯಙ್ಗುಮ್ ಕೈಕೂಪ್ಪುಮ್
ಕಟ್ಟಮೇ ಕಾದಲ್ ಎನ್‍ಱು ಮೂರ್ಚ್ಚಿಕ್ಕುಮ್ ಕಡಲ್‍ವಣ್ಣಾ ಕಡಿಯೈ ಕಾಣ್ ಎನ್ನುಮ್
ವಟ್ಟವಾಯ್ ನೇಮಿ ವಲಙ್ಗೈಯಾ ಎನ್ನುಮ್ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್ ,
ಶಿಟ್ಟನೇ ಶೆೞು ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶಿನ್ದಿತ್ತಾಯೇ ॥

ನನ್ನ ಮಗಳ ಕೈಗಳು ಮತ್ತು ಕಾಲುಗಳು ಎಲ್ಲಿ ಇರುತ್ತದೆಯೋ ಅದು ಕದಲುವುದೇ ಇಲ್ಲ. ಜ್ಞಾನ ತಪ್ಪಿ ಮತ್ತೆ ತಿಳಿಯಾದಾಗ , ಅವಳು ನಿಲ್ಲುತ್ತಾಳೆ, ಸುತ್ತ ನಡೆದು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಅವಳು ಅಂಜಲಿಯನ್ನು ಹಿಡಿಯುತ್ತಾಳೆ. ಅವಳು ಸಿಡಿಸಿಡಿಗೊಳ್ಳುತ್ತಾಳೆ. ಮತ್ತು ಹೇಳುತ್ತಾಳೆ “ ಪ್ರೀತಿ ಮಾಡುವುದು ಕಷ್ಟ ಸಾಧ್ಯ. “ ಅವಳು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಮತ್ತೆ ಅವಳು ಹೇಳುತ್ತಾಳೆ “ ಓಹ್! ಸಾಗರದಂತೆ ಅಳತೆಗೆ ಸಿಗದೆ ಅಗಾಧವಾಗಿ ತನ್ನಲ್ಲಿ ಎಲ್ಲವನ್ನೂ ಇಟ್ಟುಕೊಂಡು ರಕ್ಷಿಸುವವನೇ! ನೀನು ನನ್ನ ಬಗ್ಗೆ ಕ್ರೂರಿಯಾಗಿಬಿಟ್ಟೆ. ಅವಳು ಹೇಳುತ್ತಾಳೆ “ಓಹ್! ಅಂದವಾದ ದಿವ್ಯ ಚಕ್ರವನ್ನು ತನ್ನ ಬಲಗೈಯಲ್ಲಿ ಹಿಡಿದಿರುವವನೇ! “ ಎಂದು ಮತ್ತೆ ಮತ್ತೆ ಅವನನ್ನು ಕೇಳಿಕೊಳ್ಳುತ್ತಾಳೆ “ ದಯವಿಟ್ಟು ನಿನ್ನ ದಿವ್ಯ ಚಕ್ರದೊಂದಿಗೆ ಪ್ರತ್ಯಕ್ಷವಾಗು” ಮತ್ತು ತಾನು ತನ್ನ ಮತಿಯನ್ನು ಸಂಪೂರ್ಣ ಕಳೆದುಕೊಂಡು “ನಾನು ನನ್ನ ಸಹಜವಾದ ಗುಣವನ್ನು , ಪದೇ ಪದೇ ಅವರನ್ನು ಕರೆದೂ ಪೂರಾ ಕಳೆದುಕೊಂಡಿರುವೆ. ಮತ್ತು ನಾನು ನನ್ನ ಆಸೆಯನ್ನು ಮತ್ತು ಗುರಿಯನ್ನು ಸಂಪೂರ್ಣ ವಾಗಿ ಕಳೆದುಕೊಂಡಿರುವೆ. ಏಕೆಂದರೆ ಅವರು ಬರಲಿಲ್ಲವಾದ್ದರಿಂದ.” ಓಹ್! ಸುಂದರವಾದ ನದೀ ತೀರದಲ್ಲಿ ಮಲಗಿರುವವನೇ! ನೀನು ಬಹಳ ಜನಪ್ರಿಯ ಪ್ರಸಿದ್ಧನಂತೆ ಭಾವಿಸಿರುವೆ. ನೀನು ಅವಳ ಬಗ್ಗೆ ಏನೆಂದು ಆಲೋಚಿಸಿರುವೆ?
ಇದರ ಅರ್ಥ => ಅವಳನ್ನು ಇದೇ ರೀತಿ ಆಶ್ಚರ್ಯಚಕಿತಳನ್ನಾಗಿ ಮಾಡುತ್ತೀಯಾ ಇಲ್ಲವಾದರೆ ಅವಳಿಗೆ ಜ್ಞಾನದ ಪ್ರಕಾಶವನ್ನು ನೀಡುತ್ತೀಯಾ?

ಪಾಸುರಮ್ 5:
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳು ಒಂದು ಕ್ಷಣದಲ್ಲಿ ಆಗುವ ಪರಿವರ್ತನೆಯನ್ನು ತೋರಿಸಿ ಹೇಳುತ್ತಾಳೆ “ಆಶ್ರಿತ ವಾತ್ಸಲ್ಯವಾಗಿರುವ ನಿನಗೆ ಅವಳನ್ನು ಈ ರೀತಿ ಕಷ್ಟ ಪಡಿಸುವುದು ಸಮಂಜಸವಾಗಿದೆಯೇ?”
ಶಿನ್ದಿಕ್ಕುಮ್ ತ್ತಿಶೈಕ್ಕುಮ್ ತೇಱುಮ್ ಕೈಕೂಪ್ಪುಮ್ ತಿರುವರಙ್ಗತ್ತುಳ್ಳಾಯ್ ಎನ್ನುಮ್,
ವನ್ದಿಕ್ಕುಮ್ , ಆಙ್ಗೇ ಮೞೈ ಕ್ಕಣ್ಣೀರ್ ಮಲ್‍ಗ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್,
ಅನ್ದಿಪ್ಪೋದವುಣನ್ ಉಡಲ್ ಇಡನ್ದಾನೇ ಅಲೈ ಕಡಲ್ ಕಡೈನ್ದ ಆರಮುದೇ,
ಶನ್ದಿತ್ತುನ್ ಶರಣಮ್ ಶಾರ್ವದೇ ವಲಿತ್ತ ತೈಯಲೈ ಮೈಯಲ್ ಶೆಯ್‍ದಾನೇ॥

ನೀನು (ಎಂಪೆರುಮಾನರು) ಹಿರಣ್ಯನ ದೇಹವನ್ನು ಸಂಜೆಯ ವೇಳೆಯಲ್ಲಿ ತುಂಡು ತುಂಡಾಗಿಸಿರುವೆ. ನೀನು ಅಪರಿಮಿತವಾಗಿ ಆನಂದಿಸಲ್ಪಡುವೆ , ಸಮುದ್ರದ ಅಲೆಗಳಲ್ಲಿ ಮಂಥನ ಮಾಡಿರುವೆ . ಓಹ್! ನಿನ್ನಲ್ಲೇ ಸೇರಬೇಕೆಂದು ಆಸೆ ಹೊಂದಿರುವ , ಮತ್ತು ಅದಕ್ಕಾಗಿ ಪರಿಪೂರ್ಣವಾದ ರೂಪವನ್ನು ಸರಿಯಾದ ರೀತಿಯಲ್ಲಿ ಹೊಂದಿರುವ ಮತ್ತು ಬಾಹ್ಯ ಅನುಭವಕ್ಕಾಗಿ ನಿನ್ನ ಪಾದಗಳನ್ನೇ ಆನಂದಿಸಬೇಕೆಂದು ಅದರಲ್ಲಿ ಸೇರಬೇಕೆಂದು ಅಮಿತವಾಗಿ ಆಸೆ ಹೊಂದಿರುವ ನನ್ನ ಮಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾಳೆ. ಅವಳು, ನೀನು ಅವಳ ಜೊತೆ ಮೊದಲು ಹೇಗೆ ಕೂಡಿ ಇದ್ದೆಯೋ, ಅದನ್ನೇ ಯೋಚಿಸಿರುತ್ತಿರುತ್ತಾಳೆ. ಅತ್ಯಂತ ಆಶ್ಚರ್‍ಯ ಹೊಂದುತ್ತಾಳೆ. ತನ್ನನ್ನು ತಾನೇ ಸಂಭಾಳಿಸಿಕೊಂಡು ಅಂಜಲಿಯನ್ನು ನೀಡೂತ್ತಾಳೆ. ನಿನ್ನನ್ನು ‘ ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ನೆಲೆಸಿರುವವನೇ’ ಎಂದು ಕೂಗಿ ಕರೆಯುತ್ತಾಳೆ. ತನ್ನ ತಲೆಯನ್ನು ಬಗ್ಗಿಸುತ್ತಾಳೆ. ಅಲ್ಲಿಯೇ ಹಾಗೇ ನಿಲ್ಲುತ್ತಾಳೆ. ತನ್ನ ಕಣ್ಣುಗಳನ್ನು ಕಂಬನಿಭರಿತಗೊಳ್ಳುತ್ತಾಳೆ. ಬಾರಿ ಬಾರಿ ‘ಬಂದು ನನ್ನನ್ನು ಸ್ವೀಕರಿಸು’ ಎಂದು ಕೇಳುತ್ತಾಳೆ. ಜ್ಞಾನ ತಪ್ಪಿ ಬೀಳುತ್ತಾಳೆ. => ಅವಳು ಎಂಪೆರುಮಾನರ ಹತ್ತಿರ ಪ್ರೇಮವಶಗೊಂಡು ಎಲ್ಲಾ ರೀತಿಯ ಪರಿವರ್ತನೆಗೊಳಗಾಗುತ್ತಾಳೆ.

ಪಾಸುರಮ್ 6:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನಿನ್ನ ಹತ್ತಿರ ಅವಶ್ಯಕವಾಗಿರುವ ಎಲ್ಲಾ ಆಯುಧಗಳಿವೆ. (ತನ್ನ ಭಕ್ತರನ್ನು ಆಪತ್ತುಗಳಿಂದ ರಕ್ಷಿಸಲು) ಆದರೂ ನನ್ನ ಮಗಳನ್ನು ದುಃಖ ಪಡುವಂತೆ ಮಾಡಿದ್ದೀಯ. ಈಗ ಹೇಳು ನಾನು ಅವಳಿಗಾಗಿ ಏನನ್ನು ಮಾಡಬೇಕು?”
ಮೈಯಲ್ ಶೆಯ್‍ದೆನ್ನೈ ಮನಮ್ ಕವರ್ನ್ದಾನೇ ಎನ್ನುಮ್ ಮಾಮಾಯನೇ ಎನ್ನುಮ್,
ಶೆಯ್ಯ ವಾಯ್ ಮಣಿಯೇ ಎನ್ನುಮ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತುಳ್ಳಾಯ್ ಎನ್ನುಮ್,
ನೆಯ್ಯ ವಾಳ್ ತಣ್ಡು ಶಙ್ಗು ಶಕ್ಕರಮ್ ವಿಲ್ ಏನ್ದುಮ್ ವಿಣ್ಣೋರ್‌ಮುದಲ್ ಎನ್ನುಮ್,
ಪೈಕೊಳ್ ಪಾಮ್ಬಣೈಯಾಯ್ ಇವಳ್ ತಿಱತ್ತರುಳಾಯ್ ಪಾವಿಯೇನ್ ಶೆಯಱ್‍ ಪಾಲದುವೇ॥

ನನ್ನ ಮಗಳು ಹೇಳುತ್ತಾಳೆ “ಓಹ್! ನನ್ನ ಹೃದಯವನ್ನು ಕದ್ದವನೇ! ನನ್ನನ್ನು ಆಶ್ಚರ್‍ಯಚಕಿತಳನ್ನಾಗಿ ಮಾಡಿರುವೆ. ಓಹ್! ಒಂದು ಅತ್ಯಮೂಲ್ಯವಾದ ಮಾಣಿಕ್ಯವೇ! ನಿನ್ನನ್ನು ಬಹಳ ಸುಲಭವಾಗಿ ಪಡೆಯಬಹುದು. ಕೆಂಪಾದ ಸುಂದರ ದಿವ್ಯ ತುಟಿಗಳನ್ನು ಹೊಂದಿರುವವನೇ! ಓಹ್! ಕೋಯಿಲ್‍(ಶ್ರೀರಂಗಂ)ನಲ್ಲಿ ನೆಲೆಸಿರುವವನೇ , ಅದು ನೀರಿನ ಪ್ರದೇಶದಿಂದ ಸುತ್ತುವರೆದಿದೆ. ಓಹ್! ನೀನು ಐದು ವಿಧವಾದ ಆಯುಧಗಳನ್ನು ಹಿಡಿದುಕೊಂಡು ನಿನ್ನ ಶರಣಾಗತಿಯಾದವರನ್ನು ವಿಳಂಬಮಾಡದೇ ರಕ್ಷಿಸಲು ಬರುತ್ತೀಯ. ನಿತ್ಯ ಸೂರಿಗಳ ಅಸ್ತಿತ್ವಕ್ಕೆ ಕಾರಣನಾದವನೇ! ತಿರುವನಂತಾಳ್ವಾನ್ ರನ್ನು ಹಾಸಿಗೆಯಾಗಿ ಹೊಂದಿರುವವನೇ! ನನ್ನ ಮಗಳ ಕರುಣಾಜನಕ ಸ್ಥಿತಿಯನ್ನು ನೋಡಲು ಪಾಪಗಳನ್ನು ನಾನು ಮಾಡಿರುವೆ. ಅವಳ ಈ ಸ್ಥಿತಿಗೆ ನಿನ್ನ ಉತ್ತರವೇನೆಂದು ಕರುಣೆಯಿಂದಲಿ ಹೇಳು”.

ಪಾಸುರಮ್ 7:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನನ್ನ ಮಗಳು ಎಂಪೆರುಮಾನರ ಗುಣಗಳಾದ ತನ್ನ ಭಕ್ತರ ರಕ್ಷಣೆಗಾಗಿ ಸಮುದ್ರ ಶಯನರಾಗಿರುವುದು ಮುಂತಾದುವುಗಳನ್ನು ಹೇಳಲು ಉತ್ಸುಕಳಾಗಿರುತ್ತಾಳೆ.
ಪಾಲ ತುನ್ಬಙ್ಗಳ್ ಇನ್ಬಙ್ಗಳ್ ಪಡೈತ್ತಾಯ್ ಪಟ್ರಿಲಾರ್ ಪಟ್ರ ನಿನ್‍ಱಾನೇ
ಕಾಲಶಕ್ಕರತ್ತಾಯ್ ಕಡಲ್ ಇಡಮ್ ಕೊಣ್ಡ ಕಡಲ್‍ವಣ್ಣಾ ಕಣ್ಣನೇ ಎನ್ನುಮ್
ಶೇಲ್‍ಕೊಳ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತಾಯ್ ಎನ್ನುಮ್ ಎನ್‍ತೀರ್ತ್ತನೇ ಎನ್ನುಮ್,
ಕೋಲಮಾಮೞೈಕಣ್ ಪನಿ ಮಲ್‍ಗ ಇರುಕ್ಕುಮ್ ಎನ್ನುಡೈ ಕ್ಕೋಮಳಕ್ಕೊೞುನ್ದೇ॥

ನನ್ನ ನಾಜೂಕಾದ ಪ್ರವೃತ್ತಿ ಹೊಂದಿರುವ ಮಗಳು ಅವಳು ಒಂದು ಎಳೆಯದಾದ ಬಳ್ಳಿ ಇದ್ದ ಹಾಗೆ. ನೀನು ನಿನ್ನಲ್ಲಿ ಶರಣಾಗತಿ ಹೊಂದದವರಿಗೆ ದುಃಖವನ್ನೂ , ಶರಣಾಗತಿ ಹೊಂದಿದವರಿಗೆ ಸಂತೋಷವನ್ನೂ ಎಲ್ಲಾ ಪ್ರದೇಶಗಳಲ್ಲಿಯೂ ಕೊಡುತ್ತೀಯ. ನೀನು ಆಶ್ರಯವಿಲ್ಲದವರಿಗೆ ಆಶ್ರಯವಾಗಿಯೂ , ಜಯಂತನಂತೆ ನಿನ್ನಲ್ಲಿ ಶರಣಾಗತಿಯಾಗಿಲ್ಲದವರಿಗೂ ಆಶ್ರಯನಾಗಿರುವೆ. ನೀನು ಸಮಯದ ಚಕ್ರವನ್ನು ನಿಯಂತ್ರಿಸಿರುವೆ. ನೀನು ಕರುಣೆಯಿಂದ ಹಾಲಿನ ಸಮುದ್ರದಲ್ಲಿ ಶಯನಿಸಿರುವೆ. ಆ ನೋಟವು ಒಂದು ಸಮುದ್ರವು ಇನ್ನೊಂದು ಸಮುದ್ರದ ಮೇಲೆ ಮಲಗಿರುವ ಹಾಗಿದೆ. ಓಹ್! ನೀನು ಕೃಷ್ಣನಾಗಿ ನಿನ್ನ ಭಕ್ತರನ್ನು ರಕ್ಷಿಸಲು ಅವತರಿಸಿರುವೆ. ಓಹ್! ಕೋಯಿಲ್(ಶ್ರೀರಂಗಂ)ನಲ್ಲಿ ನೆಲೆಸಿರುವವನೇ! ಅದು ಕಾವೇರಿಯ ತಣ್ಣಗಿನ ನೀರಿನಿಂದ ಮತ್ತು ಅದರಲ್ಲಿ ಇರುವ ಮೀನುಗಳಿಂದ ಸುತ್ತುವರಿಯಲ್ಪಟ್ಟಿದೆ. ಓಹ್! ನೀನು ಪವಿತ್ರವಾದ ಒಂದು ನದಿಯಂತೆ! ಅದರಲ್ಲಿ ನಾನು ಮುಳುಗಬೇಕೆಂದಿರುವೆ. ಎಂದು ಹೇಳಿ ತಾನು ನಿಷ್ಕ್ರಿಯವಾಗಿ, ಕಂಬನಿಗಳನ್ನು ತನ್ನ ಸುಂದರವಾದ, ವಿಶಾಲವಾದ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾಳೆ.

ಪಾಸುರಮ್ 8:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ ,” ನಾನು ನನ್ನ ಮಗಳಲ್ಲಿ ಮತ್ತೆ ಮತ್ತೆ ಬರುವ ನರಳಾಟಕ್ಕೆ ಏನು ಮದ್ದು ಮಾಡಲಿ?” ಎಂದು.
ಕೊೞುನ್ದು ವಾನವರ್ಗಟ್ಕೆನ್ನುಮ್ ಕುನ್‍ಱೇನ್ದಿ ಕ್ಕೋನಿರೈ ಕಾತ್ತವನ್ ಎನ್ನುಮ್,
ಅೞುಮ್ ತೊೞುಮ್ ಆವಿ ಅನಲ ವೆವ್ವುಯಿರ್ಕ್ಕುಮ್ ಅಞ್ಜನವಣ್ಣನೇ ಎನ್ನುಮ್,
ಎೞುನ್ದು ಮೇಲ್ ನೋಕ್ಕಿ ಇಮೈಪ್ಪಿಲಳ್ ಇರುಕ್ಕುಮ್ ಎಙ್ಗನೇ ನೋಕ್ಕುಗೇನ್ ಎನ್ನುಮ್,
ಶೆೞುಮೇ ತಡಮ್ ಪುನಲ್ ಶೂೞ್ ತಿರುವರಙ್ಗತ್ತಾಯ್ ಎನ್‍ಶೆಯ್‍ಹೇನ್ ಎನ್ ತಿರುಮಗಟ್ಕೇ॥

ನನ್ನ ಮಗಳು ಹೇಳುತ್ತಾಳೆ, ಅವರು ನಿತ್ಯಸೂರಿಗಳಿಗೆಲ್ಲಾ ನಾಯಕರಾದವರು. ಪರ್ವತವನ್ನೇ ತನ್ನ ಕಿರುಬೆರಳಲ್ಲಿ ಎತ್ತಿ ಅಮಾನುಷವಾದ ಕಾರ್ಯವನ್ನು ಮಾಡಿ ಹಸುಗಳನ್ನೂ, ಗೊಲ್ಲರನ್ನೂ ರಕ್ಷಿಸಿದರು. ಅವಳು ತನ್ನ ಕಂಬನಿಭರಿತ ಕಣ್ಣುಗಳಿಂದ ಭಕ್ತಿಯಲ್ಲಿ ಮುಳುಗಿ ಹೋಗುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು, ಶರಣಾಗತಿ ಹೊಂದುವಂತೆ ತೋರಿಸುತ್ತಾಳೆ. ತನ್ನ ಸುಡದ ಆತ್ಮವನ್ನು ಸುಟ್ಟು ಕರಗಿಸುವಂತೆ ಬಿಸಿಯಾದ ನಿಟ್ಟುಸಿರು ಬಿಡುತ್ತಾಳೆ. ಆಸೆಯನ್ನು ಹೆಚ್ಚಿಸುವೆ ಕಪ್ಪಾದ ರೂಪವನ್ನು ಹೊಂದಿರುವವನೇ ! ಎಂದು ಅವಳು ಎಂಪೆರುಮಾನರನ್ನು ನೋಡುವಂತೆ ಎದ್ದು ನಿಲ್ಲುತ್ತಾಳೆ. ಮತ್ತು ಕಣ್ಣುಗಳನ್ನು ಮಿಟುಕಿಸದೇ ಹಾಗೆಯೇ ನಿಲ್ಲುತ್ತಾಳೆ. ಅವಳು ಹೇಳುತ್ತಾಳೆ, “ ನಾನು ಹೇಗೆ ನಿನ್ನನ್ನು ನೋಡಲಿ?” ಓಹ್! ಕೋಯಿಲ್‍ನಲ್ಲಿ ನೆಲೆಸಿರುವವನೇ! ಆ ಶ್ರೀರಂಗಮ್ ಸುಂದರವಾದ ವಿಶಾಲ ನೀರಿನ ತಾಣಗಳಿಂದ ಸುತ್ತುವರೆಯಲ್ಪಟ್ಟಿದೆ. ನಾನು ಲಕ್ಷ್ಮಿಗೆ ಹೋಲಿಸುವ ರೂಪವನ್ನು ಹೊಂದಿರುವ ಮಗಳಿಗೆ ಏನು ಮಾಡಲಿ? ನಾನು ಅವಳ ನರಳಾಟಕ್ಕೆ, ದುಃಖಕ್ಕೆ ಕಾರಣವಾದ ಅಮಿತವಾದ ಪ್ರೀತಿಯನ್ನೇ ನಿಯಂತ್ರಣ ಮಾಡಲೇ? ಅಥವಾ ಬರದಿರುವ ನಿನ್ನನ್ನು ಬರುವಂತೆ ಮಾಡಲೇ?
=> ಇದರ ಅರ್ಥ ಎರಡೂ ಅಸಾಧ್ಯ ಎಂದು.

ಪಾಸುರಮ್ 9:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ “ ನಾನು ನನ್ನ ಮಗಳ ಆಸೆಯನ್ನು ಪೂರೈಸಲಾಗುತ್ತಿಲ್ಲ. ಅವಳು ನಿನ್ನ ಪ್ರೀತಿಯನ್ನು ಪಡೆಯಬೇಕೆಂದು ಅತ್ಯಂತ ಮೋಹಿತಳಾಗಿದ್ದಾಳೆ. ಲಕ್ಷ್ಮೀದೇವಿ , ಭೂದೇವಿ ಮತ್ತು ನೀಳಾದೇವಿಯ ಜೊತೆಗಿರುವ ನಿನ್ನನ್ನು ಅವಳು ಅತ್ಯಂತ ಮೋಹಿಸಿದ್ದಾಳೆ.”
ಎನ್ ತಿರುಮಗಳ್ ಶೇರ್ ಮಾರ್ವನೇ ಎನ್ನುಮ್ ಎನ್ನುಡೈ ಆವಿಯೇ ಎನ್ನುಮ್,
ನಿನ್‍ತಿರುವಯಿತ್ತಾಲ್ ಇಡನ್ದು ನೀಕೊಣ್ಡ ನಿಲಮಗಳ್ ಕೇಳ್ವನೇ ಎನ್ನುಮ್,
ಅನ್‍ಱುರು ಏೞುಮ್ ತೞುವಿ ನೀಕೊಣ್ಡ ಆಯ್‍ಮಗಳ್ ಅನ್ಬನೇ ಎನ್ನುಮ್,
ತೆನ್ ತಿರುವರಙ್ಗಮ್ ಕೋಯಿಲ್‍ಕೊಣ್ಡಾನೇ ತೆಳಿಗಿಲೇನ್ ಮುಡಿವಿವಳ್ ತನಕ್ಕೇ॥

ನನ್ನ ಮಗಳು ಹೇಳುತ್ತಾಳೆ, “ಓಹ್! ವಿಶಾಲವಾದ ದಿವ್ಯ ಎದೆಯನ್ನು ಹೊಂದಿರುವವನೇ,! ಆ ಸ್ಥಳವು ಲಕ್ಷ್ಮೀದೇವಿಯ ವಾಸಸ್ಥಾನವಾಗಿದೆ. ಅವಳು ನನಗೂ ನಾಯಕಿಯಾಗಿದ್ದಾಳೆ. ಅವಳು ನಿನ್ನಲ್ಲಿ ಸಮಾಗಮವಾಗಿದ್ದಾಳೆ. ಓಹ್! ಭೂಮಿ ಪಿರಾಟ್ಟಿಯ ಯಜಮಾನರಾಗಿರುವವರೇ! ನೀನು ನಿನ್ನ ದಿವ್ಯ ಕೊಂಬುಗಳಿಂದ ನೆಲವನ್ನು ಬಗೆದು ಅವಳನ್ನು ಮೇಲೆತ್ತಿ ತನ್ನವಳೆಂದು ಸ್ವೀಕರಿಸಿರುವೆ. ಓಹ್! ಸ್ಥಿರವಾದ ಪ್ರೀತಿಯನ್ನು ನಪ್ಪಿನ್ನೈ ಪಿರಾಟ್ಟಿಯ ಮೇಲೆ ಹೊಂದಿರುವವನೇ! ನಿನ್ನ ಜಾತಿಯಲ್ಲಿಯೇ ಹುಟ್ಟಿದವಳೆಂದು ಅತ್ಯಮೂಲ್ಯ ನಿಧಿಯೆಂದು ಸಂರಕ್ಷಿಸಿ ನಿನ್ನಲ್ಲಿಯೇ ಸ್ವೀಕರಿಸಿರುವೆ. ಭಯಂಕರವಾದ ಗುಡುಗಿನಂತೆ ಆರ್ಭಟಿಸುವ ಏಳು ಗೂಳಿಗಳನ್ನು ಸ್ಪರ್ಧೆಯಲ್ಲಿ ಸೋಲಿಸಿ ನಪ್ಪಿನ್ನೈಯನ್ನು ಗೆದ್ದು ಅವಳನ್ನು ಆಲಂಗಿಸಿರುವೆ. ಓಹ್! ಶ್ರೀರಂಗ ಕ್ಷೇತ್ರವನ್ನು ತನ್ನ ವಾಸಸ್ಥಾನವಾಗಿ ಒಪ್ಪಿಕೊಂಡಿರುವ ಎಂಪೆರುಮಾನರೇ! ನನಗೆ ಅವಳ ದುಃಖವನ್ನು ಪರಿಹರಿಸಲು ಸಾಧನಗಳು (ಮಾಧ್ಯಮವು) ತಿಳಿದಿಲ್ಲ. ಎಂದು ಹೇಳುತ್ತಾಳೆ.

ಪಾಸುರಮ್ 10:
ಅಂತರಾತ್ಮಗಳಿಗೇ ಶ್ರೇಷ್ಠನಾದ ತಮ್ಮನ್ನು ತಾವು ನಾಯಕರೆಂದು ಭಾವಿಸುವ ದೇವತೆಗಳಿಗೇ ಶ್ರೇಷ್ಠನಾದ ಸರ್ವೇಶ್ವರನು , ಪರಾಂಕುಶ ನಾಯಕಿಯ ದುಃಖವನ್ನೂ, ಅಗಲಿಕೆಯನ್ನೂ ಅರ್ಥ ಮಾಡಿಕೊಂಡು , ಅವಳಿಗೆ ತನ್ನ ಪ್ರತ್ಯಕ್ಷ ರೂಪವನ್ನು, ಅಗಾಧವಾಗಿ ಸರಳತೆಯೊಂದಿಗೆ, ತನ್ನ ಹೊರ ರೂಪದ ಸೌಂದರ್‍ಯವನ್ನು ತೋರಿಸುತ್ತಾನೆ. ಅವಳಿಗೆ ನಂಬಿಕೆಯುಂಟಾಗುತ್ತದೆ. ಅವಳ ತಾಯಿಯು ತೃಪ್ತಿ, ಸಮಾಧಾನದಿಂದ ಹೇಳುತ್ತಾಳೆ.
ಮುಡಿವಿವಳ್ ತನಕ್ಕು ಒನ್‍ಱಱಿಗಿಲೇನ್ ಎನ್ನುಮ್ ಮೂವುಲಗಾಳಿಯೇಯೆನ್ನುಮ್,
ಕಡಿಕಮೞ್ ಕೊನ್‍ಱೈ ಚ್ಚಡೈಯನೇಯೆನ್ನುಮ್ ನಾನ್ಮುಗಕ್ಕಡವುಳೇ ಎನ್ನುಮ್,
ವಡಿವುಡೈ ವಾನೋರ್ ತಲೈವನೇ ಎನ್ನುಮ್ ವಣ್ ತಿರುವರಙ್ಗನೇ ಎನ್ನುಮ್,
ಅಡಿ ಅಡೈಯಾದಾಳ್ ಪೋಲ್ ಇವಳ್ ಅಣುಗಿ ಅಡೈನ್ದನಳ್ ಮುಗಿಲ್‍ವಣ್ಣನ್ ಅಡಿಯೇ ॥

ನನ್ನ ಮಗಳು ಹೇಳುತ್ತಾಳೆ, “ ನನಗೆ ಪರಿಹಾರ ಗೊತ್ತಿಲ್ಲ, ಓಹ್! ಮೂರು ಲೋಕಗಳ (ಭೂಃ , ಭುವಃ, ಸುವಃ ಎಂಬ) ನಾಯಕನೆಂದು ತಿಳಿದಿರುವ ಇಂದ್ರನ ಅಂತರಾತ್ಮಕ್ಕೇ ಒಡೆಯನಾಗಿರುವ, ಕೊನ್‍ಱೈ ಮಾಲೆಯ ಸುಗಂಧವನ್ನು ಹೊಂದಿರುವ ಜಟೆಯನ್ನು ಧರಿಸಿರುವ ರುದ್ರನ ಅಂತರಾತ್ಮವಾಗಿರುವ, ರುದ್ರ ತಾನು ಜಪಿಸುವ, ಆರಾಧಿಸುವ , ನಾಲ್ಕು ತಲೆಯಿರುವ ಬ್ರಹ್ಮನ ಅಂತರಾತ್ಮವಾಗಿರುವ , ನಿನ್ನದೇ ರೂಪವನ್ನು ಹೊಂದಿರುವ ನಿತ್ಯಸೂರಿಗಳಿಗೆಲ್ಲಾ ನಾಯಕನಾಗಿರುವ ,ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ಎಲ್ಲಾ ರೀತಿಯ ನಿಯಂತ್ರಣವನ್ನು ಹೊಂದಿರುವ , ಅದನ್ನು ಉತ್ಕೃಷ್ಟತೆಯಿಂದ ಸಾಧಿಸುವ, ಸರ್ವೇಶ್ವರನಾದ ಎಂಪೆರುಮಾನರು”, ನನ್ನ ಮಗಳು ಎಂಪೆರುಮಾನರನ್ನು ಸೇರದಿರುವಂತೆ ಅನಿಸಿದರೂ, ಕಪ್ಪಾದ ಮೇಘಗಳಂತೆ , ಭೂಮಿಯ ಮೇಲೆ ಮತ್ತು ನೀರಿನ ತಾಣವೆಂದು ಭೇದವೆಣಿಸದೇ ಮಳೆಯನ್ನು ಸುರಿಸುವಂತೆ, ಅವನ ಧಾರಾಳತನದಿಂದ ನನ್ನ ಮಗಳು ಅವರ ದಿವ್ಯ ಪಾದವನ್ನು ಸಮೀಪಿಸಿ , ಸೇರಿಕೊಂಡಳು.

ಪಾಸುರಮ್ 11:
ಆಳ್ವಾರರು ಹೇಳುತ್ತಾರೆ, “ ಯಾರು ಈ ಹತ್ತು ಪಾಸುರಗಳನ್ನು ಅಭ್ಯಾಸ ಮಾಡುತ್ತಾರೋ, ಅವರಿಗೆ ನಾನು ಅನುಭವಿಸಿದ ಯಾವ ನರಳಾಟಗಳೂ ಇಲ್ಲದೆ, ಪರಮಪದವನ್ನು ಹೊಂದುತ್ತಾರೆ. ಅಲ್ಲಿ ಅವರು ಅಪರಿಮಿತವಾದ ಆನಂದವನ್ನೂ, ಸುತ್ತಲೂ ನಿತ್ಯಸೂರಿಗಳನ್ನೂ ಹೊಂದುತ್ತಾರೆ.
ಮುಗಿಲ್‍ವಣ್ಣನ್ ಅಡಿಯೈ ಅಡೈನ್ದು ಅರುಳ್ ಶೂಡಿ ಉಯ್‍ನ್ದವನ್ ಮೊಯ್ ಪುನಲ್ ಪೊರುನಲ್
ತುಗಿಲ್‍ವಣ್ಣ ತ್ತೂ ನೀರ್ ಶೇರ್ಪ್ಪನ್ ವಣ್ ಪೊೞಿಲ್ ಶೂೞ್ ವಣ್ ಕುರುಗೂರ್ ಚ್ಚಡಗೋಪನ್,
ಮುಗಿಲ್‍ವಣ್ಣನ್ ಅಡಿಮೇಲ್ ಶೊನ್ನ ಶೊಲ್‍ಮಾಲೈ ಆಯಿರತ್ತಿಪ್ಪತ್ತುಮ್ ವಲ್ಲಾರ್ ,
ಮುಗಿಲ್‍ವಣ್ಣ ವಾನತ್ತಿಮೈಯವರ್ ಶೂೞ ಇರುಪ್ಪರ್ ಪೇರ್ ಇನ್ಬವೆಳ್ಳತ್ತೇ ॥

ದಿವ್ಯ ತಾಮಿರಭರಣಿ ನದಿಯು ಅಗಾಧವಾದ , ಸ್ವಚ್ಛ ನೀರಿನಿಂದ ತುಂಬಿಕೊಂಡು, ರೇಷ್ಮೆ ಬಟ್ಟೆಯ ಬಣ್ಣವನ್ನು ಹೊಂದಿದೆ. ಅಪರಿಮಿತವಾಗಿ ಸಂಪದ್ಭರಿತವಾದ ಆಳ್ವಾರ್ ತಿರುನಗರಿಯು ಇಂತಹ ನದಿಯ ತೀರದಲ್ಲಿ ಇದ್ದು, ಜೇನು, ಹೂವುಗಳಿಂದ ತುಂಬಿದ ತೋಟಗಳಿಂದ ಆವರಿಸಲ್ಪಟ್ಟಿದೆ. ಅಂತಹ ಆಳ್ವಾರ್‍‌ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು , ಧಾರಾಳತೆಯಿರುವ ಮೇಘಗಳ ಗುಣವನ್ನು ಹೊಂದಿರುವ ಪೆರಿಯ ಪೆರುಮಾಳರ ದಿವ್ಯ ಪಾದಗಳನ್ನು ಸೇವಿಸಿ, ಅಭಿವೃದ್ಧಿಗೊಂಡರು. ಅವರು ಅಪಾರ ಕರುಣೆಯಿಂದ ಈ ಹತ್ತು ಪಾಸುರಗಳನ್ನು ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಶಬ್ದಗಳ ಮಾಲೆಯಂತೆ , ಅಪರಿಮಿತವಾಗಿ ಸುಂದರವಾದ, ಮೇಘದಂತೆ ಇರುವ ಪೆರಿಯ ಪೆರುಮಾಳರ ದಿವ್ಯ ಪಾದಗಳಲ್ಲಿ ಹೇಳಿದ್ದಾರೆ. ಯಾರು ಈ ಹತ್ತು ಪಾಸುರಗಳನ್ನು ನಿಜವಾದ ಭಾವನೆಯಿಂದ (ಅರ್ಥದಿಂದ) ಹೇಳುತ್ತಾರೋ, ಅವರು ಅಪರಿಮಿತವಾದ ಆನಂದದ ಸಮುದ್ರದಲ್ಲಿ, ಗಾಢವಾದ ನೀಲಿಯ ಬಣ್ಣದ , ನಿತ್ಯಸೂರಿಗಳಿಂದ ಆವರಿಸಲ್ಪಟ್ಟ ಪರಮಪದದಲ್ಲಿ ಇರುತ್ತಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-7-2-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ ಮೊೞಿ – ಸರಳ ವಿವರಣೆ – 6.10 – ಉಲಗಮುಣ್ಡ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 5.8 ಆರಾವಮುದೇ

srinivasan -ahzwar


ಶರಣಾಗತಿಯಾಗುವ ವೇಳೆಯಲ್ಲಿ, ಯಾರೊಬ್ಬರು ಎಂಪೆರುಮಾನರ ದಿವ್ಯ ಕಲ್ಯಾಣ ಗುಣಗಳನ್ನು ಅರಿತುಕೊಂಡು ಅವುಗಳಿಗೆ ಮಹತ್ವವನ್ನು ಕೊಡಬೇಕು. ಹಾಗೆಯೇ, ತಮಗೆ ಯಾರ ಆಶ್ರಯವಿಲ್ಲದೇ, ಬೇರೆ ಯಾವುದೇ ಉಪಾಯವಿಲ್ಲದೇ, ಎಂಪೆರುಮಾನರ ದಿವ್ಯ ಪಾದಕಮಲಗಳಲ್ಲಿ ಶರಣಾಗತಿ ಹೊಂದಬೇಕು – ಪಿರಾಟ್ಟಿಯ ಶಿಫಾರಸ್ಸಿನೊಂದಿಗೆ(ಪುರುಷಕಾರಮ್) . ಅಂತಹ ಒಂದು ಸರಿಯಾದ ಕಟ್ಟುನಿಟ್ಟುಗಳೊಂದಿಗೆ ಆಳ್ವಾರರು ತಿರುವೇಂಗಡಮುಡೈಯಾನರ ಹತ್ತಿರ ಬಹು ಸುಂದರವಾಗಿ ಈ ಪದಿಗೆಯಲ್ಲಿ ಶರಣಾಗತಿಯನ್ನು ಆಚರಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ “ ತಿರುಮಲದಲ್ಲಿ ವಾಸವಾಗಿರುವ , ಇಡೀ ಲೋಕವನ್ನು ರಕ್ಷಿಸುವ ಗುಣವನ್ನು ಹೊಂದಿರುವ ನೀನು , ಕರುಣೆಯಿಂದ ನಿನ್ನನ್ನು ಹೊಂದುವ ದಾರಿಯನ್ನು ಸಹಜವಾದ ಸೇವಕತ್ವವನ್ನು ಹೊಂದಿರುವ ನನಗೆ ತೋರಿಸು. “

ಉಲಗಮ್ ಉಣ್ಡ ಪೆರುವಾಯಾ ಉಲಪ್ಪಿಲ್ ಕೀರ್ತ್ತಿ ಅಮ್ಮಾನೇ,
ನಿಲವುಮ್ ಶುಡರ್ ಶೂೞ್ ಒಳಿ ಮೂರ್ತ್ತಿ ನೆಡಿಯಾಯ್ ಅಡಿಯೇನ್ ಆರುಯಿರೇ,
ತಿಲದಮುಲಗುಕ್ಕಾಯ್ ನಿನ್‍ಱ ತಿರುವೇಂಗಡತ್ತೆಮ್ಬೆರುಮಾನೇ,
ಕುಲತೊಲ್ ಅಡಿಯೇನ್ ಉನ ಪಾದಮ್ ಕೂಡು ಮಾಱು ಕೂಱಾಯೇ ।।

ಓಹ್! ಲೋಕವನ್ನೆಲ್ಲಾ ಕಾತುರದಿಂದ ರಕ್ಷಿಸಲು ಹೊಂದಿರುವ ನಿನ್ನ ಬಾಯಿ/ ತುಟಿಗಳು ಇಡೀ ಭೂಮಂಡಲವನ್ನು ನುಂಗಿ (ಪ್ರಳಯ ಕಾಲದಲ್ಲಿ ) ಅದನ್ನು ಕಾಪಾಡಲು ಕಾದಿವೆ. ಓಹ್! ಕೊನೆಯಿಲ್ಲದ ಪ್ರಸಿದ್ಧತೆಯನ್ನು ಮತ್ತು ಸಹಜವಾದ ನಾಯಕತ್ವವನ್ನು ಹೊಂದಿರುವವನೇ! ಓಹ್! ದಿವ್ಯರೂಪದೊಂದಿಗೆ ದಿವ್ಯ ಅದ್ಭುತಗಳಿಂದ ತುಂಬಿರುವವನೇ! ನಿನ್ನ ಸಹಜವಾದ ಕಾಂತಿಯನ್ನೂ, ತೇಜಸ್ಸನ್ನೂ ತೋರಿಸುತ್ತಿರುವವನೇ! ಓಹ್! ನನ್ನ ಪ್ರಾಣವಾಯುವಾದವನೇ (ಜೀವವಾಗಿರುವವನೇ) ಓಹ್! ತನ್ನ ಹಣೆಯ ಮೇಲೆ ಊರ್ಧ್ವಪುಣ್ಡ್ರಮ್ (ನೇರವಾಗಿರುವ ತಿಲಕ ) ಧರಿಸಿ ಜಗತ್ತಿಗೆಲ್ಲಾ ನಾಯಕತ್ವವನ್ನು ಸಾಧಿಸಿ, ತಿರುಮಲದಲ್ಲಿ ನಿಂತಿರುವವನೇ! ನನಗೆ ವಂಶಯುಕ್ತವಾಗಿ ಬಂದಿರುವ ಸೇವಕತ್ವವನ್ನು ಸಾಧಿಸಲು ನಿನ್ನ ದಿವ್ಯ ಪಾದಕಮಲಗಳನ್ನು ಸೇರಲು ಮಾಧ್ಯಮವನ್ನು ತೋರಿಸು. ಎಂದು ಆಳ್ವಾರರು ಹಾಡುತ್ತಾರೆ.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಏನಾದರೂ ತೊಂದರೆ, ಕಷ್ಟಗಳು ಬಂದರೆ ನೀನೇ ಅದನ್ನು ನಿವಾರಿಸಿ, ನನ್ನನ್ನು ನಿನ್ನ ಪಾದಗಳಲ್ಲಿ ಸ್ವೀಕರಿಸಬೇಕು “ ಎಂದು.
ಕೂಱಾಯ್ ನೀಱಾಯ್ ನಿಲನಾಗಿ ಕ್ಕೊಡುವಲ್ ಅಶುರರ್ ಕುಲಮೆಲ್ಲಾಮ್,
ಶೀಱಾ ಎರಿಯುಮ್ ತಿರುನೇಮಿ ವಲವಾ ತೆಯ್‍ವಕ್ಕೋಮಾನೇ,
ಶೇಱಾರ್ ಶುನೈ ತ್ತಾಮರೈ ಶೆನ್ದೀ ಮಲರುಮ್ ತಿರುವೇಙ್ಗಡತ್ತಾನೇ,
ಆಱಾ ಅನ್ಬಿಲ್ ಅಡಿಯೇನ್ ಉನ್ನಡಿ ಶೇರ್ ವಣ್ಣಮ್ ಅರುಳಾಯೇ॥

ಸರ್ವಶಕ್ತನಾದ ಎಂಪೆರುಮಾನರು, ದಿವ್ಯ ಹೊಳೆಯುವ ಚಕ್ರವನ್ನೂ ನಿಯಂತ್ರಿಸಿ, ಅದರಿಂದ ಕ್ರೂರಿಗಳಾದ ಮತ್ತು ಅತೀ ಶಕ್ತಿವಂತರಾದ ರಾಕ್ಷಸರನ್ನು ಚೂರು ಚೂರಾಗಿ ಕತ್ತರಿಸುವರು. ಅವರನ್ನು ಧೂಳೀಪಟವನ್ನಾಗಿ ಮಾಡುವರು. ಆ ಚಕ್ರವು ಅವರನ್ನು ತುಂಡರಿಸಿದ ಮೇಲೂ ಅವರ ಮೇಲೆ ಕೋಪವನ್ನು ತೋರಿಸುವುದು. ಮತ್ತು ಅತ್ಯಂತ ಸಂಪನ್ನವಾಗಿ ಅನೇಕ ಸಂಪತ್ತನ್ನು ಹೊಂದಿ, ವಿಜಯವನ್ನು ಸಾಧಿಸುವುದು. ಓಹ್! ನಿತ್ಯಸೂರಿಗಳಿಗೆಲ್ಲಾ ಸ್ವಾಮಿಯಾದವನೇ! ಓಹ್! ಕೆಸರಾದ ಹೊಳೆಯಲ್ಲಿ ಅರಳಿದ ಕೆಂಡದಂತೆ ಕೆಂಪಾದ ತಾವರೆ ಹೂಗಳಿಂದ ಕೂಡಿದ ತಿರುಮಲದಲ್ಲಿ ವಾಸವಾಗಿರುವ ಸ್ವಾಮಿಯೇ! ಕರುಣೆಯಿಂದ ನಿನ್ನ ಸೇವಕನಾದ ನನ್ನನ್ನು ಹರಸು, ನಿನ್ನ ಮೇಲೆ ಅಪಾರ ಪ್ರೀತಿಯಿಂದಿರುವ ನನ್ನನ್ನು ನಿನ್ನ ದಿವ್ಯ ಪಾದಗಳಲ್ಲಿ ಸೇರಿಸಿಕೋ. ಎಂದು ಆಳ್ವಾರರು ಹಾಡುತ್ತಾರೆ.

ಮೂರನೆಯ ಪಾಸುರಮ್:
ಎಂಪೆರುಮಾನರು ಹೇಳುತ್ತಾರೆ ,”ನೀನು ಯಾವ ವಿಧವಾದ ಪರಿಶ್ರಮವನ್ನೂ, ಪ್ರಯತ್ನವನ್ನೂ ಮಾಡಲಿಲ್ಲ. ನಾನು ನೀನು ಕೇಳುವುದನ್ನು ಏಕೆ ಮಾಡಬೇಕು?” ಎಂದು. ಆಳ್ವಾರರು ಹೇಳುತ್ತಾರೆ, “ ನಿನ್ನನ್ನು ಆನಂದಿಸಲು ಅನೇಕ ವಿಶಿಷ್ಟ ವ್ಯಕ್ತಿಗಳನ್ನು ಹೊಂದಿರುವೆ. ನೀನೇ ನನಗೂ ನಿನ್ನ ಮೇಲೆ ಆಸೆ ಬರುವಂತೆ ಮಾಡಿರುವೆ. ಹಾಗೆಯೇ ಪೂರ್ಣವಾಗಿ ನಿನ್ನ ಕೃಪೆಯಿಂದಲೇ ನನ್ನ ಆಸೆಯನ್ನು ಪೂರ್ಣಗೊಳಿಸು” ಎಂದು ಹೇಳುತ್ತಾರೆ.
ವಣ್ಣಮರುಳ್ ಕೊಳ್ ಅಣಿ ಮೇಗವಣ್ಣಾ ಮಾಯವಮ್ಮಾನೇ,
ಎಣ್ಣಮ್ ಪುಗುನ್ದು ತಿತ್ತಿಕ್ಕುಮ್ ಅಮುದೇ ಇಮೈಯೋರ್ ಅದಿಪತಿಯೇ,
ತೆಣ್ಣಲರುವಿ ಮಣಿಪೊನ್ ಮುತ್ತಲೈಕ್ಕುಮ್ ತಿರುವೇಙ್ಗಡತ್ತಾನೇ,
ಅಣ್ಣಲ್ ಉನ್ ಅಡಿಶೇರ ಅಡಿಯೇಱ್‍ಕ್ಕು ಆವಾಎನ್ನಾಯೇ॥

ಹುಚ್ಚು ಹಿಡಿಸುವಂತಹ ಘನಮೇಘದ ರೂಪವನ್ನೂ, ಬಣ್ಣವನ್ನೂ, ಅದ್ಭುತವಾದ ಗುಣಗಳನ್ನೂ ಹೊಂದಿರುವ ಎಲ್ಲರಿಗಿಂತಲೂ ಶ್ರೇಷ್ಠನಾಗಿರುವ ಎಂಪೆರುಮಾನರು ನನ್ನ ಹೃದಯದೊಳಗೆ ಆಗಮಿಸಿದ್ದಾರೆ. ಅವರು ಅಮೃತಕ್ಕಿಂತಲೂ ಸಿಹಿಯಾಗಿದ್ದಾರೆ. ಅವರು ನಿತ್ಯಸೂರಿಗಳಿಗೆ ತಮ್ಮ ಈ ರೂಪವನ್ನು ಆನಂದಿಸಲು ಅನುಭವಿಸಲು ಕೊಟ್ಟಿದ್ದಾರೆ. ಸ್ವಚ್ಛವಾದ ತಿಳಿ ನೀರಿನಿಂದ ಕೂಡಿದ ಜಲಪಾತಗಳು , ಮುತ್ತುಗಳ ಅನೇಕ ಅಮೂಲ್ಯ ರತ್ನಗಳ ಮೇಲೆ ಬೀಳುವ ಪ್ರದೇಶವಾಗಿರುವ ತಿರುಮಲದಲ್ಲಿ ನಾಯಕತ್ವವನ್ನು ಮತ್ತು ಆಧಿಪತ್ಯವನ್ನು ಹೊಂದಿರುವ ಎಂಪೆರುಮಾನರೇ! ನಮ್ಮ ಮೇಲೆ ಕನಿಕರಗೊಂಡು ನೀನು ಕರುಣೆಯಿಂದಲಿ ನಿನ್ನ ದಿವ್ಯಪಾದವನ್ನು ಸೇರುವ ವ್ಯವಸ್ಥೆಯನ್ನು ಮಾಡಬೇಕು. ಅದೇ ನಮಗೆ ಸೂಕ್ತವಾದುದು.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನನ್ನ ಹತ್ತಿರ ಯಾವ ವಿಧವಾದ ದಾರಿಯೂ ನಿನ್ನನ್ನು ಸೇರಲು ತಿಳಿದಿಲ್ಲ. ಆದ್ದರಿಂದ ನೀನೇ ಯಾವುದಾದರೂ ದಾರಿಯನ್ನು ನನಗಾಗಿ ಹುಡುಕಿ , ನನಗೆ ಅದನ್ನು ಕರುಣೆಯಿಂದ ತಿಳಿಸಬೇಕು.” ಮತ್ತೂ ಆಳ್ವಾರರು ವಿವರಿಸುತ್ತಾರೆ. “ನೀನು ಎಲ್ಲರ ತೊಂದರೆಗಳನ್ನು ಯಾವ ಕಟ್ಟುಪಾಡುಗಳೂ ಇಲ್ಲದೇ ನಿವಾರಿಸುವಂತೆ ನಾನೂ ನಿನ್ನ ದಿವ್ಯಪಾದವನ್ನು ಸೇರುವಂತೆ ನೋಡಿಕೊಳ್ಳಬೇಕು.”
ಆವಾವೆನ್ನಾದುಲಗತ್ತೈ ಅಲೈಕ್ಕುಮ್ ಅಶುರರ್ ವಾಣಾಳ್‍ಮೇಲ್,
ತೀವಾಯ್ ವಾಳಿ ಮೞೈ ಪೊೞಿನ್ದ ಶಿಲೈಯಾ ತಿರುಮಾಮಗಳ್ ಕೇಳ್ವಾ ತೇವಾ,
ಸುರರ್ಗಳ್ ಮುನಿಕ್ಕಣಙ್ಗಳ್ ವಿರುಮ್ಬಮ್ ತಿರುವೇಙ್ಗಡತ್ತಾನೇ,
ಪೂವಾರ್ ಕೞಲ್‍ಗಳ್ ಆರು ವಿನೈಯೇನ್ ಪೊಱುನ್ದುಮಾಱು ಪುಣರಾಯೇ॥

ಓಹ್ ಎಂಪೆರುಮಾನರೇ! ಶ್ರೀ ಶಾರ್ಙ್ಗವೆಂಬ ಬಿಲ್ಲನ್ನು ಹಿಡಿದುಕೊಂಡಿರುವಿರಿ. ಅದು ಬೆಂಕಿಯನ್ನು ಉಗುಳುವ ಬಾಣಗಳಿಂದ ಲೋಕಕ್ಕೆ ಸಂಚಕಾರವಾಗಿರುವ ರಾಕ್ಷಸರ ಮೇಲೆ ಕರುಣೆ ಪಡದೆ ಬಾಣಗಳ ಮಳೆಯನ್ನೇ ಸುರಿಸುತ್ತದೆ. ಓಹ್! ನೀನು ಈ ಶತ್ರುಗಳನ್ನು ನಿರ್ಮೂಲನ ಮಾಡಿದ ಮೇಲೆ ಸಂತೋಷಿಸುವ ಲಕ್ಷ್ಮಿಯನ್ನು ಹೊಂದಿರುವೆ , ಅವಳಿಗೆ ತಕ್ಕ ಸುಂದರತೆಯನ್ನೂ, ವೀರವನ್ನೂ ಹೊಂದಿರುವೆ ಮತ್ತು ಅದರಿಂದ ಹೊಳೆಯುತ್ತಿರುವೆ. ಓಹ್! ತಿರುಮಲದಲ್ಲಿ ನೆಲೆಸಿರುವ , ದೇವತೆಗಳಿಂದಲೂ ಮತ್ತು ಋಷಿಗಳಿಂದಲೂ ಪೂಜಿಸಲ್ಪಡುವೆ. ನಾನು ಅನಂತಕೋಟಿ ಪಾಪಗಳನ್ನು ಮಾಡಿರುವೆ ಅವು ನನ್ನನ್ನು ನಿನ್ನ ಬಳಿ ಸೇರಲು ಬಿಡುತ್ತಿಲ್ಲ. ಕರುಣೆಯಿಂದಲಿ ನನಗೆ ನಿನ್ನ ಪಾದಕಮಲಗಳನ್ನು ಸೇರುವ ಮಾರ್ಗವನ್ನು ತೋರಿಸು.

ಐದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ಯಾವಾಗ ಅಪ್ರಯತ್ನಪೂರ್ವಕವಾಗಿ ಭಕ್ತರನ್ನು ಸಲಹುವ ನಿನ್ನ ದಿವ್ಯ ಪಾದವನ್ನು ಸೇರುತ್ತೇನೆ? “
ಪುಣರಾ ನಿನ್‍ಱ ಮರಮೇೞ್ ಅನ್‍ಱೆಯ್‍ದ ಒರುವಿಲ್ ವಲವಾವೋ,
ಪುಣರ್ ಏಯ್ ನಿನ್‍ಱ ಮರಮಿರಣ್ಡಿನ್ ನಡುವೇ ಪೋನ ಮುದಲ್ವಾವೋ,
ತಿಣರಾರ್ ಮೇಗಮೆನ ಕ್ಕಳಿಱು ಶೇರುಮ್ ತಿರುವೇಙ್ಗಡತ್ತಾನೇ,
ತಿಣರಾರ್ ಶಾರ್ಙ್ಗತ್ತುನಪಾದಮ್ ಶೇರ್ವದು ಅಡಿಯೇನ್ ಎನ್ನಾಳೇ॥

ಎಂಪೆರುಮಾನರು ಅಪ್ರತಿಮ ಬಿಲ್ಲುಗಾರನಾಗಿದ್ದರಿಂದ ಏಳು ಮರಗಳನ್ನು ಒಂದೇ ಸಾರಿ ಹೊಡೆದು ಉರುಳಿಸಿದ್ದರು. ಈ ಭೂಮಂಡಲಕ್ಕೆಲ್ಲಾ ಮೂಲ ಕಾರಣವಾಗಿರುವ ಎಂಪೆರುಮಾನರು ಎರಡು ಮರಗಳ ಮಧ್ಯೆ ಅಂಬೆಗಾಲಿಡುತ್ತ ಹೋಗಿ ಬಲಶಾಲಿಯಾಗಿ, ಒಂದಕ್ಕೊಂದು ಅಂಟಿಕೊಂಡು ನಿಂತಿರುವ ಆ ಎರಡು ಮರಗಳನ್ನು ಉರುಳಿಸಿದರು. ಕಪ್ಪಾದ ದಟ್ಟವಾದ ಮೇಘಗಳಂತೆ ಇರುವ ಆನೆಗಳು ಜೊತೆಯಲ್ಲಿ ವಾಸಿಸುವ ತಿರುಮಲದಲ್ಲಿ ನೀನು ವಾಸವಾಗಿರುವೆ. ನಿನ್ನ ದಾಸನಾಗಿರುವ ನಾನು, ಶ್ರೇಷ್ಠವಾದ ಶ್ರೀ ಶಾರ್ಙ್ಗವನ್ನು ಹಿಡಿದಿರುವ ನಿನ್ನಲ್ಲಿಗೆ ಯಾವಾಗ ತಲುಪುವೆನು?

ಆರನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ “ ಶ್ರೀವೈಕುಂಠದಲ್ಲಿ ನನಗೆ ಕೈಂಕರ್‍ಯಗಳನ್ನು ಸಮರ್ಪಿಸುವುದು ಪರಮ ಗುರಿ ಎಲ್ಲರಿಗೂ ಅಲ್ಲವೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಶ್ರೀವೈಕುಂಠದಿಂದಲೇ ದೇವತೆಗಳು ಬಹು ಆಸೆಯಿಂದ ತಿರುಮಲಕ್ಕೆ ಇಳಿದಿದ್ದಾರಲ್ಲವೇ ನಿನಗೆ ಸೇವೆ ಸಲ್ಲಿಸಲು? ನನಗೆ ತಿರುಮಲದಲ್ಲಿ ಯಾವಾಗ ನಿನ್ನ ಸಂಪೂರ್ಣ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ? “ ಇದನ್ನು ಈ ರೀತಿ ವಿವರಿಸಲಾಗಿದೆ, “ ದೇವತೆಗಳಿಗೂ ಅತ್ಯಂತ ಆಕರ್ಷಕವಾದ ನಿನ್ನ (ದಿವ್ಯಪಾದಗಳು) ತಿರುವಡಿಗಳಿಗೆ ಸೇವೆ ಸಲ್ಲಿಸಲು ನನಗೆ ಎಂದು ಅವಕಾಶ ದೊರಕುತ್ತದೆ? ನಾನು ಎಂದು ನಿನ್ನ ಪಾದಗಳನ್ನು ಸೇರುವೆ?” ಎಂದೂ ಹೇಳುತ್ತಾರೆ.
ಎನ್ನಾಳೇ ನಾಮ್ ಮಣ್ ಅಳನ್ದ ಇಣೈ ತ್ತಾಮರೈಗಳ್ ಕಾಣ್ಬದಱ್ಕೆನ್‍ಱು,
ಎನ್ನಾಳುಮ್ ನಿನ್‍ಱು ಇಮೈಯೋರ್ಗಳ್ ಏತ್ತಿ ಇಱೈಞ್ಜಿ ಇನಮಿನಮಾಯ್,
ಮೆಯ್ ನಾ ಮನತ್ತಾಲ್ ವೞಿಪಾಡು ಶೆಯ್ಯುಮ್ ತಿರುವೇಙ್ಗಡತ್ತಾನೇ,
ಮೆಯ್ ನಾ ಎಯ್‍ದಿ ಎನ್ನಾಳ್ ಉನ್ ಅಡಿಕ್ಕಳ್ ಅಡಿಯೇನ್ ಮೇವುವದೇ॥

ನಿತ್ಯಸೂರಿಗಳ ಗುಂಪು ಎಂಪೆರುಮಾನರನ್ನು ಯಾವಾಗಲೂ ಹೊಗಳಿ ಕೇಳುತ್ತಿರುತ್ತವೆ “ ಎಲ್ಲಾ ಲೋಕಗಳನ್ನು ಅಳೆದ ಮತ್ತು ಭೂಮಿಯ ಮಣ್ಣಿನಿಂದ ಕೂಡಿದ ಮತ್ತು ಅತ್ಯಂತ ಸರಳವಾಗಿರುವ ನಿನ್ನ ದಿವ್ಯ ಪಾದಗಳನ್ನು ಜೊತೆಯಾಗಿ ಯಾವಾಗ ನೋಡುವುದು? “ ಓಹ್! ತಿರುಮಲದಲ್ಲಿ ಅಸ್ತಿತ್ವದಲ್ಲಿರುವ ನಿನ್ನನ್ನು ಈ ರೀತಿಯಾಗಿ ಪೂಜಿಸಲು ಮತ್ತು ಸೇವೆ ಸಲ್ಲಿಸಲು ಇವರೆಲ್ಲರೂ ಕಾದಿರುವರು. ನಿನ್ನನ್ನು ಮಾತ್ರ ಸ್ವಾಮಿಯೆಂದು ನಂಬಿರುವ ನಾನು ಯಾವಾಗ ನಿನ್ನ ದಿವ್ಯ ಪಾದಗಳನ್ನು ನನ್ನ ಕನಸಿನಲ್ಲಿ ಕಂಡ ಹಾಗೆ ಸೇರುವೆ ಮತ್ತು ಅಲ್ಲಿ ಸೇರಲು ಯೋಗ್ಯವಾಗುವೆ?” ಎಂದು ಆಳ್ವಾರರು ಹಾಡುತ್ತಾರೆ.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನನ್ನು ಸೇರಲು ಯಾವ ಮಾರ್ಗವನ್ನೂ ಹೊಂದಿಲ್ಲ. ಆದರೂ ನಾನು ನಿನ್ನ ಆನಂದವನ್ನು ಅನುಭವಿಸದೇ ಒಂದು ಕ್ಷಣ ಕೂಡಾ ಇರಲಾರೆ”
ಅಡಿಯೇನ್ ಮೇವಿ ಅಮರ್ಗಿನ್‍ಱ ಅಮುದೇ ಇಮೈಯೋರ್ ಅದಿಪತಿಯೇ,
ಕೊಡಿಯಾ ಅಡು ಪುಳ್ ಉಡೈಯಾನೇ ಕೋಲಕ್ಕನಿವಾಯ್ ಪ್ಪೆರುಮಾನೇ,
ಶೆಡಿ ಆರ್ ವಿನೈಗಳ್ ತೀರ್ ಮರುನ್ದೇ ತಿರುವೇಙ್ಗಡತ್ತೆಮ್ಬೆರುಮಾನೇ,
ನೊಡಿಯಾರ್ ಪೊೞುದುಮ್ ಉನಪಾದಮ್ ಕಾಣ ನೋಲಾದಾಟ್ರೇನೇ ॥

ಎಂಪೆರುಮಾನರು ಸನ್ನಿಹಿತವಾಗಲು ಮತ್ತು ಅನುಭವ ಪಡೆಯಲು ಶಾಶ್ವತವಾಗಿ ಆನಂದಮಯರಾಗಿದ್ದಾರೆ. ನಿತ್ಯಸೂರಿಗಳಿಗೆಲ್ಲಾ ಅಧಿಪತಿಯೂ ನಿಯಂತ್ರಕರೂ ಆಗಿದ್ದಾರೆ. ಭಾಗವತರ ವೈರಿಗಳನ್ನು ನಿರ್ಮೂಲನೆ ಮಾಡುವ ಗರುಡಾಳ್ವಾನ್ ಅನ್ನು ಧ್ವಜವಾಗಿ ಪಡೆದಿದ್ದಾರೆ. ಅವರ ತುಟಿಗಳು ಕೆಂಪಾದ ಹಣ್ಣಿನಂತೆ ಇದ್ದು, ಆ ಸುಂದರತೆಯು ಅವರನ್ನು ಹೆಚ್ಚು ಆನಂದಿಸಲ್ಪಡುತ್ತದೆ. ಅವರು ಆ ರೀತಿಯ ಅಪರಿಮಿತ ಆನಂದವನ್ನುಂಟುಮಾಡುವ ಅನೇಕ ಸೌಕರ್‍ಯಗಳನ್ನು ಹೊಂದಿದ್ದಾರೆ. ದಟ್ಟವಾದ ಪೊದೆಯ ಹಾಗೆ ಬೆಳೆದಿರುವ ನನ್ನ ಪಾಪರಾಶಿಯನ್ನು ದೂರಮಾಡಲು ಔಷಧಿಯಾಗಿರುವ ತಿರುಮಲದಲ್ಲಿ ನೆಲೆಸಿರುವವನೇ! ನೀನು ನಿನ್ನ ಸೇವಕನಾಗಿ ನನ್ನನ್ನು ಅನುಗ್ರಹಿಸಿರುವುದಕ್ಕೆ ನಾನು ಏನೂ ಪ್ರಯತ್ನ ಮಾಡಲಿಲ್ಲ. ಒಂದು ಕ್ಷಣವೂ ನಿನ್ನ ದಿವ್ಯ ಪಾದಕಮಲಗಳಿಂದ ದೂರವಾಗಿ ಇರಲಾರೆ. [ನೋಡದೇ ಇರಲಾರೆ] ಎಂದು ಹಾಡುತ್ತಾರೆ.

ಎಂಟನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ, “ ನೀನು ಯಾವ ಪ್ರಯತ್ನವನ್ನೂ ಮಾಡದೇ , ನನಗೆ ಸಹಿಸಲಾಗುತ್ತಿಲ್ಲ ಎಂದರೆ ಫಲಿತಾಂಶ ಸಿಕ್ಕುವುದೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಬ್ರಹ್ಮ ಮುಂತಾದವರು ತಮಗೆ ಸ್ವಲ್ಪವೇ ಸಾಮರ್ಥ್ಯವಿದ್ದರೂ, ಆಕಿಂಚನ್ಯಮ್ ನನ್ನು ಪಠಿಸಿ ಅವರ ಆಸೆಯನ್ನು ಪೂರೈಸಿಕೊಳ್ಳಲಿಲ್ಲವೇ? ಆದ್ದರಿಂದ ದಯವಿಟ್ಟು ನನ್ನಲ್ಲಿಗೆ ಬಂದು ನನ್ನ ದುಃಖವನ್ನು ಪರಿಹರಿಸು”.
ನೋಲಾದಾಟ್ರೇನ್ ಉನಪಾದಮ್ ಕಾಣ ಎನ್‍ಱು ನುಣ್ ಉಣರ್ವಿನ್ ,
ನೀಲಾರ್‍‌ಕಣ್ಡತ್ತಮ್ಮಾನುಮ್ ನಿಱೈನಾನ್ಮುಗನುಮ್ ಇನ್ದಿರನುಮ್,
ಶೇಲೇಯ್ ಕಣ್ಡಾರ್ ಪಲರ್ ಶೂೞ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಮಾಲಾಯ್ ಮಯಕ್ಕಿ ಅಡಿಯೇನ್ ಪಾಲ್ ವನ್ದಾಯ್ ಪೋಲೇ ವಾರಾಯೇ॥

ಸರ್ವಜ್ಞನಾದ(ಎಲ್ಲಾ ಬಲ್ಲವನಾದ) ರುದ್ರನು ಸೂಕ್ಷ್ಮ ಸಂಗತಿಗಳನ್ನು ನೋಡಬಲ್ಲವನಾಗಿದ್ದರಿಂದ ಇಡೀ ಭೂಮಂಡಲದಲ್ಲಿ ಮುಖ್ಯನಾದವನಾಗಿ , ತನ್ನ ಕಂಠವನ್ನು ಕಪ್ಪಾಗಿಸಿಕೊಂಡನು. ನಾಲ್ಕು ತಲೆಯ ಬ್ರಹ್ಮನು ಇಂತಹ ರುದ್ರನಿಗೆ ತಂದೆಯಾಗಿದ್ದುಕೊಂಡು , ಸೃಷ್ಟಿಸಲು ಎಲ್ಲಾ ಜ್ಞಾನವನ್ನೂ ಹೊಂದಿದ್ದನು. ಇಂದ್ರನಿಗೆ ಮೂರೂ ಲೋಕದ ಸಂಪತ್ತುಗಳಿದ್ದರೂ, ನಿನ್ನ ಹತ್ತಿರ “ ನನಗೆ ನಿನ್ನನ್ನು ಹೊಂದಲು ಯಾವ ಮಾರ್ಗಗಳೂ ತಿಳಿದಿಲ್ಲವಾದರೂ, ನಿನ್ನನ್ನು ಬಿಟ್ಟಿರಲು ಅಸಹನೀಯವಾಗಿದೆ.” ಎಂದು ಹೇಳುತ್ತಾನೆ. ತಿರುಮಲದಲ್ಲಿ ವಾಸವಾಗಿರುವ ಮತ್ತು ಈ ರೀತಿಯಾಗಿ ಪ್ರಾರ್ಥನೆಗಳನ್ನು ಮತ್ತು ಶರಣಾಗತಿಯನ್ನು ಸ್ವೀಕರಿಸುವ ಮತ್ತು ಇಂತಹ ದೇವರುಗಳಿಂದ ಮತ್ತು ಅವರ ಹತ್ತಿರದಲ್ಲಿರುವ ಮೀನಿನಂತೆ ಕಣ್ಣುಗಳಿರುವ ಹೆಣ್ಣು ದೇವತೆಗಳಿಂದ (ಪಾರ್ವತಿ, ಸರಸ್ವತಿ , ಶಚಿ ಮುಂತಾದವರಿಂದ) ಆರಾಧಿಸಲ್ಪಡುವೆ. ಹೇಗೆ ನೀನು ಕೃಷ್ಣನಾಗಿ ಕಪ್ಪಾದ ಪ್ರಭೆಯುಳ್ಳ ಬಣ್ಣವನ್ನು ಹೊಂದಿ ಎಲ್ಲರನ್ನೂ ನಿನ್ನ ಗುಣಗಳಿಂದ ಮತ್ತು ಚಟುವಟಿಕೆಗಳಿಂದ ಮಂತ್ರಮುಗ್ಧರಾಗಿ ಮಾಡುತ್ತಿದ್ದೆಯೋ, ಹಾಗೆಯೇ ನಿನ್ನನ್ನು ಮಾತ್ರ ಶರಣು ಹೋಗಿರುವ ಮತ್ತು ನಿನ್ನನ್ನು ಬಿಟ್ಟು ಬದುಕಲಾರೆನೆಂಬ ನನ್ನಲ್ಲಿಗೂ ನೀನು ಬರಬೇಕು” ಎಂದು ಹಾಡುತ್ತಾರೆ.

ಒಂಭತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನ ಅತ್ಯಂತವಾಗಿ ಆನಂದಿಸಲ್ಪಡುವ ಸುಂದರ ದಿವ್ಯ ಪಾದಗಳನ್ನು ಎಂದೆಂದಿಗೂ ಬಿಡಲಾರೆ.”
ವನ್ದಾಯ್ ಪೋಲೇ ವಾರಾದಾಯ್ ವಾರಾದಾಯ್ ಪೋಲ್ ವರುವಾನೇ,
ಶೆನ್ದಾಮರೈಕ್ಕಣ್ ಶೆಙ್ಗನಿವಾಯ್ ನಾಲ್ ತೋಳ್ ಅಮುದೇ ಎನದುಯಿರೇ,
ಶಿನ್ದಾಮಣಿಗಳ್ ಪಗರ್ ಅಲ್ಲೈ ಪ್ಪಗಲ್‍ಶೆಯ್ ತಿರುವೇಙ್ಗಡತ್ತಾನೇ,
ಅನ್ದೋ ಅಡಿಯೇನ್ ಉನಪಾದಮ್ ಅಗಲ ಕಿಲ್ಲೇನ್ ಇಱೈಯುಮೇ ॥

ನೀನು ಬಂದ ಹಾಗೆ ಕಂಡರೂ ಕೈಗೆ ಸಿಕ್ಕ ಹಾಗೆ ಕಂಡರೂ ಸಿಗುವುದಿಲ್ಲ. ತನ್ನೊಳಗೆ ಆಕಿಂಚನ್ಯಮ್ ನಿಂದ (ಏನೇನೂ ಇಲ್ಲದೆ) , ‘ಅವನು ಬರಲು ಸಾಧ್ಯವೇ ಇಲ್ಲ ‘ ಎಂದು ಯೋಚಿಸುವಾಗ ನೀನು ಬರುವೆ ಮತ್ತು ಸಂಪೂರ್ಣ ಅಧೀನನಾಗುವೆ. ನೀನು ನಿನ್ನ ಬಹು ಸುಂದರವಾದ ಕಮಲದ ಹೂಗಳ ಹಾಗಿರುವ ಕೆಂಪಾದ ದಿವ್ಯ ಕಣ್ಣುಗಳಿಂದ ,ಮತ್ತು ಕೆಂಪಾದ ಮಾಗಿದ ಹಣ್ಣಿನಂತಿರುವ ದಿವ್ಯ ತುಟಿಗಳಿಂದ ಹೇಳುವೆ “ ಮಾಮೇಕಮ್ ಶರಣಮ್ ವ್ರಜ” . ಭಕ್ತರನ್ನು ಆಲಂಗಿಸುತ್ತಾ ನಾಲ್ಕು ಭುಜಗಳು ಹೇಳುತ್ತವೆ “ಸುಗಾಧಮ್ ಪರಿಷಸ್ವಜೇ” ಅವುಗಳು ನಿರಂತರವಾಗಿ ಭಕ್ತರಿಗೆ ಆನಂದವನ್ನು ನೀಡುತ್ತವೆ ಮತ್ತು ನನಗೆ ಜೀವಾಂಶವಾಗಿದೆ. ರಾತ್ರಿಯನ್ನು ಹಗಲಿನ ಹಾಗೆ ಪ್ರಕಾಶಿಸುವ , ಕೇಳಿದ್ದನ್ನು ಕೊಡುವ ಅಮೂಲ್ಯ ರತ್ನದ ಹರಳುಗಳು ತುಂಬಿರುವ ತಿರುಮಲದಲ್ಲಿ ನೀನು ನೆಲೆಸಿರುವೆ. ಅಯ್ಯೋ! ನಿನ್ನ ಸಂಪೂರ್ಣ ಸೇವಕನಾಗಿರುವ , ಬೇರೆ ಯಾರ ಆಶ್ರಯವಿಲ್ಲದ ನಾನು ನಿನ್ನ ದಿವ್ಯ ಪಾದಗಳನ್ನು ಬಿಟ್ಟು ಒಂದು ನಿಮಿಷವೂ ಅಗಲಿರಲಾರೆನು.
ಅನ್ದೋ => ಇದರ ಅರ್ಥ , ಅಗಲಿಕೆಯಿಂದ ನನ್ನೊಳಗೆ ಇಷ್ಟೊಂದು ವ್ಯಥೆಯನ್ನು ದುಃಖವನ್ನೂ ತುಂಬಿಕೊಂಡಿದ್ದರೂ, ನಾನು ನನ್ನ ಮನೋಕಾಂಕ್ಷೆಯನ್ನು ಬಿಡಿಸಿ ಪ್ರತ್ಯೇಕವಾಗಿ ಹೇಳಬೇಕೆ ಎಂದು.

ಹತ್ತನೆಯ ಪಾಸುರಮ್:
ಆಳ್ವಾರರು ತಿರುವೇಂಗಡಮುಡೈಯಾನರಿಗೆ ಸರಿಯಾದ ಶರಣಾಗತಿಯಾಗುತ್ತಾರೆ ಮತ್ತು ಹೇಳುತ್ತಾರೆ, “ ಬೇರೆ ಏನೂ ಆಶ್ರಯವಿಲ್ಲದೆ ನಾನು ಪಿರಾಟ್ಟಿಯ ಪುರುಷಕಾರವನ್ನು ಮತ್ತು ಸೂಕ್ತ ಗುಣಗಳನ್ನು ಹೊಂದಿರುವ ನಿನ್ನ ದಿವ್ಯ ಪಾದಗಳಿಗೆ ಶರಣಾಗುತ್ತೇನೆ.”
ಅಗಲಕಿಲ್ಲೇನ್ ಇಱೈಯುಮ್ ಎನ್‍ಱು ಅಲರ್‌ಮೇಲ್ ಮಙ್ಗೈ ಉಱೈ ಮಾರ್ಬಾ,
ನಿಗರಿಲ್ ಪುಗೞಾಯ್ ಉಲಗಮ್ ಮೂನ್‍ಱುಡೈಯಾಯ್ ಎನ್ನೈ ಆಳ್ವಾನೇ,
ನಿಗರಿಲ್ ಅಮರರ್ ಮುನಿಕ್ಕಣಙ್ಗಳ್ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಪುಗಳ್ ಒನ್‍ಱಿಲ್ಲಾ ಅಡಿಯೇನ್ ಉನ್ ಅಡಿಕ್ಕೀೞ್ ಅಮರ್ನ್ದು ಪುಗುನ್ದೇನೇ ॥

ಓಹ್! ಎಂಪೆರುಮಾನರೇ! ನೀವು ಅತಿಯಾಗಿ ಆನಂದಿಸಬಹುದಾದ ದಿವ್ಯ ವಕ್ಷಸ್ಥಲವನ್ನು ಹೊಂದಿದ್ದೀರಿ. ಅದು ಶಾಶ್ವತವಾಗಿ ಲಕ್ಷ್ಮಿಯ ವಾಸಸ್ಥಾನವಾಗಿದೆ. ಅವಳು ಎಂದೂ ತರುಣಾವಸ್ಥೆಯಲ್ಲಿ ಇದ್ದು , ಮೃದುವಾದ ಮಧುರವಾದ ಗುಣಗಳನ್ನು ಹೊಂದಿದ್ದು, ನಿಮ್ಮಿಂದ ಒಂದು ಕ್ಷಣವೂ ದೂರವಾಗಿರಲಾರೆ ಎಂದು ನಿಮಗೆ ಅತ್ಯಂತ ಪ್ರಿಯಳಾಗಿದ್ದಾಳೆ. ಓಹ್! ಸರಿಸಾಟಿಯಿಲ್ಲದ, ಶೇಷ್ಠ ವಾತ್ಸಲ್ಯವನ್ನು ಹೊಂದಿರುವವನೇ! ಪ್ರಮಾಣದಲ್ಲಿ ಸಾಧಿಸಿರುವ ಹಾಗೆ ಮೂರು ವಿಧದ ಚೇತನಗಳಿಗೂ ಮತ್ತು ಅಚೇತನಗಳಿಗೂ ಸ್ವಾಮಿತ್ವಮ್ ಅನ್ನು ಹೊಂದಿರುವವನೇ! ಬಹಳ ತಪ್ಪುಗಳನ್ನು ಮಾಡಿದ ನನ್ನನ್ನು ಕೂಡಾ ಸ್ವೀಕರಿಸಿ,ಅಂಗೀಕರಿಸಲು ಬೇಕಾದ ಸೌಶೀಲ್ಯವನ್ನು ಹೊಂದಿರುವವನೇ! ಸರಿಸಾಟಿಯಿಲ್ಲದ ಅಮರರು ಪೂಜಿಸಲು ಅತಿ ಉತ್ಸುಕರಾಗಿರುವ, ಮುನಿಗಳು ನಿನಗಾಗಿ ತಪಸ್ಸು ಮಾಡುವ ಸ್ಥಳವಾದ ತಿರುಮಲದಲ್ಲಿ ನೆಲೆಸಿರುವವನೇ! ಅನನ್ಯಶರಣನಾಗಿರುವ ಬೇರೆ ಯಾವ ಮಾರ್ಗವೂ ಉಪಾಯವೂ ಇಲ್ಲದ ಉಪಾಯಾಂತರಮ್ ನಾನು ಮತ್ತು ಇತರ ಭಕ್ತರು ನಿನ್ನ ದಿವ್ಯಪಾದದಡಿಯಲ್ಲಿ ಕುಳಿತಿದ್ದೇವೆ. ನಮಗೆ ನಿನ್ನ ಕೈಂಕರ್‍ಯದ ಗುರಿಯನ್ನು ಹೊರತುಪಡಿಸಿ ಬೇರೇನೂ ಬೇಡ. ಎಂದು ಹಾಡುತ್ತಾರೆ.

ಹನ್ನೊಂದನೆಯ ಪಾಸುರಮ್:
ಯಾರು ಯಾರು ಈ ಹತ್ತು ಪಾಸುರಗಳುಳ್ಳ ಪದಿಗೆಯನ್ನು ಕಲಿತು ಹಾಡುತ್ತಾರೋ, ಅವರಿಗೆ ಪರಮಪದ ಪ್ರಾಪ್ತಿಯಾಗುವುದು ಮತ್ತು ಕೈಂಕರ್‍ಯದಲ್ಲಿ ಅವರು ವ್ಯಸ್ತರಾಗುತ್ತಾರೆ.
ಅಡಿಕ್ಕೀೞ್ ಅಮರ್ನ್ದು ಪುಗುನ್ದು ಅಡಿಯೀರ್ ವಾೞ್‍ಮಿನ್ ಎನ್‍ಱೆನ್‍ಱು ಅರುಳ್‍ಕೊಡುಕ್ಕುಮ್,
ಪಡಿ ಕ್ಕೇೞ್ ಇಲ್ಲಾ ಪ್ಪೆರುಮಾನೈ ಪ್ಪೞನಕ್ಕುರುಗೂರ್ ಚ್ಚಡಗೋಪನ್,
ಮುಡಿಪ್ಪಾನ್ ಶೊನ್ನ ಆಯಿರತ್ತು ತ್ತಿರುವೇಙ್ಗಡತ್ತುಕ್ಕಿವೈಪತ್ತುಮ್,
ಪಿಡಿತ್ತಾರ್ ಪಿಡಿತ್ತಾರ್ ವೀಟ್ರಿರುನ್ದು ಪೆರಿಯ ವಾನುಳ್ ನಿಲಾವುವರೇ ॥

ಎಂಪೆರುಮಾನರು ಎಲ್ಲರಿಗಿಂತಲೂ ಶ್ರೇಷ್ಠರಾದವರು ಎಲ್ಲರ ಮೇಲೆ ತಮ್ಮ ಕರುಣೆಯನ್ನು ಹರಿಸುತ್ತಾರೆ ಮತ್ತು ಹೇಳುತ್ತಾರೆ. “ಓಹ್! ನನ್ನ ಸೇವಕರೇ, ನನ್ನ ದಿವ್ಯ ಪಾದಗಳಲ್ಲಿ ಪ್ರವೇಶ ಮಾಡಿ ಮತ್ತು ಅನನ್ಯ ಸಾಧನರಾಗಿ , ಅನನ್ಯ ಪ್ರಯೋಜನರಾಗಿ ಅನಂತವಾಗಿ ಆನಂದ ಹೊಂದಿರಿ.” ಉತ್ತೇಜಕವಾದ ನೀರಿನ ಪ್ರದೇಶವನ್ನು ಹೊಂದಿರುವ ಆಳ್ವಾರ್ ತಿರುನಗರಿಯ ನಾಯಕರಾಗಿರುವ ನಮ್ಮಾಳ್ವಾರರು ಕರುಣೆಯಿಂದ ಎಂಪೆರುಮಾನರ ಬಗ್ಗೆ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ಹತ್ತು ಪಾಸುರಗಳನ್ನು, ಸಾವಿರ ಪಾಸುರಗಳೊಡನೆ ಹೇಳಿದ್ದಾರೆ. ಯಾರು ಈ ಪಾಸುರಗಳನ್ನು ಅವುಗಳ ಅರ್ಥಗಳೊಂದಿಗೆ ಹಿಡಿದಿಟ್ಟುಕೊಳ್ಳುತ್ತಾರೋ, ಅವರು ಅತ್ಯಂತ ಶ್ರೇಷ್ಠವಾದ ಪರಮಪದವೆಂಬ ಪರಮವ್ಯೋಮದಲ್ಲಿ ನಿರಂತರವಾಗಿ ವಿಶಿಷ್ಟ ರೂಪದಲ್ಲಿರುತ್ತಾರೆ ಮತ್ತು ಶಾಶ್ವತವಾದ ಆನಂದವನ್ನು ಹೊಂದುತ್ತಾರೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-6-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org