ಶ್ಲೋಕ-61 – ” ನೀವು ಶ್ರೇಷ್ಟ ಕುಲದಲ್ಲಿ ಜನನದ ಆಭಿಜಾತ್ಯವನ್ನು ಹೋಂದಿದವವರಲ್ಲವೇ ಕೃಪಣನಾಗೆ ಏಕೆ ಮಾತನಾಡುತಿದ್ದೀರಿ ?”, ಎಂದು ಎಮ್ಪೆರುಮಾನ್ ಕೇಳಲು, ” ಶ್ರೇಷ್ಟ ಕುಲದಲ್ಲಿಜನಿಸಿದರು ನನ್ನ ನಿರತಿಶಯ ಪಾಪದಿಂದ ಸಂಸಾರದಲ್ಲಿ ಮುಳುಗುತ್ತಿರುವ ನನ್ನನ್ನು ದಯವಿಟ್ಟು ಉದ್ಧರಿಸು. “, ಎಂದು ಆಳವಂದಾರ್ ಹೆಳುತಿದ್ದಾರೆ.
ಜನಿತ್ವಾSಹಮ್ ವಮ್ಶೇ ಮಹತಿ ಜಗತಿ ಖ್ಯಾತಯಶಸಾಮ್ಶುಚೀನಾಮ್ ಯುಕ್ತಾನಾಮ್ ಗುಣ ಪುರುಷ ತತ್ವಸ್ತಿ ತಿವಿದಾಮ್ | ನಿಸರ್ಗಾದೇವ ತ್ವಚ್ಚರಣ ಕಮಲೈಕಾನ್ತ ಮನಸಾಂ ಅದೋ£ದ:ಃಪಾಪಾತ್ಮಾ ಶರಣದ! ನಿಮಜ್ಜಾಮಿ ತಮಸಿ ||
ಶರಣವನ್ನು ಪ್ರಸಾದಿಸುವ ಭಗವಂತನೇ! ಲೋಕದಲ್ಲಿ ಪ್ರಖ್ಯಾತರಾದವರು, ಶುದ್ಧರೂ, ನಿಮ್ಮೋಂದಿಗೆ ಇರಲು ಇಚ್ಛಿಸುವವರೂ, ಚಿತ್-ಅಚಿತ್ಗಳನ್ನು ತತ್ತ್ವತಃ ಅರಿತವರೂ, ಸಹಜವಾಗಿಯೇ ನಿಮ್ಮ ದಿವ್ಯಪಾದಗಳಲ್ಲೆ ಮನಸ್ಕರಾದರಾದ ಮಹನೀಯರ, ಶ್ರೇಷ್ಠ ವಂಶದಲ್ಲಿ ಜನಿಸಿದರು ಪಾಪಗಳ ರೂಪವೇಯಾಗಿರುವ ನಾನು ಸಂಸಾರದಲ್ಲೆ ಕೆಳಕೆಳಗೆ ಮುಳುಗುತಿದ್ದೇನೆ.
ಶ್ಲೋಕ-62 – “ಇಂತಹ ಶ್ರೇಷ್ಠ ಕುಲದಲ್ಲಿ ಜನ್ಮವನ್ನು ವ್ಯರ್ತವನ್ನಾಗಿ ಮಾಡುವಂತಹ ನಿಮ್ಮ ಪಾಪಗಳಾವು?”, ಎಂದು ಎಮ್ಪೆರುಮಾನ್ ಕೇಳಲು, ಆಳವಂದರ್ (ಹಿಂದಿನ ಶ್ಲೋಕದಲ್ಲಿ ) ಹೇಳಿದ “ಪಾಪಾತ್ಮಾ”ವನ್ನೇ ವಿವರಿಸುತಿದ್ದಾರೆ. ಅಮರ್ಯಾದಃ ಕ್ಷುದ್ರಶ್ ಚಲಮತಿರಸೂಯಾಪ್ರಸವಭೂಃ ಕ್ರುತGನೋ ದುರ್ಮಾನೀ ಸ್ಮರಪರವಶೋ ವನ್ಚನಪರಃ | ನೃಶಮ್ಸಃ ಪಾಪಿಶ್ಟಃ ಕಥಮಹಮಿತೋ ಧುಃಖಜಲದೇಃ ಅಪಾರಾದುತ್ತೀರ್ಣಸ್ ತವ ಪರಿಚರೇಯಮ್ ಚರಣಯೋಃ || ವೇದದಮಿತಿಅಯನ್ನು ದಾಟಿದವನು, ಕ್ಷುದ್ರವಿಷಯಗಆಳನ್ನು ಇಚ್ಛಿಸುವವನು, ಚಂಚಲ ಮನಸ್ಕನು, ಅಸೂಯೆಯ ಮೂಲವಾದವನು (ಅದಕ್ಕೇ ಸಶ್ರಯನಾದವನು), ನನಗೆ ಶ್ರೇಯಸನ್ನು ಮಾಡುವವರಿಗೂ ಕೆಟ್ಟದನ್ನೇ ಮಾಡುವವನು, ತ್ಯಾಜ್ಯವಾದ ದುರಭಿಮಾನವುಳ್ಳವನು, ಕಾಮಾಸಕ್ತನು, ವಂಚಕನು, ಕ್ರೂರಕರ್ಮಗಳಲ್ಲಿ ಪಾಪಕರ್ಮಗಳಲ್ಲಿ ಮಗ್ನನಾದವನಾದ ನಾನು ಈ ಅಪಾರವಾದ ಧುಃಖಸಾಗರವನ್ನು ಹೇಗೆ ದಾಟಿ ನಿಮ್ಮ ಪಾದಗಳಲ್ಲಿ ಕೈಂಕರ್ಯವನ್ನು ಮಾಡುವೆ.
ಶ್ಲೋಕ-63 – “ತಿಳಿದೇ ಮಾಡಿದ ಆಪರಾದಗಳಾನ್ನು ಹೇಗೆ ದೂರಮಾಡಲಿ” ಎಂದು ಎಮ್ಪೆರುಮಾನ್ ಕೇಳಲು ಆಳವಂದಾರ್, “ಕಾಕಾಸುರನು (ಕಾಗೆಯರೂಪದಲ್ಲಿ ಬಂದ ಇಂದ್ರನಮಗ ಜಯಂತನು) ಹಾಗು ಶಿಶುಪಾಲನು ಮಾಡಿದ ಅಪಚಾರಗಳನ್ನು ಕ್ಷಮಿಸಿದ ನೀನು ನನ್ನ ಅಪರಾದಗಳನ್ನು ಕ್ಷಮಿಸುವುದಿಲ್ಲವೇ”. ರಘುವರ! ಯದಭೂಸ್ತ್ವಮ್ ತಾದ್ರುಶೋ ವಾಯಸಸ್ಯ ಪ್ರಣತ ಇತಿ ದಯಾಳೂರ್ ಯಚ್ಚ ಚೈದ್ಯಸ್ಯ ಕ್ರಿಶ್ಣ! | ಪ್ರತಿಭವಮ್ ಅಪರಾದ್ದುರ್ ಮುಗ್ದ! ಸಾಯುಜ್ಯದೋ$ಭೂಃ ವದ ಕಿಮಪದಮಾಗಸ್ತಸ್ಯ ತೇ$ಸ್ತಿ ಕ್ಶಮಾಯಾಃ || ರಘುಕುಲೋತಮ್ಮನಾಗಿ ಅವತರಿಸಿದ ಶ್ರೀರಾಮನೇ! ಶರಣಾಗತನೆಂದು ಮಹತ್ ಅಪಚಾರವನ್ನು ಮಾಡಿದ ಕಾಕಾಸುರನಿಗೆ ಕರುಣೆ ತೊರವಿಲ್ಲವೆ? ದೋಶಗಳನ್ನೆ ಅರಿಯದ ಕೃಷ್ಣನೆ! ಜನ್ಮಜನ್ಮಗಳಿಂದ ಅಪರಾದಗಳನ್ನೆ ಮಾಡುತಿದ್ದ ಚೇದಿಕುಲದ ಶಿಶುಪಾಲನಿಗೆ ಮೋಕ್ಷವನ್ನು ಅನುಗ್ರಹಿಸುದಿಲ್ಲವೇ? ನಿಮ್ಮ ಕ್ಷಮೆಗೆ ಪಾತ್ರವಲ್ಲದ ಪಾಪವು ಯಾವುದೆಂದು ದಯವಿಟ್ಟು ಹೇಳಿ.
ಶ್ಲೋಕ-64 – “ಸ್ವತಂತ್ರನಾದ ನಾನು ವಿಶೇಷವಾದ ಸಂದರ್ಬದಲ್ಲಿ ಕೆಲವರನ್ನು ಉದ್ಧರಿಸುವೆ, ಅದುವೆ ನನ್ನ ಸಾಮಾನ್ಯ ಪ್ರವೃತ್ತಿಯೆಂದು ಹೇಳಬಹುದೇ ”, ಎಂದು ಎಮ್ಪೆರುಮಾನ್ ಕೇಳಲು, ಸಮುದ್ರತರದಲ್ಲಿ ನೀನು (ಶರಣಾಗತರೆಲ್ಲರನ್ನು ರಕ್ಷಿಸುವೆನೆಂಬ) ವ್ರತದಲ್ಲಿ ನಿನ್ನ ಭಕ್ತಸಭೆಯಲ್ಲಿ ದೀಕ್ಷಿತನಾದಾಗೆ, ಆ ವ್ರತವು ನನ್ನನ್ನು ವರ್ಜಿಸಿತೋ ?”, ಎಂದು ಆಳವಂದಾರ್ ಹೇಳಿದರು. ನನು ಪ್ರಪನ್ನಸ್ ಸಕ್ರುದೇವ ನಾತ! ತವಾಹಸ್ಮೀತಿ ಚ ಯಾಚಮಾನಃ | ತವಾನುಕಂಪ್ಯ: ಸ್ಮರತಃ ಪ್ರತಿಜ್ಞಾಮ್ ಮದೇಕವರ್ಜಮ್ ಕಿಮಿದಮ್ ವ್ರತಮ್ ತೇ || ಹೇ ಭಗವಂತನೇ! “ನಿನಲ್ಲಿ ಒಮ್ಮೆ ಶರಣಾಗಿದ್ದೇನೆ” ಹಾಗು “ನಿನ್ನನ್ನೆ ಸೇವಿಸಬೇಕು” ಎಂದು ಹೇಳಿದ ನಾನು, ([ರಾಮ-ರಾವಣ ಯುದ್ಧಕ್ಕೆ ಪೂರ್ವ] ವಿಭೀಶಣನಿಗೇ ಮಾಡಿದ) ಪ್ರತಿಜ್ಞೇಯನ್ನು ಚಿಂತಿಸುತ್ತಿರುವ ನಾನು ನಿಮ್ಮ ದಯೆಗೆ ಪಾತ್ರನು; ನಿಮ್ಮ (ಈ) ವ್ರತವನ್ನು ನನ್ನನ್ನು ಮಾತ್ರ ವರ್ಜಿಸಿ ಮಾಡಿದೆಯೋ.
ಶ್ಲೋಕ-65 – “ ರಾಮೋ ದ್ವಿರ್ ನಾಭಿಭಾಶತೇ”( ಶ್ರೀ ರಾಮಾಯಣಮ್ ಅಯೋದ್ಯಾ ಕಾಣ್ಡಮ್ 18.30 ರಾಮನು ಎರಡು ವಿದದಲ್ಲಿ ನುಡಿಯನು) ಯಲ್ಲಿ ಹೇಳಲ್ಪಟ್ಟ ಪ್ರತಿಜ್ಞೇಯನ್ನು ಬಿಟ್ಟರು, ನನ್ನ ಗುಣ ದೋಹಗಳೆರಡನ್ನು ಉಪೇಕ್ಶಿಸಿ, ಜ್ಞಾನಗ್ರಹಣಾದರೂಪದಲ್ಲಿ ಹಾಗು (ಪೌತ್ರರಾದ ರೂಪವಾದ) ಜನ್ಮದಲ್ಲಿರುವ ಪೆರಿಯ ಮುದಲಿಯಾರೋಂದಿಗೆ (ಶ್ರೀಮಾನ್ ನಾಥಮುನಿಗಳು) ಇರುವ ಸಂಬಂದವನೇ ಕರುಣೆಯಿಂದ ಅಂಗೀಕರಿಸಬೇಕು.” ಎಂದು ಆಳವಂದಾರ್ ಹೇಳಲು, “ಈ ಆಶ್ರಯಣದಲ್ಲಿ ಯಾವ ಕೊರೆಯು ಇಲ್ಲ. ನಾನು ಅಂಗೀಕರಿಸುವೆ.” ಎಂದು ಈಶ್ವರನು ಹೇಳಿ ವರವನ್ನು ಆಳವಂದಾರಿಗೆ ನೀಡಿದನು, ಸಂತ್ರುಪ್ತರಾಗಿ ಆಲವಂದಾರ್ ಸ್ತೋತ್ರವನ್ನು [ಪ್ರಬಂದವನ್ನು] ಪೂರ್ಣಗೋಳಿಸಿದರು. ಅಕೃತ್ರಿಮ ತ್ವಚ್ಚರಣಾರವಿಂದ ಪ್ರೇಮ ಪ್ರಕರ್ಷಾವದಿಮ್ ಆತ್ಮವನ್ತಮ್ | ಪಿತಾಮಹಮ್ ನಾತಮುನಿಮ್ ವಿಲೋಕ್ಯ ಪ್ರಸೀದ ಮತ್ವೃತ್ತಮ್ ಅಚಿಂತಯಿತ್ವಾ || [ಹೇ ಭಗವಾನೇ!] ನನ್ನ ಕೃತ್ಯವನ್ನು ಉಪೇಕ್ಷಿಸಿ ನಿಮ್ಮ ದಿವ್ಯ ಪಾದ ಪಂಕಜಗಳಲ್ಲಿ ಸಹಜಭಕ್ತಿಯ ಕಾಷ್ಠೆಯಾದವರು, ಆತ್ಮಜ್ಞ್ನರಾದರು ನನ್ನ ಪಿತಾಮಹರರಾದ ನಾಥಮುನಿಗಳನ್ನು ನೋಡಿ ನನ್ನನ್ನು ಕರುಣೆಯಿಂದ ಕ್ಷಮಿಸಿ.
ಶ್ಲೋಕ-51 – “ಕರುಣೆಯ ಅವಶ್ಯಕತೆಯಿರುವವನು ಹಾಗು ಕರುಣಾವಾನಿನ ಸಂಬಂಧವನ್ನು ನಿಮ್ಮ ದಯೆಯಿಂದ ಏರ್ಪಡಿಸಲ್ಪಟ್ಟಿರಲು, ನನ್ನನ್ನು ತ್ಯಜಿಸದೆ ರಕ್ಷಿಸಬೇಕು”, ಎಂದು ಆಳವಂದಾರ್ ಹೇಳುತಿದ್ದಾರೆ.
ತದಹಮ್ ತ್ವದೃತೇ ನ ನಾತವಾನ್ ಮದೃತೇ ತ್ವಮ್ ದಯನೀಯವಾನ್ ನ ಚ | ವಿದಿನಿರ್ಮಿತಮೇತದನ್ವಯಮ್ ಭಗವನ್! ಪಾಲಯ ಮಾ ಸ್ಮ ಜೀಹಪಃ ||
ಜ್ಞಾನವಾನಾದ ಭಗವಂತನೇ! ನೀವಲ್ಲದೆ ನನಗೆ ಇನ್ನೊಬ್ಬ ನಾಥನಿಲ್ಲ, ಹಾಗೆಯೆ ನಿಮಗೂ ನಾನಲ್ಲದೆ ನಿಮ್ಮ ದಯೆಗೆ ಇನ್ನೊಬ್ಬ ಪಾತ್ರರಿಲ್ಲ. ನಿಮ್ಮ ದಯೆಯಿಂದ ನಿರ್ಮಿತವಾದ ಇದನ್ನು ತ್ಯಜಿಸದೆ ರಕ್ಷಿಸು.
ಶ್ಲೋಕ-52 –”ನನ್ನ ರಕ್ಷಣೆ ಆತ್ಮವಿನ ಸ್ವರೂಪಾನುಗುಣವಾಗಿರುವುದು; ನಿಮ್ಮ ಸ್ವರೂಪವನ್ನು ನಿಶ್ಚಯಿಸಿ, ನಿಮನ್ನು ನನ್ನಲ್ಲಿ ಸಮರ್ಪಿಸಿ. ” ಎಂದು ಎಮ್ಪೆರುಮಾನ್ ಹೆಳುತಿದ್ದಾನೆ. “ಸಿಱಪ್ಪಿಲ್ ವೀಡು (ತಿರುವಾಯ್ಮೊೞಿ 2.9.5)ಯಲ್ಲಿ ಹೇಳಿದಂತೆ “ಹಾವ ನಿರ್ಬಂದನೆಯಾಗಲಿ ಸಂಕೋಚವಿಲ್ಲದೆ ಆತ್ಮವೆಂದು ಅರಿಯಲ್ಪಡುವ ಈ ವಸ್ತುವನ್ನು (ನನನ್ನು) ನಿಮ್ಮ ಪಾದರಕ್ಷ್ರ್ಗಳಾಗಿ ಸಮರ್ಪಿತವಾಗಿದೆ.”
ಶರೀರಾದಿಗಳಲ್ಲಿ (ನಾನು ಯಾರೆ ಆಗಿರಲಿ) ಯಾವುದೆ (ಸ್ವರೂಪ ಗುಣಗಳಿಂದ) ಲಕ್ಷಿತನಾಗಲಿ (ಇದರಲ್ಲಿ ಯಾವುದೆ ನಿರ್ಬಂದವಿಲ್ಲದೆ) ಆತ್ಮವೆಂದು ಅರಿಯಲ್ಪಡುವ ಈ ವಸ್ತುವು ಇದ್ರ್ ಕ್ಷಣದಲ್ಲಿ ನಿಮ್ಮ ಪಾದಪಂಕಾಜಗಳಲ್ಲಿ ನನ್ನಿಂದ ಸಮರ್ಪಿಸಲ್ಪಟ್ಟಿದೆ.
ಶ್ಲೋಕ-53 – “ಆಳವಂದಾರನ್ನು ಭ್ರಮಿತರಾಗಿ ಹೇಗೆ ಬಿಡಲಿ” ಎಂದು ಕರುಣೆಯಿಂದ ಎಮ್ಪೆರುಮಾನ್ ಚಿಂತಿಸಿ, “ನೀವು ಯಾರು? ಮತ್ತು ನಿಮ್ಮನ್ನು ಯಾರಿಗೆ ಸಮರ್ಪಿಸಿದಿರಿ?” ಎಂದು ಕೇಳಿದನು.”ಎನದಾವಿ ಆವಿಯುಮ್ ನೀ … ಎನದಾವಿ ಯಾರ್? ಯಾನಾರ್?“ (ತಿರುವಾಯ್ಮೊೞಿ 2.3.4)ಯಲ್ಲಿ ಹೇಳಿದಂತೆ ತಮ್ಮ ಸ್ವರೂಪವನ್ನು ನಿಶ್ಚಯಿಸಿ, “ನಿಮ್ಮ ಸೊತ್ತನ್ನು ನೀವೆ ಸ್ವೀಕರಿಸಿದ್ದೀರ, ಆತ್ಮಸಮರ್ಪಣವು ಆತ್ಮಾಪಹಾರದಂತಿದೆ( ಆತ್ಮವಿನ ಚೌರ್ಯ)” ಆಳವಂದಾರ್ ತಮ್ಮ ಆತ್ಮಸಮರ್ಪಣವನ್ನು (ಕಂಡು) ದುಃಖಿಸುತಿದ್ದಾರೆ.
ಸರ್ವಸ್ವಾಮಿ ಹಾಗು ಲಕ್ಷ್ಮೀನಾಥನಾದ ಎಮ್ಪೆರುಮಾನೇ! ನನ್ನ ಸ್ವತ್ತು ಎಂದು ಇರುವವು ಹಾಗು ನಾನು ಇಬ್ಬರು ಎಂದೂ ನಿನಗೆ ಸೇರಿದವರು (ನಿನ್ನ ಸ್ವತ್ತು) ಇದನ್ನು ತಿಳಿದು ನಾನು ಏನನ್ನು ಸಮರ್ಪಿಸಲಿ ?
ಶ್ಲೋಕ-54 – “ನಾನು ಆತ್ಮಚೌರ್ಯದಂದ ಕಾಣುವ ಆತ್ಮಸಮರ್ಪಣೆಯಲ್ಲಿ ನಿಲ್ಲದಿದಡನ್ನು ಕಂಡು, ನಿಮ್ಮ ನಿರ್ಹೆತುಕ ಕರುಣೆಯಿಂದ ಶೇಷತ್ವನ್ನು ತೋರಿದಹಾಗೆ, ಪರ ಭಕ್ತಿಯ ಮೂರು ಸ್ತರಗಳನ್ನು, ನಿಮ್ಮ ಕೈಂಕರ್ಯದಲ್ಲಿ ಉಪಯೋಗವಾಗುವಂತೆ ಅನುಗ್ರಹಿಸಿ”, ಎಂದು ಆಳವಂದಾರ್ ಎಮ್ಪೆರುಮಾನಿಗೆ ಹೇಲುತಿದ್ದಾರೆ. ಅವಬೋದಿತವಾನಿಮಾಮ್ ಯತಾ ಮಯಿ ನಿತ್ಯಾಮ್ ಭವದೀಯತಾಮ್ ಸ್ವಯಮ್ | ಕೃಪಯೈತದನನ್ಯಭೋಗ್ಯತಾಮ್ ಭಗವನ್! ಭಕ್ತಿಮಪಿ ಪ್ರಯಚ್ಚ ಮೇ || ಹೇ ಭಗವಾನ್! ನಿಮ್ಮ ನಿರ್ಹೇತುಕ ಕೃಪೆಯಿಂದ ಅನುಗ್ರಹಿಸಿದ ರೀತಿಯಲ್ಲೆ, ಬೇರಲ್ಲೂ ಕಾಣದ ಮಾಧುರ್ಯವನ್ನು ಹೋಂದಿರುವ (ನಿಮ್ಮ) ಭಕ್ತಿಯನ್ನೂ ಅನುಗ್ರ್ಹಿಸಿ.
ಶ್ಲೋಕ- 56 – ಆಳವಂದಾರ್ “ವೈಷ್ಣವರ ನಿವಾಸದಲ್ಲಿ ವಾಸದ ಕೀರ್ತಿಬೇಕೆ? ಅವರು ನನ್ನನ್ನು ಕಂಡಲ್ಲಿ ನನ್ನನ್ನು ಪಕ್ಕಕ್ಕೆ ತಳ್ಳುವುದಲ್ಲದೆ, ತಮ್ಮ ವಿಶೇಷವಾಗಿ ಕಟಾಕ್ಷಿಸಿ ಹಾಗು, ಇವನು ನಮ್ಮವನೆಂದು ಹೇಳುವಂತೆ ನನ್ನನ್ನು ಮಾಡಿ”, ಎಂದು ಹೇಳುತಿದ್ದಾರೆ. ಸಕೃತ್ ತ್ವದಾಕಾರವಿಲೋಕನಾಶಯಾ ತೃಣೀಕೃತಾನುತ್ತಮಭುಕ್ತಿಮುಕ್ತಿಭಿಃ | ಮಹಾತ್ಮಭಿರ್ ಮಾಮವಲೋಕ್ಯತಾಮ್ ನಯ ಕ್ಷಣೇಪಿ ತೇ ಯದ್ವಿರಹೋ$ತಿದುಸ್ಸಹಃ || ಒಮ್ಮೆ ನಿಮ್ಮ ದಿವ್ಯರೂಪವನ್ನು ನೋಡುವುದಕ್ಕೆ ಹೋಲಿಸಿದರೆ, ಮಹಾ ಭೋಗಗಳನ್ನು ಹಾಗು ಮೋಕ್ಷವನ್ನು ನೋಡುವವರು ಹಾಗು ಯಾರ ವಿರಹವು ನಿಮ್ಮಿಂದ ಅತಿ ದುಸ್ಸಹವಾಗಿರುವ ಉತ್ಕೃಷ್ಠ ವೈಷ್ಣವರ ಕಟಾಕ್ಷಕ್ಕ ಪಾತ್ರನಾಗಿ ಮಾಡಿ.
ಶ್ಲೋಕ-57 – ಹಿಂದಿನ ಶ್ಲೋಕದಲ್ಲಿ ಶೇಷತ್ವದ ಚರಮಪರ್ವವಾಗಿರುವ ತದೀಯ ಶೇಷತ್ವದ ಬಗ್ಗೆ ಚಿಂತಿಸಿದರು. ಈ ಶ್ಲೋಕದಲ್ಲಿ ಶೇಷತ್ವಕ್ಕೆ ಹೊರಗಿರುವ ಎಲ್ಲಾವುದಕ್ಕೆ ತಮಗಿರುವ ಅರುಚಿಯನ್ನು ತೋರಿ, “ದಯವಿಟ್ಟು ಅವನ್ನು ದೂರಮಾಡಿ” ಎಂದು ಎಮ್ಪೆರುಮಾನನ್ನು ಪ್ರಾರ್ತಿಸುತಿದ್ದಾರೆ. ನ ದೇಹಮ್ ನ ಪ್ರಾಣಾನ್ನ ಚ ಸುಖಮಶೇಷಭಿಲಷಿತಮ್ ನ ಚಾತ್ಮಾನಮ್ ನಾನ್ಯತ್ ಕಿಮಪಿ ತವ ಸೇಷತ್ವವಿಭವಾತ್ | ಬಹಿರ್ಭೂತಮ್ ನಾಥಮ್! ಕ್ಷಣಮಪಿ ಸಹೇ ಯಾತು ಶತದಾ ವಿನಾಶಮ್ ತತ್ಸತ್ಯಮ್ ಮಧುಮಥನ! ವಿಜ್ಞಾಪನಮಿದಮ್
ಹೇ ಭಗವಾನ್! ಪ್ರಪನ್ನನಾಗಿರುವ ನಿಧಿಗೆ ಹೊರಗಿರುವುದು ಯಾವುದೆಯಾಗಲಿ, ಶರೀರವಾಗಲಿ, ಮುಖ್ಯ ಪ್ರಾಣವಾಗಲಿ, ಎಲ್ಲರಿಂದ ಅರ್ಥಿಸಲ್ಪಡುವ ಭೊಗಗಳಾಗಲಿ, ನನ್ನ ಆತ್ಮವೇ ಆಗಲಿ ಶೇಷತ್ವ ರಹಿತವಾಗಿದಲ್ಲಿ, ನಾನು ಒಂದು ಕ್ಷಣವು ನಾನು (ಅವನ್ನು) ಸಹಿಸಲಾರೆ, ಅವನ್ನು ದೂರ ಮಾಡು. ಇದು ಸತ್ಯವು, ಇದು ನನ್ನ ವಿಜ್ಞಾಪನೆ.
ಶ್ಲೋಕಮ್-58 – “ಈ ಸಂಸಾರದಲ್ಲಿ ನನಗೆ ಕೋಪಗೋಲಿಸುವ ಭಗವ್ದಪಚಾರಾದಿಗಳಂತಹ ಹಲವಾರು ಅಶುಭಗಳು ಕೈಂಕರ್ಯ ವಿರೋದಿಗಳಾಗಿ ನಿವರ್ತ್ಯಗಳಾಗಿವೆ, ಅವುಗಳಲ್ಲಿ ಅರುಚಿಯನ್ನು ಹೋಂದಿ, ಯೋಗಿಗಳಿಗೂ ಕಠಿನವಾಗಿರುವ ಅವುಗಳ ನಿವರ್ತನೆಯನ್ನು ಪ್ರಾರ್ತಿಸುತಿದ್ದೀರೆ!” ಎಂದು ಎಮ್ಪೆರುಮಾನ್ ಚಿಂತಿಸಲು, “ಅನವಾದಿಕ ಅಶುಭಗಳನ್ನು ದೂರಮಾಡುವ ನಿಮ್ಮ ಅನವದಿಕ ಕಲ್ಯಾಣಗುಣಗಳನ್ನು ಚಿಂತಿಸಿ ನಾನು ಇಚ್ಚಿಸುತಿದ್ದೇನೆ.” ಎಂದು ಆಳವಾಂದಾರ್ ಹೇಳುತಿದ್ದಾರೆ. ದುರನ್ತಸ್ಯಾನಾತೇರಪರಿಹರಣೀಯಸ್ಯ ಮಹತೋ ನಿಹೀನಾಚಾರೋ$ಹಮ್ ನೃಪಶುರಶುಭಸ್ಯಾಪದಮಪಿ | ದಯಾಸಿಂಧೋ! ಬಂಧೋ ! ನಿರವದಿಕವಾತ್ಸಲ್ಯಜಲದೇ ತವ ಸ್ಮಾರಮ್ ಸ್ಮಾರಮ್ ಗುಣಗಣಮಿದೀಚ್ಚಾಮಿಗತಭೀಃ ಹೇ ಕರುಣಾ ಸಾಗರನೇ! ಸನಗೆ ಎಲ್ಲಾ ರೀತಿಯಲ್ಲು ಬಂಧುವಾದವನೆ! ವಾತ್ಸಲ್ಯ ಸಾಗರನೇ! ದುರ್ನಿವಾರ್ಯವಾದ ಆದಿ-ಅಂತಗಳಿಲ್ಲದ ಮಹಾಪಾಪಗಳಿಗೆ ನಿವಾಸನಾಗಿರುವ ನಾನು ನಿಮ್ಮ ಕಲ್ಯಾಣಗುಣಗಳ ಅನುಸ್ಮರಣೆಯಿಂದ ಯಾವುದೆ ಭೀತಿಯಿಲ್ಲದೆ ಹೀಗೆ ಇಚ್ಛಿಸುತಿದ್ದೇನೆ.
ಶ್ಲೋಕ-59 – “(ಹಿಂದಿನ ಶ್ಲೋಕದಲ್ಲಿ) “ಇಚ್ಚಾಮಿ” ಎಂದು ಹೇಳಿದಂತೆ ನಿಮಗೆ ನಿಜವಾಗಲೂ ಆಸೆ ಇದಯೇ ?” ಎಂದು ಎಮ್ಪೆರುಮಾನ್ ಕೇಳಿದಾಗ ಆಳವಂದಾರ್, “ಮಂದ-ಮತಿಯಾದ ನಾನು ನಿಮ್ಮ ಸಾನ್ನಿಧ್ಯದಲ್ಲಿ ನಿಮ್ಮ ಮಹಿಮೆಗೆ ತಕ್ಕ ಆಸೆಯು ನನ್ನಲ್ಲಿದೆ ಎಂದು ಹೇಳಲರೆ. ಆಸೆಯನ್ನು ತೋರುವ ಮಾತನ್ನೆ ಸ್ವೀಕರಿಸಿ, ನನ್ನ ಮನಸನ್ನು ತಿದ್ದಿ, ಆ ಆಸೆಯನು ನಿಜವಾಗಲು ನನ್ನಲ್ಲಿ ಉಂಟುಮಾಡಿ.” ಅನಿಚ್ಛನ್ನಪ್ಯೇವಮ್ ಯದಿ ಪುನರಿದೀಚ್ಛನ್ನಿವ ರಜಸ್ತಮಶ್ಚನ್ನಶ್ಚದ್ಮಸ್ತುತಿವಚನಭನ್ಗೀಮರಚ್ಅಯಮ್ | ತಥಾ$ಪೀತ್ಥಮ್ರೂಪಮ್ ವಚನವಲಮ್ಬ್ಯಾ$ಪಿ ಕೃಪಯಾ ತ್ವಮೇವೈವಮ್ಭೂತಮ್ ದರಣಿದರ! ಮೇ ಶಿಕ್ಷಯಮನ: ||
ಭೂಮಿಯನ್ನು ಉದ್ಧರಿಸಿದ ಧರನಿದರನೇ! ನಿಜವಾಗಲೂ ಇಚ್ಛಿಸುವವನಂತೆ ಆಸೆಯಿಲ್ಲದಿದ್ದರೂ, ರಜೋಗುಣ ತಮೋಗುಣಗಳಿಂದ ಛಾದಿತನಾಗಿ ಈ ರೀತಿಯಲ್ಲಿ ಕಪಟ ಸ್ತುತಿಗಳಿಂದ ಸ್ತುತಿಸಿದರು, ಇದನ್ನೆ ವ್ಯಾಜವಾಗಿ ಹಿಡಿದು ನೀವೇ ನನ್ನ ಈ ರೀತಿಯ ಮನವನ್ನು ತಿದ್ದಬೇಕು.
ಸ್ಲೋಕ-60 – ” ನಿಮಗೆ ಆಸೆಯೂ ಇಲ್ಲಾ, ಅದನ್ನು ನಿಮ್ಮಲ್ಲಿ ಜನಿಸಿ ಕರುಣೆಯಿಂದ ರಕ್ಷಿಸು ಎಂದು ಇಚ್ಛಿಸುತಿದ್ದೀರಿ- ಇದನ್ನು ನಾನು ಏಕೆ ಮಾಡಬೇಕು ?” ಎಂದು ಎಮ್ಪೆರುಮಾನ್ ಕೇಳಿದಲ್ಲಿ, ಆಳವಂದಾರ್ (ತಮ್ಮ ಹಾಗು ಎಮ್ಪೆರುಮಾನಿನ ನಡುವೆ ಇರುವ) ಅವ್ಯಾಜ ಬಂಧವನ್ನು ವಿವರಿಸುತಿದ್ದಾರೆ.
ಈ ಜಗತ್ತಿಗೆ ನೀವು ತಂದೆ, ನೀನೇ ತಾಯಿ, ನೀನೇ ಪ್ರಿಯ ಪುತ್ರನು, ನೀನೇ ಹಿತೈಶಿಯಾದ ಸುಹೃದ್, ನೀನೇ (ರಹಸ್ಯ/ ಗುಹ್ಯ ವಿಷಯಗಳನ್ನು ಹೇಳತಕ್ಕ) ಆಲಮ್ಬಿಸಲ್ತಕ್ಕ ಮಿತ್ರನು, ನೀನೆ ಆಚಾರ್ಯನು, ನೀನೆ ಉಪಾಯವು, ನೀನೇ ಉಪೇಯವು, ಹಾಗು ನಾನು ನಿನ್ನವನು ನಿನ್ನ ದಾಸನು, ನಿನ್ನ ಶೇಷಭೂತನು, ನಿನ್ನನ್ನೇ ಪರಮಪ್ರಾಪ್ಯಪ್ರಾಪಕವಾಗಿ ಇರುವವನು; ಹೀಗಿದಲ್ಲಿ ನಿನ್ನಿನ್ನಂದಲೆ ರಕ್ಷಿತವ್ಯನಲ್ಲವೆ?
ನೂರ ಒಂದನೆಯ ಪಾಸುರಂ: ಎಂಪೆರುಮಾನಾರರ ಮಾಧುರ್ಯವು ಅವರ ಪವಿತ್ರತೆಗಿಂತ ಶ್ರೇಷ್ಠವಾದುದು ಎಂದು ಅಮುದನಾರರು ಹೇಳುತ್ತಾರೆ.
ಮಯಕ್ಕುಂ ಇರು ವಿನೈ ವಲ್ಲಿಯಿಲ್ ಪೂಣ್ಡು ಮದಿ ಮಯಂಗಿತ್
ತುಯಕ್ಕುಂ ಪಿಱವಿಯಿಲ್ ತೋನ್ಱಿಯ ಎನ್ನೈ ತುಯರ್ ಅಗಱ್ಱಿ
ಉಯಕ್ಕೊಣ್ಡು ನಲ್ಗುಂ ಇರಾಮಾನುಶ ಎನ್ಱದು ಉನ್ನೈ ಉನ್ನಿ
ನಯಕ್ಕುಂ ಅವರ್ಕ್ಕು ಇದು ಇೞುಕ್ಕು ಎನ್ಬರ್ ನಲ್ಲವರ್ ಎನ್ಱು ನೈನ್ದೇ
ಅಜ್ಞಾನವನ್ನು ಉಂಟುಮಾಡುವ ಪಾಪ ಮತ್ತು ಪುಣ್ಯ ಎಂಬ ಎರಡು ವಿಧದ ಕರ್ಮಗಳ ಸರಪಳಿಯಿಂದ ಬಂಧಿತವಾಗಿರುವ, ಮನಸ್ಸನ್ನು ಗೊಂದಲಗೊಳಿಸುವ, ಜ್ಞಾನವನ್ನು ವಿಸ್ಮಯಗೊಳಿಸುವ ಜನ್ಮದಲ್ಲಿ ನಾನು ಹುಟ್ಟಿದ್ದೇನೆ. ಆ ಕರ್ಮಗಳ ಫಲವಾದ ಆಳವಾದ ದುಃಖಗಳನ್ನು ತೊಡೆದುಹಾಕುವಂತೆ ಮಾಡಿ, ರಾಮಾನುಜರು ನನ್ನನ್ನು ಉನ್ನತೀಕರಿಸಲು ನನ್ನನ್ನು ಸ್ವೀಕರಿಸಿದರು. “ಓ ಎಂಪೆರುಮಾನಾರ್ ನನ್ನ ಕಡೆಗೆ ವಾತ್ಸಲ್ಯವನ್ನು ತೋರಿದವರು!” ಎಂಬ ನನ್ನ ಮಾತುಗಳನ್ನು ಮಹಾನ್ ವ್ಯಕ್ತಿಗಳು ಹೇಳುತ್ತಾರೆ. [ಎಂಪೆರುಮಾನಾರ್ ನನ್ನನ್ನು ಮೇಲೆ ಎತ್ತಿದ್ದರಿಂದ] ನಿರಂತರವಾಗಿ ನಿಮ್ಮ ಬಗ್ಗೆ ಯೋಚಿಸುವ ಮತ್ತು ಕರಗುವವರಿಗೆ ಮತ್ತು ಎಲ್ಲಾ ಸಮಯದಲ್ಲೂ ನಿಮ್ಮ ಬಗ್ಗೆ ಪ್ರೀತಿಯನ್ನು ಹೊಂದಿರುವವರಿಗೆ ಅವಮಾನವಾಗುತ್ತದೆ. ಮಾಧುರ್ಯವನ್ನು ಅನುಭವಿಸಿದವರಿಗೆ ಅವರ ಮನಸ್ಸು ಪರಿಶುದ್ಧತೆಯ ಬಗ್ಗೆ ಯೋಚಿಸುವುದಿಲ್ಲ ಎಂಬುದು ಇಲ್ಲಿನ ತಾತ್ಪರ್ಯವಾಗಿದೆ [ಇದುವರೆಗೂ , ಅಮುದನಾರ್ ಅವರು ವಿನಾಕಾರಣವಾಗಿ (ಅವರ ಶುದ್ಧತೆಯ ಪರಿಣಾಮ) ಎಂಪೆರುಮಾನಾರ್ ಅವರ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಆದರೆ ಎಂಪೆರುಮಾನಾರ್ ಅವರ ದೈವಿಕ ಪಾದಗಳಿಗೆ ದಾಸ್ಯವನ್ನು ಮಾಡುವ ಆನಂದಕ್ಕೆ ಯಾವುದೇ ಸಾಟಿಯಿಲ್ಲ. ಆದ್ದರಿಂದ ಅಮುದನಾರರು ಈ ಮಾತುಗಳನ್ನು ಹೇಳುತ್ತಾರೆ].
ನೂರ ಎರಡನೇ ಪಾಸುರಂ. ಈ ವಿಸ್ತಾರವಾದ ಪ್ರಪಂಚದಲ್ಲಿ ನಿಮ್ಮ ಉದಾತ್ತತೆಯ ಗುಣವು ತನ್ನ ಕಡೆಗೆ ಹೆಚ್ಚಲು ಕಾರಣವೇನು ಎಂದು ಅಮುಧನಾರ್ ಎಂಪೆರುಮಾನಾರ್ ಅವರನ್ನೇ ಕೇಳುತ್ತಾರೆ.
ನೈಯುಂ ಮನಂ ಉನ್ ಗುಣಂಗಳೈ ಉನ್ನಿ ಎನ್ ನಾ ಇರುಂದು ಎಮ್
ಐಯನ್ ಇರಾಮಾನುಶನ್ ಎನ್ಱು ಅೞೈಕ್ಕುಂ ಅರು ವಿನೈಯೇನ್
ಕೈಯುಂ ತೊೞುಂ ಕಣ್ ಕರುದಿಡುಂ ಕಣಕ್ ಕಡಲ್ ಪುಡೈ ಸೂೞ್
ವೈಯಂ ಇದನಿಲ್ ಉನ್ ವಣ್ಮೈ ಎನ್ ಪಾಲ್ ಎನ್ ವಳರ್ನ್ದದುವೇ
ನಿನ್ನ ಶುಭ ಗುಣಗಳ ಕುರಿತು ಯೋಚಿಸುತ್ತಾ ನನ್ನ ಮನಸ್ಸು ಸಂಪೂರ್ಣವಾಗಿ ದುರ್ಬಲವಾಗುತ್ತದೆ. ನನ್ನ ನಾಲಿಗೆ, ನನ್ನ ಪಕ್ಕದಲ್ಲಿ ದೃಢವಾಗಿ ಉಳಿದಿದೆ, ನಿಮ್ಮ ದೈವಿಕ ನಾಮಗಳನ್ನು ಮತ್ತು ನಿಮ್ಮ ನೈಸರ್ಗಿಕ ಸಂಬಂಧವನ್ನು [ನನ್ನೊಂದಿಗೆ] ಪಠಿಸುತ್ತದೆ. ಅನಾದಿಕಾಲದಿಂದಲೂ ಲೌಕಿಕ ಸಾಧನೆಯಲ್ಲಿ ತೊಡಗಿದ್ದ ನನ್ನ ಪಾಪಿಷ್ಠ ಕೈಗಳೂ ನಿನಗೆ ನಮಸ್ಕಾರ ಮಾಡುತ್ತವೆ. ನನ್ನ ಕಣ್ಣುಗಳು ಯಾವಾಗಲೂ ನಿನ್ನನ್ನು ನೋಡಲು ಬಯಸುತ್ತವೆ. ಸಾಗರಗಳಿಂದ ಸುತ್ತುವರಿದಿರುವ ಈ ಭೂಮಿಯ ಮೇಲೆ ಯಾವ ಕಾರಣಕ್ಕಾಗಿ ನಿನ್ನ ಮಹಾನುಭಾವತೆ ನನ್ನೆಡೆಗೆ ಬೆಳೆಯಿತು?
ನೂರ ಮೂರನೇ ಪಾಸುರಂ. ಎಂಪೆರುಮಾನಾರು ತನ್ನ ಕರ್ಮಗಳನ್ನು ಕರುಣೆಯಿಂದ ತೊಡೆದುಹಾಕಲು ಮತ್ತು ತನಗೆ ವಿಸ್ತಾರವಾದ ಜ್ಞಾನವನ್ನು ನೀಡಿದ್ದರಿಂದ ತನ್ನ ಇಂದ್ರಿಯಗಳು ಅವರ ಕಡೆಗೆ ತೊಡಗಿಕೊಂಡವು ಎಂದು ಅಮುಧನಾರರು ಹೇಳುತ್ತಾರೆ.
ವಳರ್ ನ್ ದ ವೆಂ ಕೋಬಮ್ ಮಡಂಗಲ್ ಒನ್ಱಾಯ್ ಅನ್ಱು ವಾಳ್ ಅವುಣನ್
ಎಂಪೆರುಮಾನ್ ತನ್ನ ಮಗನಾದ ಪ್ರಹ್ಲಾದಾಳ್ವಾನ್ಗೆ ದುಃಖವನ್ನುಂಟುಮಾಡಿದಾಗ ಕತ್ತಿಯನ್ನು ಹಿಡಿದು ಎಂಪೆರುಮಾನ್ನ ಬಳಿಗೆ ಬಂದ ಹಿರಣ್ಯ ಕಶ್ಯಪ ಎಂಬ ರಾಕ್ಷಸ , ಬೆಳೆಯುತ್ತಿರುವ ಮತ್ತು ವಿಶಿಷ್ಟವಾದ ಕ್ರೂರ ಕೋಪದಿಂದ, ದುರಭಿಮಾನದಿಂದ ಉಬ್ಬಿಕೊಂಡಿದ್ದ, ಚೆನ್ನಾಗಿ ಬೆಳೆದ, ಚಿನ್ನದ ಎದೆಯನ್ನು ಹರಿದು ಹಾಕಿದನು. ಎಂಪೆರುಮಾನಾರವರು ಆ ಎಂಪೆರುಮಾನ್ ಸೃಷ್ಟಿಸಿದ ಬೆಳೆಗಳ ದಿವ್ಯ ಕೀರ್ತಿಯಿಂದ ಬೆಳೆದ ದಿವ್ಯ ಮನಸ್ಸಿನವರು. ಅಂತಹ ಎಂಪೆರುಮಾನಾರ್ ನನ್ನ ದೇಹದಿಂದ ನನ್ನನ್ನು ಬಂಧಿಸಿದ ಕರ್ಮಗಳ ಫಲವಾದ ದುಃಖವನ್ನು ಕರುಣೆಯಿಂದ ನನಗೆ ಕರುಣೆಯಿಂದ ಅಂಗೈಯಲ್ಲಿ ನೆಲ್ಲಿಕಾಯಿಯಂತೆ ಸ್ಪಷ್ಟವಾದ ಶ್ರೇಷ್ಠ ಜ್ಞಾನವನ್ನು ನೀಡಿದರು [ಅಂಗೈಯಲ್ಲಿ ನೆಲ್ಲಿಕಾಯಿ ಎಂಬುದು ಒಂದು ತಮಿಳು ಗಾದೆ, ಅದು ಯಾವುದೋ ಬಹಳ ಸ್ಪಷ್ಟವಾಗಿದೆ ಎಂದು ಸೂಚಿಸುತ್ತದೆ. ಮತ್ತು ತಪ್ಪಾಗಲಾರದು].
ನೂರ ನಾಲ್ಕನೇ ಪಾಸುರಂ. ಸ್ವತಃ ಎಂಪೆರುಮಾನ್ರವರೇ ಕೇಳಿದ ಕಾಲ್ಪನಿಕ ಪ್ರಶ್ನೆಗೆ ಉತ್ತರಿಸುತ್ತಾ “ಎಂಪೆರುಮಾನ್ನನ್ನು ಕಂಡರೆ ಏನು ಮಾಡುತ್ತೀರಿ?” ಎಂಪೆರುಮಾನ್ ತನಗೆ ಸಂಬಂಧಿಸಿದ ವಿಷಯಗಳನ್ನು ವ್ಯಕ್ತಪಡಿಸಿದರೂ, ಎಂಪೆರುಮಾನ್ ಅವರ ದೈವಿಕ ರೂಪದಲ್ಲಿ ಪ್ರಕಾಶಿಸುವ ಮಂಗಳಕರ ಗುಣಗಳನ್ನು ಹೊರತುಪಡಿಸಿ ಬೇರೇನನ್ನೂ ಕೇಳುವುದಿಲ್ಲ ಎಂದು ಅಮುದನಾರ್ ಹೇಳುತ್ತಾರೆ.
ಮೇಘದಂತಹ ಮಹಾನುಭಾವನಾದ ಮತ್ತು ಆ ಮಹಾನತೆಯನ್ನು ನಮಗೆ ತೋರಿದ ರಾಮಾನುಜ! ಅಂಗೈಯ ಮೇಲಿರುವ ನೆಲ್ಲಿಕಾಯಿಯಂತೆ ನೀನು ನಮಗೆ ಕಣ್ಣನ್(ಕೃಷ್ಣ) ಎಂಪೆರುಮಾನ್ ಅನ್ನು ಬಹಿರಂಗಪಡಿಸಿದರೂ, ನಿನ್ನ ದಿವ್ಯರೂಪದ ಮೇಲೆ ಅಮೋಘವಾಗಿರುವ ಮಂಗಳಕರ ಗುಣಗಳನ್ನು ಬಿಟ್ಟು ಬೇರೇನನ್ನೂ ನಾನು ಪ್ರಾರ್ಥಿಸುವುದಿಲ್ಲ. ನಾನು ಅತ್ಯಂತ ಪ್ರಕಾಶಮಾನವಾಗಿರುವ ಪರಮಪದವನ್ನು ಪಡೆಯಬಹುದು ಅಥವಾ ನಾನು ಸಂಸಾರದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿನ್ನ ಕೃಪೆಯಿಂದ ಎರಡರಲ್ಲಿ ಯಾವುದನ್ನಾದರೂ ದಯೆಯಿಂದ ನನಗೆ ದಯಪಾಲಿಸಿದರೆ, ನಾನು ಅದರಲ್ಲಿ ನನ್ನನ್ನು ಉಳಿಸಿಕೊಳ್ಳುತ್ತೇನೆ.
ನೂರ ಐದನೇ ಪಾಸುರಂ. ಸಂಸಾರವನ್ನು ತ್ಯಜಿಸಬೇಕು ಮತ್ತು ಪರಮಪದವನ್ನು ಪಡೆಯಬೇಕು ಎಂದು ಎಲ್ಲರೂ ಹೇಳುತ್ತಿರುವಾಗ ಮತ್ತು ಆ ಪರಮಪದವನ್ನು ಪಡೆಯಲು ಬಯಸುತ್ತಿರುವಾಗ, ನೀವು ಎರಡನ್ನೂ ಸಮಾನವೆಂದು ಪರಿಗಣಿಸುತ್ತೀರಿ. ನೀವು ಬಯಸಿದ ಸ್ಥಳ ಯಾವುದು? ಅವರು ಈ ಪಾಸುರಂ ಮೂಲಕ ಪ್ರತಿಕ್ರಿಯಿಸುತ್ತಾರೆ.
ಎಂಪೆರುಮಾನ್ ಸುಂದರ ಅಲೆಗಳನ್ನು ಹೊಂದಿರುವ ತಿರುಪ್ಪಾರ್ಕಡಲ್ ಮೇಲೆ ಒರಗಿಕೊಂಡು ಮಲಗಿರುವಂತೆ ನಟಿಸುತ್ತಾ ಧ್ಯಾನಿಸುತ್ತಿದ್ದಾರೆ. ಎಂಪೆರುಮಾನ್ ಮಹಾನ್ ಜ್ಞಾನವನ್ನು ಹೊಂದಿದ್ದಾರೆ, ಪ್ರಖ್ಯಾತ ವೈಧಿಕರಿಂದ (ವೇದಗಳನ್ನು ಅನುಸರಿಸುವವರು) ಪೂಜಿಸಲ್ಪಡುತ್ತಾರೆ ಮತ್ತು ಅವರ ದೈವಿಕ ಪಾದಗಳು ಎಂಪೆರುಮಾನಾರರ ಮಂಗಳಕರ ಗುಣಗಳೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮತ್ತು ಅವರ ದೈವಿಕ ಪಾದಗಳಲ್ಲಿ ಬಿದ್ದವರ ಹೃದಯದಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಆ ಎಂಪೆರುಮಾನಾರ್ ಅವರನ್ನು ನಿರಂತರವಾಗಿ ಆನಂದಿಸುವ ಮತ್ತು ಕೋಲಾಹಲದ ಸಾಗರದಂತೆ ನರ್ತಿಸುವ ಮಹಾನ್ ವ್ಯಕ್ತಿಗಳು ಅಂತಹ ಜನರ ಸೇವಕನಾದ ನಾನು ವಾಸಿಸಲು ಬಯಸುವ ಸ್ಥಳವಾಗಿದೆ.
ನೂರ ಆರನೆಯ ಪಾಸುರಂ. ಎಂಪೆರುಮಾನಾರ್, ಅಮುದನಾರ್ ಅವರ ಬಗ್ಗೆ ಹೊಂದಿರುವ ಅಪಾರ ಪ್ರೀತಿಯನ್ನು ನೋಡುತ್ತಾ, ಕರುಣೆಯಿಂದ ಅಮುದನಾರರ ಮನಸ್ಸನ್ನು ಬಯಸುತ್ತಾರೆ. ಇದನ್ನು ನೋಡಿದ ಅಮುದನಾರರು ಸಂತೋಷದಿಂದ ಮತ್ತು ಕರುಣೆಯಿಂದ ಈ ಪಾಸುರಂ ಪಠಿಸುತ್ತಾರೆ.
ಎಂಪೆರುಮಾನ್ನನ್ನು ಸತ್ಯವಾಗಿ ತಿಳಿದಿರುವ ಮಹಾನ್ ವ್ಯಕ್ತಿಗಳು, ಅವರ ಸ್ವರೂಪ (ಮೂಲ ಸ್ವಭಾವ), ರೂಪ (ಭೌತಿಕ ರೂಪಗಳು), ಗುಣಗಳು (ಶುಭಕರ ಗುಣಗಳು) ಮತ್ತು ವಿಭೂತಿ (ಸಂಪತ್ತು) ಗಳಲ್ಲಿ ಅದ್ಭುತವಾದ ಚಟುವಟಿಕೆಗಳನ್ನು ಹೊಂದಿರುವ ಸರ್ವೇಶ್ವರನಿಗೆ ವಾಸಸ್ಥಾನಗಳು ಎಂದು ಹೇಳುತ್ತಾರೆ. ಇದನ್ನು ತಿರುಮಲೈ ಎಂದೂ ಕರೆಯಲಾಗುತ್ತದೆ ಮತ್ತು ತಿರುಮಲಿರುಂಜೋಲೈನ ಪ್ರಸಿದ್ಧ ದೈವಿಕ ಪರ್ವತ. ಆ ಎಂಪೆರುಮಾನ್ ಕರುಣಾಪೂರ್ವಕವಾಗಿ ಆ ಎಲ್ಲಾ ದಿವ್ಯ ನಿವಾಸಗಳೊಂದಿಗೆ [ಮೇಲೆ ಉಲ್ಲೇಖಿಸಿರುವ] ಪ್ರವೇಶಿಸಿದ ಸ್ಥಳವು ಎಂಪೆರುಮಾನಾರ್ ಅವರ ದಿವ್ಯ ಮನಸ್ಸು. ಎಂಪೆರುಮಾನಾರ್ ಕರುಣಾಮಯಿಯಾಗಿ ಪ್ರವೇಶಿಸಿದ ಸ್ಥಳವನ್ನು ಶ್ರೇಷ್ಠ ಸ್ಥಳವೆಂದು ಪರಿಗಣಿಸಿದ್ದು , ನನ್ನ ಮನಸ್ಸು.
ನೂರ ಏಳನೇ ಪಾಸುರಂ. ತನ್ನ ಕಡೆಗೆ ವಾತ್ಸಲ್ಯವನ್ನು ವ್ಯಕ್ತಪಡಿಸಿದ ಎಂಪೆರುಮಾನಾರ್ ಅವರ ದಿವ್ಯ ಮುಖವನ್ನು ನೋಡುತ್ತಾ, ಅಮುದನಾರ್ ಅವರು ಅವರಿಗೆ ಸಲ್ಲಿಸಲು ಬಯಸುತ್ತಿರುವ ಏನಾದರೂ ಇದೆಯೆ ಎಂದು ಕೇಳಿದರು ಮತ್ತು ಅವರ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.
ಸರಳತೆಯ ಶ್ರೇಷ್ಠ ಗುಣವನ್ನು ಹೊಂದಿರುವ ಮತ್ತು ಕರುಣಾಮಯವಾಗಿ ಅತ್ಯಂತ ಸಂತೋಷದಿಂದ ಬಂದಿರುವ ಓ ರಾಮಾನುಜಾ! ನಾನು ನಿಮಗೆ ಮಾಡಲು ಬಯಸುವ ಒಂದು ಸಲ್ಲಿಕೆ ಇದೆ. ಮೂಳೆಗಳಿಗೆ ರೋಗಗಳು ಹರಡುವ ದೇಹಗಳಲ್ಲಿ ನಾನು ಪುನರಾವರ್ತಿತ ಜನನ-ಮರಣಗಳನ್ನು ಮಾಡುವುದನ್ನು ಮುಂದುವರೆಸಿದರೂ ಮತ್ತು ನಾನು ಅಸಂಖ್ಯಾತ ದುಃಖಗಳನ್ನು ಅನುಭವಿಸಿದರೂ, ನಿನಗಾಗಿಯೇ, ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಸ್ಥಳಗಳಲ್ಲಿ ಮತ್ತು ನಿನಗಾಗಿಯೇ ಇರುವವರ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಲು ನೀವು ನನ್ನನ್ನು ಕರುಣೆಯಿಂದ ಸಕ್ರಿಯಗೊಳಿಸಬೇಕು. ಅವರ ದೈವಿಕ ಪಾದಗಳಿಗೆ ಸೇವಕರಾಗಿರಬೇಕು. ಇದೊಂದೇ ನಿಮ್ಮಲ್ಲಿ ನನ್ನ ಕೋರಿಕೆ.
ನೂರ ಎಂಟನೆಯ ಪಾಸುರಂ. ಈ ಪ್ರಬಂಧದ ಆರಂಭದಲ್ಲಿ, ಅಮುದನಾರ್ ಅವರು “ಇರಾಮಾನುಸನ್ ಚರಣಾರವಿಂಧಂ ನಾಮ್ ಮನ್ನಿ ವಾೞ” (ನಾವು ಎಂಪೆರುಮಾನ್ ಅವರ ದೈವಿಕ ಪಾದಗಳಲ್ಲಿ ಯೋಗ್ಯವಾಗಿ ಬದುಕಬೇಕು) ಪ್ರಯೋಜನಕ್ಕಾಗಿ ಪ್ರಾರ್ಥಿಸಿದರು, ಅವರ ಸಂಪೂರ್ಣ ಭಕ್ತಿಯ ಬಯಕೆಯನ್ನು ಪೂರೈಸಲು ಪೆರಿಯ ಪಿರಾಟ್ಟಿಯಾರ್ ಅವರ ಶಿಫಾರಸು ಪಾತ್ರವನ್ನು ಕೋರಿದರು. ಈ ಕೊನೆಯ ಪಾಸುರಂನಲ್ಲಿಯೂ ನಮಗೆ ಕೈಂಕರ್ಯ ಸಂಪತ್ತನ್ನು ದಯಪಾಲಿಸಬಲ್ಲ ಪೆರಿಯ ಪಿರಾಟ್ಟಿಯಾರನ್ನು ಪಡೆಯಬೇಕೆಂದು ಕೇಳಿಕೊಳ್ಳುತ್ತಾನೆ.
ಅಂ ಕಯಲ್ ಪಾಯ್ ವಯಲ್ ತೆನ್ನರಂಗನ್ ಅಣಿ ಆಗಮ್ ಮನ್ನುಂ
ಪಂಗಯ ಮಾಮಲರ್ಪ್ ಪಾವಯೈಪ್ ಪೋಱ್ಱುದುಂ ಪತ್ತಿ ಎಲ್ಲಾಮ್
ತಂಗಿಯದು ಎನ್ನತ್ ತೞೈತ್ತು ನೆಂಜೇ ನಂ ತಲೈ ಮಿಶೈಯೇ
ಪೊಂಗಿಯ ಕೀರ್ತಿ ಇರಾಮಾನುಶನ್ ಅಡಿಪ್ ಪೂ ಮನ್ನವೇ
ಓ ಮನಸೇ ! ರಾಮಾನುಜರು ವ್ಯಾಪಕವಾದ ಖ್ಯಾತಿಯನ್ನು ಹೊಂದಿದ್ದಾರೆ. ತಾಜಾ ಹೂವುಗಳಂತಿರುವ ಅಂತಹ ರಾಮಾನುಜರ ದಿವ್ಯ ಪಾದಗಳು ನಮ್ಮ ತಲೆಯ ಮೇಲೆ ಸರಿಯಾಗಿ ಹೊಂದಿಕೊಳ್ಳಬೇಕು, ಇದರಿಂದ ಭಕ್ತಿಯ ಅಸ್ತಿತ್ವವು ಯಾವುದೇ ಕೊರತೆಯಿಲ್ಲದೆ ನಮ್ಮೊಳಗೆ ಬರುತ್ತದೆ ಎಂದು ನಾವು ಭಾವಿಸುತ್ತೇವೆ. ಅದು ಆಗಬೇಕಾದರೆ,ಅವನ ಗುರುತಾಗಿ, ತಾವರೆ ಹೂವಿನ ಮೇಲೆ ಹುಟ್ಟಿ, ಪೆರಿಯ ಪೆರುಮಾಳ್ನ ಸುಂದರ ದಿವ್ಯವಾದ ಎದೆಯ ಮೇಲೆ ಶಾಶ್ವತವಾಗಿ ನೆಲೆಸಿರುವ, ಸ್ವಾಭಾವಿಕ ಸ್ತ್ರೀತ್ವವನ್ನು ಹೊಂದಿರುವ, ಮೀನುಗಳು ತಮಾಷೆಯಾಗಿ ಜಿಗಿಯುವ ಗದ್ದೆಗಳನ್ನು ಹೊಂದಿರುವ ತಿರುವರಂಗಂನಲ್ಲಿ ದೇವಾಲಯವನ್ನು ಹೊಂದಿರುವ ಶ್ರೀರಂಗ ನಾಚ್ಚಿಯಾರ್ ಅವರನ್ನು ಪಡೆಯೋಣ. .
ತೊಂಬತ್ತೊಂದನೆಯ ಪಾಸುರಂ. ಸಂಸಾರಿಗಳು ಯಾವುದೇ ವಿಷಯಗಳಲ್ಲಿ ಒಳಗೊಳ್ಳದಿದ್ದರೂ ಸಹ, ಅಮುದನಾರರು ಅವರನ್ನು ಉನ್ನತಿಗೆ ತರಲು ರಾಮಾನುಜರು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರನ್ನು ಶ್ಲಾಘಿಸುತ್ತಾರೆ.
ಅರುಳ್ ಸುರಂದು ಎಲ್ಲಾ ಉಯಿರ್ಗಟ್ಕುಂ ನಾದನಂ ಅರಂಗನ್ ಎನ್ನುಂ
ಪೊರುಳ್ ಸುರಂದಾನ್ ಎನ್ ಇರಾಮಾನುಶನ್ ಮಿಕ್ಕ ಪುಣ್ಣಿಯನೇ
ಸಂಪೂರ್ಣ ಅಜ್ಞಾನದಿಂದ ಶೈವ ಆಗಮವನ್ನು (ಶಿವನಿಂದ ನೀಡಿದ ಗ್ರಂಥ) ಆಧರಿಸಿ ತಮ್ಮ ವಾದವನ್ನು ಮಂಡಿಸುವವರು ಪಾಸುಪಥರು. ಅವರ ಕೀಳು ಅರ್ಥಗಳಿಂದ ಜಗತ್ತು ಕತ್ತಲೆಯಲ್ಲಿ ಮುಳುಗಿತು. ಲೌಕಿಕ ಜನರ ಅಂಧಕಾರದ ಅಜ್ಞಾನವನ್ನು ಹೋಗಲಾಡಿಸಲು, ರಾಮಾನುಜರು ತಮ್ಮ ವಿಶಿಷ್ಟವಾದ ಕರುಣೆಯನ್ನು ಹೆಚ್ಚಿಸಿದರು ಮತ್ತು ಶ್ರೀರಂಗನಾಥರು ಎಲ್ಲಾ ಆತ್ಮಗಳಿಗೆ ಅಧಿಪತಿ ಎಂದು ಕರುಣೆಯಿಂದ ಬಹಿರಂಗಪಡಿಸಿದರು. ಅವರು ಮಹಾನ್, ಧರ್ಮನಿಷ್ಠ ವ್ಯಕ್ತಿ
ತೊಂಬತ್ತೆರಡನೇ ಪಾಸುರಂ. ಎಂಪೆರುಮಾನಾರ್ ಅವರನ್ನು ಯಾವುದೇ ಕಾರಣವಿಲ್ಲದೆ ಸ್ವೀಕರಿಸಿದ್ದಾರೆ ಮತ್ತು ಅವರು ಕರುಣೆಯಿಂದ ತನ್ನ ಆಂತರಿಕ ಮತ್ತು ಬಾಹ್ಯ ಇಂದ್ರಿಯಗಳೆರಡಕ್ಕೂ ವಿಷಯವಾಗಿ ನಿಂತಿದ್ದಾರೆ ಎಂದು ಅರಿತುಕೊಂಡು, ಅವರು ಸಂತೋಷವನ್ನು ಅನುಭವಿಸುತ್ತಾರೆ ಮತ್ತು ಇದಕ್ಕೆ ಕಾರಣವೇನು ಎಂದು ಎಂಪೆರುಮಾನಾರ್ ಅವರನ್ನು ಕೇಳುತ್ತಾರೆ.
ಈ ಪ್ರಯೋಜನವನ್ನು ಪಡೆಯಲು ನಾನು ಯಾವುದೇ ಪುಣ್ಯ ಕಾರ್ಯವನ್ನು ಮಾಡಿಲ್ಲ. ನಿನ್ನ ದಿವ್ಯ ಪಾದಗಳನ್ನು ಪಡೆಯಲು ನಾನು ಯಾವುದೇ ತಪಸ್ಸನ್ನು [ಶಾಸ್ತ್ರಗಳನ್ನು ಕೇಳಲು] ಮಾಡಲು ಬಯಸಲಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದ ಮತ್ತು ಶಾಸ್ತ್ರಗಳಿಗೆ ಸಮಾನವಾದ ಕವಿತೆಗಳನ್ನು ಹಾಡುವ ಪರಿಣಿತರೂ ಗ್ರಹಿಸಲು ಕಷ್ಟಕರವಾದ ಖ್ಯಾತಿಯನ್ನು ಹೊಂದಿರುವ ರಾಮಾನುಜ! ನನ್ನ ಬಾಹ್ಯ ಕಣ್ಣು ಮತ್ತು ಆಂತರಿಕ ಕಣ್ಣಿಗೆ (ಮನಸ್ಸಿಗೆ) ನೀವು ವಸ್ತುವಾಗಿರುವ ಕಾರಣವನ್ನು ನೀವು ಮಾತ್ರ ಬಹಿರಂಗಪಡಿಸಬೇಕು.
ತೊಂಬತ್ತಮೂರನೇ ಪಾಸುರಂ. ಎಂಪೆರುಮಾನಾರ್ ತನ್ನ ಸಲ್ಲಿಕೆಗೆ ಪ್ರತಿಕ್ರಿಯಿಸದ ಕಾರಣ, ರಾಮಾನುಜನು ಯಾರೂ ಕೇಳದೆ ಕುದ್ರುಷ್ಟಿ ತತ್ತ್ವಗಳನ್ನು ನಾಶಪಡಿಸಿದಂತೆಯೇ, ಅಮುಧನಾರರು ಕೇಳದೆಯೇ ಅವರು ತಮ್ಮ ಬಲವಾದ ಕರ್ಮಗಳನ್ನು (ಹಿಂದಿನ ಕರ್ಮಗಳನ್ನು) ಕಡಿದುಹಾಕಿದ್ದಾರೆ ಎಂದು ಸ್ವತಃ ಸ್ಪಷ್ಟೀಕರಣವನ್ನು ಪಡೆಯುತ್ತಾರೆ. ಮತ್ತು ಎಂಪೆರುಮಾನಾರ್ ಅವರು ಏನೂ ಕಾರಣವಿಲ್ಲದೆ ಈ ಮೇಲಿನ ಕೆಲಸಗಳನ್ನು ಮಾಡುವವರು ಎಂದು ಹೇಳುತ್ತಾರೆ.
ಶರಣಾದವರಲ್ಲಿ ನಾಯಕನಾದ ಎಂಪೆರುಮಾನಾರ್ ನನ್ನ ಬಳಿಗೆ ಬಂದು ನಾಶವಾಗದ ನನ್ನ ದೊಡ್ಡ ಪಾಪಗಳನ್ನು ಕಿತ್ತುಹಾಕಿದನು. ವೇಧಗಳ ಕೀಳು [ತಪ್ಪಾದ] ಅರ್ಥಗಳನ್ನು ನಿಜವಾದ ಅರ್ಥಗಳೆಂದು ಬಹಿರಂಗಪಡಿಸಿದಾಗ ಕುದ್ರುಷ್ಟಿಗಳ ದಿಗ್ಭ್ರಮೆಗೊಳಿಸುವ ಹೇಳಿಕೆಗಳನ್ನು ನಿರ್ಣಾಮ ಮಾಡಿದ ಮಹಾನ್ ದಾನವನು ಅಲ್ಲವೇ!
ತೊಂಬತ್ತನಾಲ್ಕನೆಯ ಪಾಸುರಂ. ಎಂಪೆರುಮಾನಾರ್ ಕರುಣೆಯಿಂದ ಶರಣಾಗತಿಯಲ್ಲಿ ದೃಢವಾದ ಲಂಗರು ಹಾಕುವಿಕೆಯಿಂದ ಪ್ರಾರಂಭಿಸಿ ಮತ್ತು ಶ್ರೀವೈಕುಂಠದೊದಿಗೆ ಕೊನೆಗೊಳ್ಳುವ ಮೂಲಕ ತನ್ನನ್ನು ಸಾಧಿಸುವ ಎಲ್ಲರಿಗೂ ಕರುಣೆಯಿಂದ ಪ್ರಯೋಜನಗಳನ್ನು ನೀಡಿದರೂ, ಅಮುಧಾನಾರ್ ಎಂಪೆರುಮಾನಾರ್ ಅವರ ಮಂಗಳಕರ ಗುಣಗಳನ್ನು ಹೊರತುಪಡಿಸಿ ಬೇರೇನನ್ನೂ ಅಪೇಕ್ಷಿಸುವುದಿಲ್ಲ ಎಂದು ಹೇಳುತ್ತಾರೆ.
ತನ್ನನ್ನು ಸಾಧಿಸುವವರಿಗೆ ಪ್ರಯೋಜನವನ್ನು ನೀಡದಿರುವ ಕೊರತೆಯನ್ನು ಹೊಂದಿರದ ಎಂಪೆರುಮಾನರ್, ತನ್ನನ್ನು ಸಾಧಿಸುವವರಿಗೆ ಶರಣಾಗುವ ಕ್ರಿಯೆಯಲ್ಲಿ ದೃಢವಾದ ನಂಬಿಕೆಯನ್ನು ನೀಡುತ್ತಾನೆ. ಅವನು ಭಕ್ತಿಯ ಸಂಪತ್ತನ್ನು ನೀಡುತ್ತಾನೆ, ಅದು ಪ್ರಾಪ್ತ್ಯಂ (ಪ್ರಯೋಜನ) ಅದರ ಅಂತಿಮ ಫಲಿತಾಂಶಕ್ಕೆ ಸೂಕ್ತವಾಗಿದೆ. ಅವರು ಸಂಸಾರದಲ್ಲಿ ಜನ್ಮಗಳನ್ನು ಸೃಷ್ಟಿಸುವ ಕೆಟ್ಟ ಕಾರ್ಯಗಳನ್ನು ಹೊಡೆದುರುಳಿಸುತ್ತಾರೆ, ಇದು ಎಂಪೆರುಮಾನ್ ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅವರು ಪರಂಧಾಮಂ ಎಂದೂ ಕರೆಯಲ್ಪಡುವ ಶ್ರೀವೈಕುಂಠವನ್ನು ಕೊಡುತ್ತಾರೆ. ಇವನ್ನೆಲ್ಲ ಕೊಟ್ಟರೂ ನನ್ನ ಮನಸ್ಸು ಅವನ ಮಂಗಳಕರ ಗುಣಗಳನ್ನು ಬಿಟ್ಟು ಬೇರೇನನ್ನೂ ಆನಂದಿಸುವುದಿಲ್ಲ.
ತೊಂಬತ್ತೈದನೆಯ ಪಾಸುರಂ. ಎಂಪೆರುಮಾನಾರ್ ಅವರ ಜ್ಞಾನ, ಶಕ್ತಿ ಇತ್ಯಾದಿಗಳ ಬಗ್ಗೆ ಯೋಚಿಸಿ ಅವರು ಎಂಪೆರುಮಾನಾರ್ ಈ ಪ್ರಪಂಚದವರಲ್ಲ ಮತ್ತು ಸಂಸಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರದ ನಿತ್ಯಸೂರಿಗಳಲ್ಲಿ ಒಬ್ಬರು ಈ ಜಗತ್ತಿನಲ್ಲಿ ಅವತರಿಸಿದ್ದಾರೆ ಎಂದು ಅವರು ಕರುಣೆಯಿಂದ ಹೇಳುತ್ತಾರೆ.
ಎಂಪೆರುಮಾನ್ ಆತ್ಮಗಳನ್ನು ಪ್ರವೇಶಿಸುತ್ತಾನೆ ಮತ್ತು ಅವುಗಳನ್ನು ಮೇಲಕ್ಕೆತ್ತಲು ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ಆದರೆ ಎಂಪೆರುಮಾನಾರನ್ನು ನೋಡಿದರೆ ಎಂಪೆರುಮಾನರಿಗೂ ಸಹ ಆತ್ಮಾಭಿಮಾನದ ಬಗ್ಗೆ ಅಷ್ಟೊಂದು ಪ್ರೀತಿ ಇಲ್ಲ ಎಂದು ಹೇಳಬಹುದು. ಏಕೆಂದರೆ ಎಂಪೆರುಮಾನಾರ್ , ನಮ್ಮ ನಾಥನ್ (ಪ್ರಭು) ಅಲೌಕಿಕ ಪ್ರದೇಶದಲ್ಲಿ ಶ್ರೀವೈಕುಂಠಂನ ಶ್ರೇಷ್ಠ ನಿವಾಸದಿಂದ, ಎಲ್ಲಾ ಆತ್ಮಗಳನ್ನು ಉದ್ಧರಿಸಲು ಮತ್ತು ಮೋಕ್ಷವನ್ನು ನೀಡುವುದಕ್ಕಾಗಿ ಬಂದವರು. ಇಲ್ಲಿರುವ ಯಾವ ದೋಷವೂ ತಟ್ಟದೆ ಭೂಮಿಯ ಮೇಲೆ ಅವತರಿಸಿದನು. ಎಲ್ಲರನ್ನು ಉದ್ಧಾರ ಮಾಡುವ ನಾಲ್ಕು ವೇದಗಳನ್ನು ಯಾವುದೇ ಕೊರತೆಯಿಲ್ಲದೆ ಎಲ್ಲರೂ ಉನ್ನತಿ ಹೊಂದುವಂತೆ ಪೋಷಿಸಿದರು.
ತೊಂಬತ್ತಾರನೆಯ ಪಾಸುರಂ. ಎಂಪೆರುಮಾನಾರ್ ಕರುಣೆಯಿಂದ ವೇದಾಂತಗಳಿಗೆ (ಉಪನಿಷತ್ಗಳಿಗೆ) ಅನುಗುಣವಾಗಿ ಎರಡು ಮಾರ್ಗಗಳನ್ನು ತೋರಿಸಿದ್ದಾರೆ, ಅವುಗಳೆಂದರೆ ಭಕ್ತಿ ಮತ್ತು ಪ್ರಪತ್ತಿ (ಶರಣಾಗತಿಯ ಕ್ರಿಯೆ). ಈ ಎರಡರಲ್ಲಿ, ನಿಮ್ಮ ಮಾರ್ಗವು ಸುಲಭವಾಗಿ ಸಾಗಿಸುವ ಪ್ರಪತ್ತಿಯೇ? ಎಂಪೆರುಮಾನಾರ್ ಅವರ ವಾತ್ಸಲ್ಯದಲ್ಲಿ ಆಶ್ರಯ ಪಡೆದಿದ್ದೇನೆ ಎಂದು ಅಮುದನಾರ್ ಹೇಳುತ್ತಾರೆ.
ವಳರುಂ ಪಿಣಿ ಕೊಣ್ಡ ವಲ್ವಿನೈಯಾಲ್ ಮಿಕ್ಕ ನಲ್ವಿನೈಯಿಲ್
ಕಿಳರುಂ ತುಣಿವು ಕಿಡೈತ್ತಱಿಯಾದು ಮುಡೈತ್ತಲೈ ಊನ್
ತಳರುಂ ಅಳವುಂ ದರಿತ್ತುಂ ವಿೞುಂದುಂ ತನಿ ತಿರಿವೇಱ್ಕು
ಉಳರ್ ಎಮ್ ಇರೈಯವರ್ ಇರಾಮಾನುಶನ್ ತನ್ನೈ ಉಱ್ಱವರೇ
ಅನಿಯಮಿತ ದುಃಖಗಳನ್ನು ನೀಡುವ ಎದ್ದುಕಾಣುವ ಕರ್ಮಗಳಿಂದ (ಹಿಂದಿನ ಕರ್ಮಗಳು) ಶರಣಾಗತಿಯ ಅತ್ಯಂತ ಶ್ರೇಷ್ಠ ಮಾರ್ಗದಲ್ಲಿ ಒಬ್ಬರು ಸುಲಭವಾಗಿ ಸಂಪೂರ್ಣ ನಂಬಿಕೆಯನ್ನು ಪಡೆಯುವುದಿಲ್ಲ. ದುರ್ಗಂಧದ ಭಂಡಾರವಾಗಿರುವ ಮತ್ತು ಮಾಂಸ ಇತ್ಯಾದಿಗಳಿಂದ ಕೂಡಿದ ಈ ದೇಹವು ಸನ್ನಿಹಿತವಾದ ಛಿದ್ರವಾಗುವ ಮರಣದ ಸಮಯದಲ್ಲಿ , ಉತ್ತಮ ಸೂಚನೆಗಳ ಮೂಲಕ, ಪ್ರಾಪಂಚಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಯಾವುದೇ ಆಧಾರವಿಲ್ಲದೆ ತಿರುಗಾಡುತ್ತಿದ್ದ ನನಗೆ , ಯಾರಿಗೆ ನಮ್ಮ ಸ್ವಾಮಿ ಎಂಪೆರುಮಾನಾರ್ ಆಶ್ರಯವಾಗಿದ್ದಾರೋ ಅವರೇ ನನಗೆ ಬೆಂಬಲ.
ತೊಂಬತ್ತೇಳನೆಯ ಪಾಸುರಂ. ಎಂಪೆರುಮಾನಾರ್ಗೆ ಮಾತ್ರವಲ್ಲದೆ ಅವರ ಅನುಯಾಯಿಗಳಿಗೂ ಅಪೇಕ್ಷಿಸಲು ಕಾರಣವೇನು? ಅದೂ ಕೂಡ ಎಂಪೆರುಮಾನಾರ್ ಅವರ ಕರುಣೆಯಿಂದ ಬಂದಿದೆ ಎಂದು ಅಮುದನಾರ್ ಹೇಳುತ್ತಾರೆ.
ಎಂಪೆರುಮಾನಾರ್ ಅವರು ತಮ್ಮ ದಿವ್ಯ ಮನಸ್ಸಿನಲ್ಲಿ ಯೋಚಿಸಿದರು, ಬಂದು ತನ್ನನ್ನು ಸಾಧಿಸುವ ಜನರಿದ್ದರೂ, ತನ್ನನ್ನು ಪಡೆದವರನ್ನು ಸಾಧಿಸುವ ಮತ್ತು ಹೊಗಳುವವರು ಯಾರೂ ಇಲ್ಲ. ಹೀಗಾಗಿ, ಅವನು ನನ್ನನ್ನು ಅವನೊಂದಿಗೆ ಮಾತ್ರ ತೊಡಗಿಸಿಕೊಳ್ಳುವಂತೆ ಮಾಡಿದನು ಮತ್ತು ಇತರ ಎಲ್ಲ ಲೌಕಿಕ ಅನ್ವೇಷಣೆಗಳನ್ನು ಮರೆತುಬಿಡುತ್ತಾನೆ; ಆತನು ತನ್ನ ಸೇವಕರಾದವರ ಮಧುರವಾದ, ಪೂರಕವಾದ ದೈವಿಕ ಪಾದಗಳ ಹೊರತಾಗಿ ನನಗೆ ಬೇರೇನೂ ತಿಳಿಯದಂತೆ ಮಾಡಿದನು. ಅವರ ಕರುಣೆಯಿಂದಾಗಿ, ಅವರು ಇಂದು ನನ್ನನ್ನು ತಮ್ಮ ಅಡಿಯಲ್ಲಿ ಸ್ವೀಕರಿಸಿದರು.
ತೊಂಬತ್ತೆಂಟನೆಯ ಪಾಸುರಂ. ಎಂಪೆರುಮಾನ್ ತನ್ನ ಕರ್ಮಗಳ ಆಧಾರದ ಮೇಲೆ ತನ್ನನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸಬಹುದೆಂದು ಅಮುಧನಾರನು ತನ್ನ ದಿವ್ಯ ಮನಸ್ಸಿನಲ್ಲಿ ಭಾವಿಸಿದನು ಮತ್ತು ಅದರ ಬಗ್ಗೆ ಎಂಪೆರುಮಾನಾರನ್ನು ಕೇಳಿದನು. ತನಗೆ ಶರಣಾದವರಿಗೆ ಎಂಪೆರುಮಾನಾರ್ ಹಾಗೆ ಮಾಡುವುದಿಲ್ಲ ಎಂದು ರಾಮಾನುಜರು ಭರವಸೆ ನೀಡುತ್ತಾರೆ ಮತ್ತು ಕಾತುರ ಬಿಡಲು ಕೇಳಿಕೊಳ್ಳುತ್ತಾರೆ.
ಇಡುಮೇ ಇನಿಯ ಶುವರ್ಕ್ಕತ್ತಿಲ್ ಇನ್ನಂ ನರಗಲಿತ್ತುಚ್
ಚುಡುಮೇ ಅವಱ್ಱೈತ್ ತೊಡರ್ ತರು ತೊಲ್ಲೈ ಶುೞಲ್ ಪಿಱಪ್ಪಿಲ್
ನಡುಮೇ ಇನಿ ನ್ಂ ಇರಾಮಾನುಶನ್ ನಮ್ಮೈ ನಮ್ ವಶತ್ತೇ
ವಿಡುಮೇ ಶರಣಂ ಎನ್ಱಾಲ್ ಮನಮೇ ನೈಯಲ್ ಮೇವುದರ್ಕೇ
ನಮ್ಮನ್ನು ಉದ್ಧಾರ ಮಾಡಲು ಬಂದಿರುವ ಎಂಪೆರುಮಾನ್ಗೆ “ನೀನು ನಮ್ಮ ಆಶ್ರಯ” ಎಂದು ಹೇಳಿದಾಗ, ಅವನು ನಮ್ಮನ್ನು ಲೌಕಿಕ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಮಧುರವಾಗಿ ತೋರುವ ಸ್ವರ್ಗದಲ್ಲಿ ಬಿಡುವನೇ? ಅವನ ಪಾದಗಳನ್ನು ಪಡೆದ ನಂತರವೂ ನರಕದಲ್ಲಿ ಹಿಂಸಿಸಲ್ಪಡಲು ನಮಗೆ ಅವಕಾಶ ನೀಡಬಹುದೇ? ಸ್ವರ್ಗ ಮತ್ತು ನರಕವನ್ನು ಅನುಸರಿಸುವ ಜನನ ಮತ್ತು ಮರಣಗಳ ಪುನರಾವರ್ತಿತ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಅವನು ನಮ್ಮನ್ನು ಬಿಡುತ್ತಾನೆಯೇ? ಅಥವಾ, ನಮ್ಮ ಇಚ್ಛೆಯಂತೆ ಬದುಕಲು ಆತನು ಅನುಮತಿಸುವನೇ? ಓ ಮನಸೇ! ನಾವು ಪಡೆಯುವ ಅಂತಿಮ ಪ್ರಯೋಜನದ ಬಗ್ಗೆ ದುಃಖಿಸಬೇಡಿ.
ತೊಂಬತ್ತೊಂಬತ್ತನೇ ಪಾಸುರಂ. ನಾವು ಬಾಹ್ಯರು (ವೇದಗಳನ್ನು ನಂಬದವರು) ಮತ್ತು ಕುದ್ರುಷ್ಟಿಗಳು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ಹೇರಳವಾಗಿ ಕಂಡುಬರುವ ಸ್ಥಳದಲ್ಲಿ ವಾಸಿಸುವುದರಿಂದ, ನಾವು ದಿಗ್ಭ್ರಮೆಗೊಳ್ಳುವ ಸಾಧ್ಯತೆ ಹೆಚ್ಚು ಇಲ್ಲವೇ? ರಾಮಾನುಜ ಬಂದ ನಂತರ ಈ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು ಎಂದು ಅಮುಧನಾರ್ ಹೇಳುತ್ತಾರೆ.
ತರ್ಕಚ್ ಚಮಣರುಂ ಸಾಕ್ಕಿಯಪ್ ಪೇಯ್ಗಳುಂ ತಾೞ್ ಸಡೈಯೋನ್
ಸೊಲ್ ಕಱ್ಱ ಸೋಂಬರುಂ ಸೂನಿಯ ವಾದರುಂ ನಾನ್ಮರೈಯುಂ
ನಿಱ್ಕಕ್ ಕುಱುಂಬು ಸೆಯ್ ನೀಶರುಂ ಮಾಣ್ದನರ್ ನೀಳ್ ನಿಲತ್ತೇ
ಪೊಱ್ಕಱ್ಪಗಂ ಎಮ್ ಇರಾಮಾನುಶ ಮುನಿ ಪೋಂದ ಪಿನ್ನೇ
ವಾಗ್ವಾದಗಳ ಮೂಲಕ ತಮ್ಮ ತತ್ತ್ವಜ್ಞಾನವನ್ನು ಜಾಣ್ಮೆಯಿಂದ ನಡೆಸುವ ಶಮಣರು, ತಮ್ಮ ತತ್ತ್ವವನ್ನು ನೆಪಮಾತ್ರದಂತೆ ಹಿಡಿದಿಟ್ಟುಕೊಳ್ಳುವ ಬೌದ್ಧರು, ಜಟಾಧಾರಿ ರುದ್ರರು ಹೇಳಿದ ಶೈವಾಗಮವನ್ನು ಕಲಿತು ತಪಸ್ಸು ಮಾಡುವ ಕೀಳು ತಾಮಸ (ಅಜ್ಞಾನ ಮತ್ತು ಸೋಮಾರಿತನ) ಹೊಂದಿರುವ ಶೈವರು. ಮತ್ತು ಎಂಪೆರುಮಾನ್ ಅವರ ಅನುಮತಿಯೊಂದಿಗೆ, ಮೋಹಶಾಸ್ತ್ರಗಳನ್ನು (ಇತರರನ್ನು ದಿಗ್ಭ್ರಮೆಗೊಳಿಸುವ ಕೀಳು ಗ್ರಂಥ), ಮಾಧ್ಯಮಿಕರು (ಬೌದ್ಧಗಳ ಒಂದು ಉಪಪಂಗಡ) ಶೂನ್ಯಮ್ (ಶೂನ್ಯತೆಯ) ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ, ಕುದೃಷ್ಟಿಗಳು, ಮೇಲಿನವುಗಳಿಗಿಂತ ಭಿನ್ನವಾಗಿ, ಆದರೆ ವೇದಗಳನ್ನು ಸ್ವೀಕರಿಸುತ್ತಾರೆ. ವೇದಗಳ ಅರ್ಥಗಳಿಗೆ ತಪ್ಪಾದ ವ್ಯಾಖ್ಯಾನ, ಎಂಪೆರುಮಾನಾರ್ ನಂತರ ನಾಶವಾಯಿತು, ಅವರು ಕಲ್ಪ ವೃಕ್ಷದಂತಹ (ಇಷ್ಟವನ್ನು ಪೂರೈಸುವ ವೃಕ್ಷ) ಮತ್ತು ಈ ಜನರನ್ನು ನಮಗೆ ತೋರಿಸಿಕೊಟ್ಟವರು, ಈ ವಿಸ್ತಾರವಾದ ಜಗತ್ತಿನಲ್ಲಿ ಅವತರಿಸಿದ್ದಾರೆ.
ನೂರನೇ ಪಾಸುರಂ. ಅವರ ದಿವ್ಯ ಮನಸ್ಸು ಎಂಪೆರುಮಾನಾರ್ ಅವರ ದಿವ್ಯ ಪಾದಗಳ ಮಧುರವಾದ ಅನುಭವಕ್ಕೆ ಅಪೇಕ್ಷೆಯಿಂದ ತೊಡಗಿರುವುದನ್ನು ನೋಡಿದ ಅಮುದನಾರರು ಎಂಪೆರುಮಾನಾರ್ ತನಗೆ ಬೇರೆ ಯಾವುದನ್ನಾದರೂ ತೋರಿಸಿ ತನ್ನನ್ನು ದಿಗ್ಭ್ರಮೆಗೊಳಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ.
ಆಂ ತೆಳಿ ತೇನ್ ಉಂಡು ಅಮರ್ನ್ದಿಡ ವೇಣ್ಡಿಲ್ ನಿಂ ಪಾಲ್ ಅದುವೇ
ಇಂದಿಡ ವೇಣ್ಡುಂ ಇರಾಮಾನುಶ ಇದು ಅನ್ಱಿ ಒನ್ಱುಂ
ಮಾನ್ದ ಕಿಲ್ಲಾದು ಇನಿ ಮಱ್ಱು ಒನ್ಱು ಕಾಟ್ಟಿ ಮಯಕ್ಕಿಡಲೇ
ಸುಂದರವಾದ ಜೀರುಂಡೆಯಂತಿರುವ ನನ್ನ ಮನಸ್ಸು, ಹೂವಿನಂತಿರುವ ನಿನ್ನ ದಿವ್ಯ ಪಾದಗಳ ತಂಪು ಮತ್ತು ಮೃದುತ್ವದ ದೋಷರಹಿತ ಮಧುವನ್ನು ಕುಡಿದು ಅಲ್ಲಿಯೇ ಶಾಶ್ವತವಾಗಿ ವಾಸಿಸಲು ನಿನ್ನ ಬಳಿಗೆ ಬಂದಿತು. ನೀವು ಅದನ್ನು ಕರುಣೆಯಿಂದ ಕೊಡಬೇಕು. ನನ್ನ ಮನಸ್ಸು ಬೇರೆ ಯಾವುದನ್ನೂ ಆನಂದಿಸುವುದಿಲ್ಲ. ನೀನು ನನಗೆ ಬೇರೇನನ್ನೂ ತೋರಿಸಿ ನನ್ನನ್ನು ದಿಗ್ಭ್ರಮೆಗೊಳಿಸಬೇಡ.
ಎಂಬತ್ತನೇ ಪಾಸುರಂ. ಅವರು ಎಂಪೆರುಮಾನಾರಿಂದ ಹೇಗೆ ಸರಿಪಡಿಸಲ್ಪಟ್ಟಿದ್ದಾರೆಂದು ಸ್ವತಃ ಎಂಪೆರುಮಾನಾರ್ ಅವರಿಗೆ ಶರಣಾಗುತ್ತಾರೆ ಮತ್ತು ಅವರ ಕೃಪೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದು ಹೇಳುತ್ತಾರೆ.
ಶೋರ್ವು ಇನ್ಱಿ ಉಂದನ್ ತುಣೈ ಅಡಿಕ್ಕೀೞ್ ತೊಣ್ಡುಪಟ್ಟವರ್ ಪಾಲ್
ಶಾರ್ವು ಇನ್ಱಿ ಎನಕ್ಕು ಅರಂಗನ್ ಸೆಯ್ಯ ತಾಳ್ ಇಣೈಗಳ್
ಪೇರ್ವು ಇನ್ಱಿ ಇನ್ಱು ಪಱುತ್ತುಂ ಇರಾಮಾನುಶ ಇನಿ ಉನ್
ಶೀರ್ ಒನ್ಱಿಯ ಕರುಣೈಕ್ಕು ಇಲ್ಲೈ ಮಱು ತೆರಿವುಱಿಲೇ
ನಿಮ್ಮ ಪೂರಕವಾದ ದಿವ್ಯ ಪಾದಗಳಿಗೆ ಸೇವಕರಾಗಿದ್ದವರು ಮತ್ತು ಇತರ ವಿಷಯಗಳಲ್ಲಿ ತಮ್ಮ ಮನಸ್ಸನ್ನು ತೊಡಗಿಸಿಕೊಳ್ಳದವರೊಂದಿಗೆ ನಾನು ಸಂಬಂಧ ಬಯಸುವುದಿಲ್ಲ. ಇಂದು ನನಗೆ ಪೆರಿಯ ಪೆರುಮಾಳ್ ಅವರ ಕೆಂಪು ಬಣ್ಣದ ದಿವ್ಯ ಪಾದಗಳನ್ನು ನೀಡಿದ ರಾಮಾನುಜಾ ಅವರು ಪರಸ್ಪರ ಪೂರಕವಾಗಿರುವ ಮತ್ತು ಅವರ ದಿವ್ಯವಾದ ಕಪ್ಪು ರೂಪಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ! ಇದು ಸಂಭವಿಸಿದ ನಂತರ, ವಿಶ್ಲೇಷಿಸಿದರೆ, ನಿಮ್ಮ ಗೌರವಾನ್ವಿತ ಕರುಣೆಗೆ ಸಮಾನವಾದದ್ದು ಯಾವುದೂ ಇಲ್ಲ.
ಎಂಬತ್ತೆರಡನೇ ಪಾಸುರಂ. ಪೆರಿಯ ಪೆರುಮಾಳ್ ಅವರ ದೈವಿಕ ಪಾದಗಳಿಗೆ ಲಗತ್ತಿಸುವಂತೆ ತನಗೆ ಉಪದೇಶ ನೀಡಿದ ರಾಮಾನುಜರು ಪುಣ್ಯಾತ್ಮರು ಎಂದು ಅಮುಧನಾರರು ಸಂತೋಷದಿಂದ ಹೇಳುತ್ತಾರೆ.
ನಾನು ಸತ್ (ಸತ್ಯವಾದದ್ದು) ಮತ್ತು ಅಸತ್ (ಸುಳ್ಳು) ವಿಷಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಸ್ಪಷ್ಟ ಜ್ಞಾನವಿಲ್ಲದೆ ಇದ್ದೆ. ಕ್ರೂರ ಕರ್ಮದಿಂದ (ಹಿಂದಿನ ಕರ್ಮಗಳು) ನಾನು ಯಾವುದರಲ್ಲೂ ಆಸರೆಯಾಗದೆ, ಯಾವುದೇ ಉಪಯುಕ್ತ ಜ್ಞಾನವಿಲ್ಲದೆ ಅಲೆದಾಡುತ್ತಿದ್ದೆ. ಮಳೆಯನ್ನು ಹೊರುವ ಮೋಡಗಳಂತಹ ಸುಪ್ರಸಿದ್ಧ ಕೀರ್ತಿ ಮತ್ತು ಉದಾತ್ತತೆಯನ್ನು ಹೊಂದಿರುವ ರಾಮಾನುಜರು ನನ್ನನ್ನು ಕ್ಷಣಮಾತ್ರದಲ್ಲಿ ಅಪ್ರತಿಮ ಜ್ಞಾನದ ವ್ಯಕ್ತಿಯನ್ನಾಗಿ ಮಾಡಿದರು. ಎಂತಹ ಪುಣ್ಯಾತ್ಮ!
ಎಂಬತ್ತಮೂರನೆಯ ಪಾಸುರಂ. ಎಂಪೆರುಮಾನಾರ್ ಅವರನ್ನು ಕೇಳಿದರು, “ಶರಣಾಗತ ಕ್ರಿಯೆಯು ಎಲ್ಲರಿಗೂ ಸಾಮಾನ್ಯವಲ್ಲವೇ?” ಅವರು ಎಂಪೆರುಮಾನ್ಗೆ ಶರಣಾದವರ ಮತ್ತು ಶ್ರೀವೈಕುಂಠಂ ತಲುಪಿದವರ ಕೂಟದಲ್ಲಿಲ್ಲ ಎಂದು ಹೇಳುತ್ತಾರೆ ಆದರೆ ಅವರು ಎಂಪೆರುಮಾನ್ನ ದಿವ್ಯ ಪಾದಗಳನ್ನು ತಮ್ಮ ಉದಾತ್ತತೆಯಿಂದ ಸಾಧಿಸುವ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ.
ಓ ರಾಮಾನುಜಾ! ಎಂಪೆರುಮಾನ್ಗೆ ಶರಣಾಗುವ ಪರಮ ಧರ್ಮವನ್ನು ಮಾಡಿದವರು ಮತ್ತು ಪ್ರಪಂಚದಾದ್ಯಂತ ಹರಡಿರುವವರು, ತಮ್ಮ ಆಂತರಿಕ ಮತ್ತು ಬಾಹ್ಯ ಇಂದ್ರಿಯಗಳ ಮೇಲೆ ಹಿಡಿತ ಹೊಂದಿರುವವರು, ಸ್ವಂತವಾಗಿ ಏನನ್ನೂ ಮಾಡದಿರುವ [ಅತ್ಯುನ್ನತ ಲಾಭವನ್ನು ಸಾಧಿಸಲು ]ಗುಣಗಳನ್ನು ಹೊಂದಿರುವವರ ಸಭೆಯಲ್ಲಿ ನಾನು ಇಲ್ಲ, ಮತ್ತು ಬೇರೆ ಯಾವುದೇ ಆಶ್ರಯವನ್ನು ಹೊಂದಿಲ್ಲ, ಮತ್ತು ಯಾರು ಮೋಕ್ಷವನ್ನು ತಲುಪುತ್ತಾರೆ (ಶ್ರೀವೈಕುಂಠಂ ) ಇದು ಶರಣಾದವರಿಗೆ ಅತ್ಯಂತ ವಿಶಿಷ್ಟವಾದ ಪ್ರಯೋಜನವಾಗಿದೆ. ನಿಮ್ಮ ಎರಡು ದೈವಿಕ ಪಾದಗಳಲ್ಲಿ ಅತ್ಯಂತ ಶ್ರೇಷ್ಠವಾದ ಮೋಕ್ಷವನ್ನು ನಾನು ಸುಲಭವಾಗಿ ಪಡೆಯುತ್ತೇನೆ. ಅದಕ್ಕೆ ಕಾರಣ ನಿಮ್ಮಲ್ಲಿರುವ ಉದಾತ್ತತೆಯ ಗುಣ ಮತ್ತು ಅದು ಮಳೆಯನ್ನು ಹೊರುವ ಮೋಡದಂತಿದೆ. ಇದನ್ನು ನೀವೇ ನೋಡಬಹುದಿತ್ತು.
ಎಂಬತ್ತನಾಲ್ಕನೆಯ ಪಾಸುರಂ. ಭವಿಷ್ಯದಲ್ಲಿ ಅವನು ಸಾಧಿಸಬೇಕಾದ ಪ್ರಯೋಜನಗಳು ಇನ್ನೂ ಇದ್ದರೂ, ಅವನು ಈಗಾಗಲೇ ಸಾಧಿಸಿದ ಪ್ರಯೋಜನಗಳಿಗೆ ಮಿತಿಯಿಲ್ಲ ಎಂದು ಅವರು ಹೇಳುತ್ತಾರೆ.
ಕಣ್ಡು ಕೋಣ್ಡೇನ್ ಎಮ್ ಇರಾಮಾನುಶನ್ ತನ್ನೈ ಕಾಣ್ಡಲುಮೇ
ತೊಣ್ಡು ಕೋಣ್ಡೇನ್ ಅವನ ತೊಣ್ಡರ್ ಪೋನ್ ತಾಳಿಲ್ ಎನ್ ತೊಲ್ಲೈ ವೆಂ ನೋಯ್
ವೀಣ್ಡು ಕೋಣ್ಡೇನ್ ಅವನ ಶೀರ್ ವೆಳ್ಳ ವಾರಿಯೈ ವಾಯ್ ಮಡುತ್ತು ಇನ್ಱು
ಉಂಡು ಕೋಣ್ಡೇನ್ ಇನ್ನಂ ಉಱ್ಱನ ಓದಿಲ್ ಉಲಪ್ಪು ಇಲ್ಲೈಯೇ
ನನ್ನನ್ನು ರಕ್ಷಿಸಲು ಬಂದ ನನ್ನ ಒಡೆಯ ಎಂಪೆರುಮಾನಾರ್ ಅವರನ್ನು ನಾನು ನೋಡಿದೆ. ಆತನನ್ನು ಕಂಡ ನಾನು ಅವನಿಗಾಗಿಯೇ ಬದುಕುವವರ ಸುಂದರ ದಿವ್ಯ ಪಾದಗಳಿಗೆ ಸೇವಕನಾದೆ. ಅನಾದಿ ಕಾಲದಿಂದಲೂ ನನ್ನ ಬಳಿಯಿರುವ ನನ್ನ ಅತ್ಯಂತ ಕ್ರೂರ ಕರ್ಮಗಳನ್ನು (ಹಿಂದಿನ ಕರ್ಮಗಳನ್ನು) ನಾನು ತೆಗೆದುಹಾಕಿದೆ. ನಾನು ಅವನ ಮಂಗಳಕರ ಗುಣಗಳ ಸಾಗರವನ್ನು ಸಂಪೂರ್ಣವಾಗಿ ಆನಂದಿಸಿದೆ. ಅವರಿಂದ ನಾನು ಪಡೆದ ಪ್ರಯೋಜನಗಳಿಗೆ ಕೊನೆಯಿಲ್ಲ.
ಎಂಬತ್ತೈದನೆಯ ಪಾಸುರಂ. “ನೀವು ಎಂಪೆರುಮಾನಾರ್ ಅವರನ್ನು ಸಾಕ್ಷಾತ್ ನೋಡಿದ್ದೀರಿ ಎಂದು ಹೇಳಿದ್ದೀರಿ. ನೀವು ಅವರ ಅನುಯಾಯಿಗಳ ಸುಂದರ ಪಾದಗಳಲ್ಲಿ ಸೇವಕ ಎಂದು ಹೇಳಿದ್ದೀರಿ. ಈ ಎರಡರಲ್ಲಿ ನೀವು ಯಾವುದರಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಿ? ಎಂಪೆರುಮಾನಾರ್ಗೆ ಪ್ರತ್ಯೇಕವಾಗಿ ಇರುವವರ ದೈವಿಕ ಪಾದಗಳ ಹೊರತಾಗಿ ಅವರ ಆತ್ಮಕ್ಕೆ ಯಾವುದೇ ಆಶ್ರಯವಿಲ್ಲ ಎಂದು ಅವರು ಹೇಳುತ್ತಾರೆ.
ತಾವು ಕಲಿತ ವೇದಗಳ (ಪವಿತ್ರ ಗ್ರಂಥಗಳ) ಅಥವಾ ವೇದಾಂತಂಗಳಲ್ಲಿ (ವೇದಗಳ ಕೊನೆಯ ಭಾಗಗಳು) ಉಲ್ಲೇಖಿಸಿರುವಂತೆ ಆಂತರಿಕ ಅರ್ಥ ಎಂಪೆರುಮಾನ್ ಅವರು ಅನಂತ ಪ್ರಕಾಶಮಾನರಾಗಿದ್ದಾರೆಂದು ತಿಳಿದಿಲ್ಲದ ಜನರಿದ್ದಾರೆ. ಎಂಪೆರುಮಾನಾರ್ ಅವರು ಇತರ ಪ್ರಾಪಂಚಿಕ ವಿಷಯಗಳಲ್ಲಿ ಗುಲಾಮಗಿರಿಯನ್ನು ನಡೆಸುತ್ತಿರುವ ಇಂತಹ ಜನರ ಅಜ್ಞಾನವನ್ನು ಹೋಗಲಾಡಿಸಿದರು. ಅಂತಹ ಎಂಪೆರುಮಾನಾರ್ ಅವರ ದಿವ್ಯ ಪಾದಗಳನ್ನು ಪೂಜಿಸುವ ಮಹತ್ತರವಾದ ಗುರುತನ್ನು ಹೊಂದಿರುವವರ ದೈವಿಕ ಪಾದಗಳನ್ನು ಹೊರತುಪಡಿಸಿ ನನ್ನ ಆತ್ಮಕ್ಕೆ ಬೇರೆ ಆಶ್ರಯವಿಲ್ಲ.
ಎಂಬತ್ತಾರನೆಯ ಪಾಸುರಂ. ಲೌಕಿಕ ಸಾಧನೆಯಲ್ಲಿ ತೊಡಗಿರುವವರ ಬಗ್ಗೆ ತನಗೆ ವಾತ್ಸಲ್ಯವಿತ್ತು ಎಂಬುದನ್ನು ಸ್ಮರಿಸುತ್ತಾ, ಇನ್ನು ಮುಂದೆ ತಾನು ಹಾಗೆ ಮಾಡುವುದಿಲ್ಲ ಮತ್ತು ಎಂಪೆರುಮಾನಾರ್ ಅವರನ್ನು ಧ್ಯಾನಿಸುವವರು ತನ್ನನ್ನು ಆಳಲು ಯೋಗ್ಯರು ಎಂದು ಹೇಳುತ್ತಾರೆ.
ಪಱ್ಱಾ ಮನಿಸರೈಪ್ ಪಱ್ಱಿ ಅಪ್ಪಱ್ಱು ವಿಡಾದವರೇ
ಉಱ್ಱಾರ್ ಎನ ಉೞನ್ಱು ಓಡಿ ನೈಯೇನ್ ಇನಿ ಒಳ್ಳಿಯ ನೂಲ್
ಕಱ್ಱಾರ್ ಪರವುಂ ಇರಾಮಾನುಶನೈ ಕರುದುಂ ಉಳ್ಳಂ
ಪೆಱ್ಱಾರ್ ಯವರ್ ಅವರ್ ಎಮ್ಮೈ ನಿನ್ಱು ಆಳುಮ್ ಪೆರಿಯವರೇ
ಗೌರವವಿಲ್ಲದ ಕೆಳವರ್ಗದವರನ್ನು ಗಳಿಸಿ, ಆ ಬಾಂಧವ್ಯವನ್ನು ತೊಲಗಿಸದೆ, ಅವರೇ ನನ್ನ ಬಂಧುಗಳೆಂದು ಭಾವಿಸಿ, ಅವರ ಹಿಂದೆ ಓಡಿಹೋಗಿ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾ ಅವರ ವಿಷಯದಲ್ಲಿ ಮನಸೋತಿದ್ದೆ. ಅಂತಹವರಿಗೆ ನಾನು ಇನ್ನು ಮುಂದೆ ಮಣಿಯುವುದಿಲ್ಲ. ಎಂಪೆರುಮಾನಾರ್ ಅವರನ್ನು ಶಾಸ್ತ್ರಗಳಲ್ಲಿ ಕಲಿತವರು ತಮ್ಮ ಕಲಿಕೆಯ ಪ್ರಯೋಜನವೆಂದು ಪರಿಗಣಿಸುತ್ತಾರೆ ಮತ್ತು ಅವರಿಂದ ಪ್ರೀತಿಯಿಂದ ಹೊಗಳುತ್ತಾರೆ. ಆ ಎಂಪೆರುಮಾನಾರ್ನ ಕುರಿತು ನಿರಂತರವಾಗಿ ಯೋಚಿಸುವ ಮನಸ್ಸನ್ನು ಹೊಂದಿರುವವರು ತಮ್ಮ ಜನ್ಮ ಕುಲ ಅಥವಾ ಅವರ ವಂಶಾವಳಿಯನ್ನು ಲೆಕ್ಕಿಸದೆ ಎಂದೆಂದಿಗೂ ನನ್ನನ್ನು ಆಳಲು ಅರ್ಹರು.
ಎಂಬತ್ತೇಳನೆಯ ಪಾಸುರಂ. ಇದು ಕಲಿಯ ಸಮಯ ಮತ್ತು ಅದು ಅವನ ದೃಢತೆಯನ್ನು ಅಲುಗಾಡಿಸುತ್ತದೆ ಎಂದು ನೆನಪಿಸಿದಾಗ, ಎಂಪೆರುಮಾನಾರ್ ಒದಗಿಸಿದ ಜ್ಞಾನದಲ್ಲಿ ತೊಡಗಿಲ್ಲದವರ ಮೇಲೆ ಮಾತ್ರ ಕಲಿ ಆಕ್ರಮಣ ಮಾಡುತ್ತಾನೆ ಎಂದು ಅವರು ಹೇಳುತ್ತಾರೆ.
ತಮ್ಮ ಜ್ಞಾನ ಮತ್ತು ಸಾಮರ್ಥ್ಯದಲ್ಲಿ ಸಂಪೂರ್ಣವಾದವರು (ಸಂಪೂರ್ಣವಾಗಿ ಮಾತನಾಡಲು ಸಾಧ್ಯವಿಲ್ಲದ ಕಾರಣ) ರಾಮಾನುಜರನ್ನು ಮಾತನಾಡಲಾಗುವುದಿಲ್ಲ ಮತ್ತು ಅಜ್ಞಾನ ಮತ್ತು ಅಸಾಮರ್ಥ್ಯದ ಗಡಿಯಾಗಿರುವ (ಅವರು ಹಿಂದೆ ಸರಿಯಲು ಸಾಧ್ಯವಿಲ್ಲದ ಕಾರಣ) ಜ್ಞಾನವಿಲ್ಲದವರು ಮಾತನಾಡಲು ಸಾಧ್ಯವಿಲ್ಲ. ಅವನ ಬಗ್ಗೆ ಮಾತನಾಡುವುದರಿಂದ). ಎಂಪೆರುಮಾನಾರ್ ಅವರು ತಮ್ಮ ಸ್ವರೂಪ (ಮೂಲ ಸ್ವಭಾವ), ರೂಪ (ರೂಪ) ಮತ್ತು ಗುಣ (ಶುಭಕರ ಗುಣಗಳು) ಗಳಿಗೆ ಸೂಕ್ತವಾದ ಪದಗಳನ್ನು ಮಾತನಾಡಬಲ್ಲವರು ಎಂದು ಮಹಾನ್ ಜ್ಞಾನಿಗಳಿಂದ ಪ್ರಶಂಸಿಸಲ್ಪಟ್ಟ ಖ್ಯಾತಿಯನ್ನು ಹೊಂದಿದ್ದಾರೆ. ರಾಮಾನುಜರು ವೇದಾಧ್ಯಯನದಿಂದ ಪಡೆದ ಮಹಾನ್ ಜ್ಞಾನವನ್ನು ಉಪದೇಶಿಸಿದ ಜನರ ಭಾಗವಲ್ಲದವರನ್ನು ಮಾತ್ರ ಕಲಿಯು ಹಿಂಸಿಸುತ್ತಾನೆ.
ಎಂಭತ್ತೆಂಟನೇ ಪಾಸುರಂ. ಹುಲಿಗಳಂತಿರುವ ಕುದ್ರುಷ್ಟಿಗಳನ್ನು (ವೇದಗಳನ್ನು ತಪ್ಪಾಗಿ ಅರ್ಥೈಸುವವರು) ನಾಶಮಾಡಲು ಸಿಂಹದಂತಿರುವ ಎಂಪೆರುಮಾನಾರ್ ಈ ಪ್ರಪಂಚದಲ್ಲಿ ಅವತರಿಸಿದ ರೀತಿಯನ್ನು ಹೊಗಳುವುದಾಗಿ ಹೇಳುತ್ತಾನೆ.
ಕಲಿ ಮಿಕ್ಕ ಸೆನ್ನೆಲ್ ಕೞನಿಕ್ ಕುಱೈಯಲ್ ಕಲೈಪ್ ಪೆರುಮಾನ್
ಒಲಿ ಮಿಕ್ಕ ಪಾಡಲೈ ಉಂಡು ತನ್ ಉಳ್ಳಂ ತಡಿತ್ತು ಅದನಾಲ್
ವಲಿ ಮಿಕ್ಕ ಸೀಯಮ್ ಇರಾಮಾನುಶನ್ ಮಱೈ ವಾದಿಯರಾಮ್
ಪುಲಿ ಮಿಕ್ಕದು ಎನ್ಱು ಇಪ್ ಪುವನತ್ತಿಲ್ ವಂದಮೈ ಪೋಱ್ಱುವನೇ
ತಿರುಮಂಗೈ ಆಳ್ವಾರರು ತಿರುಕ್ಕುರೈಯಲೂರಿನ ಮುಖ್ಯಸ್ಥರಾಗಿದ್ದು, ಅದರಲ್ಲಿ ಹೇರಳವಾಗಿ ಕೆಂಪಾದ ಭತ್ತವನ್ನು ಕೃಷಿ ಕಾರ್ಯಗಳ ಸಡಗರದಿಂದ ಬೆಳೆಯಲಾಗಿದ್ದು ಮತ್ತು ಶಾಸ್ತ್ರಗಳ ಅರ್ಥಗಳನ್ನು ಪ್ರತಿಬಿಂಬಿಸುವ ದೈವಿಕ ಪ್ರಬಂಧಗಳನ್ನು (ಸ್ತೋತ್ರಗಳು) ರಚಿಸುವ ಹಿರಿಮೆಯನ್ನು ಹೊಂದಿದೆ. ಎಂಪೆರುಮಾನಾರ್ ಅವರು ತಿರುಮಂಗೈ ಆಳ್ವಾರರ ತಿರುಮೊಳಿಯನ್ನು (ದೈವಿಕ ಶ್ಲೋಕಗಳು) ಸಂಗೀತದ ಸ್ವರಗಳೊಂದಿಗೆ ಆನಂದಿಸಿದರು ಮತ್ತು ಅವರ ದಿವ್ಯ ಮನಸ್ಸನ್ನು [ಹೆಮ್ಮೆಯಿಂದ] ಉಬ್ಬಿಸಿಕೊಂಡ ಪ್ರಬಲ ಸಿಂಹವಾಗಿದ್ದರು. ಹುಲಿಗಳಂತಿರುವ ಮತ್ತು ಜಗತ್ತನ್ನು ನಾಶಮಾಡುವ ವೇದಗಳ ತಪ್ಪಾದ ವ್ಯಾಖ್ಯಾನವನ್ನು ನೀಡಿದ ಬಹುಸಂಖ್ಯೆಯ ಕುದ್ರುಷ್ಟಿಗಳನ್ನು ಶಿಕ್ಷಿಸಲು ಅವನು ಈ ಭೂಮಿಯಲ್ಲಿ ಅವತರಿಸಿದ ರೀತಿಯನ್ನು ನಾನು ಪ್ರಶಂಸಿಸುತ್ತೇನೆ.
ಎಂಬತ್ತೊಂಬತ್ತನೇ ಪಾಸುರಂ. ಅವರು ಹಿಂದಿನ ಪಾಸುರಂನಲ್ಲಿ [ಎಂಪೆರುಮಾನಾರ್] ಅನ್ನು ಸ್ತುತಿಸುವುದಾಗಿ ಹೇಳಿದರು. ಅವರು ಎಂಪೆರುಮಾನಾರ್ ಅವರನ್ನು ಹೊಗಳುವುದಕ್ಕೆ ಸಂಬಂಧಿಸಿದಂತೆ ಅವರ ಭಯದ ಬಗ್ಗೆ ತಿಳಿಸುತ್ತಾರೆ.
ಪೋಱ್ಱು ಅರುಮ್ ಶೀಲತ್ತು ಇರಾಮಾನುಸ ನಿನ್ ಪುಗೞ್ ತೆರಿಂದು
ಸಾಱ್ಱುವನೇಲ್ ಅದು ತಾೞ್ವು ಅದು ತೀರಿಲ್ ಉನ್ ಶೀರ್ ತನಕ್ಕು ಓರ್
ಏಱ್ಱಂ ಎನ್ಱೇ ಕೊಣ್ಡು ಇರುಕ್ಕಿಲುಮ್ ಎನ್ ಮನಂ ಏತ್ತಿ ಅನ್ಱಿ
ಆಱ್ಱಗಿಲ್ಲಾದು ಇದಱ್ಕೆನ್ ನಿನೈವಾಯ್ ಎನ್ಱಿಟ್ಟಂಜುವನೇ
ಪೂರ್ಣವಾಗಿ ಸ್ತುತಿಸಲಾಗದ ಶ್ರೇಷ್ಠ ಗುಣಗಳನ್ನು ಹೊಂದಿರುವ ರಾಮಾನುಜಾ! ನಿಮ್ಮ ಶುಭ ಗುಣಗಳನ್ನು ಗ್ರಹಿಸಿದ ನಂತರ ನಾನು ಅದರ ಬಗ್ಗೆ ಮಾತನಾಡಲು ಪ್ರಯತ್ನಿಸಿದರೆ, ಅದು ನಿಮಗೆ ಅವಮಾನವಾಗಿ ಪರಿಣಮಿಸುತ್ತದೆ. ನಿನ್ನ ಗುಣಗಳ ಬಗ್ಗೆ ಮಾತನಾಡುವುದನ್ನು ಬಿಟ್ಟರೆ ಮಾತ್ರ ಅವು ಶ್ರೇಷ್ಠತೆಯನ್ನು ಹೊಂದುತ್ತವೆ ಎಂದು ನನಗೆ ತಿಳಿದಿದ್ದರೂ, ನಿನ್ನ ದೈವಿಕ ಗುಣಗಳನ್ನು ಹೊಗಳದೆ ನನ್ನ ಮನಸ್ಸು ತನ್ನನ್ನು ತಾನೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಇದನ್ನು ಹೇಗೆ ಪರಿಗಣಿಸುತ್ತೀರಿ ಎಂದು ನನಗೆ ಭಯವಾಗಿದೆ.
ತೊಂಬತ್ತನೇ ಪಾಸುರಂ. ಅವನ ಭಯವನ್ನು ಹೋಗಲಾಡಿಸುವ ಸಲುವಾಗಿ, ರಾಮಾನುಜರು ಕರುಣಾಜನಕ ಕಣ್ಣುಗಳಿಂದ ಅವನನ್ನು ನೋಡಿದರು. ಹೀಗೆ ತನ್ನ ಭಯವನ್ನು ಹೋಗಲಾಡಿಸಿ, ಉತ್ತಮ ಜ್ಞಾನವುಳ್ಳವರು ತಮ್ಮ ಮನಸ್ಸು, ವಾಕ್ ಮತ್ತು ದೇಹ ಎಂಬ ಮೂರರಲ್ಲಿ ಒಂದಾದ ರಾಮಾನುಜರನ್ನು ಸ್ತುತಿಸಿ ತಮ್ಮನ್ನು ತಾವು ಉನ್ನತಿಗೊಳಿಸಿಕೊಳ್ಳುತ್ತಿಲ್ಲವೆಂದು ಮತ್ತು ಜನ್ಮಾಂತರಗಳ ದುಃಖದ ಚಕ್ರದಲ್ಲಿ ಸಿಲುಕಿದ್ದಾರೆ ಎಂದು ಪಶ್ಚಾತ್ತಾಪ ಪಡುತ್ತಾರೆ .
ನಿನೈಯಾರ ಪಿಱವಿಯೈ ನೀಕ್ಕುಂ ಪಿರಾನೈ ಇನ್ನೀಳ್ ನಿಲತ್ತೇ
ಎನೈ ಆಳವಂದ ಇರಾಮಾನುಶನೈ ಇರುಂಗವಿಗಳ್
ಪುನೈಯಾರ್ ಪುನೈಯುಂ ಪೆರಿಯವರ್ ತಾಳ್ಗಳಿಲ್ ಪೂನ್ದೊಡೈಯಲ್
ವನೈಯಾರ್ ಪಿಱಪ್ಪಿಲ್ ವರುಂದುವರ್ ಮಾಂದರ್ ಮರುಳ್ ಸುರಂದೇ
ರಾಮಾನುಜರನ್ನು ಕುರಿತು ಯೋಚಿಸುವವರ ಜನ್ಮ ಚಕ್ರವನ್ನು ಹೋಗಲಾಡಿಸುವವರು ಯಾರೂ ಇಲ್ಲ. ವಿಸ್ತಾರವಾದ ಭೂಮಿಯು ಅವನಿಗಾಗಿ ಇದ್ದಾಗ ನಾನಿದ್ದ ಜಾಗಕ್ಕೆ ನನ್ನನ್ನು ಹುಡುಕಿಕೊಂಡು ಬಂದ ಆ ರಾಮಾನುಜರ ಮಹಾನ್ ಗುಣಗಳ ಮೇಲೆ ಕವಿತೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಶ್ಲೋಕಗಳ ಮಾಲೆಯನ್ನು ಕಟ್ಟುವವರು ಯಾರೂ ಇಲ್ಲದಿದ್ದರೂ, ರಾಮಾನುಜರ ಗುಣಗಳ ಮೇಲೆ ಶ್ಲೋಕಗಳ ಮಾಲೆಗಳನ್ನು ಕಟ್ಟುವ ಆ ಮಹಾಪುರುಷರ ದಿವ್ಯ ಪಾದಗಳಿಗೆ ಮಾಲೆಯನ್ನು ಸಲ್ಲಿಸುವವರು ಯಾರೂ ಇಲ್ಲ. ಮನುಷ್ಯರಾಗಿ ಹುಟ್ಟಿ ಇವುಗಳನ್ನು ಮಾಡಲು ಬಲ್ಲದವರು ತಮ್ಮ ಅಜ್ಞಾನದಿಂದ ಜನ್ಮಾಂತರಗಳ ಚಕ್ರದಲ್ಲಿ ಮುಳುಗಿರುತ್ತಾರೆ.
ಎಪ್ಪತ್ತೊಂದನೇ ಪಾಸುರಂ . ಅವರ ವಿನಂತಿ ಕೇಳಿ ಎಂಪೆರುಮಾನಾರ್ ತಮ್ಮ ವಿಶೇಷ ನೋಟದಿಂದ ನೋಡಿ ,ಅವರು ದೃಢವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಇದರಿಂದ ಅಮುಧನಾರರ ಜ್ಞಾನ ಹಿಗ್ಗಿಸಿದರು. ತಮ್ಮ ಅಪಾರ ಅದೃಷ್ಟವನ್ನು ಕಂಡು ಅಮುಧನಾರ್ ಬಹಳ ತೃಪ್ತರಾದರು.
ಶಾರ್ನ್ದದು ಎನ್ ಶಿಂದೈ ಉನ್ ತಾಳಿಣೈಕ್ಕೀೞ್ ಅನ್ಬು ತಾನ್ ಮಿಗವುಂ
ಓ ರಾಮಾನುಜ ಉದಾತ್ತತೆಯ ಗುಣವುಳ್ಳವನೇ, ನೀನು ನನ್ನನ್ನು ನಿನ್ನ ಅಡಿಯಲ್ಲಿ ಸ್ವೀಕರಿಸಿದ ಮತ್ತು ಶ್ರೇಷ್ಠತೆಯನ್ನು ಹೊಂದಿದ್ದೀಯಾ! ನನ್ನ ಅಲೆದಾಡುವ ಮನಸ್ಸು ಪರಸ್ಪರ ಪೂರಕವಾಗಿರುವ ನಿನ್ನ ದಿವ್ಯ ಪಾದಗಳಿಗೆ ಚೆನ್ನಾಗಿ ಹೊಂದಿಕೊಂಡಿತ್ತು. ಅತ್ಯಂತ ಮಧುರವಾದ ಕಮಲದಂತಹ ದಿವ್ಯ ಪಾದಗಳಿಗೆ ಮಿತಿಯಿಲ್ಲದೆ ವಾತ್ಸಲ್ಯವೂ ಹೆಚ್ಚಿತು. ನನ್ನ ಚಟುವಟಿಕೆಗಳೂ ನಿಮ್ಮ ದೈವಿಕ ಗುಣಗಳಿಗೆ ಸಂಪೂರ್ಣವಾಗಿ ಮೀಸಲಾದವು. ನನ್ನ ಮೇಲೆ ಕೃಪೆಯನ್ನು ಸುರಿಸುವ ನಿನ್ನ ಚಟುವಟಿಕೆಯಿಂದ ನನ್ನ ಹಿಂದಿನ ಪಾಪಕರ್ಮಗಳೆಲ್ಲ ನಾಶವಾದವು.
ಎಪ್ಪತ್ತೆರಡನೇ ಪಾಸುರಂ. ರಾಮಾನುಜರು ತನಗೆ ಸಲ್ಲಿಸಿದ ಮತ್ತೊಂದು ದೊಡ್ಡ ಪ್ರಯೋಜನದ ಬಗ್ಗೆ ಅಮುದನಾರರು ಸಂತೋಷದಿಂದ ಯೋಚಿಸುತ್ತಾರೆ.
ಕೈತ್ತನನ್ ತೀಯ ಸಮಯಕ್ ಕಲಗರೈ ಕಾಶಿನಿಕ್ಕೇ
ಉಯ್ತ್ತನನ್ ತೂಯ ಮಱೈ ನೆಱಿ ತನ್ನೈ ಎನ್ಱು ಉನ್ನಿ ಉಳ್ಳಂ
ನೆಯ್ತ ಅನ್ಬೋಡು ಇರುಂದು ಏತ್ತುಂ ನಿಱೈ ಪುಗೞೋರುಡನೇ
ವೈತ್ತನನ್ ಎನ್ನೈ ಇರಾಮಾನುಶನ್ ಮಿಕ್ಕ ವಣ್ಮೈ ಸೆಯ್ದೇ
ರಾಮಾನುಜರು ತಮ್ಮ ಶ್ರೇಷ್ಠತೆಯ ಗುಣವನ್ನು ಪ್ರದರ್ಶಿಸುತ್ತಾ, ತೊಂದರೆಗಳನ್ನು ಸೃಷ್ಟಿಸುವವರನ್ನು ಮತ್ತು ಇತರ ತತ್ವಗಳಲ್ಲಿ ನೆಲೆಗೊಂಡವರನ್ನು [ವೇದಗಳನ್ನು ಸ್ವೀಕರಿಸದ] ನಾಶಪಡಿಸಿದರು. ಅವರು ಈ ಭೂಮಿಯ ಮೇಲೆ ವೇದಗಳ ಪವಿತ್ರ ಮಾರ್ಗವನ್ನು ಸ್ಥಾಪಿಸಿದರು. ಇದನ್ನು ಸ್ಮರಿಸುತ್ತಾ, ಹೃದಯದಲ್ಲಿ ವಾತ್ಸಲ್ಯದಿಂದ, ಕರುಣೆಯಿಂದ ನನ್ನನ್ನು ತಮ್ಮ ಗುಣಗಳಲ್ಲಿ ಪೂರ್ಣತೆಯನ್ನು ಹೊಂದಿರುವ ಮತ್ತು ಪ್ರೀತಿಯಿಂದ ಸ್ತುತಿಸುವವರ ಗುಂಪಿನಲ್ಲಿ ನನ್ನನ್ನು ಸೇರಿಸಿದರು. ಇದು ಎಷ್ಟು ಅದ್ಭುತವಾಗಿದೆ!
ಎಪ್ಪತ್ತಮೂರನೇ ಪಾಸುರಂ. ರಾಮಾನುಜರಿಂದ ದಯಪಾಲಿಸಿದ ಜ್ಞಾನ ಮತ್ತು ವಾತ್ಸಲ್ಯದಿಂದ ಅವನು ತನ್ನನ್ನು ತಾನು ಉಳಿಸಿಕೊಳ್ಳಬಹುದು ಎಂದು ಹೇಳಿದಾಗ, ರಾಮಾನುಜರನ್ನು ನಿರಂತರವಾಗಿ ಆಲೋಚಿಸುವುದರ ಹೊರತಾಗಿ ಬೇರೆ ಯಾವುದೇ ವಿಧಾನದಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮುಧನಾರರು ಪ್ರತಿಕ್ರಿಯಿಸುತ್ತಾರೆ.
ರಾಮಾನುಜರು ಅರ್ಥಗಳನ್ನು ಶ್ರೇಷ್ಠವೆಂದು ಪರಿಗಣಿಸದೆ ಎಲ್ಲರಿಗೂ [ಮತ್ತು ಯಾರನ್ನೂ ಕೀಳು ಎಂದು ಭಾವಿಸದೆ ] ಉಪದೇಶಿಸುವ ಮಹಾನತೆಯನ್ನು ಹೊಂದಿದ್ದಾರೆ ಇತರರ ನೋವನ್ನು ಸಹಿಸದ ಕರುಣೆಯನ್ನು ಹೊಂದಿದ್ದಾನೆ. ದುಃಖವನ್ನು ಹೋಗಲಾಡಿಸುವ ಮತ್ತು ಸಂತೋಷವನ್ನು ನೀಡುವ ಚಂದ್ರನ ತಂಪು ಅವನಿಗಿದೆ. ಅವರು ವಿಶ್ವದ ಜನರಿಗೆ [ಎಂಪೆರುಮಾನ್ ಬಗ್ಗೆ] ಜ್ಞಾನವಿಲ್ಲ ಎಂದು ತಿಳಿದಿರದ ಜನರಿಗೆ ಶ್ರೇಷ್ಠ ಮತ್ತು ಶ್ರೇಷ್ಠ ಜ್ಞಾನವನ್ನು ನೀಡುತ್ತಾರೆ, ಹೀಗಾಗಿ ಅವರನ್ನು ರಕ್ಷಿಸುತ್ತಾರೆ. ಅವನನ್ನು ರಕ್ಷಕನೆಂದು ಪರಿಗಣಿಸುವ ಶಕ್ತಿಯ ಹೊರತಾಗಿ ನನ್ನನ್ನು ಉಳಿಸಿಕೊಳ್ಳಲು ನನ್ನಲ್ಲಿ ಏನೂ ಇಲ್ಲ.
ಎಪ್ಪತ್ತನಾಲ್ಕನೆಯ ಪಾಸುರಂ. ಇತರ ತತ್ತ್ವಶಾಸ್ತ್ರಗಳ ವಿರುದ್ಧ ಗೆಲ್ಲುವ ವಿಷಯದಲ್ಲಿ ಎಂಪೆರುಮಾನ್ಗೆ ಹೋಲಿಸಿದರೆ ಎಂಪೆರುಮಾನಾರ್ ಅವರು ಸಾಧಿಸಿದ ಸುಲಭತೆಯ ಬಗ್ಗೆ ಅಮುದನಾರ್ ಸಂತೋಷಪಡುತ್ತಾರೆ.
ತೇರಾರ್ ಮಱೈಯಿನ್ ತೀಱಂ ಎನ್ಱು ಮಾಯವನ್ ತೀಯವರೈಕ್
ಕೂರ್ ಆೞಿ ಕೊಣ್ದು ಕುಱೈಪ್ಪದು ಕೊಣ್ಡಲ್ ಅನೈಯವಣ್ಮೈ
ಏರ್ ಆರ್ ಗುಣತ್ತು ಎಮ್ ಇರಾಮಾನುಶನ್ ಅವ್ವೆೞಿಲ್ ಮಱೈಯಿಲ್
ಸೇರ್ದವರೈಚ್ ಚಿದೈಪ್ಪದು ಅಪ್ಪೋದು ಒರು ಸಿಂದೈ ಸೆಯ್ದೇ
ವೇದಗಳು ಶಾಶ್ವತವಾಗಿ ಅಸ್ತಿತ್ವದಲ್ಲಿವೆ ಮತ್ತು ಯಾವುದೇ ವ್ಯಕ್ತಿಯಿಂದ ರಚಿಸಲ್ಪಟ್ಟಿಲ್ಲ. ಅದ್ಭುತವಾದ ಜ್ಞಾನ ಮತ್ತು ಶಕ್ತಿಯನ್ನು ಹೊಂದಿರುವ ಎಂಪೆರುಮಾನ್, ತನ್ನ ಆದೇಶವನ್ನು ದಾಟಿದವರನ್ನು ಮತ್ತು ವೇದಗಳ ತತ್ವಗಳನ್ನು ಅನುಸರಿಸದ ಕೆಟ್ಟ ನಡವಳಿಕೆಯನ್ನು ಹೊಂದಿರುವವರನ್ನು ತನ್ನ ತೀಕ್ಷ್ಣವಾದ, ದೈವಿಕ ಚಕ್ರದ ಮೂಲಕ ನಾಶಪಡಿಸುತ್ತಾನೆ. ಎಲ್ಲರಿಗೂ ಮಳೆಯನ್ನು ಸುರಿಸುವ ಮೇಘದಂತಹ ಮಹಾನುಭಾವ, ಅನೇಕ ಮಂಗಳಕರ ಗುಣಗಳನ್ನು ಹೊಂದಿರುವ ಮತ್ತು ನಮ್ಮ ನಾಯಕನಾದ ಎಂಪೆರುಮಾನ್, ವೇದಗಳಲ್ಲಿ ನಂಬಿಕೆಯಿಲ್ಲದವರನ್ನು ಅಥವಾ ಪ್ರತಿ ಕ್ಷಣದಲ್ಲಿ ತನಗೆ ಬರುವ ಯೋಜನೆಗಳ ಮೂಲಕ ವೇದಗಳನ್ನು ತಪ್ಪಾಗಿ ಅರ್ಥೈಸುವವರನ್ನು ಗೆಲ್ಲುತ್ತಾನೆ.
ಎಪ್ಪತ್ತೈದನೆಯ ಪಾಸುರಂ. ಎಂಪೆರುಮಾನ್ ಅವರ ಹಿರಿಮೆಯನ್ನು ಕಾಣುವ ಕ್ಷಣದವರೆಗೆ ಮಾತ್ರ ಅಮುಧಾನಾರ್ ಅವರು ತಮ್ಮ ಗುಣಗಳೊಂದಿಗೆ ತೊಡಗುತ್ತಾರೆ ಎಂದು ಎಂಪೆರುಮಾನಾರ್ ಹೇಳುತ್ತಾರೆ ಎಂದು ಭಾವಿಸಿದರೆ, ಎಂಪೆರುಮಾನ್ ತನ್ನ ಸೌಂದರ್ಯವನ್ನು ವ್ಯಕ್ತಪಡಿಸಲು ಖುದ್ದಾಗಿ ಬಂದು ಅವನನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಅವನಿಗೆ ದೃಢಪಡಿಸಿದರೂ, ಎಂಪೆರುಮಾನಾರ್ ಅವರ ಮಂಗಳಕರ ಗುಣಗಳು ಮಾತ್ರ ಅವನನ್ನು ತೊಡಗಿಸಿಕೊಳ್ಳುತ್ತವೆ ಎಂದು ಅಮುಧನಾರರು ಹೇಳುವರು .
ಶ್ರೀರಂಗದಲ್ಲಿ ಶಂಖಗಳು ಸುಂದರವಾದ ಮುತ್ತುಗಳನ್ನು ನೀಡುವ ಕ್ಷೇತ್ರಗಳನ್ನು ಹೊಂದಿದೆ. ಶ್ರೀರಂಗಂನಲ್ಲಿ ಶಾಶ್ವತವಾಗಿ ನೆಲೆಸಿರುವ ಪೆರಿಯ ಪೆರುಮಾಳ್ ತನ್ನ ದಿವ್ಯ ಹಸ್ತಗಳಲ್ಲಿ ದಿವ್ಯವಾದ ಚಕ್ರ ಮತ್ತು ಶಂಖವನ್ನು ಹಿಡಿದುಕೊಂಡು, ತನ್ನ ದಿವ್ಯ ಸೌಂದರ್ಯ ಇತ್ಯಾದಿಗಳನ್ನು ತೋರ್ಪಡಿಸುತ್ತಾ ನನ್ನ ಮುಂದೆ ಬಂದರೂ, ಸಂಪೂರ್ಣವಾಗಿ ನಿನ್ನನ್ನು ಅರ್ಪಿಸಿಕೊಂಡ ನನ್ನ ಮನಸ್ಸನ್ನು ಅಸ್ತವ್ಯಸ್ತಗೊಳಿಸಿ “ನಾನು ಎಂದಿಗೂ ಬಿಡುವುದಿಲ್ಲ. ನೀವು”, ನಿಮ್ಮ ಶುಭ ಗುಣಗಳು ನನ್ನನ್ನು ಎಲ್ಲಾ ಕಡೆಯಿಂದ ಸುತ್ತುವರೆದಿವೆ ಮತ್ತು ನನ್ನನ್ನು ಅವರ ಕಡೆಗೆ ಎಳೆಯುತ್ತವೆ, ಅವರ ಶ್ರೇಷ್ಠತೆಯನ್ನು ತೋರಿಸುತ್ತವೆ.
ಎಪ್ಪತ್ತಾರನೆಯ ಪಾಸುರಂ. ಅಮುಧನಾರರಿಂದ ಇದನ್ನು ಕೇಳಿ ಸಂತಸಗೊಂಡ ಎಂಪೆರುಮಾನಾರ್ ಅವರು ತನಗೆ ಏನು ಮಾಡಬಹುದೆಂದು ಕರುಣೆಯಿಂದ ಯೋಚಿಸುತ್ತಾರೆ. ಅಮುಧನಾರ್ ತನ್ನ ಆಸೆಯನ್ನು ದೃಢವಾಗಿ ಬಹಿರಂಗಪಡಿಸುತ್ತಾನೆ.
ತಿರುಮಲೈ ಎಂಬ ದೈವಿಕ ಹೆಸರನ್ನು ಹೊಂದಿರುವ ತಿರುವೆಂಗಡಂ ಸುಂದರವಾದ, ಸಂಪೂರ್ಣವಾಗಿ ಸ್ಥಾಪಿತವಾದ ಖ್ಯಾತಿಯನ್ನು ಹೊಂದಿದೆ, ಹರಿಯುವ, ಉದ್ದವಾದ ಜಲಮೂಲಗಳನ್ನು ಹೊಂದಿದೆ ಮತ್ತು ಹೆಚ್ಚು ಅಪೇಕ್ಷಿತವಾಗಿದೆ; ಶ್ರೀವೈಕುಂಠಂ ಒಂದು ಸುಂದರವಾದ ದೈವಿಕ ಸ್ಥಳವಾಗಿದೆ; ತಿರುಪ್ಪಾರ್ಕಡಲ್ ಅನುಯಾಯಿಗಳನ್ನು ರಕ್ಷಿಸುವ ಮಾರ್ಗಗಳ ಕುರಿತು ಯೋಚಿಸುತ್ತಿರುವಾಗ ಎಂಪೆರುಮಾನ್ ವಿಶ್ರಾಂತಿ ಪಡೆಯಲು ವಾಸಸ್ಥಾನವೆಂದು ಜ್ಞಾನವುಳ್ಳ ವ್ಯಕ್ತಿಗಳಿಂದ ಪ್ರಶಂಸಿಸಲಾಗುತ್ತದೆ. ಈ ಮೂರು ದೈವಿಕ ಸ್ಥಳಗಳು ನಿಮಗೆ ಯಾವ ಸಂತೋಷವನ್ನು ನೀಡುತ್ತವೆಯೋ, ಅದೇ ಸಂತೋಷವನ್ನು ನಾನು ನಿಮ್ಮ ದಿವ್ಯ ಜೋಡಿ ಕಮಲದಂತಹ ಮಧುರವಾದ ಮತ್ತು ಪರಸ್ಪರ ಪೂರಕವಾಗಿರುವ ಪಾದಗಳಿಂದ ಪಡೆಯುತ್ತೇನೆ. ಆದುದರಿಂದ ನೀವು ಕರುಣೆಯಿಂದ ಇವುಗಳನ್ನು ನನಗೆ ನೀಡಬೇಕು.
ಎಪ್ಪತ್ತೇಳನೆಯ ಪಾಸುರಂ. ರಾಮಾನುಜರು ತಾನು ಬಯಸಿದಂತೆಯೇ ತನ್ನ ದಿವ್ಯ ಪಾದಗಳನ್ನು ಕೊಟ್ಟ ನಂತರ ಅಮುಧನಾರನು ತೃಪ್ತನಾಗುತ್ತಾನೆ ಮತ್ತು ಆತನಿಗೆ ಕರುಣೆಯಿಂದ ಇನ್ನೇನು ಮಾಡಲಿದ್ದಾನೆ ಎಂದು ಕೇಳುತ್ತಾನೆ.
ಈಂದನನ್ ಈಯಾದ ಇನ್ನರುಳ್ ಎಣ್ಣಿಲ್ ಮಱೈಕ್ ಕುಱುಂಬೈಪ್
ಪಾಯ್ನ್ದನನ್ ಅಂ ಮಱೈಪ್ ಪಲ್ ಪೊಱುಳಾಲ್ ಇಪ್ಪಡಿ ಅನೈತ್ತುಂ
ಏಯ್ನ್ದನನ್ ಕೀರ್ತಿಯಿನಾಲ್ ಎನ್ ವಿನೈಗಳೈ ವೇರ್ ಪಱಿಯಕ್
ಕಾಯ್ನ್ದನನ್ ವಣ್ಮೈ ಇರಾಮಾನುಸರ್ಕ್ಕು ಎನ್ ಕರತ್ತು ಇನಿಯೇ
ಎಂಪೆರುಮಾನಾರ್ ಅವರು ಯಾರಿಗೂ ನೀಡದ ಅತ್ಯಂತ ವಿಶಿಷ್ಟವಾದ ಕೃಪೆಯನ್ನು ನನಗೆ ದಯಪಾಲಿಸಿದ್ದಾರೆ. ಅವರು, ಆ ವೇದಗಳಲ್ಲಿಯೇ ಹೇಳಲಾದ ಅರ್ಥಗಳೊಂದಿಗೆ ಅನೇಕ ವೇದಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದ ಕುದೃಷ್ಟಿಗಳನ್ನು ಓಡಿಸಿದರು. ಅವರ ಖ್ಯಾತಿಯ ಮೂಲಕ ಅವರು ಇಡೀ ಜಗತ್ತನ್ನು ವ್ಯಾಪಿಸಿದ್ದರು. ಅವರು ನನ್ನ ಹಿಂದಿನ ಪಾಪಕರ್ಮಗಳನ್ನು ಅವುಗಳ ಪರಿಮಳದ ಮೂಲದಿಂದಲೇ ತೆಗೆದುಹಾಕಿದರು. ಆ ಮಹಾನುಭಾವನಾದ ರಾಮಾನುಜರ ದಿವ್ಯ ಮನಸ್ಸಿನಲ್ಲಿ ಅವರು ಮುಂದೆ ನನಗಾಗಿ ಏನು ಮಾಡುವರೆಂದು ಯೋಚಿಸುತ್ತಿದ್ದೇನೆ?
ಎಪ್ಪತ್ತೆಂಟನೇ ಪಾಸುರಂ. ರಾಮಾನುಜರು ಅವರನ್ನು ಸರಿಪಡಿಸಲು ತೆಗೆದುಕೊಂಡ ತೊಂದರೆಗಳ ಬಗ್ಗೆ ಅಮುಧನಾರ್ ಅವರು ಹೇಳುತ್ತಾರೆ ಮತ್ತು ರಾಮಾನುಜರು ಅವರನ್ನು ಸರಿಪಡಿಸಿದ ನಂತರ, ಅವರ ಹೃದಯವು ತಪ್ಪು ಚಟುವಟಿಕೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳುತ್ತಾರೆ.
ಕರುತ್ತಿಲ್ ಪುಗುಂದು ಉಳ್ಳಿಲ್ ಕಳ್ಳಂ ಕೞಱ್ಱಿ ಕರುದರಿಯ
ವರುತ್ತತ್ತಿನಾಲ್ ಮಿಗ ವಂಜಿತ್ತು ನೀ ಇಂದ ಮಣ್ಣಗತ್ತೇ
ತಿರುತ್ತಿತ್ ತಿರುಮಗಳ್ ಕೇಳ್ವನುಕ್ಕು ಆಕ್ಕಿಯಪಿನ್ ಎನ್ ನೆಂಜಿಲ್
ಪೊರುತ್ತಪ್ಪಡಾದು ಎಮ್ ಇರಾಮಾನುಶ ಮಱ್ಱೋರ್ ಪೊಯ್ಪ್ಪೊರುಳೇ
ಹೊರಗಿನಿಂದ ನನ್ನನ್ನು ತಿದ್ದಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಯೋಚಿಸಲೂ ಸಾಧ್ಯವಾಗದ ತೊಂದರೆಗಳನ್ನು ನೀವು ಕೈಗೆತ್ತಿಕೊಂಡಿದ್ದೀರಿ, ನೀವು ಏನು ಮಾಡಬೇಕೆಂದು ತಿಳಿದಿದ್ದರೆ ಮತ್ತು ನನ್ನ ಮನಸ್ಸನ್ನು ಪ್ರವೇಶಿಸಿದ್ದರೆ ನಾನು ನಿನ್ನನ್ನು ನಿಲ್ಲಿಸುತ್ತಿದ್ದೆ. ನಾನು ನನ್ನ ಮನಸ್ಸಿನಲ್ಲಿ ಶುಶ್ರೂಷೆ ಮಾಡುತ್ತಿದ್ದ ಆತ್ಮಾಪಹಾರಂ (ಆತ್ಮ ಸ್ವತಂತ್ರ ಎಂದು ಭಾವಿಸುವುದು) ದೋಷವನ್ನು ನೀವು ಸರಿಪಡಿಸಿದ್ದೀರಿ. ಬರಡು ಭೂಮಿಯನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದಂತೆ ನನ್ನನ್ನು ಸರಿಪಡಿಸಿ ಶ್ರೀ ಮಹಾಲಕ್ಷ್ಮಿಯ ಪತಿಯ ಸೇವಕನನ್ನಾಗಿ ಮಾಡಿದ್ದೀರಿ. ನೀನು ಇವನ್ನೆಲ್ಲ ಮಾಡಿದ ನಂತರ ನನ್ನ ಹೃದಯಕ್ಕೆ ಧಕ್ಕೆಯಾಗುವ ಯಾವುದೇ ತಪ್ಪು ಅರ್ಥಗಳು (ತಪ್ಪಾದ ಚಟುವಟಿಕೆಗಳು) ಅಲ್ಲಿ ಹೊಂದಿಕೊಳ್ಳುವುದಿಲ್ಲ.
ಎಪ್ಪತ್ತೊಂಬತ್ತನೇ ಪಾಸುರಂ. ಅಮುಧನಾರನು ಸಂಸಾರಿಗಳಿಗೆ (ಭೌತಿಕ ಜಗತ್ತಿನಲ್ಲಿ ನೆಲೆಸಿರುವವರು) ಕನಿಕರಪಡುತ್ತಾನೆ, ಅವರು ಉನ್ನತಿ ಹೊಂದುವ ಬಯಕೆಯನ್ನು ಹೊಂದಿದ್ದರೂ, ಕಷ್ಟಪಡುತ್ತಾ, ಜ್ಞಾನವನ್ನು ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿ ಮಲಗಿದ್ದಾರೆ.
ಈ ಜಗತ್ತಿನಲ್ಲಿ ಸತ್ಯವಾದ ತತ್ತ್ವವನ್ನು ರಕ್ಷಿಸುತ್ತಿರುವ ರಾಮಾನುಜರು, ಆತ್ಮದ ಬಗ್ಗೆ ತಪ್ಪು ಜ್ಞಾನವನ್ನು ಹರಡುವುದನ್ನು ಮುಂದುವರೆಸಿದ ಬಾಹ್ಯ ಮತ್ತು ಕುದೃಷ್ಟಿ ತತ್ವಗಳನ್ನು ಓಡಿಸಿದರು ಮತ್ತು ಸತ್ಯವಾದ ತತ್ವವನ್ನು ತಿಳಿದುಕೊಳ್ಳುವ ಬಯಕೆಯಿಂದ ಯಾರಾದರೂ ಬರುತ್ತಾರೆಯೇ ಎಂದು ಕಾಯುತ್ತಿದ್ದರು. ಇಹಲೋಕದ ಜನರು ಆತನನ್ನು ತಮ್ಮಲ್ಲಿ ಒಬ್ಬನೆಂದು ಸ್ವೀಕರಿಸುವ ಬದಲು, ತಮ್ಮ ಮನಸ್ಸಿನಲ್ಲಿ ಚಿಂತೆಗಳಿಂದ ತಮ್ಮ ದೇಹವನ್ನು ಒಣಗಿಸಿ, ತಮ್ಮನ್ನು ಉದ್ಧಾರ ಮಾಡುವ ದೇವತೆಯನ್ನು ಹುಡುಕುತ್ತಿದ್ದಾರೆ. ಅಯ್ಯೋ! ಅವರು ಹೇಗೆ ಬಳಲುತ್ತಿದ್ದಾರೆ!
ಎಂಭತ್ತನೇ ಪಾಸುರಂ. ಇತರರನ್ನು ಮರೆತು ತನ್ನ ನಂಬಿಕೆ ಏನೆಂಬುದನ್ನು ಬಹಿರಂಗಪಡಿಸಲು ರಾಮಾನುಜರು ಕೇಳಿದಾಗ, ರಾಮಾನುಜರಿಗೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಜನರ ಬಗ್ಗೆ ಪ್ರೀತಿಯಿಂದ ಇರುವವರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅಮುಧನಾರರು ಹೇಳುತ್ತಾರೆ.
ರಾಮಾನುಜರು ಎಲ್ಲೇ ನೆಲೆಸಿದ್ದರೂ ಎಲ್ಲ ಶ್ರೇಷ್ಠ ವ್ಯಕ್ತಿಗಳು ಅವರನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ. ರಾಮಾನುಜರ ದಿವ್ಯನಾಮಗಳೇ ಆಶ್ರಯವೆಂದು ನಂಬುವವರಿಗೆ ಸದಾ, ಎಲ್ಲ ಸ್ಥಳಗಳಲ್ಲಿ, ಎಲ್ಲ ಕಾಲಗಳಲ್ಲಿ ಮತ್ತು ಎಲ್ಲಾ ಅವಸ್ಥೆಗಳಲ್ಲಿ ಅವರನ್ನು ಬೇರ್ಪಡಿಸದೆ ನನ್ನ ಮನಸ್ಸು, ಮಾತು ಮತ್ತು ದೇಹದ ಮೂಲಕ ಕೈಂಕರ್ಯವನ್ನು ನಡೆಸುತ್ತೇನೆ.
ಶ್ಲೋಕ- 41 – ಈ ಶ್ಲೋಕದಲ್ಲಿ ದ್ವಜಾದಿಯೆಲ್ಲಾ ರೀತಿಯಲ್ಲಿರುವ ಹಾಗು ಪರಿಪಕ್ವವಾಗಿರುವ ಫಲದ ಹಾಗೆ ಎಮ್ಪೆರುಮಾನಿಗೆ ತುಂಬಾ ಪ್ರಿಯವಾಗಿರುವ ಪೆರಿಯ ತಿರುವಡಿ(ಗರುಡಾಲ್ವಾನ್) ಹಾಗು ಎಮ್ಪೆರುಮಾನಿನ *** ದಾಸಸ್ ಸಖಾ ವಾಹನಮಾಸನಮ್ ದ್ವಜೋ ಯಸ್ತೇ ವಿತಾನಮ್ ವ್ಯಜನಮ್ ತ್ರಯೀಮಯಃ | ಉಪಸ್ಥಿತಮ್ ತೇನ ಪುರೋ ಗರುತ್ಮತಾ ತ್ವಧಂಗ್ರಿ ಸಮ್ಮರ್ದ ಕಿನಾಂಕ ಶೋಭಿನಾ || ವೇದವನ್ನು ತನ್ನ ಅಂಗಗಳಾಗಿ ಹೋಂದಿರುವ, ನಿನ್ನ ದಾಸನಾಗಿ, ಸಖನಾಗಿ, ವಾಹನವಾಗಿ, ಸಿಂಹಾಸನವಾಗಿ, ದ್ವಜವಾಗಿ, ಮೇಲುಕಟ್ಟಾಗಿ(ವಿತಾನವಾಗಿ), ಚಾಮರವಾಗಿರುವ ಹಾಗು ನಿನ್ನ ಪಾದಗಳು ಊರಿದರಿಂದ ಜಿಡ್ಡುಗಟ್ಟಿದ ಗುತ್ತಿನಿಂದ ಕಂಗೊಳಿಸುತ್ತಿರುವ ಗರುಡಾಲ್ವಾನಿಂದ ಸೇವಿತನಾಗಿರುವಿರಿ.
ಶ್ಲೋಕ- 42 – ಆಳವಂದಾರ್ ಎಮ್ಪೆರುಮಾನ್ ತನ್ನ ಎಲ್ಲಾ ಜವಬ್ದಾರಿಗಳನ್ನು ವಿಶ್ವಕ್ಸೇನರಲ್ಲಿ ಇಟ್ಟು ತನನ್ನೂ ಅವರ ಅದೀನದಲ್ಲಿ ಇಟ್ಟಿರುವಂತಹ ಶ್ರೀ ಸೇನಾಪತಿ ಆೞ್ವಾನಿನ ದಾಸ್ಯ ಸಾಂರಾಜ್ಯವನ್ನು ಅನುಭವಿಸುತಿದ್ದಾರೆ. ತ್ವದೀಯಭುಕ್ತೋಜ್ಜಿತಶೇಷಭೋಜಿನಾ ತ್ವಯಾ ನಿಸ್ರುಶ್ಟಾತ್ಮಭರೇಣ ಯದ್ಯತಾ | ಪ್ರಿಯೇಣ ಸೇನಾಪತಿನಾ ನ್ಯವೇದಿ ತತ್ ತದಾ$ನುಜಾನನ್ತಮುದಾರವೀಕ್ಷಣೈಃ || ನಿನ್ನಿಂದ ಊಟಮಾಡಿ ಬಿಟ್ಟ ಪಾತ್ರವಾನು ಭುಜಿಸುವವರಾಗಿ, ಲೀಲ ವಿಭೂತಿಹಾಗು ನಿತ್ಯ ವಿಭೂತಿಗಳ ನಿರ್ವಾಹಭಾರವನ್ನು ನಿಮ್ಮಿಂದ ಸ್ವೀಕರಿಸುವವರಾಗಿ, ಎಲ್ಲರಿಗು ಪ್ರಿಯರಾಗಿರುವವರಾಗಿ, ಮಾಡಬೇಕಾದ ಕಾರ್ಯಗಳಿಗೆ ನಿಮ್ಮ ಕಟಾಕ್ಷದಿಂದ ಒಪ್ಪಿಗೆಯನ್ನು ಪಡೆದು, ಮಾಡಲೂಶಕ್ತರಾಗಿ ವಿಶ್ವಕ್ಸೇನರು ಇರುವರು.
ಶ್ಲೋಕ-43 – ಆಳವಂದಾರ್ “ಸದಾ ಪಶ್ಯಂತಿ ಸೂರಯಃ ( ನಿತ್ಯ ಸುರಿಗಳು ಸದಾ ಎಮ್ಪೆರುಮಾನನ್ನೇ ನೋಡುತಿದ್ದಾರೆ)” ಎಂದು ವಿಷ್ಣು ಸೂಕ್ತದಲ್ಲಿ ಹೇಳಿದಂತೆ ನಿತ್ಯಸೂರಿಗಳ ಶೇಷವೃತ್ತಿಯನ್ನು(ಕೈಂಕರ್ಯವನ್ನು) ಅನುಭವಿಸುತಿದ್ದಾರೆ ಹಾಗು ಅವರ ಪ್ರಾರ್ಥನೆ , “ಅಡಿಯಾರ್ಗಳ್ ಕುೞಾನ್ಗಳೈ ಉಡನ್ ಕೂಡವದು ಎನ್ಱು ಕೊಲೋ?( ತಿರುವಾಯ್ಮೊೞಿ 2.3.10 ನಿತ್ಯಸೂರಿಗಳ ಘೋಷ್ಟಿಯನ್ನು ನಾನು ಎಂದು ಸೇರುವೆನೋ)”ಯಲ್ಲಿ ಹೇಳಿದಂತಿದೆ. ಹತಾಖಿಲಕ್ಲೇಶಮಲೈಃ ಸ್ವಭಾವತಃ *ಸದಾನುಕೂಲ್ಯೈಕರಸೈಸ್ ತವೋಚಿತೈಃ | ಗ್ರುಹೀತತತ್ತತ್ಪರಿಚಾರಸಾದನೈಃ ನಿಶೇವ್ಯಮಾಣಮ್ ಸಚಿವೈರ್ ಯತೋಚಿತಮ್ || ತ್ವದಾನುಕೂಲ್ಯೈಕ ಎಂಬ ಪಾಠವೂ ಇದೆ. (ಸ್ವಭಾವತಃ) ದುಃಖ-ದೋಶರಹಿತರು, ಸ್ವಾಭಾವಿಕವಾಗಿಯೇ (ನಿಮಗೆ) ಕೈಂಕರ್ಯವೇ ತಮ್ಮ ಆನಂದವಾಗಿ ಹೋಂದಿದವರು, (ಸ್ವರೂಪ-ಶಕ್ತಿಗಳಲ್ಲಿ) ನಿಮಗೆ ತಕ್ಕವರು, ಕೈಂಕರ್ಯಕ್ಕೆ ಅಪೇಕ್ಷಿತವಾದ ಪುಶ್ಪಹಾರ, ಧೂಪ ದೀಪಾದಿಗಳನ್ನು ಹಿಡಿದು ಹಾಗು ನಿಮಗೆ (ತಕ್ಕ ಸಂಬಂಧದ ಬಗ್ಗೆ ಹಾಗು ಕಾರ್ಯಗಳ ಬಗ್ಗೆ) ಬೋಧಿಸುವ (ತಮ್ಮ / ನಿಮ್ಮ ) ಸ್ವರೂಪಕ್ಕೆ ತಕ್ಕ ರೀತಿಯಲ್ಲಿ ಸೇವಿತರಾಗಿದ್ದೀರಿ.
ಶ್ಲೋಕ- 44 – “ಭವಾಂಸ್ತು ಸಹ ವೈದೇಹ್ಯಾ ಗಿರಿಸಾನುಷು ರಂಸ್ಯತೇ ( ನೀವು ಸೀತೆಯೋಂದಿಗೆ ಮಲೆಗಳ ತಾಳ್ವರೆಗಳಲ್ಲಿ ಅನುಭವಿಸಿ, ನಾನು ನಿಮ್ಮಿಬರಿಗೂ ಎಲ್ಲಾ ರೀತಿಯಲ್ಲು ಸೇವಿಸುವೆ )” ಎಂದು ಶ್ರೀರಾಮಾಯಣದ ಅಯೋಧ್ಯಾ ಖಾಂಡದ 31.25ದಲ್ಲಿ ಹೇಳಿದಂತೆ ಆಳವಂದಾರ್ ಎಮ್ಪೆರುಮಾನ್ ಪಿರಾಟ್ಟಿಯನ್ನು ವಿವಿದ ರೀತಿಯಲ್ಲಿ ಸಂತೋಷಪಡಿಸುವುದನ್ನು ಅನುಭವಿಸಲು ಇಚ್ಛಿಸುತಿದ್ದಾರೆ. ಅಪೂರ್ವ ನಾನಾರಸ ಭಾವ ನಿರ್ಭರ ಪ್ರಬುದ್ಧಯಾ ಮುಗ್ದ ವಿಧಗ್ಧಲೀಲಯಾ | ಕ್ಷಣಾಣುವತ್ ಕ್ಷಿಪ್ತಪರಾದಿಕಾಲಯಾ ಪ್ರಹರ್ಷಯನ್ತಮ್ ಮಹಿಷೀಮ್ ಮಹಾಭುಜಮ್ || ( ಪೆರಿಯ ಪಿರಾಟ್ಟಿಯನ್ನು ಆಲಂಗಿಸಲು ಸೂಕ್ತವಾದ ) ಮಹಾಭುಜಗಳನ್ನು ಹೋಂದಿರುವವನು, ಪ್ರತಿಕ್ಷಣವು ಅನುಭಾವ್ಯವಾಗಿ ಹಾಗು ನವೀನವಾಗಿತೋರುವ ರೀತಿಯ ವಿಭ್ರಮದ ಲೀಲೆಗಳಿಂದ ಬ್ರಹ್ಮನ ಆಯುಶ್ಶು ಕ್ಷಣದಹಾಗೆ ಕಳಿಯುವಂತೆ ಪೆರಿಯಪಿರಾಟ್ಟಿಯನ್ನು ಸಂತೋಷಪಡಿಸುತಿದ್ದಾನೆ.
ಶ್ಲೋಕ-45 – ಆಳವಂದಾರ್ ಪಿರಾಟ್ಟಿಗೆ ಆನಂದದಾಯಕಗಳಾದ ಅನುಭಾವ್ಯವಾದ ಗುಣಂಗಳಿಗೆ ಆಶ್ರಯವಾದ ದಿವ್ಯ ವಿಗ್ರಹವನ್ನು ಅನುಭವಿಸುತಿದ್ದಾರೆ. ಅಚಿನ್ತ್ಯ ದಿವ್ಯಾದ್ಭುತನಿತ್ಯಯೌವನ ಸ್ವಭಾವಲಾವಣ್ಯಮಯಾಮ್ರುತೋದದಿಮ್ | ಶ್ರಿಯಃ ಶ್ರಿಯಮ್ ಭಕ್ತಜನೈಕಜೀವಿತಮ್ ಸಮರ್ಥಮಾಪತ್ಸಖಮರ್ತಿಕಲ್ಪಕಮ್ || ಎಮ್ಪೆರುಮಾನ್ ಆಲೋಚನೆಗೆ ಮೀರಿದ ದಿವ್ಯ ಅದ್ಭುತ ನಿತ್ಯ ಯೌವನವನ್ನು ಉಳ್ಳವನು, ಲಾವಣ್ಯ(ಸೌಂದರ್ಯ) ಸಾಗರವಾದವನು, ಶ್ರೀಯಿಗೂ (ಶ್ರೀಮಹಾಲಕ್ಷ್ಮೀಗೂ ) ಶ್ರೀಯಾಗಿದ್ದವನು, ಭಕ್ತರಿಗೆ ಪ್ರಾಣನು, (ಮುಗ್ಧರಿಂದಲೂ ತನ್ನನ್ನು ಸ್ವಲ್ಪ-ಸ್ವಲ್ಪವೇ ಅನುಭವಿಸುವಂತೆ ಮಾಡುವುದರಲ್ಲಿ) ಸಮರ್ಥನು, ಆಪತ್ಸಖನು ಹಾಗು ಯಾಚಿಸುವವರಿಗೆ(ಕೇಳುವವರಿಗೆ) ಕಲ್ಪವೃಕ್ಷದಂತಿರುವನು …
ಶ್ಲೋಕ-46 – ಆಳವಂದಾರ್ ಎಂದು ನಾನು ಲೌಕಿಕ ವಿಷಯಗಳಲ್ಲಿ ಸಂಗವನ್ನು ಬಿಟ್ಟು ಹಿಂದೆ (ಶ್ಲೋಕ 32ಯರಿಂದ) ಹೆಳಲ್ಪಟ್ಟ ಸ್ವರೂಪ, ರೂಪ, ಗುಣ ವಿಭೂತಿಯುಕ್ತರಾದ ನಿಮಗೆ ಆನಂದಿಸುವಂತೆ ನನ್ನ ಅರುವಿಕೆಗೆ ಸಾರ್ತಕತೆಯನ್ನು ತರುವಂತೆ ಕೈಂಕರ್ಯವನ್ನು ಮಾಡುವೆ ? ಭವಂತಮೇವಾನುಚರನ್ ನಿರಂತರಂ ಪ್ರಶಾನ್ತ ನಿಶ್ಶೇಷ ಮನೋರತಾನ್ತರಃ | ಕದಾ£ಹಮೈಕಾನ್ತಿಕ ನಿತ್ಯ ಕಿನ್ಕರಃ ಪ್ರಹರ್ಶಯಿಶ್ಯಾಮಿ ಸನಾತಜೀವಿತಃ || ಅಡಿಯೇನ್ ಎಂದು ಬೆರೆಲ್ಲಾ ವಿಷಯ ಪ್ರಾವಣ್ಯವನ್ನು ನಿಶ್ಶೇಷವಾಗಿ ಬಿಟ್ಟು, ಸದಾ ನಿಮ್ಮನ್ನೆ ಅನುಸರಿಸಿಕೊಂಡು ನಿತ್ಯಕೈಂಕರ್ಯದಿಂದ ಸಂತೋಷಗೊಳಿಸಿ ಸಾರ್ಥಕನಾಗುವೆ ?
ಶ್ಲೋಕ-47 – ಈ ಶ್ಲೋಕದಲ್ಲಿ ಆಳವಂದಾರ್ ಪ್ರಾಪ್ಯನಾದ ವಿಲಕ್ಷಣವಾದ ಈಶ್ವರನನ್ನು ತಮ್ಮ ಹಿಂದಿನ ಸ್ಥಿತಿಯನ್ನು ಕಂಡು, ” ಬ್ರಹ್ಮ ರುದ್ರಾದಿಗಳ ಮನಸಿಗೂ ದೂರವದಂತಹದ್ದು ಹಾಗು ಸಂಸಾರಿಕ ವಿಷಯಗಳಿಂದ ಅಸ್ಪೃಷ್ಟರಾದ ನಿತ್ಯಸೂರಿಗಳಿಂದ ಇಚ್ಛಿಸಲ್ಪಡುವ ಕೈಂಕರ್ಯವನ್ನು ಸಂಸಾರಿಯಾದ ನಾನು ಹೇಗೆ ಇಚ್ಛಿಸುವೆನು?”. ರಾಜ ಭೋಗವಾದದ್ದು ವಿಷದಿಂಶ ಕಲುಶಿತವಾಗಬಹುದೆ ! ಹಾಗು “ವೞವೇೞುಲ್ಗು”ನಲ್ಲಿ ಆೞ್ವಾರಿನ ಹಾಗೆ ತಮ್ಮನ್ನು ನಿಂಡ್ಗಿಸಿಕೊಳುತಿದ್ದಾರೆ. ಧಿಗಶುಚಿಮವಿನೀತಮ್ ನಿರ್ದಯಮ್ ಮಾಮಲಜ್ಜಂ ಪರಮಪುರುಷ! ಯೋ£ಹಮ್ ಯೋಗಿವರ್ಯಾಗ್ರಗಣ್ಯೈಃ | ವಿದಿಶಿವಸನಕಾದ್ಯೈರ್ ದ್ಯಾತುಮತ್ಯಂತ ದೂರಮ್ ತವ ಪರಿಜನಭಾವಮ್ ಕಾಮಯೇ ಕಾಮವೃತ್ತಃ || ಓ ಪುರುಷೋತ್ತಮ! ನನ್ನ ಸ್ವೆಚ್ಛೆಯಂತೆ ನಡೆದುಕೊಳ್ಳುವುದಲ್ಲಿ ವಿಖ್ಯಾತನಾಗಿರುವವನು ಅಶುದ್ಧನು, ವಿನಯರಹಿತನು, ದಯಾರಿಹತನು, ಲಾಜ್ಜಾ ರಹಿತನಾದ ನಾನು ನನ್ನನ್ನು ನಿಂದಿಸಿಕೊಳ್ಳಬೇಕು, ಆದರೂ ಯೋಗಿಶ್ರೇಷ್ಠರಾದ ಬ್ರಹ್ಮ, ಶಿವ, ಸನಕಾದಿಗಳಿಂದಲೂ ಅಚಿಂತ್ಯವದ ನಿನ್ನ ಸೇವೆಯನ್ನೆ ಇಚ್ಛಿಸುತಿದ್ದೇನೆ.
ಶ್ಲೋಕ- 48 – ಆಳವಂದಾರ್ ತಮ್ಮ ಪಾಪಗಳನ್ನು ಕಳಿಸಿ ಕರುಣೆಯಿಂದ ಸ್ವೀಕರಿಸಬೇಕು. ಅಥವಾ ಇನ್ನೋಂದು ನಿರ್ವಾಹವು, “ನನಗೆ ಪ್ರಾಪ್ಯ ವಿರೋಧಿಯಾದ ಪಾಪಗಳನ್ನು ನೀವೆ ಕಳಿಸಬೇಕು.”, ಎಂದು ಆಳವಂದರ್ ಪ್ರಾಥಿಸುತಿದ್ದಾರೆ. ಮುಂಚೆ ಎಮ್ಪೆರುಮಾನಿನ ಉತ್ಕರ್ಷವನ್ನು ಕಂಡು ಎಮ್ಪೆರುಮಾನಿಂದ ದೂರ ಸರಿದರು, ಈಗ ಎಮ್ಪೆರುಮಾನಿನ ಅತ್ಯಂತ ಸೌಲಭ್ಯವನ್ನು ಚಿಂತಿಸಿ ಆಶ್ರಯಿಸುತಿಡ್ದಾರೆ. ಅಪರಾದಸಹಸ್ರಭಾಜನಮ್ ಪತಿತಮ್ ಭೀಮಭವಾರ್ಣವೋದರೇ | ಅಗತಿಮ್ ಶರಣಾಗತಮ್ ಹರೇ! ಕ್ರುಪಯಾ ಕೇವಲಮಾತ್ಸಮಾತ್ ಕುರು || ಶೋಕವನ್ನು ಹರಿಸುವವನೆ ! ಅಸಂಖ್ಯವಾದ ಅಪರಾದಗಳ ಭಾಜನಾದವನು, ಭೀತಿಯನ್ನು ಜನಿಸುವ ಸಂಸಾರ ಸಾಗರದಲ್ಲಿ ಬಿದ್ದಿರುವವನು, ಇನ್ನೊಂದು ಗತಿಯಿಲ್ಲದವನು, ನಿಮ್ಮ ಶರಣಾಗತನೆಂದು ಘೋಷಿಸುತಿದ್ದೇನೆ, ನಿಮ್ಮ ಕರುಣೆಯಿಂದಲೇ ನಿಮ್ಮವನೆಂದು ಅಂಗೀಕರಿಸಬೇಕು.
ಶ್ಲೋಕ- 49 –“ನೀವು ದೋಷಭೂರಿಷ್ಟರಾಗಿರುವಾಗ ಅವ್ನ್ನು ನಶಿಸುವ ಉಪಯವನ್ನು ಆಚಿರುಸುವುದಲ್ಲದೆ, ಅಥವಾ ಎಲ್ಲವನ್ನು ಬಿಟ್ಟು ನನ್ನನ್ನೆ ಹಿಡಿಯುವುದಲ್ಲದೆ “ಕೃಪಯಾಕೇವಲಮತ್ಮ್ಸಾತ್ಕುರು”ಎಂದು ನಿರ್ಬಂದಿಸುತಿದ್ದೀರಿ?” ಎಂದು ಎಮ್ಪೆರುಮಾನ್ ಆಳವಂದಾರನ್ನು ಕೇಳುತಿದ್ದಾರೆ. “ನಾನು ಶಾಸ್ತ್ರಾನುಷ್ಠಾನಕ್ಕೆಬೇಕಾದ ಜ್ಞಾನರಹಿತನು (ಆದರಿಂದ ಉಪಯಾಂತರಸಂಗವಿಲ್ಲ), ಇನ್ನೋಂದು ಗತಿಯಿಲ್ಲದ ನನ್ನಿನ್ನಿಮ್ದ ಪುರ್ಣವಾಗಿ ತಜಿಸಲು ಸಾದ್ಯವಿಲ್ಲ. ಆದರಿಂದ ನಿಮ್ಮ ಮಹತ್ತಾದ ದಯೆಯಿಂದ ವಿಶೇಷ ಕಟಾಕ್ಷವೇ ನನ್ನ ಉಜ್ಜೇವನಕ್ಕೆ ಸಾದನವಾಗಿದೆ.”ಎಂದು ಉತ್ತರಿಸುತಿದ್ದಾರೆ. ಅವಿವೇಕ ಘನಾನ್ತ ಧಿಂಗ್ಮುಖೆ ಬಹುದಾ ಸಂತತ ದುಃಖವರ್ಷಿಣಿ | ಭಗವನ್! ಭವದುರ್ದಿನೇ ಪದಃ ಸ್ಕಲಿತಮ್ ಮಾಮವಲೋಕಯಾಚ್ಯುತ || ಜ್ಞಾನ ಶಕ್ತ್ಯಾದಿಗಳಿಂದ (ಶಡ್ಗುಣಗಳಿಂದ) ಕೂಡಿರುವ ಭಗವಾನೆ! ನಿನ್ನ ಭಕ್ತರನ್ನು ತ್ಯಜಿಸದವನೇ! ದುಃಖಗಲನ್ನು ಸತತವಾಗಿ ವರ್ಷಿಸುವ ದಿಕ್ಕಕಳನ್ನು ಕಣ್ಮರೆಸುವ ಸಂಸಾರದ ವರ್ಷಾಕಾಲದ ಅಂಧಕಾರದಿಂದ ಸುಪಥದಿಂದ ಬೀಳುತ್ತಿರುವ ನನ್ನನ್ನು ನಿಮ್ಮ ಕಟಾಕ್ಷ ವಿಶೇಷದಿಂದ ಅನುಗ್ರಹಿಸಬೇಕು.
ಶ್ಲೋಕ- 50 – “ನನಗೆ ನಿಮ್ಮ ಕರುಣೆಯಲ್ಲದೆ ಇನ್ನೊಂದು ಗತಿಯಿಲ್ಲದಹಾಗೆಯೆ ನಿಮ್ಮ ಕರುಣೆಗೆ ನನಗಿಂತ ಸೂಕ್ತಪಾತ್ರರು ಬೇರೆಯಾರು ಯಿಲ್ಲ ಆದರಿಂದ ಈ ಅವಕಾಶವನ್ನು ಕಳೆದುಕೋಳ್ಳಬೇಡಿ” ಎಂದು ಆಳವಂದಾರ್ ಹೇಲುತಿದ್ದಾರೆ. ನ ಮ್ರುಶಾ ಪರಮಾರ್ತಮೇವ ಮೇ ಶ್ರುಣು ವಿಜ್ಞಾಪನಮೇಕಮಗ್ರತಃ | ಯದಿ ಮೇ ನ ದಯಿಶ್ಯಸೇ ತತೋ ದಯನೀಯಸ್ ತವ ನಾಥ ದುರ್ಲಭಃ || ಓ ಭಗವಾನ್, ನನ್ನ (ಈ) ವಿಜ್ಞಾಪನೆಯನ್ನು ದಯೆಮಾಡಿ ಕೇಳಬೇಕು; (ಈ ವಿಜ್ಞಾಪನೆಯು) ಸುಳ್ಳಲ್ಲಾ, ಇದುಸತ್ಯವೇ, ನನಗೆ ನಿಮ್ಮ ಕರುಣೆಯನ್ನು ತೋರದಿದಲ್ಲಿ, ನಿಮ್ಮ ದಯೆಗೆ ನನಗಿಂತಲೂ ಸೂಕ್ತರಾದ ಪಾತ್ರರು ಸಿಗುವುದಿಲ್ಲ.
ಶ್ಲೋಕ-31 – ಈ ಶ್ಲೋಕದಲ್ಲಿ ಆಳಂದಾರ್ “ಪಡಿಕ್ಕಳವಾಗ ನಿಮಿರ್ತ್ತ ನಿನ್ ಪಾದಪನ್ಗಯಮೇ ತಲೈಕ್ಕಣಿಯಾಯ್” (ತಿರುವಾಯ್ಮೊೞಿ 9.2.2 ಜಗತ್ತಿನ ಪರಿಮಾಣದವರೆಗು ಏರಿದ ನಿನ್ನ ಪಾದಪಂಕಜವು ನನ್ನ ಶಿರಸ್ಸನ್ನು ಅಲಂಕರಿಸಲಿ ) ಹಾಗು ತಿರುವಾಯ್ಮೊೞಿ 4.3.6 “ಕೋಲಮಾಮ್ ಎನ್ ಸೆನ್ನಿಕ್ಕು ಉನ್ ಕಮಲಮ್ ಅನ್ನ ಕುರೈ ಕೞಲೇ” ( ತಿರುವಾಯ್ಮೊೞಿ 4.3.6 ನಿನ್ನ ತವೆರೆಗೆ ಸದೃಶವಾದ ದಿವ್ಯ ಪಾದಗಳು ನನ್ನ ಶಿರಸ್ಸಿಗೆ ಆಲಂಕಾರವಾಗಿದೆ) ಯಲ್ಲಿ ಹೇಳಿದಂತೆ, ” ನಿನ್ನ ದಿವ್ಯ ಪಾದಗಳ್ಳನ್ನು ನೋಡುವುದೋಂದೆ ಸಾಲದು ,ನಿನ್ನ ದಿವ್ಯ ಪಾಧಗಳಿಂದ ನಿನ್ನ ಶಿರಸ್ಸನ್ನು ಅಲಂಕರಿಸಬೇಕು” ಎಂದು ಹೇಳುತಿಧಾರೆ. ಕದಾ ಪುನಃ ಶಂಖ ರಥಾನ್ಗ ಕಲ್ಪಕ ಧ್ವಜಾರವಿಂದ ಅಂಕುಶ ವಜ್ರ ಲಾಂಚನಮ್ | ತ್ರಿವಿಕ್ರಮ! ತ್ವಚ್ಚರಣಾಅಂಬುಜದ್ವಯಮ್ ಮದೀಯಮೂರ್ದಾನಮಲಂಕರಿಷ್ಯತಿ || ತ್ರಿವಿಕ್ರಮನಾಗಿ ಅವತರಿಸಿದ ಭಗವಂತನೆ! ಶಂಖ, ಚಕ್ರ, ಕಲ್ಪಕ-ವೃಕ್ಷ, ದ್ವಜ, ತಾವರೆ, ಅಂಕುಶ, ಹಾಗು ವಜ್ರಾಯುದಗಳ ಛಿನ್ಹೆಗಳನ್ನು ಹೋಂದಿರುವ ನಿನ್ನ ದಿವ್ಯ ಪಾದಯುಗಳಿಂದ ನನ್ನ ಶಿರಸ್ಸು ಎಂದು ಅಲಂಕೃತವಾಗುವುದು ?
ಶ್ಲೋಕ- 32 – ಈ ಶ್ಲೋಕದಿಂದ ಶ್ಲೋಕ-46 “ಭವನ್ತಮ್”ರವರೆಗು ಆಳವಂದಾರ್ ಎಮ್ಪೆರುಮಾನಿನ ಸುಂದರ ತೋಳ್ಗಳ, ಆಭರಣ, ಆಯುದ, ದಿವ್ಯ ಮಹಿಶಿ, ದಿವ್ಯ ಪರಿಕರ ಹಾಗು ಐಶ್ವರ್ಯದ ಯೋಗವನ್ನು (ಭಗವನ್ನು ಇವನ್ನು ಹೋಂದಿರುವುದನ್ನು) ಸವಿಯುತಿದ್ದಾರೆ, ಹಾಗು ಈ ಅನುಭವಜನಿತ (ಅನುಭವದಿಂದ ಹುಟ್ಟಿದ) ಕೈಂಕರ್ಯದಲ್ಲಿ ಎಂದು ತೊಡಗುವೆ ಎಂದು ಕೇಳುತಿದ್ದಾರೆ. ಭಗವಾನನ್ನು ಭಕ್ತರೋಂದಿಗೆ ಪರಮಪದದಲ್ಲಿ ಸೇವಿಸುವ ತಮ್ಮ ಪ್ರಾಪ್ಯವನ್ನು ವಿವರಿಸುತಿದ್ದಾರೆ. ವಿರಾಜಮಾನೋಜ್ಜ್ವಲಪೀತವಾಸಸಮ್ ಸ್ಮಿತಾತಸೀಸೂನಸಮಾಮಲಚ್ಚವಿಮ್ | ನಿಮಗ್ನನಾಭಿಮ್ ತನುಮಧ್ಯಮುನ್ನತಮ್ ವಿಶಾಲವಕ್ಷಸ್ಥಲಶೋಭಿಲಕ್ಷಣಮ್ || ಪ್ರಾಕಾಶಿಸುವ ಪೀತಾಂಬರ, ಅಗಸೆ ಪುಷ್ಪಕ್ಕೆ ಸಮಾನವಾದ ದೇಹಕಾಂತಿ, ಆಳವಾದ ಗಂಭೀರವಾದ ನಾಭಿ, ಸೂಕ್ಷಮವಾದ(ಸಣ್ಣ) ಸೋಂಟ ಹಾಗು ವಿಶಾಲವಾದ ವಕ್ಷಸ್ಥಳದಲ್ಲಿ ಪ್ರಕಾಶಿಸುವ ಶ್ರೀವತ್ಸವದ (ವರ್ಣಗಳ ಸಮ್ಮಿಶ್ರಣದ )ಶೋಭೆಯನ್ನು (ಎಮ್ಪೆರುಮಾನ್ ಹೋಂದಿದ್ದಾನೆ.)
ಶ್ಲೋಕ- 33 – ಆಳವಂದಾರ್ ಎಮ್ಪೆರುಮಾನಿನ ಶೌರ್ಯ ಧೈರ್ಯಾದಿಗಳನ್ನು ಹಾಗು ಅವನ ದಿವ್ಯ ಭುಜಗಳ ಸೌಂದರ್ಯವನ್ನು ಔಭವಿಸುತಿದ್ದಾರೆ. ಚಕಾಸತಮ್ ಜ್ಯಾಗಿಣಕರ್ಕಶೈಶುಭೈಃ ಚತುರ್ಭಿರಾಜಾನುವಿಳಂಬಿಭಿರ್ ಭುಜೈಃ | ಪ್ರಿಯಾವತಂಸೋತ್ಪಲಕರ್ಣಭೂಷಣ ಶ್ಲತಾಲಕಾಬಂಧ ವಿಮರ್ದ ಸಂಶಿಭಿ: || ಬಿಲ್ಲಿನ ಹೆದೆಯಿಂದ ಜಡ್ಡುಕಟ್ಟ ಕಠಿನವಾದ ಹಾಗು ಶ್ರೀಮಹಾಲಕ್ಷ್ಮಿಯ ಕರ್ಣ್ಗಳನ್ನು ಅಲಂಕರಿಸುವ ಉತ್ಪಲಪುಷ್ಪಗಳು (ಕನ್ನೈದಿಲೆ ಪುಷ್ಪಗಳು), ಆಕೆಯ ಓಲೆ ಹಾಗು ಮುಂಗುರುಳುಗಳನ್ನು ಹೋಂದಿರುವ ಜಡೆ ಯನ್ನು ತೋರುವ ಶುಭವಾದ ದಿವ್ಯ ಭುಜಗಳೋಂದಿಗೆ ಎಮ್ಪೆರುಮಾನ್ ಪ್ರಕಾಶಿಸುತಿದ್ಡ್ದಾನೆ.
ಶ್ಲೋಕ- 34 – ದಿವ್ಯ ಭುಜಗಳ ನಂತರ ಆಳವಂದಾರ್ ಎಮ್ಪೆರುಮಾನಿನ ದಿವ್ಯ ಕಂಠ ಹಾಗು ಮುಖದ ಸೌಂದರ್ಯನ್ನು ಅನುಭವಿಸುತಿದ್ದಾರೆ. ಉದಗ್ರಪೀನಾಮ್ಸವಿಲಮ್ಬಿ ಕುಂಡಲ ಅಲಕಾವಳೀ ಬಂಧುರಕಂಬುಕಂಧರಮ್ | ಮುಖಶ್ರಿಯಾ ನ್ಯಕ್ಕೃತಪೂರ್ಣ ನಿರ್ಮಲಾ$ ಮೃತಾಂಸುಬಿಂಬ ಅಂಬುರು ಹೋಜ್ಜ್ವಲಶ್ರಿಯಂ || ಉನ್ನತವಾದ ಹಾಗು ಸ್ಥೂಲವಾದ ಭುಜಶಿರಸ್ಸು ಪರ್ಯಂತವು ವ್ಯಾಪಿಸುವ ಕುಂಡಲಗಳಿಂದ ಶೋಭಿತವಾದ ಕಂಠವನ್ನು ಎಮ್ಪೆರುಮಾನ್ ಹೋಂದಿದ್ದಾನೆ. ಮುಂಗುರುಳುಗಳನ್ನು ಹಾಗು ಕಂಠದಲ್ಲಿ ಮೂರು ರೇಖೆಗಳನ್ನು ಹೋಂದಿದ್ದಾನೆ. ಪೂರ್ಣವಾಧ ನಿಶ್ಕಳಂಕ ಚಂದ್ರನ ಹಾಗು ಈಗ ಅರಳಿದ ತಾವರೆಯ ಕಾಂತಿಯನ್ನು ಮೀರುವ ಮುಖ ಔಜ್ವಲ್ಯವನ್ನು ಹೋಂದಿದ್ದಾನೆ.
ಶ್ಲೋಕ- 35 – “ಕೋಳಿೞೈತ್ ತಾಮರೈ” (ತಿರುವಾಯ್ಮೊೞಿ 7.7.8 ಆಭರಣದಂತೆ ತಮ್ಮದೆಯಾದ ಕಾಂತಿಯನ್ನು ಹೋಂದಿರುವ ತಾವರೆಗೆ ಸಮಾನವಾದ ಕಣ್ಗಳನ್ನು ಹೋಂದಿದ್ದಾನೆ. [ಈ ಪಾಸುರದಲ್ಲಿ ಆೞ್ವಾರ್ ಎಂಪೆರುಮಾನಿನ ದಿವ್ಯ ಮುಖದ ಅವಯವ ಶೋಭೆಯನ್ನು ಅನುಭವಿಸುತ್ತಾರೆ]) ಇದೇ ರೀತಿಯಲ್ಲಿ ಆಳವಂದಾರ್ (ಎಮ್ಪೆರುಮಾನಿನ) ಮುಖದ ಒಂದೋಂದು ಅವಯವದ ಸೌಂದರ್ಯದ ಸಮೂಹವನ್ನು ಅನುಭವಿಸುತಿದ್ದಾರೆ. ಪ್ರಬುದ್ಧಮುಗ್ದಾಮ್ಬುಜಚಾರುಲೋಚನಮ್ ಸವಿಭ್ರಮಭ್ರೂಲತಮುಜ್ಜ್ವಲಾಧರಮ್ | ಶುಚಿಸ್ಮಿತಮ್ ಕೋಮಲಗಣ್ಡಮುನ್ನಸಮ್ ಲಲಾಟಪರ್ಯನ್ತವಿಲಮ್ಬಿತಾಲಕಮ್ || ಈಗ ಅರಳಿದ ತಾವರೆಯಂತೆ ಕಣ್ಗಳನ್ನು, ಬಳ್ಳಿಯಂತೆ ಬಾಗಿದ ಹುಬ್ಬುಗಳನ್ನು, ಕಾಂತಿಯುಕ್ತ ತುಟಿಗಳನ್ನು, ಶುದ್ಧ ಮಂದಹಾಸಯನ್ನು(ನಗು), ಎತ್ತರವಾದ ಮೂಗನ್ನು, ಹಾಗು ಹಣೆಯವರೆಗು ಬರುವ ಮುಂಗುರುಳುಗಳನ್ನು ಉಳ್ಳ…
ಶ್ಲೋಕ- 37 – ಈ ಶ್ಲೋಕ ಹಾಗು ಮುಂದಿನ ಶ್ಲೋಕಗಳಲ್ಲಿ ಆಳವಂದಾರ್ ಎಮ್ಪೆರುಮಾನಿನ ಎಮ್ಪೆರುಮಾನ್ ಹಾಗು ಪಿರಾಟ್ಟಿಯ(ಶ್ರೀಮಹಾಲಕ್ಷ್ಮೀ) ವಾಲ್ಲಭ್ಯವನ್ನು ಅನುಭವಿಸುತಿದ್ದಾರೆ. ಈ ಶ್ಲೋಕದಲ್ಲಿ ಆಕೆಯ ವೈಭವವನ್ನು ಹಾಗು ಅವಳ ವಿಷಯದಲ್ಲಿ ಎಮ್ಪೆರುಮಾನಿನ ವಿಶೇಷ ಪ್ರೀತಿಯನ್ನು ತಮ್ಮ ಕೃಪೆಯಿಂದ ವಿವರಿಸುತಿದ್ದಾರೆ. ಚಕರ್ತ ಯಸ್ಯಾ ಭವನಮ್ ಭುಜಾನ್ತರಮ್ ತವ ಪ್ರಿಯಮ್ ಧಾಮ ಯದೀಯಜನ್ಮಭೂಃ | ಜಗತ್ಸಮಸ್ತಮ್ ಯದಪಾಙ್ಗಸಮ್ಶ್ರಯಮ್ ಯದರ್ತಮಮ್ಭೋದಿರಮನ್ತ್ಯಬನ್ದಿ ಚ (ಓ ಎಮ್ಪೆರುಮಾನೇ!) ಯಾವ ಪಿರಾಟ್ಟಿಗಾಗಿ ನಿನ್ನ ವಕ್ಷಸ್ತಳವನ್ನು ಆಕೆಯ ವಾಸಸ್ಥಾನವಾಗಿ ಮಾಡಿದೆಯೋ, ಆಕೆಯ ಜನ್ಮಭೂಮಿಯಾದ ಕ್ಷ್ರೀರಾಬ್ಧಿಯನ್ನು ನಿನಗೆ ಪ್ರಿಯವಾದ ಧಾಮವಾಗಿರುವುದೊ, ಸಮಸ್ಥವಾದ ಜಗತ್ತು ಯಾರ ಕಟಾಕ್ಷವನ್ನು ಆಶ್ರಯಿಸಿದೆಯೋ, ಯಾರಿಗಾಗಿ ಸಮುದ್ರವನ್ನು ಕಡೆಯಲ್ಪಟ್ಟಿತೋ ಯಾರಿಗಾಗಿ ಸೇತು ಬಂಧನ ನಡೆದಿತೋ.
ಶ್ಲೋಕ-38 – ಈ ಶ್ಲೋಕದಲ್ಲಿ ಆಳವಂದಾರ್ ಪಿರಾಟ್ಟಿಯ(ಶ್ರೀಮಹಾಲಕ್ಷ್ಮಿಯ) ಭೋಗ್ಯತಾತಿಶಯವನ್ನು ಹಾಗು “ಉನಕ್ಕೇಱ್ಕುಮ್ ಕೋಲ ಮಲರ್ಪ್ ಪಾವೈ” (ತಿರುವಾಯ್ಮೊೞಿ 10.10.6 ಸುಂದರವಾದ ಕಮಲದಲ್ಲಿ ವಾಸಿಸುವವಳು ಹಾಗು ನಿನಗೆ ತಕ್ಕವಳಾದ ಶ್ರೀಮಹಾಲಕ್ಷ್ಮೀ)ಯಲ್ಲಿ ಹೇಳಿದಂತೆ ಎಮ್ಪೆರುಮಾನಿಗೆ ಅನನ್ಯಾರ್ಹತ್ವವನ್ನು (ಎಮ್ಪೆರುಮಾನಿಗಾಗಿಯೇ ಇರುವುದು) ಅನುಭವಿಸುತಿದ್ದಾರೆ. ಸ್ವವೈಶ್ವರೂಪ್ಯೇಣ ಸದಾऽನುಭೂತಯಾऽಪಿ ಅಪೂರ್ವವತ್ ವಿಸ್ಮಯಮಾದದಾನಯಾ | ಗುಣೇನ ರೂಪೇಣ ವಿಲಾಸಚೇಷ್ಟಿತೈಃ ಸದಾ ತವೈವೋಚಿತಯಾ ತವ ಶ್ರಿಯಾ || ನಿನ್ನ ವಿಶ್ವರೂಪದಲ್ಲಿ ಸದಾ ಅನುಭವಿಸಿದರು, ನಿನ್ನನ್ನು ವಿಸ್ಮಯಿಸುವಂತಹ/ಆಶ್ಚರ್ಯಗೊಳಿಸುವಂತ ಗುಣಗಳು, ಸುಂದರ ರೂಪ ಹಾಗು ದಿವ್ಯ ವ್ಯಾಪಾರಗಳನ್ನು ಹೋಂದಿರುವ ಪಿರಾಟ್ಟಿ, ಹೋಸದಾಗಿರುವಂತೆ ನಿನ್ನ ಎಲ್ಲಾ ([ಪರಮಪದದಲ್ಲಿ] ಪರ, [ಕ್ಷೀರಾಬ್ಧಿಯಲ್ಲಿ] ವ್ಯೂಹ, ವಿಭವಗಳಂತಹ [ಅವತಾರ])ರೂಪಗಳಲ್ಲಿ ಅನುರೂಪವಾಗಿ ಅವತರಿಸುವವಳು, ನಿನಗೆ ಅನನ್ಯಾರ್ಹಳಾದ ಹಾಗು ನಿನಗೆ ಸಮ್ಪತ್ತಾಗಿ ಇರುವಳು.
ಶ್ಲೋಕ-39 – ಈ ಶ್ಲೋಕದಲ್ಲಿ ಆಳವಂದಾರ್ ಪರ್ಯಂಕ ವಿದ್ಯೆಯಲ್ಲಿ ಹೇಳಿದಂತೆ ಆದಿಶೆಷನ ಮಡಿಯಲ್ಲಿ ಪಿರಾಟ್ಟಿಯೋಂದಿಗೆ ಆಸೀನನಾಗಿರುವುದನ್ನು ಅನುಭವಿಸುತಿದ್ದಾರೆ. ತಯಾ ಸಹಾಸೀನಮನನ್ತಭೋಗಿನಿ ಪ್ರಕ್ರುಶ್ಟವಿಜ್ಞಾನಬಲೈಕದಾಮನಿ| ಫಣಾಮಣಿವ್ರಾತಮಯೂಖಮಂಡಳ ಪ್ರಕಾಶಮಾನೋದರದಿವ್ಯಧಾಮನಿ || ಪ್ರಕೃಷ್ಟವಾದ ಜ್ಞಾನ ಶಕ್ತಿಗಳಿಗೆ ಆಶ್ರಯನಾಗಿರುವವನು,ಫಣಾಮಣ್ಡಲದ ರತ್ನಗಳಿಂದ ಪ್ರಕಾಶಿತವಾದ ಭಗವಾನ್ ಹಾಗು ಪಿರಾಟ್ಟಿಯು ಬಿಜಯಿಸಿದ ಮಡಿಲನ್ನು ಹೋಂದಿರುವವನಾದ ತಿರುವನಂತಾೞ್ವಾನಿನ ಮೇಲೆ ಭಗವಾನ್ ಶಯನಿಸುತಿದ್ದಾರೆ.
ಶ್ಲೋಕ- 40 – ಕೈಂಕರ್ಯವನ್ನು ಮಾಡುವ ತ್ವರೆಯಿಂದ ಆಳವಂದಾರ್ ತಿರುವನಂತಾೞ್ವಾನಿನ ವಿಲಕ್ಷಣ ಕೈಂಕರ್ಯವನ್ನು ಅನುಭವಿಸುತಿದ್ದಾರೆ. “ಉಪಮಾನಮಶೇಷಾಮ್ ಸಾದೂನಾಮ್ ಯಸ್ಸದಾSಭವತ್ ” ಎಂದು ಶ್ರೀವಿಷ್ಣುಪುರಾಣ ದಲ್ಲಿ(1.15.157 ಹೇಗೆ ಎಲ್ಲಾ ಸಜ್ಜನರಿಗೂ ಪ್ರಹ್ಲದದು ಉದಾಹರಣೆಯಾಗಿದ್ದಾನೋ), ಹಾಗೆಯೇ ಕೈಂಕರ್ಯವನ್ನು ಮಾಡಲು ಇಚ್ಛಿಸುವವರಿಗೆ ತಿರುವನಂತಾೞ್ವಾನಿನ ಕಾರ್ಯವು ಒಳ್ಳೆಯ ಉದಾಹರಣೆಯಾಗಿದೆ. ಆದಿಶೇಷನ ಇಂತ ಪರಮ ದಶೆಯನ್ನು ವಿವರಿಸುತಿದ್ದಾರೆ. ನಿವಾಸಶಯ್ಯಾಸನಪಾದುಕಾಂಶುಕ ಉಪದಾನವರ್ಷಾತಪವಾರಣಾದಿಭಿಃ | ಶರೀರಭೇದೈಸ್ ತವ ಶೇಷತಾಮ್ ಗತೈರ್ ಯತೋಚಿತಮ್ ಶೇಷ ಇತೀರಿತೇ ಜನೈಃ || ಎಮ್ಪೆರುಮಾನ್ ತಾನು ವಾಸಿಸುವ ಅರಮನೆಯಾಗಿ, ಮಲಗಿವ ಹಾಸಿಗೆಯಾಗಿ, ಆಸೀನವಾಗಿರುವ ಸಿಂಹಾಸನವಾಗಿ, ಧರಿಸುವ ಪಾದರಕ್ಷೆಗಳಾಗಿ, ( ಧರಿಸುವ ) ವಸ್ತ್ರಗಳಾಗಿ, ( ಆಲಂಗಿಸುವ ) ದಿಂಬಾಗಿ, ಬಿಸಿಲು ಮಳೆಗಳಿಂದ ರಕ್ಷಿಸುವ ಛತ್ರಾದಿಗಳಾಗಿರುವುದರಿಂದ ಎಲ್ಲರಿಂದಲು ಶೇಷನೆಂದು ವಿಖ್ಯಾತನಾದ ತಿರುವನಂತಾೞ್ವಾನಿನ ಮೇಲೆ ಶಯನಿಸುತಿದ್ದಾನೆ.
ಶ್ಲೋಕ- 21 – ಆಳವಂದಾರ್ ಶರಣ್ಯನಾದ ಭಗವದ್ವೈಭವವನ್ನು ಧ್ಯಾನಿಸುತಿದ್ದಾರೆ. ಹೀಗಲ್ಲದೆ ಹಿಂದೆ ಪ್ರಾಪ್ಯ ಸ್ವರೂಪವನ್ನು ವಿವರಿಸಿದರು, ಇಲ್ಲಿ ಅದನ್ನು ಅರ್ಥಿಸುತ್ತಿರುವವನ ಸ್ವರೂಪ ವಿವರಿಸಲ್ಪಡುತ್ತಿದೆ, ಹೀಗಲ್ಲದೆ ಹಿಂದೆ ಭಗವದ್ ಸ್ವರೂಪವು ವಿವರಿಸಿದಮೇಲೆ, ಇಲ್ಲಿ ನಂತರ ವಿವರಿಸಲ್ಪಡುವ ಶರಣಾಗತಿಯ ಸ್ವರೂಪವನ್ನು ತೋರುತಿದ್ದಾರೆ ಎಂದು ವಿವಕ್ಷಿತ ವಾಗಿದೆ. ನಮೋ ನಮೋ ವಾಙ್ಗ್ಮನಸಾತಿಭೂಮಯೇ ನಮೋ ನಮೋ ವಾಙ್ಗ್ಮನಸೈಕಭೂಮಯೇ | ನಮೋ ನಮೋऽನನ್ತಮಹಾವಿಭೂತಯೇ ನಮೋ ನಮೋऽನನ್ತದಯೈಕಸಿನ್ದವೇ || (ಸ್ವಪ್ರಯತ್ನದಿಂದ ನಿನ್ನನ್ನು ತಿಳಿಯಲು ಪ್ರಯತ್ನಿಸುವವರ) ಮನಸ್ಸು ಹಾಗು ವಾಕ್ಕಿಗೆ ಅತೀತನಾದ ನಿನಗೆ ನಮಸ್ಕಾರಗಳು. (ನಿನ್ನ ಅನುಗ್ರಹದಿಂದ ನಿನ್ನನ್ನು ತಿಳಿದವರಿಗೆ) ವಾಕ್ ಹಾಗು ಮನಸ್ಸಿನಿಂದಲೆ ಅನಂತವಾದ ಮಹದೈಶ್ವರ್ಯಯುಕ್ತನಾದ ನಿನಗೆ ನಮಸ್ಕಾರಗಳು; ದಯೆಯ ಸಾಗರನಾದ ನಿನಗೆ ನಮಸ್ಕಾರಗಳು.
ಶ್ಲೋಕ- 22 – ಆಳವಂದಾರ್ ತಮ್ಮ ಅಧಿಕಾರವನ್ನು ಘೋಷಿಸಿ (ಹಿಂದಿನ ಶ್ಲೋಕದಲ್ಲಿ ಬಂದ) ಪ್ರಪತ್ತಿಯನ್ನು ಆಚರಿಸುತಿದ್ದಾರೆ. ಹಿಂದೆ ವಿವರಿಸಲ್ಪಟ್ಟ ಉಪೇಯಕ್ಕೆ ತಕ್ಕ ಉಪಯದ ಆಚರಣೆಯೆಂದೂ, ಈ ಶ್ಲೋಕವನ್ನು ವಿವರಿಸಬಹುದು. ನ ದರ್ಮನಿಶ್ಠೋऽಸ್ಮಿ ನ ಚಾತ್ಮವೇದೀ ನ ಭಕ್ತಿಮಾನ್ ತ್ವಚರಣಾರವಿಂದೇ | ಆಕಿಂಚನ್ಯೋನ್ಯಗತಿ: ಶರಣ್ಯ! ತ್ವತ್ಪಾದಮೂಲಮ್ ಶರಣಮ್ ಪ್ರಪದ್ಯೇ || ಶರಣ್ಯನಾದ ಭಗವಂತನೇ ಕರ್ಮಯೋಗದಲ್ಲಿ ನಾನು ಸ್ಥಿರನಲ್ಲ, ಆತ್ಮಜ್ಞಾನವು ನನ್ನಲ್ಲಿ ಇಲ್ಲ, ನಿನ್ನ ಚರಣಾರವಿಂದಗಳಲ್ಲಿ ಭಕ್ತಿಯೂ ಇಲ್ಲದವನಾದ ನಾನು, ಬೇರೋಂದು ಉಪಾಯವಿಲ್ಲದೆ ಹಾಗಲಿ ಬೇರೊಂದು ಶರಣವು(ಗತಿ) ಇಲ್ಲದೆ ನಿನ್ನ ಪಾದಪಂಕಜಗಳನ್ನೆ ಉಪಾಯವಾಗಿ ಸ್ವಿಕರಿಸುತ್ತೇನೆ.
ಶ್ಲೋಕ 23 – ಭಗವಾನ್ , “ನನ್ನ ವಿಷಯದಲ್ಲಿ ಯಾವ ಆನುಕೂಲ್ಯವಿಲ್ಲದಿದ್ದರು , ನಿಮ್ಮಲ್ಲಿ ಅರ್ಜಿತ ಆನುಕೂಲ್ಯವನ್ನು ಇಲ್ಲದಿದ್ದರು , ನಾನು ನಿಮ್ಮಲ್ಲಿ ಗುಣಗಳನ್ನು ತಂದು ಉಪೇಯವನ್ನೂ ನೀಡುವೆನು.” ಎಂದು ಹೇಳಿದರು. ಆಳವಂದಾರ್, “ನಾನು ಪೂರ್ಣವಾಗಿ ದೋಶಗಳಿಂದಲೆ ಭರಿತನಾಗಿದ್ದೇನೆ. ನ ನಿನ್ದಿತಮ್ ಕರ್ಮ ತದಸ್ತಿ ಲೋಕೇ ಸಹಸ್ರಶೋ ಯನ್ನ ಮಯಾ ವ್ಯದಾಯಿ | ಸೋऽಹಮ್ ವಿಪಾಕಾವಸರೇ ಮುಕುನ್ದ! ಕ್ರನ್ದಾಮಿ ಸಮ್ಪ್ರತ್ಯಗತಿಸ್ ತವಾಗ್ರೇ || ಮೋಕ್ಷವನ್ನು ಪ್ರಸಾದಿಸುವ ಭಗವಂತನೇ ! ಸಾವಿರಬಾರಿ ನಿನ್ನಿಂದ ಮಾಡದ ನಿಶಿದ್ಧ ಕರ್ಮಗಳು ಶಾಸ್ತ್ರಶಲ್ಲು ಇಲ್ಲ [(ಶಾಸ್ತ್ರವನ್ನು) ಲೋಕ(ಎಂದಿದ್ದು) ಲೋಕವನ್ನು ನಿರ್ವಹುಸುವುದರಿಂದ] , ಈಗ (ಆ ಕರ್ಮಗಳು) ವಿಪಾಕ( ಪಕ್ವ) ದಶೆಯಲ್ಲಿರುವಾಗ ಬೇರೋಂದು ಗತಿಯಿಲ್ಲದೆ ನಿಮ್ಮ ಮುಂದೆ ಅಳುತಿದ್ದೆನೆ.
ಶ್ಲೋಕ- 24 – ಆಳವಂದಾರ್ ,”ನಿನ್ನ ಕೃಪೆಯೇ ನನಗೆ ಶರಣು” ಎಂದು ಎಂಬೆರುಮಾನನ್ನು ಕುರಿತು ಕೂಗುತಿದ್ದಾರೆ. ಆಳವಂದಾರ್, “ನಿನ್ನನ್ನು ಹೊಂದುವುದು ನನಗೆ ಹೇಗೆ ಮಹಾಭಾಗ್ಯವೋ ಹಾಗೆಯೇ ನಿನ್ನ ಕೃಪೆಗು ನಾನು ಸೂಕ್ತ ಪಾತ್ರನು. ನಿಮಜ್ಜತೋऽನನ್ತಭವಾರ್ಣವಾನ್ತಃ ಚಿರಾಯ ಮೇ ಕೂಲಮಿವಾಶಿ ಲಬ್ದಃ | ತ್ವಯಾಪಿ ಲಬ್ದಮ್ ಭವಗವನ್ನಿದಾನೀಮ್ ಅನುತ್ತಮಮ್ ಪಾತ್ರಮಿದಮ್ ದಯಾಯಾಃ || ಅನಂತನೆ! ( ದೇಶದಿಂದಾಗಲಿ ಕಾಲದಿಂದಾಗಲಿ ವಸ್ತುವಿಂದಾಗಲಿ ಪರಿಚ್ಛೆದ ರಹಿತನು) ದೀರ್ಘ ಕಾಲದಿಂದ ಸಂಸಾರಾರ್ಣವದಲ್ಲಿ ಸಮ್ಮಗ್ನನಾದ (ಚೆನ್ನಾಗಿ ಮುಳುಗಿದ) ನನಗೆ ತೀರವಾಗಿ ಬಂದಿದ್ದೀಯ. ಓ ಭಗವಾನ್! ನಿನ್ನ ಕೃಪೆಗೂ ಸೂಕ್ತ ಪಾತ್ರನಾಗಿದ್ದೇನೆ.
ಶ್ಲೋಕ- 25 – “ನನ್ನಲ್ಲಿ ನಿಮ್ಮ ಭಾರವೆಲ್ಲವೂ ಸಮರ್ಪಿಸಿದಮೇಲೆ ಶ್ರೀ ರಾಮಾಯಣದ ಸುಂದರ ಖಂಡದಲ್ಲಿ ‘ತತ್ ತಸ್ಯ ಸದೃಶಮ್ ಭವೇತ್’ (9.30 ತನ್ನ ಸ್ವರೂಪಕ್ಕೆ ಪ್ರಾಪ್ತವಾದದ್ದು- ತಾನೇ ಲಂಕೆಯನ್ನು ನಶಿಸಿ ನನ್ನನು ರಕ್ಷಿಸುವುದು – ಆದರಿಂದ ಅವನ ಆಗಮದವರೆಗು ಕಾಯುವೆನು)’ ಎಂದತೆ ಇರುವುದಲ್ಲದೆ ಈಗಲೇ ರಕ್ಷಿಸಲು ಏಕೆ ನಿರ್ಬಂದಿಸುತಿದ್ದೀರ”, ಎಂದು ಭಗವಾನ್ ಕೇಳಿದಾಗ. ಆಳವಂದಾರ್, “ನಾನು ನನ್ನ ಧುಃಖವನ್ನು ದೂರಮಾಡಲು ಹೇಳುತಿಲ್ಲ; ನಿನ್ನ ಭಕ್ತರು ಈ ಲೋಕದಲ್ಲಿ ಧುಃಖಿಸುವುದು ನಿನ್ನ ಮಹಿಮೆಗೇ ಕಳೆ. ಅಭೂತಪೂರ್ವಮ್ ಮಮ ಭಾವಿ ಕಿಮ್ ವಾ ಸರ್ವಮ್ ಸಹೇ ಮೇ ಸಹಜಮ್ ಹಿ ಧುಃಖಮ್ | ಕಿನ್ತು ತ್ವದಗ್ರೇ ಶರಣಾಗತಾನಾಮ್ ಪರಾಭವೋ ನಾಥ! ನ ತೇ$ನುರೂಪ: || ಹೇ ನಾಥ! ಪೂರ್ವವುಂಟಾಗದ ಯಾವ ಹೋಸ ಧುಃಖವು ನನಗೆ ಸಂಭವಿಸದು; ಈ ಧುಃಖಗಳೆಲ್ಲವನ್ನು ಸಹಿಸುತಿದ್ದೇನೆ, ಇವು(ಧುಃಖಗಳು) ನನಗೆ ಸಹಜವಾಗಿ (ನನ್ನೋಂದಿಗೇ ಹುಟ್ಟಿದಂತಹದು) ಬಂದಂತಹದು, ಆದರೆ ನಿನ್ನ ಮುಂದೆ ನಿನ್ನ ಶರಣಾಗತರ ತಿರಸ್ಕಾರವು ನಿನಗೆ ಅನುರೂಪವಾದದ್ದಲ್ಲ
ಶ್ಲೋಕ- 26 – ಆಳವಂದಾರ್, “ನಿನ್ನ ಮಹಿಮೆಗೆ ಕಳಂಕವೆಂದು ನನ್ನನು ನಿರಾಕರಿಸಿದರು ನಿನ್ನನ್ನು ನಾನು ಬಿಡನು.” ಎಂದು ಹಾಗು ತಮ್ಮ ಅಗತಿತ್ವದಿಂದ ಬಂದಿರುವ ಮಹಾ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ನಿರಾಸಕಸ್ಯಾಪಿ ನ ತಾವದುತ್ಸಹೇ ಮಹೇಶ! ಹಾತುಮ್ ತವ ಪಾದಪಂಕಜಂ| ರುಶಾ ನಿರಸ್ತೋऽಪಿ ಶಿಸುಃ ಸ್ಥನಂಧಯೋ ನ ಜಾತು ಮಾತುಶ್ಚರಣೌ ಜಿಹಾಸತಿ || ಓ ಸರ್ವೇಶ್ವರನೆ! ನನು (ನಿನ್ನಿಂದ) ತಳ್ಳಲ್ಪಟ್ಟರು, ನಿನ್ನ ಪದಾರವಿಂದಗಳನ್ನು ಎಂದೂ ಬಿಡನು ; ಸ್ಥನ್ಯಪಾನ ಮಾಡುವ ಮಗುವು (ತನ್ನ ತಾಯಿಯಿಂದ) ಕೋಪದಿಂದ ತಳ್ಳಲ್ಪಟ್ಟರು, ಅದು ತನ್ನ ತಾಯಿಯ ಪಾದಗಳನ್ನು ಎಂದೂ ಬಿಡದು.
ಶ್ಲೋಕ- 27 – ಆಳವಂದಾರ್, “ನಿನ್ನನ್ನು ಬಿಡದೆ ಇರಲು ಕಾರಣವು ಕೇವಲ ಅನನ್ಯಗಿತಿತ್ವವೇ ? ನಿನ್ನ ಭೋಗ್ಯತೆಯಲ್ಲಿ ಮುಳುಗಿರುವ ನನ್ನ ಮನಸ್ಸು ಬೇರೊಂದನ್ನು ಅರ್ಥಿಸದು. ತವಾಮೃತಸ್ಯನ್ದಿನಿ ಪಾದಪಙ್ಕಜೇ ನಿವೇಶಿತಾತ್ಮಾ ಕಥಮನ್ಯದಿಚ್ಛತಿ? | ಸ್ಥಿತ್ತೇऽರವಿನ್ದೇ ಮಕರಂದನಿರ್ಭರೇ ಮದುವ್ರತೋ ನೇಕ್ಷುರಕಂ ಹಿ ವೀಕ್ಶತೇ || ಅಮ್ರೃತವನ್ನು ಸ್ರವಿಸುತ್ತಿರುವ ನಿನ್ನ ಪಾದಾರವಿಂದಗಳಲ್ಲಿ ಸಮರ್ಪಿಸಲ್ಪಟ್ಟ ನನ್ನ ಮನಸ್ಸು ಹೇಗೆ ಇತರ ವಿಷಯಗಳನ್ನು ಇಚ್ಛಿಸುವುದು ? ಮಧುವಿನಿಂದ ಭರಿತವಾದ ಕೆಂದಾವರೆ ಇದಲ್ಲಿ ಒಂದು ಜೇನು ಕೋಳವಳಿಕೆಯನ್ನು (ಒಂದು ಕ್ಷುದ್ರ ಪುಷ್ಪವು) ನೋಡುವುದೋ.
ಶ್ಲೋಕ- 28 – ಆಳವಂದಾರ್, “ನನಗೆ ಉಪಕರಿಸಲು ಅಂಜಲಿಯೋಂದೆ ಪರ್ಯಾಪ್ತವಲ್ಲವೆ ?”, ಎಂದು ಕೇಳುತಿದ್ದಾರೆ. ತ್ವದಂಗ್ರಿಂಮುದ್ದಿಶ್ಯ ಕದಾऽಪಿ ಕೇನಚಿತ್ ಯಥಾ ತಥಾ ವಾऽಪಿ ಸಕೃತ್ಕೃತೋऽಞ್ಜಲಿ | ತದೈವ ಮುಷ್ಣಾತ್ಯಶುಭಾನ್ಯಶೇಷತಃ ಶುಭಾನಿ ಪುಷ್ಣಾತಿ ನ ಜಾತು ಹೀಯತೇ || ಯಾರಿಂದಾದರು ಯಾವಾದಾದದರೋಂದು ಕಾಲದಲ್ಲಿ ಯಾವುದಾದರೋಂದು ರೀತಿಯಲ್ಲಿ ಮಾಡಿದ ಅಂಜಲಿ ಒಡನೆ ಪಾಪಗಳನ್ನು ಅಶೇಷವಾಗಿ ದೂರಮಾಡಿ, ಶುಭಗಳನ್ನು ವೃದ್ಧಿಸುತ್ತದೆ (ಇಂತಹ ಮಂಗಳವು) ಎಂದು ಕ್ಷಯಿಸುವುದು.
ಶ್ಲೋಕ-29 – ಈ ಶ್ಲೋಕದಲ್ಲಿ ಮಾನಸ ಪ್ರಪತ್ತಿಯನ್ನು ತೋರುತ್ತದೆ ,ಅಥವಾ ಶ್ಲೋಕ 28 “ತ್ವದಂಗ್ರಿಂಮುದ್ದಿಶ್ಯ”,ದಲ್ಲಿ ಹಾಗು ಶ್ಲೋಕ 29 “ಉದೀರ್ಣ”ದಲ್ಲಿ ಮಾಡಿದ ಶರಣಾಗತಿ ಜನಿತ ಪರಭಕ್ತಿಯನ್ನು ತೊರುತ್ತದೆ ಎಂದೂ ಹೇಳಬಹುದು. ಉದೀರ್ಣಸಂಸಾರದವಾಶುಶುಕ್ಷಣಿಮ್ ಕ್ಷಣೇನ ನಿರ್ವಾಪ್ಯ ಪರಾಮ್ ಚ ನಿರ್ವೃತಿಮ್ | ಪ್ರಯಚ್ಛತಿ ತ್ವಚಾರಣಾರುಣಂಬುಜ ದ್ವಯಾನುರಾಗಾಮೃತಸಿನ್ದುಶೀಕರಃ || ನಿನ್ನ ಕೆಂಪಾದ ದಿವ್ಯ ಪಾದದ್ವದಲ್ಲಿನ ಭಕ್ತಿಯ ಅಮೃತಸಾಗರದಿಂದ ಒಂದು ಹನಿಯು ಪ್ರಜ್ವಲಿಸುತ್ತಿರುವ ಸಂಸಾರವೆಂಬ ಕಾಡ್ಗಿಚ್ಚನ್ನು ಒಂದು ಕ್ಷಣದಲ್ಲಿ ಆರಿಸಿ ಶ್ರೇಷ್ಠವಾದ ಆನಂದವನ್ನು ಕೋಡುತ್ತದೆ.
ಶ್ಲೋಕ-30 – ಆಳವಂದಾರ್ ಯಾವುದೇ ವಿಳಂಭವಿಲ್ಲದೆ ಫಲವನ್ನು ಪ್ರಸಾದಿಸುವ ಸಿದ್ಧೋಪಾಯವನ್ನು( ಭಗವಂತನನ್ನು) ಸ್ವೀಕರಿಸಿ, ಫಲಪ್ರಾಪ್ತಿಗೆ ಕಾಯಲಾಗದೆ “ಕೂವಿಕ್ ಕೊಳ್ಳುಮ್ ಕಾಲಮ್ ಇನ್ನಮ್ ಕುಱುಗಾದೋ”( ತಿರುವಾಯ್ಮೊೞಿ 6.9.9- ನಿನ್ನನ್ನು ಪ್ರಾಪಿಸುವ ದಿನವು ಇನ್ನು ವೇಗವಾಗದೋ)ಯಲ್ಲಿ ಹೇಳಿದಂತೆ ಹೇಳುತಿದ್ದಾರೆ. ಹೀಗಲ್ಲದೆ ಇನ್ನೋಂದು ನಿರ್ವಾಹವು, “ಕನೈಕೞಲ್ ಕಾಣ್ಬದೆನ್ಱುಕೊಲ್ ಕಣ್ಗಳ್(ತಿರುವಾಯ್ಮೊೞಿ 6.3.10- ಎಂಪೆರುಮಾನಿನ ಪಾದಗಳನ್ನು ನನ್ನ ಕಣ್ಗಳು ಎಂದು ಕಾನುವುದು ?)” ಹಾಗು ″ಕಾಣಕ್ ಕರುದುಮ್ ಎನ್ ಕಣ್ಣೇ(ತಿರುವಾಇಮೊೞಿ 9.5.1 ನನ್ನ ಕಣ್ಗಳು ನೋಡಲು ಇಚ್ಛಿಸುತ್ತವೆ)” ಯಂತೆ ಪ್ರಪತ್ತಿಯೀಂದ ಲಭಿಸಿದ ಪರ ಭಕ್ತಿಯಕಾರಣದಿಂದ ಹೇಳುತಿದ್ದಾರೆ. ವಿಲಾಸವಿಕ್ರಾಂತಪರಾವರಾಲಯಮ್ ನಮಸ್ಯದಾರ್ತಿಕ್ಷಪಣೇ ಕೃತಕ್ಷಣಮ್ | ಧನಮ್ ಮದೀಯಮ್ ತವ ಪಾದಪಂಕಜಂ ಕದಾ ನು ಸಾಕ್ಷಾತ್ಕರವಾಣಿ ಚಕ್ಷುಷಾ || ಪರರಾದ ಉತ್ಕೃಷ್ಟರಾದ ದೇವತೆಗಳ ಹಾಗು ಮಾನುಷ ಲೋಕಗಳನ್ನು ಅನಾಯಸವಾಗಿ ಕ್ರೀಡೆಯಂತೆ ಅಳೆದಂತಹ, ಹಾಗು ಅದನ್ನು ಆರಾದಿಸಿದವರ ಧುಃಖಗಳನ್ನು ನಶಿಸುವಂತಹ, ಹಾಗು ನನಗೆ ಧನದಂತಿರುವ ನಿನ್ನ ಪಾದಪಂಕಜಗಳನ್ನು ಎಂದು ಕಾಣುವೆ?
ಶ್ಲೋಕ 11 – ಈ ಶ್ಲೋಕದಲ್ಲಿ ಪರತ್ವ ಲಕ್ಷಣವು ವಿವರಿಸಲಾಗಿದೆ. ಸ್ವಾಭಾವಿಕಾನವದಿಕಾತಿಶಯೇಶಿತೃತ್ವಂ ನಾರಾಯಣ ತ್ವಯಿ ನ ಮೃಷ್ಯತಿ ವೈದಿಕಃ ಕಃ | ಬ್ರಹ್ಮಾ ಶಿವಶ್ ಶತಮಖಃ ಪರಮಃ ಸ್ವರಾಡಿತಿ ಏತೇऽಪಿ ಯಸ್ಯ ಮಹಿಮಾರ್ಣವವಿಪ್ರುಶಸ್ತೇ || ಹೇ ನಾರಾಯಣನೇ! ಬ್ರಹ್ಮಾ, ಶಿವ, ಇಂದ್ರ , ಕರ್ಮವಷ್ಯರಲ್ಲದವರೂ ಹಾಗು ಈ ಎಲ್ಲಾ ದೇವತೆಗಳಿಗಿಂತಲೂ ಶ್ರೇಷ್ಠರಾದ ಮುಕ್ತಾತ್ಮಗಳೆಲ್ಲರು ನಿನ್ನ ವೈಭವದ ಸಾಗರದಲ್ಲಿ ಹನಿಸದೃಶರು; ನಿನ್ನ ಅವಧಿಯಿಲ್ಲದ ಸ್ವಭಾವಿಕ ಐಶ್ವರ್ಯವನ್ನು (ನಿಯಮನ ಸಾಮರ್ಥ್ಯವನ್ನು) ಯಾವ ವೈದಿಕನು [ವೈದಿಕ (ಧರ್ಮವನ್ನು) ಆಚರಿಸುವವನು] ಸಹಿಸನು ?
ಶ್ಲೋಕ-12 – ಈ ಶ್ಲೋಕದಲ್ಲಿ ಆಳವಂದಾರ್ ಯಾವ ವ್ಯಕ್ತಿಯನ್ನು ಅನ್ವಯಿಸುತ್ತಿದೆಯೆಂದು ಸಂಶಯವೇಳುವ ಸರ್ವನಾಮಗಳೊ ವಿಶೇಷನಾಮಗಳಲ್ಲದೆ ಸ್ವತಃಪೂರ್ಣವಾಗಿರುವ ಹಾಗು ಸ್ಪಷ್ಟವಾಗಿ ಭಗವದ್ಪರತ್ವವನ್ನು ತೋರುವ ನಾಮಗಳನ್ನು ತಮ್ಮ ಕೃಪೆಯಿಂದ ವಿವರಿಸುತ್ತಿದ್ದಾರೆ. ಕಶ್ಶ್ರೀಃಶ್ರಿಯಃಪರಮ್ಸತ್ವಸಮಾಶ್ರಯಃಕಃ ಕಃಪುಣ್ಡರೀಕನಯನಃಪುರುಷೋತ್ತಮಃಕಃ | ಕಸ್ಯಾಯುತಾಯುತಶತೈಕಕಲಾಂಶಕಾಂಶೇವಿಶ್ವಮ್ ವಿಚಿತ್ರಚಿದಚಿತ್ಪ್ರವಿಭಾಗವೃತ್ತಮ್ || ‘ಶ್ರೀ’ಯಿಗೂ(ಶ್ರೀಮಹಾಲಕ್ಷ್ಮಿಗೂ) ಶ್ರೀಯಾದವನು ಯಾರು ? ತಾವರೆಯಂತೆ ಕಣ್ಗಳನ್ನು ಹೊಂದಿರುವವನು ಯಾರು? ಪುರುಷೊತ್ತಮನು ಯಾರು? ಯಾರ ಸಂಕಲ್ಪದ ಹತ್ತು ಸಾವಿರ ಭಾಗಗಳಲ್ಲಿ ಒಂದನ್ನು ಪುನಃ ಹತ್ತು ಸಾವಿರವನ್ನಾಗಿ ಮಾಡಿ ಆ ಒಂದು ಭಾಗವನ್ನು ನೂರರ ಭಾಗವನ್ನಾಗಿ ಮಾಡಿ ಆ ಅಲ್ಪಭಾಗದ ಅತ್ಯಲ್ಪಭಾಗದಿಂದ ಧರಿಸುವುದು.
ಶ್ಲೋಕಮ್ 14 – ಭಗವದ್ಪರತ್ವವನ್ನು (ವಿವರಿಸುವ ಈ ಐದು ಶ್ಲೋಕಗಳ ರೂಪದಲ್ಲಿರುವ) ವಿವರಣೆಯನ್ನು ನಿಗಮಿಸಿ ಆಳವಂದಾರ್ ಪ್ರಮಾಣಾಭಿಮತವಾಗಿರುವ (ಶಾಸ್ತ್ರಕ್ಕೆ ಅನುಗುಣವಾಗಿರುವ) ತರ್ಕ ಹಾಗು ಅನುಮಾನದಿಂದ ಭಗವದ್ಪರತ್ವವನ್ನು ವಿವರಿಸುತಿದ್ದಾರೆ.
ಕಸ್ಯೋದರೇಹರವಿರಿಞ್ಚಿಮುಖಃಪ್ರಪಞ್ಚಃ ಕೋರಕ್ಷತೀಮಮಜನಿಷ್ಟಚಕಸ್ಯನಾಭೇಃ | ಕ್ರಾನ್ತ್ವಾನಿಗೀರ್ಯಪುನರುದ್ಗಿರತಿತ್ವದನ್ಯಃ ಕಃಕೇನವೈಷಪರವಾನಿತಿಶಕ್ಯಶಙ್ಕಃ || ಯಾರ ಉದರದಲ್ಲಿ(ಹೋಟ್ಟೆಯಲ್ಲಿ) ಶಿವ ಬ್ರಹ್ಮಾದಿಗಳು ಇದ್ದರೋ? ಯಾರು ಈ ಜಗತ್ತನ್ನು ರಕ್ಷಿಸುತ್ತಿರುವನೋ? ಯಾರ ನಾಭಿಯಿಂದ (ಈ ) ಲೋಕದ ಶೃಷ್ಟಿಯಾಯಿತೋ ? ನೀನಲ್ಲದೆ ಬೇರೆಯವರಾರು ಈ ವಿಶ್ವವನ್ನು ವ್ಯಾಪಿಸಿ, ನುಂಗಿ ಉಗುಳಿದನು ? ನಿನ್ನ ಈ ಲೋಕಸ್ವಾಮಿತ್ವದಲ್ಲಿ ಶಂಕೆಯೂ ಸಾಧವೆ ?
ಶ್ಲೋಕ-15 – ಈ ಶ್ಲೋಕದಲ್ಲಿ “ಆಸುರೀಮ್ಯೋನಿಮಾಪನ್ನಾಃ” ಎಂದು ಹೇಳಿದಂತೆ, ಸುದೃಡವಾಗಿ ಶಾಸ್ತ್ರ ಪ್ರಮಾಣಸಿಧ್ದವಾದರು, “ಅಯ್ಯೋ! ಈ ಆಸುರ ಸ್ವಭಾವವನ್ನುಳ್ಳವರು ಅವನನ್ನು ಕಳೆದುಕೊಳ್ಳುತ್ತಿದ್ದಾರೆ !” ಎಂದು ಆಳವಾಂದಾರ್ ಇಂತವರ ನಷ್ಠವನ್ನು ಕಂಡು ದುಃಖಿಸಿಸುತಿದರೆ. ಅಥವ ಇನ್ನಿಂದು ನಿರ್ವಾಹ- ಇಂತಃ ವಿಲಕ್ಷಣನ ಭಗವಂತನು “ಯಾರುಮೋರ್ ನಿಲೈಮೈಯ ಎನ ಅಱಿವರಿಯ ಎಮ್ಪೆರುಮಾನ್” [ತಿರುವಾಯ್ಮೋೞಿ 1.3.4: (ಮಾತ್ಸರ್ಯಯುಕ್ತರಿಂದ) ಇಂತಃ ಗುಣಾನ್ವಿತನೆಂದು ಅರಿಯಲಾಗದಂತವನು, ಎಮ್ಪೆರುಮಾನ್] ಎಂದು ಹೇಳಿದಂತೆ ಇಂತಃ ವಿಲಕ್ಷಣನಾನ ಭಗವಂತನು ಆಸುರ ಪ್ರಕೃತಿಗಳಿಂದ ಕಾಣದಿರಲಿ ತ್ವಾಮ್ಶೀಲರೂಪಚರಿತೈಃಪರಮಪ್ರಕೃಷ್ಟ ಸತ್ವೇನಸಾತ್ವಿಕತಯಾಪ್ರಬಲೈಶ್ಚಶಾಸ್ತ್ರೈಃ | ಪ್ರಖ್ಯಾತದೈವಪರಮಾರ್ಥವಿದಾಮ್ಮತೈಶ್ಚ ನೈವಾಸುರಪ್ರಕೃತಯಃಪ್ರಭವನ್ತಿಬೋದ್ಧುಮ್ || (ಅಯ್ಯೋ !) (ಸರ್ವ ಶ್ರೇಷ್ಟನೇ!) ನಿನ್ನನ್ನು ಆಸುರ ಸ್ವಭಾವವುಳ್ಳವರು ಈ ರೀತಿಯಲ್ಲಿ
ನಿನ್ನ ಶೀಲ ಗುಣವನ್ನು(ಸೌಶೀಲ್ಯ ಗುಣ) ,(ವೇದಗಳಿಂದ ಶ್ಲಾಘಿಸಲ್ಪಟ್ಟ ನಿನ್ನ) ರೂಪವನ್ನು ಹಾಗು ದಿವ್ಯಚೇಷ್ಟಿತಗಳಿಂದ,
ಶ್ಲೋಕ-16 – ಆಳವಂದಾರ್ ಎಮ್ಪೆರುಮಾನಿನ ಸೌಲಭ್ಯವನ್ನು ಕಂಡು ಅವನನ್ನು ಹೊಂದುವ ಮಹಾನರಬಗ್ಗೆ ಚಿಂತಿಸಿ (ಅವರು ಎಮ್ಪೆರುಮಾನನ್ನು ಸೇರುವುದನ್ನೇ) ಅದನ್ನೆ ತಮ್ಮ ಪ್ರಯೋಜನವೆಂದು ಭಾವಿಸುತ್ತಿದ್ದಾರೆ. ಉಲ್ಲಙ್ಗಿತತ್ರಿವಿದಸೀಮಸಮಾದಿಶಾಯಿ ಸಮ್ಭಾವನಮ್ತವಪರಿಬ್ರಡಿಮಸ್ವಭಾವಮ್ | ಮಾಯಾಬಲೇನಭವತಾऽಪಿನಿಗೂಹ್ಯಮಾನಮ್ ಪಶ್ಯನ್ತಿಕೇಚಿದನಿಶಮ್ತ್ವದನನ್ಯಭಾವಾಃ ||
ತ್ರಿವಿಧಪರಿಚ್ಛೇದರಹಿತವಾದ (ಕಾಲದಿಂದ, ದೇಶದಿಂದ ಹಾಗು ವಸ್ತುವಿಂದ) ಹಾಗು ನಿಸ್ಸಂದೇಹವಾಗಿ “ನಿನಗೆ ಸಮರಾಗಲಿ ಅಧಿಕರಾಗಲಿ ಇಲ್ಲದಿರುವಂತಹ ಪ್ರಭುತ್ವವು, ನಿನ್ನ ಆಶ್ಚರ್ಯ ಶಕ್ತಿಯಿಂದ ಮರೈಯಿಸಲ್ಪಟ್ಟದ್ದಾಗಿದರೂ ಕೆಲವು ಮಹಾನರು ನಿನ್ನನ್ನೇ ಏಕಚಿತ್ತರಾಗಿ ನೋಡುತಿದ್ದಾರೆ.
ಶ್ಲೋಕ-17 – ಇಲ್ಲಿ ಆಳವಂದಾರ್ ಭಗವದಧೀನದಲ್ಲಿರುವ ಹಾಗು ಹಿಂದೆ ಹೇಳಲ್ಪಟ್ಟ ತನ್ನ ಸರ್ವೇಶ್ವರತ್ವಕ್ಕೆ ಪಾತ್ರವಾಗಿರುವ ವಸ್ತು-ವೈಚಿತ್ರ್ಯವನ್ನು ವಿವರಿಸುತಿದ್ದಾರೆ. ಯದಣ್ಡಮ್ಅಣ್ಡಾತರಗೋಚರಮ್ಚಯತ್ ದಶೋತ್ತರಾಣ್ಯಾವರಣಾನಿಯಾನಿಚ | ಗುಣಾಃಪ್ರದಾನಮ್ಪುರುಷಃಪರಮ್ಪದಮ್ ಪರಾತ್ಪರಮ್ಬ್ರಹ್ಮಚತೇವಿಭೂತಯಃ || (1) ಬ್ರಹ್ಮನ ಅಧೀನದಲ್ಲಿರುವ [14 ಪದರಗಳನ್ನು ಹೊಂದಿರುವ ಜಗತ್ತು] ಬ್ರಹ್ಮಾಂಡವನ್ನು,(2)ಅಂಡದಲ್ಲಿರುವವು ಯಾವೊ ಅವನ್ನು,(3)[ಅಂಡವನ್ನು ಅವರ್ತಿಸುವ ಆ ಒಂಕ್ಕಿಂದ ಒಂದು ಹತ್ತಷ್ಠು ದೊಡ್ಡದಾಗಿರುವ ಒಂದೊಂದು ಆವರಣವನ್ನು ಹಾಗು ಸಮಗ್ರವಾದ ಸಪ್ತ ಆವರಣಗಳನ್ನು(4)ಸತ್ವ(ಒಳ್ಳೆಯದ್ದು / ಶ್ರೇಯಸ್ಕರವಾದದ್ದು) ರಜಸ್(ಆಸೆ) ಹಾಗು ತಮಸ್ಗಳನ್ನು(ಅಜ್ಞಾನ)(5)ಮೂಲ ಪ್ರಕೃತಿಯನ್ನು(6) ಜೀವತ್ಮಗಳ ಸಮಷ್ಟಿಯನ್ನು(ಗುಂಪು)(7) ಶ್ರೀವೈಕುಂಠವನ್ನು (8) [ಬ್ರಹ್ಮಾದಿ ದೇವತೆಗಳಿಂದ ಉತ್ಕೃಷ್ಟರಾದ] ಮುಕ್ತಾತ್ಮಗಳಿಂದಲೂ ಪರರಾದ ನಿತ್ಯಸೂರಿಗಳ ಸಮಷ್ಟಿಯನ್ನು ಹಾಗು(9) ದಿವ್ಯ ವಿಗ್ರಹವು(ಗಳು) ನಿನ್ನ ಶರೀರವು ಅಥವಾ ರೂಪಗಳು.
ಶ್ಲೋಕ-18 – ಆಳವಂದಾರ್ ಹಿಂದೆ ಶರಣ್ಯನ(ಗತಿ- ಭಗವಾನ್) ವೈಭವವವನ್ನು ಹೇಳಿದರು, ಹಾಗು ಈ ಪಾಸುರದಲ್ಲಿ, “ಇಂತಃ ಉಭಯ-ವಿಭೂತಿ-ನಾಥನ್ನು ಹೇಗೆ ಆಶ್ರಯಿಸಲಿ” ಎಂಬ ಶಂಕೆಯನ್ನು ದೂರಮಾಡಲು, ಭಕ್ತರ ತನ್ನನ್ನು ಅನುಭವಿಸುವಂತೆ ಮಾಡುವ 12 ಗುಣಗಳನ್ನು ವಿವರಿಸುತ್ತಿದ್ದಾರೆ. ಅಥವಾ ಹಿಂದೆ ಭಗವಂತನ ಸರ್ವೇಶ್ವರತ್ವವು ವಿವರಿಸಲ್ಪಟ್ಟಿತು, ಹಾಗು ಈಗ ಹೇಳಲು ಪ್ರಾಪ್ತವಾದ ಅವನ ಗುಣಗಳನ್ನು ಹೇಳುತಿದ್ದಾರೆ. ವಶೀ ವದಾನ್ಯೋ ಗುಣವಾನ್ ಋಜುಶ್ ಶುಚಿರ್ ಮೃದುರ್ದಯಾಳುರ್ ಮಧುರಸ್ ಸ್ಥಿರಸ್ ಸಮಃ | ಕ್ರುತೀ ಕ್ರುತಜ್ಞಸ್ತ್ವಮಸಿ ಸ್ವಭಾವತಸ್ ಸಮಸ್ತಕಲ್ಯಾಣಗುಣಾಮೃತೋದದಿಃ || ನೀನು ಸ್ವಭಾವತಃವೇ (1) (ಭಕ್ತರ) ಅಧೀನದಲ್ಲಿರುವವನು ,(2) (ಭಕ್ತರಿಗೆ ನಿನ್ನನ್ನು ಪ್ರಕಾಶಿಸುವಂತಹ) ಉದಾರನು ,(3) ಸೌಶೀಲ್ಯವನ್ನು ಉಳ್ಳವನು(ಉತ್ತಮ ಸ್ವಭಾವವನ್ನು ಹೊಂದಿರುವವನು) ,(4)ಯಾವ ತಾರತಮ್ಯವು ಇಲ್ಲದೆ ಎಲ್ಲರೊಂದಿಗೂ ಪಳಗುವನು ,(5)(ಮನೋ-ವಾಕ್-ಕಾಯಗಳಲ್ಲಿ) ಆರ್ಜವದಿಂದಿರುವನು ,(6)(ನಿರ್ಹೇತುಕಕರುಣೆಯನ್ನು- ಯಾವ ಕಾರಣವಿಲ್ಲದೆ ತೋರುವ ಕರುಣೆಯನ್ನು ತೋರುವ ) ಶುದ್ಧಿಯನ್ನು ಉಳ್ಳವನು ,(7)ಭಕ್ತರ-ವಿಶ್ಲೇಶವನ್ನು ತಾಳಲಾರದವನು ,(8)(ಭಕ್ತರ ಧುಃಖವನ್ನು ತಾಳಲಾರದಂತಹ) ದಯೆಯನ್ನು ಉಳ್ಳವನು ,(9)ಮಧುರವಾಗಿರುವನು, (ಭಕ್ತರನ್ನು ರಕ್ಷಿಸುವುದರಲ್ಲಿ ) ಸ್ಥಿರವಾಗಿರುವನು(10)(ನಿನಲ್ಲಿ ಶರಣಾದ) ಎಲ್ಲರಿಗು ಸಮನಾಗಿರುವವನು ,(11)[ಭಕ್ತರನ್ನು ತನ್ನವರೆಂದು ಭಾವಿಸುತ್ತಾ ಅವರ] ಕಾರ್ಯಗಳಲ್ಲಿ ಪ್ರವರ್ತಿಸುವವನು, (12)ಭಕ್ತರ ಚಿಕ್ಕ ಕಾರ್ಯದಿಂದಲೂ ಕೃತಜ್ಞತೆಯನ್ನು ತೋರುವವಂತಹ ಕಲ್ಯಾಣ ಗುಣಗಳ ಅಮೃತ-ಸಾಗರನು.
ಶ್ಲೋಕ-19- ಆಳವಂದಾರ್ ಹೇಗೆ ಭಗವಾನಿನ ಕಲ್ಯಾಣ ಗುಣಗಳು ಅನಂತವೋ ಅದೇ ರೀತಿಯಲ್ಲಿ ಪ್ರತಿಯೊಂದು ಗುಣವು ತನ್ನಲ್ಲೆ ಅಪರಿಮಿತವಾಗಿದೆ. ಉಪರ್ಯುಪರ್ಯುಬ್ಜಭುವೋ£ಪಿಪೂರುಷಾನ್ ಪ್ರಕಲ್ಪ್ಯತೇಯೇಶತಮಿತ್ಯನುಕ್ರಮಾತ್ | ಗಿರಸ್ತ್ವದೇಕೈಕಗುಣಾವಧೀಪ್ಸಯಾ ಸದಾಸ್ಥಿತಾನೋದ್ಯಮತೋ£ತಿಶೇರತೇ || ನಿನ್ನ ಪ್ರತಿಯೊಂದು ಗುಣದ ಮಿತಿ(ಸೀಮೆಯನ್ನು) ನೋಡಲು ಇಚ್ಛಿಸುತ್ತಾ ಎಂದೂ ಹೆಚ್ಚು ಬ್ರಹ್ಮಗಳನ್ನು ಕಲ್ಪಿಸುತ್ತಾ ಅವರಿಗೆ “ತೇ ಯೇ ಶತಮ್”(ನೂರರಷ್ಟು) ಎಂದು ಹೇಳುತ್ತಲೆ ಇದ್ದರು ವೇದವಾಕ್ಯಗಳು ಸ್ವಲ್ಪವು ಮುಂದೆ ಸಾಗಲಿಲ್ಲ.
ಶ್ಲೋಕ- 20 – ಈಗ ಆಳವಂದಾರ್ ಹಿಂದೆ ಹೇಳಲ್ಪಟ್ಟ ಭಗವದ್-ಗುಣ-ರಸಿಕರಾದ ಭಕ್ತರ ವೈಭವನ್ನು ವಿವರಿಸುತಿದ್ದಾರೆ, ಅಥವಾ (ಇನ್ನೋಂದು ನಿರ್ವಾಹ) “ಅಸ್ಮಿನ್ನಸ್ಯ ಚ ತದ್ಯೋಗಮ್ ಶಾಸ್ತಿ”(ಬ್ರಹ್ಮ ಸೂತ್ರಮ್ 1.1.20-ಜೀವಾತ್ಮ ಪರಮಾತ್ಮರ ಅನಂದಮಯವಾದ ಸಾಯುಜ್ಯವನ್ನು ಶ್ರುತಿ ವಿವರಿಸುವುದು) ಎಂದು ಹೇಳಿದಂತೆ ಭಗವಂತನಿಂದ ಭಕ್ತರು ಇಂತಹ ವೈಭವನ್ನು ಹೊಂದಿದ್ದಾರೆಂದರೆ, ಭಗವಂತನ ವೈಭವವು (ಪರೀಕ್ಷಿಸಿ) ಹೇಳಲು ಸಾಧ್ಯವೆಂದು ಸ್ಪಷ್ಟವಾಗಿದೆ. ತ್ವದಾಶ್ರಿತಾನಾಮ್ ಜಗದುದ್ಭವಸ್ತಿತಿ ಪ್ರಣಾಶಸಂಸಾರವಿಮೋಚನಾದಯಃ | ಭವನ್ತಿ ಲೀಲಾ ವಿದಯಶ್ಚ ವೈದಿಕಾಸ್ ತ್ವದೀಯ ಗಂಭೀರ ಮನೋನುಸಾರಿಣಃ || (ಬ್ರಹ್ಮಾದಿಗಳಂತಹ) ನಿನ್ನ ಭಕ್ತರಿಗೆ ಜಗತ್ ಶೃಷ್ಟಿ , ರಕ್ಷಣೆ , ಸಂಹಾರ , ಸಂಸಾರ ತರಣಾದಿಗಳು ಕ್ರೀಡೆಯಂತಿವೆ; ವೇದದ ನಿಯಮಗಳೂ ಸಹ ನಿನ್ನ ಭಕ್ತರ ಆಳವಾದ ದಿವ್ಯ ಹೃದಯವನ್ನೇ ಅನುಸರಿಸುವುದು.