Category Archives: kOyil thiruvAimozhi

ತಿರುವಾಯ್ಮೊೞಿ – ಸರಳ ವಿವರಣೆ – 10.1 – ತಾಳತಾಮರೈ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 9.10 – ಮಾಲೈನಣ್ಣಿ


ಆಳ್ವಾರರು ಎಂಪೆರುಮಾನರಿಗಾಗಿ ಶಾಶ್ವತವಾಗಿ ಕೈಂಕರ್‍ಯವನ್ನು ಮಾಡಲು ಬಯಸುತ್ತಾರೆ. ಆದರೆ ಈ ಲೋಕದಲ್ಲಿ ಅದು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ಪರಮಪದವನ್ನು ಏರಿ ,ಆ ಕೈಂಕರ್‍ಯವನ್ನು ಮಾಡಬೇಕೆಂದು ಮನಗಾಣುತ್ತಾರೆ. ಅದಕ್ಕಾಗಿ ತಿರುಮೋಹೂರ್‌ನಲ್ಲಿರುವ ಕಾಳಮೇಗಮ್ ಪೆರುಮಾಳ್ ಒಬ್ಬರೇ ಪರಮಪದಕ್ಕೆ ಸೇರಲು ಇರುವ ತೊಂದರೆಯನ್ನು ನಿವಾರಿಸಲು ಮತ್ತು ಪರಮಪದಕ್ಕೆ ಕರೆದೊಯ್ಯಲು ಸಾಧ್ಯವೆಂದು ಆ ಎಂಪೆರುಮಾನರಿಗೆ ಶರಣಾಗತರಾಗುತ್ತಾರೆ. ಪರಮಪದದ ಪ್ರಯಾಣಕ್ಕೆ ತನ್ನನ್ನು ಜೊತೆಗಾರನಾಗಿ ಪರಿಗಣಿಸಬೇಕೆಂದು ಕೋರುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಮಗೆ ತೊಂದರೆಗಳನ್ನು ನಿವಾರಿಸುವ ಗುಣವಿರುವ ಕಾಳಮೇಗ ಎಂಪೆರುಮಾನರನ್ನು ಬಿಟ್ಟರೆ ಯಾವ ಆಶ್ರಯವೂ ಇಲ್ಲ “

ತಾಳ ತಾಮರೈ ತ್ತಡಮಣಿ ವಯಲ್ ತಿರುಮೋಗೂರ್,
ನಾಳುಮ್ ಮೇವಿ ನನ್ಗಮರ್ನ್ದು ನಿನ್‍ಱು ಅಶುರರೈ ತ್ತಗರ್ಕ್ಕುಮ್,
ತೋಳು ನಾನ್ಗುಡೈ ಚ್ಚುರಿ ಕುೞಲ್ ಕಮಲಕ್ಕಣ್ ಕನಿ ವಾಯ್,
ಕಾಳಮೇಗತ್ತೈ ಯೆನ್‍ಱಿ ಮಱ್ಱೊನ್‍ಱಿಲಮ್ ಗದಿಯೇ ॥

ವೈರಿಗಳಾದ ರಾಕ್ಷಸರನ್ನು ಹತ್ಯೆಗೊಳಿಸಲು ಕಾಳಮೇಗಮ್ ಎಂಪೆರುಮಾನರು ತಿರುಮೋಗೂರ್‌ನಲ್ಲಿ , ಅತೀವ ಆತ್ಮತೃಪ್ತಿಯ ಆನಂದದೊಂದಿಗೆ ,ಬಲವಾಗಿ ನಿಂತು, ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿ ರೈತರ ಗದ್ದೆಗಳು, ಬಲವಾದ ಕಾಂಡಗಳನ್ನು ಹೊಂದಿದ, ತಾವರೆ ಹೂಗಳುಳ್ಳ ಕೆರೆಗಳೊಂದಿಗೆ ಅಲಂಕೃತವಾಗಿದೆ. ಎಂಪೆರುಮಾನರಿಗೆ ನಾಲ್ಕು ದಿವ್ಯ ಕೈಗಳು, ಸುರುಳಿಕೊಂಡಿರುವ ಮುಂಗುರುಳು, ದಟ್ಟವಾದ ಕೂದಲು, ತಾವರೆಯಂತಹ ದಿವ್ಯ ಕಣ್ಣುಗಳು , ಹವಳದಂತಹ ಸ್ನೇಹಭರಿತವಾದ ದಿವ್ಯ ತುಟಿಗಳಿವೆ. ಅಂತಹ ಭವ್ಯವಾದ, ಕಪ್ಪು ಮೇಘದಂತಿರುವ, ನಮಗೆ ನಿರ್ದಿಷ್ಟ ಗುರಿಯಾಗಿರುವ ಎಂಪೆರುಮಾನರನ್ನು ಬಿಟ್ಟು ಬೇರೆ ಯಾವ ಆಶ್ರಯವೂ ನಮಗಿಲ್ಲ.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಉಲ್ಲಾಸಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟು ನಮಗೆ ಬೇರೆ ಯಾವ ಆಶ್ರಯವೂ ಇಲ್ಲ. ಅವರಿಗೆ ದಿವ್ಯ ನಾಮಗಳಿವೆ. ಅವುಗಳ ಆನಂದವು ಭಕ್ತರ ಆಯಾಸವನ್ನು ನಿರ್ಮೂಲನೆ ಮಾಡಿ, ಅವರನ್ನು ಮೇಲೆತ್ತುತ್ತದೆ.”

ಇಲಮ್ ಗದಿ ಮಱ್ಱೊನ್‍ಱು ಎಮ್ಮೈಕ್ಕುಮ್ ಈನ್ ತಣ್ ತುೞಾಯಿನ್,
ಅಲಙ್ಗಲಮ್ ಕಣ್ಣಿ ಆಯಿರಮ್ ಪೇರ್ ಉಡೈ ಅಮ್ಮಾನ್,
ನಲಮ್ ಕೊಳ್ ನಾನ್ಮಱೈ ವಾಣರ್‌ಗಳ್ ವಾೞ್ ತಿರುಮೋಗೂರ್,
ನಲಮ್‍ಕೞಲವನಡಿನಿೞಲ್ ತಡಮನ್‍ಱಿ ಯಾಮೇ ॥


ಕಾಳಮೇಗಮ್ ಎಂಪೆರುಮಾನರು ಸುಂದರವಾದ, ಜೀಕುತ್ತಿರುವ ತಿರುತ್ತುೞಾಯ್ ಹಾರದಿಂದ ಅಲಂಕೃತರಾಗಿದ್ದಾರೆ. ಅದು ಅದರಲ್ಲಿ ಪೋಣಿಸಿದ ಹೂವುಗಳಿಗೆ ತಂಪಾದ ಅನುಭವನ್ನು ಕೊಟ್ಟು ಆನಂದಮಯವನ್ನಾಗಿಸಿದೆ. ಅವರು ಯಾವ ಷರತ್ತುಗಳೂ ಇಲ್ಲದ ಸ್ವಾಮಿಯು , ಆನಂದಭರಿತವಾದ ಅನೇಕ ನಾಮಗಳನ್ನು ಹೊಂದಿದ್ದಾರೆ. ಅವರು ತಿರುಮೋಗೂರ್‌ನಲ್ಲಿ ವಾಸವಾಗಿದ್ದಾರೆ. ಅಲ್ಲಿ ವೇದಗಳಲ್ಲಿ ಪಾರಂಗತ್ಯ ಹೊಂದಿರುವ, ಇತರರಿಗಾಗಿ ಅನುಕಂಪ ತೋರಿಸುವ, ಅವನ ವಿಶಿಷ್ಟವಾದ ರಕ್ಷಿಸುವ ಇತ್ಯಾದಿ ಗುಣಗಳನ್ನು ಆಸ್ವಾದಿಸುವುದರಿಂದ ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸಿಕೊಂಡಿರುವ ಜನರು ವಾಸವಾಗಿದ್ದಾರೆ. ನಮ್ಮ ಎಲ್ಲಾ ಜನ್ಮಗಳಲ್ಲೂ, ನಮಗೆ ಅಲ್ಲಿಯ ಕೆರೆಯ ನೆರಳನ್ನು ಬಿಟ್ಟರೆ ಯಾವ ಗುರಿಯೂ ಇಲ್ಲ. ಬೇರೆ ವಾಕ್ಯದಲ್ಲಿ ಹೇಳುವುದಾದರೆ, ಎಂಪೆರುಮಾನರ ವಿಜಯದ ಕಾಲ್ಗೆಜ್ಜೆಗಳನ್ನು ಹೊಂದಿರುವ ದಿವ್ಯ ಪಾದಗಳು, ಭಕ್ತರಲ್ಲಿ ಭೇದ ಭಾವ ಎಣಿಸದೇ ಅವರಲ್ಲಿಗೆ ಕರೆದೊಯ್ಯುತ್ತದೆ.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾವೆಲ್ಲರೂ ತಿರುಮೋಗೂರ್‌ಗೆ ಹೋಗಿ ಸೇರೋಣ. ಅಲ್ಲಿ ಸರ್ವೇಶ್ವರನು ಎಲ್ಲಾ ಕಲ್ಯಾಣ ಗುಣಗಳನ್ನು ಹೊಂದಿ, ನಿರಂತರವಾಗಿ ವಾಸವಾಗಿದ್ದಾನೆ. ಅವನು ನಮ್ಮ ಎಲ್ಲಾ ಸಂಕಟಗಳನ್ನು ದೂರ ಮಾಡುತ್ತಾನೆ. ಇದನ್ನು ಒಳ್ಳೆಯ ಸಲಹೆಯಾಗಿ ತೆಗೆದುಕೊಳ್ಳಿ.”

ಅನ್‍ಱಿ ಯಾಮ್ ಒರುಪುಗಲಿಡಮ್ ಇಲಮ್ ಎನ್‍ಱೆನ್‍ಱಲಟ್ಱಿ,
ನಿನ್‍ಱು ನಾನ್ಮುಗನ್ ಅರನೊಡು ದೇವರ್ಗಳ್ ನಾಡ
ವೆನ್‍ಱು ಇಮ್ಮೂವುಲಗಳಿತ್ತು ಉೞಲ್ವಾನ್ ತಿರುಮೋಗೂರ್,
ನನ್‍ಱು ನಾಮ್ ಇನಿ ನಣುಗುದುಮ್ ನಮದಿಡರ್ ಕೆಡವೇ ॥

ಎಂಪೆರುಮಾನರನ್ನು ಮತ್ತೆ ಮತ್ತೆ ಕೂಗಿ ಕರೆದು “ ನಿನ್ನನ್ನು ಬಿಟ್ಟರೆ ಬೇರೆ ಯಾವ ಗತಿಯೂ ಇಲ್ಲ “ ಎಂದಾಗ , ಪ್ರತಿಯೊಂದು ಸಲವೂ ದುರ್ಬಲನಾಗುತ್ತಾ, ಅನೇಕ ದೇವತೆಗಳು ಬ್ರಹ್ಮ, ರುದ್ರ ಮುಂತಾದವರು ಆಕಾಶದಲ್ಲಿ ನಿಂತಾಗ, ನಾವು ಎಂಪೆರುಮಾನರನ್ನು ಹೊಂದಲು ಸಮೀಪಿಸಲು ನಾವೆಲ್ಲರೂ ತಿರುಮೋಗೂರಿಗೆ ಹೋಗೋಣ. ಅಲ್ಲಿ ಮೂರು ಪದರದ ವಿಶ್ವದಲ್ಲಿ ವೈರಿಗಳನ್ನು ಜಯಿಸುವ ಒಬ್ಬನ ವಾಸಸ್ಥಾನವಾಗಿದೆ. ಮತ್ತು ಎಲ್ಲರ ರಕ್ಷಣೆಯು ಅವನ ದಿನಚರ್‍ಯವಾಗಿದೆ. ನಮ್ಮ ಮನಸ್ಸಿನ ಸಂಘರ್ಷಗಳನ್ನು ತೆಗೆದು ಹಾಕಲು, ಮತ್ತು ಅನನ್ಯಪ್ರಯೋಜನರಾಗಿ ನಾವು ಅವನನ್ನು ತಲುಪೋಣ.

ನಾಲ್ಕನೆಯ ಪಾಸುರಮ್ :
ಆಳ್ವಾರರು ಶ್ರೀವೈಷ್ಣವರನ್ನು ಆಮಂತ್ರಿಸುತ್ತಾ ಹೇಳುತ್ತಾರೆ, “ ಬನ್ನಿ, ನಾವು ನಮ್ಮ ಕಳವಳಗಳನ್ನು ತೊಡೆದು ಹಾಕಲು ತಿರುಮೋಗೂರಿನ ಎಂಪೆರುಮಾನರಿಗೆ ಶರಣಾಗತರಾಗೋಣ”.

ಇಡರ್‌ಕೆಡ ಎಮ್ಮೈ ಪ್ಪೋನ್ದಳಿಯಾಯ್ ಎನ್‍ಱೆನ್‍ಱೇತ್ತಿ,
ಶುಡರ್‌ಕೊಳ್ ಶೋದಿಯೈ ತ್ತೇವರುಮ್ ಮುನಿವರುಮ್ ತೊಡರ,
ಪಡರ್‌ಕೊಳ್ ಪಾಮ್ಬಣೈ ಪ್ಪಳ್ಳಿಕೊಳ್ವಾನ್ ತಿರುಮೋಗೂರ್,
ಇಡರ್‌ಕೆಡ ಅಡಿ ಪರವುದುಮ್ ತೊಣ್ಡೀರ್ ವಮ್ಮಿನೇ ॥


ಶ್ರೇಷ್ಠವಾದ ಹೊಳೆಯುವ ಪ್ರಕಾಶದ ರೂಪವನ್ನು ಹೊಂದಿರುವ ಎಂಪೆರುಮಾನರು ಕರುಣೆಯಿಂದ ದಿವ್ಯ ಸರ್ಪದ ಮೇಲೆ ಶಯನಿಸಿದ್ದಾರೆ. ಆ ಸರ್ಪವು ಮೃದುವಾಗಿ, ತಂಪಾಗಿ, ಸುಗಂಧಿತವಾಗಿ ಹಾವುಗಳ ಜಾತಿಯ ಸ್ವಭಾವಕ್ಕೆ ತಕ್ಕವನಾಗಿದೆ. ಅದು ಎಂಪೆರುಮಾನರ ಸ್ಪರ್ಶಕ್ಕೆ ತಾಗಿ ಅವರ ಗುಣವಾದ ವಿಸ್ತಾರತೆಯನ್ನು ಹೊಂದಿದೆ. ತಮ್ಮನ್ನೇ ಸ್ವಾಮಿಯೆಂದೂ, ಮುನಿಗಳೆಂದು ತಿಳಿದಿರುವ ದೇವತೆಗಳು ಎಂಪೆರುಮಾನರನ್ನು ನಿರಂತರವಾಗಿ ಹಿಂಬಾಲಿಸಿ, ಶರಣಾಗತರಾಗಿ, ಪದೇಪದೇ ಹೊಗಳಿ ಹೇಳುತ್ತಾರೆ, “ವೈರಿಗಳಿಂದ ಪರಿಣಮಿಸಿದ ದುಃಖಗಳನ್ನು ತೊಡೆದು ಹಾಕಿ ಈ ದಿವ್ಯಕ್ಷೇತ್ರಕ್ಕೆ ಬಂದು ನಮ್ಮನ್ನು ರಕ್ಷಿಸು. “ ಎಂದು. ಅಂತಹ ಎಂಪೆರುಮಾನರು ಈಗ ತಿರುಮೋಗೂರ್ ನಲ್ಲಿದ್ದಾರೆ. ಓಹ್! ಶರಣಾಗತರಾಗಲು ಇಚ್ಛೆಯುಳ್ಳವರೇ ! ಬನ್ನಿ, ಅವನ ದಿವ್ಯ ಪಾದಗಳನ್ನು ಹೊಗಳಿ ಕೊಂಡಾಡೋಣ.

ಐದನೆಯ ಪಾಸುರಮ್ :
ಆಳ್ವರರು ಹೇಳುತ್ತಾರೆ, “ ಎಂಪೆರುಮಾನರು ಕರುಣೆಯಿಂದ ಆಗಮಿಸಿ, ನೆಲೆಸಿರುವ ತಿರುಮೋಗೂರಿಗೆ ಬಂದು ಶರಣಾಗತರಾಗಿ.”

ತೊಣ್ಡೀರ್ ವಮ್ಮಿನ್ ನಮ್ ಶುಡರೊಳಿ ಒರುತನಿಮುದಲ್ವನ್,
ಅಣ್ಡಮೂವುಲಗಳನ್ದವನ್ ಅಣಿ ತಿರುಮೋಗೂರ್,
ಎಣ್ಡಿಶೈಯುಮ್ ಈನ್ ಕರುಮ್ಬೊಡು ಪೆರುಮ್ ಶೆನ್ನೆಲ್ ವಿಳೈಯ,
ಕೊಣ್ಡ ಕೋಯಿಲೈ ವಲಮ್ ಶೆಯ್‍ದು ಇಙ್ಗಾಡುದುಮ್ ಕೂತ್ತೇ ॥

ಓಹ್! ಶರಣಾಗತರಾಗಲು ಇಚ್ಛಿಸುವವರೇ! ಬನ್ನಿ ! ಆನಂದಮಯವಾದ , ಅಪರಿಮಿತವಾಗಿ ಹೊಳೆಯುವ ದಿವ್ಯ ಪ್ರಕಾಶತೆಯುಳ್ಳ ರೂಪವನ್ನು ಹೊಂದಿರುವ ಎಂಪೆರುಮಾನರು, ಮೂರು ರೀತಿಯ ಕಾರಣಕರ್ತೃವಾಗಿದ್ದಾರೆ. ಅವು : ಸಮರ್ಥತೆಯ ಕಾರಣಕರ್ತೃ, ಲೌಕಿಕ ಕಾರಣಕರ್ತೃ, ಮತ್ತು ಪೂರಕ ಕಾರಣಕರ್ತೃ. ಅವರು ಅಂಡಾಕಾರದ ವಿಶ್ವಮಂಡಲದಲ್ಲಿರುವ ಮೂರು ಪದರದ ಲೋಕಗಳನ್ನೆಲ್ಲಾ ಅಳೆದು, ಸ್ವೀಕರಿಸಿದ್ದಾರೆ. ಸಿಹಿಯಾದ ಕಬ್ಬುಗಳಿರುವ , ಎತ್ತರದ ಕೆಂಪಾದ ಭತ್ತದ ಗದ್ದೆಗಳು ಎಲ್ಲಾ ದಿಕ್ಕಿನಲ್ಲಿರುವ ತಿರುಮೋಗೂರಿನ ಗುಡಿಯಲ್ಲಿ ವಾಸಿಸಲು ಒಪ್ಪಿಕೊಂಡಿದ್ದಾರೆ. ಈ ಲೋಕದಲ್ಲಿಯೇ ಇರುವ ಅಂತಹ ದೇವಸ್ಥಾನಕ್ಕೆ ಪ್ರದಕ್ಷಿಣೆಯನ್ನು ಹಾಕಿ, ಅತಿಯಾದ ಪ್ರೇಮದಿಂದ ಹಾಡಿ, ಆಡೋಣ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಎಂಪೆರುಮಾನರಿಗಿಂತಲೂ ನಂಬಿಕೆಗೆ ಅರ್ಹವಾದ, ರಕ್ಷಿಸುವ ದೇವರು ಎಲ್ಲೂ ಇಲ್ಲ. ಆದ್ದರಿಂದ ಅಂತಹ ದಿವ್ಯ ಪಾದಗಳಿಗೆ ಶರಣಾಗತರಾಗೋಣ.”

ಕೂತ್ತನ್ ಕೋವಲನ್ ಕುದಱ್ಱು ವಲ್ ಅಶುರರ್ಗಳ್ ಕೂಟ್ಱಮ್,
ಏತ್ತುಮ್ ನಙ್ಗಟ್ಕುಮ್ ಅಮರರ್ಕ್ಕುಮ್ ಮುನಿವರ್ಕ್ಕುಮ್ ಇನ್ಬನ್,
ವಾಯ್‍ತ್ತ ತಣ್ ಪಣೈ ವಳವಯಲ್ ಶೂೞ್ ತಿರುಮೋಗೂರ್,
ಆತ್ತನ್, ತಾಮರೈ ಅಡಿಯೆನ್‍ಱಿ ಮಱ್ಱಿಲಮ್ ಅರಣೇ ॥


ಎಂಪೆರುಮಾನರಿಗೆ ನೃತ್ಯದಲ್ಲಿ ಪರಿಣಿತರಾಗಿರುವವರಂತೆ ಸುಂದರವಾದ ನಡಿಗೆಯಿದೆ. ತಮ್ಮ ರಕ್ಷಣೆಯ ಅವಶ್ಯಕತೆ ಇರುವವರನ್ನು ಹಿಂಬಾಲಿಸಿ, ರಕ್ಷಿಸುತ್ತಾರೆ. ಅವರು ಕೇಶಿ, ಧೇನುಕ ಮುಂತಾದ ಬಲಶಾಲಿಯಾದ ಅಸುರರಿಗೆ ಮೃತ್ಯು ರೂಪವಾಗಿದ್ದಾರೆ. ಆ ಅಸುರರು ಕಡಿದು ಎಲ್ಲರಿಗೂ ತೊಂದರೆಯನ್ನುಂಟು ಮಾಡಿದ್ದರು. ಎಂಪೆರುಮಾನರನ್ನು ಹೊಗಳಿ, ಕೈಂಕರ್‍ಯವನ್ನು ಬಿಟ್ಟು ಬೇರೆ ಏನೂ ಅಪೇಕ್ಷೆಯಿಲ್ಲದ ನಮಗೆ, ನಿತ್ಯಸೂರಿಗಳಿಗೆ ಮತ್ತು ಮುನಿಗಳಿಗೆ ಅವರು ಆನಂದವನ್ನು ಕೊಡುತ್ತಾರೆ. ನಮಗೆ ಕೊನೆಯವರೆಗೂ ಆನಂದ ಕೊಡಬಲ್ಲ ಅತ್ಯಂತ ನಂಬಿಕೆಗೆ ಅರ್ಹವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಬಿಟ್ಟರೆ ಯಾವ ರಕ್ಷಣೆಯೂ ಇಲ್ಲ. ಅವರು ತಣ್ಣಗಿನ ನೀರಿನ ತಾಣಗಳಿಂದ ಮತ್ತು ಸುಂದರವಾದ ತೋಟಗಳಿಂದ ಆವರಿಸಲ್ಪಟ್ಟ ತಿರುಮೋಗೂರಿನಲ್ಲಿ ಭಕ್ತರು ಶರಣಾಗುವುದಕ್ಕಾಗಿಯೇ ನೆಲೆಸಿದ್ದಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ನಾವು ಎಂಪೆರುಮಾನರ ವಾಸಸ್ಥಳವಾದ ತಿರುಮೋಗೂರನ್ನು ಪ್ರವೇಶಿಸುತ್ತಿದ್ದಂತೆ , ನಮ್ಮ ಎಲ್ಲಾ ಸಂಕಷ್ಟಗಳೂ ತಕ್ಷಣ ನಷ್ಟವಾಗುತ್ತದೆ. ಏಕೆಂದರೆ ಎಂಪೆರುಮಾನರು ಎಲ್ಲದಕ್ಕೂ ಕಾರಣವಾದವರು, ಅವರು ನಮ್ಮನ್ನು ರಕ್ಷಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ.”

ಮಱ್ಱಿಲಮ್ ಅರಣ್ ವಾನ್ ಪೆರುಮ್ ಪಾೞ್ ತನಿಮುದಲಾ,
ಶುಱ್ಱುಮ್ ನೀರ್‌ಪಡೈತ್ತು ಅದನ್‍ವೞಿ ತ್ತೊಲ್ ಮುನಿ ಮುದಲಾ,
ಮುಱ್ಱುಮ್ ದೇವರೋಡು ಉಲಗು ಶೆಯ್ವಾನ್ ತಿರುಮೋಗೂರ್,
ಶುಱ್ಱಿ ನಾಮ್ ವಲಮ್ ಶೆಯ್ಯ ನಮ್ ತುಯರ್ ಕೆಡುಮ್ ಕಡಿದೇ ॥

ಎಂಪೆರುಮಾನರಿಗೆ ತಮ್ಮದೇ ಆದ ವಿಶಿಷ್ಟತೆ ಇದೆ. ಅವರು ಪರಮ ಶ್ರೇಷ್ಠತೆ ಹೊಂದಿರುವವರು ಮತ್ತು ಲೌಕಿಕ ಮಾಯೆಯ ಎಲ್ಲಾ ಪರಿಣಾಮಗಳನ್ನು , ಮೂಲಾಧಾರ ವಸ್ತುಗಳನ್ನೂ ಸರದಿಯಂತೆ, ಎಲ್ಲಾ ಕಡೆಗೂ ವ್ಯಾಪಿಸಿರುವ ಸಾಧಾರಣ ನೀರನ್ನೂ ಸೃಷ್ಟಿಸಿರುತ್ತಾರೆ. ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸುವ ಬ್ರಹ್ಮನನ್ನೂ, ಇತರೆ ದೇವತೆಗಳನ್ನೂ ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಾನೆ. ಅಂತಹ ಎಂಪೆರುಮಾನರು ವಾಸಿಸುವ ತಿರುಮೋಗೂರಿನ ಗುಡಿಯನ್ನು ಪ್ರದಕ್ಷಿಣೆ ಮಾಡಿದರೆ, ನಮ್ಮ ಒಂಟಿತನವು ದೂರವಾಗಿ ನಮ್ಮ ಕಷ್ಟಗಳು ನಾಶವಾಗುತ್ತವೆ. ಆದ್ದರಿಂದ ನಮಗೆ ತಿರುಮೋಗೂರಿನ ಎಂಪೆರುಮಾನರನ್ನು ಬಿಟ್ಟರೆ ಬೇರೆ ಯಾವ ರಕ್ಷಣೆಯೂ ಇಲ್ಲ.

ಎಂಟನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ತಿರುಮೋಗೂರಿನಲ್ಲಿ ಕರುಣೆಯಿಂದ ನಿಂತಿರುವ ಬಲಶಾಲಿಯಾದ ಪರಮಪುರುಷನಾದ ದಶರಥನ ಮಗನಿಗೆ ಶರಣಾದರೆ, ನಮ್ಮ ಶೋಕ , ವ್ಯಸನಗಳೆಲ್ಲವೂ ಪರಿಹಾರವಾಗುತ್ತದೆ.”

ತುಯರ್ ಕೆಡುಮ್ ಕಡಿದಡೈನ್ದುವನ್ದು ಅಡಿಯವರ್ ತೊೞುಮಿನ್,
ಉಯರ್ ಕೊಳ್ ಶೋಲೈ, ಒಣ್ ತಡಮಣಿ ಒಳಿ ತಿರುಮೋಗೂರ್,
ಪೆಯ‍‌ರ್ಗಳಾಯಿರಮುಡೈಯ ವಲ್ ಅರಕ್ಕರ್ ಪುಕ್ಕೞುನ್ದ,
ದಯರದನ್ ಪೆಱ್ಱ ಮರತಕಮಣಿ ತ್ತಡತ್ತಿನೈಯೇ॥


ಎತ್ತರದ ಮರಗಳನ್ನು ಹೊಂದಿರುವ ಮತ್ತು ವಿಶಿಷ್ಟವಾದ ನೀರಿನ ಕೆರೆಗಳಿಂದ ಅಲಂಕೃತವಾದ , ಅದರಿಂದ ಹೊಳೆಯುತ್ತಿರುವ ತಿರುಮೋಗೂರಿನಲ್ಲಿ ನಿಂತಿರುವ ದಶರಥ ಪುತ್ರನಾದ ಎಂಪೆರುಮಾನರು ಎಲ್ಲವನ್ನೂ ಮುಳುಗಿಸಬಲ್ಲ ಕೆರೆಯ ಹಾಗೆ, ಅಮೂಲ್ಯವಾದ ಪಚ್ಚೆಯ ಹರಳಿನ ಬಣ್ಣದಿಂದ ಹೊಳೆಯುತ್ತಿದ್ದಾರೆ. ಅನೇಕ ಬಿರುದುಗಳನ್ನು ಪಡೆದ ಬಲಶಾಲಿಯಾದ ರಾಕ್ಷಸರನ್ನು ಅದರಲ್ಲಿ ಮುಳುಗಿಸಲು ಸಮರ್ಥರಾಗಿದ್ದಾರೆ. ಶ್ರೀ ರಾಮಾಯಣಮ್‍ನ ಕಿಶ್ಕಿಂಧಾ ಕಾಂಡಮ್ 4.12 ನಲ್ಲಿ ಹೇಳಿರುವ ಹಾಗೆ, ‘ಗುಣೈರ್ದಾಸ್ಯಮ್ ಉಪಾಗತಃ’ ನೀವೆಲ್ಲರೂ ಇಲ್ಲಿಗೆ ಬಂದು ಅವನನ್ನು ಪೂಜಿಸಿ. ನಿಮ್ಮ ವ್ಯಸನಗಳೆಲ್ಲವೂ ನಿಮ್ಮ ಪ್ರಯತ್ನವಿಲ್ಲದೇ ನಾಶವಾಗುವುದು. ಮರತಗ ಮಣಿಯ ಉದಾಹರಣೆಗೆ ಅರ್ಥವೇನೆಂದರೆ, ಮರತಗ ಮಣಿಯು ವಿಷವನ್ನು ನಿರ್ಮೂಲನೆ ಮಾಡುವುದರ ಜೊತಗೆ ಒಂದು ಒಡವೆಯ (ನಗದ) ರೂಪದಲ್ಲೂ ಧರಿಸುತ್ತಾರೆ. ಹಾಗೆಯೇ ಎಂಪೆರುಮಾನರು ವೈರಿಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ , ಭಕ್ತರಿಗೆ ಆಶ್ರಯವಾಗಿಯೂ ಇರುತ್ತಾರೆ.

ಒಂಬತ್ತನೆಯ ಪಾಸುರಮ್:
ಆಳ್ವಾರರು ತಮ್ಮ ರಕ್ಷಣೆಗಾಗಿ ತಿರುಮೋಗೂರಿಗೆ ಬಂದಿದ್ದರಿಂದ ಆದ ಪ್ರಯೋಜನವನ್ನು ಇಲ್ಲಿ ಹೇಳಿದ್ದಾರೆ.

ಮಣಿ ತ್ತಡತ್ತಡಿ ಮಲರ್ ಕಣ್‍ಗಳ್ ಪವಳ ಚ್ಚೆವ್ವಾಯ್,
ಅಣಿಕ್ಕೊಳ್ ನಾಲ್ ತಡನ್ದೋಳ್ ದೆಯ್‍ವಮ್ ಅಶುರರೈ ಎನ್‍ಱುಮ್,
ತುಣಿಕ್ಕುಮ್ ವಲ್ಲರಟ್ಟನ್ ಉಱೈ ಪೊೞಿಲ್ ತಿರುಮೋಗೂರ್,
ನಣಿತ್ತು ನಮ್ಮುಡೈ ನಲ್ಲರಣ್ ನಾಮ್ ಅಡೈನ್ದನಮೇ ॥

ಕಾಳಮೇಗ ಎಂಪೆರುಮಾನರ ದಿವ್ಯ ರೂಪವು ಸ್ವಚ್ಛವಾದ ನೀರಿನ ಕೊಳದಂತಿರುವ. ದಿವ್ಯ ಪಾದಗಳನ್ನು ಹೊಂದಿದ್ದಾರೆ. ಈಗ ತಾನೇ ಅರಳಿರುವ ಹೊಸ ತಾವರೆಯ ಹೂವಿನಂತಹ ದಿವ್ಯ ಕಣ್ಣುಗಳಿವೆ. ಕೆಂಪಾದ ಹವಳದಂತಿರುವ ದಿವ್ಯ ತುಟಿಗಳು , ನಾಲ್ಕು ದೊಡ್ಡ ದಿವ್ಯ ತೋಳುಗಳು, ಅವುಗಳನ್ನು ಎಲ್ಲಾ ರೀತಿಯ ಆಭರಣಗಳನ್ನು ಹಾಕಿ ಅಲಂಕರಿಸಲು ಯೋಗ್ಯವಾಗಿದೆ. ಅವರು ಬಹಳ ಹೆಮ್ಮೆಯಿಂದ, ಬಲಶಾಲಿಯಾಗಿದ್ದು, ರಾಕ್ಷಸರನ್ನು ಕತ್ತರಿಸುವರು. ಅಂತಹ ಎಂಪೆರುಮಾನರು ಆನಂದಮಯವಾದ ತೋಟಗಳನ್ನು ಹೊಂದಿರುವ ತಿರುಮೋಗೂರಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಂತಹ ತಿರುಮೋಗೂರ್ ವಿಶಿಷ್ಟವಾದ ರಕ್ಷಣೆಯನ್ನು ನೀಡುವ ನೆಲೆಯಾಗಿದ್ದು, ಈಗ ಬಹಳ ಹತ್ತಿರದಲ್ಲಿದೆ. ನಾವು ಇಲ್ಲಿಗೆ ಬಂದು ತಲುಪಿದ್ದೇವೆ.

ಹತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ (ಅಗಾಧ ಜನಸಮೂಹಕ್ಕೆ) “ಓಹ್! ನನಗೆ ಸಂಬಂಧಿಸಿರುವ ಜನಗಳೇ! ಸರ್ವರಕ್ಷಕನು ಕರುಣೆಯಿಂದ ನೆಲೆಸಿರುವ ತಿರುಮೋಗೂರಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಿ. ಅದನ್ನು ಹೊಗಳಿ, ಜ್ಞಾಪಿಸಿಕೊಳ್ಳಿ.”

ನಾಮ್ ಅಡೈನ್ದ ನಲ್ಲರಣ್ ನಮಕ್ಕೆನ್‍ಱು ನಲ್‍ ಅಮರರ್,
ತೀಮೈ ಶೆಯ್ಯುಮ್ ವಲ್ ಅಶುರರೈ ಅಞ್ಜಿ ಚ್ಚೆನ್‍ಱಡೈನ್ದಾಲ್,
ಕಾಮರೂಪಮ್‍ಕೊಣ್ಡು ಎೞುನ್ದಳಿಪ್ಪಾನ್ ತಿರುಮೋಗೂರ್,
ನಾಮಮೇ ನವಿನ್‍ಱೆಣ್ಣುಮಿನ್ ಏತ್ತುಮಿನ್ ನಮರ್ಗಾಳ್ ॥


ತಿರುಮೋಗೂರಿನ ಮಹತ್ವದ ಬಗ್ಗೆ ತಿಳಿದ ದೇವತೆಗಳು, ಅಸುರರಿಂದ ಭಯಭೀತರಾದರು. ಅಸುರರು ಕೆಟ್ಟ ಕೃತ್ಯದಲ್ಲಿ ಪಾಲ್ಗೊಂಡು , ನಂತರ ಎಂಪೆರುಮಾನರಲ್ಲಿ ಆಶ್ರಯ ಪಡೆದರೆ, ‘ಎಂಪೆರುಮಾನರು ನಮಗಾಗಿ ಪ್ರತ್ಯೇಕ ಮತ್ತು ವಿಶಿಷ್ಟ ರಕ್ಷಕ , ಅವನಿಗೆ ನಾವು ಶರಣು ಹೊಂದುತ್ತೇವೆ’ ಎಂದು ಹೇಳಿದರೆ, ಅವನು ಸಡಗರದಿಂದ , ಅವರಿಗೆ ಸರಿಯಾದ , ಅವರು ಆಸೆಪಟ್ಟ ರೀತಿಯಲ್ಲಿ ಅವರನ್ನು ಕಾಪಾಡುತ್ತಾನೆ. ಓಹ್ ಜನಗಳೇ! ಪ್ರಸಿದ್ಧವಾದ ತಿರುಮೋಗೂರಿನ ಬಗ್ಗೆ ಮಾತನಾಡಿ ಮತ್ತು ಯೋಚಿಸಿ.. ಅದು ಅಂತಹ ವಿಶಿಷ್ಟವಾದ ಎಂಪೆರುಮಾನರ ವಾಸಸ್ಥಳವಾಗಿದೆ. ಅದನ್ನು ಪ್ರೀತಿಯಿಂದ ಹೊಗಳಿ.
ಕಾಮ ರೂಪಮ್ ಎಂಬುದು ದೇವತೆಗಳಿಗೆ ಅಮೃತವನ್ನು ಕೊಡಲು ಎಂಪೆರುಮಾನರು ಧರಿಸಿದ ಸ್ತ್ರೀ ರೂಪವಾದ ಮೋಹಿನಿ ಅವತಾರವೆಂದೂ ಆಗುತ್ತದೆ.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ತಿರುಮೋಗೂರಿಗೆ ಸಮರ್ಪಿತವಾದ ಈ ಪದಿಗೆಯನ್ನು ಮೆಚ್ಚಿ ಹಾಡುತ್ತಾರೋ, ಅವರ ಎಲ್ಲಾ ದುಃಖಗಳೂ ದೂರವಾಗುತ್ತದೆ.”

ಏತ್ತುಮಿನ್ ನಮರ್ಗಾಳ್ ಎನ್‍ಱು ತಾನ್ ಕುಡಮಾಡು,
ಕೂತ್ತನೈ , ಕುರುಗೂರ್ ಚ್ಚಡಗೋಪನ್ ಕುಱ್ಱೇವಲ್‍ಗಳ್,
ವಾಯ್‍ತ್ತ ಆಯಿರತ್ತುಳ್ ಇವೈ ವಣ್ ತಿರುಮೋಗೂರ್‌ಕ್ಕು,
ಈತ್ತ ಪತ್ತಿವೈ ಏತ್ತವಲ್ಲಾರ್ಕ್ಕು ಇಡರ್ ಕೆಡುಮೇ ॥

ನಮ್ಮಾಳ್ವಾರರು ಆಳ್ವಾರ್ ತಿರುನಗರಿಗೆ ನಾಯಕರಾದವರು. ಅವರು ಸಾವಿರ ಪಾಸುರಗಳನ್ನು ನೃತ್ಯಗಾರನಿಗೆ ಗುಪ್ತ ಸೇವೆಯ ಮೂಲಕ ಸಮರ್ಪಿಸಿದರು. ಆ ನೃತ್ಯಗಾರನು “ಯಾರು ನನಗೆ ಸಂಬಂಧಿಸಿದವರೋ ಅವರು ನನ್ನನ್ನು ಹೊಗಳಿ” ಎಂದು ಮಡಿಕೆಗಳ ಜೊತೆಗೆ ನರ್ತಿಸಿದರು. ಆ ಸಾವಿರ ಪಾಸುರಗಳಲ್ಲಿ ಈ ಹತ್ತು ಪಾಸುರಗಳನ್ನು ವಿಶಿಷ್ಟವಾದ ತಿರುಮೋಗೂರಿಗೆ ಅರ್ಪಿಸಲಾಗಿದೆ. ಯಾರು ಈ ಹತ್ತು ಪಾಸುರಗಳನ್ನು ಪ್ರೀತಿಯಿಂದ ಹಾಡುತ್ತಾರೋ, ಅವರ ಕಷ್ಟಗಳು ನಿರ್ಮೂಲನೆಯಾಗುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-10-1-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

కోయిల్ తిరువాయ్మొళి – సరళ వ్యాఖ్యానము – 4.10 – ఒన్ఱుం

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

కోయిల్ తిరువాయ్మొళి

<< 4.1 – ఒరునాయగమాయ్

శ్రియః పతి అయిన సర్వశ్వరుడు ఆత్మల పట్ల గొప్ప దయతో, అర్చావతార రూపాల్లో ఈ భూమిపైకి దిగి వచ్చి వారి కోసం ఎదురుచూస్తున్నారు, కాని ఈ ఆత్మలు ఆయనచే నియమించబడిన దేవతల దగ్గరకు వెళుతున్నారు. అది చూసిన ఆళ్వారు భగవానుడి ఆధిపత్యాన్ని వారికి వివరించి, వాళ్ళని సంస్కరించి ఆనందాన్ని అనుభవిస్తున్నారు. ఈ పదిగములో అర్చావతారము రూపము‌లో ఉన్న భగవానుడి యొక్క ఆధిపత్యాన్ని ఆళ్వారు వెల్లడించారు. ఈ దివ్య దేశము ఆళ్వారు జన్మస్థలం కాబట్టి, ఇక్కడ ఉన్న ఎంబెరుమానుడిపై ఆయనకున్న ప్రత్యేక అనుబంధం కూడా తెలుపుతున్నారు.

మొదటి పాశురము:  “ఎంబెరుమాన్ యొక్క సరళ స్వభావాన్ని స్థాపించే వచనాలను పలుకుతూ, అతి సరళుడైన సర్వేశ్వరుడు ఇక్కడ ఉండగా, మీరు ఇతర దేవతలను వెతుకుతున్నారు? అని  భౌతిక వాసులను ఆళ్వారు ప్రశ్నిస్తున్నారు.

ఒన్ఱుం తేవుం ఉలగుం ఉయిరుం మఱ్ఱుం యాదుం ఇల్లా
అన్ఱు నాన్ముగన్‌ తన్నొడు దేవర్‌ ఉలగోడుయిర్‌ పడైత్తాన్
కున్ఱం పోల్‌ మణి మాడ నీడు తిరుక్కురుగూర్‌ అదనుళ్
నిన్ఱ ఆదిప్పిరాన్ నిఱ్క మఱ్ఱై త్తెయ్వం నాడుదిరే

దేవ గంధర్వులను, వాళ్ళ లోకాలను, ఇతర జాతులను, సమస్థ అస్థిత్వాలను ప్రళయ కాలములో నాశనం చేసి, భగవానుడిలో ఇమిడ్చ బడి ఉన్నప్పుడు, సమష్ఠి పురుష అని పిలువబడే బ్రహ్మను భగవాన్ సృష్టించాడు, దేవతలను వాళ్ళ లోకాలను సృష్థించాడు, ఇతర భిన్న విభిన్న జాతులను సృష్థించాడు; సర్వకారకుడు, మహోపకారి అయిన అటువంటి ఎంబెరుమాన్, పర్వతాలంత ఎత్తైన గోపురాలున్న ఆళ్వార్తిరునగరిలో కొలువై ఉండగా, మీరు సృష్టి లయలలో కొట్టుమిట్టాడుతున్న ఈ దేవతల దగ్గరకు వెళుతున్నారు.

రెండవ పాశురము:  భగవానుడి చేత సృష్టింపబడిన వారితో ఆళ్వారు ఇలా అంటాడు, “భగవత్ సృష్టి విషయానికి వస్తే మీరు, మీరు పూజించే దేవతలు ఒకటే; అందువల్ల, మీరు తిరునగరిని ఆశ్రయించండి, అక్కడ నిత్య సంపదగా సర్వేశ్వరుడు కృపతో మీకోసము వెలసి ఉన్నాడు”.

నాడి నీర్‌ వణంగుం దెయ్వముం ఉమ్మైయుం మున్ పడైత్తాన్
వీడిల్‌ శీర్‌ ప్పుగళ్‌ ఆదిప్పిరాన్ అవన్ మేవి ఉఱై కోయిల్
మాడ మాళిగై శూళ్‌ందళగాయ తిరుక్కురుగూర్‌ అదనై
ప్పాడియాడి ప్పరవి చ్చెన్మింగళ్ పల్లులగీర్‌  పరందే

సృష్టి ఆదిలో నిన్ను, నీవు ఆశ్రయిస్తున్న దేవతలను సృష్టించి, మొట్ట మొదటి పోషకత్వం వహించినవాడు సర్వేశ్వరుడు. ఔన్నత్యము, జ్ఞానము, శక్తి వంటి నిత్య మంగళ గుణాలతో కూడినవాడు అతడు. అటువంటి భగవానుడు గొప్ప రాజభవనాలు, గోపురాలు చుట్టూ వ్యాపించి అందంగా ఉన్న దివ్య తిరునగరిలో స్థిరంగా కొలువై ఉన్నాడు; ఓ! వివిధ లోకాలలో నివసిస్తున్న వారా! మీరు అతడిని అన్ని వేళలా అన్ని చోట్లా స్తుతించండి, పాడండి, ఆడండి.

మూడవ పాశురము:  “ఈ విశ్వం యొక్క రక్షణ మొదలైనవి ఒకే కారణం యొక్క ఫలితము, ఇది అత్యోన్నత ప్రభువు యొక్క ఆధిపత్యాన్ని తెలుపుతుంది” అని ఆళ్వారు వివరిస్తున్నారు.

పరంద దెయ్వముం పల్లులగుం పడైత్తు అన్ఱుడనే విళుంగి
క్కరందుమిళ్ందు కడందిడందదు కండుం తెళియగిల్లీర్‌
శిరంగళాల్‌ అమరర్‌ వణంగుం తిరుక్కురుగూర్‌ అదనుళ్
పరన్ తిఱం అన్ఱి ప్పల్లులగీర్‌ ! దెయ్వమ్‌ మఱ్ఱిల్లై పేశుమినే

అనేక దేవతలను, వాళ్ళకి విస్తారమైన అనేక లోకాలు సృష్టించి, ప్రళయ కాలములో ఆ లోకాలన్నింటినీ తాను మ్రింగి తనలో దాచిపెట్టుకొని, ప్రళయము తరువాత వాటిని తనలో నుంచి బయటికి ఉమ్మి వాటికి స్థానమిచ్చి, వాటిని సంరక్షించాడు సర్వేశ్వరుడు అని తెలుసుకున్న తరువాత కూడా మీకు స్పష్టత రాలేదు. తిరునగరి భగవానుడి ప్రాకారం (స్వరూపము) లో భాగము కాని స్వతంత్ర దేవతలు ఎవరూ లేరు;  సమస్థ దేవతలు నమస్కరించి పూజించబడుతున్న వాడతడు; ఓ! అనేక దివ్య లోక వాసులారా! అలాంటి దైవము ఇంకెవరైనా ఉంటే చెప్పండి.

నాలుగవ పాశురము:  “దేవతాంతరములకి ప్రభువు, నిష్కల్మషమైన వేదములను వెల్లడి చేసినవాడు, సర్వేశ్వరుడు అయిన భగవానుడి అత్యోన్నత ఆధిపత్య గుణాన్ని తిరస్కరించే నైయైయికులకి ఏమి ఫలితము దొరుకును?  అని ఆళ్వారు అడుగుతున్నారు.

పేశ నిన్ఱ శివనుక్కుం పిరమన్‌ తనక్కుం పిఱర్‌క్కుం
నాయగన్ అవనే కబాలనన్ మోక్కత్తు క్కండు కొణ్మిన్
తేశ మా మదిళ్‌ శూళ్‌ందళగాయ తిరుక్కురుగూర్‌ అదనుళ్
ఈశన్ పాల్‌ ఓర్‌ అవం పఱైదల్ ఎన్నావదు ఇలింగియర్‌క్కే

రుద్రుడికి, బ్రహ్మకి, ఇతర దేవతలకి ఏకైక  ప్రభువు సర్వేశ్వరుడు (శ్రీమన్నారాయణుడు);  రుద్రుని చేతిలో నుండి కపాలము ఎలా మాయము చేయబడిందో మీరు మహాభారతంలో చూడవచ్చు; సర్వేశ్వరుడు దేవుడు కాడని అల్పంగా భోదించే  లింగ పురణము మొదలైనవాటిని ప్రమాణముగా భావించే అనుమానికులకు వచ్చే ప్రయోజనం ఏమిటి? గొప్ప కోటలు చుట్టూ వ్యపించి ఉన్న తిరునగరిలో అందమైన దివ్య తేజస్సుతో విరాజిల్లి ఉన్న భగవానుడు  సహజంగానే అందరికీ దేవుడు.

ఐదవ పాశురము:  బాహ్యా కుదృష్టులను తిరస్కరించిన ఆళ్వారు, “తిరునగరిలో కొలువై ఉన్న ఎంబెరుమాన్ అందరి కంటే ఉన్నతమైనవాడు” అని చెబుతున్నారు.

ఇలింగత్తిట్ట పురాణత్తీరుం శమణరుం శాక్కియరుం
వలిందు వాదు శెయ్వీర్గళుం మఱ్ఱు నుం దెయ్వముం ఆగి నిన్ఱాన్
మలిందు శెన్నెల్‌ కవరి వీశుం తిరుక్కురుగూర్‌ అదనుళ్‌
పాలిందు నిన్ఱ పిరాన్ కండీర్‌ ఒన్ఱుం‌ పాయ్యిల్లై పోఱ్ఱుమినే

ఓ తామస పురాణాలను అనుసరించి నమ్మే కుదృష్ఠులారా ! ఓ జైనులారా! ఓ బౌద్దులారా! ఓ వైశేషికులారా! వితండ వాదనలు చేసేవారా! మీరు పొందాలను కొని లక్ష్యముగా పెట్టుకొన్న ఆ భిన్న భిన దేవతలు ఎంబెరుమానుడికి పరతంత్రులు. సమృద్ధిగా ఉన్నలేతా వరి పంటలు ఇటు అటు ఊగులాడుతూ వింజామర వీస్తున్నట్టున్న ఆ తిరునగరిలో కొలువై ఉన్న సర్వేశ్వరుడిని మీరందరూ స్తుతించండి. ఇలా అనుకోవడంలో ఎటువంటి అబద్ధము లేదు.

ఆరవ పాశురము:  “మనకు తెలియకుండా కర్మాధారంగా ఈ భౌతిక జగత్తును ఎలా ఏలుతున్నాడు అన్నది ఎంబెరుమాన్ యొక్క నైపుణ్యతను తెలుపుతుంది”. అని ఆళ్వారు వివరిస్తున్నారు.

పోఱ్ఱి మఱ్ఱోర్ దెయ్వం పేణప్పుఱత్తిట్టు ఉమ్మైయిన్నే
తేఱ్ఱి వైత్తదు ఎల్లీరుం వీడు పెఱ్ఱాల్‌ ఉలగిల్లై ఎన్ఱే
శేఱ్ఱిల్‌ శెన్నెల్‌ కమలం ఓంగు తిరుక్కురుగూర్‌ అదనుళ్‌
ఆఱ్ఱ వల్లవన్ మాయం కండీర్ అదఱిందఱిందోడుమినే

ఈ విధంగా మిమ్మల్ని తన నుండి దూరంగా ఉంచి, దేవతాంతరములను స్తుతించి సేవించేలా చేయడంలో పరమార్థము ఏమిటంటే ప్రతి ఒక్కరూ ముక్తిని పొంది మోక్షాన్ని చేరుకున్నట్లయితే, ఈ ప్రపంచంలోని నిషేధాలు / ఆజ్ఞలు మటుమాయమౌతాయి. ఈ కారణంగా – లేత తామర పుష్పముల మడుగులతో, పుష్కలమైన వరి సంపదతో వర్ధిల్లుతున్న ఆళ్వార్తిరునగరిలో నివాసుడై ఉన్న ఎంబెరుమాన్, వారి కర్మ ఫలితాలను అనుభవింపజేయుటలో మహా సామర్థ్యం కలిగి ఉన్నవాడు – అటువంటి ఎంబెరుమానుడికి ఈ ప్రకృతితో (ఈ భౌతిక ప్రపంచము) ఉన్న సంబంధాన్ని ‘మాయ’ అని పిలుస్తారు; ఆ మాయ గురించి జ్ఞానాన్ని సంపాదించుకొని ఈ భౌతిక ప్రపంచాన్ని దాటడానికి ప్రయత్నించండి.

ఏడవ పాశురము:  “అన్య దేవతల నుండి నీవు ఇప్పటి వరకు ఏది పొందావో అది మాత్రమే పొందగలవు; కాబట్టి, గరుడ ధ్వజము కలిగి ఉన్న సర్వకారకుడికి దాసుడిగా మారు” అని ఆళ్వారు వివరిస్తున్నారు.

ఓడియోడి ప్పల పిఱప్పుం పిఱందు మఱ్ఱోర్ దెయ్వం
పాడియాడి పణిందు పల్పడిగాల్‌ వళి ఏఱి క్కండీర్‌
కూడి వానవర్‌ ఏత్త నిన్ఱ తిరుక్కురుగూర్‌ అదనుళ్
ఆడు పుట్కొడి ఆది మూర్‌త్తిక్కు అడిమై పుగువదువే

ఇతర దేవతలను స్తుతించి పాడుట ఆడుట, వాళ్ళని అనేక రకాలుగా ఆరాధించుట, శాస్త్ర విధంగా వాళ్ళని మరింతగా ఆశ్రయించడం, అనేక జన్మలనెత్తి పరుగులాడటం, ఇవన్నీ మీరు గమనించి సర్వకారకుడైన సర్వేశ్వరుడికి దాసులుకండి, సమస్థ దేవతలచే స్తుతింపబడుతూ గరుడ ధ్వజముతో ఆ ఆళ్వార్తిరునగరిలో కొలువై ఉన్న సర్వేశ్వరుడికి శరణు వేడుకొండి.

ఎనిమిదవ పాశురము:  “ఎంబెరుమాన్ అన్య దేవతలకు ఇచ్చిన శక్తి కారణంగా, వాళ్ళని ప్రార్థించిన వారి కోరికలు వాళ్ళు తీర్చగలుతారు. ఉదాహరణకి, నారాయణుడు ఇచ్చిన శక్తి సామర్థ్యముతో మార్కణ్డేయుని కోరికలను రుద్రుడు తీర్చగలిగాడు” అని ఆళ్వారు వివరిస్తున్నారు.

పుక్కడిమైయినాల్‌ తన్నై క్కండ మార్కణ్డేయన్ అవనై
నక్క పిరానుం అన్ఱుయ్య క్కొండదు  నారాయణన్ అరుళే
కొక్కలర్‌ తడంతాళై వెలి త్తిరుక్కురుగూర్‌ అదనుళ్
మిక్క ఆదిప్పిరాన్ నిఱ్క మఱ్ఱై త్తెయ్వం విళంబుదిరే

రుద్రుడు దిగంబరంగా ఉండుట వలన అతడిని ‘నగ్న’ అని పిలుస్తారు. తన పురాణము ద్వారా ప్రసిద్ది చెందిన మార్కణ్డేయుడిని ప్రళయం సమయంలో రక్షించగా, అతడి సేవకు మెచ్చి రుద్రుడు ప్రత్యక్షమై దర్శనమిచ్చి, నారాయణుని కృపతో మార్కణ్డేయుని ఉద్దరణకై భగవత్భక్తుడిగా చేసాడు. అందువల్ల, సర్వోన్నతుడు, సర్వకారకుడు అయిన నారాయణుడు పచ్చని ఆకులతో,  తెల్లని పూలతోటలలో కప్పి ఉన్న  ఆళ్వార్తిరునగరిలో కొలువై ఉన్నాడు.

తొమ్మిదవ పాశురము:  “మీరు రక్షింపబడాలంటే, బాహ్య కుదృష్థులు తమ వితండ వాదనలతో నాశనము చేయలేని, ఎంబెరుమాన్ కొలువై ఉన్న ఆళ్వార్తిరునగరిని ఆశ్రయించండి”. అని ఆళ్వారు వివరిస్తున్నారు.

విళంబుం ఆఱు శమయముం అవై యాగియుం మఱ్ఱుం తన్ పాల్
అళందు కాండఱ్కరియన్ ఆగియ ఆదిప్పిరాన్ అమరుం
వళం గొళ్‌ తణ్‌ పణై శూళ్ందళగాయ తిరుక్కురుగూర్‌ అదవై
ఉళం గొళ్ జ్ఞానత్తు వైమ్మిన్ ఉమ్మె ఉయ్యక్కొండు పోగుఱిలే

సర్వకారకుడు సర్వోపకారి అయిన ఎంబెరుమాన్, వేదాల్ని ధిక్కరించి తిరస్కరించే ఆ ఆరు తత్వశాస్త్రాల యొక్క సమిష్టి సమూహాల కుదృష్థులకు, తన విషయాలను చూసి గ్రహించడం కష్టకరంగా చేసే స్వభావము ఉంది. మీరు ఉద్ధరింపబడాలనుకుంటే, ఆకర్షణీయమైన నీటి వనరులతో వ్యాపించి ఉన్న  ఆళ్వార్తిరునగరిలో స్థిర నివాసమున్న భగవానుడిని మీ ఆంతరిక జ్ఞానంలో ఉంచుకోండి, మీ బాటను సులభకరం చేసుకోండి.

పదవ పాశురము: “శరీరి, అతిసులభుడు, తన లీలలతో అందరి హృదయాలను ఆకర్షంచే ఎంబెరుమానుడికి సేవ చేయడం సముచితము మరియు మన అదృష్థము కూడా” అని ఆళ్వారు వివరిస్తున్నారు.

ఉఱువదావదు ఎత్తేవుం ఎవ్వులగంగళుం మఱ్ఱుం తన్పాల్
మఱువిల్‌ మూర్‌త్తియోడొత్తు ఇత్తనైయుమ్‌ నిన్ఱ వణ్ణం నిఱ్కవే
శెఱువిల్‌ శెన్నెల్‌ కరుంబొడోంగు తిరుక్కురుగూర్‌ అదనుళ్
కుఱియ మాణ్‌ ఉరువాగియ నీళ్‌ కుడక్కూత్తనుక్కాట్చెయ్వదే

అన్ని వర్గాల దేవతలు, సమస్థ లోకాలు, చిదచిత్తులు, అన్నితత్వాలు అతడి స్వరూపంలోని భాగముగా ఎంబెరుమాన్ తన గుణాలను మరియు గుర్తింపుని కోల్పోకుండా వాళ్ళ స్వరూపాలకు ఒక ప్రత్యేక గుర్తింపు నిచ్చి నిలుచొని ఉన్నాడు; అతడు సారవంతమైన భూములతో ఎత్తైన చెరుకు పంటలు, వరి పంటలతో ఉన్న తిరుక్కురుగూర్లో కూడా కొలువై ఉన్నాడు.  బ్రహ్మచారిగా వామన రూపములో,  కుదక్కూత్తుని ప్రదర్శించిన కృష్ణుడిగా నిత్య ఆనందాన్నిచ్చే అటువంటి ఎంబెరుమానుడిని సేవించడం మన అదృష్థము. మనకి సముచితమైన పురుషార్థము కూడా.

పదకొండవ పాశురము: “ఈ పదిగం నేర్చుకున్న వారికి పరమపదము పొందుట అతి సులభమగును” అని ఆళ్వారు వివరిస్తున్నారు.

ఆట్చెయ్దు ఆళి ప్పిరానై చ్చేర్‌ందవన్ వణ్‌ కురుగూర్‌ నగరాన్
నాట్కమళ్‌ మగిళ్‌ మాలై మార్బినన్ మాఱన్ శడగోపన్
వేట్కైయాల్‌ శొన్న పాడల్ ఆయిరత్తుళ్‌ ఇప్పత్తుం వల్లార్
మీట్చి ఇన్ఱి వైగుంద మానగర్‌ మఱ్ఱదు కై యదువే

మహా విశిష్టత కలిగిన ఆళ్వార్తిరునగరికి నాయకుడైన ఆళ్వారుకి “శఠకోపుడు” అనే దివ్య నామము, “మారాన్” అనే ఇంటి పేరున్న ఆళ్వారు, చక్రధారి అయిన భగవానుడికి తన వాక్కు ద్వారా సేవలందించారు. వెయ్యి పాసురములలో ఈ పది పాసురములను పాట రూపంలో పాడారు. ఈ పది పాసురములను పఠించగలిగిన వారు, మరళా తిరిగి రాలేని దివ్య శ్రీవైకుంఠాన్ని చేరుకుంటారు.

అడియేన్ శ్రీదేవి రామానుజదాసి

మూలము:http://divyaprabandham.koyil.org/index.php/2020/05/thiruvaimozhi-4-10-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ತಿರುವಾಯ್ಮೊಮೊೞಿ – ಸರಳ ವಿವರಣೆ – 9.10 – ಮಾಲೈನಣ್ಣಿ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 8.10 – ನೆಡುಮಾಱ್ಕು


ಆಳ್ವಾರರು ಎಂಪೆರುಮಾನರಿಂದ ಅಗಲಿಸಲ್ಪಟ್ಟು ತುಂಬಾ ಸಂಕಟ ಮತ್ತು ಕಳವಳಗೊಂಡಿದ್ದರು. ಅಂತಹ ಆಳ್ವಾರರಿಗೆ ಸಮಾಧಾನ ಪಡಿಸಲು ಎಂಪೆರುಮಾನರು ತಮ್ಮ ದಿವ್ಯ ಅರ್ಚ್ಚಾ ರೂಪವನ್ನು ತಿರುಕಣ್ಣಪುರದಲ್ಲಿ ಸ್ಥಾಪನೆ ಮಾಡಿದ್ದರು. ಅಲ್ಲಿ ಎಂಪೆರುಮಾನರು ಎಲ್ಲರಿಗೂ ಸುಲಭವಾಗಿ ದರ್ಶನ ಕೊಡುತ್ತಿದ್ದರು ಮತ್ತು ಆಳ್ವಾರರಿಗೆ ಅವರ ಜೀವನ ಅವಧಿ ಮುಗಿದ ಮೇಲೆ ಎಂಪೆರುಮಾನರನ್ನು ಸಮೀಪಿಸುವ ಭಾಗ್ಯವನ್ನು ಖಾತರಿಯಾಗಿ ಹೇಳಿದ್ದರು. ಈ ಬಗ್ಗೆ ಯೋಚಿಸುವಾಗ ಆಳ್ವಾರರು ಈ ಪದಿಗೆಯಲ್ಲಿ ಸಂತೋಷವಾಗಿ ಹಾಡಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಸಂಕ್ಷಿಪ್ತವಾಗಿ ಶರಣಾಗತಿಯನ್ನು ಈ ಪಾಸುರದಲ್ಲಿ ವಿವರಿಸಿದ್ದಾರೆ. “ ನಿಮ್ಮ ಎಲ್ಲಾ ದುಃಖಗಳನ್ನು ದೂರಮಾಡಲು ಕರುಣೆಯಿಂದ ತಿರುಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತಿಯನ್ನು ಮಾಡಿ”.

ಮಾಲೈ ನಣ್ಣಿ ತ್ತೊೞುದೆೞುಮಿನೋ ವಿನೈಕೆಡ
ಕಾಲೈ ಮಾಲೈ ಕಮಲಮಲರಿಟ್ಟು ನೀರ್,
ವೇಲೈ ಮೋದುಮ್ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು,
ಆಲಿನ್ಮೇಲಾಲ್ ಅಮರ್ನ್ದಾನ್ ಅಡಿಯಿಣೈಗಳೇ ॥


ಎಂಪೆರುಮಾನರು ವಟತಳಶಾಯಿಯಾಗಿ ಇಡೀ ವಿಶ್ವವನ್ನೇ ರಕ್ಷಿಸುತ್ತಿದ್ದಾರೆ. ಏರುತ್ತಿರುವ ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರಮ್ ನಲ್ಲಿ ಅಗದಿತಗಟನಾ ಸಾಮರ್ಥ್ಯಮ್ ಹೊಂದಿರುವ ಎಂಪೆರುಮಾನರು ವಾಸವಾಗಿದ್ದಾರೆ. ಅಂತಹ ಎಂಪೆರುಮಾನರ ದಿವ್ಯ ಪಾದಗಳಿಗೆ ವಿಶಿಷ್ಟವಾದ ಕಮಲದ ಹೂಗಳಿಂದ, ಹಗಲು ರಾತ್ರಿಯೆಂದು ವ್ಯತ್ಯಾಸವಿಲ್ಲದೆ ಅರ್ಪಿಸುವವರ , ಆನಂದವನ್ನು ಹೊಂದಲು ಅಡ್ಡಿಯಾಗುವ ಸಂಕಟವು ಬಗೆಹರಿದು , ಅವರು ಮೇಲಕ್ಕೆ ಭಗವಂತನಿಂದ ಎತ್ತಲ್ಪಟ್ಟು ‘ಬದ್ಧಾಂಜಲಿಪುಟಾಃ’ ಎನ್ನುವಂತೆ ಅವನ ಸೇವೆಗೆ ಸರಿಸಾಟಿಯಾದ ಕಾರ್ಯದಲ್ಲಿ ಮುಳುಗುತ್ತಾರೆ.
ಆಲಿಲ್ ಮೇಲಾಲ್ – ಅಂದರೆ ಎಲೆಯ ಮೇಲ್ಭಾಗದಲ್ಲಿ , ಆಲ್ – ಎಂದರೆ ಇಲ್ಲಿ ಶಬ್ದ ಎಂದು ಮಾತ್ರ ಅರ್ಥ .

ಎರಡನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಸಾಕಷ್ಟು ಸುರಕ್ಷಿತವಾದ ತಿರುಕಣ್ಣಪುರವನ್ನು ನೆನೆದು ಸಮಾಧಾನವನ್ನು ಹೊಂದು. ‘ ದಿವ್ಯ ಪಾದಗಳಿಗೆ ಎಂತಹ ಆಪತ್ತು, ವಿಪತ್ತು ಬರುವುದೋ ಏಕೆಂದರೆ , ಲೌಕಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವವರು ಆ ಪಾದಗಳಿಗೆ ಶರಣು ಹೊಂದುತ್ತಾರೆ’. ಬದಲಾಗಿ ಅಂತಹ ಪಾದಗಳಿಗೆ ಏನೂ ಚಿಂತೆಯ ಭಾರವಿಲ್ಲದೇ ಶರಣಾಗು.” ಎಂದು.

ಕಳ್ಳವಿೞುಮ್ ಮಲರಿಟ್ಟು ನೀರಿಱೈಞ್ಜುಮಿನ್,
ನಳ್ಳಿ ಶೇರುಮ್ ವಯಲ್ ಶೂೞ್ ಕಿಡಙ್ಗಿನ್ ಪುಡೈ,
ವೆಳ್ಳಿಯೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ಉಳ್ಳಿ, ನಾಳುಮ್ ತೊೞುದೆೞುಮಿನೋ ತೊಣ್ಡರೇ ॥


ನಿನಗೆ ಆನಂದಿಸಬೇಕೆಂದು ಆಸೆಯಿದ್ದರೆ, ಜೇನು ತುಂಬಿರುವ ಹೂಗಳಿಂದ ಭಗವಂತನನ್ನು ಪೂಜಿಸು. ತಿರುಕ್ಕಣ್ಣಪುರಮ್ ಸುತ್ತಲೂ ಭದ್ರವಾದ ಬೆಳ್ಳಿಯ ಬಣ್ಣದ ಕೋಟೆಯಿಂದ ಆವೃತ್ತವಾಗಿದೆ. ಆ ಕೋಟೆಯು ಮತ್ತೆ ಕಂದರಗಳಿಂದ ಆವೃತ್ತವಾಗಿದೆ. ಆ ಕಂದರಗಳು ಮತ್ತೆ ಹೆಣ್ಣು ವೃಶ್ಚಿಕಗಳಿಂದ ತುಂಬಿರುವ ಗದ್ದೆಗಳಿಂದ ಆವೃತ್ತವಾಗಿದೆ. ಅವನ ಅನುಭವ ಪಡೆಯುವುದರಿಂದ ಸಿಗುವ ಆನಂದವನ್ನು ವ್ಯಕ್ತಪಡಿಸಲು ಜೋರಾಗಿ ಶಬ್ದಗಳಿಂದ ಹಾಡಿ ಅವನನ್ನು ಪೂಜಿಸು.
ಇರೈಞ್ಜುಮಿನ್ – ಇದರೊಂದಿಗೆ ‘ಅಡಿ ಇಣೈ’ ನನ್ನೂ ಹಿಂದಿನ ಪಾಸುರದಿಂದ ಸೇರಿಸಿ ಹೇಳಬೇಕು. ಅಂದರೆ ಪರಮಪದ ಎಂದು ಅರ್ಥ.
ವೆಳ್ಳಿ ಏಯ್‍ನ್ದ – ಶುಕ್ರ ಗ್ರಹದವರೆಗೂ ಏರುವ ಎಂದು ಅರ್ಥ. ಅದು ಬೆಳ್ಳಿಯ ಬಣ್ಣದ ಕೋಟೆಯೂ ಆಗಿರಬಹುದು.

ಮೂರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಓಹ್! ಆಸೆಯುಳ್ಳವರೇ! ಅನನ್ಯಪ್ರಯೋಜನರಾಗಿ (ಕೈಂಕರ್‍ಯಕ್ಕೆ ಹೊರತಾಗಿ ಏನನ್ನೂ ಅಪೇಕ್ಷೆ ಪಡದೆ), ಆಧ್ಯಾತ್ಮದ ಮತ್ತು ಲೌಕಿಕ ವಿಷಯಗಳಿಗೆ ನಾಯಕನಾದ, ಮತ್ತು ಕರುಣೆಯಿಂದ ತಿರುಕ್ಕಣ್ಣಪುರದಲ್ಲಿ ನಿಂತಿರುವ ಎಂಪೆರುಮಾನರಿಗೆ ಶರಣಾಗತರಾಗಿ , ನಿಮ್ಮ ದುಃಖಗಳನ್ನು ದೂರಮಾಡಿಕೊಳ್ಳಿ. “

ತೊಣ್ಡರ್ ನುಮ್ ತಮ್ ತುಯರ್ ಪೋಗ ನೀರ್ ಏಕಮಾಯ್,
ವಿಣ್ಡು ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಣ್ಡು ಪಾಡುಮ್ , ಪೊೞಿಲ್ ಶೂೞ್ ತಿರುಕ್ಕಣ್ಣಪುರತ್ತು,
ಅಣ್ಡ ವಾಣನ್, ಅಮರರ್ ಪೆರುಮಾನೈಯೇ ॥


ಎಂಪೆರುಮಾನರು ನಿತ್ಯಸೂರಿಗಳಿಂದ ದಿನವೂ ಆನಂದಿಸಲ್ಪಡುವವರು ಮತ್ತು ಅವರು ಪರಮಪದದಲ್ಲಿ ವಾಸವಾಗಿರುವರು. ಅವರು ಈಗ ಆನಂದದಿಂದ ಝೇಂಕರಿಸುವ ದುಂಬಿಗಳಿಂದ ತುಂಬಿರುವ ತೋಟಗಳಿಂದ ಆವೃತ್ತವಾದ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವರು. ಓಹ್! ನೀವು ಎಲ್ಲಾ ಕೈಂಕರ್‍ಯ ಪರರಾಗಿರುವವರು, ಈಗ ತಾನೇ ಅರಳಬೇಕಾಗಿರುವ ಪುಷ್ಪಗಳಿಂದ ಪೂಜಿಸಿ , ಅವನನ್ನು ಆನಂದಿಸಲಾರದ ದುಃಖದಿಂದ ಪರಿಹಾರ ಹೊಂದಿ , ಎಲ್ಲರೂ ಒಂದೇ ಗುರಿಯನ್ನು ಹೊಂದಿ, ನಿಮ್ಮ ನಿಮ್ಮ ‘ಶೇಷತ್ವಮ್‍’ ಗೆ ಸರಿಹೊಂದುವಂತೆ ಅವನನ್ನು ಪೂಜಿಸಿ.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರನ್ನು ನಪ್ಪಿನ್ನೈ ಪಿರಾಟ್ಟಿಯ ಪುರುಷಕಾರಮ್ (ಶಿಫಾರಸ್ಸು) ನಿಂದ ಸಮೀಪಿಸಿ.”
ಮಾನೈ ನೋಕ್ಕಿ ಮಡಪ್ಪಿನ್ನೈತನ್ ಕೇಳ್ವನೈ,
ತೇನೈ ವಾಡಾ ಮಲರಿಟ್ಟು ನೀರಿಱೈಞ್ಜುಮಿನ್,
ವಾನೈಯುನ್ದು ಮದಿಳ್ ಶೂೞ್ ತಿರುಕ್ಕಣ್ಣಪುರಮ್,
ತಾನ್ ನಯನ್ದ ಪೆರುಮಾನ್ ಶರಣಾಗುಮೇ ॥


ಎಂಪೆರುಮಾನರನ್ನು ಎಲ್ಲರೂ ಹೊಸ ಹೂವುಗಳಿಂದ ಪೂಜಿಸಿ, ಅವರು ನಪ್ಪಿನ್ನೈ ಪಿರಾಟ್ಟಿಯ ಪ್ರಿಯವಾದ ನಾಯಕರು. ಅವರು ಎಲ್ಲಾ ಗುಣಗಳಲ್ಲೂ ಪರಿಪೂರ್ಣರು. ಜಿಂಕೆಯನ್ನೂ ನಾಚಿಸುವಂತಹ ಕಣ್ಣುಗಳನ್ನು ಹೊಂದಿದ್ದಾರೆ. ಸರ್ವೇಶ್ವರನು ಆಶ್ರಯದಾತನು ನಿಮ್ಮ ಪೂಜೆಯನ್ನು ಯಾವಾಗಲೂ ಸ್ವೀಕರಿಸುವನು. ಬೃಹದಾಕಾರವಾಗಿರುವ ಆಕಾಶಕ್ಕೆ ಚಾಚಿಕೊಂಡ ಕೋಟೆಯಿಂದ ಆವೃತ್ತವಾಗಿರುವ ತಿರುಕ್ಕಣ್ಣಪುರದಲ್ಲಿ ಅವನು ತನ್ನ ಇಚ್ಛೆಯಿಂದಲೇ ನಿಂತಿದ್ದಾನೆ.
ಇಲ್ಲಿ ‘ತೇನೈ ವಾಡಾ ಮಲರ್’ ಎಂದರೆ ಯಾವಾಗಲೂ ಜೇನನ್ನು ಸೂಸುವ, ಬಾಡದ ಹೂವು ಎಂದು ಅರ್ಥ.

ಐದನೆಯ ಪಾಸುರಮ್ :
ಆಳ್ವಾರರು ಹೇಗೆ ಎಂಪೆರುಮಾನರು ಕರುಣೆಯಿಂದ ಭಕ್ತಿಯೋಗದಿಂದ ಶರಣಾಗತಿಯಾಗಲು ಆಗದಿರುವ ಭಕ್ತರಿಗೂ ಮುಕ್ತಿಯನ್ನು ಕೊಡುತ್ತಾರೆ ಮತ್ತು ಅವರಿಗೆ ತನ್ನ ದಿವ್ಯ ಪಾದಗಳನ್ನು ಉಪಾಯವಾಗಿ (ದಾರಿಯಾಗಿ) ಹಿಡಿದುಕೊಳ್ಳಲು ನೀಡುತ್ತಾರೆ ಎಂಬುದನ್ನು ಕರುಣೆಯಿಂದ ವಿವರಿಸಿದ್ದಾರೆ.
ಶರಣಮಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಮರಣಮಾನಾಲ್ ವೈಕುನ್ದಮ್ ಕೊಡುಕ್ಕುಮ್ ಪಿರಾನ್,
ಅರಣಮೈನ್ದ ಮದಿಳ್ ಶೂೞ್ ತಿರುಕ್ಕಣ್ಣಪುರ ,
ತ್ತರಣಿಯಾಳನ್ , ತನದನ್ಬರ್ಕ್ಕು ಅನ್ಬಾಗುಮೇ ॥


ತಮ್ಮ ಕೊನೆಯ ಕ್ಷಣಗಳಲ್ಲಿ ಅವನ ದಿವ್ಯ ಪಾದಗಳಿಗೆ ಪ್ರಪತ್ತಿ (ಶರಣಾಗತಿ) ಯನ್ನು ಮಾಡಿದವರಿಗೆ ಶ್ರೇಷ್ಠ ಆಶ್ರಯದಾತನಾಗಿ, ಅವರಿಗೆ ಉಪಾಯವೂ ತಾನೇ ಆಗಿ, ಪರಮಪದದ ವಾಸಸ್ಥಾನಕ್ಕೆ , ಎಲ್ಲಿಂದ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲವೊ ಅಲ್ಲಿಗೆ ಕರೆದೊಯ್ಯುತ್ತಾನೆ. ಅಂತಹ ಎಂಪೆರುಮಾನರು ಭದ್ರವಾದ ಕೋಟೆಯಿಂದ ಸುರಕ್ಷಿತವಾದ ತಿರುಕ್ಕಣ್ಣಪುರದಲ್ಲಿ ಭೂಮಿಯನ್ನು ರಕ್ಷಿಸಲು ನಿಂತಿದ್ದಾರೆ. ಯಾರಿಗೆ ಅಂತಹ ಎಂಪೆರುಮಾನರ ದಿವ್ಯ ಪಾದಗಳ ಮೇಲೆ ಪ್ರೇಮವಿದೆಯೋ, ಅವರ ಬಗ್ಗೆಯೂ ಎಂಪೆರುಮಾನರು ಪ್ರೇಮದ ಚಿಹ್ನೆಯಾಗುತ್ತಾರೆ. ಅವರಿಗೆ ತಮ್ಮ ದಿವ್ಯ ಪಾದಗಳನ್ನೇ ಆಸರೆಯಾಗಿ, ಮಾಧ್ಯಮವಾಗಿ ನೀಡುತ್ತಾರೆ.
ಶರಣಮ್ ಆಗುಮ್ ತನತ್ತಾಳ್ – ದಿವ್ಯ ಪಾದಗಳು ತಾವೇ ಉಪಾಯವಾಗುವುದು (ಮಾಧ್ಯಮವಾಗುವುದು).
ತರಣಿಯಾಳನ್ – ಶ್ರೀ ಭೂಮಿ ಪಿರಾಟ್ಟಿಯ ಪ್ರಿಯನಾದ ಪತಿ.

ಆರನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ತಿರುಕ್ಕಣ್ಣಪುರದಲ್ಲಿರುವ ಎಂಪೆರುಮಾನರು ತಮ್ಮನ್ನು ಶರಣಾಗತಿಯಾದವರ ತೊಂದರೆಗಳನ್ನು ನಿವಾರಿಸಿ , ಅವರ ಬಗ್ಗೆ ಅಕ್ಕರೆಯನ್ನು ಹೊಂದುತ್ತಾರೆ.”
ಅನ್ಬನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಶೆಮ್ಬೊನ್ ಆಗತ್ತು ಅವುಣನ್ ಉಡಲ್ ಕೀಣ್ಡವನ್,
ನನ್‍ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರತ್ತು
ಅನ್ಬನ್, ನಾಳುಮ್ ತನಮೆಯ್ಯರ್ಕ್ಕು ಮೆಯ್ಯನೇ ॥


ಎಂಪೆರುಮಾನರು ತಮ್ಮ ದಿವ್ಯ ಪಾದಗಳನ್ನು ಶರಣಾದವರ ಮೇಲೆ ತಾವು ಅಮಿತ ವಾತ್ಸಲ್ಯಕಾರಕರಾಗಿ ಅಪ್ಪಟ ಚಿನ್ನದಿಂದ ಕಟ್ಟಿದ ಕೋಟೆಯಲ್ಲಿರುವ ತಿರುಕ್ಕಣ್ಣಪುರದಲ್ಲಿ ತಮ್ಮ ಇಚ್ಛಾನುಸಾರವಾಗಿ ವಾಸವಾಗಿದ್ದಾರೆ. ಅವರು ಪ್ರಯತ್ನವೇ ಮಾಡದೇ , ರಾಕ್ಷಸನಾದ ಕೆಂಪಾದ ಚಿನ್ನದಂತೆ ಬಣ್ಣವನ್ನು ಹೊಂದಿದ್ದ ಹಿರಣ್ಯನ ದೇಹವನ್ನು ಬಗೆದಿದ್ದಾರೆ. ಯಾರು ಎಂಪೆರುಮಾನರನ್ನೇ ಅಂತಿಮ ಗುರಿಯಾಗಿ ನೆನೆಯುತ್ತಾರೋ, ಅವರನ್ನು ಎಂಪೆರುಮಾನರು ತಮ್ಮ ಅಂತಿಮ ಗುರಿಯಾಗಿ ಪರಿಗಣಿಸುತ್ತಾರೆ.

ಏಳನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಅನನ್ಯಪ್ರಯೋಜನರಿಗೆ (ಕೈಂಕರ್‍ಯವನ್ನು ಹೊರತು ಏನನ್ನೂ ಅಪೇಕ್ಷಿಸದವರಿಗೆ) ಎಂಪೆರುಮಾನರು ಸುಲಭವಾಗಿ ದೊರಕುತ್ತಾರೆ. ಆದರೆ ಪ್ರಯೋಜನಾಂತರಪರರಿಗೆ (ಬೇರೆ ಪ್ರಯೋಜನವನ್ನು ಅಪೇಕ್ಷಿಸುವವರಿಗೆ), ಅವರ ಆಸೆಗಳನ್ನು ಪೂರೈಸಿ, ಅವರಿಂದ ದೂರವೇ ಉಳಿದುಬಿಡುತ್ತಾರೆ.”

ಮೆಯ್ಯನಾಗುಮ್ ವಿರುಮ್ಬಿ ತ್ತೊೞುವಾರ್ಕ್ಕೆಲ್ಲಾಮ್,
ಪೊಯ್ಯನಾಗುಮ್ ಪುಱಮೇ ತೊೞುವಾರ್ಕ್ಕೆಲ್ಲಾಮ್,
ಶೆಯ್ಯಿಲ್ ವಾಳೈ ಉಗಳುಮ್ ತಿರುಕ್ಕಣ್ಣಪುರತ್ತು
ಐಯನ್, ಆಗತ್ತಣೈಪ್ಪಾರ್ಗಟ್ಕು ಅಣಿಯನೇ ॥


ಯಾರು ಎಂಪೆರುಮಾನರಿಗೆ ಅವನನ್ನೇ ಅಂತಿಮ ಗುರಿಯನ್ನಾಗಿ ತಿಳಿದು ಶರಣು ಹೊಂದುತ್ತಾರೋ, ಅವರಿಗೆ ಎಂಪೆರುಮಾನರು ಅಂತಿಮ ಗುರಿಯಾಗಿ ತಮ್ಮ ಹೊಳೆಯುವ ರೂಪವನ್ನು ತಾವೇ ಸ್ಥಾಪಿಸುತ್ತಾರೆ. ಅವರನ್ನು ಬಿಟ್ಟು ಬೇರೆ ಪ್ರಯೋಜನಗಳಿಗಾಗಿ ಶರಣಾಗತರಾಗುತ್ತಾರೋ, ಅವರಿಗೆ ಆ ವರಗಳನ್ನು ಕೊಟ್ಟು ತಮ್ಮನ್ನು ತಾವು ಅವರಿಂದ ಮರೆ ಮಾಚಿಕೊಳ್ಳುತ್ತಾರೆ. ತಮ್ಮ ಹೃದಯದಲ್ಲಿ ಯಾರು ಅವನನ್ನು ದಾರಿಯಾಗಿ ನೆನೆಯುತ್ತಾರೋ, ಅವರಿಗೆ ಮತ್ತು ಸ್ವಾಭಾವಿಕವಾಗಿ ತಮ್ಮೊಂದಿಗೆ ಸಂಬಂಧವನ್ನು ಹೊಂದಿರುವ ಎರಡೂ ಪಂಗಡದ ವ್ಯಕ್ತಿಗಳಿಗೆ ಅವರು ವಿಶೇಷವಾಗಿ ಸುಲಭವಾಗಿ ಸಿಗುವ , ವಾಳೈ ಮೀನುಗಳು ಸಹಜವಾಗಿ ವಾಸಿಸುವ ಗದ್ದೆಗಳನ್ನು ಹೊಂದಿರುವ, ತಿರುಕ್ಕಣ್ಣಪುರದಲ್ಲಿ ವಾಸವನ್ನು ಹೊಂದಿದ್ದಾರೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,”ಸರ್ವೇಶ್ವರನಲ್ಲಿ ಶರಣಾಗತನಾಗು. ಅವನು ನಿಮ್ಮ ಎಲ್ಲಾ ದುಃಖಗಳನ್ನೂ, ಅದಕ್ಕೆ ಮೂಲ ಕಾರಣವಾಗಿರುವ ಸಂಸಾರವನ್ನೂ ತೊಲಗಿಸುತ್ತಾನೆ.”
ಅಣಿಯನಾಗುಮ್ ತನತಾಳ್ ಅಡೈನ್ದಾರ್ಕ್ಕೆಲ್ಲಾಮ್,
ಪಿಣಿಯುಮ್ ಶಾರಾ ಪಿಱವಿ ಕೆಡುತ್ತಾಳುಮ್,
ಮಣಿ ಪೊನ್ ಏಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಪಣಿಮಿನ್, ನಾಳುಮ್ ಪರಮೇಟ್ಟಿತನ್ ಪಾದಮೇ ॥


ಯಾರು ಅಂತಿಮವಾದ ಆನಂದಭರಿತವಾದ ಎಂಪೆರುಮಾನರ ದಿವ್ಯ ಪಾದಗಳನ್ನು ಹೊಂದುವರೋ, ಅವರ ಸಾಮೀಪ್ಯದಲ್ಲಿ ಆನಂದಿಸುವನು. ಬೇರೆ ಪ್ರಯೋಜನಗಳು ಎಂದರೆ ನಮ್ಮಲ್ಲಿರುವ ಅನಾರೋಗ್ಯಗಳು ಮಾಯವಾಗುವುದು. ಅವನು ನಮ್ಮ ಜೊತೆ ಸಂಬಂಧಿಸಿರುವ ಹುಟ್ಟನ್ನು ನಿರ್ಮೂಲನೆ ಮಾಡುವನು. ಆದ್ದರಿಂದ ಮತ್ತೊಂದು ಜನ್ಮವನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮತ್ತು ನಮ್ಮ ಸೇವೆಯನ್ನು ಸ್ವೀಕರಿಸುವನು. ಅಮೂಲ್ಯ ರತ್ನಗಳನ್ನು ಹೊಂದಿರುವ ಮತ್ತು ಚಿನ್ನದಿಂದಲೇ ಕಟ್ಟಿರುವ ಕೋಟೆಯಿಂದ ಸುತ್ತುವರೆಯಲ್ಪಟ್ಟ ತಿರುಕ್ಕಣ್ಣಪುರದಲ್ಲಿ ನಿಂತಿರುವ , ಎಂಪೆರುಮಾನರ ದಿವ್ಯ ಪಾದಗಳಿಗೆ ನಿರಂತರವಾಗಿ ಸೇವೆ ಸಲ್ಲಿಸು. ಅವರು ಪರಮಪದದಲ್ಲಿರುವ ಹಾಗೆಯೇ ಇಲ್ಲಿಯೂ ಇದ್ದಾರೆ. ಅವರ ದಿವ್ಯ ಪಾದಗಳನ್ನು ಆನಂದಿಸು.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಆನಂದವನ್ನು ಹೊಂದಿ ಹೇಳುತ್ತಾರೆ, “ ನನಗೆ ಯಾರೂ ಆದೇಶವನ್ನು ಕೊಡದೆ, ನಾನು ಎಂಪೆರುಮಾನರಿಗೆ ಶರಣಾಗತಿಯಾದೆ ಮತ್ತು ಆನಂದವನ್ನು ಹೊಂದಿದೆ.”
ಪಾದಮ್ ನಾಳುಮ್ ಪಣಿಯ ತ್ತಣಿಯುಮ್ ಪಿಣಿ,
ಏದಮ್ ಶಾರಾ ಎನಕ್ಕೇಲ್ ಇನಿ ಎನ್‍ಕುಱೈ,
ವೇದನಾವರ್ ವಿರುಮ್ಬುಮ್ ತಿರುಕ್ಕಣ್ಣಪುರತ್ತು
ಆದಿಯಾನೈ, ಅಡೈನ್ದಾರ್ಕ್ಕು ಅಲ್ಲರ್ ಇಲ್ಲೈಯೇ ॥


ಅವನ ದಿವ್ಯ ಪಾದಗಳನ್ನು ಯಾವಾಗಲೂ ಆನಂದಿಸುತ್ತಿದ್ದರೆ, ಮೊದಲಿನ ದುಃಖಗಳೆಲ್ಲವೂ ದೂರವಾಗುವುದು. ನಂತರ ಸಂಕಟ ದುಃಖಗಳು ಬರುವುದೇ ಇಲ್ಲ. ಆದ್ದರಿಂದ ನನಗೆ ಯಾವ ಯೋಚನೆಯೂ ಇಲ್ಲ. ವೇದಗಳೇ ತಮ್ಮ ಜಿಹ್ವೆಗೆ ಚಿಹ್ನೆಯಾಗಿರುವ ಜನಗಳಿಂದ ಬಯಸಲ್ಪಡುವ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ , ಎಲ್ಲದಕ್ಕೂ ಮೂಲಕಾರಣವಾಗಿರುವ, ವೇದಗಳಲ್ಲಿ ಮಾತ್ರ ತಿಳಿಯಬಹುದಾದ ಎಂಪೆರುಮಾನರನ್ನು ಯಾರು ಪಡೆಯುತ್ತಾರೋ, ಅವರಿಗೆ ದುಃಖಗಳಿರುವುದಿಲ್ಲ.
ಪಿಣಿ ಮತ್ತು ಈದಮ್ ಎಂದರೆ ಪೂರ್ವಾಗಮ್ (ಶರಣಾಗತಿಯ ಮೊದಲು ಮಾಡಿದ ಪಾಪಗಳು) ಉತ್ತರಾಗಮ್ (ಶರಣಾಗತಿಯ ನಂತರ ಮಾಡಿದ ಪಾಪಗಳು.)

ಹತ್ತನೆಯ ಪಾಸುರಮ್:
ಆಳ್ವಾರರು ಪುನಃ ತಮಗಾದ ಪ್ರಯೋಜನವನ್ನು ಅತೀವ ಸಂತೋಷದಿಂದ ವಿವರಿಸುತ್ತಾರೆ, “ಯಾರಿಗಾದರೂ ಭಕ್ತಿ ಮತ್ತು ಪ್ರಪತ್ತಿಯನ್ನು ಮಾಡಲು ಸಾಧ್ಯವಾಗದಿದ್ದರೆ , ತಮ್ಮ ಎಲ್ಲಾ ದುಃಖಗಳನ್ನೂ ದೂರಮಾಡಿಕೊಳ್ಳಲು ‘ತಿರುಕ್ಕಣ್ಣಪುರಮ್’ ಎಂದರೆ ಸಾಕು. “
ಇಲ್ಲೈ ಅಲ್ಲಲ್ ಎನಕ್ಕೇಲ್ ಇನಿ ಎನ್‍ಕುಱೈ,
ಅಲ್ಲಿ ಮಾದರ್ ಅಮರುಮ್ ತಿರುಮಾರ್ಬಿನನ್,
ಕಲ್ಲಿಲೇಯ್‍ನ್ದ ಮದಿಳ್ ಶೂೞ್ ತಿರುಕ್ಕಣ್ಣಪುರಮ್
ಶೊಲ್ಲ , ನಾಳುಮ್ ತುಯರ್ ಪಾಡು ಶಾರಾವೇ ॥


ಎಲ್ಲಾ ಮಹಿಳೆಯರಿಗಿಂತ ಉತ್ತಮಳಾದ ಮಹಾಲಕ್ಷ್ಮಿಯು ಕಮಲವನ್ನು ತನ್ನ ವಾಸವನ್ನಾಗಿ ಮಾಡಿಕೊಂಡು, ಗಟ್ಟಿಯಾದ ಬಂಡೆಗಳಿಂದ ಕಟ್ಟಿದ ಕೋಟೆಯಿಂದ ಆವರಿಸಲ್ಪಟ್ಟ ತಿರುಕ್ಕಣ್ಣಪುರದಲ್ಲಿ ವಾಸವಾಗಿರುವ ಎಂಪೆರುಮಾನರ ದಿವ್ಯ ವಕ್ಷಸ್ಥಲದಲ್ಲಿ ನಿರಂತರವಾಗಿ ನೆಲೆಸಿದ್ದಾಳೆ. ಆದ್ದರಿಂದ ಯಾರಾದರೂ ‘ತಿರುಕ್ಕಣ್ಣಪುರಮ್’ ಎಂದು ಹೇಳಿದರೆ ಸಾಕು ಅವರ ದುಃಖಗಳೆಲ್ಲವೂ ದೂರವಾಗುತ್ತದೆ. ನನಗೆ ಆ ಆನಂದವನ್ನು ಕಳೆದುಕೊಳ್ಳುವ ದುಃಖದ ಯೋಚನೆಯಿಲ್ಲ. ಈಗ ಏನು ಚಿಂತೆ ನನಗೆ?

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ ಯಾರು ತಮ್ಮ ತೊಂದರೆಗಳನ್ನು ನಿವಾರಿಸಬೇಕೆಂದು ಆಶಿಸುತ್ತಾರೋ, ಈ ಪದಿಗೆಯನ್ನು ಅವನ ಮೇಲಿನ ಪ್ರೇಮದಿಂದ ಹಾಡಿ ಮತ್ತು ಶರಣಾಗತಿಯನ್ನು ಹೊಂದಿ.”

ಪಾಡುಶಾರಾ ವಿನೈ ಪಟ್ಱಱ ವೇಣ್ಡುವೀರ್,
ಮಾಡನೀಡು ಕುರುಗೂರ್ ಚ್ಚಡಗೋಪನ್, ಶೊಲ್
ಪಾಡಲಾನ ತಮಿೞ್ ಆಯಿರತ್ತುಳ್ ಇಪ್ಪತ್ತುಮ್
ಪಾಡಿ ಆಡಿ , ಪಣಿಮಿನ್ ಅವನ್‍ ತಾಳ್‍ಗಳೇ॥


ಎತ್ತರದ ಅರಮನೆಗಳನ್ನು ಹೊಂದಿರುವ ಆಳ್ವಾರ್ ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ಸಾವಿರ ಪಾಸುರಗಳನ್ನು ಹೇಳಿದ್ದಾರೆ. ನೀವು ಲೌಕಿಕ ದುಃಖಗಳನ್ನು ದೂರಮಾಡಿಕೊಳ್ಳಬೇಕೆಂದು ಆಶಿಸಿದ್ದರೆ, ಮತ್ತು ಅವುಗಳು ಮತ್ತೆ ನಿಮ್ಮ ಸಮೀಪಕ್ಕೆ ಬರಬಾರದೆಂದು ಬಯಸಿದರೆ, ಆನಂದದಿಂದ ಈ ಹತ್ತು ಪಾಸುರಗಳನ್ನು, ಸಂಗೀತದೊಂದಿಗೆ , ದ್ರಾವಿಡ ಭಾಷೆಯಾದ ತಮಿೞಿನಲ್ಲಿರುವ ಸಾವಿರ ಪಾಸುರದ ಜೊತೆಗೆ ಹಾಡಿ. ಪರಮಾನಂದದಿಂದ ನಲಿದಾಡಿ. ಸುಲಭವಾಗಿ ದಕ್ಕುವ ಸರ್ವೇಶ್ವರನ ದಿವ್ಯ ಪಾದಗಳಿಗೆ ಪೂಜಿಸಿ ಮತ್ತು ಅವುಗಳನ್ನು ಆನಂದಿಸಿ. ಭಗವಂತನನ್ನು ಈ ಪದಿಗೆಯಲ್ಲಿ ಆನಂದಿಸುವವರಿಗೆ, ಅವರ ಕಷ್ಟಗಳು ನಿಶ್ಶೇಷವಾಗಿ ನಿರ್ಮೂಲನವಾಗುತ್ತದೆ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-9-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ ಮೊೞಿ- ಸರಳ ವಿವರಣೆ – 8.10 – ನೆಡುಮಾಱ್ಕು

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.4 – ಆೞಿಯೆೞ

emperumAnAr_ThirumEniyil_pUrvacharyargaL (Large)

ಆಳ್ವಾರರು ಈ ರೀತಿಯಾಗಿ ಗಮನಿಸುತ್ತಾರೆ : ಆತ್ಮದ ಸಹಜ ಸ್ವಭಾವಕ್ಕೆ ಪೂರಕವಾದುದು ಭಗವಂತನ ಭಕ್ತರಿಗೆ ಸೇವೆ ಮಾಡುವುದೇ ಆಗಿದೆ. ಅವರು ಇದನ್ನು ಗಮನಿಸುತ್ತಾರೆ ಮತ್ತು ಇತರರಿಗೂ ಈ ಪದಿಗೆಯಲ್ಲಿ ಸಲಹೆಯನ್ನು ಕೊಡುತ್ತಾರೆ. ಭಗವಂತನಿಗೆ ಸೇವೆ ಸಲ್ಲಿಸುವುದು ಮೊದಲನೆಯ ಹಂತವಾದರೆ, ಭಾಗವತರಿಗೆ ಸೇವೆ ಸಲ್ಲಿಸುವುದು ಅಂತಿಮ ಹಂತವಾಗಿದೆ. ಅದನ್ನು ಆಳ್ವಾರರು ಸ್ಪಷ್ಟವಾಗಿ ವರ್ಣಿಸಿದ್ದಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಅದ್ಭುತವಾದ ಮೂರು ಲೋಕಗಳನ್ನು ಆಳುವುದರ ಬದಲು ನಾನು ಭಾಗವತರಿಗೆ ಸೇವೆ ಮಾಡಲು ಬಯಸುತ್ತೇನೆ.”
ನೆಡುಮಾಱ್ಕು ಅಡಿಮೈ ಸೆಯ್ವೇನ್ ಪೋಲ್ ಅವನೈ ಕ್ಕರುದ ವಞ್ಜಿತ್ತು,
ತಡುಮಾಱ್ಱಱ್ಱ ತೀಕ್ಕದಿಗಳ್ ಮುಱ್ಱುಮ್ ತವಿರ್ನ್ದ ಶದಿರ್ ನಿನೈನ್ದಾಲ್,
ಕೊಡುಮಾವಿನೈಯೇನ್ ಅವನ್ ಅಡಿಯಾರ್ ಅಡಿಯೇ ಕೂಡುಮಿದುವಲ್ಲಾಲ್,
ವಿಡುಮಾಱೆನ್ಬದು ಎನ್ ಅನ್ದೋ ವಿಯನ್ ಮೂವುಲಗು ಪೆಱಿನುಮೇ ॥

“ನಾನು ಅನಂತವಾದ ಸರ್ವೇಶ್ವರನನ್ನು ಸೇವೆ ಮಾಡಲು ಯೋಚಿಸಿದೆ , ಅವನು ನನ್ನಲ್ಲಿಯೇ ಉಳಿದುಕೊಂಡು ನನ್ನಲ್ಲಿರುವ ಅಸ್ಥಿರತೆಯನ್ನು ಹೋಗಲಾಡಿಸಿ, ಕೆಟ್ಟ ರೀತಿಯ ದಾರಿಗಳು ನನ್ನನ್ನು ಬಿಟ್ಟು ಹೋಗುವಂತೆ ನೋಡಿಕೊಂಡನು. ಸೇವಕರಾದ ನಮಗೆ ಯಾವುದು ಸೂಕ್ತವೆಂದು ಯೋಚಿಸಿದರೆ, ಭಾಗವತರ ದಿವ್ಯ ಪಾದಗಳನ್ನು ಸೇರುವುದನ್ನು ಬಿಟ್ಟರೆ, ಮೂರು ಲೋಕದ ವಿಶಾಲವಾದ ಸಂಪತ್ತನ್ನು ಗಳಿಸುವುದೇ ಮಾರ್ಗವೆಂದು ಯಾರಾದರೂ ಹೇಳಿದರೂ, ಐಶ್ವರ್‍ಯಕ್ಕೂ ಮತ್ತು ತದೀಯ ಶೇಷತ್ವಕ್ಕೂ (ಭಕ್ತರಿಗೇ ಸೇವಕನಾಗುವುದು) ವ್ಯತ್ಯಾಸವನ್ನು ನೋಡಿದ ಪರಮಪಾಪಿಯಾದ ನಾನು ಭಾಗವತರ ದಿವ್ಯ ಪಾದಗಳನ್ನು ಬಿಟ್ಟು ಬಿಡುವೆನೇ? “ ಎಂದು ಹಾಡುತ್ತಾರೆ.

ಎರಡನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಐಶ್ವರ್‍ಯಮ್(ಲೌಕಿಕ ಸಂಪತ್ತು) ಮತ್ತು ಕೈವಲ್ಯಮ್ (ತನ್ನಲ್ಲಿ ತಾನೇ ಆನಂದಪಡುವುದು) ಇವುಗಳನ್ನು ಜೊತೆಯಾಗಿ ಪಡೆದರೂ, ಅವೆರಡೂ ಭಾಗವತ ಶೇಷತ್ವಕ್ಕೆ ( ಭಾಗವತರಿಗೆ ದಾಸನಾಗುವುದು) ಹೋಲಿಕೆ ಮಾಡಬಹುದೇ? ಈ ಗುರಿಯನ್ನು ನಾನು ತಲುಪಿದ್ದೇನೆ.”
ವಿಯನ್ ಮೂವುಲಗು ಪೆಱಿನುಮ್ ಪೋಯ್ ತ್ತಾನೇತಾನೇಯಾನಾಲುಮ್,
ಪುಯಲ್ ಮೇಗಮ್ ಪೋಲ್ ತಿರುಮೇನಿ ಅಮ್ಮಾನ್ ಪುನೈ ಪೂಙ್ಕೞಲ್ ಅಡಿಕ್ಕೀೞ್,
ಶಯಮೇ ಅಡಿಮೈ ತಲೈ ನಿನ್‍ಱಾರ್ ತಿರುತ್ತಾಳ್ ವಣಙ್ಗಿ, ಇಮ್ಮೈಯೇ
ಪಯನೇ ಇನ್ಬಮ್ ಯಾನ್ ಪೆಱ್ಱದು ಉಱುಮೋ ಪಾವಿಯೇನುಕ್ಕೇ॥

ಸರ್ವೇಶ್ವರನಿಗೆ ನೀರು ತುಂಬಿದ ಮೋಡಗಳ ರೀತಿಯಾದ ದಿವ್ಯ ರೂಪವಿದೆ. ಅವರ ದಿವ್ಯ ಪಾದಗಳು ಹೂವಿನಿಂದ ಮತ್ತು ವಿಜಯದ ಗೆಜ್ಜೆಗಳಿಂದ ಅಲಂಕೃತವಾಗಿದೆ. ಕೊನೆಯ ಹಂತವನ್ನು ತಲುಪಿದ ಭಾಗವತರು (ಎಂಪೆರುಮಾನರನ್ನೇ ಹಿಂಬಾಲಿಸುವವರು) ಅಂತಹ ದಿವ್ಯ ಪಾದಗಳಿಗೇ ಸೇವೆಯನ್ನು ಸಲ್ಲಿಸುವವರು ಏನೂ ಅಪೇಕ್ಷೆಯಿಲ್ಲದೆ. ನನಗೆ ಮೂರೂ ಲೋಕದ ಅಷ್ಟೂ ಸಂಪತ್ತು ಸಿಕ್ಕರೂ ಮತ್ತು ನಾನು ಅವುಗಳನ್ನು (ಐಶ್ವರ್‍ಯ ಮತ್ತು ಕೈವಲ್ಯಗಳನ್ನು) ಅನುಭವಿಸಿದರೂ, ನನ್ನಂತಹ ಪಾಪವನ್ನು ಮಾಡಿದವರು ಅಂತಹ ಭಾಗವತರಿಗೆ ನಮಸ್ಕಾರಗಳನ್ನು ಅರ್ಪಿಸಿದರೆ ಸೂಕ್ತವಾಗುವುದೇ?
ಇದರ ಅರ್ಥ : ಈ ಐಶ್ವರ್‍ಯ ಮತ್ತು ಕೈವಲ್ಯಗಳು ಭಾಗವತರಿಗೆ ಕೈಂಕರ್‍ಯವನ್ನು ಮಾಡುವ ಆನಂದಕ್ಕೆ ಎಣೆಯಾಗುವುದಿಲ್ಲ.

ಮೂರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ನಾನು ಭಗವತ್ ಪ್ರಾಪ್ತಿಯನ್ನು ಪಡೆದುಕೊಂಡರೂ (ಭಗವಂತನನ್ನು ಸೇರಿ ಅವನಿಗೆ ಸೇವೆ ಸಲ್ಲಿಸುವುದು) ಅದು ಐಶ್ವರ್‍ಯ ಮತ್ತು ಕೈವಲ್ಯಗಳಿಂದ ವ್ಯತ್ಯಾಸವಾದರೂ , ಭಾಗವತರನ್ನು ಈ ಲೋಕದಲ್ಲಿ ಸೇವೆ ಸಲ್ಲಿಸುವುದಕ್ಕೆ ಹೋಲಿಕೆಯಾಗದು,”
ಉಱುಮೋ ಪಾವಿಯೇನುಕ್ಕು ಇವ್ ಉಲಗುಮ್ ಮೂನ್‍ಱುಮ್ ಉಡನ್ ನಿಱೈಯ,
ಶಿಱು ಮಾಮೇನಿ ನಿಮಿರ್ತ್ತ ಎನ್ ಶೆನ್ದಾಮರೈಕ್ಕಣ್ ತಿರುಕ್ಕುಱಳನ್,
ನಱುಮಾವಿರೈ ನಾಣ್ಮಲರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ಶಿಱು ಮಾ ಮನಿಶರಾಯ್ ಎನ್ನೈ ಆಣ್ಡಾರ್ ಇಙ್ಗೇ ತಿರಿಯವೇ ॥

ಶ್ರೀ ವಾಮನರು ತಮ್ಮ ಪುಟ್ಟದಾದ , ಆಕರ್ಷಕ ವಿಶಿಷ್ಟವಾದ ರೂಪವನ್ನು ಒಂದೇ ಪ್ರಯತ್ನದಲ್ಲಿ ಮೂರು ಲೋಕಗಳಲ್ಲಿ ಬೆಳೆಸಿ, ತುಂಬಿಸಿದರು. ಅವರಿಗೆ ಆನಂದಮಯವಾದ ಕೆಂಪಾದ ತಾವರೆಯ ಹಾಗೆ ದಿವ್ಯ ಕಣ್ಣುಗಳಿವೆ. ಪಾಪಿಯಾದ ನನಗೆ ಅಂತಹ ವಾಮನರ ಸುಗಂಧಿತವಾದ, ಉತ್ಕೃಷ್ಟವಾದ, ಹೊಸದಾದ ಜೇನು ತುಂಬಿರುವ ಹೂವಿನ ಹಾಗಿರುವ ದಿವ್ಯ ಪಾದಗಳನ್ನು ಸೇರಲು ಯೋಗ್ಯವೇ? ಅಂತಹ ವಾಮನರ ಸೇವಕರಾದ ಭಾಗವತರು ಅವರು ಮನುಷ್ಯ ರೂಪದಲ್ಲಿ ನೋಡಲು ಚಿಕ್ಕದಾಗಿ ಕಾಣಬಹುದು, ಆದರೆ ಅವರದು ಬಹು ದೊಡ್ಡ ವ್ಯಕ್ತಿತ್ವ. ಅವರು ನನ್ನನ್ನು ತಮ್ಮ ದಾಸನನ್ನಾಗಿ ಮಾಡಿಕೊಂಡರು. ಅವರು ನನಗೆ ಈ ಭೂಮಿಯಲ್ಲಿ ಕಾಣಲು ಸಿಗುವರೇ?

ನಾಲ್ಕನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “”ನನಗೆ ಇಲ್ಲಿಯೇ ಶ್ರೀವೈಷ್ಣವರನ್ನು ಆನಂದ ಪಡಿಸಲು ಎಂಪೆರುಮಾನರನ್ನು ಹಾಡಿ ಹೊಗಳಲು ಅವಕಾಶ ಸಿಕ್ಕರೆ, ನನ್ನ ಅಂತಿಮ ಗುರಿ ಇದೇ ಭೂಮಿಯಲ್ಲಿ ನಿರಂತರವಾಗಿ ಇರುವುದು . ಈ ಭೂಮಿಯು ಅಂತಹವರ ಚಲನದಿಂದಾಗಿ ನಿಜವಾಗಿಯೂ ಪ್ರಶಂಸೆಗೆ ಯೋಗ್ಯವಾಗಿದೆ.
ಇಙ್ಗೇ ತಿರುನ್ದೇಱ್ಕಿೞುಕ್ಕುತ್ತೆನ್ ಇರುಮಾ ನಿಲಮ್ ಮುನ್ ಉಣ್ಡುಮಿೞ್‍ನ್ದ
ಶೆಙ್ಗೋಲತ್ತ ಪವಳವಾಯ್ ಚ್ಚೆನ್ದಾಮರೈ ಕ್ಕಣ್ ಎನ್ನಮ್ಮಾನ್
ಪೊಙ್ಗೇೞ್ ಪುಗೞ್‍ಗಳ್ ವಾಯವಾಯ್ ಪ್ಪುಲನ್‍ಕೊಳ್ ವಡಿವೆನ್‍ಮನತ್ತದಾಯ್
ಅಙ್ಗೇಯ್ ಮಲರ್ಗಳ್ ಕೈಯವಾಯ್ ವೞಿಪಟ್ಟೋಡ ಅರುಳಿಲೇ ॥

ಎಂಪೆರುಮಾನರು ನನ್ನ ಸ್ವಾಮಿ. ಅವರು ಸುಂದರವಾದ , ಹವಳದಂತಹ ಕೆಂಪಾದ ದಿವ್ಯ ತುಟಿಗಳನ್ನು ಹೊಂದಿದ್ದಾರೆ. ಅವುಗಳು ಪ್ರಳಯ ಕಾಲದಲ್ಲಿ ಅಪಾಯದಲ್ಲಿರುವ ,ವಿಸ್ತಾರವಾಗುತ್ತಿರುವ , ಪ್ರಶಂಸೆಗೆ ಯೋಗ್ಯವಾದ ಭೂಮಂಡಲವನ್ನೇ ನುಂಗಿದರು ಮತ್ತು ಅದನ್ನು ಕಾಪಾಡಿ , ನಂತರ ಉಗಿದರು. ಅವರಿಗೆ ಕೆಂಪಾದ ತಾವರೆಯಂತಿರುವ ದಿವ್ಯ ಕಣ್ಣುಗಳಿವೆ. ಅವರ ಕಲ್ಯಾಣ ಗುಣಗಳನ್ನು ನನ್ನ ಮಾತಿನಲ್ಲಿ ಹೇಳಿ, ಅವರ ದಿವ್ಯ ರೂಪವನ್ನು ಮನದಲ್ಲಿ ತುಂಬಿಕೊಂಡು, ನನ್ನ ಎಲ್ಲಾ ಇಂದ್ರಿಯಗಳನ್ನು ಸೂರೆಗೊಂಡು , ಅವರಿಗಾಗಿ ಅವರ ಶ್ರೇಷ್ಠತೆಯನ್ನು ಮೆರೆಸಲು ಹೂಗಳನ್ನು ನನ್ನ ಕೈಗಳಲ್ಲಿ ಹಿಡಿದುಕೊಂಡ ನನ್ನನ್ನು ಅವರು ಆಶೀರ್ವದಿಸಿದರೆ ಯಾರಿಗೆ ಏನು ಕಷ್ಟವಾಗುತ್ತದೆ?

ಐದನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ “ ಒಂದು ವೇಳೆ ನಾನು ತಿರುನಾಡಿಗೆ (ಪರಮಪದಕ್ಕೆ) ಹೋದರೂ ಮತ್ತು ಪರಮ ಗುರಿಯಾದ ಎಂಪೆರುಮಾನರಿಗೆ ಸೇವೆ ಕೈಂಕರ್‍ಯಗಳನ್ನು ಮಾಡಿದರೂ ಮತ್ತು ಎಲ್ಲಾ ವೈಭವಗಳನ್ನೂ ಐಶ್ವರ್‍ಯಗಳನ್ನೂ ಹೊಂದಿದರೂ, ಅವುಗಳು ಈ ಸಂಸಾರದಲ್ಲಿ ಹುಟ್ಟಿ , ಶ್ರೀವೈಷ್ಣವರ ಸಂತೋಷಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡುವುದಕ್ಕೆ ಸಮನಾಗುವುದೇ?”
ವೞಿ ಪಟ್ಟೋಡ ಅರುಳ್ ಪೆಟ್ರು ಮಾಯನ್ ಕೋಲಮಲರ್ ಅಡಿಕ್ಕೀೞ್,
ಶುೞಿಪಟ್ಟೋಡುಮ್ ಶುಡರ್ ಚ್ಚೋದಿ ವೆಳ್ಳತ್ತು ಇನ್ಬುಟ್ಟ್ರಿರುನ್ದಾಲುಮ್ ,
ಇೞಿ ಪಟ್ಟೋಡುಮ್ ಉಡಲಿನಿಲ್ ಪಿಱನ್ದು ತನ್ ಶೀರ್ ಯಾನ್ ಕಟ್ರು
ಮೊೞಿಪಟ್ಟೋಡುಮ್ ಕವಿಯಮುದಮ್ ನುಗರ್ಚ್ಚಿ ಉಱುಮೋ ಮುೞುದುಮೇ ॥

ಸರ್ವೇಶ್ವರನಿಗೆ ಆಶ್ಚರ್‍ಯ ಪಡುವ ರೀತಿಯಲ್ಲಿ ಕಲ್ಯಾಣ ಗುಣಗಳು, ದಿವ್ಯ ರೂಪ, ಮತ್ತು ಐಶ್ವರ್‍ಯಗಳು ಇವೆ. ನಾನು ಅಂತಹ ಸರ್ವೇಶ್ವರನ ಕೃಪೆಯಿಂದ ಅಲ್ಲಿ ಸೇರಿ, ಅತ್ಯಂತ ಪ್ರಭೆಯನ್ನು ಹೊಂದಿರುವ , ಸತತವಾಗಿ ಸುತ್ತುತ್ತಿರುವ ಪರಮಪದಕ್ಕೆ ಅವನ ಕರುಣೆಯಿಂದ ಅವನ ದಿವ್ಯ ಪಾದಗಳನ್ನು ಸೇರಿ, ಅತ್ಯಂತ ಆನಂದದಿಂದ ಅವನ ಕೈಂಕರ್‍ಯವನ್ನು ಮಾಡಿದರೂ, ಅಥವಾ ಐಶ್ವರ್‍ಯವನ್ನೂ , ಕೈವಲ್ಯವನ್ನೂ ಈ ಭೂಲೋಕದಲ್ಲಿ ಅನುಭವಿಸಿದರೂ, ಇಂತಹ ಕೆಳಮಟ್ಟದ ದೇಹದಲ್ಲಿ ಜನಿಸಿ, ಅವನ ಉತ್ತಮ ಗುಣಗಳನ್ನು ಕಲಿತುಕೊಂಡು , ಅಮೃತದಂತಿರುವ ಅವನ ಗುಣಗಾನವನ್ನು ಮಾಡುವ ಪದ್ಯಗಳನ್ನು, ಪದಗಳ ಸುರಿಮಳೆಯನ್ನೂ ಹಾಡಿ ಆನಂದಿಸುವುದಕ್ಕೆ ಸಮನಾಗುವುದೇ?

ಆರನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ, “ ಐಶ್ವರ್‍ಯ (ಲೌಕಿಕ ಸಂಪತ್ತು) ಕೈವಲ್ಯ (ತನ್ನಲ್ಲಿ ತಾನೇ ಆನಂದ ಪಡುವುದು) , ಭಗವತ್ ಅನುಭವ ಪ್ರೀತಿ ಮತ್ತು ಭಗವತ್ ಆನಂದಮ್ ಇವುಗಳನ್ನು ಮಾತ್ರ ಸಾಧಿಸಿದರೆ , ಇವುಗಳು ಭಕ್ತರ ಆನಂದಕ್ಕಾಗಿ ತಿರುವಾಯ್‍ಮೊೞಿಯನ್ನು ಹಾಡಿದಕ್ಕೆ ಸಮನಾಗುವುದೇ?”
ನುಗರ್ಚ್ಚಿ ಉಱುಮೋ ಮೂವುಲಗಿನ್ ವೀಡು ಪೇಱು ತನ್ ಕೇೞಿಲ್
ಪುಗರ್ ಚ್ಚೆಮ್ಮುಗತ್ತ ಕಳಿಱಟ್ಟ ಪೊನ್ ಆೞಿಕ್ಕೈ ಎನ್ನಮ್ಮಾನ್
ನಿಗರ್ ಚ್ಚೆಮ್ಬಙ್ಗಿ ಎರಿ ವಿೞಿಗಳ್ ನೀಣ್ಡ ಅಶುರರ್ ಉಯಿರೆಲ್ಲಾಮ್,
ತಗರ್ತುಣ್ಡು ಉೞಲುಮ್ ಪುಟ್ ಪಾಗನ್ ಪೆರಿಯ ತನಿಮಾ ಪ್ಪುಗೞೇ ॥

ಎಂಪೆರುಮಾನರು, ನನ್ನ ಸ್ವಾಮಿ, ಅವರಿಗೆ ದಿವ್ಯ ಉಂಗುರವುಳ್ಳ ದಿವ್ಯ ಕೈಗಳು ಇವೆ. ಅದು ಅತ್ಯಂತ ತೇಜಸ್ಸುಳ್ಳ ಮತ್ತು ಕೆಂಪಾದ ಮುಖವುಳ್ಳ ಅಸುರನಾದ ಆನೆಯನ್ನು ಕೊಂದುಹಾಕಲು ಸಹಾಯ ಮಾಡಿತು. ಕೆಂಪಾದ ಕೂದಲುಳ್ಳ ಮತ್ತು ಭಯಂಕರವಾದ ತಟ್ಟೆಯಂತಹ ಕಣ್ಣುಗಳುಳ್ಳ ಎತ್ತರದ ಬಲಶಾಲಿಯಾದ ಅಸುರರನ್ನೆಲ್ಲಾ ನುಂಗಿ ಹಾಕುವ ಮತ್ತು ನಭದಲ್ಲಿ ಗಾಳಿಯ ಮೇಲೆ ಆಕ್ರಮಣ ಮಾಡುವ ಪೆರಿಯ ತಿರುವಡಿ ಎಂದೇ ಪ್ರಖ್ಯಾತವಾದ ಗರುಡಳ್ವಾರರನ್ನೇ ನಿಯಂತ್ರಿಸುವರು. ಮೂರು ಲೋಕಗಳನ್ನು ಸೃಷ್ಟಿಸುವ ಸಮರ್ಥವಾದ ಸ್ವಾಮಿತ್ವವು , ಅಂತಹ ಎಂಪೆರುಮಾನರ ಅಪರಿಮಿತ , ವಿಶಿಷ್ಟವಾದ ಮಹದಾನಂದಕರವಾದ ಕಲ್ಯಾಣ ಗುಣಗಳ ಸಂಕಲನವನ್ನು ಹಾಡಿ ಹೊಗಳುವ, ಭಾಗವತರಿಗೆ ಅತ್ಯಂತ ಪ್ರೀತಿ ಪಾತ್ರವಾದ ತಿರುವಾಯ್‍ಮೊೞಿಗೆ ಸಾಟಿಯಾಗುವುದೇ?

ಏಳನೆಯ ಪಾಸುರಮ್:

ಆಳ್ವಾರರು ಹೇಳುತ್ತಾರೆ , “ನನಗೆ ಸ್ವಾತಂತ್ರ್ಯ ಗುರಿಯಾದ ಭಗವತ್ ಅನುಭವದ ಆಸೆ ಇಲ್ಲ. ಆದರೆ, ನನಗೆ ಭಾಗವತರ ಆನಂದಕ್ಕಾಗಿ ಭಾಗವತರ ಜೊತೆಗೆ ಕೂಡಿ ಭಗವತ್ ಅನುಭವಮ್ ಪಡೆಯುವುದರಲ್ಲಿ ಅತಿಯಾದ ಸಂತೋಷವಿದೆ”
ತನಿ ಮಾ ಪುಗೞೇ ಎಞ್ಜಾನ್‍ಱುಮ್ ನಿಱ್ಕುಮ್ ಪಡಿಯಾ ತ್ತಾನ್ ತೋನ್‍ಱಿ
ಮುನಿ ಮಾಪ್ಪಿರಮ ಮುದಲ್ ವಿತ್ತಾಯ್ ಉಲಗಮೂನ್‍ಱುಮ್ ಮುಳೈಪಿತ್ತ,
ತನಿಮಾತ್ತೆಯ್ ವತ್ತಳಿರ್ ಅಡಿಕ್ಕೀಳ್ ಪುಗುದಲ್ ಅನ್‍ಱಿ ಅವನ್ ಅಡಿಯಾರ್,
ನನಿಮಾ ಕ್ಕಲವಿ ಇನ್ಬಮೇ ನಾಳುಮ್ ವಾಯ್‍ಕ್ಕ ನಙ್ಗಟ್ಕೇ ॥


ಎಂಪೆರುಮಾನರು ತಮ್ಮ ವಿಶಿಷ್ಟವಾದ ಗುಣವಾದ ಕಾರಣತ್ವವನ್ನು (ಅವರೇ ಎಲ್ಲದಕ್ಕೂ ಕಾರಣಕರ್ತ) ಸ್ಥಾಪಿಸಲು ಸೃಷ್ಟಿಯನ್ನು ಆರಂಭಿಸಿದರು ಮತ್ತು ತಮ್ಮ ಸೃಷ್ಟಿಯ ಮೇಲೆ ಯಾವಾಗಲೂ ಸ್ಥಿರವಾಗಿ ತೊಡಗಿಸಿಕೊಂಡು ‘ಪರ ಬ್ರಹ್ಮಮ್’ ಎಂದು ಕರೆಯಲ್ಪಡುವರು. ಅವರು ಮೂಲ ಲೌಕಿಕ ಕಾರಣಕ್ಕಾಗಿ ಮೂರು ಲೋಕಗಳನ್ನು ಸೃಷ್ಟಿಸಿದರು. ಅಂತಹ ವಿಶಿಷ್ಟವಾದ ಶ್ರೇಷ್ಠ ಸ್ವಾಮಿಯ ಬಹು ಮೃದುವಾದ ದಿವ್ಯ ಪಾದಗಳ ಅಡಿಯನ್ನು ತಲುಪುವುದರ ಬದಲಾಗಿ , ಅಂತಹ ಭಗವಂತನು ತನ್ನ ಶ್ರೇಷ್ಠ ಗುಣಗಳಿಂದ ಗುಲಾಮರಾಗಿ ಮಾಡಿದ ಭಾಗವತರ ಜೊತೆಗೆ ಕೂಡಿ ಅವನನ್ನು ಸ್ಮರಿಸುವುದು ನಮಗೆ ಸೂಕ್ತವಾದುದು.

ಎಂಟನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ ,” ನಾನು ನಿಜವಾಗಿ ಭಾಗವತರೊಂದಿಗೆ ಕೂಡಿ ಸಂಭಾಷಣೆ ಮಾಡಬೇಕೆ? ಅವರ ಜೊತೆ ಇದ್ದರೆ ಸಾಕು. ಇಲ್ಲವಾದರೆ ಅವರ ಗುಂಪನ್ನು ನೋಡಿದರೆ ಸಾಕು.”
ನಾಳುಮ್ ವಾಯ್‍ಕ್ಕ ನಙ್ಗಟ್ಕು ನಳಿ ನೀರ್ ಕಡಲೈ ಪಡೈತ್ತು, ತನ್
ತಾಳುಮ್ ತೋಳುಮ್ ಮುಡಿಗಳುಮ್ ಶಮನ್ ಇಲಾದ ಪಲ ಪರಪ್ಪಿ,
ನೀಳುಮ್ ಪಡರ್ ಪೂಙ್ಗಱ್‌ಪಗ ಕ್ಕಾವುಮ್ ನಿಱೈಪ ನ್ನಾಯಿತ್ತಿನ್,
ಕೋಳುಮುಡೈಯ ಮಣಿಮಲೈಪೋಲ್ ಕಿಡನ್ದಾನ್ ತಮರ್ಗಳ್ ಕೂಟ್ಟಮೇ ॥


ಎಂಪೆರುಮಾನರು ಹಾಗೆಯೇ ಸಹಜವಾಗಿ ತಣ್ಣಗಿನ ನೀರಿನ ಸಮುದ್ರವನ್ನು ಸೃಷ್ಟಿಸಿದರು ಮತ್ತು ಅದರಲ್ಲಿ ವೇದಗಳಲ್ಲಿ ಹೇಳಿರುವ ಹಾಗೆ ಮಲಗಿ ವಿಶ್ರಾಂತಿಸಿದರು. ಅವರಿಗೆ ವಿಶಿಷ್ಟವಾದ , ಸರಿಸಾಟಿಯಿಲ್ಲದ ಬಹು ದಿವ್ಯ ಪಾದಗಳು, ದಿವ್ಯ ತೋಳುಗಳು, ಕೆಂಪು ರತ್ನದ ಬೆಟ್ಟದ ಮೇಲೆ ಇರುವ ಕರ್ಪಗ ಮರಗಳಂತಿರುವ ಮತ್ತು ಪ್ರಕಾಶಮಾನವಾದ ಸೂರ್‍ಯ ಮತ್ತು ಅವನ ಕಿರಣಗಳಂತಿರುವ ದಿವ್ಯ ಕಿರೀಟ/ತಲೆ . ಅಂತಹ ಭಗವಂತನ ಜೊತೆಗೆ ನಮ್ಮ ಮಿಲನವಾಗಬೇಕು. ಎಂದೆಂದಿಗೂ. ಕೂಟ್ಟಮ್ ಸೇರ್ತ್ತಿ – ಅಂದರೆ ಎಲ್ಲರನ್ನೂ ಸೇರಿಸುವುದು. ಆಳ್ವಾರರು ಅಂತಹ ಜನಗಳೊಂದಿಗೆ (ಭಾಗವತರೊಂದಿಗೆ) ಅವರ ಮುಂದೆ ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತಾರೆ.

ಒಂಬತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ನಾವು ಅವರೊಂದಿಗೆ ಬಾಳಬೇಕೆ? ಅವರಿಗೆ ನಿರಂತರವಾಗಿ ಸೇವೆ ಸಲ್ಲಿಸಿದರೆ ಸಾಕು.”

ತಮರ್ಗಳ್ ಕೂಟ್ಟ ವಲ್ ವಿನೈಯೈ ನಾಶಮ್ ಶೆಯ್ಯುಮ್ ಶದುಮೂರ್ತ್ತಿ,
ಅಮರ್ ಕೊಳ್ ಆೞಿ ಶಙ್ಗು ವಾಳ್ ವಿಲ್ ತಣ್ಡಾ ಆದಿ ಪಲ್ ಪಡೈಯನ್,
ಕುಮರನ್ ಕೋಲವಙ್ಗಣೈ ವೇಳ್ ತಾದೈ ಕೋದಿಲ್ ಅಡಿಯಾರ್ ತಮ್,
ತಮರ್ಗಳ್ ತಮರ್ಗಳ್ ತಮರ್ಗಳಾಮ್ ಶದಿರೇ ವಾಯ್‍ಕ್ಕ ತಮಿಯೇಱ್ಕೇ ॥


ಎಂಪೆರುಮಾನರು ನಮ್ಮ ನಾಯಕನು. ಅವರ ಭಕ್ತವೃಂದಕ್ಕೆ ಇರುವ ಭಯಂಕರ ಪಾಪಗಳನ್ನು ತೊಡೆದುಹಾಕುವ ಸಾಮರ್ಥ್ಯವಿರುವವರು. ಅವರಿಗೆ ‘ಪಂಚಾಯುಧಮ್’ ಸೇರಿಕೊಂಡು ಅನೇಕ ಆಯುಧಗಳಿವೆ. ಅವರು ಅತಿ ಸೌಂದರ್ಯವನ್ನು ಹೊಂದಿರುವ, ಐದು ಬಾಣಗಳನ್ನು ಹೊಂದಿರುವ ಕಾಮದೇವನಿಗೇ ತಂದೆಯು. ಈ ಸಂಸಾರದಲ್ಲಿ ಗತಿಯಿಲ್ಲದ ನಾವು ಅಂತಹ ಎಂಪೆರುಮಾನರಿಗೇ ಕಳಂಕವಿಲ್ಲದೆ ದಾಸರಾಗಿರುವ ದಾಸರಿಗೇ ದಾಸರು . ಅವರು ನಮ್ಮ ಮೇಲೆ ಕರುಣೆ ತೋರಬೇಕು. ‘ಕೂಟ್ಟ ವಲ್ ವಿನೈ’ ಎಂಬುದು ಈ ಸಂಸಾರದಲ್ಲಿ ಲೌಕಿಕ ಸಂತೋಷಕ್ಕಾಗಿ ಬಂಧನಕ್ಕೊಳಗಾದ ಪಾಪಗಳಿಂದ ಬಂದಿರುವುದು. ಅದನ್ನು ‘ಸಾದಿರ್ ಮೂರ್ತಿ’ ಎಂದು ಉಚ್ಛಾರಣೆ ಮಾಡದೇ ‘ಚಾದು ಮೂರ್ತಿ’ (ಎಂದರೆ ಎಂಪೆರುಮಾನರ ವಿವಿಧ ರೂಪಗಳು) ಎಂದು ಉಚ್ಛರಿಸಬೇಕು.

ಹತ್ತನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ ,” ನನ್ನ ಸಂಬಂಧವನ್ನು ಹೊಂದಿರುವವರು ಮತ್ತು ನಾನೂ ಈ ಫಲವನ್ನು ಪಡೆಯಬೇಕು. ( ಭಾಗವತ ಶೇಷತ್ವಮ್ – ಭಕ್ತರಿಗೇ ಸೇವಕರಾಗಿರುವುದು. )
ವಾಯ್‍ಕ್ಕ ತಮಿಯೇಱ್ಕು ಊೞಿತೋಱೂೞಿ ಊೞಿ , ಮಾಕಾಯಾಮ್
ಪೂಕ್ಕೊಳ್ ಮೇವಿ ನಾನ್ಗುತೋಳ್ ಪೊನ್ ಆೞಿ ಕ್ಕೈ ಎನ್‍ ಅಮ್ಮಾನ್ ,
ನೀಕ್ಕಮಿಲ್ಲಾ ಅಡಿಯಾರ್ ತಮ್ ಅಡಿಯಾರಡಿಯಾರಡಿಯಾರ್ ಎಮ್
ಕೋಕ್ಕಳ್, ಅವರ್ಕ್ಕೇ ಕುಡಿಗಳಾಯ್ ಚ್ಚೆಲ್ಲುಮ್ ನಲ್ಲ ಕೋಟ್‍ಪಾಡೇ ॥


ಎಂಪೆರುಮಾನರು ತಮ್ಮ ಆಕರ್ಷಕ , ಶ್ರೇಷ್ಠ , ತಿರುಮೇನಿಯ ಸೌಂದರ್‍ಯದಿಂದ ನನ್ನನ್ನು ತಮ್ಮ ಅಡಿಯಾರಾಗಿಸಿಕೊಂಡರು. ಅವರ ದಿವ್ಯ ರೂಪವು ಕಾಯಾಮ್ ಹೂವಿನ (ದಟ್ಟವಾದ ನೇರಳೆ ಬಣ್ಣದ ಹೂವು) ಬಣ್ಣದ ಹಾಗಿದೆ. ನಾಲ್ಕು ದಿವ್ಯ ಭುಜಗಳು ಮತ್ತು ಅವರ ದಿವ್ಯ ಕೈಗಳು ದಿವ್ಯ ಚಕ್ರವನ್ನು ಹೊಂದಿದೆ. ನನಗೂ ಮತ್ತು ನನಗೆ ಸಂಬಂಧಿಸಿದವರಿಗೂ , ಅಂತಹ ಎಂಪೆರುಮಾನರನ್ನು ಅಗಲಿಕೆಯಿಲ್ಲದೆ ಅನುದಿನವೂ ಆಸ್ವಾದಿಸುತ್ತಿರುವ ಭಕ್ತರು ನಮಗೆ ನಾಯಕರು. ಅಂತಹ ಭಕ್ತರಿಗೆ ಮಾತ್ರ ಸೇವೆ ಸಲ್ಲಿಸುವ ಸಂತತಿಯಲ್ಲೇ ನಾನು ಹುಟ್ಟಬೇಕು. ಮತ್ತು ಹೊಗಳಿಕೆಗೆ ಪಾತ್ರವಾಗುವಂತಹ ಕಾರ್ಯವಾದ ಅವರನ್ನು ಪ್ರತಿಯೊಂದು ಮಹಾಕಲ್ಪಗಳಲ್ಲಿಯೂ ಸಂಭವಿಸುವ ಮಧ್ಯಮ ಕಲ್ಪದಲ್ಲಿ ಅವರ ಸಾನ್ನಿಧ್ಯ ನನಗೆ ಸಿಗಬೇಕು.

ಹನ್ನೊಂದನೆಯ ಪಾಸುರಮ್ :
ಆಳ್ವಾರರು ಹೇಳುತ್ತಾರೆ, “ಯಾರು ಈ ಪದಿಗೆಯ ಪರಿಣಿತರಾಗುತ್ತಾರೋ ಅವರಿಗೆ ಈ ಪದಿಗೆಯಲ್ಲಿ ವಿವರಿಸಿರುವ ‘ಭಾಗವತ ಶೇಷತ್ವಮ್’ (ಭಕ್ತರಿಗೇ ಸೇವೆ ಸಲ್ಲಿಸುವ ಭಾಗ್ಯ) ಸಿಕ್ಕಿ, ಇಲ್ಲಿಯೇ ಅವರವರ ಕುಟುಂಬದೊಂದಿಗೆ ಸಂತೋಷವಾಗಿರುತ್ತಾರೆ.”
ನಲ್ಲ ಕೋಟ್‍ಪಾಟ್ಟುಲಗಙ್ಗಳ್ ಮೂನ್‍ಱಿನುಳ್ಳುಮ್ ತಾನ್ ನಿಱೈನ್ದ,
ಅಲ್ಲಿಕ್ಕಮಲಕ್ಕಣ್ಣನೈ ಅನ್ದಣ್ ಕುರುಗೂರ್ ಚ್ಚಡಗೋಪನ್,
ಶೊಲ್ಲಪಟ್ಟ ಆಯಿರತ್ತುಳ್ ಇವೈಯುಮ್ ಪತ್ತುಮ್ ವಲ್ಲಾರ್ಗಳ್,
ನಲ್ಲ ಪದತ್ತಾಲ್ ಮನೈ ವಾೞ್‍ವರ್ ಕೊಣ್ಡ ಪೆಣ್ಡೀರ್ ಮಕ್ಕಳೇ ॥


ಎಂಪೆರುಮಾನರು ವಿಸ್ತಾರವಾಗುತ್ತಿರುವ ಮೂರು ಲೋಕಗಳಲ್ಲೂ ಹರಡಿಕೊಂಡಿದ್ದಾರೆ ಮತ್ತು ಅವರಿಗೆ ಕಮಲದ ಹೂಗಳಂತಹ ಕಣ್ಣುಗಳಿವೆ. ಯಾರು ಈ ಹತ್ತು ಪಾಸುರಗಳನ್ನು ಉತ್ತೇಜಕವಾದ ಆಳ್ವಾರ್ ತಿರುನಗರಿಯ ನಾಯಕರಾದ ನಮ್ಮಾಳ್ವಾರರು ಕರುಣೆಯಿಂದ ರಚಿಸಿದ ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಪಠಿಸುತ್ತಾರೋ , ಅವರು ಗೃಹಸ್ತಾಶ್ರಮದಲ್ಲಿ ಸರಿಹೊಂದುವ ಪತ್ನಿ ಮತ್ತು ಸುತರೊಂದಿಗೆ ವಿಶಿಷ್ಟವಾದ ತದಿಯ ಶೇಷತ್ವಮ್‍ನಲ್ಲಿ ಸಂತೋಷದಿಂದ ಬಾಳಿ ಬದುಕುತ್ತಾರೆ.

ನಮ್ಮಾೞ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-8-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

కోయిల్ తిరువాయ్మొళి – సరళ వ్యాఖ్యానము – 4.1 -ఒరునాయగమాయ్

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

కోయిల్ తిరువాయ్మొళి

<< 3.3 – ఒళివిల్

ramanuja-selvapillai-2

ఐశ్వర్యయము (లౌకిక సుఖాలు), కైవల్యము (శాశ్వతంగా తనను తాను ఆనందించుట) మరియు భగవత్ కైంకార్యము (భగవానుడికి నిత్య కైంకార్యము) అనే మూడు పురుషార్థము‌లలో, ఐశ్వర్యయము మరియు కైవల్యం తమ స్వభావానికి సరితూగవని, అల్పమైనవని ఆళ్వారు నొక్కి చెబుతున్నారు. సర్వేశ్వరుడు, శ్రియః పతి, శ్రీమన్నారాయణుని పాద పద్మాల వద్ద కైంకర్యాన్ని కోరుకోవాలని ఆళ్వారు కృపతో వివరిస్తున్నారు. ఎంబెరుమానార్ ఈ పదిగాన్ని తిరునారాయణపురం తిరునారణ ఎంపెరుమానుడికి  సమర్పించుకున్నారు.

మొదటి పాశురము: “పెద్ద పెద్ద రాజులు, చక్రవర్తులు ఏదో ఒక రోజు తమ రాజ్యాన్ని కోల్పోయి  బిక్షాటన చేసుకుంటూ దీనమైన జీవితాన్ని గడిపిన సందర్భాలు ఎన్నో ఉన్నాయి. కాబట్టి, నిత్య ఐశ్వర్య వంతుడైన తిరునారాయణుడి (శ్రీమన్నారాయణ) దివ్య పాదాలను చేరుకోండి మరియు ఉద్ధరింపబడండి” అని ఆళ్వారు వివరిస్తున్నారు.

ఒరు నాయగమాయ్‌ ఓడ ఉలగుడన్ ఆణ్డవర్
కరు నాయ్‌ కవర్‌ంద కాలర్ శిదైగియ పానైయర్
పెరు నాడు కాణ ఇమైయిలే పిచ్చై తాం కొళ్వర్‌
తిరునారణన్ తాళ్‌ కాలమ్పెఱ చ్చిందిత్తుయ్ మినో

ఈ భూమిపైన స్వతంత్ర సామ్రాజ్యాలను ఏలుతున్న అత్యున్నతమైన  రారాజులు కుడా వాళ్ళ సంపదను కోల్పోయి, రాత్రుల్లో నల్ల కుక్క కరిచిన కాళ్ళతో, విరిగిన బొచ్చె చేతిలో పట్టుకొని అడుక్కుటుంటారు. ఒకప్పుడు ఆ గొప్ప సామ్రాజ్య ప్రజలను ఏలిన వారు, వారి ముందే భిక్ష ఎత్తుకుంటారు.  ప్రాపంచిక  ఐశ్వర్యము తాత్కాలికము, కాబట్టి సమయం వృధా చేయకుండా వెంటనే నిత్య సంపన్నుడైన నారాయణుని దివ్య పాదాల యందు ధ్యానించండి ఉద్ధరించబడండి.

రెండవ పాశురము:  “మీ సంపదను పోగొట్టుకొనుటతో పాటు, మీరు మీ భార్యను కూడా కోల్పోయే సమయము కూడా రావచ్చు. కాబట్టి, మనందరికీ ప్రభువు అయిన శ్రీలక్ష్మీ పతి శ్రీమన్నారాయణుడిని శరణు వేడుకోవడం అతి అవసరము” అని ఆళ్వారు వివరిస్తున్నారు.

ఉయ్ మిన్ తిఱై కొణర్‌ందు ఎన్జులగాండవర్‌  ఇమ్మైయే
తమ్మిన్ శువై మడవారై ప్పిఱర్‌ కొళ్ళు త్తాం విట్టు
వెమ్మినొళి వెయిల్ కానగం పోయ్‌ క్కుమై తిన్బర్గళ్
శెమ్మిన్ ముడి త్తిరుమాలై విరైందడి శేర్మినో

ప్రపంచాన్ని ఏలే రాజులు, “మీ నివాళులతో మనుగడ సాగుతుంది అని సామంత రాజులతో అంటారు”, కానీ అదే జీవితంలో, వారి ప్రియమైన తమ భార్యలను ఇతర రాజులచేత హింసించబడేందుకు వదిలిపెట్టి, వారి రాజ్యంలో ఉండలేక, మండే ఎండలో అడవులలోకి వెళ్లవలసి వస్తుంది. అందుకని, మీరు త్వరగా శ్రీమహాలక్ష్మికి పతి అయిన అనంత కోటి సూర్యుల తేజస్సుగల కిరీటాన్ని ధరించిన భగవానుడి పాదాలకు శరణాగతి చేయండి.

మూడవ పాశురము: “తమకు లొంగిన రాజుల బాగోగులను చూసుకోని రారాజులు తమ సంపదను కోల్పోతారు, ఆపై ఇతరుల గౌరవము పొందకుండా జీవిస్తారు. కాబట్టి పరమానందమయుడైన శ్రీ కృష్ణుని దివ్య పాదాలను ఆశ్రయించండి”. అని ఆళ్వారు తెలుపుతున్నారు.

అడిశేర్‌ ముడియినరాగి అరశర్ కళ్‌ తాం తొళ
ఇడిశేర్‌ మురశంగళ్ ముఱ్ఱత్తియంబు ఇరుందవర్
పొడి శేర్‌ తుగళాయ్‌ పోవర్గల్ ఆదలిన్ నొక్కెన
క్కడిశేర్‌ తుళాయ్‌ ముడి క్కణ్ణన్‌ కళల్ గళ్ నినైమినో

చక్రవర్తుల కాళ్ళ యందు ఉండి తమను ఆరాధిస్తున్న ఇతర రాజులను పట్టించుకోకుండా  బయటనుండి వచ్చే తంబురు ధ్వనులను ఆనందిస్తుంటారు. అటువంటి చక్రవర్తులు, గాలిలో ఒక చిన్న అణువులా పనికిరాకుండా అవుతారు. కాబట్టి, సువాసనలు వెదజల్లే తులసితో అలంకరించబడిన కిరీటాన్ని ధరించిన కృష్ణుని దివ్య పాద పద్మాలను ధ్యానించండి.

నాలుగవ పాశురము:  “ఆయుషు కూడా అల్పమైనది కాబట్టి, మీ అడ్డంకులను తొలగించే కృష్ణుడి దివ్య చరణాలను ఆరాధించండి” అని ఆళ్వారు తెలుపుతున్నారు.

నివైప్పాన్ పుగిల్‌ కడల్‌ ఎక్కలిన్ నుణ్మణలిన్ పలర్‌
ఎనైత్తోర్‌ ఉగంగళుం ఇవ్వులగాండు కళిందవర్
మనైప్పాల్‌ మరుంగఱ మాయ్ తలల్లాల్‌ మఱ్ఱుక్కండిలం
పనై త్తాళ్‌ మద గళిఱట్టవన్  పాదం పణిమినో

‌భగవత్ అనుభవం లేకుండా మరణించిన రాజుల గురించి చెప్పడానికి బయలుదేరినట్లయితే అనేక యుగాలుగా మరణించిన వారి సంఖ్య సముద్రంలో ఇసుక దినుసుల కన్నా పెద్దదౌతుంది; వాళ్ళ కోట భవనాలకు యడారికి మధ్య వ్యత్యాసం లేనంత రీతిలో అవి నాశనమై పోయి, గుర్తుపట్టలేనంత నేలమట్టమై ఉన్నాయి. కాబట్టి, తాటి చెట్టు వలే గుండ్రంగా పాదాలు ఉన్న మత్త గజాన్ని [కువలయాపీడం] వధించిన కృష్ణుని దివ్య పాదాలను మీరందరూ ఆరాధించండి.

ఐదవ పాశురము:  “ఐశ్వర్యము లాగే  స్త్రీ సంయోగము కూడా లోపాలతో కూడినది, తాత్కాలికమైనది” అని ఆళ్వారు చెబుతున్నారు.

పణిమిన్ తిరువరుళ్‌ ఎన్నుం అంజీద ప్పైం పూమ్పళ్ళి
ఆణి మెన్ కుళలార్ ఇన్బ క్కలవి అముదుణ్డార్
తుణి మున్బునాల ప్పల్ ఏళైయర్‌ తామిళిప్ప శెల్వర్‌
మణి మిన్ను మేని నం మాయవన్ పేర్‌ శొల్లి వాళ్మినో

సుఖాన్ని పొందటానికి, సున్నితమైన చల్లని పూల మంచం మీద అలంకరించుకొని పడుకుని ఉన్న సుందరీమణులను ఆనందించిన రాజులు మరియు ధనవంతులు, ఆ సుందరీమణులు తమ పట్ల అవమానకరమైన మాటలు మాట్లాడుతున్నప్పటికీ, ఆ యువతి వద్దకి తిరిగి వెళతారు; అందువల్ల, తనను ఆస్వాదించమని తమ భక్తులకు అనుమతించే నీలమణి వంటి తేజము గల దివ్య స్వరూపమున్న ప్రభువు యొక్క దివ్య నామాలను పఠించడం ద్వారా మీరు సంతోషంగా జీవిస్తారు.

ఆరవ పాశురము:  “సృష్టి కాలం నుండి ఈ రోజు వరకు, నేను ఏ చిరకాలము శ్రీమంతునిగా ఉన్న ఎవరిని చూడలేదు. అందువల్ల క్షీరాబ్ది నాథుడికి దాసునిగా మారండి” అని ఆళ్వారు తెలుపుతున్నారు.

వాళ్ందార్గళ్ వాళ్ందదు మా మళై మొక్కుళిన్ మాయ్‌ందు మాయ్‌ందు
ఆళ్ందార్  ఎన్ఱల్లల్‌  అన్ఱు ముదల్‌ ఇన్ఱఱుదియా
వాళ్ందార్గళ్‌ వాళ్ందే నిన్ఱర్ ఎన్బదిల్లై నిఱ్కుఱిల్‌
ఆళ్ందార్‌ కడల్ పళ్ళి అణ్ణల్ ‌ అడియవరామినో

తాము జీవిస్తున్నామని భావించే వారు వర్షంలో ఒక బుడగ లాంటి వారు. అది మళ్లీ మళ్లీ పగిలి నాశనం అవుతుంది; ఇది కాకుండా, నిత్యము జీవించిన వారు సృష్టి ఆది నుండి ఇప్పటి వరకు ఎవ్వరూ లేరు; మీరు నిత్యజీవనము పొందటానికి మహాసముద్రము లాంటి శయ్యపై శయనించి ఉన్న స్వామికి భక్తుడిగా మారండి.

ఏడవ పాశురము: ఆహార పానీయాలు మొదలైన భోగాలు తాత్కాలికమైనవని ఆళ్వారు వివరిస్తున్నారు.

ఆమిన్ శువైయవై ఆఱోడు అడిశిల్‌ ఉండార్‌ంద పిన్
తూ మెన్ మొళి మడవార్‌ ఇరక్క పిన్నుం తుఱ్ఱువార్‌
ఈమిన్ ఎమక్కొరు తుఱ్ఱెన్ఱు ఇడఱువర్‌ ఆదలిన్
కోమిన్ తుళాయ్‌ ముడి ఆదియంశోది గుణంగళే

ధనవంతులు తమ స్వభావానికి సరితూగే రుచికరమైన, ప్రపంచ ప్రఖ్యాతిగాంచిన ఆరు రకాల రుచులు ఉన్న ఆహారాన్ని తిన్న తరువాత, ఆనందంగా తృప్తిపడిన తరువాత కూడా, వడ్డించే యువతులను, మొహమాటంతో కాదనలేక, అతి కష్టంతో వెళ్ళి మళ్ళీ ఆరగిస్తారు; కానీ తమ సంపదను కోల్పోయిన తరువాత, వారు “మాకు భోజనము పెట్టండి” అని అడుగుతూ ఆ యువతుల దగ్గరకే వెళ్లి వాళ్ళ ద్వారాలను తట్టుతారు; అందుకని, దివ్య తేజోమయ స్వరూపుడు, అతి సుందరుడైన సర్వేశ్వరుని గుణాలను ఆనందించండి, తిరు తులసితో అలంకరించబడిన కిరీటాన్ని ధరించిన ఆ స్వామి అనంతమైన ఆనందాన్ని కలిగించేవాడు, సర్వకారకుడు కూడా.

ఎనిమిదవ పాశురము:  “గడించి సంపాదించిన ఈ రాజ్యాలు భగవంతుని కృప లేకుండా ఎక్కువ కాలం ఉండవు కాబట్టి, మీరు అనంతశాయి యొక్క దివ్య నామాలను పఠించండి” అని ఆళ్వారు తెలుపుతున్నారు.

గుణం కొళ్‌ నిఱై పుగళ్‌ మన్నర్‌ కొడైక్కడన్ పూండిరుందు
ఇణైంగి ఉలగుడన్ ఆక్కిలుం ఆంగవనై ఇల్లార్
మణం కొండ బోగత్తు మన్నియుం మీళ్వర్గళ్‌ మీళ్విల్లై
పణం కొెళ్‌ అరవణైయాన్  తిరునామం పడిమినో

సీలం (సరళత) వంటి లక్షణాలున్న రాజులు, రాజ కుమారులుగా పట్టాభిషేకం అయినవారు, ఖ్యాతి గాంచినవారు, ఉదార స్వభావులు (అందరి సంక్షేమం కోసం తమ సంపదను ఖర్చుపెట్టేవారు), సుస్వరముగా శాంతిప్రియులు అని ఈ ప్రపంచంతో పేరు ప్రఖ్యాతులు ఉన్న వారు  ఎవరైనాకానీ, అష్ట ఐశ్వర్యాలలో సుసంప్పన్నుడై ఉన్నప్పటికీ ఆ సంపదకు సంబంధించిన విషయాలలో సర్వేశ్వరుడికి అధీనుడై లేనివారు, దివాళా తీసి ఆ ఐశ్వర్యము కోల్పోతారు; కాబట్టి,  తన భక్తులతో ఐక్యమై ఉండటానికి ఇష్టపడే వాడి దివ్య నామాలను మీరు పఠిస్తే / ఆచరిస్తే, ఆ అనంత శేషుడు తన శయ్యగా ఉన్నవాడు, మళ్ళీ ఈ సంసారానికి తిరిగి రాని చోటకి మిమ్మల్ని తీసుకువెళతారు.

తొమ్మిదవ పాశురము:  “ఇతర దివ్య లోకాలతో పాటు స్వర్గ లోక సుఖాలు మొదలైనవి  కూడా  తాత్కాలికమైనవి కాబట్టి, మీకు శాశ్వత లక్ష్యాన్ని ఏర్పరచే ఆ ఈశ్వరుడిని ఆశ్రయించండి”. అని ఆళ్వారు వివరిస్తున్నారు..

పడి మన్ను పల్కలన్ పఱ్ఱ ఓడఱుత్తు ఐమ్పులన్ వెన్ఱు
శెడి మన్ను కాయం శెఱ్ఱ ఆర్గళుం ఆంగవనై ఇల్లార్‌
కుడి మన్నుం ఇన్ శువర్గం ఎయ్దియుం మీళ్వర్గళ్ మీళ్విల్లై
కొడి మన్ను పుళ్ళుడై అణ్ణల్‌ కళల్గల్  కుఱుగుమినో

ఎన్నో త్యాగాలు చేసి,  నిత్యము అలంకరించుకునే తమ ఆభరణాలు, ఆస్తులు దానముచేసి, కష్థపడి ఇంద్రియ నియంత్రణలు చేసి, కఠోర తపస్సులు చేసి స్వర్గానికి వేళ్ళినా, అక్కడ ఉన్నప్పుడు భగవానుడిని శరణు వేడుకోకపోతే, వాళ్ళు ఆ స్వర్గ జీవితాన్ని కోల్పోతారు; శాశ్వత ఫలితాన్ని పొందడానికి, పెరియ తిరువడి గరుడను తన ధ్వజలో నిత్యము ఉంచుకునే సర్వేశ్వరుని దివ్య పాదాలను చేరుకోవడానికి మీరు ప్రయత్నించాలి. “పడి మన్ను” అనగా శరీరానికి బాగా సరిపోయే ఆభరణాలను సూచిస్తుంది.

పదవ పాశురము:  “కైవల్యము తాత్కాలికమైనది కాకపోయినా, ఇది పరమ పురుషార్థమైన శ్రీమన్నారాయణుని నిత్య సేవ వలె సారవంతమైనది కాదు, సర్వాధిపతి అయిన  భగవానుడిని పొందుటయే పరమ పురుషార్థము (లక్ష్యం)” అని ఆళ్వారు వివరిస్తున్నారు.

కుఱుగ మిగ ఉణర్వత్తొడు నోక్కి  ఎల్లాం విట్ట
ఇఱుగల్‌ ఇఱప్పెన్నుం జ్ఞానిక్కుం అప్పయన్ ఇల్లైయేల్‌
శిఱుగ నినైవదోర్‌ పాశం ఉండాం పిన్నుం వీడిల్లై
మఱుగలిల్‌ ఈశనై ప్పఱ్ఱి విడా విడిల్‌ వీడహ్ దే (10)

ఆత్మ తప్పా మిగిలినవన్నింటినీ త్యాగము చేసిన జ్ఞాని, తన జ్ఞానము కారణంగా ప్రఖ్యాతి గాంచినవారికి, మోక్ష సాధనలో కఠోర ఆత్మ ధ్యానము చేసేవారికి ఆత్మయే లక్ష్యముగా మిగిలిపోతుంది; అటువంటి జ్ఞాని భగవానుడిని సాధనంగా స్వీకరించకపోతే అతనిలో అల్ప లక్ష్యాల అనుబంధం ఏర్పడుతుంది; అతడు మోక్షాన్ని సాధించలేడు. కాబట్టి, అందరినీ నియంత్రించేవాడు, అన్ని పవిత్ర గుణాలకు నివాసుడు, ఏ లోపము లేని నిష్కలంకుడైన భగవానుడికి శరణాగతులై  అతడిని ఎప్పటికీ వదలకుండా ఉండుటయే పరమ పురుషార్థము.

పదకొండవ పాశురము:  దుఃఖాలన్నీ తొలగిన తరువాత ఆత్మోద్దారణయే ఈ పదిగము యొక్క ఫలితమని ఆళ్వారు వివరిస్తున్నారు..

అందే ఉయ్య ప్పుగుమాఱెన్ఱు కణ్ణన్ కళల్గళ్ మేల్
కొయ్‌ పూం పొళిల్ శూళ్‌ కురుగూర్ చ్చడగోపన్ కుఱ్ఱేవల్
శెయ్‌ కోలత్తు ఆయిరం శీర్‌ త్తొడై ప్పాడల్‌ ఇవై పత్తుం
అహ్ కామల్‌ కఱ్పవర్ ఆళ్తుయర్‌ పోయ్‌ ఉయ్యఱ్ప ఆలరే

విరపూసిన పూల తోటలు పుష్కలంగా ఉన్న ఆళ్వార్తిరునగరికి నాయకుడైన నమ్మాళ్వారు, కృష్ణుడి దివ్య పాదాలకు చేసే రహస్య సేవగా సీర్ మరియు తొడై ఉన్న ఈ వెయ్యి పాసురములను పాడారు, అవి ఆత్మ ఉద్ధరణకి ఏకైక సాధనములని నొక్కి చెప్పారు. ఈ వెయ్యి పాశురములలో ఈ పదిగమును నేర్చుకొని ఎవరైతే పఠిస్తారో, వారికి ప్రాపంచిక ఐశ్వర్యము మరియు ఆనందంలో మునిగి ఉన్నామన్న దుఃఖము నిర్మూలించబడుతుంది. భగవత్భక్తికి దారితీసే ఆత్మోద్ధారణలో పాల్గొంటారు.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2020/05/thiruvaimozhi-4-1-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

ತಿರುವಾಯ್ಮೊೞಿ – ಸರಳ ವಿವರಣೆ – 7.4 – ಆೞಿಯೆೞ

Published by:


ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 7.2 – ಕಙ್ಗುಲುಮ್

ಎಂಪೆರುಮಾನರ ಅಗಲಿಕೆಯಿಂದ ಅತೀವ ದುಃಖಗೊಂಡು ಎರಡು ಪದಿಗೆಗಳಲ್ಲಿ ಅತ್ಯಂತ ಯಾತನೆ, ಬೇಗುದಿಯಿಂದ ಆಳ್ವಾರರು ಹಾಡಿದ್ದರು. ಇದನ್ನು ನೋಡಿದ ಎಂಪೆರುಮಾನರು ಆಳ್ವಾರರನ್ನು ಸಮಾಧಾನ ಪಡಿಸಲು ತನ್ನ ಎಲ್ಲಾ ವಿಜಯದ ಚಿಹ್ನೆಗಳನ್ನು ಆಳ್ವಾರರಿಗೆ ತೋರಿಸಿದರು. ಅದನ್ನು ಆಳವಾಗಿ ಅನುಭವಿಸಿದ ಆಳ್ವಾರರು , ಎಲ್ಲರಿಗೂ ಆ ಅನುಭವ ಸಿಗುವಂತೆ ಕರುಣೆಯಿಂದ ಈ ಹತ್ತು ಪಾಸುರಗಳನ್ನು ‘ಆೞಿಯೆೞ’ ಎಂಬ ಪಾಸುರದಿಂದ ಆರಂಭಿಸುತ್ತಾರೆ.

ಪಾಸುರಮ್ 1:
ಆಳ್ವಾರರು ಎಂಪೆರುಮಾನರ ದಿವ್ಯ ಕ್ರಿಯೆಯಾದ ಮೂರು ಲೋಕಗಳನ್ನು ಅಳೆಯುವುದನ್ನು ಈ ಪಾಸುರದ ಮೂಲಕ ವಿವರಿಸಿ ಸಂತೋಷ ಹೊಂದುತ್ತಾರೆ.
ಆೞಿಯೆೞ ಚ್ಚಙ್ಗುಮ್ ವಿಲ್ಲುಮ್ ಎೞ, ತಿಶೈ
ವಾೞಿ ಎೞ ತ್ತಣ್ಡುಮ್ ವಾಳುಮ್ ಎೞ, ಅಣ್ಡಮ್
ಮೋೞೈಯೆೞ ಮುಡಿ ಪಾದಮ್ ಎೞ, ಅಪ್ಪನ್
ಊೞಿಯೆೞ ಉಲಗಮ್ ಕೊಣ್ಡವಾಱೇ॥

ದಿವ್ಯ ಚಕ್ರವು ದಿವ್ಯ ಶಂಖುವಿನೊಂದಿಗೆ , ದಿವ್ಯ ಬಿಲ್ಲು, ದಿವ್ಯ ಗದೆ, ದಿವ್ಯ ಕತ್ತಿಗಳೊಂದಿಗೆ ಮೇಲೆದ್ದು ಬರುವಂತೆ ಕಾಣಿಸುತ್ತಿದೆ. ಮಂಗಳಾಶಾಸನದ ಗದ್ದಲವು ಎಲ್ಲಾ ದಿಕ್ಕಿನಲ್ಲಿರುವ ಜನಗಳಿಂದ ಕೇಳಿ ಬರುತ್ತಿದೆ. ದಿವ್ಯ ಕಿರೀಟವು ಮತ್ತು ದಿವ ಪಾದಗಳು ಎರಡೂ ಒಟ್ಟಿಗೆ ಮೇಲೆದ್ದು ಬಂದು, ಅಂಡಾಕಾರದ ಈ ವಿಶ್ವವನ್ನೇ ಮೇಲ್ಭಾಗದಲ್ಲಿ ಒಡೆದು ಏರುವ ಹಾಗಿದೆ. ನೀರಿನಿಂದ ಗುಳ್ಳೆಗಳು ಏರುತ್ತಿವೆ. ಈ ರೀತಿಯಿಂದ ಸರ್ವೇಶ್ವರನು ಎಲ್ಲಾ ಲೋಕಗಳಿಗೂ ನಾಯಕನಾದವನು ಅವುಗಳನ್ನು ಅಳೆದು ಸ್ವೀಕರಿಸಿ, ಆಶ್ಚರ್‍ಯ ಪಡಿಸಿದನು. ಕಾಲಗಳ ವ್ಯತ್ಯಾಸವನ್ನು ತಿಳಿಯಪಡೆಸಿದನು.

ಪಾಸುರಮ್ 2:
ಆಳ್ವಾರರು ಎಂಪೆರುಮಾನರ ಸಮುದ್ರ ಮಥನದ ಕ್ರಿಯೆಯನ್ನು ಆನಂದಿಸುತ್ತಾರೆ.
ಆಱು ಮಲೈಕ್ಕೆದಿರ್ನ್ದು ಓಡುಮ್ ಒಲಿ, ಅರ
ಊಱು ಶುಲಾಯ್ ಮಲೈ ತೇಯ್‍ಕ್ಕುಮ್ ಒಲಿ, ಕಡಲ್
ಮಾಱು ಶುೞನ್ ಅೞೈಕ್ಕಿನ್‍ಱ ಒಲಿ, ಅಪ್ಪನ್
ಶಾಱುಪಡ ಅಮುದಮ್ ಕೊಣ್ಡ ನಾನ್‍ಱೇ॥

ಶ್ರೇಷ್ಠ ಪೋಷಕನಾದ ಸರ್ವೇಶ್ವರನು , ದೇವತೆಗಳಿಗೆ ಅಮೃತವನ್ನು ದೊರಕಿಸಿ ಕೊಟ್ಟಾಗ, ಈ ರೀತಿಯ ಶಬ್ದಗಳು ಕೇಳಿಸಿದವು. ಅ) ನದಿಗಳು ಪರ್ವತದ ವಿರುದ್ಧ ದಿಕ್ಕಿನಲ್ಲಿ ಮೇಲೆ ಹತ್ತುವ ಶಬ್ದ. ಆ) ಮಂದರ ಪರ್ವತದ ಸುತ್ತಲೂ ಸುತ್ತಿಕೊಂಡಿರುವ ವಾಸುಕಿ ಸರ್ಪದ ದೇಹವು ಉಜ್ಜುವ ಶಬ್ದ. ಇ) ಸಮುದ್ರವು ಸುರುಳಿಯಾಗಿ ಸುಳಿ ಏರ್ಪಟ್ಟು ಕರೆಯುವ ಶಬ್ದ.

ಪಾಸುರಮ್ 3:
ಆಳ್ವಾರರು ಎಂಪೆರುಮಾನರ ಮಹಾವರಾಹ (ದೊಡ್ಡ ಹಂದಿ) ಅವತಾರವೆತ್ತಿದ್ದನ್ನು ಮೆಲುಕು ಹಾಕುತ್ತಾರೆ.
ನಾನ್‍ಱಿಲ ಏೞ್ ಮಣ್ಣುಮ್ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್ ಮಲೈ ತಾನತ್ತವೇ, ಪಿನ್ನುಮ್
ನಾನ್‍ಱಿಲ ಏೞ್‍ಕಡಲ್ ತಾನತ್ತವೇ, ಅಪ್ಪನ್
ಊನ್‍ಱಿ ಇಡನ್ದು ಎಯಿತ್ತಿಲ್ ಕೊಣ್ಡ ನಾಳೇ ॥

ಈ ಪೃಥ್ವಿಯು ಪ್ರಳಯದ ಕಾಲದಲ್ಲಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋದಾಗ , ಶ್ರೇಷ್ಠ ಪೋಷಕನಾದ ಎಂಪೆರುಮಾನರು , ಅದನ್ನು ತನ್ನ ಕೋರೆಹಲ್ಲುಗಳಿಂದ ಅಗೆದು ತೆಗೆದು ರಕ್ಷಿಸಿ, ಅದನ್ನು ವಿಶ್ವದಲ್ಲಿರುವ ತನ್ನ ಕಕ್ಷೆಯಲ್ಲಿ ಮತ್ತೆ ದೂಡುತ್ತಾನೆ. ಬೇರೆ ಬೇರೆ ನೆಲದ ಪ್ರದೇಶಗಳು ಏಳು ರೀತಿಯ ದ್ವೀಪಗಳಾಗಿ, ತಮ್ಮ ತಮ್ಮ ಮೂಲ ಜಾಗಕ್ಕೆ ಜಾರದಂತೆ ಸ್ಥಾಪಿತವಾದವು. ಏಳು ಮುಖ್ಯ ಪರ್ವತಗಳು ತಮ್ಮ ಮೂಲ ಪ್ರದೇಶದಲ್ಲೇ ಅಲ್ಲಾಡದೇ ಬೇರು ಬಿಟ್ಟವು. ಮತ್ತೆ ಮುಂದೆ ಏಳು ಸಮುದ್ರಗಳು ತಮ್ಮ ಮೂಲ ಸ್ಥಾನದಲ್ಲಿಯೇ ಸಮುದ್ರತೀರಗಳನ್ನು ಉಲ್ಲಂಘಿಸದೇ ಸ್ಥಾಪಿತವಾದವು.

ಪಾಸುರಮ್ 4:
ಆಳ್ವಾರರು ಕರುಣೆಯಿಂದ ಮಹಾ ಪ್ರಳಯದ(ಸಂಪೂರ್ಣ ಮುಳುಗಿದ) ಕಾಲದಲ್ಲಿ ಎಂಪೆರುಮಾನರು ಹೇಗೆ ರಕ್ಷಿಸಿದರು ಎಂದು ವಿವರಿಸಿದ್ದಾರೆ. “ಮಧ್ಯಂತರ ಪ್ರಳಯವನ್ನು ಪುರಾಣದ ಪ್ರಕಾರ ಹೇಗೆ ಮಾರ್ಕಂಡೇಯನು ‘ಹೊರಗಿನಿಂದ ಮತ್ತು ಎಂಪೆರುಮಾನರ ದಿವ್ಯ ಹೊಟ್ಟೆಯ ಒಳಗಿನಿಂದ’ ಕಂಡನೋ ಅದನ್ನು ಆಳ್ವಾರರು ಕರುಣೆಯಿಂದ ಹೇಳಿದ್ದಾರೆ” ಎಂದು ಕೆಲವು ಆಚಾರ್‍ಯರು ಕರುಣೆಯಿಂದ ಹೇಳಿದ್ದಾರೆ.
ನಾಳುಮ್ ಎೞ ನಿಲನೀರುಮ್ ಎೞ, ವಿಣ್ಣುಮ್
ಕೋಳುಮ್ ಎೞ ಎರಿಕಾಲುಮ್ ಎೞ, ಮಲೈ
ತಾಳುಮೆೞ ಚ್ಚುಡರ್ ತಾನುಮ್‍ ಎೞ, ಅಪ್ಪನ್
ಊಳಿ ಎೞ ಉಲಗಮ್ ಉಣ್ಡ ಊಣೇ ॥

ಎಂಪೆರುಮಾನರು ಅತ್ಯದ್ಭುತ ರೀತಿಯಲ್ಲಿ ಇಡೀ ವಿಶ್ವವನ್ನೇ ನುಂಗಿದರು. ‘ಅವರು ಅತ್ಯಂತ ಹಸಿವೆಯಿಂದ ನುಂಗಿದರು’ ಎಂದೂ ಹೇಳಿಕೆಯಿದೆ. ಇದರಿಂದ ಹಗಲು ಮತ್ತು ರಾತ್ರಿ, ನೆಲ ಮತ್ತು ನೀರಿನ ಪ್ರದೇಶ, ಆಕಾಶ ಮತ್ತು ಗ್ರಹಗಳು, ಪರ್ವತದ ಬುಡದ ಪ್ರದೇಶ ಮತ್ತು ಹೊಳೆಯುವ ನಕ್ಷತ್ರದ ನಡುವಿನ ಅಂತರವನ್ನು ತಮ್ಮ ಅಧೀನಕ್ಕೆ (ಹತೋಟಿಗೆ) ತೆಗೆದು ಕೊಂಡರು.

ಪಾಸುರಮ್ 5:
ಆಳ್ವಾರರು ಮಹಾಭಾರತದ ಯುದ್ಧವನ್ನು ಆನಂದಿಸುತ್ತಾರೆ. ಭೂಮಿಯ ಹೊರೆಯನ್ನು ಇಳಿಸಲು ಈ ಯುದ್ಧವು ನಡೆದಿದೆ ಎಂದು ಹೇಳಿದ್ದಾರೆ.
ಊಣುಡೈ ಮಲ್ಲರ್ ತದೈನ್ದ ಒಲಿ, ಮನ್ನರ್
ಆಣುಡೈ ಚ್ಚೇನೈ ನಡುಙ್ಗುಮ್ ಒಲಿ, ವಿಣ್ಣುಳ್
ಏಣುಡೈ ತ್ತೇವರ್ ವೆಳಿಪ್ಪಟ್ಟ ಒಲಿ, ಅಪ್ಪನ್
ಕಾಣುಡೈ ಪ್ಪಾರದಮ್ ಕೈಯಱೈಪೋೞ್‍ದೇ ॥

ಕೃಷ್ಣನು ತನ್ನ ಹಿಂಬಾಲಕರಿಗೆ (ಶರಣಾಗತರಿಗೆ) ಪಕ್ಷಪಾತವನ್ನು ಮಾಡಿ, ಅವರ ಜೊತೆಗೆ ಕೈಮಿಲಾಯಿಸಿ, ಅವರಿಗೆ ತನ್ನ ಬೆಂಬಲವನ್ನು ಕೊಟ್ಟು, ಅವರನ್ನು ಮಹಾಭಾರತದ ಯುದ್ಧ ಮಾಡಲು ಹುರಿದುಂಬಿಸಿದನು. ಆ ಯುದ್ಧದಲ್ಲಿ ಈ ರೀತಿಯ ಶಬ್ದಗಳು ಕೇಳಿ ಬಂದವು . ಅ) ಅಪ್ರತಿಮ ಮಲ್ಲಯುದ್ಧಗಾರರ ದೇಹದಲ್ಲಿರುವ ಶಕ್ತಿಯಿಂದ ಒಬ್ಬರನ್ನೊಬ್ಬರು ತಾಗಿ ಬೀಳುವ ಶಬ್ದ. ಆ) ಅನೇಕ ಶೂರ ಸಿಪಾಯಿಗಳನ್ನು ಹೊಂದಿರುವ ರಾಜರ ಸೇನೆಯು ಮಾಡುವ ಶಬ್ದ. ಇ) ಆಕಾಶದಲ್ಲಿ ಮುಖ್ಯ ದೇವತೆಗಳೆಲ್ಲಾ ಅವರವರ ಜಾಗದಲ್ಲಿ ನಿಂತು, ಕಾಣಿಸಿಕೊಂಡು ಸಂಭ್ರಮಾಚರಣೆಯ ಶಬ್ದ.

ಪಾಸುರಮ್ 6:
ಆಳ್ವಾರರು ಕರುಣೆಯಿಂದ ಹಿರಣ್ಯನ ವಧೆಯನ್ನು ವಿವರಿಸಿದ್ದಾರೆ. ಭಕ್ತನನ್ನು ಸಲಹುವ ಉದ್ದೇಶದಿಂದ ಹಿರಣ್ಯನನ್ನು ಕೊಲ್ಲಲಾಗಿದೆ ಎಂದು.
ಪೋೞ್‍ನ್ದು ಮೆಲಿನ್ದ ಪುನ್‍ಶೆಕ್ಕರಿಲ್ , ವಾನ್ ತಿಶೈ
ಶೂೞುಮ್ ಎೞುನ್ದು ಉದಿರಪ್ಪುನಲಾ, ಮಲೈ
ಕೀೞ್‍ನ್ದು ಪಿಳನ್ದ ಶಿಙ್ಗ ಮೊತ್ತದಾಲ್, ಅಪ್ಪನ್
ಆೞ್‍ತುಯರ್ ಶೆಯ್‍ದು ಅಶುರರೈ ಕ್ಕೊಲ್ಲುಮಾಱೇ ॥

ದಿನವು ಪೂರ್ಣಗೊಂಡಾಗ , ಎಂಪೆರುಮಾನರು ನರಸಿಂಹನಾಗಿ ಮೇಲೆದ್ದು, ಎಳೆಯ ಕೆಂಪಾಗಿರುವ ಆಕಾಶದಲ್ಲಿ , ಸಂಜೆಯ ವೇಳೆಯಲ್ಲಿ , ಆಕಾಶದ ಎಲ್ಲಾ ದಿಕ್ಕಿನಲ್ಲಿಯೂ ಕೆಂಪಾದ ರಕ್ತದ ಹೊಳೆಯನ್ನೇ ಹರಿಸಿ, ಹಿರಣ್ಯನೆಂಬ ರಾಕ್ಷಸನನ್ನು ಕೊಂದರು. ಒಂದು ದೊಡ್ಡ ಸಿಂಹವು ಮಹಾಪರ್ವತವನ್ನು ಒಡೆದಂತೆ , ರಾಕ್ಷಸನನ್ನು ಕೊಂದ ರೀತಿ ಇತ್ತು.

ಪಾಸುರಮ್ 7:
ಆಳ್ವಾರರು ರಾವಣನ ವಧೆಯನ್ನು ಆನಂದಿಸುತ್ತಾರೆ.
ಮಾಱು ನಿರೈತ್ತು ಇರೈಕ್ಕುಮ್ ಶರಙ್ಗಳ್ , ಇನ
ನೂಱುಪಿಣಮ್ ಮಲೈಪೋಲ್ ಪುರಳ, ಕಡಲ್
ಅಱು ಮಡುತ್ತುದಿರಪ್ಪುನಲಾ, ಅಪ್ಪನ್
ನೀಱುಪಡ ಇಲಙ್ಗೈ ಶೆತ್ತ ನೇರೇ॥

ಬಾಣಗಳ ಗುಂಪು ತಾಗಿದಾಗ ಮಹಾ ಶಬ್ದವನ್ನೇ ಮಾಡುತ್ತಿತ್ತು. ಅವುಗಳು ನೂರು, ಸಾವಿರಾರು ರಾಕ್ಷಸರ ಮೃತದೇಹಗಳನ್ನು ಬೆಟ್ಟಗಳು ಉರುಳುವಂತೆ, ಬೀಳುವಂತೆ ಮಾಡುತ್ತಿದ್ದವು. ಸಮುದ್ರವು ರಕ್ತದ ಹೊಳೆಯಿಂದ ಕೆಂಪಾಗುತ್ತಿತ್ತು. ಹೀಗೆ ಚಕ್ರವರ್ತಿ ತಿರುಮಗನಾದ ರಾಮನು , ತನ್ನ ಶರಣಾಗತರಿಗೆ ರಕ್ಷಣೆಯನ್ನು ಕೊಡುತ್ತಾ , ಲಂಕೆಯನ್ನು ನಶಿಸಿ, ಬೂದಿ ಮಾಡಲು, ಧರ್ಮಯುದ್ಧದಲ್ಲಿ ಹೋರಾಡಿದರು.

ಪಾಸುರಮ್ 8:
ಆಳ್ವಾರರು ಕೃಷ್ಣನು ಬಾಣನ ಮೇಲೆ ವಿಜಯ ಸಾಧಿಸಿದ್ದನ್ನು ಮೆಲುಕು ಹಾಕುತ್ತಾರೆ.
ನೇರ್ ಶರಿನ್ದಾನ್ ಕೊಡಿಕ್ಕೋೞಿಕೊಣ್ಡಾನ್ , ಪಿನ್ನುಮ್
ನೇರ್ ಶರಿನ್ದಾನ್ ಎರಿಯುಮ್ ಅನಲೋನ್, ಪಿನ್ನುಮ್
ನೇರ್ ಶರಿನ್ದಾನ್ ಮುಕ್ಕಣ್ ಮೂರ್ತ್ತಿ ಕಣ್ಡೀರ್ ,ಅಪ್ಪನ್
ನೇರ್ ಶರಿ ವಾಣನ್ ತಿಣ್ ತೋಳ್ ಕೊಣ್ಡವನ್‍ಱೇ ॥

ಆ ದಿನ ಕೃಷ್ಣನು ಅನಿರುದ್ಧನಿಗೆ ಸಹಾಯ ಮಾಡಲು , ಬಾಣನ ಮೇಲೆ ವಿಜಯ ಸಾಧಿಸಿದನು. ಬಾಣನ ಸಹಾಯಕ್ಕೆ ರುದ್ರರು, ಸುಬ್ರಹ್ಮಣ್ಯ ಮುಂತಾದವರು ಇದ್ದರು. ನವಿಲಿನ ಧ್ವಜವನ್ನು ಹೊಂದಿರುವ ಸುಬ್ರಹ್ಮಣ್ಯರು ಯುದ್ಧ ಮಾಡಲಾರದೆ ಬಿದ್ದರು. ಅಗ್ನಿಯು ತನ್ನ ಏರುತ್ತಿರುವ ಜ್ವಾಲೆಯ ಜೊತೆಗೇ ಕೃಷ್ಣನನ್ನು ತಡೆಯಲಾರದೇ ಬಿದ್ದನು, ತನ್ನ ಮೂರು ಕಣ್ಣುಗಳಿಂದ ಅತ್ಯಂತ ಶಕ್ತಿವಂತರಾದ ದೇವತೆಗಳಿಗೇ ಮುಖ್ಯನಾದ ರುದ್ರರು ಯುದ್ಧ ಭೂಮಿಯಿಂದ ಓಡಿಹೋದರು. ಈ ಕಥೆಗಳೆಲ್ಲಾ ಪ್ರಸಿದ್ಧವಾಗಿರುವುದಲ್ಲವೇ ?

ಪಾಸುರಮ್ 9:
ಆಳ್ವಾರರು ಭಗವಂತನು ಈ ವಿಶ್ವವನ್ನು ಸೃಷ್ಟಿಸಿದ್ದನ್ನು ಕರುಣೆಯಿಂದ ಹೇಳುತ್ತಾರೆ. (ವಿವರಿಸುತ್ತಾರೆ).
ಅನ್‍ಱು ಮಣ್ ನೀರ್ ಎರಿ ಕಾಲ್ ವಿಣ್ ಮಲೈ ಮುದಲ್
ಅನ್‍ಱು ಶುಡರಿರಣ್ಡು ಪಿಱವುಮ್ , ಪಿನ್ನುಮ್
ಅನ್‍ಱು ಮೞೈ ಉಯಿರ್ ತೇವುಮ್ ಮಟ್ರುಮ್, ಅಪ್ಪನ್
ಅನ್‍ಱು ಮುದಲ್ ಉಲಗಮ್ ಶೆಯ್‍ದದುಮೇ ॥

ಮೊದಲು ರಚನೆಯಲ್ಲಿ , ಶ್ರೇಷ್ಠ ಪೋಷಕನಾದ ಸರ್ವೇಶ್ವರನು ವಿಶ್ವವನ್ನು ರಚಿಸಿದನು. ಅವನು ಐದು ಮುಖ್ಯ ಪ್ರಾಣಗಳನ್ನು ಭೂಮಿಯಿಂದ ಮೊದಲುಗೊಂಡು , ಪರ್ವತಗಳನ್ನು ಮತ್ತು ಇತರೆ ಲೌಕಿಕ ವಸ್ತುಗಳನ್ನು ರೂಪಿಸಿದನು. ಅವನು ಚಂದ್ರ ಮತ್ತು ಸೂರ್‍ಯರನ್ನೂ, ಮತ್ತು ಇತರೆ ಹೊಳೆಯುವ ವಸ್ತುಗಳನ್ನೂ ರಚಿಸಿದನು. ಮತ್ತು ಮಳೆಯನ್ನು ಸೃಷ್ಟಿಸಿದನು. ಭೂಮಿಯಲ್ಲಿ ಮಳೆಯನ್ನು ಅವಲಂಬಿಸಿರುವ ಇತರೆ ಜೀವಿಗಳನ್ನು ಹುಟ್ಟಿಸಿದನು. ಮಳೆಯನ್ನು ನಿಯಂತ್ರಿಸಲು ದೇವತೆಗಳನ್ನು ಸೃಷ್ಟಿಸಿದನು.
 ಇದರ ಅರ್ಥ , ಆಳ್ವಾರರು ಪ್ರಳಯದ ನಂತರದ ಮೊದಲ ಸೃಷ್ಟಿಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ.

ಪಾಸುರಮ್ 10:
ಆಳ್ವಾರರು ಎಂಪೆರುಮಾನರ ಗೋವರ್ಧನ ಬೆಟ್ಟವನ್ನು ಎತ್ತಿದ ಕ್ರಿಯೆಯನ್ನೂ ಮತ್ತು ಹಸುಗಳನ್ನೂ, ದನಕಾಯುವವರನ್ನೂ ರಕ್ಷಿಸಿದ ಕ್ರಿಯೆಯನ್ನೂ ಆನಂದಿಸುತ್ತಾರೆ.
ಮೇಯ್ ನಿರೈ ಕೀೞ್ ಪುಗ ಮಾ ಪುರಳ , ಶುನೈ
ವಾಯ್ ನಿಱೈ ನೀರ್ ಪಿಳಿಱಿ ಚ್ಚೊರಿಯ, ಇನ
ಆನಿರೈ ಪಾಡಿ ಅಙ್ಗೇ ಒಡುಙ್ಗ , ಅಪ್ಪನ್
ತೀಮೞೈ ಕಾತ್ತು ಕ್ಕುನ್‍ಱಮ್ ಎಡುತ್ತಾನೇ ॥

ಕೃಷ್ಣನು ಅಪಾಯವನ್ನು ತಪ್ಪಿಸಲು , ಗೋವರ್ಧನ ಬೆಟ್ಟವನ್ನು ಎತ್ತಿ , ದುರಂತಕ್ಕೆ ಕಾರಣವಾಗುವಂತಹ ಮಳೆಯಿಂದ ರಕ್ಷಿಸಿ, ಹುಲ್ಲು ತಿನ್ನುವ ಹಸುಗಳಿಗೆ ಬೆಟ್ಟದ ಕೆಳಗೆ ಆಶ್ರಯವನ್ನು ಕೊಟ್ಟನು. ಬೆಟ್ಟದ ಮೇಲೆ ವಾಸಿಸುತ್ತಿದ್ದ ವನ್ಯಮೃಗಗಳು ಜಾರಿ ಬಿದ್ದರೆ ಅವುಗಳಿಗೆ ಪೆಟ್ಟಾಗದಂತೆ ನೀರಿನ ಮೇಲೆ ಬೀಳುವ ವ್ಯವಸ್ಥೆಯನ್ನೂ ಮಾಡಿದನು. ತಿರುವಾಯ್‍ಪ್ಪಾಡಿಯ ಹಸುಗಳಿಗೆ ಮತ್ತು ದನಕಾಯುವವರಿಗೆ ಈ ರೀತಿಯಾಗಿ ಆಶ್ರಯ ಕೊಟ್ಟು ರಕ್ಷಿಸಿದನು.

ಪಾಸುರಮ್ 11:
ಆಳ್ವಾರರು ಹೇಳುತ್ತಾರೆ “ ಯಾರು ಈ ಹತ್ತು ಪಾಸುರಗಳನ್ನು , ಎಂಪೆರುಮಾನರ ವಿಜಯ ಸಾಧಿಸಿದ ಅಮಿತವಾದ ಪಟ್ಟಿಯನ್ನು ಕಲಿಯುತ್ತಾರೋ, ಅವರಿಗೆ ವಿಜಯವನ್ನು ಈ ಪದಿಗೆಯು ನೀಡುತ್ತದೆ.
ಕುನ್‍ಱಮೆಡುತ್ತ ಪಿರಾನ್ ಅಡಿಯಾರೊಡುಮ್ ,
ಒನ್‍ಱಿನಿನ್‍ಱ ಶಡಗೋಪನ್ ಉರೈಶೆಯಲ್ ,
ನನ್‍ಱಿಪುನೈನ್ದ ಓರ್ ಆಯಿರತ್ತುಳ್ ಇವೈ,
ವೆನ್‍ಱಿತರುಮ್ ಪತ್ತುಮ್ ಮೇವಿ ಕ್ಕಱ್ಪಾರ್ಕ್ಕೇ ॥

ಆಳ್ವಾರರು ಗೋವರ್ಧನ ಬೆಟ್ಟವನ್ನು ಎತ್ತಿದ ಪರಮಪೋಷಕನಾದ ಕೃಷ್ಣನ , ವಿಶಿಷ್ಟವಾದ ಸೇವಕರುಗಳಾದ ಭಾಗವತರ ಅದೇ ಸ್ವರೂಪ (ಗುಣ) ಗಳನ್ನು ಹೊಂದಿ , ಅದೇ ಭಾಗವತರ ಜೊತಗೆ ಸಮಾಗಮವಾಗಿದ್ದರು. ಯಾರು ಈ ಪಾಸುರಗಳನ್ನು ಸರಿಯಾದ ಅರ್ಥದೊಂದಿಗೆ ಪಠಿಸಿ, ಇದನ್ನು ಕಲಿಯುತ್ತಾರೋ, ಅವರಿಗೆ ಈ ಪಾಸುಗಳಲ್ಲಿರುವಂತೆ ವಿಜಯ ಸ್ಥಾಪಿಸಿದ ಭಗವಂತನ ಹಾಗೇ , ಅವರಿಗೂ ಈ ಹತ್ತು ಪಾಸುರಗಳು . ಆಳ್ವಾರರ ಸಾವಿರ ಪಾಸುರದೊಂದಿಗೆ ವಿಜಯವನ್ನು ಪ್ರಾಪ್ತಿ ಮಾಡುತ್ತದೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/06/thiruvaimozhi-7-4-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org





ತಿರುವಾಯ್ಮೊೞಿ – ಸರಳ ವಿವರಣೆ – 7.2 – ಕಙ್ಗುಲುಮ್

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 6.10 ಉಲಗಮುಣ್ಡ

ಪರಾಂಕುಶ ನಾಯಕಿ ಮತ್ತು ಶ್ರೀರಂಗನಾಥರ್

ನಮ್ಮಾಳ್ವಾರರು ಅತೀ ಖಿನ್ನರಾಗಿ ದುಃಖದಿಂದ ಪರವಶಗೊಂಡು , ಎಂಪೆರುಮಾನರಿಂದ ಅಗಲಿಕೆ ಹೊಂದಿ, ದುಃಖದಿಂದ ಸ್ತ್ರೀಯ ಭಾವನೆಯನ್ನು ಹೊಂದಿದರು. ಪರಾಂಕುಶ ನಾಯಕಿಯು , ಶ್ರೀರಂಗನಾಥರ ಮೇಲೆ ಅಪ್ರತಿಮವಾದ ಪ್ರೇಮವನ್ನು ಹೊಂದಿ, ಮಾತು ಹೊರಬಾರದೇ ಪ್ರಜ್ಞೆ ತಪ್ಪಿದಳು. ಮತ್ತೂ ಮುಂದೆ ಹೋಗಿ, ಪರಾಂಕುಶ ನಾಯಕಿಯ ದಿವ್ಯ ತಾಯಿಯ ರೂಪವನ್ನು ಹೊಂದಿದರು. ಆ ತಾಯಿಯು ತನ್ನ ಮಗಳನ್ನು ಕರೆದುಕೊಂಡು ಹೋಗಿ, ಪೆರಿಯ ಪೆರುಮಾಳಿನ ಮುಂದೆ ಇರುವ ದಿವ್ಯ ಕಂಭದ ನಡುವೆ ಕೂಡಿಸಿದರು. ಅವಳ ಅತ್ಯಂತ ದೀನ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಮುಂದೆ ವಿವರಿಸಿ, ‘ನೀನು ಅವಳನ್ನು ಎಲ್ಲಾ ರೀತಿಯಲ್ಲಿಯೂ ಕಾಪಾಡಬೇಕು’ ಎಂದು ಪ್ರಾರ್ಥಿಸಿದರು.

ಪಾಸುರಮ್ 1 :
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳ ಪ್ರಜ್ಞೆ ಇಲ್ಲದ ಸ್ಥಿತಿಯನ್ನು ಪೆರಿಯ ಪೆರುಮಾಳಿನ ಹತ್ತಿರ ಹೇಳುತ್ತಾಳೆ. ಮತ್ತು ‘ಈಗ ನೀನು ಅವಳಿಗೆ ಏನು ಮಾಡುತ್ತೀಯ’ ಎಂದು ಕೇಳುತ್ತಾಳೆ.
ಕಙ್ಗುಲುಮ್ ಪಹಲುಮ್ ಕಣ್ ತುಯಿಲ್ ಅಱಿಯಾಳ್ ಕಣ್ಣನೀರ್ ಕೈಗಳಾಲ್ ಇಱೈಕ್ಕುಮ್
ಶಙ್ಗು ಶಕ್ಕರಙ್ಗಳೆನ್‌ಱು ಕೈಕೂಪ್ಪುಮ್ ತಾಮರೈ ಕ್ಕಣ್ ಎನ್‍ಱೇ ತಳರುಮ್
ಎಙ್ಗನೇ ತರಿಕ್ಕೇನ್ ಉನ್ನೈವಿಟ್ಟೆನ್ನುಮ್ ಇರು ನಿಲಮ್ ಕೈ ತುೞಾಇರುಕ್ಕುಮ್
ಶೆಙ್ಗಯಲ್ ಪಾಯ್ ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್‍ಶೆಯ್‍ಗಿನ್‍ಱಾಯೇ ॥

ಹಗಲಿನಲ್ಲಿ ಮತ್ತು ಇರುಳಿನಲ್ಲಿ ನನ್ನ ಮಗಳ ಕಣ್ಣುಗಳು ನಿದ್ರಿಸುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವಳು ತನ್ನ ಕಣ್ಣಿನಿಂದ ಸುರಿಯುವ ನೀರನ್ನು ತೊಡೆದು, ಮತ್ತೆ ಮತ್ತೆ ಶಂಖು ಚಕ್ರ ಎಂದು ಹೇಳುತ್ತಿರುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು ನಿನ್ನ ಬರುವಿಕೆಗಾಗಿ ಕಾದಿರುತ್ತಾಳೆ. ‘ತಾವರೆಯಂತಹ ಕಣ್ಣುಗಳು ‘ ಎಂದು ಹೇಳುತ್ತಾಳೆ. ಅವಳು ಅತೀ ಪ್ರಯಾಸಗೊಳ್ಳುತ್ತಾಳೆ . ‘ನೀನಿಲ್ಲದೆ ಹೇಗೆ ಬದುಕುವುದು’ ಎಂದು ಕನವರಿಸುತ್ತಾಳೆ. ಅವಳು ತನ್ನ ಕೈಗಳಿಂದ ನೆಲವನ್ನೆಲ್ಲಾ ಸವರಿ ಹುಡುಕುತ್ತಾಳೆ. ತಾನು ಚಟುವಟಿಕೆಗಳಿಲ್ಲದೆ ಇರುತ್ತಾಳೆ. ಓಹ್! ಕೋಯಿಲ್‍ನಲ್ಲಿ (ಶ್ರೀರಂಗಮ್) ವಾಸವಾಗಿರುವ ಎಂಪೆರುಮಾನರೇ! ಅಲ್ಲಿ ಕೆಂಪಾದ ಮೀನುಗಳು ನೀರಿನ ಕೊಳದಲ್ಲಿ ಜಿಗಿದು ಆಟವಾಡುತ್ತಿರುತ್ತವೆ. ಇಂತಹ ವಿಚಿತ್ರವಾದ ಭಾವನೆಗಳನ್ನು ನಿನ್ನ ಮೇಲೆ ಹೊಂದಿರುವ ಈ ಹುಡುಗಿಗೆ ಏನು ಮಾಡಬೇಕೆಂದು ಯೋಚಿಸಿರುವೆ? ಎಂದು ತಾಯಿಯು ಕೇಳುತ್ತಾಳೆ.
ಇದರ ಅರ್ಥ => ನೀನು ಅವಳ ದುಃಖವನ್ನು ದೂರ ಮಾಡುತ್ತೀಯೋ ಇಲ್ಲಾ ಅದನ್ನು ಹೆಚ್ಚಿಸುವೆಯೋ ಹೇಳು ಎಂದು ಕೇಳುತ್ತಾಳೆ.

ಪಾಸುರಮ್ 2:
ತಾಯಿಯು ಹೇಳುತ್ತಾಳೆ “ನೀನೇ ಎಲ್ಲರನ್ನೂ ಎಲ್ಲಾ ರೀತಿಯಲ್ಲಿಯೂ ಕಾಪಾಡುವವನು . ಆದರೆ ಅವಳ ಸ್ಥಿತಿಯು ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ? “
ಎನ್‍ಶೆಯ್‍ಹಿನ್‍ಱಾಯ್ ಎನ್ ತಾಮರೈಕ್ಕಣ್ಣಾ ಎನ್ನುಮ್, ಕಣ್ಣೀರ್‍‌ಮಲ್‍ಗ ಇರುಕ್ಕುಮ್
ಎನ್‍ಶೆಯ್‍ಹೇನ್ ಎಱಿ ನೀರ್ ತಿರುವರಙ್ಗತ್ತಾಯ್ ಎನ್ನುಮ್ ವೆವ್ವುಯಿರ್ ತ್ತುಯಿರ್ತ್ತುರುಗುಮ್
ಮುನ್ ಶೆಯ್‍ದ ವಿನೈಯೇ ಮುಗಪ್ಪಡಾಯ್ ಎನ್ನುಮ್ ಮುಗಿಲ್‍ವಣ್ಣಾ ತಗುವದೋ ಎನ್ನುಮ್,
ಮುನ್ ಶೆಯ್‍ದು ಇವ್ವುಲಗಮ್ ಉಣ್ಡು ಉಮಿೞ್‍ನ್ದಳನ್ದಾಯ್ ಎನ್ಗೊಲೋ ಮುಡಿಗಿನ್‍ಱದು ಇವಟ್ಕೇ॥

ಪರಾಂಕುಶ ನಾಯಕಿಯು ಹೇಳುತ್ತಾಳೆ. “ಓಹ್! ಆನಂದ ಪಡಿಸುವ ಕಣ್ಣುಗಳನ್ನು ಹೊಂದಿರುವವನೇ! ಆ ಕಣ್ಣುಗಳಿಂದಲೇ ನಾನು ಅಸ್ತಿತ್ವದಲ್ಲಿರುವೆ. ನೀನು ನನ್ನನ್ನು ಏನು ಮಾಡಬೇಕೆಂದು ಯೋಚಿಸಿರುವೆ?” ಎಂದು ಕಂಬನಿಭರಿತ ಕಣ್ಣುಗಳಿಂದ ಕುಸಿಯುತ್ತಾಳೆ. “ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ! ಅದು ಅನೇಕ ನೀರಿನ ತಂಗುದಾಣವಾಗಿದೆ. ಈಗ ನಾನೇನು ಮಾಡಲಿ” ಎಂದು ಹಪಹಪಿಸುತ್ತಾಳೆ. ಅವಳು ನೀಳವಾದ ಉಸಿರನ್ನು ಆಳವಾಗಿ ಪದೇ ಪದೇ ತೆಗೆದುಕೊಳ್ಳುತ್ತಾಳೆ. ಅವಳು ಒಳಗಡೆ ತನ್ನ ಮನದಲ್ಲಿ ಬಹಳ ಉಷ್ಣವಾಗುತ್ತಾಳೆ. ಆ ಪರಿಸ್ಥಿತಿಯಲ್ಲಿ ಕರಗಿ ಹೋಗುತ್ತಾಳೆ. ಅವಳು ಹೇಳುತ್ತಾಳೆ. “ನನ್ನ ಹಿಂದಿನ ಕರ್ಮವು ನನ್ನ ಮುಂದೆ ನಿಂತಿದೆ. ಆ ಕರ್ಮವನ್ನು ಒಂದು ಚೇತನವಾಗಿ ಪರಿಗಣಿಸುತ್ತಾಳೆ. ಏಕೆಂದರೆ , ಅದು ತೊಂದರೆಯನ್ನು ಮತ್ತು ನಷ್ಟವನ್ನೂ ಉಂಟುಮಾಡುವುದರಿಂದ. ಅವಳು ಹೇಳುತ್ತಾಳೆ “ಓಹ್! ಅತ್ಯಂತ ಪ್ರಭಾವಶಾಲಿಯಾದ ಎಂಪೆರುಮಾನರೇ! ಮೋಡಗಳು ಹೇಗೆ ಮಳೆಯನ್ನು ಸುರಿಸುವಾಗ ಆ ಪ್ರದೇಶ ಭೂಮಿಯೇ ಇಲ್ಲಾ ನೀರಿನ ತಾಣವೇ ಎಂದು ಬೇರ್ಪಡಿಸದೇ ನಿಷ್ಪಕ್ಷಪಾತದಿಂದ ಸುರಿಸುವಂತೆ ನಿನ್ನ ಕರುಣೆಯನ್ನು ನನ್ನ ಮೇಲೆ ಸುರಿಸು. ನೀನು ನನ್ನ ಮುಂದೆ ಕಾಣಿಸಿಕೊಳ್ಳದಿರುವುದು ನಿನ್ನ ವರ್ಚಸ್ಸಿಗೆ ಸೂಕ್ತವೇ “ ಎಂದು ಹೇಳುತ್ತಾಳೆ. ಅವಳ ತಾಯಿಯು ಕೇಳುತ್ತಾಳೆ “ ಓಹ್! ಮೊದಲನೆಯ ಬಾರಿಗೇ ಈ ವಿಶ್ವವನ್ನೆಲ್ಲಾ (ಎಲ್ಲಾ ಲೋಕಗಳನ್ನೂ) ನುಂಗಿ , ಆಮೇಲೆ ಅದನ್ನು ಹೊರಗೆ ಕಕ್ಕಿ, ಅದನ್ನು ಅಳೆದು, ಮತ್ತು ಕೊನೆಯಲ್ಲಿ ಅದನ್ನು ಸ್ವೀಕರಿಸಿದವನೇ! ನನ್ನ ಮಗಳಿಗೆ ಅಂತ್ಯದಲ್ಲಿ ಏನು ಆಗುತ್ತದೆ?”
ಇದರ ಅರ್ಥ : ಅವಳನ್ನು ಅವಳ ಚಿಂತೆಯಿಂದ ಪರಿಹರಿಸಿ , ನಿನ್ನಿಂದ ರಕ್ಷಿಸಲ್ಪಡುವವರ ಗುಂಪಿಗೆ ಸೇರಿಸಿಕೊಳ್ಳುತ್ತೀಯಾ? ಇಲ್ಲವೇ, ಅವಳನ್ನು ದೂರ ತಳ್ಳಿ, ನಿನ್ನಿಂದ ದೂರವೇ ಇರಿಸುತ್ತೀಯಾ?

ಪಾಸುರಮ್ 3:
ತಾಯಿಯು ಹೇಳುತ್ತಾಳೆ “ ನಿನ್ನ ಭಕ್ತರನ್ನು ಕಾಪಾಡಲು ಅಸಂಖ್ಯೇಯ ವೈರಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಅನೇಕ ಅವತಾರಗಳನ್ನು ಎತ್ತಿರುವವನೇ! ನೀನು ನನ್ನ ಮಗಳು ಈ ಸ್ಥಿತಿಗೆ ತಲುಪಲು ಏನು ಮಾಡಿರುವೆ? “ ಎಂದು ಕೇಳುತ್ತಾಳೆ.
ವಟ್ಕಿಲಳ್ ಇಱೈಯುಮ್ ಮಣಿವಣ್ಣಾ ಎನ್ನುಮ್ ವಾನಮೇ ನೋಕ್ಕುಮ್ ಮೈಯಾಕ್ಕುಮ್
ಉಟ್ಕುಡೈ ಅಶುರರ್ ಉಯಿರೆಲ್ಲಾಮ್ ಉಣ್ಡ ಒರುವನೇ ಎನ್ನುಮ್ ಉಳ್ಳುರುಗುಮ್
ಕಟ್ಕಿಲೀ ಉನ್ನೈ ಕಾಣುಮಾಱು ಅರುಳಾಯ್ ಕಾಕುತ್ತಾ ಕಣ್ಣನೇ ಎನ್ನುಮ್
ತಿಟ್ಕೊಳಿ ಮದಿಳ್ ಶೂೞ್ ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶೆಯ್‍ದಿಟ್ಟಾಯೇ॥

ನನ್ನ ಮಗಳಿಗೆ ಅವಳ ಗುರುತಾಗಿರುವ ಮತ್ತು ಸಹಜ ಸ್ವರೂಪವಾಗಿರುವ ನಾಚಿಕೆಯು ಸಂಪೂರ್ಣವಾಗಿ ಬಿಟ್ಟು ಹೋಗಿದೆ. ಅವಳು ಹೇಳುತ್ತಾಳೆ “ನನಗೆ ಅತ್ಯಂತ ವಿಧೇಯನಾಗಿರುವ ಮಾಣಿಕ್ಯವೇ! ನಿನ್ನನ್ನು ಸುಲಭವಾಗಿ ನನ್ನ ಅಂಗ ವಸ್ತ್ರದಲ್ಲಿಡಬಹುದು” ಎಂದು ಹೇಳುತ್ತಾಳೆ. ಅವಳು ಮೇಲೆ ಆಕಾಶವನ್ನು ನೋಡಿ ಮೂರ್ಛೆ ಹೋಗುತ್ತಾಳೆ. ಅವಳು ಹೇಳುತ್ತಾಳೆ “ಓಹ್! ಸ್ವಾತಂತ್ರ್ಯವಾಗಿರುವ ವೀರನೇ! ನೀನು ಅತ್ಯಂತ ದುರಹಂಕಾರದ ದೈತ್ಯರನ್ನು ಸ್ವಲ್ಪವೂ ಮಿಗಿಸದೇ ಸಂಪೂರ್ಣವಾಗಿ ಅವರ ಜೀವವನ್ನು ಕುಡಿದಿರುವೆ. “ ಅವಳು ತನ್ನ ಮನದಲ್ಲೇ ಅಳಲು ಪ್ರಾರಂಭಿಸುತ್ತಾಳೆ. “ಓಹ್! ಬರೀ ಕಣ್ಣುಗಳಿಂದ ಕಾಣಲು ಅಶಕ್ತನಾಗಿರುವವನೇ! ನನ್ನ ಕಣ್ಣುಗಳಿಗೆ ಕಾಣಿಸಿಕೊಳ್ಳು” ಎಂದು ಕೇಳಿಕೊಳ್ಳುತ್ತಾಳೆ. “ನೀನು ದಶರಥನಿಗೆ ದಿವ್ಯ ಮಗನಾಗಿ ಅವತಾರ ಪಡೆದಿಲ್ಲವೇ? ಆಗ ನೀನು ನಿನ್ನನ್ನು ನಗರಗಳಲ್ಲಿ ಮತ್ತು ಕಾಡುಗಳಲ್ಲಿ ಸ್ಥಾಪಿಸಲಿಲ್ಲವೇ?” ಮತ್ತು “ ಪುಂಸಾಮ್ ದೃಷ್ಟಿ ಚಿತ್ತಾಪಹಾರಿಣಾಮ್” ಮತ್ತು “ಧದೃಶುಃ ವಿಸ್ಮಿತಾಕಾರಾಃ” ಎಂದು ವರ್ಣಿಸಿಕೊಳ್ಳಲಿಲ್ಲವೇ? ಮತ್ತು ಕೃಷ್ಣನಾಗಿ ನೀನು ಅವತಾರವನ್ನೆತ್ತಿದ್ದಾಗ ನಿನ್ನ ವರ್ಚಸ್ಸು ಮತ್ತು ರೂಪವನ್ನು ಗೋಪಿಕೆಯರ “ದಾಸಾಮ್ ಆವಿರಭೂತ್” ಎಂದು ಸ್ಥಾಪಿಸಲಿಲ್ಲವೇ?” ಎಂದು ಕೇಳುತ್ತಾಳೆ. ತಾಯಿಯು ಹೇಳುತ್ತಾಳೆ “ ಓಹ್! ಶ್ರೀರಂಗದ ಕೋಯಿಲ್‍ನಲ್ಲಿ ನೆಲೆಸಿರುವವನೇ ! ಅದು ಬಲವಾದ ಧ್ವಜವನ್ನು ತನ್ನ ಕೋಟೆಯಲ್ಲಿ ಹೊಂದಿದೆ. ನನ್ನ ಮಗಳು ಇಂತಹ ಶೋಕದಲ್ಲಿ ಮುಳುಗಲು ನೀನು ಏನು ಮಾಡಿರುವೆ?” ಎಂದು ಕೇಳುತ್ತಾಳೆ.

ಪಾಸುರಮ್ 4:
ಪರಾಂಕುಶ ನಾಯಕಿಯ ತಾಯಿಯು ಪೆರಿಯ ಪೆರುಮಾಳಿನ ಹತ್ತಿರ ಕೇಳಿ ಕೊಳ್ಳುತ್ತಾಳೆ “ ಈ ಹುಡುಗಿಗೆ ಕರುಣೆಯಿಂದ ಒಳ್ಳೆಯದು ಮಾಡುವಂತೆ ಯೋಚಿಸು” ಎಂದು.
ಇಟ್ಟಕಾಲ್ ಇಟ್ಟಕೈಯಳಾಯ್ ಇರುಕ್ಕುಮ್ ಎೞುನ್ದುಲಾಯ್ ಮಯಙ್ಗುಮ್ ಕೈಕೂಪ್ಪುಮ್
ಕಟ್ಟಮೇ ಕಾದಲ್ ಎನ್‍ಱು ಮೂರ್ಚ್ಚಿಕ್ಕುಮ್ ಕಡಲ್‍ವಣ್ಣಾ ಕಡಿಯೈ ಕಾಣ್ ಎನ್ನುಮ್
ವಟ್ಟವಾಯ್ ನೇಮಿ ವಲಙ್ಗೈಯಾ ಎನ್ನುಮ್ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್ ,
ಶಿಟ್ಟನೇ ಶೆೞು ನೀರ್ ತ್ತಿರುವರಙ್ಗತ್ತಾಯ್ ಇವಳ್ ತಿಱತ್ತೆನ್ ಶಿನ್ದಿತ್ತಾಯೇ ॥

ನನ್ನ ಮಗಳ ಕೈಗಳು ಮತ್ತು ಕಾಲುಗಳು ಎಲ್ಲಿ ಇರುತ್ತದೆಯೋ ಅದು ಕದಲುವುದೇ ಇಲ್ಲ. ಜ್ಞಾನ ತಪ್ಪಿ ಮತ್ತೆ ತಿಳಿಯಾದಾಗ , ಅವಳು ನಿಲ್ಲುತ್ತಾಳೆ, ಸುತ್ತ ನಡೆದು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಅವಳು ಅಂಜಲಿಯನ್ನು ಹಿಡಿಯುತ್ತಾಳೆ. ಅವಳು ಸಿಡಿಸಿಡಿಗೊಳ್ಳುತ್ತಾಳೆ. ಮತ್ತು ಹೇಳುತ್ತಾಳೆ “ ಪ್ರೀತಿ ಮಾಡುವುದು ಕಷ್ಟ ಸಾಧ್ಯ. “ ಅವಳು ಮತ್ತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಮತ್ತೆ ಅವಳು ಹೇಳುತ್ತಾಳೆ “ ಓಹ್! ಸಾಗರದಂತೆ ಅಳತೆಗೆ ಸಿಗದೆ ಅಗಾಧವಾಗಿ ತನ್ನಲ್ಲಿ ಎಲ್ಲವನ್ನೂ ಇಟ್ಟುಕೊಂಡು ರಕ್ಷಿಸುವವನೇ! ನೀನು ನನ್ನ ಬಗ್ಗೆ ಕ್ರೂರಿಯಾಗಿಬಿಟ್ಟೆ. ಅವಳು ಹೇಳುತ್ತಾಳೆ “ಓಹ್! ಅಂದವಾದ ದಿವ್ಯ ಚಕ್ರವನ್ನು ತನ್ನ ಬಲಗೈಯಲ್ಲಿ ಹಿಡಿದಿರುವವನೇ! “ ಎಂದು ಮತ್ತೆ ಮತ್ತೆ ಅವನನ್ನು ಕೇಳಿಕೊಳ್ಳುತ್ತಾಳೆ “ ದಯವಿಟ್ಟು ನಿನ್ನ ದಿವ್ಯ ಚಕ್ರದೊಂದಿಗೆ ಪ್ರತ್ಯಕ್ಷವಾಗು” ಮತ್ತು ತಾನು ತನ್ನ ಮತಿಯನ್ನು ಸಂಪೂರ್ಣ ಕಳೆದುಕೊಂಡು “ನಾನು ನನ್ನ ಸಹಜವಾದ ಗುಣವನ್ನು , ಪದೇ ಪದೇ ಅವರನ್ನು ಕರೆದೂ ಪೂರಾ ಕಳೆದುಕೊಂಡಿರುವೆ. ಮತ್ತು ನಾನು ನನ್ನ ಆಸೆಯನ್ನು ಮತ್ತು ಗುರಿಯನ್ನು ಸಂಪೂರ್ಣ ವಾಗಿ ಕಳೆದುಕೊಂಡಿರುವೆ. ಏಕೆಂದರೆ ಅವರು ಬರಲಿಲ್ಲವಾದ್ದರಿಂದ.” ಓಹ್! ಸುಂದರವಾದ ನದೀ ತೀರದಲ್ಲಿ ಮಲಗಿರುವವನೇ! ನೀನು ಬಹಳ ಜನಪ್ರಿಯ ಪ್ರಸಿದ್ಧನಂತೆ ಭಾವಿಸಿರುವೆ. ನೀನು ಅವಳ ಬಗ್ಗೆ ಏನೆಂದು ಆಲೋಚಿಸಿರುವೆ?
ಇದರ ಅರ್ಥ => ಅವಳನ್ನು ಇದೇ ರೀತಿ ಆಶ್ಚರ್ಯಚಕಿತಳನ್ನಾಗಿ ಮಾಡುತ್ತೀಯಾ ಇಲ್ಲವಾದರೆ ಅವಳಿಗೆ ಜ್ಞಾನದ ಪ್ರಕಾಶವನ್ನು ನೀಡುತ್ತೀಯಾ?

ಪಾಸುರಮ್ 5:
ಪರಾಂಕುಶ ನಾಯಕಿಯ ತಾಯಿಯು ತನ್ನ ಮಗಳು ಒಂದು ಕ್ಷಣದಲ್ಲಿ ಆಗುವ ಪರಿವರ್ತನೆಯನ್ನು ತೋರಿಸಿ ಹೇಳುತ್ತಾಳೆ “ಆಶ್ರಿತ ವಾತ್ಸಲ್ಯವಾಗಿರುವ ನಿನಗೆ ಅವಳನ್ನು ಈ ರೀತಿ ಕಷ್ಟ ಪಡಿಸುವುದು ಸಮಂಜಸವಾಗಿದೆಯೇ?”
ಶಿನ್ದಿಕ್ಕುಮ್ ತ್ತಿಶೈಕ್ಕುಮ್ ತೇಱುಮ್ ಕೈಕೂಪ್ಪುಮ್ ತಿರುವರಙ್ಗತ್ತುಳ್ಳಾಯ್ ಎನ್ನುಮ್,
ವನ್ದಿಕ್ಕುಮ್ , ಆಙ್ಗೇ ಮೞೈ ಕ್ಕಣ್ಣೀರ್ ಮಲ್‍ಗ ವನ್ದಿಡಾಯ್ ಎನ್‍ಱೆನ್‍ಱೇ ಮಯಙ್ಗುಮ್,
ಅನ್ದಿಪ್ಪೋದವುಣನ್ ಉಡಲ್ ಇಡನ್ದಾನೇ ಅಲೈ ಕಡಲ್ ಕಡೈನ್ದ ಆರಮುದೇ,
ಶನ್ದಿತ್ತುನ್ ಶರಣಮ್ ಶಾರ್ವದೇ ವಲಿತ್ತ ತೈಯಲೈ ಮೈಯಲ್ ಶೆಯ್‍ದಾನೇ॥

ನೀನು (ಎಂಪೆರುಮಾನರು) ಹಿರಣ್ಯನ ದೇಹವನ್ನು ಸಂಜೆಯ ವೇಳೆಯಲ್ಲಿ ತುಂಡು ತುಂಡಾಗಿಸಿರುವೆ. ನೀನು ಅಪರಿಮಿತವಾಗಿ ಆನಂದಿಸಲ್ಪಡುವೆ , ಸಮುದ್ರದ ಅಲೆಗಳಲ್ಲಿ ಮಂಥನ ಮಾಡಿರುವೆ . ಓಹ್! ನಿನ್ನಲ್ಲೇ ಸೇರಬೇಕೆಂದು ಆಸೆ ಹೊಂದಿರುವ , ಮತ್ತು ಅದಕ್ಕಾಗಿ ಪರಿಪೂರ್ಣವಾದ ರೂಪವನ್ನು ಸರಿಯಾದ ರೀತಿಯಲ್ಲಿ ಹೊಂದಿರುವ ಮತ್ತು ಬಾಹ್ಯ ಅನುಭವಕ್ಕಾಗಿ ನಿನ್ನ ಪಾದಗಳನ್ನೇ ಆನಂದಿಸಬೇಕೆಂದು ಅದರಲ್ಲಿ ಸೇರಬೇಕೆಂದು ಅಮಿತವಾಗಿ ಆಸೆ ಹೊಂದಿರುವ ನನ್ನ ಮಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾಳೆ. ಅವಳು, ನೀನು ಅವಳ ಜೊತೆ ಮೊದಲು ಹೇಗೆ ಕೂಡಿ ಇದ್ದೆಯೋ, ಅದನ್ನೇ ಯೋಚಿಸಿರುತ್ತಿರುತ್ತಾಳೆ. ಅತ್ಯಂತ ಆಶ್ಚರ್‍ಯ ಹೊಂದುತ್ತಾಳೆ. ತನ್ನನ್ನು ತಾನೇ ಸಂಭಾಳಿಸಿಕೊಂಡು ಅಂಜಲಿಯನ್ನು ನೀಡೂತ್ತಾಳೆ. ನಿನ್ನನ್ನು ‘ ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ನೆಲೆಸಿರುವವನೇ’ ಎಂದು ಕೂಗಿ ಕರೆಯುತ್ತಾಳೆ. ತನ್ನ ತಲೆಯನ್ನು ಬಗ್ಗಿಸುತ್ತಾಳೆ. ಅಲ್ಲಿಯೇ ಹಾಗೇ ನಿಲ್ಲುತ್ತಾಳೆ. ತನ್ನ ಕಣ್ಣುಗಳನ್ನು ಕಂಬನಿಭರಿತಗೊಳ್ಳುತ್ತಾಳೆ. ಬಾರಿ ಬಾರಿ ‘ಬಂದು ನನ್ನನ್ನು ಸ್ವೀಕರಿಸು’ ಎಂದು ಕೇಳುತ್ತಾಳೆ. ಜ್ಞಾನ ತಪ್ಪಿ ಬೀಳುತ್ತಾಳೆ. => ಅವಳು ಎಂಪೆರುಮಾನರ ಹತ್ತಿರ ಪ್ರೇಮವಶಗೊಂಡು ಎಲ್ಲಾ ರೀತಿಯ ಪರಿವರ್ತನೆಗೊಳಗಾಗುತ್ತಾಳೆ.

ಪಾಸುರಮ್ 6:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನಿನ್ನ ಹತ್ತಿರ ಅವಶ್ಯಕವಾಗಿರುವ ಎಲ್ಲಾ ಆಯುಧಗಳಿವೆ. (ತನ್ನ ಭಕ್ತರನ್ನು ಆಪತ್ತುಗಳಿಂದ ರಕ್ಷಿಸಲು) ಆದರೂ ನನ್ನ ಮಗಳನ್ನು ದುಃಖ ಪಡುವಂತೆ ಮಾಡಿದ್ದೀಯ. ಈಗ ಹೇಳು ನಾನು ಅವಳಿಗಾಗಿ ಏನನ್ನು ಮಾಡಬೇಕು?”
ಮೈಯಲ್ ಶೆಯ್‍ದೆನ್ನೈ ಮನಮ್ ಕವರ್ನ್ದಾನೇ ಎನ್ನುಮ್ ಮಾಮಾಯನೇ ಎನ್ನುಮ್,
ಶೆಯ್ಯ ವಾಯ್ ಮಣಿಯೇ ಎನ್ನುಮ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತುಳ್ಳಾಯ್ ಎನ್ನುಮ್,
ನೆಯ್ಯ ವಾಳ್ ತಣ್ಡು ಶಙ್ಗು ಶಕ್ಕರಮ್ ವಿಲ್ ಏನ್ದುಮ್ ವಿಣ್ಣೋರ್‌ಮುದಲ್ ಎನ್ನುಮ್,
ಪೈಕೊಳ್ ಪಾಮ್ಬಣೈಯಾಯ್ ಇವಳ್ ತಿಱತ್ತರುಳಾಯ್ ಪಾವಿಯೇನ್ ಶೆಯಱ್‍ ಪಾಲದುವೇ॥

ನನ್ನ ಮಗಳು ಹೇಳುತ್ತಾಳೆ “ಓಹ್! ನನ್ನ ಹೃದಯವನ್ನು ಕದ್ದವನೇ! ನನ್ನನ್ನು ಆಶ್ಚರ್‍ಯಚಕಿತಳನ್ನಾಗಿ ಮಾಡಿರುವೆ. ಓಹ್! ಒಂದು ಅತ್ಯಮೂಲ್ಯವಾದ ಮಾಣಿಕ್ಯವೇ! ನಿನ್ನನ್ನು ಬಹಳ ಸುಲಭವಾಗಿ ಪಡೆಯಬಹುದು. ಕೆಂಪಾದ ಸುಂದರ ದಿವ್ಯ ತುಟಿಗಳನ್ನು ಹೊಂದಿರುವವನೇ! ಓಹ್! ಕೋಯಿಲ್‍(ಶ್ರೀರಂಗಂ)ನಲ್ಲಿ ನೆಲೆಸಿರುವವನೇ , ಅದು ನೀರಿನ ಪ್ರದೇಶದಿಂದ ಸುತ್ತುವರೆದಿದೆ. ಓಹ್! ನೀನು ಐದು ವಿಧವಾದ ಆಯುಧಗಳನ್ನು ಹಿಡಿದುಕೊಂಡು ನಿನ್ನ ಶರಣಾಗತಿಯಾದವರನ್ನು ವಿಳಂಬಮಾಡದೇ ರಕ್ಷಿಸಲು ಬರುತ್ತೀಯ. ನಿತ್ಯ ಸೂರಿಗಳ ಅಸ್ತಿತ್ವಕ್ಕೆ ಕಾರಣನಾದವನೇ! ತಿರುವನಂತಾಳ್ವಾನ್ ರನ್ನು ಹಾಸಿಗೆಯಾಗಿ ಹೊಂದಿರುವವನೇ! ನನ್ನ ಮಗಳ ಕರುಣಾಜನಕ ಸ್ಥಿತಿಯನ್ನು ನೋಡಲು ಪಾಪಗಳನ್ನು ನಾನು ಮಾಡಿರುವೆ. ಅವಳ ಈ ಸ್ಥಿತಿಗೆ ನಿನ್ನ ಉತ್ತರವೇನೆಂದು ಕರುಣೆಯಿಂದಲಿ ಹೇಳು”.

ಪಾಸುರಮ್ 7:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ. “ನನ್ನ ಮಗಳು ಎಂಪೆರುಮಾನರ ಗುಣಗಳಾದ ತನ್ನ ಭಕ್ತರ ರಕ್ಷಣೆಗಾಗಿ ಸಮುದ್ರ ಶಯನರಾಗಿರುವುದು ಮುಂತಾದುವುಗಳನ್ನು ಹೇಳಲು ಉತ್ಸುಕಳಾಗಿರುತ್ತಾಳೆ.
ಪಾಲ ತುನ್ಬಙ್ಗಳ್ ಇನ್ಬಙ್ಗಳ್ ಪಡೈತ್ತಾಯ್ ಪಟ್ರಿಲಾರ್ ಪಟ್ರ ನಿನ್‍ಱಾನೇ
ಕಾಲಶಕ್ಕರತ್ತಾಯ್ ಕಡಲ್ ಇಡಮ್ ಕೊಣ್ಡ ಕಡಲ್‍ವಣ್ಣಾ ಕಣ್ಣನೇ ಎನ್ನುಮ್
ಶೇಲ್‍ಕೊಳ್ ತಣ್ ಪುನಲ್ ಶೂೞ್ ತ್ತಿರುವರಙ್ಗತ್ತಾಯ್ ಎನ್ನುಮ್ ಎನ್‍ತೀರ್ತ್ತನೇ ಎನ್ನುಮ್,
ಕೋಲಮಾಮೞೈಕಣ್ ಪನಿ ಮಲ್‍ಗ ಇರುಕ್ಕುಮ್ ಎನ್ನುಡೈ ಕ್ಕೋಮಳಕ್ಕೊೞುನ್ದೇ॥

ನನ್ನ ನಾಜೂಕಾದ ಪ್ರವೃತ್ತಿ ಹೊಂದಿರುವ ಮಗಳು ಅವಳು ಒಂದು ಎಳೆಯದಾದ ಬಳ್ಳಿ ಇದ್ದ ಹಾಗೆ. ನೀನು ನಿನ್ನಲ್ಲಿ ಶರಣಾಗತಿ ಹೊಂದದವರಿಗೆ ದುಃಖವನ್ನೂ , ಶರಣಾಗತಿ ಹೊಂದಿದವರಿಗೆ ಸಂತೋಷವನ್ನೂ ಎಲ್ಲಾ ಪ್ರದೇಶಗಳಲ್ಲಿಯೂ ಕೊಡುತ್ತೀಯ. ನೀನು ಆಶ್ರಯವಿಲ್ಲದವರಿಗೆ ಆಶ್ರಯವಾಗಿಯೂ , ಜಯಂತನಂತೆ ನಿನ್ನಲ್ಲಿ ಶರಣಾಗತಿಯಾಗಿಲ್ಲದವರಿಗೂ ಆಶ್ರಯನಾಗಿರುವೆ. ನೀನು ಸಮಯದ ಚಕ್ರವನ್ನು ನಿಯಂತ್ರಿಸಿರುವೆ. ನೀನು ಕರುಣೆಯಿಂದ ಹಾಲಿನ ಸಮುದ್ರದಲ್ಲಿ ಶಯನಿಸಿರುವೆ. ಆ ನೋಟವು ಒಂದು ಸಮುದ್ರವು ಇನ್ನೊಂದು ಸಮುದ್ರದ ಮೇಲೆ ಮಲಗಿರುವ ಹಾಗಿದೆ. ಓಹ್! ನೀನು ಕೃಷ್ಣನಾಗಿ ನಿನ್ನ ಭಕ್ತರನ್ನು ರಕ್ಷಿಸಲು ಅವತರಿಸಿರುವೆ. ಓಹ್! ಕೋಯಿಲ್(ಶ್ರೀರಂಗಂ)ನಲ್ಲಿ ನೆಲೆಸಿರುವವನೇ! ಅದು ಕಾವೇರಿಯ ತಣ್ಣಗಿನ ನೀರಿನಿಂದ ಮತ್ತು ಅದರಲ್ಲಿ ಇರುವ ಮೀನುಗಳಿಂದ ಸುತ್ತುವರಿಯಲ್ಪಟ್ಟಿದೆ. ಓಹ್! ನೀನು ಪವಿತ್ರವಾದ ಒಂದು ನದಿಯಂತೆ! ಅದರಲ್ಲಿ ನಾನು ಮುಳುಗಬೇಕೆಂದಿರುವೆ. ಎಂದು ಹೇಳಿ ತಾನು ನಿಷ್ಕ್ರಿಯವಾಗಿ, ಕಂಬನಿಗಳನ್ನು ತನ್ನ ಸುಂದರವಾದ, ವಿಶಾಲವಾದ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾಳೆ.

ಪಾಸುರಮ್ 8:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ ,” ನಾನು ನನ್ನ ಮಗಳಲ್ಲಿ ಮತ್ತೆ ಮತ್ತೆ ಬರುವ ನರಳಾಟಕ್ಕೆ ಏನು ಮದ್ದು ಮಾಡಲಿ?” ಎಂದು.
ಕೊೞುನ್ದು ವಾನವರ್ಗಟ್ಕೆನ್ನುಮ್ ಕುನ್‍ಱೇನ್ದಿ ಕ್ಕೋನಿರೈ ಕಾತ್ತವನ್ ಎನ್ನುಮ್,
ಅೞುಮ್ ತೊೞುಮ್ ಆವಿ ಅನಲ ವೆವ್ವುಯಿರ್ಕ್ಕುಮ್ ಅಞ್ಜನವಣ್ಣನೇ ಎನ್ನುಮ್,
ಎೞುನ್ದು ಮೇಲ್ ನೋಕ್ಕಿ ಇಮೈಪ್ಪಿಲಳ್ ಇರುಕ್ಕುಮ್ ಎಙ್ಗನೇ ನೋಕ್ಕುಗೇನ್ ಎನ್ನುಮ್,
ಶೆೞುಮೇ ತಡಮ್ ಪುನಲ್ ಶೂೞ್ ತಿರುವರಙ್ಗತ್ತಾಯ್ ಎನ್‍ಶೆಯ್‍ಹೇನ್ ಎನ್ ತಿರುಮಗಟ್ಕೇ॥

ನನ್ನ ಮಗಳು ಹೇಳುತ್ತಾಳೆ, ಅವರು ನಿತ್ಯಸೂರಿಗಳಿಗೆಲ್ಲಾ ನಾಯಕರಾದವರು. ಪರ್ವತವನ್ನೇ ತನ್ನ ಕಿರುಬೆರಳಲ್ಲಿ ಎತ್ತಿ ಅಮಾನುಷವಾದ ಕಾರ್ಯವನ್ನು ಮಾಡಿ ಹಸುಗಳನ್ನೂ, ಗೊಲ್ಲರನ್ನೂ ರಕ್ಷಿಸಿದರು. ಅವಳು ತನ್ನ ಕಂಬನಿಭರಿತ ಕಣ್ಣುಗಳಿಂದ ಭಕ್ತಿಯಲ್ಲಿ ಮುಳುಗಿ ಹೋಗುತ್ತಾಳೆ. ಅವಳು ತನ್ನ ಕೈಗಳನ್ನು ಅಂಜಲಿಯ ರೂಪದಲ್ಲಿ ಹಿಡಿದು, ಶರಣಾಗತಿ ಹೊಂದುವಂತೆ ತೋರಿಸುತ್ತಾಳೆ. ತನ್ನ ಸುಡದ ಆತ್ಮವನ್ನು ಸುಟ್ಟು ಕರಗಿಸುವಂತೆ ಬಿಸಿಯಾದ ನಿಟ್ಟುಸಿರು ಬಿಡುತ್ತಾಳೆ. ಆಸೆಯನ್ನು ಹೆಚ್ಚಿಸುವೆ ಕಪ್ಪಾದ ರೂಪವನ್ನು ಹೊಂದಿರುವವನೇ ! ಎಂದು ಅವಳು ಎಂಪೆರುಮಾನರನ್ನು ನೋಡುವಂತೆ ಎದ್ದು ನಿಲ್ಲುತ್ತಾಳೆ. ಮತ್ತು ಕಣ್ಣುಗಳನ್ನು ಮಿಟುಕಿಸದೇ ಹಾಗೆಯೇ ನಿಲ್ಲುತ್ತಾಳೆ. ಅವಳು ಹೇಳುತ್ತಾಳೆ, “ ನಾನು ಹೇಗೆ ನಿನ್ನನ್ನು ನೋಡಲಿ?” ಓಹ್! ಕೋಯಿಲ್‍ನಲ್ಲಿ ನೆಲೆಸಿರುವವನೇ! ಆ ಶ್ರೀರಂಗಮ್ ಸುಂದರವಾದ ವಿಶಾಲ ನೀರಿನ ತಾಣಗಳಿಂದ ಸುತ್ತುವರೆಯಲ್ಪಟ್ಟಿದೆ. ನಾನು ಲಕ್ಷ್ಮಿಗೆ ಹೋಲಿಸುವ ರೂಪವನ್ನು ಹೊಂದಿರುವ ಮಗಳಿಗೆ ಏನು ಮಾಡಲಿ? ನಾನು ಅವಳ ನರಳಾಟಕ್ಕೆ, ದುಃಖಕ್ಕೆ ಕಾರಣವಾದ ಅಮಿತವಾದ ಪ್ರೀತಿಯನ್ನೇ ನಿಯಂತ್ರಣ ಮಾಡಲೇ? ಅಥವಾ ಬರದಿರುವ ನಿನ್ನನ್ನು ಬರುವಂತೆ ಮಾಡಲೇ?
=> ಇದರ ಅರ್ಥ ಎರಡೂ ಅಸಾಧ್ಯ ಎಂದು.

ಪಾಸುರಮ್ 9:
ಪರಾಂಕುಶ ನಾಯಕಿಯ ತಾಯಿಯು ಹೇಳುತ್ತಾಳೆ “ ನಾನು ನನ್ನ ಮಗಳ ಆಸೆಯನ್ನು ಪೂರೈಸಲಾಗುತ್ತಿಲ್ಲ. ಅವಳು ನಿನ್ನ ಪ್ರೀತಿಯನ್ನು ಪಡೆಯಬೇಕೆಂದು ಅತ್ಯಂತ ಮೋಹಿತಳಾಗಿದ್ದಾಳೆ. ಲಕ್ಷ್ಮೀದೇವಿ , ಭೂದೇವಿ ಮತ್ತು ನೀಳಾದೇವಿಯ ಜೊತೆಗಿರುವ ನಿನ್ನನ್ನು ಅವಳು ಅತ್ಯಂತ ಮೋಹಿಸಿದ್ದಾಳೆ.”
ಎನ್ ತಿರುಮಗಳ್ ಶೇರ್ ಮಾರ್ವನೇ ಎನ್ನುಮ್ ಎನ್ನುಡೈ ಆವಿಯೇ ಎನ್ನುಮ್,
ನಿನ್‍ತಿರುವಯಿತ್ತಾಲ್ ಇಡನ್ದು ನೀಕೊಣ್ಡ ನಿಲಮಗಳ್ ಕೇಳ್ವನೇ ಎನ್ನುಮ್,
ಅನ್‍ಱುರು ಏೞುಮ್ ತೞುವಿ ನೀಕೊಣ್ಡ ಆಯ್‍ಮಗಳ್ ಅನ್ಬನೇ ಎನ್ನುಮ್,
ತೆನ್ ತಿರುವರಙ್ಗಮ್ ಕೋಯಿಲ್‍ಕೊಣ್ಡಾನೇ ತೆಳಿಗಿಲೇನ್ ಮುಡಿವಿವಳ್ ತನಕ್ಕೇ॥

ನನ್ನ ಮಗಳು ಹೇಳುತ್ತಾಳೆ, “ಓಹ್! ವಿಶಾಲವಾದ ದಿವ್ಯ ಎದೆಯನ್ನು ಹೊಂದಿರುವವನೇ,! ಆ ಸ್ಥಳವು ಲಕ್ಷ್ಮೀದೇವಿಯ ವಾಸಸ್ಥಾನವಾಗಿದೆ. ಅವಳು ನನಗೂ ನಾಯಕಿಯಾಗಿದ್ದಾಳೆ. ಅವಳು ನಿನ್ನಲ್ಲಿ ಸಮಾಗಮವಾಗಿದ್ದಾಳೆ. ಓಹ್! ಭೂಮಿ ಪಿರಾಟ್ಟಿಯ ಯಜಮಾನರಾಗಿರುವವರೇ! ನೀನು ನಿನ್ನ ದಿವ್ಯ ಕೊಂಬುಗಳಿಂದ ನೆಲವನ್ನು ಬಗೆದು ಅವಳನ್ನು ಮೇಲೆತ್ತಿ ತನ್ನವಳೆಂದು ಸ್ವೀಕರಿಸಿರುವೆ. ಓಹ್! ಸ್ಥಿರವಾದ ಪ್ರೀತಿಯನ್ನು ನಪ್ಪಿನ್ನೈ ಪಿರಾಟ್ಟಿಯ ಮೇಲೆ ಹೊಂದಿರುವವನೇ! ನಿನ್ನ ಜಾತಿಯಲ್ಲಿಯೇ ಹುಟ್ಟಿದವಳೆಂದು ಅತ್ಯಮೂಲ್ಯ ನಿಧಿಯೆಂದು ಸಂರಕ್ಷಿಸಿ ನಿನ್ನಲ್ಲಿಯೇ ಸ್ವೀಕರಿಸಿರುವೆ. ಭಯಂಕರವಾದ ಗುಡುಗಿನಂತೆ ಆರ್ಭಟಿಸುವ ಏಳು ಗೂಳಿಗಳನ್ನು ಸ್ಪರ್ಧೆಯಲ್ಲಿ ಸೋಲಿಸಿ ನಪ್ಪಿನ್ನೈಯನ್ನು ಗೆದ್ದು ಅವಳನ್ನು ಆಲಂಗಿಸಿರುವೆ. ಓಹ್! ಶ್ರೀರಂಗ ಕ್ಷೇತ್ರವನ್ನು ತನ್ನ ವಾಸಸ್ಥಾನವಾಗಿ ಒಪ್ಪಿಕೊಂಡಿರುವ ಎಂಪೆರುಮಾನರೇ! ನನಗೆ ಅವಳ ದುಃಖವನ್ನು ಪರಿಹರಿಸಲು ಸಾಧನಗಳು (ಮಾಧ್ಯಮವು) ತಿಳಿದಿಲ್ಲ. ಎಂದು ಹೇಳುತ್ತಾಳೆ.

ಪಾಸುರಮ್ 10:
ಅಂತರಾತ್ಮಗಳಿಗೇ ಶ್ರೇಷ್ಠನಾದ ತಮ್ಮನ್ನು ತಾವು ನಾಯಕರೆಂದು ಭಾವಿಸುವ ದೇವತೆಗಳಿಗೇ ಶ್ರೇಷ್ಠನಾದ ಸರ್ವೇಶ್ವರನು , ಪರಾಂಕುಶ ನಾಯಕಿಯ ದುಃಖವನ್ನೂ, ಅಗಲಿಕೆಯನ್ನೂ ಅರ್ಥ ಮಾಡಿಕೊಂಡು , ಅವಳಿಗೆ ತನ್ನ ಪ್ರತ್ಯಕ್ಷ ರೂಪವನ್ನು, ಅಗಾಧವಾಗಿ ಸರಳತೆಯೊಂದಿಗೆ, ತನ್ನ ಹೊರ ರೂಪದ ಸೌಂದರ್‍ಯವನ್ನು ತೋರಿಸುತ್ತಾನೆ. ಅವಳಿಗೆ ನಂಬಿಕೆಯುಂಟಾಗುತ್ತದೆ. ಅವಳ ತಾಯಿಯು ತೃಪ್ತಿ, ಸಮಾಧಾನದಿಂದ ಹೇಳುತ್ತಾಳೆ.
ಮುಡಿವಿವಳ್ ತನಕ್ಕು ಒನ್‍ಱಱಿಗಿಲೇನ್ ಎನ್ನುಮ್ ಮೂವುಲಗಾಳಿಯೇಯೆನ್ನುಮ್,
ಕಡಿಕಮೞ್ ಕೊನ್‍ಱೈ ಚ್ಚಡೈಯನೇಯೆನ್ನುಮ್ ನಾನ್ಮುಗಕ್ಕಡವುಳೇ ಎನ್ನುಮ್,
ವಡಿವುಡೈ ವಾನೋರ್ ತಲೈವನೇ ಎನ್ನುಮ್ ವಣ್ ತಿರುವರಙ್ಗನೇ ಎನ್ನುಮ್,
ಅಡಿ ಅಡೈಯಾದಾಳ್ ಪೋಲ್ ಇವಳ್ ಅಣುಗಿ ಅಡೈನ್ದನಳ್ ಮುಗಿಲ್‍ವಣ್ಣನ್ ಅಡಿಯೇ ॥

ನನ್ನ ಮಗಳು ಹೇಳುತ್ತಾಳೆ, “ ನನಗೆ ಪರಿಹಾರ ಗೊತ್ತಿಲ್ಲ, ಓಹ್! ಮೂರು ಲೋಕಗಳ (ಭೂಃ , ಭುವಃ, ಸುವಃ ಎಂಬ) ನಾಯಕನೆಂದು ತಿಳಿದಿರುವ ಇಂದ್ರನ ಅಂತರಾತ್ಮಕ್ಕೇ ಒಡೆಯನಾಗಿರುವ, ಕೊನ್‍ಱೈ ಮಾಲೆಯ ಸುಗಂಧವನ್ನು ಹೊಂದಿರುವ ಜಟೆಯನ್ನು ಧರಿಸಿರುವ ರುದ್ರನ ಅಂತರಾತ್ಮವಾಗಿರುವ, ರುದ್ರ ತಾನು ಜಪಿಸುವ, ಆರಾಧಿಸುವ , ನಾಲ್ಕು ತಲೆಯಿರುವ ಬ್ರಹ್ಮನ ಅಂತರಾತ್ಮವಾಗಿರುವ , ನಿನ್ನದೇ ರೂಪವನ್ನು ಹೊಂದಿರುವ ನಿತ್ಯಸೂರಿಗಳಿಗೆಲ್ಲಾ ನಾಯಕನಾಗಿರುವ ,ಓಹ್! ಕೋಯಿಲ್ (ಶ್ರೀರಂಗಂ) ನಲ್ಲಿ ಎಲ್ಲಾ ರೀತಿಯ ನಿಯಂತ್ರಣವನ್ನು ಹೊಂದಿರುವ , ಅದನ್ನು ಉತ್ಕೃಷ್ಟತೆಯಿಂದ ಸಾಧಿಸುವ, ಸರ್ವೇಶ್ವರನಾದ ಎಂಪೆರುಮಾನರು”, ನನ್ನ ಮಗಳು ಎಂಪೆರುಮಾನರನ್ನು ಸೇರದಿರುವಂತೆ ಅನಿಸಿದರೂ, ಕಪ್ಪಾದ ಮೇಘಗಳಂತೆ , ಭೂಮಿಯ ಮೇಲೆ ಮತ್ತು ನೀರಿನ ತಾಣವೆಂದು ಭೇದವೆಣಿಸದೇ ಮಳೆಯನ್ನು ಸುರಿಸುವಂತೆ, ಅವನ ಧಾರಾಳತನದಿಂದ ನನ್ನ ಮಗಳು ಅವರ ದಿವ್ಯ ಪಾದವನ್ನು ಸಮೀಪಿಸಿ , ಸೇರಿಕೊಂಡಳು.

ಪಾಸುರಮ್ 11:
ಆಳ್ವಾರರು ಹೇಳುತ್ತಾರೆ, “ ಯಾರು ಈ ಹತ್ತು ಪಾಸುರಗಳನ್ನು ಅಭ್ಯಾಸ ಮಾಡುತ್ತಾರೋ, ಅವರಿಗೆ ನಾನು ಅನುಭವಿಸಿದ ಯಾವ ನರಳಾಟಗಳೂ ಇಲ್ಲದೆ, ಪರಮಪದವನ್ನು ಹೊಂದುತ್ತಾರೆ. ಅಲ್ಲಿ ಅವರು ಅಪರಿಮಿತವಾದ ಆನಂದವನ್ನೂ, ಸುತ್ತಲೂ ನಿತ್ಯಸೂರಿಗಳನ್ನೂ ಹೊಂದುತ್ತಾರೆ.
ಮುಗಿಲ್‍ವಣ್ಣನ್ ಅಡಿಯೈ ಅಡೈನ್ದು ಅರುಳ್ ಶೂಡಿ ಉಯ್‍ನ್ದವನ್ ಮೊಯ್ ಪುನಲ್ ಪೊರುನಲ್
ತುಗಿಲ್‍ವಣ್ಣ ತ್ತೂ ನೀರ್ ಶೇರ್ಪ್ಪನ್ ವಣ್ ಪೊೞಿಲ್ ಶೂೞ್ ವಣ್ ಕುರುಗೂರ್ ಚ್ಚಡಗೋಪನ್,
ಮುಗಿಲ್‍ವಣ್ಣನ್ ಅಡಿಮೇಲ್ ಶೊನ್ನ ಶೊಲ್‍ಮಾಲೈ ಆಯಿರತ್ತಿಪ್ಪತ್ತುಮ್ ವಲ್ಲಾರ್ ,
ಮುಗಿಲ್‍ವಣ್ಣ ವಾನತ್ತಿಮೈಯವರ್ ಶೂೞ ಇರುಪ್ಪರ್ ಪೇರ್ ಇನ್ಬವೆಳ್ಳತ್ತೇ ॥

ದಿವ್ಯ ತಾಮಿರಭರಣಿ ನದಿಯು ಅಗಾಧವಾದ , ಸ್ವಚ್ಛ ನೀರಿನಿಂದ ತುಂಬಿಕೊಂಡು, ರೇಷ್ಮೆ ಬಟ್ಟೆಯ ಬಣ್ಣವನ್ನು ಹೊಂದಿದೆ. ಅಪರಿಮಿತವಾಗಿ ಸಂಪದ್ಭರಿತವಾದ ಆಳ್ವಾರ್ ತಿರುನಗರಿಯು ಇಂತಹ ನದಿಯ ತೀರದಲ್ಲಿ ಇದ್ದು, ಜೇನು, ಹೂವುಗಳಿಂದ ತುಂಬಿದ ತೋಟಗಳಿಂದ ಆವರಿಸಲ್ಪಟ್ಟಿದೆ. ಅಂತಹ ಆಳ್ವಾರ್‍‌ತಿರುನಗರಿಗೇ ನಾಯಕರಾದ ನಮ್ಮಾಳ್ವಾರರು , ಧಾರಾಳತೆಯಿರುವ ಮೇಘಗಳ ಗುಣವನ್ನು ಹೊಂದಿರುವ ಪೆರಿಯ ಪೆರುಮಾಳರ ದಿವ್ಯ ಪಾದಗಳನ್ನು ಸೇವಿಸಿ, ಅಭಿವೃದ್ಧಿಗೊಂಡರು. ಅವರು ಅಪಾರ ಕರುಣೆಯಿಂದ ಈ ಹತ್ತು ಪಾಸುರಗಳನ್ನು ಒಟ್ಟು ಮೊತ್ತ ಸಾವಿರ ಪಾಸುರಗಳಲ್ಲಿ ಶಬ್ದಗಳ ಮಾಲೆಯಂತೆ , ಅಪರಿಮಿತವಾಗಿ ಸುಂದರವಾದ, ಮೇಘದಂತೆ ಇರುವ ಪೆರಿಯ ಪೆರುಮಾಳರ ದಿವ್ಯ ಪಾದಗಳಲ್ಲಿ ಹೇಳಿದ್ದಾರೆ. ಯಾರು ಈ ಹತ್ತು ಪಾಸುರಗಳನ್ನು ನಿಜವಾದ ಭಾವನೆಯಿಂದ (ಅರ್ಥದಿಂದ) ಹೇಳುತ್ತಾರೋ, ಅವರು ಅಪರಿಮಿತವಾದ ಆನಂದದ ಸಮುದ್ರದಲ್ಲಿ, ಗಾಢವಾದ ನೀಲಿಯ ಬಣ್ಣದ , ನಿತ್ಯಸೂರಿಗಳಿಂದ ಆವರಿಸಲ್ಪಟ್ಟ ಪರಮಪದದಲ್ಲಿ ಇರುತ್ತಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-7-2-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುವಾಯ್ ಮೊೞಿ – ಸರಳ ವಿವರಣೆ – 6.10 – ಉಲಗಮುಣ್ಡ

Published by:

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 5.8 ಆರಾವಮುದೇ

srinivasan -ahzwar


ಶರಣಾಗತಿಯಾಗುವ ವೇಳೆಯಲ್ಲಿ, ಯಾರೊಬ್ಬರು ಎಂಪೆರುಮಾನರ ದಿವ್ಯ ಕಲ್ಯಾಣ ಗುಣಗಳನ್ನು ಅರಿತುಕೊಂಡು ಅವುಗಳಿಗೆ ಮಹತ್ವವನ್ನು ಕೊಡಬೇಕು. ಹಾಗೆಯೇ, ತಮಗೆ ಯಾರ ಆಶ್ರಯವಿಲ್ಲದೇ, ಬೇರೆ ಯಾವುದೇ ಉಪಾಯವಿಲ್ಲದೇ, ಎಂಪೆರುಮಾನರ ದಿವ್ಯ ಪಾದಕಮಲಗಳಲ್ಲಿ ಶರಣಾಗತಿ ಹೊಂದಬೇಕು – ಪಿರಾಟ್ಟಿಯ ಶಿಫಾರಸ್ಸಿನೊಂದಿಗೆ(ಪುರುಷಕಾರಮ್) . ಅಂತಹ ಒಂದು ಸರಿಯಾದ ಕಟ್ಟುನಿಟ್ಟುಗಳೊಂದಿಗೆ ಆಳ್ವಾರರು ತಿರುವೇಂಗಡಮುಡೈಯಾನರ ಹತ್ತಿರ ಬಹು ಸುಂದರವಾಗಿ ಈ ಪದಿಗೆಯಲ್ಲಿ ಶರಣಾಗತಿಯನ್ನು ಆಚರಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ “ ತಿರುಮಲದಲ್ಲಿ ವಾಸವಾಗಿರುವ , ಇಡೀ ಲೋಕವನ್ನು ರಕ್ಷಿಸುವ ಗುಣವನ್ನು ಹೊಂದಿರುವ ನೀನು , ಕರುಣೆಯಿಂದ ನಿನ್ನನ್ನು ಹೊಂದುವ ದಾರಿಯನ್ನು ಸಹಜವಾದ ಸೇವಕತ್ವವನ್ನು ಹೊಂದಿರುವ ನನಗೆ ತೋರಿಸು. “

ಉಲಗಮ್ ಉಣ್ಡ ಪೆರುವಾಯಾ ಉಲಪ್ಪಿಲ್ ಕೀರ್ತ್ತಿ ಅಮ್ಮಾನೇ,
ನಿಲವುಮ್ ಶುಡರ್ ಶೂೞ್ ಒಳಿ ಮೂರ್ತ್ತಿ ನೆಡಿಯಾಯ್ ಅಡಿಯೇನ್ ಆರುಯಿರೇ,
ತಿಲದಮುಲಗುಕ್ಕಾಯ್ ನಿನ್‍ಱ ತಿರುವೇಂಗಡತ್ತೆಮ್ಬೆರುಮಾನೇ,
ಕುಲತೊಲ್ ಅಡಿಯೇನ್ ಉನ ಪಾದಮ್ ಕೂಡು ಮಾಱು ಕೂಱಾಯೇ ।।

ಓಹ್! ಲೋಕವನ್ನೆಲ್ಲಾ ಕಾತುರದಿಂದ ರಕ್ಷಿಸಲು ಹೊಂದಿರುವ ನಿನ್ನ ಬಾಯಿ/ ತುಟಿಗಳು ಇಡೀ ಭೂಮಂಡಲವನ್ನು ನುಂಗಿ (ಪ್ರಳಯ ಕಾಲದಲ್ಲಿ ) ಅದನ್ನು ಕಾಪಾಡಲು ಕಾದಿವೆ. ಓಹ್! ಕೊನೆಯಿಲ್ಲದ ಪ್ರಸಿದ್ಧತೆಯನ್ನು ಮತ್ತು ಸಹಜವಾದ ನಾಯಕತ್ವವನ್ನು ಹೊಂದಿರುವವನೇ! ಓಹ್! ದಿವ್ಯರೂಪದೊಂದಿಗೆ ದಿವ್ಯ ಅದ್ಭುತಗಳಿಂದ ತುಂಬಿರುವವನೇ! ನಿನ್ನ ಸಹಜವಾದ ಕಾಂತಿಯನ್ನೂ, ತೇಜಸ್ಸನ್ನೂ ತೋರಿಸುತ್ತಿರುವವನೇ! ಓಹ್! ನನ್ನ ಪ್ರಾಣವಾಯುವಾದವನೇ (ಜೀವವಾಗಿರುವವನೇ) ಓಹ್! ತನ್ನ ಹಣೆಯ ಮೇಲೆ ಊರ್ಧ್ವಪುಣ್ಡ್ರಮ್ (ನೇರವಾಗಿರುವ ತಿಲಕ ) ಧರಿಸಿ ಜಗತ್ತಿಗೆಲ್ಲಾ ನಾಯಕತ್ವವನ್ನು ಸಾಧಿಸಿ, ತಿರುಮಲದಲ್ಲಿ ನಿಂತಿರುವವನೇ! ನನಗೆ ವಂಶಯುಕ್ತವಾಗಿ ಬಂದಿರುವ ಸೇವಕತ್ವವನ್ನು ಸಾಧಿಸಲು ನಿನ್ನ ದಿವ್ಯ ಪಾದಕಮಲಗಳನ್ನು ಸೇರಲು ಮಾಧ್ಯಮವನ್ನು ತೋರಿಸು. ಎಂದು ಆಳ್ವಾರರು ಹಾಡುತ್ತಾರೆ.

ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಏನಾದರೂ ತೊಂದರೆ, ಕಷ್ಟಗಳು ಬಂದರೆ ನೀನೇ ಅದನ್ನು ನಿವಾರಿಸಿ, ನನ್ನನ್ನು ನಿನ್ನ ಪಾದಗಳಲ್ಲಿ ಸ್ವೀಕರಿಸಬೇಕು “ ಎಂದು.
ಕೂಱಾಯ್ ನೀಱಾಯ್ ನಿಲನಾಗಿ ಕ್ಕೊಡುವಲ್ ಅಶುರರ್ ಕುಲಮೆಲ್ಲಾಮ್,
ಶೀಱಾ ಎರಿಯುಮ್ ತಿರುನೇಮಿ ವಲವಾ ತೆಯ್‍ವಕ್ಕೋಮಾನೇ,
ಶೇಱಾರ್ ಶುನೈ ತ್ತಾಮರೈ ಶೆನ್ದೀ ಮಲರುಮ್ ತಿರುವೇಙ್ಗಡತ್ತಾನೇ,
ಆಱಾ ಅನ್ಬಿಲ್ ಅಡಿಯೇನ್ ಉನ್ನಡಿ ಶೇರ್ ವಣ್ಣಮ್ ಅರುಳಾಯೇ॥

ಸರ್ವಶಕ್ತನಾದ ಎಂಪೆರುಮಾನರು, ದಿವ್ಯ ಹೊಳೆಯುವ ಚಕ್ರವನ್ನೂ ನಿಯಂತ್ರಿಸಿ, ಅದರಿಂದ ಕ್ರೂರಿಗಳಾದ ಮತ್ತು ಅತೀ ಶಕ್ತಿವಂತರಾದ ರಾಕ್ಷಸರನ್ನು ಚೂರು ಚೂರಾಗಿ ಕತ್ತರಿಸುವರು. ಅವರನ್ನು ಧೂಳೀಪಟವನ್ನಾಗಿ ಮಾಡುವರು. ಆ ಚಕ್ರವು ಅವರನ್ನು ತುಂಡರಿಸಿದ ಮೇಲೂ ಅವರ ಮೇಲೆ ಕೋಪವನ್ನು ತೋರಿಸುವುದು. ಮತ್ತು ಅತ್ಯಂತ ಸಂಪನ್ನವಾಗಿ ಅನೇಕ ಸಂಪತ್ತನ್ನು ಹೊಂದಿ, ವಿಜಯವನ್ನು ಸಾಧಿಸುವುದು. ಓಹ್! ನಿತ್ಯಸೂರಿಗಳಿಗೆಲ್ಲಾ ಸ್ವಾಮಿಯಾದವನೇ! ಓಹ್! ಕೆಸರಾದ ಹೊಳೆಯಲ್ಲಿ ಅರಳಿದ ಕೆಂಡದಂತೆ ಕೆಂಪಾದ ತಾವರೆ ಹೂಗಳಿಂದ ಕೂಡಿದ ತಿರುಮಲದಲ್ಲಿ ವಾಸವಾಗಿರುವ ಸ್ವಾಮಿಯೇ! ಕರುಣೆಯಿಂದ ನಿನ್ನ ಸೇವಕನಾದ ನನ್ನನ್ನು ಹರಸು, ನಿನ್ನ ಮೇಲೆ ಅಪಾರ ಪ್ರೀತಿಯಿಂದಿರುವ ನನ್ನನ್ನು ನಿನ್ನ ದಿವ್ಯ ಪಾದಗಳಲ್ಲಿ ಸೇರಿಸಿಕೋ. ಎಂದು ಆಳ್ವಾರರು ಹಾಡುತ್ತಾರೆ.

ಮೂರನೆಯ ಪಾಸುರಮ್:
ಎಂಪೆರುಮಾನರು ಹೇಳುತ್ತಾರೆ ,”ನೀನು ಯಾವ ವಿಧವಾದ ಪರಿಶ್ರಮವನ್ನೂ, ಪ್ರಯತ್ನವನ್ನೂ ಮಾಡಲಿಲ್ಲ. ನಾನು ನೀನು ಕೇಳುವುದನ್ನು ಏಕೆ ಮಾಡಬೇಕು?” ಎಂದು. ಆಳ್ವಾರರು ಹೇಳುತ್ತಾರೆ, “ ನಿನ್ನನ್ನು ಆನಂದಿಸಲು ಅನೇಕ ವಿಶಿಷ್ಟ ವ್ಯಕ್ತಿಗಳನ್ನು ಹೊಂದಿರುವೆ. ನೀನೇ ನನಗೂ ನಿನ್ನ ಮೇಲೆ ಆಸೆ ಬರುವಂತೆ ಮಾಡಿರುವೆ. ಹಾಗೆಯೇ ಪೂರ್ಣವಾಗಿ ನಿನ್ನ ಕೃಪೆಯಿಂದಲೇ ನನ್ನ ಆಸೆಯನ್ನು ಪೂರ್ಣಗೊಳಿಸು” ಎಂದು ಹೇಳುತ್ತಾರೆ.
ವಣ್ಣಮರುಳ್ ಕೊಳ್ ಅಣಿ ಮೇಗವಣ್ಣಾ ಮಾಯವಮ್ಮಾನೇ,
ಎಣ್ಣಮ್ ಪುಗುನ್ದು ತಿತ್ತಿಕ್ಕುಮ್ ಅಮುದೇ ಇಮೈಯೋರ್ ಅದಿಪತಿಯೇ,
ತೆಣ್ಣಲರುವಿ ಮಣಿಪೊನ್ ಮುತ್ತಲೈಕ್ಕುಮ್ ತಿರುವೇಙ್ಗಡತ್ತಾನೇ,
ಅಣ್ಣಲ್ ಉನ್ ಅಡಿಶೇರ ಅಡಿಯೇಱ್‍ಕ್ಕು ಆವಾಎನ್ನಾಯೇ॥

ಹುಚ್ಚು ಹಿಡಿಸುವಂತಹ ಘನಮೇಘದ ರೂಪವನ್ನೂ, ಬಣ್ಣವನ್ನೂ, ಅದ್ಭುತವಾದ ಗುಣಗಳನ್ನೂ ಹೊಂದಿರುವ ಎಲ್ಲರಿಗಿಂತಲೂ ಶ್ರೇಷ್ಠನಾಗಿರುವ ಎಂಪೆರುಮಾನರು ನನ್ನ ಹೃದಯದೊಳಗೆ ಆಗಮಿಸಿದ್ದಾರೆ. ಅವರು ಅಮೃತಕ್ಕಿಂತಲೂ ಸಿಹಿಯಾಗಿದ್ದಾರೆ. ಅವರು ನಿತ್ಯಸೂರಿಗಳಿಗೆ ತಮ್ಮ ಈ ರೂಪವನ್ನು ಆನಂದಿಸಲು ಅನುಭವಿಸಲು ಕೊಟ್ಟಿದ್ದಾರೆ. ಸ್ವಚ್ಛವಾದ ತಿಳಿ ನೀರಿನಿಂದ ಕೂಡಿದ ಜಲಪಾತಗಳು , ಮುತ್ತುಗಳ ಅನೇಕ ಅಮೂಲ್ಯ ರತ್ನಗಳ ಮೇಲೆ ಬೀಳುವ ಪ್ರದೇಶವಾಗಿರುವ ತಿರುಮಲದಲ್ಲಿ ನಾಯಕತ್ವವನ್ನು ಮತ್ತು ಆಧಿಪತ್ಯವನ್ನು ಹೊಂದಿರುವ ಎಂಪೆರುಮಾನರೇ! ನಮ್ಮ ಮೇಲೆ ಕನಿಕರಗೊಂಡು ನೀನು ಕರುಣೆಯಿಂದಲಿ ನಿನ್ನ ದಿವ್ಯಪಾದವನ್ನು ಸೇರುವ ವ್ಯವಸ್ಥೆಯನ್ನು ಮಾಡಬೇಕು. ಅದೇ ನಮಗೆ ಸೂಕ್ತವಾದುದು.

ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನನ್ನ ಹತ್ತಿರ ಯಾವ ವಿಧವಾದ ದಾರಿಯೂ ನಿನ್ನನ್ನು ಸೇರಲು ತಿಳಿದಿಲ್ಲ. ಆದ್ದರಿಂದ ನೀನೇ ಯಾವುದಾದರೂ ದಾರಿಯನ್ನು ನನಗಾಗಿ ಹುಡುಕಿ , ನನಗೆ ಅದನ್ನು ಕರುಣೆಯಿಂದ ತಿಳಿಸಬೇಕು.” ಮತ್ತೂ ಆಳ್ವಾರರು ವಿವರಿಸುತ್ತಾರೆ. “ನೀನು ಎಲ್ಲರ ತೊಂದರೆಗಳನ್ನು ಯಾವ ಕಟ್ಟುಪಾಡುಗಳೂ ಇಲ್ಲದೇ ನಿವಾರಿಸುವಂತೆ ನಾನೂ ನಿನ್ನ ದಿವ್ಯಪಾದವನ್ನು ಸೇರುವಂತೆ ನೋಡಿಕೊಳ್ಳಬೇಕು.”
ಆವಾವೆನ್ನಾದುಲಗತ್ತೈ ಅಲೈಕ್ಕುಮ್ ಅಶುರರ್ ವಾಣಾಳ್‍ಮೇಲ್,
ತೀವಾಯ್ ವಾಳಿ ಮೞೈ ಪೊೞಿನ್ದ ಶಿಲೈಯಾ ತಿರುಮಾಮಗಳ್ ಕೇಳ್ವಾ ತೇವಾ,
ಸುರರ್ಗಳ್ ಮುನಿಕ್ಕಣಙ್ಗಳ್ ವಿರುಮ್ಬಮ್ ತಿರುವೇಙ್ಗಡತ್ತಾನೇ,
ಪೂವಾರ್ ಕೞಲ್‍ಗಳ್ ಆರು ವಿನೈಯೇನ್ ಪೊಱುನ್ದುಮಾಱು ಪುಣರಾಯೇ॥

ಓಹ್ ಎಂಪೆರುಮಾನರೇ! ಶ್ರೀ ಶಾರ್ಙ್ಗವೆಂಬ ಬಿಲ್ಲನ್ನು ಹಿಡಿದುಕೊಂಡಿರುವಿರಿ. ಅದು ಬೆಂಕಿಯನ್ನು ಉಗುಳುವ ಬಾಣಗಳಿಂದ ಲೋಕಕ್ಕೆ ಸಂಚಕಾರವಾಗಿರುವ ರಾಕ್ಷಸರ ಮೇಲೆ ಕರುಣೆ ಪಡದೆ ಬಾಣಗಳ ಮಳೆಯನ್ನೇ ಸುರಿಸುತ್ತದೆ. ಓಹ್! ನೀನು ಈ ಶತ್ರುಗಳನ್ನು ನಿರ್ಮೂಲನ ಮಾಡಿದ ಮೇಲೆ ಸಂತೋಷಿಸುವ ಲಕ್ಷ್ಮಿಯನ್ನು ಹೊಂದಿರುವೆ , ಅವಳಿಗೆ ತಕ್ಕ ಸುಂದರತೆಯನ್ನೂ, ವೀರವನ್ನೂ ಹೊಂದಿರುವೆ ಮತ್ತು ಅದರಿಂದ ಹೊಳೆಯುತ್ತಿರುವೆ. ಓಹ್! ತಿರುಮಲದಲ್ಲಿ ನೆಲೆಸಿರುವ , ದೇವತೆಗಳಿಂದಲೂ ಮತ್ತು ಋಷಿಗಳಿಂದಲೂ ಪೂಜಿಸಲ್ಪಡುವೆ. ನಾನು ಅನಂತಕೋಟಿ ಪಾಪಗಳನ್ನು ಮಾಡಿರುವೆ ಅವು ನನ್ನನ್ನು ನಿನ್ನ ಬಳಿ ಸೇರಲು ಬಿಡುತ್ತಿಲ್ಲ. ಕರುಣೆಯಿಂದಲಿ ನನಗೆ ನಿನ್ನ ಪಾದಕಮಲಗಳನ್ನು ಸೇರುವ ಮಾರ್ಗವನ್ನು ತೋರಿಸು.

ಐದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ಯಾವಾಗ ಅಪ್ರಯತ್ನಪೂರ್ವಕವಾಗಿ ಭಕ್ತರನ್ನು ಸಲಹುವ ನಿನ್ನ ದಿವ್ಯ ಪಾದವನ್ನು ಸೇರುತ್ತೇನೆ? “
ಪುಣರಾ ನಿನ್‍ಱ ಮರಮೇೞ್ ಅನ್‍ಱೆಯ್‍ದ ಒರುವಿಲ್ ವಲವಾವೋ,
ಪುಣರ್ ಏಯ್ ನಿನ್‍ಱ ಮರಮಿರಣ್ಡಿನ್ ನಡುವೇ ಪೋನ ಮುದಲ್ವಾವೋ,
ತಿಣರಾರ್ ಮೇಗಮೆನ ಕ್ಕಳಿಱು ಶೇರುಮ್ ತಿರುವೇಙ್ಗಡತ್ತಾನೇ,
ತಿಣರಾರ್ ಶಾರ್ಙ್ಗತ್ತುನಪಾದಮ್ ಶೇರ್ವದು ಅಡಿಯೇನ್ ಎನ್ನಾಳೇ॥

ಎಂಪೆರುಮಾನರು ಅಪ್ರತಿಮ ಬಿಲ್ಲುಗಾರನಾಗಿದ್ದರಿಂದ ಏಳು ಮರಗಳನ್ನು ಒಂದೇ ಸಾರಿ ಹೊಡೆದು ಉರುಳಿಸಿದ್ದರು. ಈ ಭೂಮಂಡಲಕ್ಕೆಲ್ಲಾ ಮೂಲ ಕಾರಣವಾಗಿರುವ ಎಂಪೆರುಮಾನರು ಎರಡು ಮರಗಳ ಮಧ್ಯೆ ಅಂಬೆಗಾಲಿಡುತ್ತ ಹೋಗಿ ಬಲಶಾಲಿಯಾಗಿ, ಒಂದಕ್ಕೊಂದು ಅಂಟಿಕೊಂಡು ನಿಂತಿರುವ ಆ ಎರಡು ಮರಗಳನ್ನು ಉರುಳಿಸಿದರು. ಕಪ್ಪಾದ ದಟ್ಟವಾದ ಮೇಘಗಳಂತೆ ಇರುವ ಆನೆಗಳು ಜೊತೆಯಲ್ಲಿ ವಾಸಿಸುವ ತಿರುಮಲದಲ್ಲಿ ನೀನು ವಾಸವಾಗಿರುವೆ. ನಿನ್ನ ದಾಸನಾಗಿರುವ ನಾನು, ಶ್ರೇಷ್ಠವಾದ ಶ್ರೀ ಶಾರ್ಙ್ಗವನ್ನು ಹಿಡಿದಿರುವ ನಿನ್ನಲ್ಲಿಗೆ ಯಾವಾಗ ತಲುಪುವೆನು?

ಆರನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ “ ಶ್ರೀವೈಕುಂಠದಲ್ಲಿ ನನಗೆ ಕೈಂಕರ್‍ಯಗಳನ್ನು ಸಮರ್ಪಿಸುವುದು ಪರಮ ಗುರಿ ಎಲ್ಲರಿಗೂ ಅಲ್ಲವೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಶ್ರೀವೈಕುಂಠದಿಂದಲೇ ದೇವತೆಗಳು ಬಹು ಆಸೆಯಿಂದ ತಿರುಮಲಕ್ಕೆ ಇಳಿದಿದ್ದಾರಲ್ಲವೇ ನಿನಗೆ ಸೇವೆ ಸಲ್ಲಿಸಲು? ನನಗೆ ತಿರುಮಲದಲ್ಲಿ ಯಾವಾಗ ನಿನ್ನ ಸಂಪೂರ್ಣ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ? “ ಇದನ್ನು ಈ ರೀತಿ ವಿವರಿಸಲಾಗಿದೆ, “ ದೇವತೆಗಳಿಗೂ ಅತ್ಯಂತ ಆಕರ್ಷಕವಾದ ನಿನ್ನ (ದಿವ್ಯಪಾದಗಳು) ತಿರುವಡಿಗಳಿಗೆ ಸೇವೆ ಸಲ್ಲಿಸಲು ನನಗೆ ಎಂದು ಅವಕಾಶ ದೊರಕುತ್ತದೆ? ನಾನು ಎಂದು ನಿನ್ನ ಪಾದಗಳನ್ನು ಸೇರುವೆ?” ಎಂದೂ ಹೇಳುತ್ತಾರೆ.
ಎನ್ನಾಳೇ ನಾಮ್ ಮಣ್ ಅಳನ್ದ ಇಣೈ ತ್ತಾಮರೈಗಳ್ ಕಾಣ್ಬದಱ್ಕೆನ್‍ಱು,
ಎನ್ನಾಳುಮ್ ನಿನ್‍ಱು ಇಮೈಯೋರ್ಗಳ್ ಏತ್ತಿ ಇಱೈಞ್ಜಿ ಇನಮಿನಮಾಯ್,
ಮೆಯ್ ನಾ ಮನತ್ತಾಲ್ ವೞಿಪಾಡು ಶೆಯ್ಯುಮ್ ತಿರುವೇಙ್ಗಡತ್ತಾನೇ,
ಮೆಯ್ ನಾ ಎಯ್‍ದಿ ಎನ್ನಾಳ್ ಉನ್ ಅಡಿಕ್ಕಳ್ ಅಡಿಯೇನ್ ಮೇವುವದೇ॥

ನಿತ್ಯಸೂರಿಗಳ ಗುಂಪು ಎಂಪೆರುಮಾನರನ್ನು ಯಾವಾಗಲೂ ಹೊಗಳಿ ಕೇಳುತ್ತಿರುತ್ತವೆ “ ಎಲ್ಲಾ ಲೋಕಗಳನ್ನು ಅಳೆದ ಮತ್ತು ಭೂಮಿಯ ಮಣ್ಣಿನಿಂದ ಕೂಡಿದ ಮತ್ತು ಅತ್ಯಂತ ಸರಳವಾಗಿರುವ ನಿನ್ನ ದಿವ್ಯ ಪಾದಗಳನ್ನು ಜೊತೆಯಾಗಿ ಯಾವಾಗ ನೋಡುವುದು? “ ಓಹ್! ತಿರುಮಲದಲ್ಲಿ ಅಸ್ತಿತ್ವದಲ್ಲಿರುವ ನಿನ್ನನ್ನು ಈ ರೀತಿಯಾಗಿ ಪೂಜಿಸಲು ಮತ್ತು ಸೇವೆ ಸಲ್ಲಿಸಲು ಇವರೆಲ್ಲರೂ ಕಾದಿರುವರು. ನಿನ್ನನ್ನು ಮಾತ್ರ ಸ್ವಾಮಿಯೆಂದು ನಂಬಿರುವ ನಾನು ಯಾವಾಗ ನಿನ್ನ ದಿವ್ಯ ಪಾದಗಳನ್ನು ನನ್ನ ಕನಸಿನಲ್ಲಿ ಕಂಡ ಹಾಗೆ ಸೇರುವೆ ಮತ್ತು ಅಲ್ಲಿ ಸೇರಲು ಯೋಗ್ಯವಾಗುವೆ?” ಎಂದು ಆಳ್ವಾರರು ಹಾಡುತ್ತಾರೆ.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನನ್ನು ಸೇರಲು ಯಾವ ಮಾರ್ಗವನ್ನೂ ಹೊಂದಿಲ್ಲ. ಆದರೂ ನಾನು ನಿನ್ನ ಆನಂದವನ್ನು ಅನುಭವಿಸದೇ ಒಂದು ಕ್ಷಣ ಕೂಡಾ ಇರಲಾರೆ”
ಅಡಿಯೇನ್ ಮೇವಿ ಅಮರ್ಗಿನ್‍ಱ ಅಮುದೇ ಇಮೈಯೋರ್ ಅದಿಪತಿಯೇ,
ಕೊಡಿಯಾ ಅಡು ಪುಳ್ ಉಡೈಯಾನೇ ಕೋಲಕ್ಕನಿವಾಯ್ ಪ್ಪೆರುಮಾನೇ,
ಶೆಡಿ ಆರ್ ವಿನೈಗಳ್ ತೀರ್ ಮರುನ್ದೇ ತಿರುವೇಙ್ಗಡತ್ತೆಮ್ಬೆರುಮಾನೇ,
ನೊಡಿಯಾರ್ ಪೊೞುದುಮ್ ಉನಪಾದಮ್ ಕಾಣ ನೋಲಾದಾಟ್ರೇನೇ ॥

ಎಂಪೆರುಮಾನರು ಸನ್ನಿಹಿತವಾಗಲು ಮತ್ತು ಅನುಭವ ಪಡೆಯಲು ಶಾಶ್ವತವಾಗಿ ಆನಂದಮಯರಾಗಿದ್ದಾರೆ. ನಿತ್ಯಸೂರಿಗಳಿಗೆಲ್ಲಾ ಅಧಿಪತಿಯೂ ನಿಯಂತ್ರಕರೂ ಆಗಿದ್ದಾರೆ. ಭಾಗವತರ ವೈರಿಗಳನ್ನು ನಿರ್ಮೂಲನೆ ಮಾಡುವ ಗರುಡಾಳ್ವಾನ್ ಅನ್ನು ಧ್ವಜವಾಗಿ ಪಡೆದಿದ್ದಾರೆ. ಅವರ ತುಟಿಗಳು ಕೆಂಪಾದ ಹಣ್ಣಿನಂತೆ ಇದ್ದು, ಆ ಸುಂದರತೆಯು ಅವರನ್ನು ಹೆಚ್ಚು ಆನಂದಿಸಲ್ಪಡುತ್ತದೆ. ಅವರು ಆ ರೀತಿಯ ಅಪರಿಮಿತ ಆನಂದವನ್ನುಂಟುಮಾಡುವ ಅನೇಕ ಸೌಕರ್‍ಯಗಳನ್ನು ಹೊಂದಿದ್ದಾರೆ. ದಟ್ಟವಾದ ಪೊದೆಯ ಹಾಗೆ ಬೆಳೆದಿರುವ ನನ್ನ ಪಾಪರಾಶಿಯನ್ನು ದೂರಮಾಡಲು ಔಷಧಿಯಾಗಿರುವ ತಿರುಮಲದಲ್ಲಿ ನೆಲೆಸಿರುವವನೇ! ನೀನು ನಿನ್ನ ಸೇವಕನಾಗಿ ನನ್ನನ್ನು ಅನುಗ್ರಹಿಸಿರುವುದಕ್ಕೆ ನಾನು ಏನೂ ಪ್ರಯತ್ನ ಮಾಡಲಿಲ್ಲ. ಒಂದು ಕ್ಷಣವೂ ನಿನ್ನ ದಿವ್ಯ ಪಾದಕಮಲಗಳಿಂದ ದೂರವಾಗಿ ಇರಲಾರೆ. [ನೋಡದೇ ಇರಲಾರೆ] ಎಂದು ಹಾಡುತ್ತಾರೆ.

ಎಂಟನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ, “ ನೀನು ಯಾವ ಪ್ರಯತ್ನವನ್ನೂ ಮಾಡದೇ , ನನಗೆ ಸಹಿಸಲಾಗುತ್ತಿಲ್ಲ ಎಂದರೆ ಫಲಿತಾಂಶ ಸಿಕ್ಕುವುದೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಬ್ರಹ್ಮ ಮುಂತಾದವರು ತಮಗೆ ಸ್ವಲ್ಪವೇ ಸಾಮರ್ಥ್ಯವಿದ್ದರೂ, ಆಕಿಂಚನ್ಯಮ್ ನನ್ನು ಪಠಿಸಿ ಅವರ ಆಸೆಯನ್ನು ಪೂರೈಸಿಕೊಳ್ಳಲಿಲ್ಲವೇ? ಆದ್ದರಿಂದ ದಯವಿಟ್ಟು ನನ್ನಲ್ಲಿಗೆ ಬಂದು ನನ್ನ ದುಃಖವನ್ನು ಪರಿಹರಿಸು”.
ನೋಲಾದಾಟ್ರೇನ್ ಉನಪಾದಮ್ ಕಾಣ ಎನ್‍ಱು ನುಣ್ ಉಣರ್ವಿನ್ ,
ನೀಲಾರ್‍‌ಕಣ್ಡತ್ತಮ್ಮಾನುಮ್ ನಿಱೈನಾನ್ಮುಗನುಮ್ ಇನ್ದಿರನುಮ್,
ಶೇಲೇಯ್ ಕಣ್ಡಾರ್ ಪಲರ್ ಶೂೞ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಮಾಲಾಯ್ ಮಯಕ್ಕಿ ಅಡಿಯೇನ್ ಪಾಲ್ ವನ್ದಾಯ್ ಪೋಲೇ ವಾರಾಯೇ॥

ಸರ್ವಜ್ಞನಾದ(ಎಲ್ಲಾ ಬಲ್ಲವನಾದ) ರುದ್ರನು ಸೂಕ್ಷ್ಮ ಸಂಗತಿಗಳನ್ನು ನೋಡಬಲ್ಲವನಾಗಿದ್ದರಿಂದ ಇಡೀ ಭೂಮಂಡಲದಲ್ಲಿ ಮುಖ್ಯನಾದವನಾಗಿ , ತನ್ನ ಕಂಠವನ್ನು ಕಪ್ಪಾಗಿಸಿಕೊಂಡನು. ನಾಲ್ಕು ತಲೆಯ ಬ್ರಹ್ಮನು ಇಂತಹ ರುದ್ರನಿಗೆ ತಂದೆಯಾಗಿದ್ದುಕೊಂಡು , ಸೃಷ್ಟಿಸಲು ಎಲ್ಲಾ ಜ್ಞಾನವನ್ನೂ ಹೊಂದಿದ್ದನು. ಇಂದ್ರನಿಗೆ ಮೂರೂ ಲೋಕದ ಸಂಪತ್ತುಗಳಿದ್ದರೂ, ನಿನ್ನ ಹತ್ತಿರ “ ನನಗೆ ನಿನ್ನನ್ನು ಹೊಂದಲು ಯಾವ ಮಾರ್ಗಗಳೂ ತಿಳಿದಿಲ್ಲವಾದರೂ, ನಿನ್ನನ್ನು ಬಿಟ್ಟಿರಲು ಅಸಹನೀಯವಾಗಿದೆ.” ಎಂದು ಹೇಳುತ್ತಾನೆ. ತಿರುಮಲದಲ್ಲಿ ವಾಸವಾಗಿರುವ ಮತ್ತು ಈ ರೀತಿಯಾಗಿ ಪ್ರಾರ್ಥನೆಗಳನ್ನು ಮತ್ತು ಶರಣಾಗತಿಯನ್ನು ಸ್ವೀಕರಿಸುವ ಮತ್ತು ಇಂತಹ ದೇವರುಗಳಿಂದ ಮತ್ತು ಅವರ ಹತ್ತಿರದಲ್ಲಿರುವ ಮೀನಿನಂತೆ ಕಣ್ಣುಗಳಿರುವ ಹೆಣ್ಣು ದೇವತೆಗಳಿಂದ (ಪಾರ್ವತಿ, ಸರಸ್ವತಿ , ಶಚಿ ಮುಂತಾದವರಿಂದ) ಆರಾಧಿಸಲ್ಪಡುವೆ. ಹೇಗೆ ನೀನು ಕೃಷ್ಣನಾಗಿ ಕಪ್ಪಾದ ಪ್ರಭೆಯುಳ್ಳ ಬಣ್ಣವನ್ನು ಹೊಂದಿ ಎಲ್ಲರನ್ನೂ ನಿನ್ನ ಗುಣಗಳಿಂದ ಮತ್ತು ಚಟುವಟಿಕೆಗಳಿಂದ ಮಂತ್ರಮುಗ್ಧರಾಗಿ ಮಾಡುತ್ತಿದ್ದೆಯೋ, ಹಾಗೆಯೇ ನಿನ್ನನ್ನು ಮಾತ್ರ ಶರಣು ಹೋಗಿರುವ ಮತ್ತು ನಿನ್ನನ್ನು ಬಿಟ್ಟು ಬದುಕಲಾರೆನೆಂಬ ನನ್ನಲ್ಲಿಗೂ ನೀನು ಬರಬೇಕು” ಎಂದು ಹಾಡುತ್ತಾರೆ.

ಒಂಭತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನ ಅತ್ಯಂತವಾಗಿ ಆನಂದಿಸಲ್ಪಡುವ ಸುಂದರ ದಿವ್ಯ ಪಾದಗಳನ್ನು ಎಂದೆಂದಿಗೂ ಬಿಡಲಾರೆ.”
ವನ್ದಾಯ್ ಪೋಲೇ ವಾರಾದಾಯ್ ವಾರಾದಾಯ್ ಪೋಲ್ ವರುವಾನೇ,
ಶೆನ್ದಾಮರೈಕ್ಕಣ್ ಶೆಙ್ಗನಿವಾಯ್ ನಾಲ್ ತೋಳ್ ಅಮುದೇ ಎನದುಯಿರೇ,
ಶಿನ್ದಾಮಣಿಗಳ್ ಪಗರ್ ಅಲ್ಲೈ ಪ್ಪಗಲ್‍ಶೆಯ್ ತಿರುವೇಙ್ಗಡತ್ತಾನೇ,
ಅನ್ದೋ ಅಡಿಯೇನ್ ಉನಪಾದಮ್ ಅಗಲ ಕಿಲ್ಲೇನ್ ಇಱೈಯುಮೇ ॥

ನೀನು ಬಂದ ಹಾಗೆ ಕಂಡರೂ ಕೈಗೆ ಸಿಕ್ಕ ಹಾಗೆ ಕಂಡರೂ ಸಿಗುವುದಿಲ್ಲ. ತನ್ನೊಳಗೆ ಆಕಿಂಚನ್ಯಮ್ ನಿಂದ (ಏನೇನೂ ಇಲ್ಲದೆ) , ‘ಅವನು ಬರಲು ಸಾಧ್ಯವೇ ಇಲ್ಲ ‘ ಎಂದು ಯೋಚಿಸುವಾಗ ನೀನು ಬರುವೆ ಮತ್ತು ಸಂಪೂರ್ಣ ಅಧೀನನಾಗುವೆ. ನೀನು ನಿನ್ನ ಬಹು ಸುಂದರವಾದ ಕಮಲದ ಹೂಗಳ ಹಾಗಿರುವ ಕೆಂಪಾದ ದಿವ್ಯ ಕಣ್ಣುಗಳಿಂದ ,ಮತ್ತು ಕೆಂಪಾದ ಮಾಗಿದ ಹಣ್ಣಿನಂತಿರುವ ದಿವ್ಯ ತುಟಿಗಳಿಂದ ಹೇಳುವೆ “ ಮಾಮೇಕಮ್ ಶರಣಮ್ ವ್ರಜ” . ಭಕ್ತರನ್ನು ಆಲಂಗಿಸುತ್ತಾ ನಾಲ್ಕು ಭುಜಗಳು ಹೇಳುತ್ತವೆ “ಸುಗಾಧಮ್ ಪರಿಷಸ್ವಜೇ” ಅವುಗಳು ನಿರಂತರವಾಗಿ ಭಕ್ತರಿಗೆ ಆನಂದವನ್ನು ನೀಡುತ್ತವೆ ಮತ್ತು ನನಗೆ ಜೀವಾಂಶವಾಗಿದೆ. ರಾತ್ರಿಯನ್ನು ಹಗಲಿನ ಹಾಗೆ ಪ್ರಕಾಶಿಸುವ , ಕೇಳಿದ್ದನ್ನು ಕೊಡುವ ಅಮೂಲ್ಯ ರತ್ನದ ಹರಳುಗಳು ತುಂಬಿರುವ ತಿರುಮಲದಲ್ಲಿ ನೀನು ನೆಲೆಸಿರುವೆ. ಅಯ್ಯೋ! ನಿನ್ನ ಸಂಪೂರ್ಣ ಸೇವಕನಾಗಿರುವ , ಬೇರೆ ಯಾರ ಆಶ್ರಯವಿಲ್ಲದ ನಾನು ನಿನ್ನ ದಿವ್ಯ ಪಾದಗಳನ್ನು ಬಿಟ್ಟು ಒಂದು ನಿಮಿಷವೂ ಅಗಲಿರಲಾರೆನು.
ಅನ್ದೋ => ಇದರ ಅರ್ಥ , ಅಗಲಿಕೆಯಿಂದ ನನ್ನೊಳಗೆ ಇಷ್ಟೊಂದು ವ್ಯಥೆಯನ್ನು ದುಃಖವನ್ನೂ ತುಂಬಿಕೊಂಡಿದ್ದರೂ, ನಾನು ನನ್ನ ಮನೋಕಾಂಕ್ಷೆಯನ್ನು ಬಿಡಿಸಿ ಪ್ರತ್ಯೇಕವಾಗಿ ಹೇಳಬೇಕೆ ಎಂದು.

ಹತ್ತನೆಯ ಪಾಸುರಮ್:
ಆಳ್ವಾರರು ತಿರುವೇಂಗಡಮುಡೈಯಾನರಿಗೆ ಸರಿಯಾದ ಶರಣಾಗತಿಯಾಗುತ್ತಾರೆ ಮತ್ತು ಹೇಳುತ್ತಾರೆ, “ ಬೇರೆ ಏನೂ ಆಶ್ರಯವಿಲ್ಲದೆ ನಾನು ಪಿರಾಟ್ಟಿಯ ಪುರುಷಕಾರವನ್ನು ಮತ್ತು ಸೂಕ್ತ ಗುಣಗಳನ್ನು ಹೊಂದಿರುವ ನಿನ್ನ ದಿವ್ಯ ಪಾದಗಳಿಗೆ ಶರಣಾಗುತ್ತೇನೆ.”
ಅಗಲಕಿಲ್ಲೇನ್ ಇಱೈಯುಮ್ ಎನ್‍ಱು ಅಲರ್‌ಮೇಲ್ ಮಙ್ಗೈ ಉಱೈ ಮಾರ್ಬಾ,
ನಿಗರಿಲ್ ಪುಗೞಾಯ್ ಉಲಗಮ್ ಮೂನ್‍ಱುಡೈಯಾಯ್ ಎನ್ನೈ ಆಳ್ವಾನೇ,
ನಿಗರಿಲ್ ಅಮರರ್ ಮುನಿಕ್ಕಣಙ್ಗಳ್ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಪುಗಳ್ ಒನ್‍ಱಿಲ್ಲಾ ಅಡಿಯೇನ್ ಉನ್ ಅಡಿಕ್ಕೀೞ್ ಅಮರ್ನ್ದು ಪುಗುನ್ದೇನೇ ॥

ಓಹ್! ಎಂಪೆರುಮಾನರೇ! ನೀವು ಅತಿಯಾಗಿ ಆನಂದಿಸಬಹುದಾದ ದಿವ್ಯ ವಕ್ಷಸ್ಥಲವನ್ನು ಹೊಂದಿದ್ದೀರಿ. ಅದು ಶಾಶ್ವತವಾಗಿ ಲಕ್ಷ್ಮಿಯ ವಾಸಸ್ಥಾನವಾಗಿದೆ. ಅವಳು ಎಂದೂ ತರುಣಾವಸ್ಥೆಯಲ್ಲಿ ಇದ್ದು , ಮೃದುವಾದ ಮಧುರವಾದ ಗುಣಗಳನ್ನು ಹೊಂದಿದ್ದು, ನಿಮ್ಮಿಂದ ಒಂದು ಕ್ಷಣವೂ ದೂರವಾಗಿರಲಾರೆ ಎಂದು ನಿಮಗೆ ಅತ್ಯಂತ ಪ್ರಿಯಳಾಗಿದ್ದಾಳೆ. ಓಹ್! ಸರಿಸಾಟಿಯಿಲ್ಲದ, ಶೇಷ್ಠ ವಾತ್ಸಲ್ಯವನ್ನು ಹೊಂದಿರುವವನೇ! ಪ್ರಮಾಣದಲ್ಲಿ ಸಾಧಿಸಿರುವ ಹಾಗೆ ಮೂರು ವಿಧದ ಚೇತನಗಳಿಗೂ ಮತ್ತು ಅಚೇತನಗಳಿಗೂ ಸ್ವಾಮಿತ್ವಮ್ ಅನ್ನು ಹೊಂದಿರುವವನೇ! ಬಹಳ ತಪ್ಪುಗಳನ್ನು ಮಾಡಿದ ನನ್ನನ್ನು ಕೂಡಾ ಸ್ವೀಕರಿಸಿ,ಅಂಗೀಕರಿಸಲು ಬೇಕಾದ ಸೌಶೀಲ್ಯವನ್ನು ಹೊಂದಿರುವವನೇ! ಸರಿಸಾಟಿಯಿಲ್ಲದ ಅಮರರು ಪೂಜಿಸಲು ಅತಿ ಉತ್ಸುಕರಾಗಿರುವ, ಮುನಿಗಳು ನಿನಗಾಗಿ ತಪಸ್ಸು ಮಾಡುವ ಸ್ಥಳವಾದ ತಿರುಮಲದಲ್ಲಿ ನೆಲೆಸಿರುವವನೇ! ಅನನ್ಯಶರಣನಾಗಿರುವ ಬೇರೆ ಯಾವ ಮಾರ್ಗವೂ ಉಪಾಯವೂ ಇಲ್ಲದ ಉಪಾಯಾಂತರಮ್ ನಾನು ಮತ್ತು ಇತರ ಭಕ್ತರು ನಿನ್ನ ದಿವ್ಯಪಾದದಡಿಯಲ್ಲಿ ಕುಳಿತಿದ್ದೇವೆ. ನಮಗೆ ನಿನ್ನ ಕೈಂಕರ್‍ಯದ ಗುರಿಯನ್ನು ಹೊರತುಪಡಿಸಿ ಬೇರೇನೂ ಬೇಡ. ಎಂದು ಹಾಡುತ್ತಾರೆ.

ಹನ್ನೊಂದನೆಯ ಪಾಸುರಮ್:
ಯಾರು ಯಾರು ಈ ಹತ್ತು ಪಾಸುರಗಳುಳ್ಳ ಪದಿಗೆಯನ್ನು ಕಲಿತು ಹಾಡುತ್ತಾರೋ, ಅವರಿಗೆ ಪರಮಪದ ಪ್ರಾಪ್ತಿಯಾಗುವುದು ಮತ್ತು ಕೈಂಕರ್‍ಯದಲ್ಲಿ ಅವರು ವ್ಯಸ್ತರಾಗುತ್ತಾರೆ.
ಅಡಿಕ್ಕೀೞ್ ಅಮರ್ನ್ದು ಪುಗುನ್ದು ಅಡಿಯೀರ್ ವಾೞ್‍ಮಿನ್ ಎನ್‍ಱೆನ್‍ಱು ಅರುಳ್‍ಕೊಡುಕ್ಕುಮ್,
ಪಡಿ ಕ್ಕೇೞ್ ಇಲ್ಲಾ ಪ್ಪೆರುಮಾನೈ ಪ್ಪೞನಕ್ಕುರುಗೂರ್ ಚ್ಚಡಗೋಪನ್,
ಮುಡಿಪ್ಪಾನ್ ಶೊನ್ನ ಆಯಿರತ್ತು ತ್ತಿರುವೇಙ್ಗಡತ್ತುಕ್ಕಿವೈಪತ್ತುಮ್,
ಪಿಡಿತ್ತಾರ್ ಪಿಡಿತ್ತಾರ್ ವೀಟ್ರಿರುನ್ದು ಪೆರಿಯ ವಾನುಳ್ ನಿಲಾವುವರೇ ॥

ಎಂಪೆರುಮಾನರು ಎಲ್ಲರಿಗಿಂತಲೂ ಶ್ರೇಷ್ಠರಾದವರು ಎಲ್ಲರ ಮೇಲೆ ತಮ್ಮ ಕರುಣೆಯನ್ನು ಹರಿಸುತ್ತಾರೆ ಮತ್ತು ಹೇಳುತ್ತಾರೆ. “ಓಹ್! ನನ್ನ ಸೇವಕರೇ, ನನ್ನ ದಿವ್ಯ ಪಾದಗಳಲ್ಲಿ ಪ್ರವೇಶ ಮಾಡಿ ಮತ್ತು ಅನನ್ಯ ಸಾಧನರಾಗಿ , ಅನನ್ಯ ಪ್ರಯೋಜನರಾಗಿ ಅನಂತವಾಗಿ ಆನಂದ ಹೊಂದಿರಿ.” ಉತ್ತೇಜಕವಾದ ನೀರಿನ ಪ್ರದೇಶವನ್ನು ಹೊಂದಿರುವ ಆಳ್ವಾರ್ ತಿರುನಗರಿಯ ನಾಯಕರಾಗಿರುವ ನಮ್ಮಾಳ್ವಾರರು ಕರುಣೆಯಿಂದ ಎಂಪೆರುಮಾನರ ಬಗ್ಗೆ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ಹತ್ತು ಪಾಸುರಗಳನ್ನು, ಸಾವಿರ ಪಾಸುರಗಳೊಡನೆ ಹೇಳಿದ್ದಾರೆ. ಯಾರು ಈ ಪಾಸುರಗಳನ್ನು ಅವುಗಳ ಅರ್ಥಗಳೊಂದಿಗೆ ಹಿಡಿದಿಟ್ಟುಕೊಳ್ಳುತ್ತಾರೋ, ಅವರು ಅತ್ಯಂತ ಶ್ರೇಷ್ಠವಾದ ಪರಮಪದವೆಂಬ ಪರಮವ್ಯೋಮದಲ್ಲಿ ನಿರಂತರವಾಗಿ ವಿಶಿಷ್ಟ ರೂಪದಲ್ಲಿರುತ್ತಾರೆ ಮತ್ತು ಶಾಶ್ವತವಾದ ಆನಂದವನ್ನು ಹೊಂದುತ್ತಾರೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-6-10-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


కోయిల్ తిరువాయ్మొళి – సరళ వ్యాఖ్యానము – 3.3 – ఒళివిల్

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

కోయిల్ తిరువాయ్మొళి

<< 2-10 కిళరొళి

srinivasan -ahzwar

“పావనమైన నీ పవిత్ర కైంకర్యంలో విరోధమయ్యే ఈ శరీరాన్ని తొలగించు” అని భగవంతుడిని నమ్మాళ్వార్ ప్రార్థిస్తున్నారు. “నీ ఈ శరీరంతో  కైంకార్యాన్ని స్వీకరించడానికి నేను ఉత్తర తిరుమల (తిరువేంగడం) లో వేంచేసి ఉన్నాను, ఇక్కడికి వచ్చి పరమానందాన్ని పొందు” అని భగవాన్ స్పందిచగా ఆళ్వార్ సంతోషించి తనకు నిత్య కైంకార్యాన్ని ప్రసాదించమని వేడుకుంటున్నారు.

మొదటి పాశురము:  అఖిలాండ కోటి బ్రహ్మాండ నాయకుడైన తిరువెంకటముడయానుడికి అన్ని రకాల సేవలలో పాలుపంచుకోవాలని, ఆళ్వారు తనతో పాటు తన సంబంధం ఉన్న వారందరినీ  కోరుతున్నారు.

ఒళివిల్‌ కాలం ఎల్లాం ఉడనాయ్‌ మన్ని
వళువిలా అడిమై శెయ్య వేండునాం
తెళి కురల్‌ అరువి త్తిరువేంగడత్తు
ఎళిల్‌ కొళ్‌ శోది ఎందై తందై తందైక్కే

మనం ఏ సేవలూ వదలకుండా, అన్ని వేళలా ఏ ఆటంకములు లేకుండా, మన పూర్వాచర్యుల వంశ నాయకుని వీడకుండా అతనితో కలిసి ఉండాలి; అంటే దివ్య తేజోమయ రూపములో ఉన్న తిరువెంకట శ్రీనివాసునితో ఉండాలి. జలపాతాల సవ్వడులతో ద్వనిస్తున్న తిరుమల తిరువేంగడంలో ఉన్నందున అతడు అతి సుందరుడైనాడు అని తెలుపుతున్నారు.

రెండవ పాశురము:  అత్యున్నతుడు అయిన ఈ స్వామి యొక్క విశిష్ట గుణాలను మరియు రూపాలను ఆళ్వారు దయతో వివరిస్తున్నారు.

ఎందై తందై తందై తందై తందైక్కుం
ముందై వానవర్ వానవర్‌ కోనొడుం
శిందు పూ మగిళుం తిరువేంగడత్తు
అందమిల్‌ పుగళ్ కారెళిల్‌ అణ్ణలే

మన పూర్వీకుల అవిఛిన్నమైన పరంపరలో ఎంబెరుమాన్ ప్రథముడు; పుష్పమండము అని పిలువబడే తిరుమలలో వికసించిన ఆ పుష్పాలతో విశ్వక్సేనునితో పాటు అతడిని నిత్యసూరులందరూ నిత్యమూ సేవిస్తారు; అంతులేని కల్యాణ గుణాలతో నల్లని అతిసుందర స్వరూపముతో తిరుమలలో నివాసుడై ఉన్నాడు ఆ సర్వాధికారుడు.

మూడవ పాశురము: అటువంటి శ్రేష్ట స్వరూప గుణాలతో ఉన్న ఎంబెరుమానుడిని నిత్యసూరులు సేవించెదరు” అని ఆళ్వారు తెలుపుచున్నారు.

అణ్ణల్‌ మాయన్ అణి కొళ్‌ శెందామరై
కణ్ణన్ శెంగని వాయ్ క్కరుమాణిక్కం
తెణ్ణిఱై చ్చువైనీర్ త్తిరువేంగడత్తు
ఎణ్ణిల్‌ తొల్‌ పుగళ్ వానవర్‌ ఈశనే

ఎర్రటి దొండపండు వంటి పెదవులతో, ఆకర్షనీయమైన నల్లని నీల రత్నములా మెరిసే దివ్య సౌందర్యముతో, అద్భుత లక్షణాలతో, పుణ్డరీకాక్షునిగా ఎంబెరుమాన్ తన ఆధిపత్య గుణాన్ని వ్యక్తం చేస్తున్నారు. తేటనైన  తెల్లని జలాలతో నిండిన కొలనులు ఉన్న తిరుమలలో కొలువై ఉండుటచేత ఈ భగవాన్ అనంత కోటి మంగళ గుణాలకు అధిపతి అయినాడు, నిత్యసూరులకు ప్రభువువైనాడు.

నాలుగవ పాశురము:  “అతి అల్పుడనైన నాలో ఐక్యమైన ఎంబెరుమాన్, పరమ జ్ఞానులైన నిత్యసూరుల‌కు తనను తాను అర్పించాడని అనడంలో ఆశ్చర్యముందా?” అని ఆళ్వారు ప్రశ్నిస్తున్నారు.

ఈశన్ వానవర్‌క్కు ఎన్బన్ ఎన్ఱాల్‌ అదు
తేశమో తిరువేంగడ త్తానుక్కు
నీశనేన్ నిఱై  ఒన్ఱుం ఇలేన్ ఎన్‌ కణ్
పాశం వైత్త పరంజుడర్‌ చ్చోదిక్కే

“నిత్యసూరులను నియంత్రించువాడు భగవాన్” అని నేనంటాను. నేనలా అనడంలో ఏమైన గొప్పదనం ఉందా? లేదు. ఎందుకంటే, అసంపూర్ణుడు అతి అల్పుడైన నాతో, పరిపూర్ణుడు అనంతకోటి మంగళ గుణాలున్న తాను నిత్య సంబంధాన్ని పెట్టుకున్నాడు. తిరుమలలో స్థిరనివాసుడై ఉన్న (అతని సరళత తెలుస్తుంది) కారణంగా అతడు పరిపూర్ణమైన, ప్రకాశవంతమైన రూపాన్ని పొందాడు.

ఐదవ పాశురము: “అతను కేవలం ‘శీలవన్’ ఏనా (సులభుడు, శుభ లక్షణాలతో ఉన్నవాడు)? అటువంటి ఎంబెరుమానుడిని, సరళుడే కాకుండా అనుభవించదగినవాడు కాబట్టి, సర్వేశ్వరుడు అని కీర్తిస్తారు” అని ఆళ్వారు తెలుపుతున్నారు.

శోదియాగి ఎల్లా ఉలగుం తొళ్లుం
ఆది మూర్తి ఎన్ఱాల్ అళవాగుమో
వేదియర్‌ ముళు వేదత్తముదత్తై
తీదిల్‌ శీర్‌  త్తిరువేంగడ త్తానైయే

ఒకవేళ తైత్తిరియ ఉపనిషత్తు‌లో “ఆనందో బ్రహ్మ” (సర్వోన్నత బ్రహ్మయే బ్రహ్మానందము) “రసో వై సః” (అతడు అన్ని రుచులతో నిండి ఉన్నావాడు) అని తిరువేంగడవాసుడిని వేదము కీర్తిస్తుంది. ఏ అమంగళములు లేకుండా కేవలము శుద్ద మంగళ గుణాలతో నిండిన అతడిని మంగళ స్వరూపుడైన ‘సర్వేశ్వరుడు’ అని స్తుతించారు. సర్వమూ వ్యాపించి సర్వ కారకుడిగా పక్షపాత రహితుడిగా విచక్షణ లేకుండా ఆరాధింపబడుతున్నడు, అందులో గొప్పతనం ఏముంది? అనగా – సర్వకారకుడిగా, సర్వవ్యాపిగా, అందరికీ ఆశ్రితుడిగా, అతడి ఆధిపత్య గుణానికి, అతడి సరళతకి, మాధుర్య గుణానికి మధ్య  సామ్యము లేదు అని అర్థమౌతుంది.

ఆరవ పాశురము: మనలో ప్రతికూలమైన అంశాలు తొలగిన పిదప, ఎంబెరుమాన్ యొక్క ఆశ్రయం సులువుగా పొంది, పరమానందాన్ని అనిభవించడంలో దోహదపడుతుందని ఆళ్వారు కృపతో వివరిస్తున్నారు.

వేంగడంగళ్‌ మెయ్‌మ్మేల్‌ వివై ముఱ్ఱవుం
తాంగళ్‌ తంగట్కు నల్లనవే శెయ్వార్
వేంగడత్తుఱై వార్‌క్కు నమవెన్న
లాం కడమై అదుశుమందార్ కట్కే

తిరుమలలో నిత్యనివాసుడై ఉన్న స్వామి పట్ల “నమః” అనే పదాన్ని వారి మనస్సులో తలంచి, అనుసరించే వారికి, వాళ్ళు ఆర్జించిన గత పాపాలు, ఉత్తరాగములు (శరణాగతి తరువాత పోగుచేసుకున్న పాపాలు) కాలి బూడిద అవుతాయి; ఇది నిజం. ప్రతికూల అంశాలు అవంతకవే మాయమౌతాయి కాబట్టి, వారు భగవత్ అనుభవంలో మాత్రమే పాల్గొని వారి స్వభావానికి అనుగుణంగా పరమానందాన్ని పొందుతారు.

ఏడవ పాశురము: “మన శరణాగతి ఫలితముగా, అతడి నివాసమైన తిరుమల మనకి  అత్యున్నత సామ్యపత్తిని [ఎనిమిది గుణాలతో ఉన్న భగవానుడికి సమానమైన] అనుగ్రహిస్తుంది” అని ఆళ్వారు వివరిస్తున్నారు.

శుమందు మామలర్ నీర్‌ శుడర్ దూబం కొణ్డు
అమర్‌ందు వానవర్‌ వానవర్‌ కోనొడుం
నమన్ఱెళుం తిరువేంగడం నంగట్కు
శమన్ కొళ్‌ వీడు తరుం తడంగున్ఱమే

లౌకిక సుఖాలలో అణుమాత్రం ఆసక్తి లేని అనన్య ప్రయోజనులుగా కీర్తించబడుతున్న నిత్యసూరులు, వారి నాయకుడైన విశ్వక్సేనుడు భక్తి , అనురాగములతో, ఉత్తమమైన పుష్పాలు, శుద్ద జలము, విశిష్ట ధూప దీపాలు తీసుకెళ్ళి ఆ విశాల తిరుమల దివ్య కొండకు సమర్పించి, నమస్కరించి పరిపూర్ణులైనారు. అటువంటి తిరుమల, మనకు మోక్షాన్ని అనుగ్రహించి పరమ సామ్యపత్తిని (ఎనిమిది గుణాలలో భగవానుడికి సమానముగా) పొందేలా చేస్తుంది.

ఎనిమిదవ పాశురము: “అటువంటి తిరుమలను దర్శించి అనుభవించడం ద్వారా మన లక్ష్య సాధనలో అడ్డంకులు అవంతకు అవే అదృశ్యమవుతాయి” అని ఆళ్వారు చెబుతున్నారు.

కున్ఱం ఏంది క్కుళిర్‌ మళై కాత్తవన్
అన్ఱు జ్ఞాలం అళంద పిరాన్ పరన్‌
శెన్ఱుశేర్ తిరువేంగడ మామలై
ఒన్ఱుమే తొళ నం వినై ఒయుమే

గోవర్ధన గిరిని తన చిటికెన వ్రేలుతో ఎత్తి రేపల్లె వాసులను మరియు గోవులను  రక్షించిన ఆ దేవాది దేవుడు, సర్వరక్షకుడిగా తన పాదముతో భూమిని కొలిచి మహాబలి నుండి రక్షించిన ఆ దేవాది దేవుడు వెళ్లి దివ్య కొండ అయిన తిరుమలకి చేరుకున్నాడు. మనము ఆ తిరుమలకి చేరుకొని వేంకటనాథుని దర్శించడం చేతనే మన అవరోధాల రూపములో ఉన్న మన పాపాలు మాయమౌతాయి.

తొమ్మిదవ పాశురము: “దేశికుడు (నాయకుడు) అయిన తిరువేంగడముడైయాన్ మన అడ్డంకులను తొలగించగల సామర్థ్యం అతడికి తిరుమలతో ఉన్న సంబంధం కారణంగా లభించినది” అని ఆళ్వారు తెలుపుతున్నారు.

ఓయుం మూప్పు ప్పిఱప్పిఱప్పుప్పిణి
వీయుమాఱు శెయ్వాన్  తిరువేంగడత్తు
అయన్ నాళ్‌ మలరాం అడి త్తామరై
వాయుళ్ళుం మనత్తుళ్ళుం వైప్పార్గట్కే

తిరుమలలో కొలువై ఉన్న ఆ కృష్ణుడి లేత తామర పాద పద్మాలను తమ మనస్సులో వాక్కులో ఎవరైతే నిలుపుకుంటారో, వారి జన్మ, మృత్యు, జరా, వ్యాధుల బాధలను ఆ ఏడు కొండలవాడు నాశనము చేస్తాడు.

పదవ పాశురము: “పరమానందనీయమైన తిరుమలని తమ అత్యున్నత లక్ష్యంగా స్వీకరించండి” అని ఆళ్వారు తన సొంత జనులకు చెబుతున్నారు.

వైత్త నాళ్‌ వరై ఎల్లి కుఱుగిచ్చెన్ఱు
ఎయ్‌త్తిళైప్పదన్ మున్నం అడైమినో
పైత్త పామ్బణైయాన్  తిరువేంగడం
మొయ్‌త్త శోలై మొయ్‌ పూం‌ తడం తాళ్వరే

తిరుమల లోని ఏడు కొండలు, విప్పిన పడగలతో సర్వేశ్వరుడికి మెత్తని శయ్యగా ఉన్న ఆదిశేషుని పోలి ఉన్న కారణంగా తిరుమల కీర్తింపబడుతూ వస్తుంది; అటువంటి విశాలమైన దివ్య తిరుమల కొండలు, అందమైన పువ్వులతో, తోటలతో సుసంపన్నమై  ఉంది; మీ ఇంద్రియాలు మరియు హృదయం క్షీణించకముందే,  మీ జీవితంలోని అంతిమ దశ ప్రారంభమైయ్యెలోగా వెళ్లి తిరుమల  కొండకు చేరుకోండి.

పదకొండవ పాశురము:  ఈ పదిగం ఫలితంగా కైంకార్య సంపదను సంపాదించ గలమని ఆళ్వారు వివరిస్తున్నారు.

తాళ్‌ పరప్పి మణ్‌ తావియ ఈశనై
నీళ్‌ పొళిల్ కురుగూర్ చ్చడగోపన్ శొల్
కేళిల్‌ ఆయిరత్తు ఇప్పత్తుం వల్లవర్
వాళ్వర్  వాళ్వెయ్ది జ్ఞాలం పుగళవే

ఈ వెయ్యి పాసురములలో ఆళ్వార్తిరునగరికి నాయకుడైన నమ్మాళ్వార్లు, తన దివ్య పాదాలతో ముల్లోకాలను కొలిచిన సర్వేశ్వరుని వర్ణిస్తున్నారు; ఈ పదిగాన్ని పఠించగలిగే వాళ్ళు (అర్థాలను ధ్యానించడంతో పాటు), అద్భుతమైన కైంకార్య సంపదను పొందుతారు, ఈ ప్రపంచం మొత్తంలో ప్రశంసింపబడుతూ అద్భుతంగా జీవిస్తారు.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2020/05/thiruvaimozhi-3-3-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org

కోయిల్ తిరువాయ్మొళి – సరళ వ్యాఖ్యానము – 2.10 – కిళరొళి

Published by:

శ్రీః  శ్రీమతే శఠకోపాయ నమః  శ్రీమతే రామానుజాయ నమః  శ్రీమత్ వరవరమునయే నమః

కోయిల్ తిరువాయ్మొళి

<<1- 2 వీడుమిన్

kallalagar-mulavar-uthsavar-azhwar

భగవానుడికి ప్రీతి కలిగించే కైంకర్యాన్ని ఆళ్వార్ కోరుకున్నారు. భగవాన్ తెఱ్కుత్తిరుమల అని పిలువబడే తిరుమాలిరుంజోలైలో తాను వాసమున్నాడని ఆళ్వార్కి చూపించి, “నేను మీ కోసం ఇక్కడకు వేంచేశాను, నీవు ఇక్కడకు వచ్చి అన్ని రకాల కైంకర్యాలను నాకందించు” అని అంటారు. అది విన్న ఆళ్వార్ పవిత్రమైన కొండను అనుభవించి ఆనందిస్తారు.

మొదటి పాశురము: “సర్వేశ్వరుడికి ప్రియమైన తిరుమల నా లక్ష్యం ” అని ఆళ్వార్ పలుకుతున్నారు.

కిళరొళి యిళమై కెడువదన్ మున్నం
వళరొళి మాయోన్ మరువియ కోయిల్
వళరిళం పొళిల్ శూళ్ మాలిరుంజోలై
తళర్విల రాగిల్ శార్వదు శదిరే

చుట్టూ ఆహ్లాదకరమైన ఎత్తైన చెట్ల తోటలతో ఉన్న తిరుమాలిరుంజోలై అని పిలువబడే తిరుమల, అద్భుతమైన సామర్ధ్యాలున్న సర్వేశ్వరుడి దివ్య ధామము.  జ్ఞానం తేజస్సు వికసించే దశలో ఉన్న యువత ఇటువంటి తిరుమలని చేరుకోవడం శ్రేష్ఠము.

రెండవ పాశురము:  “అళగర్ల  తిరుమల దివ్యదేశాన్ని ఆస్వాదించి ఆనందించడం అత్యున్నత లక్ష్యం” అని ఆళ్వార్ తెలుపుతున్నారు.

శదిరిళ మడవార్‌ తాళ్‌చ్చియై మదియాదు
అదిర్‌ కురల్‌ శంగత్తు అళగర్‌ తం కోయిల్
మది తవళ్‌ కుడుమి మాలిరుంజోలై
పది అదు వేత్తి ఎళువదు పయనే

అందరినీ మంత్రముగ్దులను చేసే తెలివైన యవ్వన కన్యల మాటలు విని మైమరిచిపోకూడదు; బదులుగా  తిరుమాలిరుంజోలై అనే ప్రసిద్ధ దివ్య దేశాన్ని కీర్తించాలని తన లక్ష్యంగా పెట్టుకొని పైకి ఎదగాలి; పర్వత ప్రాంతములో ఉన్న ఈ తిరుమాలిరుంజోలై అళగర్ ఎంబెరుమాన్ల దివ్య దేశము, చంద్రుడిని తాకే ఎత్తైన శిఖరాలు ఉన్న ప్రాంతమది; ఈ అళగర్ ఎంబెరుమాన్ శ్రీ పాంచజన్యముతో అద్భుత సౌందర్యముతో దర్శనమిస్తున్నారు. ఈ పాశురాన్ని ఆళ్వార్ తన మనస్సుకి చెప్పుకుంటున్నారు.

మూడవ పాశురము:  “చాలా ఉదారమైన ఎంబెరుమాన్ నివాసమున్న ఈ తిరుమల దగ్గరలో ఉన్న కొండని  కోరుకోవడమే లక్ష్యం” అని ఆళ్వార్ చెప్పారు.

పయనల్ల శెయ్ దు పయనిల్లై నెంజే
పుయల్ మళై వణ్ణర్‌  పురిందుఱై కోయిల్
మయల్‌ మిగు పొళిల్‌ శూళ్ మాలిరుంజోలై
అయన్మలై అడైవదు అదు కరుమమే

ఓ హృదయమా! పనికిరాని పనులను చేయడంలో ఎటువంటి ఉపయోగం లేదు. నల్లని మేఘము లాంటి భగవానుడు, నీటి బిందువులను తనలో దాచుకొని, నేల నీరు (సముద్రం) అని తేడా చూపించకుండా సమానంగా వాటిపైన వర్షాన్ని కురిపిస్తాడు; అతి సులభుడు, ఆకర్షణీయమైన తోటలతో చుట్టుముట్టి ఉన్న తిరుమాలిరుంజోలైలో అతడు నిత్య నివాసముంటున్నాడు. ఆ తిరుమల పర్వతాన్ని చేరుకోవాలనుకోవడం,  తాపత్రేయ పడటం ఈ ఆత్మకి సహజము.

నాల్గవ పాశురము:  “దట్టమైన తోటలతో కప్పబడి ఉన్న రక్షక ధామమైన తిరుమలని పొందడం తగినది [భక్తులకి]” అని ఆళ్వార్ తెలుపుతున్నారు.

కరుమ వన్‌ పాశం కళిత్తుళ న్ఱుయ్యవే
పెరుమలై ఎడుత్తాన్ పీడుఱై కోయిల్
వరు మళై తవళుం మాలిరుంజోలై
తిరుమలై అదువే అడైవదు తిఱమే

గోవర్ధన గిరిని ఎత్తి వ్రజ వాసులను  రక్షించిన భగవాన్, విశాల తోటలలో ఎత్తైన చెట్లను తాకుతూ తేలియాడే మేఘాలు విహరిస్తున్న అందమైన తిరుమాలిరుంజోలైలో దివ్య తేజస్సుని వెదజల్లుతూ నివాసుడై ఉంటున్నాడు; అతడు అక్కడ ఉండి తొలగించలేని అతికష్టమైన మన కర్మ బంధాలను ఛేదిస్తూ, జీవాత్మ సేవలను అందుకుంటున్నారు; కావున, మనమందరమూ చేరుకోవాల్సినది ఆ తిరుమలనే.

ఐదవ పాశురము:  “సర్వ మానవాలిని రక్షించడానికి దివ్య చక్రాన్ని ధరించి నివాసమున్న ఆ భగవాన్ యొక్క తిరుమల బయట ఉన్న పర్వతాన్ని చేరుకోవడం ఉత్తమమైన మార్గము” అని ఆళ్వార్ తెలుపుతున్నారు.

తిఱముడై వలత్తాల్‌ తీవినై పెరుక్కాదు
అఱముయల్‌ ఆళి ప్పడై అవన్ కోయిల్
మఱువిల్‌ వణ్‌ శునై శూళ్ మాలిరుంజోలై
పుఱమలై శార ప్పోవదు కిఱియే

శాస్త్ర నిషేధమైన కర్మలను చేయడంలో తమ సామర్ధ్యం చూపించి మన  పాపాలను పెంచుకునే బదులు, వచ్చిన వారిని అన్ని విధాలుగా ఆదుకొని సహాయపడి, సరోవరములతో నిండి ఉన్న తిరుమాలిరుంజోలై (తిరుమలై)  వెలుపలి భాగములో ఉన్న కొండకు చేరుకోవడం ఉత్తమ మార్గంగా చెప్పవచ్చు; అళగర్ ఎంబెరుమాన్ దివ్య చక్రాయుధాన్ని ధరించి ఈ తిరుమలలో  నివాసుడై ఉండి తన ఆశ్రితులను కటాక్షిస్తున్నారు.

ఆరవ పాశురము: “తన భక్తల ప్రియుడైన భగవాన్ నివాసుడై ఉన్న ఆ తిరుమల మార్గాన్ని మననం చేసినా కూడా ఎంతో మంచి చేస్తుంది” అని ఆళ్వార్ తెలుపుతున్నారు.

కిఱియెన నినైమిన్ కీళ్‌మై శెయ్యాదే
ఉఱియమర్‌ వెణ్ణెయ్‌  ఉండవన్ కోయిల్
మఱి యొడు పిణైశేర్‌ మాలిరుంజోలై
నెఱిపడ అదువే నినైవదు నలమే

అల్పమైన విషయముల పట్ల ఆసక్తి పెంచుకునే బదులు, దీన్ని ఉత్తమ మార్గంగా పరిగణించండి, ఎందుకంటే ఉట్టిలో భద్రంగా దాచి ఉంచిన వెన్నను దొంగిలించిన కృష్ణుని ఆలయమిది. అదీ కాకుండా ఆడ జింకలు తమ దూడలతో కలిసి తిరిగే మాలిరుంజోలై ఇది; అటువంటి తిరుమలకి వెళ్ళే మార్గాన్ని ధ్యానించడం మన లక్ష్యంగా ఉంచుకోవాలి.

ఏడవ పాశురము:  “ప్రళయ సమయంలో మనల్ని కాపాడే భగవాన్ నివాసమున్న ఈ తిరుమల పట్ల అనుకూల్యతగా ఉండటం ఉచితమైన మార్గము” అని ఆళ్వార్ తెలుపుతున్నారు.

నలమెన నినైమిన్ నరగళుందాదే
నిల మునం ఇడందాన్ నీడుఱై కోయిల్
మలమఱు మదిశేర్ మాలిరుంజోలై
వలముఱై ఎయ్ ది మరువుదల్‌ వలమే

ఈ సంసారమనే నరకంలో మునిగే కన్నా,  మచ్చలేని చంద్రుడు ఉన్న ఈ తిరుమలలో శేషి శేషత్వ భావాన్ని అత్యున్నత లక్ష్యంగా మన మదిలో ఉంచుకోవాలి.  భూమిని పైకెత్తిన వరాహ పెరుమాళ్ అవతారమెత్తిన భగవాన్ ఈ తిరుమలలో నిత్య నివాసుడై ఉన్నాడు.

ఎనిమిదవ పాశురము:  “భక్త ప్రియుడైన కృష్ణుడి నివాసమైన ఈ తిరుమల పట్ల నిరంతర ప్రీతి ఉండటమే ఈ ఆత్మకు సహజంగా సరిపోతుంది, అనుకూలమైనది కూడా.” అని ఆళ్వార్ తెలుపుతున్నారు.

వలం శెయ్ దు వైగల్ వలంగళియాదే
వలం శెయ్యుం ఆయ మాయవన్ కోయిల్
వలం శెయ్యుం వానోర్ మాలిరుంజోలై
వలం శెయ్ దు నాళుం మరువుదల్‌ వళక్కే

భక్త ప్రియుడు, అద్భుతమైన ఆకర్షణ ఉన్న కృష్ణుడి ఆలయము ఈ తిరుమలలో ఉంది; అటువంటి ఈ తిరుమల పరమపద నివాసులైన నిత్యసూరులచే ప్రియాతి ప్రియంగా సేవించబడుతుంది. ఆత్మ తన శక్తినంతా ఈ తిరుమల చుట్టూ ప్రదక్షిణలు చేసి ఈ భగవానుడికి దగ్గర కావడంలో ఉపయోగించాలి కానీ లౌకిక వ్యవహారాలలో ఆ శక్తిని వ్యర్ధం కానీయకూడదు.

తొమ్మిదవ పాశురము: “‘పూతన ను వధించిన ఈ భగవాన్ నిలయాన్ని నేను ఆరాధించాలి అన్న దృఢమైన విశ్వాసము విజయానికి కారణమౌతుంది” అని ఆళ్వార్ తెలుపుతున్నారు.

వళక్కెన నినైమిన్ వల్వినై మూళ్‌గాదు
అళక్కొడి అట్టాన్ అమర్‌ పెరుంగోయిల్
మళక్కళిఱ్ఱినం శేర్ మాలిరుంజోలై
తొళ క్కరుదువదే తుణివదు శూదే

అతి ఘోరమైన పాపాలలో మునిగిపోకుండా, ఆత్మ స్వభావానికి తగినదని ఇది అని చెప్పుకోవచ్చు; మాలిరుంజోలై అనేది ఒక దివ్య భవ్య ఆలయం, ఇక్కడ పూతనను వధించిన ఎంబెరుమాన్ స్థిరంగా నివాసమున్న ప్రదేశమిది; ఏనుగు దూడలు మందలు మందలుగా అటువంటి తిరుమలకి చేరుతాయి; కారణం, ఈ సంసారాన్ని గెలిచి మనస్సులో పూర్తి విశ్వాసంతో ఈ తిరుమల ఆరాధించాలి అని భావము.

పదవ పాశురము: “వైధిక జ్ఞాన నిధి అయిన భగవాన్ నివాసుడై ఉన్న తిరుమలలోకి ప్రవేశించడమే లక్ష్యం” అని ఆళ్వార్ తెలుపుతున్నారు.

శూదెన్ఱు కళవుం శూదుం శెయ్యాదే
వేదమున్ విరిత్తాన్ విరుమ్బియ కోయిల్‌
మాదుఱు మయిల్‌ శేర్‌ మాలిరుంజోలై
పోదవిళ్‌ మలైయే పుగువదు పారుళే

ఒక వస్తువుని ఆ యజమానికి తెలిసో లేదా తెలియకుండనో దొంగిలించుట ధనం సంపాదించడానికి సరళమైన మార్గమని భావించడం తప్పు, అలాంటి తప్పుడు పనులలో పాల్గొనకూడదు; బదులుగా తిరుమాలిరుంజోలైలోకి ప్రవేశించడాన్ని లక్ష్యంగా పెట్టుకోవాలి; ద్వాపర యుగంలో గీతోపదేశం చేసిన పరమాత్ముడి నిత్య నివాసం ఈ తిరుమల; నెమళ్ళు సమూహాలుగా విహరిస్తూ, వికసించిన పుష్పాలతో  ఎత్తైన చెట్లతో విశాలమైన తోటలను కలిగి ఉన్న ప్రదేశమిది. మాదుఱు అంటే మగ నెమళ్ళు తమ ఆడ నెమళ్ళుతో కలిసి నివసిస్తున్నట్లు  వివరించబడింది.

పదకొండవ పాశురము: .  “ఈ తిరువాయ్మొళి (పదిగం) నేర్చుకొని పఠించిన వాళ్ళ భౌతిక బంధాన్ని తెంచి అళగర్ ఎంబెరుమాన్ల దివ్య పాదాలను చేరేలా చేరుస్తుంది”. అని ఆళ్వార్ తెలుపుతున్నారు.

పొరుళ్‌ ఎన్ఱు ఇవ్వులగం పడైత్తవన్ పుగళ్ ‌మేల్
మరుళిల్‌ వణ్‌ కురుగూర్‌ వణ్‌ శడగోపన్
తెరుళ్‌ కొళ్ళ చ్చొన్న ఓరాయిరత్తుళ్‌ ఇప్పత్తు
అరుళుడై యవన్ తాళ్‌ అణైవిక్కుం ముడిత్తే

అందమైన అళ్వార్తిరునగరికి నాయకుడు, అత్యంత ఉదారుడు అయిన నమ్మాళ్వార్, మహా జ్ఞానుడు, మహా కృపతో జీవాత్మకి వాస్థవ జ్ఞానాన్ని వివరించిన వారి వెయ్యి పాసురములలో ఈ దశాబ్దం విలక్షణమైనది. ఈ ప్రపంచాన్ని సృష్టించిన భగవాన్ యొక్క దయ, క్షమ, ఔదార్యము మొదలైన గుణాలను కిర్తిస్తుంది. అటువంటి ఈ దశాబ్దం మన  సంసార బంధములను నిర్మూలించి కరుణామయుడైన అళగర్ ఎంబెరుమాన్ యొక్క దివ్య పాదాలను చేరుకునేలా చేస్తుంది.

అడియేన్ శ్రీదేవి రామానుజదాసి

మూలము : http://divyaprabandham.koyil.org/index.php/2020/05/thiruvaimozhi-2-10-simple/

పొందుపరిచిన స్థానము – http://divyaprabandham.koyil.org/

ప్రమేయము (గమ్యము) – http://koyil.org
ప్రమాణము (ప్రమాణ గ్రంథములు) – http://granthams.koyil.org
ప్రమాత (ఆచార్యులు) – http://acharyas.koyil.org
శ్రీవైష్ణవ విద్య / పిల్లల కోసం – http://pillai.koyil.org