ಉಪದೇಶ ರತ್ನಮಾಲೈ – ಸರಳ ವಿವರಣೆ – ೫೭ ರಿಂದ ೫೯ ನೇ ಪಾಸುರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಉಪದೇಶ ರತ್ನಮಾಲೈ

<< ಹಿಂದಿನ ಶೀರ್ಷಿಕೆ

ಪಾಸುರ ೫೭

ಈ ಗ್ರಂಥದ ಹಿರಿಮೆಯನ್ನು ತಿಳಿದಿರುವ ಆದರೆ ಅದರಲ್ಲಿ ಭಾಗಿಯಾಗದವರ ದುಃಖಕರ ಸ್ಥಿತಿಯ ಬಗ್ಗೆ ಅವರು ದುಃಖಿಸುತ್ತಾರೆ.

ದೇಶಿಗರ್ಪಾಲ್ ಕೇಟ್ಟ ಸೆೞುಂ ಪೊರುಳೈಚ್ ಚಿಂದೈ ತನ್ನಿಲ್

ಮಾಸಱವೇ ಊನ್ರ ಮನನಂ ಸೈದು ಆಸರಿಕ್ಕ

ವಲ್ಲರ್ಗಳ್ ತಾಂ ವಚನ ಭೂಡಣತ್ತಿನ್ ವಾನ್ ಪೊರೀಳೈ

ಕಲ್ಲಾದದು ಎನ್ನೋ ಕವರ್ನ್ದು

ಕಾಮ ಮತ್ತು ಕೋಪದ ತಮ್ಮ ದೋಷಗಳನ್ನು ತೊಡೆದುಹಾಕಲು, ತಮ್ಮ ಅಚಾರ್ಯರಿಂದ ಕಲಿತ ಅತ್ಯುತ್ತಮ ಅರ್ಥಗಳನ್ನು ಚೆನ್ನಾಗಿ ಧ್ಯಾನಿಸಬಲ್ಲ ಮತ್ತು ಆ ಅರ್ಥಗಳನ್ನು [ತಮ್ಮ ಜೀವನದಲ್ಲಿ] ಅನುಸರಿಸಲು ಸಮರ್ಥರಾಗಿರುವವರಿಗೆ, ಶ್ರೀವಚನ ಭೂಷನದ ಗೌರವಾನ್ವಿತ ಅರ್ಥಗಳನ್ನು ಕಲಿಯದಿರಲು ಕಾರಣವೇನು? ಶಾಸ್ತ್ರಗಳನ್ನು ಕಲಿಯಲು ಮತ್ತು ಅವುಗಳನ್ನು ಅನುಸರಿಸಲು ಸಮರ್ಥವಾಗಿರುವ ಮಾನವರ ಜಾತಿಯಲ್ಲಿ ಜನಿಸಿದ ಈ ಜನರು ಈ ಗ್ರಂಥವನ್ನು ಕಳೆದುಕೊಳ್ಳದಿರುವುದು ಎಷ್ಟು ವಿಚಿತ್ರ!

ಪಾಸುರ ೫೮

ಶ್ರೀವಚನಭೂಷಣದ  ಗೌರವಾನ್ವಿತ ಅರ್ಥಗಳನ್ನು ಅವರು ಹೇಗೆ ಕಲಿಯಬೇಕು ಎಂದು ಪ್ರಶ್ನಿಸುವವರಿಗೆ ಅವರು ಪ್ರತಿಕ್ರಿಯಿಸುತ್ತಾರೆ.

ಸಚ್ಚಂಬ್ರದಾಯಂ ತಾಂ ಉಡೈಯೋರ್ ಕೇಟ್ಟಕ್ಕಾಲ್

ಮೆಚ್ಚುಂ ವ್ಯಾಕ್ಕಿಯೈಗಳ್ ಉಂಡಾಗಿಲ್ ನಚ್ಚಿ

ಅಧಿಗಾರಿಯುಂ ನೀರ್ ವಚನಭೂಡಣತ್ತುಕ್ಕಱ್ಱ

ಮದಿಯುಡೈಯೀರ್ ಮದ್ದಿಯತ್ತಾರಾಯ್

ಓಹ್ ಶ್ರೀವಚನ ಭೂಷನಕ್ಕೆ ಮನಸ್ಸನ್ನು ಅರ್ಪಿಸಿದವರೆ ! ಎಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಗ್ರಂಥಕ್ಕೆ ಯಾರಾದರೂ ವ್ಯಾಖ್ಯಾನ ಬರೆದಿದ್ದರೆ, ಮತ್ತು ಸತ್ಸಂಪ್ರದಾಯದಲ್ಲಿ (ಸತ್ಯಸಂಧತೆಯಲ್ಲಿ ಸಾಂಪ್ರದಾಯಿಕ ನಂಬಿಕೆಗಳು) ಲಂಗರು ಹಾಕಿದವರು ಅದನ್ನು ಕೇಳಿದ ನಂತರ ಸಂತೋಷವನ್ನು ಅನುಭವಿಸಿದರೆ, ನೀವೂ ಅದನ್ನು ಕಲಿಯಿರಿ, ತಟಸ್ಥ ಹಾದಿಯಲ್ಲಿ ಉಳಿಯುರುವಿರಿ.

ಮಾಮುನಿಗಳ್ ಅದಕ್ಕೆ ಒಂದು ಪ್ರಖ್ಯಾತ ವ್ಯಾಖ್ಯಾನವನ್ನು ಬರೆಯುವ ಮೊದಲು, ತಿರುನಾರಾಯಣಪುರಂನ ಆಯಿ ಜನನ್ಯಾಚಾರಿಯಾರ್ ಅವರಂತಹ ಆಚಾರ್ಯರು ಅದಕ್ಕೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ.

ಪಾಸುರ ೫೯

ಶ್ರೀವಚನ ಭೂಷಣಂ ಮೇಲಿನ ವಾತ್ಸಲ್ಯವನ್ನು ಅವರಂತೆಯೇ ಇತರ ಅಚಾರ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಅವರು ಸಂತೋಷವನ್ನು ಅನುಭವಿಸುತ್ತಾರೆ.

ಸೀರ್ ವಚನ ಭೂಡಣತ್ತಿನ್ ಸೆಂ ಪೊರುಳೈಚ್ ಚಿಂದೈ ತನ್ನಾಲ್

ತೇರಿಲುಮಾಮ್ ವಾಯ್ಕ್ಕೊಂಡು ಸೆಪ್ಪಿಲುಮಾಮ್ ಆರಿಯರ್ಗಳ್

ಎಂದನಕ್ಕು ನಾಳುಂ ಇನಿದಾಗ ನಿನ್ಱದೈಯೋ

ಉಂದಮಕ್ಕು ಎವ್ವಿನ್ಬಂ ಉಳದಾಂ

ಓ ಆಚಾರ್ಯರೇ! ಶ್ರೀವಚನಭೂಷನದ  ಶ್ರೇಷ್ಠ ಅರ್ಥಗಳನ್ನು ನಾನು ನನ್ನ ಹೃದಯದಿಂದ ಆನಂದಿಸಿದರೂ ಅಥವಾ ನನ್ನ ಬಾಯಿಯ ಮೂಲಕ ಪಠಿಸಿದರೂ ಅದು ನನಗೆ ಅಪರಿಮಿತ ಸಂತೋಷವನ್ನು ನೀಡುತ್ತದೆ.ನೀವು  ಯಾವ ರೀತಿಯ ಸಂತೋಷವನ್ನು ಪಡೆಯುತ್ತೀರಿ? ಆೞ್ವಾರ್ಗಳು ಎಂಪೆರುಮಾನನ್ನು ತಣಿಸಲಾಗದ ಮಕರಂದವಾಗಿ ಆನಂದಿಸಿದರು.

ಆಚಾರ್ಯರು ಆಳ್ವಾರ್ಗಳು ಮತ್ತು ಅವರ ಅರುಲಿಚೇಯಲ್ಗಳನ್ನು (ದಿವ್ಯ ಪ್ರಬಂಧಂಗಳು)  ತೃಪ್ತಿಯಾಗದ ಮಕರಂದವಾಗಿ ಆನಂದಿಸಿದರು. ಆದಾಗ್ಯೂ, ಮಾಮುನಿಗಳು ಶ್ರೀವಚನಭೂಷಣವನ್ನು ತೃಪ್ತಿಯಾಗದ ಮಕರಂದವಾಗಿ ಆನಂದಿಸುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/07/upadhesa-raththina-malai-57-59-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org 
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment