Monthly Archives: December 2021

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 31-40

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 21-30

ಶ್ಲೋಕ-31 – ಈ ಶ್ಲೋಕದಲ್ಲಿ ಆಳಂದಾರ್ “ಪಡಿಕ್ಕಳವಾಗ ನಿಮಿರ್ತ್ತ ನಿನ್ ಪಾದಪನ್ಗಯಮೇ ತಲೈಕ್ಕಣಿಯಾಯ್” (ತಿರುವಾಯ್ಮೊೞಿ 9.2.2 ಜಗತ್ತಿನ ಪರಿಮಾಣದವರೆಗು ಏರಿದ ನಿನ್ನ ಪಾದಪಂಕಜವು ನನ್ನ ಶಿರಸ್ಸನ್ನು ಅಲಂಕರಿಸಲಿ ) ಹಾಗು ತಿರುವಾಯ್ಮೊೞಿ 4.3.6 “ಕೋಲಮಾಮ್ ಎನ್ ಸೆನ್ನಿಕ್ಕು ಉನ್ ಕಮಲಮ್ ಅನ್ನ ಕುರೈ ಕೞಲೇ” ( ತಿರುವಾಯ್ಮೊೞಿ 4.3.6 ನಿನ್ನ ತವೆರೆಗೆ ಸದೃಶವಾದ ದಿವ್ಯ ಪಾದಗಳು ನನ್ನ ಶಿರಸ್ಸಿಗೆ ಆಲಂಕಾರವಾಗಿದೆ) ಯಲ್ಲಿ ಹೇಳಿದಂತೆ, ” ನಿನ್ನ ದಿವ್ಯ ಪಾದಗಳ್ಳನ್ನು ನೋಡುವುದೋಂದೆ ಸಾಲದು ,ನಿನ್ನ ದಿವ್ಯ ಪಾಧಗಳಿಂದ ನಿನ್ನ ಶಿರಸ್ಸನ್ನು ಅಲಂಕರಿಸಬೇಕು” ಎಂದು ಹೇಳುತಿಧಾರೆ.
ಕದಾ ಪುನಃ ಶಂಖ ರಥಾನ್ಗ ಕಲ್ಪಕ
ಧ್ವಜಾರವಿಂದ  ಅಂಕುಶ  ವಜ್ರ  ಲಾಂಚನಮ್ |
ತ್ರಿವಿಕ್ರಮ! ತ್ವಚ್ಚರಣಾಅಂಬುಜದ್ವಯಮ್  
ಮದೀಯಮೂರ್ದಾನಮಲಂಕರಿಷ್ಯತಿ ||

ತ್ರಿವಿಕ್ರಮನಾಗಿ ಅವತರಿಸಿದ ಭಗವಂತನೆ! ಶಂಖ, ಚಕ್ರ, ಕಲ್ಪಕ-ವೃಕ್ಷ, ದ್ವಜ, ತಾವರೆ, ಅಂಕುಶ, ಹಾಗು ವಜ್ರಾಯುದಗಳ ಛಿನ್ಹೆಗಳನ್ನು ಹೋಂದಿರುವ ನಿನ್ನ ದಿವ್ಯ ಪಾದಯುಗಳಿಂದ ನನ್ನ ಶಿರಸ್ಸು ಎಂದು ಅಲಂಕೃತವಾಗುವುದು ?

ಶ್ಲೋಕ- 32 – ಈ ಶ್ಲೋಕದಿಂದ ಶ್ಲೋಕ-46 “ಭವನ್ತಮ್”ರವರೆಗು ಆಳವಂದಾರ್ ಎಮ್ಪೆರುಮಾನಿನ ಸುಂದರ ತೋಳ್ಗಳ, ಆಭರಣ, ಆಯುದ, ದಿವ್ಯ ಮಹಿಶಿ, ದಿವ್ಯ ಪರಿಕರ ಹಾಗು ಐಶ್ವರ್ಯದ ಯೋಗವನ್ನು (ಭಗವನ್ನು ಇವನ್ನು ಹೋಂದಿರುವುದನ್ನು) ಸವಿಯುತಿದ್ದಾರೆ, ಹಾಗು ಈ ಅನುಭವಜನಿತ (ಅನುಭವದಿಂದ ಹುಟ್ಟಿದ) ಕೈಂಕರ್ಯದಲ್ಲಿ ಎಂದು ತೊಡಗುವೆ ಎಂದು ಕೇಳುತಿದ್ದಾರೆ. ಭಗವಾನನ್ನು ಭಕ್ತರೋಂದಿಗೆ ಪರಮಪದದಲ್ಲಿ ಸೇವಿಸುವ ತಮ್ಮ ಪ್ರಾಪ್ಯವನ್ನು ವಿವರಿಸುತಿದ್ದಾರೆ.
ವಿರಾಜಮಾನೋಜ್ಜ್ವಲಪೀತವಾಸಸಮ್
ಸ್ಮಿತಾತಸೀಸೂನಸಮಾಮಲಚ್ಚವಿಮ್ |
ನಿಮಗ್ನನಾಭಿಮ್ ತನುಮಧ್ಯಮುನ್ನತಮ್
ವಿಶಾಲವಕ್ಷಸ್ಥಲಶೋಭಿಲಕ್ಷಣಮ್ ||

ಪ್ರಾಕಾಶಿಸುವ ಪೀತಾಂಬರ, ಅಗಸೆ ಪುಷ್ಪಕ್ಕೆ ಸಮಾನವಾದ ದೇಹಕಾಂತಿ, ಆಳವಾದ ಗಂಭೀರವಾದ ನಾಭಿ, ಸೂಕ್ಷಮವಾದ(ಸಣ್ಣ) ಸೋಂಟ ಹಾಗು ವಿಶಾಲವಾದ ವಕ್ಷಸ್ಥಳದಲ್ಲಿ ಪ್ರಕಾಶಿಸುವ ಶ್ರೀವತ್ಸವದ (ವರ್ಣಗಳ ಸಮ್ಮಿಶ್ರಣದ )ಶೋಭೆಯನ್ನು (ಎಮ್ಪೆರುಮಾನ್ ಹೋಂದಿದ್ದಾನೆ.)

ಶ್ಲೋಕ- 33 – ಆಳವಂದಾರ್ ಎಮ್ಪೆರುಮಾನಿನ ಶೌರ್ಯ ಧೈರ್ಯಾದಿಗಳನ್ನು ಹಾಗು ಅವನ ದಿವ್ಯ ಭುಜಗಳ ಸೌಂದರ್ಯವನ್ನು ಔಭವಿಸುತಿದ್ದಾರೆ.
ಚಕಾಸತಮ್ ಜ್ಯಾಗಿಣಕರ್ಕಶೈಶುಭೈಃ
ಚತುರ್ಭಿರಾಜಾನುವಿಳಂಬಿಭಿರ್  ಭುಜೈಃ |
ಪ್ರಿಯಾವತಂಸೋತ್ಪಲಕರ್ಣಭೂಷಣ
ಶ್ಲತಾಲಕಾಬಂಧ  ವಿಮರ್ದ  ಸಂಶಿಭಿ: ||

ಬಿಲ್ಲಿನ ಹೆದೆಯಿಂದ ಜಡ್ಡುಕಟ್ಟ ಕಠಿನವಾದ ಹಾಗು ಶ್ರೀಮಹಾಲಕ್ಷ್ಮಿಯ ಕರ್ಣ್ಗಳನ್ನು ಅಲಂಕರಿಸುವ ಉತ್ಪಲಪುಷ್ಪಗಳು (ಕನ್ನೈದಿಲೆ ಪುಷ್ಪಗಳು), ಆಕೆಯ ಓಲೆ ಹಾಗು ಮುಂಗುರುಳುಗಳನ್ನು ಹೋಂದಿರುವ ಜಡೆ ಯನ್ನು ತೋರುವ ಶುಭವಾದ ದಿವ್ಯ ಭುಜಗಳೋಂದಿಗೆ ಎಮ್ಪೆರುಮಾನ್ ಪ್ರಕಾಶಿಸುತಿದ್ಡ್ದಾನೆ.

ಶ್ಲೋಕ- 34 – ದಿವ್ಯ ಭುಜಗಳ ನಂತರ ಆಳವಂದಾರ್ ಎಮ್ಪೆರುಮಾನಿನ ದಿವ್ಯ ಕಂಠ ಹಾಗು ಮುಖದ ಸೌಂದರ್ಯನ್ನು ಅನುಭವಿಸುತಿದ್ದಾರೆ.
ಉದಗ್ರಪೀನಾಮ್ಸವಿಲಮ್ಬಿ ಕುಂಡಲ
ಅಲಕಾವಳೀ  ಬಂಧುರಕಂಬುಕಂಧರಮ್ |
ಮುಖಶ್ರಿಯಾ ನ್ಯಕ್ಕೃತಪೂರ್ಣ ನಿರ್ಮಲಾ$
ಮೃತಾಂಸುಬಿಂಬ ಅಂಬುರು ಹೋಜ್ಜ್ವಲಶ್ರಿಯಂ ||

ಉನ್ನತವಾದ ಹಾಗು ಸ್ಥೂಲವಾದ ಭುಜಶಿರಸ್ಸು ಪರ್ಯಂತವು ವ್ಯಾಪಿಸುವ ಕುಂಡಲಗಳಿಂದ ಶೋಭಿತವಾದ ಕಂಠವನ್ನು ಎಮ್ಪೆರುಮಾನ್ ಹೋಂದಿದ್ದಾನೆ. ಮುಂಗುರುಳುಗಳನ್ನು ಹಾಗು ಕಂಠದಲ್ಲಿ ಮೂರು ರೇಖೆಗಳನ್ನು ಹೋಂದಿದ್ದಾನೆ. ಪೂರ್ಣವಾಧ ನಿಶ್ಕಳಂಕ ಚಂದ್ರನ ಹಾಗು ಈಗ ಅರಳಿದ ತಾವರೆಯ ಕಾಂತಿಯನ್ನು ಮೀರುವ ಮುಖ ಔಜ್ವಲ್ಯವನ್ನು ಹೋಂದಿದ್ದಾನೆ.

ಶ್ಲೋಕ- 35 – “ಕೋಳಿೞೈತ್ ತಾಮರೈ” (ತಿರುವಾಯ್ಮೊೞಿ 7.7.8 ಆಭರಣದಂತೆ ತಮ್ಮದೆಯಾದ ಕಾಂತಿಯನ್ನು ಹೋಂದಿರುವ ತಾವರೆಗೆ ಸಮಾನವಾದ ಕಣ್ಗಳನ್ನು ಹೋಂದಿದ್ದಾನೆ. [ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನಿನ ದಿವ್ಯ ಮುಖದ ಅವಯವ ಶೋಭೆಯನ್ನು ಅನುಭವಿಸುತ್ತಾರೆ]) ಇದೇ ರೀತಿಯಲ್ಲಿ ಆಳವಂದಾರ್ (ಎಮ್ಪೆರುಮಾನಿನ) ಮುಖದ ಒಂದೋಂದು ಅವಯವದ ಸೌಂದರ್ಯದ ಸಮೂಹವನ್ನು ಅನುಭವಿಸುತಿದ್ದಾರೆ.
ಪ್ರಬುದ್ಧಮುಗ್ದಾಮ್ಬುಜಚಾರುಲೋಚನಮ್
ಸವಿಭ್ರಮಭ್ರೂಲತಮುಜ್ಜ್ವಲಾಧರಮ್ |
ಶುಚಿಸ್ಮಿತಮ್ ಕೋಮಲಗಣ್ಡಮುನ್ನಸಮ್
ಲಲಾಟಪರ್ಯನ್ತವಿಲಮ್ಬಿತಾಲಕಮ್ ||

ಈಗ ಅರಳಿದ ತಾವರೆಯಂತೆ ಕಣ್ಗಳನ್ನು, ಬಳ್ಳಿಯಂತೆ ಬಾಗಿದ ಹುಬ್ಬುಗಳನ್ನು, ಕಾಂತಿಯುಕ್ತ ತುಟಿಗಳನ್ನು, ಶುದ್ಧ ಮಂದಹಾಸಯನ್ನು(ನಗು), ಎತ್ತರವಾದ ಮೂಗನ್ನು, ಹಾಗು ಹಣೆಯವರೆಗು ಬರುವ ಮುಂಗುರುಳುಗಳನ್ನು ಉಳ್ಳ…

ಶ್ಲೋಕ- 36 – ಆಳವಂದಾರ್ ಎಮ್ಪೆರುಮಾನಿನ ಆಯುದ-ಆಭರಣಯುಕ್ತತೆಯನ್ನು ಪ್ರಶಂಸಿಸುತಿದ್ದಾರೆ.
ಸ್ಫುರತ್ ಕಿರೀಟ ಅಂಗದ  ಹಾರ ಕಂಟಿಕಾ
ಮಣೀಂದ್ರ ಕಾಂಚಿ ಗುಣ ನೂಪುರಾದಿಭಭಿಃ |
ರಥಾಂಗ ಸಂಖಾಸಿ  ಗದಾಧನುರ್ವರೈ
ಲಸತ್ತುಳಸ್ಯಾ ವನಮಾಲಯೋಜ್ವಲಂ ||

ಎಮ್ಪೆರುಮಾನ್ ಕಂಗೊಳಿಸುತ್ತಿರುವ ಕಿರೀಟ, ಬಾಹುಪುರಿ(ಭುಜಗಳ ಆಭರಣ), ಕಂಟಾಭರಣ, ಹಾರ, ಶ್ರೀ ಕೌಸ್ತುಭ, ಉಡಿದಾರ, ಕಾಲಿನ ಗೋರಸು ಹಾಗು ಚಕ್ರ, ಶಙ್ಖ, ನನ್ದಕವೆಂಬ ಖಡ್ಗ, ಕೌಮೋದಕೀ ಎಂಭ ಗದೆ, ಶಾರ್ನ್ಗವೆಂಬ ಧನುಸ್ಸುಗಳಂತ ಆಯುದಗಳು ಹಾಗು (ನಿನ್ನ ಸಮ್ಸ್ಪರ್ಶದಿಂದ) ಪ್ರಕಾಸಿಸುತ್ತಿರುವ ತುಳಸೀ ಹಾಗು ವನಮಾಲಾ ಹಾರಗಳಿಂದ ಅಲಂಕೃತನಾಗಿ ಹೊಳಿಯಿತಿದ್ದಾನೆ.

ಶ್ಲೋಕ- 37 – ಈ ಶ್ಲೋಕ ಹಾಗು ಮುಂದಿನ ಶ್ಲೋಕಗಳಲ್ಲಿ ಆಳವಂದಾರ್ ಎಮ್ಪೆರುಮಾನಿನ ಎಮ್ಪೆರುಮಾನ್ ಹಾಗು ಪಿರಾಟ್ಟಿಯ(ಶ್ರೀಮಹಾಲಕ್ಷ್ಮೀ) ವಾಲ್ಲಭ್ಯವನ್ನು ಅನುಭವಿಸುತಿದ್ದಾರೆ. ಈ ಶ್ಲೋಕದಲ್ಲಿ ಆಕೆಯ ವೈಭವವನ್ನು ಹಾಗು ಅವಳ ವಿಷಯದಲ್ಲಿ ಎಮ್ಪೆರುಮಾನಿನ ವಿಶೇಷ ಪ್ರೀತಿಯನ್ನು ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ.
ಚಕರ್ತ ಯಸ್ಯಾ ಭವನಮ್ ಭುಜಾನ್ತರಮ್
ತವ ಪ್ರಿಯಮ್ ಧಾಮ ಯದೀಯಜನ್ಮಭೂಃ |
ಜಗತ್ಸಮಸ್ತಮ್ ಯದಪಾಙ್ಗಸಮ್ಶ್ರಯಮ್
ಯದರ್ತಮಮ್ಭೋದಿರಮನ್ತ್ಯಬನ್ದಿ ಚ

(ಓ ಎಮ್ಪೆರುಮಾನೇ!) ಯಾವ ಪಿರಾಟ್ಟಿಗಾಗಿ ನಿನ್ನ ವಕ್ಷಸ್ತಳವನ್ನು ಆಕೆಯ ವಾಸಸ್ಥಾನವಾಗಿ ಮಾಡಿದೆಯೋ, ಆಕೆಯ ಜನ್ಮಭೂಮಿಯಾದ ಕ್ಷ್ರೀರಾಬ್ಧಿಯನ್ನು ನಿನಗೆ ಪ್ರಿಯವಾದ ಧಾಮವಾಗಿರುವುದೊ, ಸಮಸ್ಥವಾದ ಜಗತ್ತು ಯಾರ ಕಟಾಕ್ಷವನ್ನು ಆಶ್ರಯಿಸಿದೆಯೋ, ಯಾರಿಗಾಗಿ ಸಮುದ್ರವನ್ನು ಕಡೆಯಲ್ಪಟ್ಟಿತೋ ಯಾರಿಗಾಗಿ ಸೇತು ಬಂಧನ ನಡೆದಿತೋ.

ಶ್ಲೋಕ-38 – ಈ ಶ್ಲೋಕದಲ್ಲಿ ಆಳವಂದಾರ್ ಪಿರಾಟ್ಟಿಯ(ಶ್ರೀಮಹಾಲಕ್ಷ್ಮಿಯ) ಭೋಗ್ಯತಾತಿಶಯವನ್ನು ಹಾಗು “ಉನಕ್ಕೇಱ್ಕುಮ್ ಕೋಲ ಮಲರ್ಪ್ ಪಾವೈ” (ತಿರುವಾಯ್ಮೊೞಿ 10.10.6 ಸುಂದರವಾದ ಕಮಲದಲ್ಲಿ ವಾಸಿಸುವವಳು ಹಾಗು ನಿನಗೆ ತಕ್ಕವಳಾದ ಶ್ರೀಮಹಾಲಕ್ಷ್ಮೀ)ಯಲ್ಲಿ ಹೇಳಿದಂತೆ ಎಮ್ಪೆರುಮಾನಿಗೆ ಅನನ್ಯಾರ್ಹತ್ವವನ್ನು (ಎಮ್ಪೆರುಮಾನಿಗಾಗಿಯೇ ಇರುವುದು) ಅನುಭವಿಸುತಿದ್ದಾರೆ.
ಸ್ವವೈಶ್ವರೂಪ್ಯೇಣ ಸದಾऽನುಭೂತಯಾऽಪಿ
ಅಪೂರ್ವವತ್ ವಿಸ್ಮಯಮಾದದಾನಯಾ |
ಗುಣೇನ ರೂಪೇಣ ವಿಲಾಸಚೇಷ್ಟಿತೈಃ
ಸದಾ ತವೈವೋಚಿತಯಾ ತವ ಶ್ರಿಯಾ ||

ನಿನ್ನ ವಿಶ್ವರೂಪದಲ್ಲಿ ಸದಾ ಅನುಭವಿಸಿದರು, ನಿನ್ನನ್ನು ವಿಸ್ಮಯಿಸುವಂತಹ/ಆಶ್ಚರ್ಯಗೊಳಿಸುವಂತ ಗುಣಗಳು, ಸುಂದರ ರೂಪ ಹಾಗು ದಿವ್ಯ ವ್ಯಾಪಾರಗಳನ್ನು ಹೋಂದಿರುವ ಪಿರಾಟ್ಟಿ, ಹೋಸದಾಗಿರುವಂತೆ ನಿನ್ನ ಎಲ್ಲಾ ([ಪರಮಪದದಲ್ಲಿ] ಪರ, [ಕ್ಷೀರಾಬ್ಧಿಯಲ್ಲಿ] ವ್ಯೂಹ, ವಿಭವಗಳಂತಹ [ಅವತಾರ])ರೂಪಗಳಲ್ಲಿ ಅನುರೂಪವಾಗಿ ಅವತರಿಸುವವಳು, ನಿನಗೆ ಅನನ್ಯಾರ್ಹಳಾದ ಹಾಗು ನಿನಗೆ ಸಮ್ಪತ್ತಾಗಿ ಇರುವಳು.

ಶ್ಲೋಕ-39 – ಈ ಶ್ಲೋಕದಲ್ಲಿ ಆಳವಂದಾರ್ ಪರ್ಯಂಕ ವಿದ್ಯೆಯಲ್ಲಿ ಹೇಳಿದಂತೆ ಆದಿಶೆಷನ ಮಡಿಯಲ್ಲಿ ಪಿರಾಟ್ಟಿಯೋಂದಿಗೆ ಆಸೀನನಾಗಿರುವುದನ್ನು ಅನುಭವಿಸುತಿದ್ದಾರೆ.
ತಯಾ ಸಹಾಸೀನಮನನ್ತಭೋಗಿನಿ
ಪ್ರಕ್ರುಶ್ಟವಿಜ್ಞಾನಬಲೈಕದಾಮನಿ|
ಫಣಾಮಣಿವ್ರಾತಮಯೂಖಮಂಡಳ
ಪ್ರಕಾಶಮಾನೋದರದಿವ್ಯಧಾಮನಿ || 

ಪ್ರಕೃಷ್ಟವಾದ ಜ್ಞಾನ ಶಕ್ತಿಗಳಿಗೆ ಆಶ್ರಯನಾಗಿರುವವನು,ಫಣಾಮಣ್ಡಲದ ರತ್ನಗಳಿಂದ ಪ್ರಕಾಶಿತವಾದ ಭಗವಾನ್ ಹಾಗು ಪಿರಾಟ್ಟಿಯು ಬಿಜಯಿಸಿದ ಮಡಿಲನ್ನು ಹೋಂದಿರುವವನಾದ ತಿರುವನಂತಾೞ್ವಾನಿನ ಮೇಲೆ ಭಗವಾನ್ ಶಯನಿಸುತಿದ್ದಾರೆ.

ಶ್ಲೋಕ- 40 – ಕೈಂಕರ್ಯವನ್ನು ಮಾಡುವ ತ್ವರೆಯಿಂದ ಆಳವಂದಾರ್ ತಿರುವನಂತಾೞ್ವಾನಿನ ವಿಲಕ್ಷಣ ಕೈಂಕರ್ಯವನ್ನು ಅನುಭವಿಸುತಿದ್ದಾರೆ.
“ಉಪಮಾನಮಶೇಷಾಮ್ ಸಾದೂನಾಮ್ ಯಸ್ಸದಾSಭವತ್ ” ಎಂದು ಶ್ರೀವಿಷ್ಣುಪುರಾಣ ದಲ್ಲಿ(1.15.157 ಹೇಗೆ ಎಲ್ಲಾ ಸಜ್ಜನರಿಗೂ ಪ್ರಹ್ಲದದು ಉದಾಹರಣೆಯಾಗಿದ್ದಾನೋ), ಹಾಗೆಯೇ ಕೈಂಕರ್ಯವನ್ನು ಮಾಡಲು ಇಚ್ಛಿಸುವವರಿಗೆ ತಿರುವನಂತಾೞ್ವಾನಿನ ಕಾರ್ಯವು ಒಳ್ಳೆಯ ಉದಾಹರಣೆಯಾಗಿದೆ. ಆದಿಶೇಷನ ಇಂತ ಪರಮ ದಶೆಯನ್ನು ವಿವರಿಸುತಿದ್ದಾರೆ.
ನಿವಾಸಶಯ್ಯಾಸನಪಾದುಕಾಂಶುಕ
ಉಪದಾನವರ್ಷಾತಪವಾರಣಾದಿಭಿಃ |
ಶರೀರಭೇದೈಸ್ ತವ ಶೇಷತಾಮ್ ಗತೈರ್
ಯತೋಚಿತಮ್ ಶೇಷ ಇತೀರಿತೇ ಜನೈಃ ||

ಎಮ್ಪೆರುಮಾನ್ ತಾನು ವಾಸಿಸುವ ಅರಮನೆಯಾಗಿ, ಮಲಗಿವ ಹಾಸಿಗೆಯಾಗಿ, ಆಸೀನವಾಗಿರುವ ಸಿಂಹಾಸನವಾಗಿ, ಧರಿಸುವ ಪಾದರಕ್ಷೆಗಳಾಗಿ, ( ಧರಿಸುವ ) ವಸ್ತ್ರಗಳಾಗಿ, ( ಆಲಂಗಿಸುವ ) ದಿಂಬಾಗಿ, ಬಿಸಿಲು ಮಳೆಗಳಿಂದ ರಕ್ಷಿಸುವ ಛತ್ರಾದಿಗಳಾಗಿರುವುದರಿಂದ ಎಲ್ಲರಿಂದಲು ಶೇಷನೆಂದು ವಿಖ್ಯಾತನಾದ ತಿರುವನಂತಾೞ್ವಾನಿನ ಮೇಲೆ ಶಯನಿಸುತಿದ್ದಾನೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-31-to-40-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ఆర్తి ప్రబంధం – 34

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

ఆర్తి ప్రబంధం

<< ఆర్తి ప్రబంధం – 33

paramapadhanathan

పరిచయము

ఈ పాశురముకు అవతారిక రూపంగా మామునులు మానసికంగా శ్రీరామానుజులకు ప్రశ్న అడుగుతున్నారు. శ్రీరామానుజులు  సమాధానం చెప్పడానికి ప్రయత్నిస్తున్నారు ఈ పాశురములో. ప్రశ్న ఈ విధంగా ఉంది. “హే! మాముని !!! నేను ఎంతో దయగల వాడినని అనుకుందాం. కానీ,  నీకు ఉన్న అడ్డంకులు అతి బలమైనవి, అవి అత్యున్నత వ్యక్తి యొక్క దయను కూడా దూరంగా తోసేసే శక్తి ఉన్నవి. కావున, ఇక ఈ విషయంలో నేనేమి చేయగలను?” అని శ్రీ రామానుజులు మామునులను అడుగుతున్నారు.  “సర్వ పాపేభ్యో మొక్షయిష్యామి మాసుచః” (నేను నీ పాపాల నుండి నిన్ను విముక్తుడిని చేస్తాను, చింతించకు)”, అని స్వయంగా శ్రీరంగ పెరియ పెరుమాళ్ శ్రీ కృష్ణ పరమాత్మ రూపంలో ఉపదేశించిన వచనములు ఇవి కదా. అంతటి పెరియ పెరుమాళ్ కూడా మీ మాటకి కట్టుబడి ఉండి నీవు చెప్పినదే చేస్తారని విన్నాను. అందువల్ల, నా స్వామీ! శ్రీ రామానుజ !!! నీ పాద పద్మాలు తప్పా వేరే గతి లేని నన్ను విముక్తుడిని చేయుము. నా కర్మ ప్రభావాము నాకు అంటకుండా చేసి దయచేసి నన్ను బంధముక్తుడిని కావించి నాకు మోక్షాన్ని ప్రసాదించండి” అని మామునులు సమాధానమిస్తున్నారు.

పాశురము 34

మున్నై వినై పినై వినై ఆరత్తం ఎన్నుం
మూన్ఱు వగైయాన వినై త్తొగై అనైత్తుం యానే
ఎన్నై అడైందోర్ తమక్కు క్కళిప్పన్ ఎన్నుం అరంగర్
ఎదిరాశా! నీ ఇట్ట వళక్కన్ఱో శొల్లాయ్
ఉన్నై అల్లదఱియాద యాన్ ఇంద ఉడమ్బోడు
ఉళన్ఱు వినై ప్పయన్ పుశిక్క వేండువదొన్ఱుండో
ఎన్నుడైయ ఇరువినైయై ఇఱైప్పొళుదిల్ మాఱ్ఱి
ఏరారుం వైగుందత్తేఱ్ఱి విడాయ్ నీయే

ప్రతి పద్ధార్ధములు

అరంగర్ – పెరియ పెరుమాళ్
ఎన్నుం – చెప్పిన వాడు
అడైందోర్ తమక్కు – చేరే వాళ్ళ పట్ల
ఎన్నై –  వాత్సల్యం మొదలైన పవిత్ర గుణాలతో ఉన్న నేను.
యానే – సర్వశక్తిమంతుడు, సర్వజ్ఞుడు, సర్వవ్యాపకుడనైన నేను,
క్కళిప్పన్ – వినాశనం
అనైత్తుం – అవన్నీ
వినై త్తొగై – కర్మలు
మూన్ఱు వగైయాన – అవి మూడు రకాలు
ఎన్నుం – సమూహములు
మున్నై వినై – పూర్వాగం (గతంలో చేసిన పాపాలు)
పినై వినై – ఉత్తరాగం (భవిష్యత్తులోని పాపాలు)
ఆరత్తం – ప్రారబ్ద కర్మ
ఎదిరాశా –ఓ! యతులకు రాజా!!!
ని ఇట్ట వళక్కన్ఱో? – అలాంటి అరంగర్ (పెరియ పెరుమాళ్) కూడా నీకు కట్టుబడి ఉంటాడు.
శొల్లాయ్ – దయచేసి దాని గురించి చెప్పండి. దయచేసి ఇది వాస్తవమని చెప్పండి.
యాన్ – నేను
అఱియాద – తెలియదు
ఉన్నై అల్లదు –  మీరు తప్పా మరెవరైనా (రక్షించువాడిగా)
వినై ప్పయన్ పుశిక్క వేండువదొన్ఱుండో? – నేను ఆర్జించిన కర్మలన్నింటి ఫలితాన్ని అనుభవించాలా?
ఇంద ఉడమ్బోడు – ఈ శరీరములో
ఉళన్ఱు – ఈ ప్రయాణాన్ని ఎప్పటికీ కొనసాగిస్తూనే ఉండాలా?
నీయే– మీరు మాత్రమే (మీరు చేయగలవు)
ఇఱైప్పొళుదిల్ – కను రెప్పపాటులో
మాఱ్ఱి – అణువు మాత్రము కూడా ఆణవాలు లేకుండా
ఎన్నుడైయ – నా
ఇరువినైయై –  బలమైన కర్మలు
యేఱ్ఱి విడాయ్ – (అలా చేసి), దయచేసి నేను అధీష్థించేలా చేయి
ఏరారుం –  అందమైన
వైగుందత్తు – పరమపదం

సరళ అనువాదము:

తాను జన్మ జన్మలుగా ఆర్జించిన అనేకానేక పాపాలను తొలగించి మోక్షాన్ని అనుగ్రహించ సామర్థ్యము గలిగినవారు కేవలం తమరు మాత్రమేనని శ్రీ రామానుజులకు మణవాల మామునులు విన్నపించుకుంటున్నారు. సర్వాధికారి పైగా శక్తివంతుడైన పెరియ పెరుమాళ్ కూడా తన అధీనుడై ఉన్న శ్రీ రామానుజుల పాద పద్మాలు తప్పా వేరే ఆశ్రయం తనకు లేదని మణవాల మామునులు ఇక్కడ పునరుద్ఘటిస్తున్నారు.

వివరణ:

పెరియ పెరుమాళ్ యొక్క వాక్కులను మణవాల మామునులు ఇక్కడ పునఃప్రకటిస్తున్నారు. “పూర్వాగముత్తరాగారంచ సమారబ్ధమకంతతా” అనే వాఖ్యములో – “పూర్వాగం”, “ఉత్తరాగం” మరియు “ప్రారబ్దం” అనే మూడు రకాల కర్మలు ఉన్నాయని చెప్పబడింది.  వాటిని త్యజించి, నన్ను మాత్రమే ఆశ్రయంగా స్వీకరించి నా దగ్గరకు వచ్చేవారికి, సర్వశక్తిమంతుడు సర్వజ్ఞుడిని వాత్సల్యం మొదలైనవి  శుభ లక్షణాలతో నిండి ఉన్న నేను వారి కర్మలన్నింటినీ ఎటువంటి జాడ లేకుండా నాశనం చేస్తాను” అని వివరించబడింది.  మణవాల మామునులు శ్రీ రామానుజులను “హే యతిరాజా !!! యతుల రాజా !!!! అని సంభోదిస్తూ, “వస్యస్సతా భవతితే” అన్న వాఖ్యములో వివరించినాట్లుగా  ఇంత గొప్ప పెరియ పెరుమాళ్ కూడా నీ మాటకి కట్టుబడి ఉంటాడని, నీవు చెప్పినట్లు వారు చేస్తారన్నది నిజం కాదా? నీ మాటలు నిజమని నోరువిప్పి నాకు చెప్పరా? ప్రేమతో పెరియ పెరుమాళ్ని కూడా నియంత్రించగలిగే శ్రీ రామానుజా మీరు తప్పా నేను వేరే ఆశ్రయాన్ని ఎరుగను. నేను ఈ శరీరానుబంధముతో, ఒక శరీరంలో తరువాత మరొక శరీరానికి ప్రయాణం చేస్తూనే వస్తున్నాను. ఈ ప్రయాణాన్ని కొనసాగిస్తూ, ఈ శరీర సంబంధముతో కలిగే కర్మప్రభావాలను నేను అనుభవిస్తూనే ఉండాలా? ఏది ఏమయినప్పటికీ, అనాది కాలంగా అనేకానేక కర్మలను ఆర్జించాను. “కడివార్ తీయ వినైగళ్ నోడియారుం అళవైకణ్ (తిరువాయ్మొళి 1.6.10) ”లో వివరించినట్లుగా, ఓ శ్రీ రామానుజా! నీవు మాత్రమే ఈ కర్మలన్నింటినీ అణువు మాత్రం కూడా లేకుండా నశింపజేయగల సామర్థ్యం కలిగిన వాడవు. ఆ తరువాత నేను అందమైన పరమపదానికి అధిరోహించేలా చేయగలిగే వాడినవి కూడా నీవే”.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2017/01/arththi-prabandham-34/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ఆర్తి ప్రబంధం – 33

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

ఆర్తి ప్రబంధం

<< ఆర్తి ప్రబంధం – 32

ramanuja-showing-paramapadham

పాశురము 33

ఇన్నం ఎత్తనై కాలం ఇంద ఉడమ్బుడన్ యాన్ ఇరుప్పన్
ఇన్న పొళుదు ఉడుమ్బు విడుం ఇన్నబడి అదుదాన్
ఇన్న విడత్తే అదువుం అన్నుం ఇవై ఎల్లాం
ఎదిరాశా! నీ అఱిది యాన్ ఇవై ఒన్ఱఱియేన్
ఎన్నై ఇని ఇవ్వుడమ్బై విడువిత్తు ఉన్ అరుళాల్
ఏరారుం వైగుందత్తేఱ్ఱ నినైవుండేల్
పిన్నై విరైయామాల్ మఱందిరుక్కిఱదెన్ పేశాయ్
పేదైమై తీర్ అందు ఎన్నై అడిమై కోండ పెరుమానే !

ప్రతి పద్ధార్ధములు

ఎత్తనై కాలం – ఎంత కాలం
ఇన్నం – ఇప్పడి నుండి
యాన్ ఇరుప్పన్ – నేను ఎటువంటి సంబంధం లేకుండా ఉంటానో
ఇంద ఉడుమ్బన్ – ఈ దూషితమైన శరీరములో?
ఎదిరాశా! – ఎంబెరుమానారే !!!
నీ అఱిది – నీకు తెలుసా
ఇన్న పొళుదు ఉడుమ్బు విడుం  – ఎప్పుడు ఏ సమయంలో శరీరము పడిపోతుందో
ఇన్నబడి అదుదాన్ – ఏ రీతిలో మరియు
ఇన్న విడత్తే అదువుం –  ఏ చోట
ఎన్నుం ఇవై ఎల్లాం – (ఈ విషయాలన్నీ) ఇవన్నీ ఖచ్చితంగా నీకు తెలుసు.
యాన్ – అజ్ఞానినైన నేను
ఇవై ఒన్ఱఱియేన్ –  అణువు మాత్రము కూడా తెలియదు.
పేదైమై తీర్ అందు – కాబట్టి, దయచేసి నా అజ్ఞానాన్ని తొలగించండి !!!
అడిమై కోండ పెరుమానే!!! – పాలించినవాడు
ఎన్నై –  ఈ శరీరముతో ఎటువంటి సంబంధం లేకుండా నివసిస్తున్న నేను
ఇని ఉన్ అరుళాల్ – ఇప్పడి నుండీ, నన్ననుగ్రహించు
ఇవ్వుడమ్బై విడువిత్తు – శరీరము వదిలివేయుట
వైగుందత్తేఱ్ఱ – పరమపదాన్ని అధిష్ఠించునపుడు
ఏరారుం – అద్భుతంగా అలంకరించబడి సకల సౌందర్యాలతోనిండిన ప్రదేశం.
నినైవుండేల్ – (ఎంబెరుమానారే!!!) నీకు అలా చేయాలనే కోరిక ఉంటే
పిన్నై – అప్పుడు
పేసాయ్ – దయచేసి చెప్పండి
మఱందిరుక్కిఱదెన్? – మీరు ఏమి ఆలోచిస్తున్నారు,  ఆలస్యం ఎందుకు?
విరైయామాల్ – నీవు త్వరగా ఎందుకు చేయడం లేదు?

సరళ అనువాదము:

ఈ పాశురములో,  తన ఆత్మని విముక్తి  పరచి పరమపదాన్ని అధిరోహించేలా చేయడంలో ఆలస్యానికి కారణం ఏమిటి అని మణవాల మామునులు ఎంబెరుమానార్లను ప్రశ్నిస్తున్నారు. ఎంబెరుమానార్ల తరపున కరుణకు కొరత లేదు, ఇటుపక్క ఎప్పుడైనా తన శరీరాన్ని విడిచిపెట్టడానికి సిద్ధంగా ఉన్నారు మణవాల మామునులు. కానీ ఇంకా అలా జరగనందుకు మణవాల మామునులకు జిజ్ఞాస  పెరిగిపోతున్నది. ఆ ఉత్సుకతను ఈ పాశురములో ప్రశ్న రూపంగా ప్రతిబింబింపజేశారు.

వివరణ:

మణవాల మామునులు “ఎంబెరుమానారే! నా స్వామి! ముందు నేను మీ సంబంధ జ్ఞానము  తెలియకుండా ఉంటిని. మీరు నాలో ఆ శూన్యతను తొలగించి, నా నిజ స్వరూపాన్ని గ్రహించేలా చేశావు. “వినైయేన్ ఉనక్కడిమైయఱక్కోండాయ్ (తిరువాయ్మొళి 4.9.6)” లో వివరించినట్టుగా నేను సేవకుడనని నేను గ్రహించేలా చేశావు. మీ పట్ల నా దాసత్వాన్ని గ్రహింపజేయడమే కాకుండా, దాని యొక్క ప్రాముఖ్యతను గ్రహించేలా కూడా చేశావు. ఓ నా స్వామి! నాదొక ప్రశ్న. ఈ కలుషితమైన శరీరంలో ఈ ఆత్మని ఇంకా ఎంత కాలం ఉంచాలనుకుంటున్నావు స్వామీ? సంబంధం లేని ఈ శరీరంలో ఇంకా ఎంత కాలం ఉండాలి? ఈ శరీరం ఎప్పుడు, ఎలా, ఎక్కడ పడిపోతుందో మీకు తెలుసు. మీకంతా తెలుసు. ఈ విషయములో అణువు మాత్రము కూడా జ్ఞానములేనివాడిని నేను”. 

“నా స్వామి! నేను (ఈ ఆత్మ) ఈ దేహముతో ఎటువంటి శరీరానుబంధం లేకుండా ఉన్నాను అని మణవాల మామునులు వివరిస్తున్నారు.  ఈ శరీరం నుండి ఈ ఆత్మను విముక్తి చేసి, ఆ ఆత్మను అందమైన పరమపదం అధిరోహించాలని నీవు కోరుకుంటే, అలా చేయడంలో ఎందుకు ఆలస్యం చేస్తున్నావు? “విణ్ణులగం తరువానాయ్ విరైగిన్ఱాన్ (తిరువాయ్మొళి 10.6.3)” లో చెప్పినట్లు మీరు ఎందుకు త్వరపడడంలేదు? దయచేసి ఈ ఆలస్యానికి కారణం నాకు తెలియజేయండి. మీ అనంతమైన దయ గురించి నాకెటువంటి సంశయం లేదు. నేను కూడా ముక్తి నిరోధకంగా లేను. మరి మిమ్ము ఏమి ఆడ్డుకుంటున్నది?”. చివరి పంక్తి విషయానికి వస్తే, “మఱంద ఇరుక్కిరదెన్? పేసాయ్” అని పఠిస్తారు. “అమర్ – న్దిరుక్కిరదెన్ పేసాయ్” అని కూడా పఠిస్తారు.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2017/01/arththi-prabandham-33/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ಸ್ತೋತ್ರ ರತ್ನ – ಸರಳ ವಿವರಣೆ ಶ್ಲೋಕ 21-30

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 11-20

ಶ್ಲೋಕ- 21 – ಆಳವಂದಾರ್ ಶರಣ್ಯನಾದ ಭಗವದ್ವೈಭವವನ್ನು ಧ್ಯಾನಿಸುತಿದ್ದಾರೆ. ಹೀಗಲ್ಲದೆ ಹಿಂದೆ ಪ್ರಾಪ್ಯ ಸ್ವರೂಪವನ್ನು ವಿವರಿಸಿದರು, ಇಲ್ಲಿ ಅದನ್ನು ಅರ್ಥಿಸುತ್ತಿರುವವನ ಸ್ವರೂಪ ವಿವರಿಸಲ್ಪಡುತ್ತಿದೆ, ಹೀಗಲ್ಲದೆ ಹಿಂದೆ ಭಗವದ್ ಸ್ವರೂಪವು ವಿವರಿಸಿದಮೇಲೆ, ಇಲ್ಲಿ ನಂತರ ವಿವರಿಸಲ್ಪಡುವ ಶರಣಾಗತಿಯ ಸ್ವರೂಪವನ್ನು ತೋರುತಿದ್ದಾರೆ ಎಂದು ವಿವಕ್ಷಿತ ವಾಗಿದೆ.
ನಮೋ ನಮೋ ವಾಙ್ಗ್ಮನಸಾತಿಭೂಮಯೇ
ನಮೋ ನಮೋ ವಾಙ್ಗ್ಮನಸೈಕಭೂಮಯೇ |
ನಮೋ ನಮೋऽನನ್ತಮಹಾವಿಭೂತಯೇ
ನಮೋ ನಮೋऽನನ್ತದಯೈಕಸಿನ್ದವೇ ||

(ಸ್ವಪ್ರಯತ್ನದಿಂದ ನಿನ್ನನ್ನು ತಿಳಿಯಲು ಪ್ರಯತ್ನಿಸುವವರ) ಮನಸ್ಸು ಹಾಗು ವಾಕ್ಕಿಗೆ ಅತೀತನಾದ ನಿನಗೆ ನಮಸ್ಕಾರಗಳು. (ನಿನ್ನ ಅನುಗ್ರಹದಿಂದ ನಿನ್ನನ್ನು ತಿಳಿದವರಿಗೆ) ವಾಕ್ ಹಾಗು ಮನಸ್ಸಿನಿಂದಲೆ ಅನಂತವಾದ ಮಹದೈಶ್ವರ್ಯಯುಕ್ತನಾದ ನಿನಗೆ ನಮಸ್ಕಾರಗಳು; ದಯೆಯ ಸಾಗರನಾದ ನಿನಗೆ ನಮಸ್ಕಾರಗಳು.


ಶ್ಲೋಕ- 22 – ಆಳವಂದಾರ್ ತಮ್ಮ ಅಧಿಕಾರವನ್ನು ಘೋಷಿಸಿ (ಹಿಂದಿನ ಶ್ಲೋಕದಲ್ಲಿ ಬಂದ) ಪ್ರಪತ್ತಿಯನ್ನು ಆಚರಿಸುತಿದ್ದಾರೆ. ಹಿಂದೆ ವಿವರಿಸಲ್ಪಟ್ಟ ಉಪೇಯಕ್ಕೆ ತಕ್ಕ ಉಪಯದ ಆಚರಣೆಯೆಂದೂ, ಈ ಶ್ಲೋಕವನ್ನು ವಿವರಿಸಬಹುದು.
ನ ದರ್ಮನಿಶ್ಠೋऽಸ್ಮಿ ನ ಚಾತ್ಮವೇದೀ
ನ ಭಕ್ತಿಮಾನ್ ತ್ವಚರಣಾರವಿಂದೇ |
ಆಕಿಂಚನ್ಯೋನ್ಯಗತಿ: ಶರಣ್ಯ!
ತ್ವತ್ಪಾದಮೂಲಮ್ ಶರಣಮ್ ಪ್ರಪದ್ಯೇ ||

ಶರಣ್ಯನಾದ ಭಗವಂತನೇ ಕರ್ಮಯೋಗದಲ್ಲಿ ನಾನು ಸ್ಥಿರನಲ್ಲ, ಆತ್ಮಜ್ಞಾನವು ನನ್ನಲ್ಲಿ ಇಲ್ಲ, ನಿನ್ನ ಚರಣಾರವಿಂದಗಳಲ್ಲಿ ಭಕ್ತಿಯೂ ಇಲ್ಲದವನಾದ ನಾನು, ಬೇರೋಂದು ಉಪಾಯವಿಲ್ಲದೆ ಹಾಗಲಿ ಬೇರೊಂದು ಶರಣವು(ಗತಿ) ಇಲ್ಲದೆ ನಿನ್ನ ಪಾದಪಂಕಜಗಳನ್ನೆ ಉಪಾಯವಾಗಿ ಸ್ವಿಕರಿಸುತ್ತೇನೆ.


ಶ್ಲೋಕ 23 – ಭಗವಾನ್ , “ನನ್ನ ವಿಷಯದಲ್ಲಿ ಯಾವ ಆನುಕೂಲ್ಯವಿಲ್ಲದಿದ್ದರು , ನಿಮ್ಮಲ್ಲಿ ಅರ್ಜಿತ ಆನುಕೂಲ್ಯವನ್ನು ಇಲ್ಲದಿದ್ದರು , ನಾನು ನಿಮ್ಮಲ್ಲಿ ಗುಣಗಳನ್ನು ತಂದು ಉಪೇಯವನ್ನೂ ನೀಡುವೆನು.” ಎಂದು ಹೇಳಿದರು. ಆಳವಂದಾರ್, “ನಾನು ಪೂರ್ಣವಾಗಿ ದೋಶಗಳಿಂದಲೆ ಭರಿತನಾಗಿದ್ದೇನೆ.
ನ ನಿನ್ದಿತಮ್ ಕರ್ಮ ತದಸ್ತಿ ಲೋಕೇ
ಸಹಸ್ರಶೋ ಯನ್ನ ಮಯಾ ವ್ಯದಾಯಿ |
ಸೋऽಹಮ್ ವಿಪಾಕಾವಸರೇ ಮುಕುನ್ದ!
ಕ್ರನ್ದಾಮಿ ಸಮ್ಪ್ರತ್ಯಗತಿಸ್ ತವಾಗ್ರೇ ||

ಮೋಕ್ಷವನ್ನು ಪ್ರಸಾದಿಸುವ ಭಗವಂತನೇ ! ಸಾವಿರಬಾರಿ ನಿನ್ನಿಂದ ಮಾಡದ ನಿಶಿದ್ಧ ಕರ್ಮಗಳು ಶಾಸ್ತ್ರಶಲ್ಲು ಇಲ್ಲ [(ಶಾಸ್ತ್ರವನ್ನು) ಲೋಕ(ಎಂದಿದ್ದು) ಲೋಕವನ್ನು ನಿರ್ವಹುಸುವುದರಿಂದ] , ಈಗ (ಆ ಕರ್ಮಗಳು) ವಿಪಾಕ( ಪಕ್ವ) ದಶೆಯಲ್ಲಿರುವಾಗ ಬೇರೋಂದು ಗತಿಯಿಲ್ಲದೆ ನಿಮ್ಮ ಮುಂದೆ ಅಳುತಿದ್ದೆನೆ.

ಶ್ಲೋಕ- 24 – ಆಳವಂದಾರ್ ,”ನಿನ್ನ ಕೃಪೆಯೇ ನನಗೆ ಶರಣು” ಎಂದು ಎಂಬೆರುಮಾನನ್ನು ಕುರಿತು ಕೂಗುತಿದ್ದಾರೆ. ಆಳವಂದಾರ್, “ನಿನ್ನನ್ನು ಹೊಂದುವುದು ನನಗೆ ಹೇಗೆ ಮಹಾಭಾಗ್ಯವೋ ಹಾಗೆಯೇ ನಿನ್ನ ಕೃಪೆಗು ನಾನು ಸೂಕ್ತ ಪಾತ್ರನು.
ನಿಮಜ್ಜತೋऽನನ್ತಭವಾರ್ಣವಾನ್ತಃ
ಚಿರಾಯ ಮೇ ಕೂಲಮಿವಾಶಿ ಲಬ್ದಃ |
ತ್ವಯಾಪಿ ಲಬ್ದಮ್ ಭವಗವನ್ನಿದಾನೀಮ್
ಅನುತ್ತಮಮ್ ಪಾತ್ರಮಿದಮ್ ದಯಾಯಾಃ ||

ಅನಂತನೆ! ( ದೇಶದಿಂದಾಗಲಿ ಕಾಲದಿಂದಾಗಲಿ ವಸ್ತುವಿಂದಾಗಲಿ ಪರಿಚ್ಛೆದ ರಹಿತನು) ದೀರ್ಘ ಕಾಲದಿಂದ ಸಂಸಾರಾರ್ಣವದಲ್ಲಿ ಸಮ್ಮಗ್ನನಾದ (ಚೆನ್ನಾಗಿ ಮುಳುಗಿದ) ನನಗೆ ತೀರವಾಗಿ ಬಂದಿದ್ದೀಯ. ಓ ಭಗವಾನ್! ನಿನ್ನ ಕೃಪೆಗೂ ಸೂಕ್ತ ಪಾತ್ರನಾಗಿದ್ದೇನೆ.

ಶ್ಲೋಕ- 25 – “ನನ್ನಲ್ಲಿ ನಿಮ್ಮ ಭಾರವೆಲ್ಲವೂ ಸಮರ್ಪಿಸಿದಮೇಲೆ ಶ್ರೀ ರಾಮಾಯಣದ ಸುಂದರ ಖಂಡದಲ್ಲಿ ‘ತತ್ ತಸ್ಯ ಸದೃಶಮ್ ಭವೇತ್’ (9.30 ತನ್ನ ಸ್ವರೂಪಕ್ಕೆ ಪ್ರಾಪ್ತವಾದದ್ದು- ತಾನೇ ಲಂಕೆಯನ್ನು ನಶಿಸಿ ನನ್ನನು ರಕ್ಷಿಸುವುದು – ಆದರಿಂದ ಅವನ ಆಗಮದವರೆಗು ಕಾಯುವೆನು)’ ಎಂದತೆ ಇರುವುದಲ್ಲದೆ ಈಗಲೇ ರಕ್ಷಿಸಲು ಏಕೆ ನಿರ್ಬಂದಿಸುತಿದ್ದೀರ”, ಎಂದು ಭಗವಾನ್ ಕೇಳಿದಾಗ. ಆಳವಂದಾರ್, “ನಾನು ನನ್ನ ಧುಃಖವನ್ನು ದೂರಮಾಡಲು ಹೇಳುತಿಲ್ಲ; ನಿನ್ನ ಭಕ್ತರು ಈ ಲೋಕದಲ್ಲಿ ಧುಃಖಿಸುವುದು ನಿನ್ನ ಮಹಿಮೆಗೇ ಕಳೆ.
ಅಭೂತಪೂರ್ವಮ್ ಮಮ ಭಾವಿ ಕಿಮ್ ವಾ
ಸರ್ವಮ್ ಸಹೇ ಮೇ ಸಹಜಮ್ ಹಿ ಧುಃಖಮ್ |
ಕಿನ್ತು ತ್ವದಗ್ರೇ ಶರಣಾಗತಾನಾಮ್
ಪರಾಭವೋ ನಾಥ! ನ ತೇ$ನುರೂಪ: ||

ಹೇ ನಾಥ! ಪೂರ್ವವುಂಟಾಗದ ಯಾವ ಹೋಸ ಧುಃಖವು ನನಗೆ ಸಂಭವಿಸದು; ಈ ಧುಃಖಗಳೆಲ್ಲವನ್ನು ಸಹಿಸುತಿದ್ದೇನೆ, ಇವು(ಧುಃಖಗಳು) ನನಗೆ ಸಹಜವಾಗಿ (ನನ್ನೋಂದಿಗೇ ಹುಟ್ಟಿದಂತಹದು) ಬಂದಂತಹದು, ಆದರೆ ನಿನ್ನ ಮುಂದೆ ನಿನ್ನ ಶರಣಾಗತರ ತಿರಸ್ಕಾರವು ನಿನಗೆ ಅನುರೂಪವಾದದ್ದಲ್ಲ

ಶ್ಲೋಕ- 26 – ಆಳವಂದಾರ್, “ನಿನ್ನ ಮಹಿಮೆಗೆ ಕಳಂಕವೆಂದು ನನ್ನನು ನಿರಾಕರಿಸಿದರು ನಿನ್ನನ್ನು ನಾನು ಬಿಡನು.” ಎಂದು ಹಾಗು ತಮ್ಮ ಅಗತಿತ್ವದಿಂದ ಬಂದಿರುವ ಮಹಾ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ನಿರಾಸಕಸ್ಯಾಪಿ ನ ತಾವದುತ್ಸಹೇ
ಮಹೇಶ! ಹಾತುಮ್ ತವ ಪಾದಪಂಕಜಂ
|
ರುಶಾ ನಿರಸ್ತೋऽಪಿ ಶಿಸುಃ ಸ್ಥನಂಧಯೋ
ನ ಜಾತು ಮಾತುಶ್ಚರಣೌ ಜಿಹಾಸತಿ ||

ಓ ಸರ್ವೇಶ್ವರನೆ! ನನು (ನಿನ್ನಿಂದ) ತಳ್ಳಲ್ಪಟ್ಟರು, ನಿನ್ನ ಪದಾರವಿಂದಗಳನ್ನು ಎಂದೂ ಬಿಡನು ; ಸ್ಥನ್ಯಪಾನ ಮಾಡುವ ಮಗುವು (ತನ್ನ ತಾಯಿಯಿಂದ) ಕೋಪದಿಂದ ತಳ್ಳಲ್ಪಟ್ಟರು, ಅದು ತನ್ನ ತಾಯಿಯ ಪಾದಗಳನ್ನು ಎಂದೂ ಬಿಡದು.

ಶ್ಲೋಕ- 27 – ಆಳವಂದಾರ್, “ನಿನ್ನನ್ನು ಬಿಡದೆ ಇರಲು ಕಾರಣವು ಕೇವಲ ಅನನ್ಯಗಿತಿತ್ವವೇ ? ನಿನ್ನ ಭೋಗ್ಯತೆಯಲ್ಲಿ ಮುಳುಗಿರುವ ನನ್ನ ಮನಸ್ಸು ಬೇರೊಂದನ್ನು ಅರ್ಥಿಸದು.
ತವಾಮೃತಸ್ಯನ್ದಿನಿ ಪಾದಪಙ್ಕಜೇ
ನಿವೇಶಿತಾತ್ಮಾ ಕಥಮನ್ಯದಿಚ್ಛತಿ? |
ಸ್ಥಿತ್ತೇऽರವಿನ್ದೇ ಮಕರಂದನಿರ್ಭರೇ
ಮದುವ್ರತೋ ನೇಕ್ಷುರಕಂ ಹಿ ವೀಕ್ಶತೇ ||

ಅಮ್ರೃತವನ್ನು ಸ್ರವಿಸುತ್ತಿರುವ ನಿನ್ನ ಪಾದಾರವಿಂದಗಳಲ್ಲಿ ಸಮರ್ಪಿಸಲ್ಪಟ್ಟ ನನ್ನ ಮನಸ್ಸು ಹೇಗೆ ಇತರ ವಿಷಯಗಳನ್ನು ಇಚ್ಛಿಸುವುದು ? ಮಧುವಿನಿಂದ ಭರಿತವಾದ ಕೆಂದಾವರೆ ಇದಲ್ಲಿ ಒಂದು ಜೇನು ಕೋಳವಳಿಕೆಯನ್ನು (ಒಂದು ಕ್ಷುದ್ರ ಪುಷ್ಪವು) ನೋಡುವುದೋ.

ಶ್ಲೋಕ- 28 – ಆಳವಂದಾರ್, “ನನಗೆ ಉಪಕರಿಸಲು ಅಂಜಲಿಯೋಂದೆ ಪರ್ಯಾಪ್ತವಲ್ಲವೆ ?”, ಎಂದು ಕೇಳುತಿದ್ದಾರೆ.
ತ್ವದಂಗ್ರಿಂಮುದ್ದಿಶ್ಯ ಕದಾऽಪಿ ಕೇನಚಿತ್
ಯಥಾ ತಥಾ ವಾऽಪಿ ಸಕೃತ್ಕೃತೋऽಞ್ಜಲಿ |
ತದೈವ ಮುಷ್ಣಾತ್ಯಶುಭಾನ್ಯಶೇಷತಃ
ಶುಭಾನಿ ಪುಷ್ಣಾತಿ ನ ಜಾತು ಹೀಯತೇ ||

ಯಾರಿಂದಾದರು ಯಾವಾದಾದದರೋಂದು ಕಾಲದಲ್ಲಿ ಯಾವುದಾದರೋಂದು ರೀತಿಯಲ್ಲಿ ಮಾಡಿದ ಅಂಜಲಿ ಒಡನೆ ಪಾಪಗಳನ್ನು ಅಶೇಷವಾಗಿ ದೂರಮಾಡಿ, ಶುಭಗಳನ್ನು ವೃದ್ಧಿಸುತ್ತದೆ (ಇಂತಹ ಮಂಗಳವು) ಎಂದು ಕ್ಷಯಿಸುವುದು.

ಶ್ಲೋಕ-29 – ಈ ಶ್ಲೋಕದಲ್ಲಿ ಮಾನಸ ಪ್ರಪತ್ತಿಯನ್ನು ತೋರುತ್ತದೆ ,ಅಥವಾ ಶ್ಲೋಕ 28 “ತ್ವದಂಗ್ರಿಂಮುದ್ದಿಶ್ಯ”,ದಲ್ಲಿ ಹಾಗು ಶ್ಲೋಕ 29 “ಉದೀರ್ಣ”ದಲ್ಲಿ ಮಾಡಿದ ಶರಣಾಗತಿ ಜನಿತ ಪರಭಕ್ತಿಯನ್ನು ತೊರುತ್ತದೆ ಎಂದೂ ಹೇಳಬಹುದು.
ಉದೀರ್ಣಸಂಸಾರದವಾಶುಶುಕ್ಷಣಿಮ್
ಕ್ಷಣೇನ ನಿರ್ವಾಪ್ಯ ಪರಾಮ್ ಚ ನಿರ್ವೃತಿಮ್ |
ಪ್ರಯಚ್ಛತಿ ತ್ವಚಾರಣಾರುಣಂಬುಜ
ದ್ವಯಾನುರಾಗಾಮೃತಸಿನ್ದುಶೀಕರಃ ||

ನಿನ್ನ ಕೆಂಪಾದ ದಿವ್ಯ ಪಾದದ್ವದಲ್ಲಿನ ಭಕ್ತಿಯ ಅಮೃತಸಾಗರದಿಂದ ಒಂದು ಹನಿಯು ಪ್ರಜ್ವಲಿಸುತ್ತಿರುವ
ಸಂಸಾರವೆಂಬ ಕಾಡ್ಗಿಚ್ಚನ್ನು ಒಂದು ಕ್ಷಣದಲ್ಲಿ ಆರಿಸಿ ಶ್ರೇಷ್ಠವಾದ ಆನಂದವನ್ನು ಕೋಡುತ್ತದೆ.

ಶ್ಲೋಕ-30 ಆಳವಂದಾರ್ ಯಾವುದೇ ವಿಳಂಭವಿಲ್ಲದೆ ಫಲವನ್ನು ಪ್ರಸಾದಿಸುವ ಸಿದ್ಧೋಪಾಯವನ್ನು( ಭಗವಂತನನ್ನು) ಸ್ವೀಕರಿಸಿ, ಫಲಪ್ರಾಪ್ತಿಗೆ ಕಾಯಲಾಗದೆ “ಕೂವಿಕ್ ಕೊಳ್ಳುಮ್ ಕಾಲಮ್ ಇನ್ನಮ್ ಕುಱುಗಾದೋ”( ತಿರುವಾಯ್ಮೊೞಿ 6.9.9- ನಿನ್ನನ್ನು ಪ್ರಾಪಿಸುವ ದಿನವು ಇನ್ನು ವೇಗವಾಗದೋ)ಯಲ್ಲಿ ಹೇಳಿದಂತೆ ಹೇಳುತಿದ್ದಾರೆ. ಹೀಗಲ್ಲದೆ ಇನ್ನೋಂದು ನಿರ್ವಾಹವು, “ಕನೈಕೞಲ್ ಕಾಣ್ಬದೆನ್ಱುಕೊಲ್ ಕಣ್ಗಳ್(ತಿರುವಾಯ್ಮೊೞಿ 6.3.10- ಎಂಪೆರುಮಾನಿನ ಪಾದಗಳನ್ನು ನನ್ನ ಕಣ್ಗಳು ಎಂದು ಕಾನುವುದು ?)” ಹಾಗು ″ಕಾಣಕ್ ಕರುದುಮ್ ಎನ್ ಕಣ್ಣೇ(ತಿರುವಾಇಮೊೞಿ 9.5.1 ನನ್ನ ಕಣ್ಗಳು ನೋಡಲು ಇಚ್ಛಿಸುತ್ತವೆ)” ಯಂತೆ ಪ್ರಪತ್ತಿಯೀಂದ ಲಭಿಸಿದ ಪರ ಭಕ್ತಿಯಕಾರಣದಿಂದ ಹೇಳುತಿದ್ದಾರೆ.
ವಿಲಾಸವಿಕ್ರಾಂತಪರಾವರಾಲಯಮ್
ನಮಸ್ಯದಾರ್ತಿಕ್ಷಪಣೇ ಕೃತಕ್ಷಣಮ್ |
ಧನಮ್ ಮದೀಯಮ್ ತವ ಪಾದಪಂಕಜಂ
ಕದಾ ನು ಸಾಕ್ಷಾತ್ಕರವಾಣಿ ಚಕ್ಷುಷಾ ||

ಪರರಾದ ಉತ್ಕೃಷ್ಟರಾದ ದೇವತೆಗಳ ಹಾಗು ಮಾನುಷ ಲೋಕಗಳನ್ನು ಅನಾಯಸವಾಗಿ ಕ್ರೀಡೆಯಂತೆ ಅಳೆದಂತಹ, ಹಾಗು ಅದನ್ನು ಆರಾದಿಸಿದವರ ಧುಃಖಗಳನ್ನು ನಶಿಸುವಂತಹ, ಹಾಗು ನನಗೆ ಧನದಂತಿರುವ ನಿನ್ನ ಪಾದಪಂಕಜಗಳನ್ನು ಎಂದು ಕಾಣುವೆ?

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-11-to-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಸ್ತೋತ್ರ ರತ್ನ – ಸರಳ ವಿವರಣೆ – ಶ್ಲೋಕ 11 – 20

Published by:

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

ಸ್ತೋತ್ರ ರತ್ನ

<< ಶ್ಲೋಕ 1-10

ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ.
ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂ
ನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ |
ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿ
ಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ ||

ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ ಐಶ್ವರ್ಯವನ್ನು (ನಿಯಮನ ಸಾಮರ್ಥ್ಯವನ್ನು) ಯಾವ ವೈದಿಕನು [ವೈದಿಕ (ಧರ್ಮವನ್ನು) ಆಚರಿಸುವವನು] ಸಹಿಸನು ?

ಶ್ಲೋಕ-12 – ಈ ಶ್ಲೋಕದಲ್ಲಿ ಆಳವಂದಾರ್ ಯಾವ ವ್ಯಕ್ತಿಯನ್ನು ಅನ್ವಯಿಸುತ್ತಿದೆಯೆಂದು ಸಂಶಯವೇಳುವ ಸರ್ವನಾಮಗಳೊ ವಿಶೇಷನಾಮಗಳಲ್ಲದೆ ಸ್ವತಃಪೂರ್ಣವಾಗಿರುವ ಹಾಗು ಸ್ಪಷ್ಟವಾಗಿ ಭಗವದ್ಪರತ್ವವನ್ನು ತೋರುವ ನಾಮಗಳನ್ನು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ.
ಕಶ್ಶ್ರೀಃ ಶ್ರಿಯಃ ಪರಮ್ಸತ್ವಸಮಾಶ್ರಯಃ ಕಃ
ಕಃ ಪುಣ್ಡರೀಕನಯನಃ ಪುರುಷೋತ್ತಮಃ ಕಃ |
ಕಸ್ಯಾಯುತಾಯುತಶತೈಕಕಲಾಂಶಕಾಂಶೇ ವಿಶ್ವಮ್
ವಿಚಿತ್ರಚಿದಚಿತ್ಪ್ರವಿಭಾಗವೃತ್ತಮ್ ||
‘ಶ್ರೀ’ಯಿಗೂ(ಶ್ರೀಮಹಾಲಕ್ಷ್ಮಿಗೂ) ಶ್ರೀಯಾದವನು ಯಾರು ? ತಾವರೆಯಂತೆ ಕಣ್ಗಳನ್ನು ಹೊಂದಿರುವವನು ಯಾರು? ಪುರುಷೊತ್ತಮನು ಯಾರು? ಯಾರ ಸಂಕಲ್ಪದ ಹತ್ತು ಸಾವಿರ ಭಾಗಗಳಲ್ಲಿ ಒಂದನ್ನು ಪುನಃ ಹತ್ತು ಸಾವಿರವನ್ನಾಗಿ ಮಾಡಿ ಆ ಒಂದು ಭಾಗವನ್ನು ನೂರರ ಭಾಗವನ್ನಾಗಿ ಮಾಡಿ ಆ ಅಲ್ಪಭಾಗದ ಅತ್ಯಲ್ಪಭಾಗದಿಂದ ಧರಿಸುವುದು.

ಶ್ಲೋಕ 13 – ಆಳವಂದಾರ್ ಇತಿಹಾಸ ಪುರಾಣಗಳಿಂದ ವ್ಯಕ್ತವಾಗಿರುವ ಬ್ರಹ್ಮರುದ್ರಾದಿಗಳ ಕ್ಷೇತ್ರಜ್ಞತ್ವವನ್ನು ಭಗವದ್ಪರತ್ವವನ್ನು ವಿವರಿಸುತಿದ್ದಾರೆ.
ವೇದಾಪಹಾರಗುರುಪಾತಕ ದೈತ್ಯಪೀಡಾದಿ
ಆಪತ್ ವಿಮೋಚನಮಹಿಷ್ಠಪಲಪ್ರದಾನೈಃ |
ಕೋನ್ಯಃ ಪ್ರಜಾಪಶುಪತೀ ಪರಿಪಾತಿ ಕಸ್ಯ
ಪಾದೋದಕೇನ ಶಿವಸ್ ಸ್ವಶಿರೋದೃತೇನ ||
ಪ್ರಜಾಪತಿಯೆಂದು ಅರಿಯಲ್ಪಡುವ ಬ್ರಹ್ಮನನ್ನು ,ಪಶುಪತಿಯೆಂದು ಅರಿಯಲ್ಪಡುವ ರುದ್ರನನ್ನು, ವೇದದ ಅಪಹಾರ (ಬ್ರಹ್ಮಾ ವೇದವನ್ನು ಕಳೆದುಕೊಳ್ಳುವುದು), ತಂದೆಯ ತಲೆಯನ್ನೆ ಕೀಳುವುದರಿಂದ ಬಂದ ಪಾಪ(ರುದ್ರನು ಬ್ರಹ್ಮನ ಶಿರಸ್ಸನ್ನು ಕೀಳುವುದು) ,ಅಸುರರಿಂದ ಬಂದ ದುಃಖದಂತಃ( ಇಂದ್ರಾದಿ ದೇವತೆಗಳಿಗೆ) ಅಪಾಯಗಳನ್ನು ನಿವರಿಸಿದವನು (ನೀನೇ ಅಲ್ಲವೆ) ಯಾರು. ಯಾರ ಶ್ರೀಪಾದತೀರ್ಥವನ್ನು ಧರಿಸುವುದರಿಂದ ಶಿವನು ಶುದ್ಧನಾದನು ?

ಶ್ಲೋಕಮ್ 14 – ಭಗವದ್ಪರತ್ವವನ್ನು (ವಿವರಿಸುವ ಈ ಐದು ಶ್ಲೋಕಗಳ ರೂಪದಲ್ಲಿರುವ) ವಿವರಣೆಯನ್ನು ನಿಗಮಿಸಿ ಆಳವಂದಾರ್ ಪ್ರಮಾಣಾಭಿಮತವಾಗಿರುವ (ಶಾಸ್ತ್ರಕ್ಕೆ ಅನುಗುಣವಾಗಿರುವ) ತರ್ಕ ಹಾಗು ಅನುಮಾನದಿಂದ ಭಗವದ್ಪರತ್ವವನ್ನು ವಿವರಿಸುತಿದ್ದಾರೆ.

ಕಸ್ಯೋದರೇ ಹರವಿರಿಞ್ಚಿಮುಖಃ ಪ್ರಪಞ್ಚಃ
ಕೋ ರಕ್ಷತೀಮಮಜನಿಷ್ಟ ಕಸ್ಯ ನಾಭೇಃ |
ಕ್ರಾನ್ತ್ವಾ ನಿಗೀರ್ಯ ಪುನರುದ್ಗಿರತಿ ತ್ವದನ್ಯಃ
ಕಃ ಕೇನ ವೈಷ ಪರವಾನಿತಿ ಶಕ್ಯಶಙ್ಕಃ ||
ಯಾರ ಉದರದಲ್ಲಿ(ಹೋಟ್ಟೆಯಲ್ಲಿ) ಶಿವ ಬ್ರಹ್ಮಾದಿಗಳು ಇದ್ದರೋ? ಯಾರು ಈ ಜಗತ್ತನ್ನು ರಕ್ಷಿಸುತ್ತಿರುವನೋ? ಯಾರ ನಾಭಿಯಿಂದ (ಈ ) ಲೋಕದ ಶೃಷ್ಟಿಯಾಯಿತೋ ? ನೀನಲ್ಲದೆ ಬೇರೆಯವರಾರು ಈ ವಿಶ್ವವನ್ನು ವ್ಯಾಪಿಸಿ,  ನುಂಗಿ ಉಗುಳಿದನು ? ನಿನ್ನ ಈ ಲೋಕಸ್ವಾಮಿತ್ವದಲ್ಲಿ ಶಂಕೆಯೂ ಸಾಧವೆ ?

ಶ್ಲೋಕ-15 – ಈ ಶ್ಲೋಕದಲ್ಲಿ ಆಸುರೀಮ್ ಯೋನಿಮಾಪನ್ನಾಃ ಎಂದು ಹೇಳಿದಂತೆ, ಸುದೃಡವಾಗಿ ಶಾಸ್ತ್ರ ಪ್ರಮಾಣಸಿಧ್ದವಾದರು, “ಅಯ್ಯೋ! ಈ ಆಸುರ ಸ್ವಭಾವವನ್ನುಳ್ಳವರು ಅವನನ್ನು ಕಳೆದುಕೊಳ್ಳುತ್ತಿದ್ದಾರೆ !” ಎಂದು ಆಳವಾಂದಾರ್ ಇಂತವರ ನಷ್ಠವನ್ನು ಕಂಡು ದುಃಖಿಸಿಸುತಿದರೆ. ಅಥವ ಇನ್ನಿಂದು ನಿರ್ವಾಹ- ಇಂತಃ ವಿಲಕ್ಷಣನ ಭಗವಂತನು “ಯಾರುಮೋರ್ ನಿಲೈಮೈಯ ಎನ ಅಱಿವರಿಯ ಎಮ್ಪೆರುಮಾನ್” [ತಿರುವಾಯ್ಮೋೞಿ 1.3.4: (ಮಾತ್ಸರ್ಯಯುಕ್ತರಿಂದ) ಇಂತಃ ಗುಣಾನ್ವಿತನೆಂದು ಅರಿಯಲಾಗದಂತವನು, ಎಮ್ಪೆರುಮಾನ್] ಎಂದು ಹೇಳಿದಂತೆ ಇಂತಃ ವಿಲಕ್ಷಣನಾನ ಭಗವಂತನು ಆಸುರ ಪ್ರಕೃತಿಗಳಿಂದ ಕಾಣದಿರಲಿ
ತ್ವಾಮ್ ಶೀಲರೂಪಚರಿತೈಃ ಪರಮಪ್ರಕೃಷ್ಟ
ಸತ್ವೇನ ಸಾತ್ವಿಕತಯಾ ಪ್ರಬಲೈಶ್ಚ ಶಾಸ್ತ್ರೈಃ |
ಪ್ರಖ್ಯಾತದೈವಪರಮಾರ್ಥವಿದಾಮ್ ಮತೈಶ್ಚ
ನೈವಾಸುರಪ್ರಕೃತಯಃ ಪ್ರಭವನ್ತಿ ಬೋದ್ಧುಮ್ ||
(ಅಯ್ಯೋ !) (ಸರ್ವ ಶ್ರೇಷ್ಟನೇ!) ನಿನ್ನನ್ನು ಆಸುರ ಸ್ವಭಾವವುಳ್ಳವರು ಈ ರೀತಿಯಲ್ಲಿ

  • ನಿನ್ನ ಶೀಲ ಗುಣವನ್ನು(ಸೌಶೀಲ್ಯ ಗುಣ) ,(ವೇದಗಳಿಂದ ಶ್ಲಾಘಿಸಲ್ಪಟ್ಟ ನಿನ್ನ) ರೂಪವನ್ನು ಹಾಗು ದಿವ್ಯಚೇಷ್ಟಿತಗಳಿಂದ,
  • ನಿನ್ನ ಸತ್ವಮಯವಾದ ಲೋಕ/ ಐಶ್ವರ್ಯಗಳಿಂದ,
  • ಸುದೃಡವಾದ ಸಾತ್ವಿಕ ಶಾಸ್ತ್ರಗಳಿಂದ,
  • ನಿನ್ನನ್ನು ತತ್ತ್ವತಃ (ಯಥಾರ್ಥವಾಗಿ) ತಿಳಿದವರ ಅಭಿಪ್ರಾಯಗಳಿಂದಲೂ
  • ತಿಳಿಯಲ್ಪಡುವನೆಂದು ಅರಿಯಲು ಸಮರ್ಥರಲ್ಲ.

ಶ್ಲೋಕ-16 – ಆಳವಂದಾರ್ ಎಮ್ಪೆರುಮಾನಿನ ಸೌಲಭ್ಯವನ್ನು ಕಂಡು ಅವನನ್ನು ಹೊಂದುವ ಮಹಾನರಬಗ್ಗೆ ಚಿಂತಿಸಿ (ಅವರು ಎಮ್ಪೆರುಮಾನನ್ನು ಸೇರುವುದನ್ನೇ) ಅದನ್ನೆ ತಮ್ಮ ಪ್ರಯೋಜನವೆಂದು ಭಾವಿಸುತ್ತಿದ್ದಾರೆ.
ಉಲ್ಲಙ್ಗಿತ ತ್ರಿವಿದ ಸೀಮಸಮಾದಿಶಾಯಿ
ಸಮ್ಭಾವನಮ್ ತವ ಪರಿಬ್ರಡಿಮಸ್ವಭಾವಮ್ |
ಮಾಯಾಬಲೇನ ಭವತಾಪಿ ನಿಗೂಹ್ಯಮಾನಮ್
ಪಶ್ಯನ್ತಿ ಕೇಚಿದನಿಶಮ್ ತ್ವದನನ್ಯಭಾವಾಃ ||

ತ್ರಿವಿಧಪರಿಚ್ಛೇದರಹಿತವಾದ (ಕಾಲದಿಂದ, ದೇಶದಿಂದ ಹಾಗು ವಸ್ತುವಿಂದ) ಹಾಗು ನಿಸ್ಸಂದೇಹವಾಗಿ “ನಿನಗೆ ಸಮರಾಗಲಿ ಅಧಿಕರಾಗಲಿ ಇಲ್ಲದಿರುವಂತಹ ಪ್ರಭುತ್ವವು, ನಿನ್ನ ಆಶ್ಚರ್ಯ ಶಕ್ತಿಯಿಂದ ಮರೈಯಿಸಲ್ಪಟ್ಟದ್ದಾಗಿದರೂ ಕೆಲವು ಮಹಾನರು ನಿನ್ನನ್ನೇ ಏಕಚಿತ್ತರಾಗಿ ನೋಡುತಿದ್ದಾರೆ.

ಶ್ಲೋಕ-17 – ಇಲ್ಲಿ ಆಳವಂದಾರ್ ಭಗವದಧೀನದಲ್ಲಿರುವ ಹಾಗು ಹಿಂದೆ ಹೇಳಲ್ಪಟ್ಟ ತನ್ನ ಸರ್ವೇಶ್ವರತ್ವಕ್ಕೆ ಪಾತ್ರವಾಗಿರುವ ವಸ್ತು-ವೈಚಿತ್ರ್ಯವನ್ನು ವಿವರಿಸುತಿದ್ದಾರೆ.
ಯದಣ್ಡಮ್ ಅಣ್ಡಾತರ ಗೋಚರಮ್ ಯತ್
ದಶೋತ್ತರಾಣ್ಯಾವರಣಾನಿ ಯಾನಿ |
ಗುಣಾಃ ಪ್ರದಾನಮ್ ಪುರುಷಃ ಪರಮ್ ಪದಮ್
ಪರಾತ್ಪರಮ್ ಬ್ರಹ್ಮ ತೇ ವಿಭೂತಯಃ ||
(1) ಬ್ರಹ್ಮನ ಅಧೀನದಲ್ಲಿರುವ [14 ಪದರಗಳನ್ನು ಹೊಂದಿರುವ ಜಗತ್ತು] ಬ್ರಹ್ಮಾಂಡವನ್ನು,(2)ಅಂಡದಲ್ಲಿರುವವು ಯಾವೊ ಅವನ್ನು,(3)[ಅಂಡವನ್ನು ಅವರ್ತಿಸುವ ಆ ಒಂಕ್ಕಿಂದ ಒಂದು ಹತ್ತಷ್ಠು ದೊಡ್ಡದಾಗಿರುವ ಒಂದೊಂದು ಆವರಣವನ್ನು ಹಾಗು ಸಮಗ್ರವಾದ ಸಪ್ತ ಆವರಣಗಳನ್ನು(4)ಸತ್ವ(ಒಳ್ಳೆಯದ್ದು / ಶ್ರೇಯಸ್ಕರವಾದದ್ದು) ರಜಸ್(ಆಸೆ) ಹಾಗು ತಮಸ್ಗಳನ್ನು(ಅಜ್ಞಾನ)(5)ಮೂಲ ಪ್ರಕೃತಿಯನ್ನು(6) ಜೀವತ್ಮಗಳ ಸಮಷ್ಟಿಯನ್ನು(ಗುಂಪು)(7) ಶ್ರೀವೈಕುಂಠವನ್ನು (8) [ಬ್ರಹ್ಮಾದಿ ದೇವತೆಗಳಿಂದ ಉತ್ಕೃಷ್ಟರಾದ] ಮುಕ್ತಾತ್ಮಗಳಿಂದಲೂ ಪರರಾದ ನಿತ್ಯಸೂರಿಗಳ ಸಮಷ್ಟಿಯನ್ನು ಹಾಗು(9) ದಿವ್ಯ ವಿಗ್ರಹವು(ಗಳು) ನಿನ್ನ ಶರೀರವು ಅಥವಾ ರೂಪಗಳು.

ಶ್ಲೋಕ-18 – ಆಳವಂದಾರ್ ಹಿಂದೆ ಶರಣ್ಯನ(ಗತಿ- ಭಗವಾನ್) ವೈಭವವವನ್ನು ಹೇಳಿದರು, ಹಾಗು ಈ ಪಾಸುರದಲ್ಲಿ, “ಇಂತಃ ಉಭಯ-ವಿಭೂತಿ-ನಾಥನ್ನು ಹೇಗೆ ಆಶ್ರಯಿಸಲಿ” ಎಂಬ ಶಂಕೆಯನ್ನು ದೂರಮಾಡಲು, ಭಕ್ತರ ತನ್ನನ್ನು ಅನುಭವಿಸುವಂತೆ ಮಾಡುವ 12 ಗುಣಗಳನ್ನು ವಿವರಿಸುತ್ತಿದ್ದಾರೆ. ಅಥವಾ ಹಿಂದೆ ಭಗವಂತನ ಸರ್ವೇಶ್ವರತ್ವವು ವಿವರಿಸಲ್ಪಟ್ಟಿತು, ಹಾಗು ಈಗ ಹೇಳಲು ಪ್ರಾಪ್ತವಾದ ಅವನ ಗುಣಗಳನ್ನು ಹೇಳುತಿದ್ದಾರೆ.
ವಶೀ ವದಾನ್ಯೋ ಗುಣವಾನ್ ಋಜುಶ್ ಶುಚಿರ್
ಮೃದುರ್ದಯಾಳುರ್ ಮಧುರಸ್ ಸ್ಥಿರಸ್ ಸಮಃ |
ಕ್ರುತೀ ಕ್ರುತಜ್ಞಸ್ತ್ವಮಸಿ ಸ್ವಭಾವತಸ್
ಸಮಸ್ತಕಲ್ಯಾಣಗುಣಾಮೃತೋದದಿಃ ||

ನೀನು ಸ್ವಭಾವತಃವೇ (1) (ಭಕ್ತರ) ಅಧೀನದಲ್ಲಿರುವವನು ,(2) (ಭಕ್ತರಿಗೆ ನಿನ್ನನ್ನು ಪ್ರಕಾಶಿಸುವಂತಹ) ಉದಾರನು ,(3) ಸೌಶೀಲ್ಯವನ್ನು ಉಳ್ಳವನು(ಉತ್ತಮ ಸ್ವಭಾವವನ್ನು ಹೊಂದಿರುವವನು) ,(4)ಯಾವ ತಾರತಮ್ಯವು ಇಲ್ಲದೆ ಎಲ್ಲರೊಂದಿಗೂ ಪಳಗುವನು ,(5)(ಮನೋ-ವಾಕ್-ಕಾಯಗಳಲ್ಲಿ) ಆರ್ಜವದಿಂದಿರುವನು ,(6)(ನಿರ್ಹೇತುಕಕರುಣೆಯನ್ನು- ಯಾವ ಕಾರಣವಿಲ್ಲದೆ ತೋರುವ ಕರುಣೆಯನ್ನು ತೋರುವ ) ಶುದ್ಧಿಯನ್ನು ಉಳ್ಳವನು ,(7)ಭಕ್ತರ-ವಿಶ್ಲೇಶವನ್ನು ತಾಳಲಾರದವನು ,(8)(ಭಕ್ತರ ಧುಃಖವನ್ನು ತಾಳಲಾರದಂತಹ) ದಯೆಯನ್ನು ಉಳ್ಳವನು ,(9)ಮಧುರವಾಗಿರುವನು, (ಭಕ್ತರನ್ನು ರಕ್ಷಿಸುವುದರಲ್ಲಿ ) ಸ್ಥಿರವಾಗಿರುವನು(10)(ನಿನಲ್ಲಿ ಶರಣಾದ) ಎಲ್ಲರಿಗು ಸಮನಾಗಿರುವವನು ,(11)[ಭಕ್ತರನ್ನು ತನ್ನವರೆಂದು ಭಾವಿಸುತ್ತಾ ಅವರ] ಕಾರ್ಯಗಳಲ್ಲಿ ಪ್ರವರ್ತಿಸುವವನು, (12)ಭಕ್ತರ ಚಿಕ್ಕ ಕಾರ್ಯದಿಂದಲೂ ಕೃತಜ್ಞತೆಯನ್ನು ತೋರುವವಂತಹ ಕಲ್ಯಾಣ ಗುಣಗಳ ಅಮೃತ-ಸಾಗರನು.

ಶ್ಲೋಕ-19- ಆಳವಂದಾರ್ ಹೇಗೆ ಭಗವಾನಿನ ಕಲ್ಯಾಣ ಗುಣಗಳು ಅನಂತವೋ ಅದೇ ರೀತಿಯಲ್ಲಿ ಪ್ರತಿಯೊಂದು ಗುಣವು ತನ್ನಲ್ಲೆ ಅಪರಿಮಿತವಾಗಿದೆ.
ಉಪರ್ಯುಪರ್ಯುಬ್ಜಭುವೋ£ಪಿ ಪೂರುಷಾನ್
ಪ್ರಕಲ್ಪ್ಯ ತೇ ಯೇ ಶತಮಿತ್ಯನುಕ್ರಮಾತ್ |
ಗಿರಸ್ ತ್ವದೇಕೈಕಗುಣಾವಧೀಪ್ಸಯಾ
ಸದಾ ಸ್ಥಿತಾ ನೋದ್ಯಮತೋ£ತಿ ಶೇರತೇ ||
ನಿನ್ನ ಪ್ರತಿಯೊಂದು ಗುಣದ ಮಿತಿ(ಸೀಮೆಯನ್ನು) ನೋಡಲು ಇಚ್ಛಿಸುತ್ತಾ ಎಂದೂ ಹೆಚ್ಚು ಬ್ರಹ್ಮಗಳನ್ನು ಕಲ್ಪಿಸುತ್ತಾ ಅವರಿಗೆ “ತೇ ಯೇ ಶತಮ್”(ನೂರರಷ್ಟು) ಎಂದು ಹೇಳುತ್ತಲೆ ಇದ್ದರು ವೇದವಾಕ್ಯಗಳು ಸ್ವಲ್ಪವು ಮುಂದೆ ಸಾಗಲಿಲ್ಲ.

ಶ್ಲೋಕ- 20 – ಈಗ ಆಳವಂದಾರ್ ಹಿಂದೆ ಹೇಳಲ್ಪಟ್ಟ ಭಗವದ್-ಗುಣ-ರಸಿಕರಾದ ಭಕ್ತರ ವೈಭವನ್ನು ವಿವರಿಸುತಿದ್ದಾರೆ, ಅಥವಾ (ಇನ್ನೋಂದು ನಿರ್ವಾಹ) “ಅಸ್ಮಿನ್ನಸ್ಯ ಚ ತದ್ಯೋಗಮ್ ಶಾಸ್ತಿ”(ಬ್ರಹ್ಮ ಸೂತ್ರಮ್ 1.1.20-ಜೀವಾತ್ಮ ಪರಮಾತ್ಮರ ಅನಂದಮಯವಾದ ಸಾಯುಜ್ಯವನ್ನು ಶ್ರುತಿ ವಿವರಿಸುವುದು) ಎಂದು ಹೇಳಿದಂತೆ ಭಗವಂತನಿಂದ ಭಕ್ತರು ಇಂತಹ ವೈಭವನ್ನು ಹೊಂದಿದ್ದಾರೆಂದರೆ, ಭಗವಂತನ ವೈಭವವು (ಪರೀಕ್ಷಿಸಿ) ಹೇಳಲು ಸಾಧ್ಯವೆಂದು ಸ್ಪಷ್ಟವಾಗಿದೆ.
ತ್ವದಾಶ್ರಿತಾನಾಮ್ ಜಗದುದ್ಭವಸ್ತಿತಿ
ಪ್ರಣಾಶಸಂಸಾರವಿಮೋಚನಾದಯಃ |
ಭವನ್ತಿ ಲೀಲಾ ವಿದಯಶ್ಚ ವೈದಿಕಾಸ್
ತ್ವದೀಯ ಗಂಭೀರ ಮನೋನುಸಾರಿಣಃ ||

(ಬ್ರಹ್ಮಾದಿಗಳಂತಹ) ನಿನ್ನ ಭಕ್ತರಿಗೆ ಜಗತ್ ಶೃಷ್ಟಿ , ರಕ್ಷಣೆ , ಸಂಹಾರ , ಸಂಸಾರ ತರಣಾದಿಗಳು ಕ್ರೀಡೆಯಂತಿವೆ; ವೇದದ ನಿಯಮಗಳೂ ಸಹ ನಿನ್ನ ಭಕ್ತರ ಆಳವಾದ ದಿವ್ಯ ಹೃದಯವನ್ನೇ ಅನುಸರಿಸುವುದು.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ – http://divyaprabandham.koyil.org/index.php/2020/10/sthothra-rathnam-slokams-11-to-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ఆర్తి ప్రబంధం – 32

Published by:

శ్రీః
శ్రీమతే శఠకోపాయ నమః
శ్రీమతే రామానుజాయ నమః
శ్రీమత్ వరవరమునయే నమః

ఆర్తి ప్రబంధం

<< ఆర్తి ప్రబంధం – 31

పరిచయము: 

మునుపటి పాశురములో,  “అఱమిగు నఱ్పెరుంబుదూర్ అవదరిత్తాన్ వాళియే” అనే వాక్యము ప్రకారము శ్రీరామానుజులు “శ్రీపెరుంబూదూర్” అనబడే క్షేత్రంలో అవతరించారు. ఆ వాక్యము నెపముగ భావించి,  శ్రీరామానుజులు ఈ భూమిపైన మన కోసం అవతరించిన ఆ దివ్యమైన రోజుని మణవాల మాముణులు కీర్తిస్తున్నారు.

పాశురము 32

శంగర భాఱ్కర యాదవ బాట్ట ప్రభాకరర్ తంగళ్ మదం
శాయ్వుఱ వాదియర్ మాయ్గువర్ ఎన్ఱు శదుమఱై వాళ్ందిడు నాళ్
వేంగలి ఇంగిని వీఱు నమక్కిలై  ఎన్ఱు మిగ త్తళర్ నాళ్
మేదిని నంజుమై ఆఱుం ఎన త్తుయర్ విట్టు విళంగియ నాళ్
మంగయరాళి పరాంగుశ మున్నవర్ వాళ్వు ముళైత్తిడు నాళ్
మన్నియ తెన్నరంగాబురి మామలై మఱ్ఱుం ఉవందిడు నాళ్
శెంగయల్ వావిగళ్ శూళ్ వయల్ నాళుళ్ శిఱంద పెరుమ్బూదూర్
చ్చీమాన్ ఇళైయాళ్వార్ వందరుళియ నాళ్ తిరువాదిరై నాళే

ప్రతి పద్ధార్ధములు

శంగర – శంకరుడు ప్రతిపాదించిన సిద్దాంతము
భాఱ్కర – భాస్కరుడు ప్రతిపాదించిన సిద్దాంతము
యాదవ – యాదవప్రకాశులు ప్రతిపాదించిన సిద్దాంతము
బాట్ట – భాట్టల సిద్దాంతము
ప్రభాకరర్ తంగళ్ మదం – ప్రభాకరుడు ప్రతిపాదించిన సిద్దాంతము, అటువంటి తత్వశాస్త్రములు
శాయ్వుఱ – నాశనం చేయబడ్డాయి (శ్రీరామానుజులు అవతరించిన రోజు అవతరించిన తరువాత)
వాళ్ందిడు నాళ్ శదుమఱై – నాలుగు వేదాలు ఆరోగ్యంగా జీవించిన రోజు (వేదములు యొక్క అర్థం స్పష్టంగా అర్థం చేసుకోబడిన రోజున)
వాదియర్ –  వాదించే శంకరుని వంటివారు
మాయ్గువర్ ఎన్ఱు – కానీ చివరికి ఖచ్చితంగా విఫలమవుతారు.
నాళ్ – శ్రీరామానుజులు అవతరించిన రోజే దినము
వేంగలి – అమానుషమైన కలి
ఇంగిని వీఱు నమక్కిలై  ఎన్ఱు –  ఇక ఈ భూమిపైన ఉండేలా లేని
మిగత్తళర్ – భయంకరంగా కంపించి చివరికి క్షీణిస్తుంది.
నాళ్ – శ్రీరామానుజులు అవతరించిన రోజే దినము
మేదిని – భూమి కూడా
విళంగియ – తేజస్సుతో ప్రకాశించు
నంజుమై ఆఱుం ఎన త్తుయర్ విట్టు –  భారం తొలగించబడుతుంది.
నాళ్ – శ్రీరామానుజులు అవతరించిన రోజే దినము
వాళ్వు – యొక్క స్తుతి
మున్నవర్ – మన పూర్వీకులు మొత్తం
మంగైయరాళి – తిరుమంగై ఆళ్వార్
పరాంకుస – నమ్మాళ్వార్
ముళైత్తిడు – తిరిగి పుడుతుంది, వికసిస్తుంది, అభివృద్ధి చెందుతుంది.
నాళ్ – శ్రీరామానుజులు అవతరించిన రోజే దినము
మన్నియ – పెరియ పెరుమాళ్ నిత్య నివాసమున్న
తెన్నరంగాపురి – పైగా దీనిని అందమైన శ్రీరంగం అని కూడా పిలుస్తారు
మామలై  – “పెరియ తిరుమలై” అని పిలువబడే తిరువెంగడం
మఱ్ఱుం – ఇతర దివ్య దేశములు
ఉవందిడు –  సంతోషంగా ఉంటుంది.
నాళే – ఆ రూజున
వందరుళియనాళ్ – శ్రీరామానుజులు అవతరించారు
సీమానిలయాళ్వార్ – శ్రీమాన్ గా “ఇళైయాళ్వార్” అనే పేరుతో
పెరుంబుదూర్  – శ్రీపెరుంబుదూర్
సూళ్ – దాని చుట్టి ఉంది
వావిగళ్ – (1)  చెరువులు, సరస్సులు నిండి ఉన్నాయి
సెంకయల్ – ఎర్రని చేప
వయల్ –  (2) వరి పొలాలు
నాళుం – శ్రీపెరుంబుదూర్ అని పిలువబడే ఈ దేశము, నిత్యము వర్ధిల్లుతుంది
శిఱంద – అందమైన, గొప్ప నగరం.
తిరువాదిరై – (శ్రీ రామానుజులు శ్రీపెరుంబుదూర్లో అవతరించిన తిరునక్షత్రం ఆర్ద్రా. ఇది దినమంటే. ఎంతటి సుదినము. “శ్రీమాన్ ఆవిరభూత్ భూమౌ రామానుజ దివాకరః” అని మనం తెలుకోవలసినది.

సరళ అనువాదము:

ఈ ప్రపంచంలో శ్రీరామానుజులు అవతరించిన అద్భుతమైన శ్రీ ఆర్ద్రా నక్షత్రాన్ని మణవాల మాముణులు కీర్తిస్తున్నారు. భూమిపైన వారు జన్మించినప్పుడు,  అనేక మంచి విషయాలు జరిగాయి. అంత వరకు ఉన్న వేదాల యొక్క అపార్థములు చెప్పిన తత్వాలన్ని నాశనం చేయబడ్డాయి. కలి వణకడం ప్రారంభించి, శ్రీరామానుజులు ఉన్నంత కాలం తాను ఇక్కడ ఉండలేనని భయపడింది. ఈ భూమి, అందులోని దివ్య దేశాలు, ఆ దివ్య దేశ వాసులందరూ శ్రీరామానుజుల అవతారముతో వారి భారం తగ్గుతుందని ప్రతి ఒక్కరూ సంతోష పడ్డారు. ఎర్రని చేపల సమృద్ధితో నిండిన అందమైన చెరువులు కలిగి అందంగా నిర్మించబడిన నగరం శ్రీపెరుంబుదూర్లో దివ్య శ్రీరామానుజులు జన్మించారు. నిజంగా ఎంత అద్భుతమైన రోజు.

వివరణ:

విషయాలను సరిగ్గా చూడగలిగే దృష్టి లేని “కుదృష్థులు” అని కొంతమంది ఉన్నారు. వాళ్ళు వేదాల ముఖ్య ఉద్దేశ్యాన్ని స్పష్టంగా చూడకుండా, వాటిలో వివరించబడిన అర్థాలను నిస్సారంగా తప్పుదోవ పట్టించే రీతిలో వివరిస్తారు. సాధారణంగా వాళ్ళు రెండు విషయాలను నిరాకరిస్తారు (1) సర్వోన్నత భగవాన్ శ్రీమన్ నారాయణుని (విశేషణము) (2) వారి గుణాలు (వైశేష్యం). శంకర, భస్కర మొదలైన మతస్థులను కుదృష్థులుగా భావిస్తారు. ఈ కారణంగా వైధిక ధర్మం నిస్సహాయమైన స్థితిలో  ఉండేది. శ్రీరామానుజులు ఈ ప్రపంచంలో అవతరించిన రోజున, కుదృష్థుల వాదనలు నాశనమై తిరిగి వేదాలు దృఢంగా వర్ధిల్లుతాయని, తాను కోల్పోయిన కీర్తిని తిరిగి పొందబోతుందని తెలుసుకొని సంతోషపడింది వేదం.

శ్రీరామానుజులు అవతరించిన రోజున, ఘోరమైన ‘కలి’ ఈ భూమిపైన ఇక ఎప్పటికీ హాయిగా జీవించలేదని భావించి వణకడం ప్రారంభించిన రోజది. ‘కలి’ ప్రభావితులైన కుదృష్థులు ఉక్కిరి బిక్కిరై అటూ ఇటూ పరిగెత్తారు, భూమి ప్రశాంతంగా ఊపిరి పీల్చుకుని ప్రకాశించింది అని, “తవం తారణి పెఱ్ఱదు” ఇరామానుశ నూఱ్ఱందాది 65లో వివరించబడింది. ఆళ్వారులు పాడిన ప్రదేశాలను దివ్య దేశాలంటారు, వాళ్ళల్లో తిరుమంగై ఆళ్వారులు అత్యధిక దేశాలలో పాడారు. అందువల్ల, శ్రీరామానుజులు అవతరించిన రోజున,  ఆళ్వారుల కీర్తి మళ్లీ వృద్ధి చెందడం ప్రారంభించిందని చెప్పవచ్చు. దివ్య దేశములు కూడా ఈ రోజు చాలా ఆనందించాయి. ఈ దివ్య దేశాలలో పెరియ పెరుమాళ్ నిత్యనివాసమున్న శ్రీ రంగము, తిరుమల “అరువిసెయ్య నిర్ క్కుం మామలై” (తిరువిరుత్తం 50లో చెప్పినటుల) మొదలైన మరెన్నో దివ్య దేశాలున్నాయి. ఈ భూమిపైన, తిపువాదిరై (తిరు ఆర్ద్రా) నక్షత్రమున శ్రీపెరుంబూదూర్లో శ్రీ రామనుజులు అవతరించారు.  ఈ ప్రదేశం ఎర్రటి చేపలు ఉన్న సరస్సులతో చుట్టుముట్టి ఉండి నిత్యము ఆ నగరం యొక్క అందాన్ని కాపాడుతూ ఉంటుంది. శ్రీ రామానుజులకు “ఇళైయాళ్వార్” అన్న నామము ఇవ్వబడింది. ఆ నామమే చాలా విషయాలను తెలుపుచున్నట్లు తోచును.

మణవాల మాముణులు  ఆనందపడుతూ,  “దినము అంటే ఈ దినము!” ఎంతటి సుదినము! శ్రీరామానుజులు ఈ భూమిపైన అవతరించిన ఈ రోజుకి మరేరోజైనా సరితూగుతుందా? అని ఆశ్చర్యపోరున్నారు. ఈ సమయంలో, “శ్రీమాన్ రామానుజ దివాకరః” అనే వచనాలను మనం గుర్తుచేసుకోవాలి. “తెన్నరంగాపురి మామలై మఱ్ఱుమువన్దిదు నాళ్” అన్న ఈ వాఖ్యము, తిరుమల శ్రీరంగ ఇత్యాది దివ్య దేశ వాసులందరూ శ్రీరామానుజులు ఈ భూమిపైన అవతరించిన ఈ రోజున సంతోషించారని చెప్పుకోవచ్చు. ఈ రెండు దివ్య దేశాలు మిగితా దివ్య దేశాలన్నింటికీ  ప్రతినిధిత్వం వహిస్తాయి. “ఉన్ నామమెల్లాం ఎన్ఱాన్ నావినుళ్ళే అల్లుంపగలుం అమరుంపడి నల్గు” అని ఇరామానుశ నూఱ్ఱందాది తనియన్లో వెల్లడించినట్లుగా,  ఎంబెరుమానార్, ఇరామానుశ, ఎతిరాశా అన్న వివిధ నమములను ఇక్కడ మణవాల మాముణులు ఉపయోగించారు. ఈ పాశురములో “ఇళైయాళ్వార్” అన్న నామము ఉపయోగించబడింది.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2016/12/arththi-prabandham-32/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org